Tag: ವೈರಲ್ ವಿಡಿಯೋ

  • ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮಗು ನಡೆದಾಡಿದ ವೈರಲ್ ವಿಡಿಯೋ ನೋಡಿದ್ರಾ?- ಅದಕ್ಕೆ ಕಾರಣ ಇಲ್ಲಿದೆ

    ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮಗು ನಡೆದಾಡಿದ ವೈರಲ್ ವಿಡಿಯೋ ನೋಡಿದ್ರಾ?- ಅದಕ್ಕೆ ಕಾರಣ ಇಲ್ಲಿದೆ

    ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮಗುವೊಂದು ನಡೆದಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಬ್ರೆಜಿಲ್‍ನ ನಿವಾಸಿಯಾದ ಅರ್ಲೆಟ್ ಅರೆಂಟಿಸ್ ಎಂಬವರು ಈ ವಿಡಿಯೋವನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಮೇ 26 ರಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಲಾಗಿರುವ ಈ 41 ಸೆಕೆಂಡ್‍ಗಳ ವಿಡಿಯೋ ಈಗಾಗಲೇ 7 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, 16 ಲಕ್ಷಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. 3 ಲಕ್ಷಕ್ಕೂ ಹೆಚ್ಚು ರಿಯಾಕ್ಷನ್ಸ್ ಪಡೆದಿದೆ.

    ನವಜಾತ ಮಗು ನರ್ಸ್ ಸಹಾಯದಿಂದ ಒಂದು ಕಾಲನ್ನು ಮೇಲಕ್ಕೆತ್ತಿ ನಂತರ ಮತ್ತೊಂದನ್ನು ಮೇಲೆತ್ತುತ್ತಾ ನಡೆದಾಡಿದಿದೆ.

    ಆದ್ರೆ ಈ ವಿಡಿಯೋದಲ್ಲಿ ಮಗು ನಡೆದಿರುವುದು ದೊಡ್ಡ ಪವಾಡವೇನಲ್ಲ ಎಂದು ಹೇಳಲಾಗಿದೆ. ರೋಚೆಸ್ಟರ್ ಮೆಡಿಕಲ್ ಸೆಂಟರ್ ವಿಶ್ವವಿದ್ಯಾಲಯದ ಪ್ರಕಾರ, ಈ ನಡಿಗೆ ಪವಾಡವೇನಲ್ಲ. ಇದೊಂದು ನೈಸರ್ಗಿಕವಾದ ನವಜಾತ ಪ್ರತಿಫಲನ. ಇದನ್ನ ಸ್ಟಪ್ಪಿಂಗ್ ರಿಫ್ಲೆಕ್ಸ್ ಅಂತಾರೆ. ಮಗುವಿನ ಕಾಲು ನೆಲಕ್ಕೆ ಅಥವಾ ಯಾವುದೇ ಘನ ಮೇಲ್ಮೈಗೆ ಮುಟ್ಟುವಂತೆ ಅದನ್ನ ಎತ್ತಿ ಹಿಡಿದುಕೊಂಡಾಗ ಮಗು ನಡೆದಾಡುವಂತೆ ಅಥವಾ ಕುಣಿಯವಂತೆ ತೋರುವುದರಿಂದ ಇದನ್ನ ವಾಕಿಂಗ್ ಅಥವಾ ಡ್ಯಾನ್ಸ್ ರಿಫ್ಲೆಕ್ಸ್ ಎಂದು ಕೂಡ ಕರೆಯುತ್ತಾರೆ. ಮಗುವಿಗೆ 2 ತಿಂಗಳು ತುಂಬುವವರೆಗೆ ಈ ರಿಫ್ಲೆಕ್ಸ್ ಇರುತ್ತದೆ. ಮಗುವಿನ ಬೆಳವಣಿಗೆಗೆ ಇದು ಸಹಕಾರಿ ಎಂದು ಎನ್‍ಡಿಟಿವಿ ವರದಿ ಮಾಡಿದೆ.

    ಈ ವಿಡಿಯೋ ಮೇಲೆ ಈಗ ಮೀಮ್ಸ್ ಗಳು ಕೂಡ ಹರಿದಾಡ್ತಿದೆ. ಮಗುವಿನ ಹೆಸರು ಉಸೇನ್ ಬೋಲ್ಟ್ ಅಂತ ಕೆಲವರು ಜೋಕ್ ಮಾಡಿದ್ದಾರೆ.

    https://www.facebook.com/arlete.arantes.94/videos/336828263402719/

     

  • ಈ ಕಾರ್ ಶೋ ರೂಮ್‍ನಲ್ಲಿ ಟೈ, ಸೂಟು ಹಾಕಿದ ನಾಯಿಯೇ ಸೇಲ್ಸ್ ಮನ್

    ಈ ಕಾರ್ ಶೋ ರೂಮ್‍ನಲ್ಲಿ ಟೈ, ಸೂಟು ಹಾಕಿದ ನಾಯಿಯೇ ಸೇಲ್ಸ್ ಮನ್

    ಸೂಟು, ಬೂಟು, ಟೈ ಧರಿಸಿ ಶೋರೂಮ್‍ಗಳಲ್ಲಿ ಮನುಷ್ಯರು ಕಾರು ಮಾರಾಟ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ನಾಯಿ ಸೂಟು, ಟೈ ಧರಿಸಿ ಕಾರ್‍ಶೋರೂಮಿನ ಪ್ರಮೋಷನಲ್ ವಿಡಿಯೋದಲ್ಲಿ ಸೇಲ್ಸ್ ಮನ್ ಆಗಿ ಕಾಣಿಸಿಕೊಂಡಿದ್ದು, ಈಗ ಈ ವಿಡಿಯೋ ಸಖತ್ ವೈರಲ್ ಆಗಿದೆ.

    ಗಿಲ್ಡಾ ಅಲಿಯಾಸ್ ಬ್ರೂಸ್ ಗ್ರಿಫಿನ್ ಹೆಸರಿನ ನಾಲ್ಕು ವರ್ಷದ ನಾಯಿ ಇದೀಗ ಯೂಟ್ಯೂಬ್ ವಿಡಿಯೋದ ಸ್ಟಾರ್ ಆಗಿದೆ. ನನಗೆ ಓದಲು ಬರಲ್ಲ, ಹೀಗಾಗಿ ನಮ್ಮ ದರಗಳು ಸಿಕ್ಕಾಪಟ್ಟೆ ಕಡಿಮೆ ಅಂತ ಹಿನ್ನೆಲೆ ಧ್ವನಿಯಲ್ಲಿ ಕೇಳಬಹುದಾಗಿದ್ದು, ಯೂಟ್ಯೂಬ್‍ನಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ಹಿಟ್ ಆಗಿದೆ.

    https://www.instagram.com/p/BSrhqIrhzGe/

    ಹೇ ರಿಲ್ಯಾಕ್ಸ್ ಪ್ಲೀಸ್…. ಬ್ರೂಸ್ ಗ್ರಿಫಿನ್ ಮೋಟಾರ್ ಒಂದು ಕಾಲ್ಪನಿಕ ಶೋರೂಮ್ ಆಗಿದ್ದು ಗಿಲ್ಡಾ ಇಲ್ಲಿ ನಿಜವಾಗಿಯೂ ಸೇಲ್ಸ್ ಮನ್ ಅಲ್ಲ. ಇದರ ಮಾಲಿಕರು ತಾವು ತಂದ ಮಕ್ಕಳ ಸೈಜಿನ ಸೂಟ್ ಹಾಗೂ ಟೈ ಅನ್ನು ನಾಯಿಗೆ ಹಾಕಿ ಅದನ್ನ ಅನೇಕ ಕಾಲ್ಪನಿಕ ಪಾತ್ರಗಳಲ್ಲಿ ತೋರಿಸಿದ್ದಾರೆ.

    ಇನ್ನು ನಾಯಿ ಸೂಟ್ ಹಾಕಿರೋ ಫೋಟೋವನ್ನ ಅನೇಕ ಜನ ಫೋಟೋಶಾಪ್ ಮಾಡಲ ಕೂಡ ಬಳಸಿಕೊಂಡಿದ್ದಾರೆ.

     

    https://www.instagram.com/p/BUP_O5mhVWW/?taken-by=mister_griff

    https://www.instagram.com/p/BUNPPMPBs7v/?taken-by=mister_griff

    https://www.instagram.com/p/BT96b92hLLJ/?taken-by=mister_griff

    https://www.instagram.com/p/BUAEhykBlJc/?taken-by=mister_griff

    https://www.instagram.com/p/BUSgYsQh-n9/?taken-by=mister_griff

    https://www.instagram.com/p/BUU2Y8LhP7B/?taken-by=mister_griff

    https://www.instagram.com/p/BUVYU9uBCC9/?taken-by=mister_griff

    https://www.instagram.com/p/BUXj9pHBCsl/?taken-by=mister_griff

  • ಚಿಕಿತ್ಸೆಗೆ ಹಣ ನೀಡೆಂದು ಅಪ್ಪನನ್ನು ಬೇಡಿದ್ದ ಕ್ಯಾನ್ಸರ್‍ಪೀಡಿತ ಬಾಲಕಿ- ಆಕೆಯ ಸಾವಿನ ನಂತರ ವೈರಲ್ ಆಯ್ತು ಈ ವಿಡಿಯೋ

    ಚಿಕಿತ್ಸೆಗೆ ಹಣ ನೀಡೆಂದು ಅಪ್ಪನನ್ನು ಬೇಡಿದ್ದ ಕ್ಯಾನ್ಸರ್‍ಪೀಡಿತ ಬಾಲಕಿ- ಆಕೆಯ ಸಾವಿನ ನಂತರ ವೈರಲ್ ಆಯ್ತು ಈ ವಿಡಿಯೋ

    ವಿಜಯವಾಡ: ಡ್ಯಾಡಿ, ನೀನು ನಿನ್ನ ಬಳಿ ಹಣ ಇಲ್ಲ ಅಂತ ಹೇಳ್ತೀಯ. ಆದ್ರೆ ನಮ್ಮ ಬಳಿ ಈ ಮನೆನಾದ್ರೂ ಇದೆ. ಪ್ಲೀಸ್ ಈ ಮನೆಯನ್ನ ಮಾರಿ ನನ್ನ ಚಿಕಿತ್ಸೆಗೆ ಹಣ್ಣ ಕಟ್ಟಿ ಡ್ಯಾಡಿ. ಇಲ್ಲ ಅಂದ್ರೆ ನಾನು ಹೆಚ್ಚು ದಿನ ಬದುಕಲ್ಲ ಅಂತ ಹೇಳಿದ್ದಾರೆ. ಪ್ಲೀಸ್ ಏನಾದ್ರೂ ಮಾಡಿ ನನ್ನ ಉಳಿಸ್ಕೋ ಡ್ಯಾಡಿ….. ಹೀಗಂತ 13 ವರ್ಷದ ಹೆಣ್ಣುಮಗಳೊಬ್ಬಳು ತನ್ನ ಕ್ಯಾನ್ಸರ್ ಚಿತ್ಸೆಗಾಗಿ ಹಣ ಕೊಡಿ ಅಂತ ಅಪ್ಪನನ್ನ ಬೇಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೊಂದು ವಿಪರ್ಯಾಸವೆಂದರೆ ಮೇ 14ರಂದು ಈ ಬಾಲಕಿ ಸಾವನ್ನಪ್ಪಿದ್ದಾಳೆ.

    ಆಂಧ್ರಪ್ರದೇಶ ಮೂಲದ ಈ ಬಾಲಕಿಯ ಹೆಸರು ಸಾಯಿ ಶ್ರೀ. ಈಕೆಗೆ ಬೋನ್ ಮ್ಯಾರೋ ಕ್ಯಾನ್ಸರ್ ಇದೆ ಎಂದು 2016ರ ಆಗಸ್ಟ್ 27ರಂರಂದು ವೈದ್ಯರು ಹೇಳಿದ್ದರು. ಆದ್ರೆ ಚಿಕಿತ್ಸೆಗೆ ಬೇಕಾಗುವಷ್ಟು ಹಣ ಅಮ್ಮನ ಬಳಿ ಇಲ್ಲ. ಮನೆ ಮಾರಿ ಹಣ ಕೊಡಿ. ಅಮ್ಮನಿಗೆ ಹಣ ಕೊಡಲು ಇಷ್ಟವಿಲ್ಲ ಅಂದ್ರೆ ನೀವೇ ಬಂದು ಆಸ್ಪತ್ರೆಯಲ್ಲಿ ಹಣ ಕಟ್ಟಿ ಎಂದು ಸಾಯಿ ಶ್ರೀ ವಿಡಿಯೋ ಮೂಲಕ ತನ್ನ ತಂದೆಗೆ ಹಣ ನೀಡುವಂತೆ ಕೇಳಿದ್ದಳು.

    ಸಾಯಿ ಶ್ರೀ ತಂದೆ ಮದಮ್‍ಶೆಟ್ಟಿ ಶಿವಕುಮಾರ್ ತನ್ನ ಪತ್ನಿ ಸುಮಾ ಶ್ರೀ ಮತ್ತು ಮಗಳಿಂದ 8 ವರ್ಷದ ಹಿಂದೆಯೇ ದೂರವಾಗಿದ್ರು. ವರದಿಯ ಪ್ರಕಾರ ಸಾಯಿ ಶ್ರೀ ತನ್ನ ತಾಯಿಯೊಂದಿಗೆ ವಿಜಯವಾಡದಲ್ಲಿ ನೆಲೆಸಿದ್ದು, ತಂದೆ ಬೆಂಗಳೂರಿನಲ್ಲಿದ್ದರು ಎನ್ನಲಾಗಿದೆ.

    ಶಿವ ಕುಮಾರ್ ಮತ್ತು ಸುಮಾ ದೂರವಾಗುವುದಕ್ಕೂ ಮುನ್ನ ಮಗಳಾದ ಸಾಯಿ ಶ್ರೀ ಹೆಸರಲ್ಲಿ ಒಂದು ಫ್ಲಾಟ್ ಖರೀದಿಸಿದ್ರು. ಮನೆ ಮಾರಿ ಮಗಳ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ಮುಂದಾದಾಗ ಗಂಡ ಶಿವ ಕುಮಾರ್, ತೆಲುಗು ದೇಶಂ ಪಾರ್ಟಿಯ ಶಾಸಕ ಬೋಂಡಾ ಉಮಾಮಹೇಶ್ವರ್ ರಾವ್ ಅವರ ನೆರವಿನಿಂದ ಮನೆ ಮಾರಾಟ ಮಾಡದಂತೆ ತಡೆದಿದ್ದರು ಎಂದು ಸುಮಾ ಆರೋಪಿಸಿದ್ದಾರೆ.

    ಶಾಸಕರ ಬೆಂಬಲ ಇದ್ದ ಕಾರಣ ಶಿವ ಕುಮಾರ್ ಕಳಿದಿದ್ದ ಗೂಂಡಾಗಳ ವಿರುದ್ಧ ದೂರು ದಾಖಲಿಸಿಕೊಳ್ಳಲು ಆಂಧ್ರಪ್ರದೇಶದ ಪೊಲೀಸರು ನಿರಾಕರಿಸಿದ್ರು ಎಂದು ಸುದ್ದಿ ಸಂಸ್ಥೆ ಎಎನ್‍ಐ ವರದಿ ಮಾಡಿದೆ.

    ಈ ಬಗ್ಗೆ ಹೇಳಿಕೆ ನೀಡಿರೋ ಬಾಲಾಲ ಹಕ್ಕುಳ ಸಂಗಂನ ಅಧ್ಯಕ್ಷರಾದ ಅಚ್ಯುತ್ ರಾವ್, ನಾವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗದಲ್ಲಿ ಅರ್ಜಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ.

    ಹಣ ನೀಡಲು ಶಕ್ತರಾಗಿದ್ದರೂ ತಂದೆ ಮಗಳ ಚಿಕಿತ್ಸೆಗೆ ಹಣ ನೀಡಿಲ್ಲವೆಂಬುದನ್ನು ಮನಗಂಡ ರಾಜ್ಯ ಮಾನವ ಹಕ್ಕುಗಳ ಆಯೋಗ, ಈ ಬಗ್ಗೆ ವಿಸ್ತøತ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ.

    ಈ ವಿಡಿಯೋ ಸದ್ಯ ದೇಶದಾದ್ಯಂತ ವೈರಲ್ ಆಗಿದ್ದು, ತಂದೆಯ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.

    https://www.youtube.com/watch?v=iqejG-FQ01s

    https://www.youtube.com/watch?v=wpxTOC7C-aY

     

  • 3ನೇ ಮಹಡಿಯಿಂದ ಬೀಳ್ತಿದ್ದ ಮಗುವನ್ನ ಹಿಡಿಯಲೆತ್ನಿಸಿದ್ಳು ಶಾಲಾ ಬಾಲಕಿ – ಮುಂದೇನಾಯ್ತು? ವಿಡಿಯೋ ನೋಡಿ

    3ನೇ ಮಹಡಿಯಿಂದ ಬೀಳ್ತಿದ್ದ ಮಗುವನ್ನ ಹಿಡಿಯಲೆತ್ನಿಸಿದ್ಳು ಶಾಲಾ ಬಾಲಕಿ – ಮುಂದೇನಾಯ್ತು? ವಿಡಿಯೋ ನೋಡಿ

    ಬೀಜಿಂಗ್: 3ನೇ ಮಹಡಿಯಿಂದ ಕೆಳಗೆ ಬೀಳುತ್ತಿದ್ದ ಮಗುವನ್ನ ಶಾಲಾ ಬಾಲಕಿಯೊಬ್ಬಳು ಹಿಡಿದುಕೊಳ್ಳಲು ಯತ್ನಿಸೋ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

    ಈ ಘಟನೆ ಚೀನಾದ ಹೆನಾನ್ ಪ್ರಾಂತ್ಯದ ಕ್ಸಿಂಗ್‍ಯಾಂಗ್‍ನಲ್ಲಿ ಮೇ 9 ರಂದು ನಡೆದಿದ್ದು, ಇದರ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕಿಯ ಹೆಸರು ಚೆನ್ ಕೆಯು, ಈಕೆ 6ನೇ ತರಗತಿ ಓದುತ್ತಿದ್ದಾಳೆಂದು ಚೈನಾ ಪ್ಲಸ್ ಪತ್ರಿಕೆ ವರದಿ ಮಾಡಿದೆ.

    ರಸ್ತೆಯಲ್ಲಿ ಇತರೆ ಬಾಲಕಿಯರೊಂದಿಗೆ ಚೆನ್ ನಡೆದುಕೊಂಡು ಹೋಗುತ್ತಿದ್ದಾಗ ಎಲ್ಲರೂ ಕಟ್ಟಡವೊಂದರ ಬಳಿ ನಿಂತು ಮೇಲೆ ನೋಡುತ್ತಿರ್ತಾರೆ. ಕೆಲವು ಸೆಕೆಂಡ್‍ಗಳ ಕಾಲ ಚೆನ್ ಕೂಡ ಅಲ್ಲೇ ನಿಂತು ನೋಡಿದ್ದಾಳೆ. ನಂತರ ತನ್ನ ಎರಡೂ ಕೈ ಚಾಚಿ ಕಟ್ಟಡದ ಬಳಿ ಓಡುತ್ತಾಳೆ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ಮಗು ಕೆಳಗೆ ಬೀಳುತ್ತದೆ. ನಂತರ ಚೆನ್ ಓಡಿಹೋಗಿ ಮಗುವನ್ನ ಎತ್ತಿಕೊಂಡು ಗಾಯವೇನಾದ್ರೂ ಆಯಿತಾ ಅಂತ ನೋಡೋದನ್ನ ವಿಡಿಯೋದಲ್ಲಿ ಕಾಣಬಹುದು.

    ಕೆಳಗೆ ಬೈಕ್‍ಗಳು ನಿಂತಿದ್ದರಿಂದ ಅದರ ಮೇಲೆ ಮೊದಲು ಬಿದ್ದು ನಂತರ ಮಗು ನೆಲಕ್ಕೆ ಬಿದ್ದಿದ್ದರಿಂದ ದೊಡ್ಡ ಅನಾಹುತವಾಗೋದು ತಪ್ಪಿದೆ. ಮಹಡಿಯಿಂದ ಕೆಳಗೆ ಬಿದ್ದ 2 ವರ್ಷದ ಮಗು ತನ್ನ ತಾಯಿಗಾಗಿ ಹುಡುಕಾಡುತ್ತಾ ಕಿಟಿಕಿಯ ಮೇಲೆ ಹತ್ತಿದ್ದು, ಈ ವೇಳೆ ಕೆಳಗೆ ಬಿದ್ದಿದೆ. ಘಟನೆ ನಡೆದ ನಂತರ ಮಗುವನ್ನ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಯಾವುದೇ ಗಂಭೀರ ಗಾಯಗಳಾಗಿಲ್ಲ ಅಂತ ವೈದ್ಯರು ಹೇಳಿರೋದಾಗಿ ವರದಿಯಾಗಿದೆ.

    https://www.youtube.com/watch?v=oiWpN-4fKus

  • ತನ್ನ ಕರುವನ್ನು ಸಾಯ್ಸಿದ ಹಾವಿನೊಂದಿಗೆ ಹಸು ಜಗಳಾಡೋ ಮನಕಲಕುವ ವಿಡಿಯೋ ನೋಡಿ

    ತನ್ನ ಕರುವನ್ನು ಸಾಯ್ಸಿದ ಹಾವಿನೊಂದಿಗೆ ಹಸು ಜಗಳಾಡೋ ಮನಕಲಕುವ ವಿಡಿಯೋ ನೋಡಿ

    ಹಾವು-ಮುಂಗುಸಿ ಜಗಳ ಮಾಡುತ್ತವೆ ಅನ್ನೋದನ್ನ ಕೇಳಿರ್ತೀರಿ ಅಥವಾ ನೋಡಿರ್ತೀರಿ. ಆದ್ರೆ ಹಾವು ಮತ್ತು ಹಸು ಜಗಳ ಮಾಡಿರೋ ವಿಚಿತ್ರ ಘಟನೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹೌದು. ಆಗ ತಾನೇ ಹುಟ್ಟಿದ ತನ್ನ ಕರುಳ ಕುಡಿಯನ್ನೇ ಕಚ್ಚಿ ಸಾಯಿಸಿದ ಹಾವಿನೊಂದಿಗೆ ಹಸುವೊಂದು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹೋರಾಟ ಮಾಡಿದೆ.

    ತನ್ನ ಕರುವನ್ನು ಸಾಯಿಸಿದ ಹಾವನ್ನು ಕಾಲಿನಲ್ಲಿ ತುಳಿದು, ಕೊಂಬಿನಿಂದ ತಿವಿದು ಕೊಂದು ಹಾಕಿ ಸೇಡು ತೀರಿಸಿಕೊಳ್ಳೋ ದೃಶ್ಯ ನೋಡೋವಾಗ ಎಂಥವರ ಕರುಳು ಚುರುಕ್ ಅನ್ನತ್ತೆ. ಆದ್ರೆ ಈ ಘಟನೆ ಎಲ್ಲಿ ನಡೆದಿದೆ ಎಂಬುವುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಘಟನೆಯ ದೃಶ್ಯವನ್ನು ಪಕ್ಕದಲ್ಲೇ ನಿಂತಿದ್ದ ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದಾರೆ.

    `ತಮಿಳ್ ಸೈಥಿ’ ಎಂಬ ಯೂಟ್ಯೂಬ್ ಅಕೌಂಟ್‍ನಲ್ಲಿ ಮೇ 6ರಂದು ಈ ವಿಡಿಯೋ ಅಪ್ ಲೋಡ್ ಮಾಡಲಾಗಿದ್ದು ವೈರಲ್ ಆಗಿದೆ.

    https://www.youtube.com/watch?v=xEjI9HzRASI

  • ‘ಓಂ’ಕಾರ ಪಠಿಸಿ ಅಳುತ್ತಿದ್ದ ಮಗುವನ್ನ ಕೆಲವೇ ಸೆಕೆಂಡ್‍ನಲ್ಲಿ ಮಲಗಿಸಿದ ತಂದೆ- ವಿಡಿಯೋ ವೈರಲ್

    ‘ಓಂ’ಕಾರ ಪಠಿಸಿ ಅಳುತ್ತಿದ್ದ ಮಗುವನ್ನ ಕೆಲವೇ ಸೆಕೆಂಡ್‍ನಲ್ಲಿ ಮಲಗಿಸಿದ ತಂದೆ- ವಿಡಿಯೋ ವೈರಲ್

    ವಾಷಿಂಗ್ಟನ್: ಋಷಿಮುನಿಗಳು, ತಪಸ್ವಿಗಳು ಓಂಕಾರ ಪಠಿಸುತ್ತಾ ವರ್ಷಾನುಗಟ್ಟಲೆ ಜಪ ಮಾಡುತ್ತಿದ್ದರು ಎಂಬ ಬಗ್ಗೆ ಕೇಳಿದ್ದೀವಿ. ಆದ್ರೆ ಮಗುವಿನ ಅಳುವನ್ನ ನಿಲ್ಲಿಸೋಕೆ ಓಂ ಅಂತ ಹೇಳಿದ್ರೆ ಅದು ಕೇಳುತ್ತಾ? ಹೌದು, ಕೇಳುತ್ತೆ. ಅದಕ್ಕೆ ಉದಾಹರಣೆ ಈ ವಿಡಿಯೋ. ವ್ಯಕ್ತಿಯೊಬ್ಬರು ಅಳುತ್ತಿದ್ದ ಪುಟ್ಟ ಕಂದನ ಕಿವಿಯಲ್ಲಿ ‘ಓಂ’ ಎಂದು ಪಠಿಸಿದ ನಂತರ ಅದು ಮಂತ್ರಮುಗ್ಧವಾದಂತೆ ನಿದ್ರೆಗೆ ಜಾರುತ್ತದೆ. ಆಚ್ಚರಿಯಾದ್ರೂ ಇದನ್ನ ನಂಬಲೇಬೇಕು.

    ಅಲ್ಲದೆ ಇದು ನಡೆದಿರೋದು ಭಾರತದಲ್ಲಲ್ಲ. ಕ್ಯಾಲಿಫೋರ್ನಿಯಾದ ಸ್ಯಾನ್ ಡೀಗೋ ನಿವಾಸಿಯಾದ ಡೇನಿಯಲ್ ಐಸೆನ್‍ಮ್ಯಾನ್, ಫೇಸ್‍ಬುಕ್ ಲೈವ್ ವಿಡಿಯೋ ಮಾಡ್ತಿದ್ರು. ಈ ವೇಳೆ ಅಳೋಕೆ ಶುರು ಮಾಡಿದ್ದ ಮಗುವನ್ನ ಸಿಂಪಲ್ ಟ್ರಿಕ್ ಬಳಸಿ ಮಲಗಿಸಿದ್ರು. ಓಂ ಎಂದು ಪಠಿಸುತ್ತಲೇ ಮಗು ನಿದ್ರೆಗೆ ಜಾರಿತು. ವಿಡಿಯೋದ ಈ ಭಾಗವನ್ನ ಡೇನಿಯಲ್ ಏಪ್ರಿಲ್ 22 ರಂದು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಡೇನಿಯಲ್ ಅವರ ಈ ಟ್ರಿಕ್ ನೋಡಿದವರು ಬರೆಗಾಗಿದ್ದಾರೆ. ಈ ವಿಡಿಯೋ ಈವರೆಗೆ 3.5 ಕೋಟಿಗೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು 3.6 ಲಕ್ಷಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಅಲ್ಲದೆ 2.4 ಲಕ್ಷಕ್ಕೂ ಹೆಚ್ಚು ರಿಯಾಕ್ಷನ್ಸ್, 92 ಲಕ್ಷಕ್ಕೂ ಹೆಚ್ಚು ಕಮೆಂಟ್ಸ್ ಗಳಿಸಿದೆ.

    ‘ಓಂ’ ಎಂದು ಪಠಿಸುವಾಗ ಅದರ ವೈಬ್ರೇಷನ್‍ನಿಂದ ಮಗು ನಿದ್ರೆಗೆ ಜಾರುತ್ತದೆ. ತಂದೆ ಓಂ ಎಂದು ಹೇಳುವ ಗತಿಯನ್ನ ನಿಧಾನವಾಗಿ ಬದಲಿಸುತ್ತಾರೆ. ಇದು ನಿಜಕ್ಕೂ ಸುಂದರ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಮಗುವನ್ನ ಸುಮ್ಮನಿರಿಸಲು ನಾವೂ ಕೂಡ ಈ ಟ್ರಿಕ್ ಪ್ರಯೋಗ ಮಾಡಿದ್ವಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

    https://www.facebook.com/DanielEisenman/videos/1524632837547223/

  • ಜಿದ್ದಿಗೆ ಬಿದ್ದು ಬಸ್ ಓಡಿಸಿದ ಡ್ರೈವರ್‍ಗಳು: ವೈರಲ್ ಆಗಿದೆ ತಮಿಳುನಾಡಿನ ರೇಸ್ ವಿಡಿಯೋ

    ಜಿದ್ದಿಗೆ ಬಿದ್ದು ಬಸ್ ಓಡಿಸಿದ ಡ್ರೈವರ್‍ಗಳು: ವೈರಲ್ ಆಗಿದೆ ತಮಿಳುನಾಡಿನ ರೇಸ್ ವಿಡಿಯೋ

    ಚೆನ್ನೈ: ರೇಸ್ ಟ್ರ್ಯಾಕ್ ನಲ್ಲಿ ಬಸ್ ಗಳು ಸ್ಪರ್ಧೆ ಮಾಡುವುದನ್ನು ನೀವು ನೋಡಿರಬಹುದು. ಆದರೆ ಈ ರೇಸ್ ಸ್ಪರ್ಧೆ ರಸ್ತೆಯಲ್ಲಿ ನಡೆದರೆ ಹೇಗಿರುತ್ತದೆ ಎನ್ನುವುದಕ್ಕೆ ತಮಿಳುನಾಡಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೊಯಂಬತ್ತೂರು – ಪುಲೈಚ್ಚಿ ಹೈವೇಯಲ್ಲಿ ಎರಡು ಖಾಸಗಿ ಬಸ್‍ಗಳು ಸ್ಪರ್ಧೆಗೆ ಬಿದ್ದಂತೆ ಸಂಚರಿಸಿದೆ. ಇಬ್ಬರು ಡ್ರೈವರ್ ಗಳು ಓವರ್ ಟೇಕ್ ಮಾಡಲು ಕಾಮಗಾರಿ ನಡೆಯುತ್ತಿದ್ದ ರಸ್ತೆಯ ಮೇಲೆ ಬಸ್ ಹತ್ತಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ಈ ಬಸ್‍ಗಳ ಸ್ಪರ್ಧೆಯನ್ನು ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಗಳು ಸೆರೆ ಹಿಡಿದಿದ್ದಾರೆ. ಈ ವಿಡಿಯೋವನ್ನು ವೀಕ್ಷಿಸಿದ ಬಳಿಕ ಪುಲ್ಲೈಚ್ಚಿ ಜಿಲ್ಲಾಧಿಕಾರಿ ಗಾಯತ್ರಿ ಕೃಷ್ಣನ್ ಬಸ್ ಮಾಲೀಕರ ಸಭೆಯನ್ನು ಕರೆದಿದ್ದಾರೆ.

    ಮುಂದುಗಡೆ ವಾಹನಗಳು ಬರುತ್ತಿದ್ದರೂ ಜಿದ್ದಿಗೆ ಬಿದ್ದ ಡ್ರೈವರ್‍ಗಳು ಬಸ್ಸನ್ನು ಓಡಿಸಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

    https://www.youtube.com/watch?v=3Qj39Ot1RGs

  • ಕಾಶ್ಮೀರದಲ್ಲಿ ಜೀಪ್‍ಗೆ ವ್ಯಕ್ತಿಯನ್ನ ಕಟ್ಟಿದ ಪ್ರಕರಣ – ಸೇನೆ ವಿರುದ್ಧ ಎಫ್‍ಐಆರ್

    ಕಾಶ್ಮೀರದಲ್ಲಿ ಜೀಪ್‍ಗೆ ವ್ಯಕ್ತಿಯನ್ನ ಕಟ್ಟಿದ ಪ್ರಕರಣ – ಸೇನೆ ವಿರುದ್ಧ ಎಫ್‍ಐಆರ್

    ಶ್ರೀನಗರ: ಕಳೆದ ವಾರ ಉಪಚುನಾವಣೆ ವೇಳೆ ಪ್ರತಿಭಟನಕಾರರ ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಭದ್ರತಾ ಪಡೆ ವ್ಯಕ್ತಿಯೊಬ್ಬರನ್ನು ಜೀಪ್‍ಗೆ ಕಟ್ಟಿದ ಆರೋಪದ ಮೇಲೆ ಸೇನೆಯ ವಿರುದ್ಧ ಜಮ್ಮು ಕಾಶ್ಮೀರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಕಲ್ಲು ತೂರಾಟದಿಂದ ರಕ್ಷಿಸಿಕೊಳ್ಳುವ ಸಲುವಾಗಿ ಸೇನಾ ಪಡೆ ವ್ಯಕ್ತಿಯೊಬ್ಬರನ್ನು ಜೀಪ್‍ಗೆ ಕಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಭಾರೀ ಖಂಡನೆ ಕೂಡ ವ್ಯಕ್ತವಾಗಿತ್ತು. ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜ್ಯದ ಪೊಲೀಸರಿಗೆ ಘಟನೆ ಬಗ್ಗೆ ವರದಿ ಕೇಳಿದ್ದರು. ಸೇನೆ ಕೂಡ ಘಟನೆ ಬಗ್ಗೆ ಆಂತರಿಕ ತನಿಖೆ ಆರಂಭಿಸಿತ್ತು. ಗೃಹ ಸಚಿವ ರಾಜನಾಥ್ ಸಿಂಗ್ ಪ್ರಕರಣದ ಕುರಿತು ಪರಿಶೀಲಿಸುವುದಾಗಿ ಹೇಳಿದ್ದರು. ಇದೀಗ ವ್ಯಕ್ತಿಯ ಅಪಹರಣ ಹಾಗೂ ಆತನ ಜೀವಕ್ಕೆ ಆಪತ್ತು ತಂದ ಆರೋಪಗಳ ಮೇಲೆ ಸೇನೆಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಏಪ್ರಿಲ್ 9 ರಂದು ಶ್ರೀನಗರ ಕ್ಷೇತ್ರದಲ್ಲಿ ಉಪಚುನಾವಣೆಯ ಸಂದರ್ಭದಲ್ಲಿ ಜನರ ಗುಂಪು ಚುನಾವಣಾ ಅಧಿಕಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಸುಮಾರು 400 ಪ್ರತಿಭಟನಾಕಾರರು ಅಧಿಕಾರಗಳ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಈ ವೇಳೆ ರಕ್ಷಣೆಗಾಗಿ ವ್ಯಕ್ತಿಯನ್ನ ಜೀಪ್‍ಗೆ ಕಟ್ಟಲಾಗಿತ್ತು. ಆ ವ್ಯಕ್ತಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

    ಜೀಪ್‍ಗೆ ಕಟ್ಟಲಾಗಿದ್ದ ವ್ಯಕ್ತಿಯನ್ನು ಫರೂಕ್ ಅಹ್ಮದ್ ದರ್ ಎಂದು ಗುರುತಿಸಲಾಗಿದೆ. ಇವರು ಬುದ್ಗಾಮ್ ಜಿಲ್ಲೆಯ ಖಾಗ್‍ನ ಸೀತಾಹರಣ್ ನಿವಾಸಿಯಾಗಿದ್ದಾರೆ. ಹಾಗೇ ಜೀಪ್‍ಗೆ ವ್ಯಕ್ತಿಯನ್ನು ಕಟ್ಟಿದ ಸೇನಾ ಘಟಕ 53 ರಾಷ್ಟ್ರೀಯ ರೈಫಲ್ಸ್ ಗೆ ಸೇರಿದವರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.

    ತನಿಖೆ ವೇಳೆ ಫರೂಕ್ ಅವರು ಹೇಳಿಕೆ ನೀಡಿದ್ದು, ಅಂದು ನಾನು ಓಟ್ ಮಾಡಿದ ನಂತರ ಸಂಬಂಧಿಕರೊಬ್ಬರು ಮೃತಪಟ್ಟಿದ್ದ ಕಾರಣ ಸಹೋದರಿಯ ಮನೆಗೆ ಹೋಗುತ್ತಿದ್ದೆ. ಚುನಾವಣಾ ಸಿಬ್ಬಂದಿಯೊಂದಿಗೆ ಬೀರ್ವಾ ಗ್ರಾಮವನ್ನ ಪ್ರವೇಶಿಸಬೇಕಿದ್ದ ಸೇನಾ ದಳ, ನನ್ನನ್ನು ಕರೆದುಕೊಂಡು ಹೋಗಿ ಜೀಪ್‍ಗೆ ಕಟ್ಟಿದ್ರು ಎಂದು ಹೇಳಿದ್ದಾರೆ.

    ಪ್ರತ್ಯೇಕವಾದಿಗಳು ಚುನಾವಣೆ ಬಹಿಷ್ಕಾರಕ್ಕೆ ನೀಡಿದ ಕರೆ ಹಾಗೂ ಬೆದರಿಕೆಯ ನಡುವೆಯೇ ನಡೆದ ಶ್ರೀನಗರ ಉಪಚುನಾವಣೆಯ ವೇಳೆ ನಡೆದ ಘರ್ಷಣೆಯಲ್ಲಿ 8 ಮಂದಿ ಮೃತಪಟ್ಟು ಸುಮಾರು 100 ಜನ ಗಾಯಗೊಂಡಿದ್ದರು. ಇವಿಎಂಗಳನ್ನು ಧ್ವಂಸಗೊಳಿಸಲಾಗಿತ್ತು.

    ಇನ್ನು ಸಿಆರ್‍ಪಿಎಫ್ ಯೋಧರ ಮೇಲೆ ಗುಂಪೊಂದು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಪ್ರತಿಭಟನಾಕಾರರು ಯೋಧರೊಬ್ಬರು ಮೇಲೆ ಹಲ್ಲೆ ಮಾಡಿದ್ದು, ಎಷ್ಟೇ ಪ್ರಚೋದಿಸಿದ್ರೂ ಆ ಯೋಧ ಅದಕ್ಕೆ ಪ್ರತಿಕ್ರಿಯಿಸದೇ ಸುಮ್ಮನೆ ನಡೆದುಕೊಂಡು ಹೋಗುವ ವಿಡಿಯೋ ಕೂಡ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಈಗಾಗಲೇ ಬಂಧಿಸಲಾಗಿದೆ.

     

  • ಬಾಗಿಲು ತೆಗೆಯಲು ಹೋದಾಗ ಕಚ್ಚಲು ಬಂತು ಹಾವು! – ವೈರಲ್ ವಿಡಿಯೋ ನೋಡಿ

    ಬಾಗಿಲು ತೆಗೆಯಲು ಹೋದಾಗ ಕಚ್ಚಲು ಬಂತು ಹಾವು! – ವೈರಲ್ ವಿಡಿಯೋ ನೋಡಿ

    ಬ್ಯಾಂಕಾಕ್: ಇದ್ದಕ್ಕಿದ್ದಂತೆ ಹಲ್ಲಿಯೊಂದು ಮೈಮೇಲೆ ಬಿದ್ರೇನೇ ಕುಣಿದಾಡಿಬಿಡ್ತೀವಿ. ಇನ್ನು ಹಾವೊಂದು ಕಚ್ಚಲು ಬಂದ್ರೆ ಹೇಗಾಗಬೇಡ? ಥೈಲ್ಯಾಂಡಿನ ಯುವಕನೊಬ್ಬನಿಗೆ ಆಗಿದ್ದೂ ಇದೇ. ಆದ್ರೆ ಆತ ಹಾವು ಕಚ್ಚಲು ಬಂದಾಗ ಆತಂಕದಿಂದ ಕುಣಿದಾಡಿದ್ದು ಇದರ ವಿಡಿಯೋ ಈಗ ವೈರಲ್ ಆಗಿದೆ

    ಇಂಟರ್ನೆಟ್ ಕೆಫೆಯೊಳಗಿದ್ದ ಯುವಕ ಆರಾಮಾಗಿ ಅಲ್ಲಿದ್ದವರ ಜೊತೆ ಮಾತನಾಡುತ್ತಲೇ ಬಾಗಿಲು ತೆಗೆಯಲು ಮುಂದಾದ. ಈ ವೇಳೆ ಹಾವೊಂದು ಬಾಗಿಲಿನ ಚಿಲಕದ ಬಳಿಯಿಂದ ಆತನನ್ನು ಕಚ್ಚಲು ಮುಂದಾಗಿದೆ. ಹಾವು ಅಂತ ಗೊತ್ತಾಗಿದ್ದೇ ತಡ ಆತ ಹೌಹಾರಿ ಅದರಿಂದ ಬಿಡಿಸಿಕೊಳ್ಳಲು ಒದ್ದಾಡಿದ್ದಾನೆ. ಕೊನೆಗೆ ಆ ಹಾವು ಚೇರ್‍ಗಳ ಕೆಳಗೆ ಹೋಗಿದ್ದು, ಈತ ಅಲ್ಲಿಂದ ಎದ್ದು ಹೊರಗೆ ಓಡಿದ್ದಾನೆ.

    ಇನ್ನು ಅಲ್ಲಿದ್ದವರೂ ಕೂಡ ಚೇರ್ ಮೇಲೆ ಎಗರಿ ಕುಳಿತು ಕೆಲವು ಸೆಕೆಂಡ್‍ಗಳ ಕಾಲ ಮೂಕವಿಸ್ಮಿತರಾಗಿ ನೋಡಿದ್ದಾರೆ. ಹಾವು ಎಲ್ಲಿ ಹೋಯ್ತು ಅಂತ ಗೊತ್ತಾಗದೆ ಕೊನೆಗೆ ಅವರೂ ಕೂಡ ನಿಧಾನವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈಗ ವೈರಲ್ ಆಗಿದೆ. ಇದನ್ನು ನೋಡಿ ಇಂಟರ್ನೆಟ್ ಬಳಕೆದಾರರು ಬಿದ್ದೂ ಬಿದ್ದೂ ನಕ್ಕಿದ್ದಾರೆ.

    ಈ ಘಟನೆ ಏಪ್ರಿಲ್ 8 ರಂದು ಥೈಲ್ಯಾಂಡಿನ ವೈಸೆಟ್ ಚೈ ಚಾನ್ ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

    https://www.youtube.com/watch?v=yY5wPFcXrTQ

  • ಆರ್‍ಪಿಎಸ್ ತಂಡದ ಆಟಗಾರರೊಂದಿಗೆ ಧೋನಿ ಡ್ಯಾನ್ಸ್ – ವಿಡಿಯೋ ವೈರಲ್

    ಆರ್‍ಪಿಎಸ್ ತಂಡದ ಆಟಗಾರರೊಂದಿಗೆ ಧೋನಿ ಡ್ಯಾನ್ಸ್ – ವಿಡಿಯೋ ವೈರಲ್

    ಮುಂಬೈ: ರೈಸಿಂಗ್ ಪುಣೆ ಸೂಪರ್‍ಜೇಂಟ್ಸ್ ತಂಡದ ತನ್ನ ಸಹ ಆಟಗಾರರೊಂದಿಗೆ ಎಂಎಸ್ ಧೋನಿ ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

    ನಾಯಕತ್ವ ಸ್ಥಾನದಿಂದ ಕೆಳಗಿಳಿದ ಮೇಲೆ ಧೋನಿ ಕೆಲಸದ ಒತ್ತಡಗಳಿಂದ ಹೊರ ಬಂದು ಡ್ಯಾನ್ಸ್ ಮಾಡಿರುವ ಚಿಕ್ಕ ವಿಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗಾಗಲೇ 7.5 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, 4 ಸಾವಿರಕ್ಕೂ ಹೆಚ್ಚು ಕಮೆಂಟ್ಸ್ ಬಂದಿದೆ.

    ಆರ್‍ಪಿಎಸ್ ತಂಡದ ಡ್ರೆಸ್‍ನಲ್ಲಿ ಡ್ಯಾನ್ಸ್ ಮಾಡಿರುವ ಧೋನಿಗೆ ಅಜ್ಯಿಂಕ್ಯ ರಹಾನೆ ಸಾಥ್ ನೀಡಿದ್ದಾರೆ. ಧೋನಿ ಡ್ಯಾನ್ಸ್ ಮಾಡ್ತಿದ್ದು, ಬೆನ್ ಸ್ಟ್ರೋಕ್ಸ್ ಹಿಂದೆ ನಿಂತು ಇವರ ಸ್ಟೆಪ್ ನೋಡಿ ಖುಷಿ ಪಡ್ತಿರೋದನ್ನ ವಿಡಿಯೋದಲ್ಲಿ ನೋಡಬಹುದು.

    10ನೇ ಆವೃತ್ತಿಯ ಐಪಿಎಲ್ ಹರಾಜಿನ 1 ದಿನ ಹಿಂದಷ್ಟೆ ಆರ್‍ಪಿಎಸ್ ತಂಡದ ನಾಯಕರಾಗಿ ಧೋನಿ ಬದಲಿಗೆ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಅವರನ್ನ ಆಯ್ಕೆ ಮಾಡಲಾಗಿತ್ತು. ಕಳೆದ 9 ಆವೃತ್ತಿಗಳಲ್ಲೂ ಧೋನಿ ಐಪಿಎಲ್ ತಂಡದ ನಾಯಕರಾಗಿದ್ದರು. 2008 ರಿಂದ 2015ರವರೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಮಾನತ್ತಾದ ನಂತರ 2016ರಲ್ಲಿ ಪುಣೆ ಸೂಪರ್‍ಜೇಂಟ್ಸ್ ತಂಡವನ್ನ ಧೋನಿ ಮುನ್ನಡೆಸಿದ್ದರು.

    https://www.instagram.com/p/BSq5ZmUlPwC/