Tag: ವೈನ್

  • ಆಫೀಸ್‌ನಲ್ಲೂ ಮದ್ಯಪಾನ ಮಾಡ್ಬೋದು – ಹರಿಯಾಣದಲ್ಲಿ ಹೊಸ ನಿಯಮ

    ಆಫೀಸ್‌ನಲ್ಲೂ ಮದ್ಯಪಾನ ಮಾಡ್ಬೋದು – ಹರಿಯಾಣದಲ್ಲಿ ಹೊಸ ನಿಯಮ

    ಚಂಡೀಗಢ: ಕಚೇರಿ, ಸಾರ್ವಜನಿಕ ಸ್ಥಳ ಹೀಗೆ ಕೆಲವೆಡೆ ಮದ್ಯಪಾನ ಮಾಡೋದು ನಿಷೇಧ. ಆದರೆ ಹರ್ಯಾಣದ (Haryana) ಸರ್ಕಾರ ಎಣ್ಣೆ ಪ್ರಿಯರಿಗೆ ಒಂದು ಸಿಹಿ ಸುದ್ದಿ ನೀಡಿದೆ. ಕಾರ್ಪೊರೇಟ್ ಕಚೇರಿಯಲ್ಲಿ (Corporate Office) ಕೆಲಸ ಮಾಡುತ್ತ ಸಹೋದ್ಯೋಗಿಗಳೊಂದಿಗೆ ಮದ್ಯಪಾನ ಮಾಡಬಹುದಾದಂತಹ ಹೊಸ ನಿಯಮವನ್ನು ಸರ್ಕಾರ ತಂದಿದೆ.

    ಹರಿಯಾಣ ಮದ್ಯ ನೀತಿಯ (Haryana Liquor Policy) ಪ್ರಕಾರ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಿದಂತೆ ಜೂನ್ 12 ರಿಂದ ರಾಜ್ಯಾದ್ಯಂತ ದೊಡ್ಡ ಕಾರ್ಪೊರೇಟ್ ಕಚೇರಿಗಳಲ್ಲಿ ಕಡಿಮೆ ಕಂಟೆಂಟ್ ಆಲ್ಕೋಹಾಲ್ (Alcohol) ಪಾನೀಯಗಳಾದ ಬಿಯರ್, ವೈನ್ ಮತ್ತು ರೆಡಿ ಟು ಡ್ರಿಂಕ್ ಪಾನೀಯಗಳನ್ನು ಸೇವಿಸಲು ಸರ್ಕಾರ ಅನುಮತಿ ನೀಡುತ್ತಿದೆ.

    ಹರಿಯಾಣ ಮದ್ಯ ನೀತಿಯ ಈ ಹೊಸ ನಿಯಮವನ್ನು ಮೇ 9 ರಂದು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಕನಿಷ್ಠ 5,000 ಉದ್ಯೋಗಿಗಳನ್ನು ಹೊಂದಿರುವ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಗಳು ಬಿಯರ್ (Beer) ಹಾಗೂ ವೈನ್‌ನಂತಹ (Wine) ಪಾನೀಯಗಳನ್ನು ಸೇವಿಸಬಹುದು. ಒಂದು ಲಕ್ಷ ಚದರ ಅಡಿ ವ್ಯಾಪ್ತಿಯ ಪ್ರದೇಶದಲ್ಲಿ ಹಾಗೂ ಒಂದೇ ಆವರಣದೊಳಗೆ ಮದ್ಯಪಾನಕ್ಕೆ ಅನುಮತಿ ನೀಡಲಾಗುತ್ತಿದೆ.

    ಇದರರ್ಥ ನೀವು ದೊಡ್ಡ ಕಾರ್ಪೊರೇಟ್ ಕಚೇರಿಯಲ್ಲಿ ಉದ್ಯೋಗಿಯಾಗಿದ್ದರೆ ಕಚೇರಿಯ ಆವರಣದಲ್ಲಿ ಬಿಯರ್ ಅಥವಾ ವೈನ್ ಕುಡಿಯಬಹುದು. ಇವುಗಳನ್ನು ಕಚೇರಿಯಲ್ಲಿಯೇ ನೀಡಬೇಕು ಎಂದೇನಿಲ್ಲ. ನೀವು ಸ್ವಂತವಾಗಿಯೂ ಖರೀದಿಸಿ ಕಚೇರಿಯಲ್ಲಿ ಸೇವನೆ ಮಾಡಬಹುದು. ಇದನ್ನೂ ಓದಿ: ಆಟೋ ರಿಕ್ಷಾ, ಖಾಸಗಿ ಬಸ್ ಡಿಕ್ಕಿ – 6 ಮಹಿಳೆಯರು ಸಾವು, ನಾಲ್ವರಿಗೆ ಗಾಯ

    ಹರಿಯಾಣ ಮದ್ಯ ನೀತಿಯ ಪ್ರಕಾರ ಕಾರ್ಪೊರೇಟ್ ಕಚೇರಿಗಳು ಎಲ್-10ಎಫ್ ಮದ್ಯದ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ಬಿಯರ್ ಮತ್ತು ವೈನ್‌ನಂತಹ ಕಡಿಮೆ ಆಲ್ಕೋಹಾಲ್ ಅಂಶದ ಪಾನೀಯಗಳನ್ನು ಸೇವಿಸಲು ಅನುವು ಮಾಡಿಕೊಡುತ್ತದೆ. ಕ್ಯಾಂಟೀನ್ ಅಥವಾ ಉಪಾಹಾರ ಗೃಹದ ಕನಿಷ್ಠ ವಿಸ್ತೀರ್ಣವು 2,000 ಚದರ ಅಡಿಗಳಿಗಿಂತ ಕಡಿಮೆಯಿಲ್ಲದಿದ್ದರೆ ಕಾರ್ಪೊರೇಟ್ ಕಚೇರಿ ಪರವಾನಗಿ ಪಡೆಯಬಹುದು. ಪರವಾನಿಗೆ ಪಡೆಯುವ ಕಚೇರಿ 3 ಲಕ್ಷ ರೂ. ಭದ್ರತಾ ಮೊತ್ತವನ್ನು ಠೇವಣಿ ಇಡಬೇಕು. ಇದನ್ನೂ ಓದಿ: ಹಾಸನದ ಮಲೆನಾಡು ಭಾಗದಲ್ಲಿ ನಿಲ್ಲದ ಕಾಡಾನೆಗಳ ಉಪಟಳ – ಇಬ್ಬರಿಗೆ ತೀವ್ರ ಗಾಯ

  • ವೈನ್ ಮದ್ಯವಲ್ಲ, ಮಾರಾಟ ಹೆಚ್ಚಾದ್ರೆ ರೈತರಿಗೆ ಲಾಭ ಸಿಗಲಿದೆ: ಸಂಜಯ್ ರಾವತ್

    ವೈನ್ ಮದ್ಯವಲ್ಲ, ಮಾರಾಟ ಹೆಚ್ಚಾದ್ರೆ ರೈತರಿಗೆ ಲಾಭ ಸಿಗಲಿದೆ: ಸಂಜಯ್ ರಾವತ್

    ಮುಂಬೈ: ವೈನ್ ಮದ್ಯವಲ್ಲ, ಸೂಪರ್ ಮಾರ್ಕೆಟ್‍ಗಳಲ್ಲಿ ಮಾರಾಟ ಮಾಡುವುದರಿಂದ ರೈತರ ಆದಾಯ ಹೆಚ್ಚಿಸಲಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.

    ವೈನ್ ಮದ್ಯವಲ್ಲ. ವೈನ್ ಮಾರಾಟ ಹೆಚ್ಚಾದರೆ ರೈತರಿಗೆ ಅದರಿಂದ ಲಾಭ ಸಿಗುತ್ತದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

    ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಕ್ಕಾಗಿ ಪ್ರತಿಪಕ್ಷ ಬಿಜೆಪಿ ವಿರುದ್ಧ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕೇವಲ ಎಲ್ಲವನ್ನೂ ವಿರೋಧಿಸುತ್ತದೆ. ಅವರು ರೈತರಿಗಾಗಿ ಏನನ್ನೂ ಮಾಡುವುದಿಲ್ಲ ಎಂದು ಸಂಜಯ್ ರಾವತ್ ಟೀಕಿಸಿದ್ದಾರೆ. ಈ ಹಿಂದೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಶಿವಸೇನೆ ನೇತೃತ್ವದ ಸರ್ಕಾರ ಮಹಾರಾಷ್ಟ್ರವನ್ನು ಮದ್ಯ-ರಾಷ್ಟ್ರ ಮಾಡಲು ಹೊರಟಿದೆ ಎಂದು ಲೇವಡಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಜಯ್ ರಾವತ್ ವೈನ್ ಆಲ್ಕೋಹಾಲ್ ಅಲ್ಲ ಎಂದಿದ್ದಾರೆ.

    ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್- ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ: ಸುಮಾರು 1,000 ಚದರ ಅಡಿ ಅಥವಾ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣವನ್ನು ಹೊಂದಿರುವ ಮಹಾರಾಷ್ಟ್ರದ ಅಂಗಡಿಗಳು ಮತ್ತು ಸಂಸ್ಥೆಗಳ ಕಾಯ್ದೆಯಡಿ ನೋಂದಾಯಿಸಲ್ಪಟ್ಟಿರುವ ಸೂಪರ್ ರ್ಮಾರ್ಕೆಟ್‍ಗಳು ಮತ್ತು ಮಳಿಗೆಗಳಲ್ಲಿ “ಶೆಲ್ಫ್-ಇನ್-ಶಾಪ್” ವಿಧಾನವನ್ನು ಅಳವಡಿಸಿಕೊಳ್ಳಬಹುದಾಗಿದೆ. ಇದನ್ನೂ ಓದಿ: ಕೇರಳದ ಬಾಲಿಕಾ ಗೃಹದಿಂದ 6 ಹುಡುಗಿಯರು ನಾಪತ್ತೆ – ಒಬ್ಬಳು ಬೆಂಗ್ಳೂರಿನಲ್ಲಿ ಪತ್ತೆ

    ಸೂಪರ್ ಮಾರ್ಕೆಟ್ ಸಮೀಪದಲ್ಲಿ ದೇವಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿದ್ದರೆ ವೈನ್ ಮಾರಾಟ ಮಾಡಲು ಅನುಮತಿ ನೀಡಲಾಗುವುದಿಲ್ಲ ಮತ್ತು ಮದ್ಯ ನಿಷೇಧ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ಕೂಡ ವೈನ್ ಮಾರಾಟಕ್ಕೆ ಅನುಮತಿ ನೀಡಲಾಗುವುದಿಲ್ಲ. ಇನ್ನೂ ಸೂಪರ್ ಮಾರ್ಕೆಟ್‍ನಲ್ಲಿ ವೈನ್ ಮಾರಾಟ ಮಾಡಲು ಪರವಾನಗಾಗಿ 5,000 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.

  • 578 ವೈನ್ ಬಾಕ್ಸ್ ನಾಪತ್ತೆ- ಮಹಿಳಾ ಕಾನ್‌ಸ್ಟೇಬಲ್‌ ವಿರುದ್ಧ ಕೇಸ್

    578 ವೈನ್ ಬಾಕ್ಸ್ ನಾಪತ್ತೆ- ಮಹಿಳಾ ಕಾನ್‌ಸ್ಟೇಬಲ್‌ ವಿರುದ್ಧ ಕೇಸ್

    ಲಕ್ನೋ: ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ವೈನ್ ಬಾಟಲ್‍ಗಳನ್ನು ತುಂಬಿದ್ದ ಬಾಕ್ಸ್ ಕಳುವಾಗಿದ್ದು, ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಹೆಡ್ ಕಾನ್‌ಸ್ಟೇಬಲ್‌ ತಾರೇಶ್ ಶರ್ಮಾ ವಿರುದ್ಧ ಐಪಿಸಿ ಸೆಕ್ಷನ್ 409ರಡಿ ಎಸ್‍ಪಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಮದುವೆ ಆಗುವುದಾಗಿ ನಂಬಿಸಿ ವಂಚನೆ- ಸಿಸಿಎಫ್ ಮೇಲೆ ದೂರು

    12 ವಿವಿಧ ಪ್ರಕರಣಗಳಲ್ಲಿ ಸುಮಾರು 578 ವೈನ್ ಬಾಕ್ಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸರ್ಕಲ್ ಇನ್‍ಸ್ಪೆಕ್ಟರ್ ಪ್ರದೀಪ್ ಸಿಂಗ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು. ವಶಕ್ಕೆ ಪಡೆದ ವೈನ್ ಬಾಕ್ಸ್ ಜವಾಬ್ದಾರಿಯನ್ನು ತಾರೇಶ್ ಶರ್ಮಾ ಅವರಿಗೆ ವಹಿಸಲಾಗಿತ್ತು. ಇದನ್ನೂ ಓದಿ: ಲಾಕಪ್‍ನಿಂದ ತಪ್ಪಿಸಿಕೊಂಡವ ಠಾಣೆಯ ಪಕ್ಕದಲ್ಲಿದ್ದ ನದಿಗೆ ಹಾರಿ ಪ್ರಾಣ ಬಿಟ್ಟ

    ಮಹಿಳಾ ಹೆಡ್ ಕಾನ್‌ಸ್ಟೇಬಲ್‌ ವರ್ಗಾವಣೆಯಾದಾಗ ಈ ಘಟನೆ ಬೆಳಕಿಗೆ ಬಂದಿದೆ. ತೆರವಾಗಿದ್ದ ಸ್ಥಾನಕ್ಕೆ ಬರುವ ಅಧಿಕಾರಿಗೆ ವೈನ್‍ ಬಾಕ್ಸ್ ಹಸ್ತಾಂತರಿಸುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

  • ಮನೆಯಲ್ಲೇ ವೈನ್ ತಯಾರಿಸ್ಕೊಂಡ ಅಪ್ಪ-ಮಗನ ಬಂಧನ

    ಮನೆಯಲ್ಲೇ ವೈನ್ ತಯಾರಿಸ್ಕೊಂಡ ಅಪ್ಪ-ಮಗನ ಬಂಧನ

    -30 ಲೀಟರ್ ವೈನ್, 5 ಲೀಟರ್ ಮದ್ಯ ವಶಕ್ಕೆ

    ಚೆನ್ನೈ: ಮನೆಯಲ್ಲಿಯೇ ವೈನ್ ತಯಾರಿಸಿಕೊಳ್ಳುತ್ತಿದ್ದ ಅಪ್ಪ-ಮಗ ಸೇರಿದಂತೆ ಮೂವರನ್ನ ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಮನೆಯಲ್ಲಿ ದ್ರಾಕ್ಷಿ ರಸ ಮತ್ತ ಮದ್ಯ ತಯಾರಿಸಲು ಬಳಸುತ್ತಿದ್ದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ಉತ್ತರ ಚೆನ್ನೈನ ಕೊಡೊಂಗೈಯೂರ ಪ್ರದೇಶದಲ್ಲಿರುವ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 56 ವರ್ಷದ ತಂದೆ ತನ್ನ 26ರ ಪುತ್ರ ಮತ್ತೊಬ್ಬ ಯುವಕನ ಜೊತೆ ಸೇರಿ ಮದ್ಯ ತಯಾರಿಸುತ್ತಿದ್ದರು.

    ದಾಳಿ ವೇಳೆ ದ್ರಾಕ್ಷಿಯಿಂದ ಮಾಡಿದ 30 ಲೀಟರ್ ವೈನ್ ಮತ್ತು ಮಾದಕ ವಸ್ತುಗಳಿಂದ ತಯಾರಿಸಿದ 5 ಲೀಟರ್ ಮದ್ಯ (ಸುಂದಾ ಕಂಜಿ) ಹಾಗೂ ಅಪಾರ ಪ್ರಮಾಣದ ನಶೆ ಪದಾರ್ಥಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೂವರನ್ನು ಬಂಧಿಸಿರುವ ಪೊಲೀಸರು ಬಂಧಿತರನ್ನ ವಿಚಾರಣೆಗೆ ಒಳಪಡಿಸಿದ್ದಾರೆ.

    ಮಾರ್ಚ್ 24ರಿಂದ ತಮಿಳುನಾಡಿನಲ್ಲಿ ಮದ್ಯ ಮಾರಾಟವನ್ನು ಬಂದ್ ಮಾಡಲಾಗಿದೆ. ಹೀಗಾಗಿ ಅಪ್ಪ-ಮಗ ಮನೆಯಲ್ಲಿ ಮದ್ಯ ತಯಾರಿಸತೊಡಗಿದ್ದರು. ಇಂದು ಕರ್ನಾಟಕದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು, ತಮಿಳುನಾಡಿನ ಗಡಿ ಭಾಗದ ಜನರು ರಾಜ್ಯಕ್ಕೆ ಬಂದು ಮದ್ಯ ಖರೀದಿ ಮಾಡುತ್ತಿದ್ದಾರೆ.

  • ಭಾನುವಾರದ ಬಾಡೂಟಕ್ಕೆ ಮಾಡಿ ತಿನ್ನಿ ರುಚಿ ರುಚಿಯಾದ ಚೈನೀಸ್ ಫಿಶ್ ಕರ್ರಿ

    ಭಾನುವಾರದ ಬಾಡೂಟಕ್ಕೆ ಮಾಡಿ ತಿನ್ನಿ ರುಚಿ ರುಚಿಯಾದ ಚೈನೀಸ್ ಫಿಶ್ ಕರ್ರಿ

    ಭಾನುವಾರ ಬಂತೆಂದರೆ ಸಾಕು ನಾಲಿಗೆಗೆ ರುಚಿ ರಚಿಯಾದ ಅಡುಗೆಗಳು ಬೇಕೇ ಬೇಕು. ಹಾಗಂತ ರುಚಿ ರುಚಿಯಾದ ಅಡುಗೆಯನ್ನು ಸವಿಯಲು ಹೋಟೆಲ್‍ಗೆ ಹೋಗೋದೇನು ಬೇಕಾಗಿಲ್ಲ. ಬದಲಿಗೆ ನಿಮ್ಮ ಮನೆಯಲ್ಲೇ ಅತ್ಯಂತ ಸರಳವಾದ ಮತ್ತು ರುಚಿ ರುಚಿಯಾದ ಅಡುಗೆಯನ್ನು ಮಾಡಬಹುದು. ಅದಕ್ಕೆ ಈ ಚೈನೀಸ್ ಫಿಶ್ ಕರ್ರಿಯೇ ಸಾಕ್ಷಿ.

    ಚೈನೀಸ್ ಫಿಶ್ ಕರ್ರಿ ಮಾಡಲು ಬೇಕಾಗು ಸಾಮಾಗ್ರಿಗಳು
    * 4 ಮೀನು (ಮಧ್ಯಮಗಾತ್ರದ ಮೀನು)
    * ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 2 ಟೇಬಲ್ ಸ್ಪೂನ್
    * ಈರುಳ್ಳಿ 4
    * ಕಾಳು ಮೆಣಸಿನ ಪುಡಿ 2 ಟೇಬಲ್ ಸ್ಪೂನ್
    * ಧನಿಯಾ ಪುಡಿ 2 ಟೇಬಲ್ ಸ್ಪೂನ್
    * ಅರಿಶಿನ ಪುಡಿ ಒಂದು ಚಿಟಿಕೆ
    * ಕೆಂಪು ಮೆಣಸಿನ ಪುಡಿ 2 ಟೇಬಲ್ ಸ್ಪೂನ್
    * ಹುಣಸೆ ಹುಳಿ ರಸ ಅರ್ಧ ಕಪ್
    * ಟೊಮೆಟೊ 2
    * ಉಪ್ಪು
    * ಕೊತ್ತಂಬರಿ ಸೊಪ್ಪು
    * ಕೊಬ್ಬರಿ ಎಣ್ಣೆ 2 ಚಮಚ
    * ಕುಕ್ಕಿಂಗ್ ವೈನ್ ಅರ್ಧ ಟೆಬಲ್ ಸ್ಪೂನ್

    ಚೈನೀಸ್ ಫಿಶ್ ಕರ್ರಿ ಮಾಡುವ ವಿಧಾನ
    * ಮೊದಲು ಒಂದು ಜಾರ್‍ಗೆ ಹೆಚ್ಚಿದ 2 ಈರುಳ್ಳಿ, 1 ಟೇಬಲ್ ಸ್ಪೂನ್ ಧನಿಯಾಪುಡಿ, 1 ಟೇಬಲ್ ಸ್ಪೂನ್ ಕಾಳು ಮೆಣಸಿನ ಪುಡಿ, 1 ಟೇಬಲ್ ಸ್ಪೂನ್ ಕೆಂಪು ಮೆಣಸಿನ ಪುಡಿ ಮತ್ತು ಹೆಚ್ಚಿದ 2 ಟೊಮೆಟೊವನ್ನು ಮಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
    * ಒಂದು ದೊಡ್ಡ ಪ್ಯಾನ್‍ಗೆ ಕೊಬ್ಬರಿ ಎಣ್ಣೆ ಹಾಕಿ ಬಿಸಿ ಆದ ನಂತರ ಅದಕ್ಕೆ ಉಳಿದ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.
    * ನಂತರ ಮಿಕ್ಸಿಯಲ್ಲಿ ಕಡೆದ ಮಿಶ್ರಣವನ್ನು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ.

    * ಅದಕ್ಕೆ ಹುಣಸೆ ರಸವನ್ನು ಹಾಕಿ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ತಿರುವಿ.
    * ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.
    * ನಂತರ ಕುದಿಯುತ್ತಿರುವಾಗ ತೊಳೆದ ಮೀನನ್ನು ಹಾಕಿ ಮಿಕ್ಸ್ ಮಾಡಿ ಪ್ಯಾನ್ ಮುಚ್ಚಳವನ್ನು ಮುಚ್ಚಿ 10 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ.
    * ನಂತರ ಮೀನು ಬೆಂದ ಬಳಿಕ ಅದನ್ನು ಒಂದು ಬೌಲ್‍ಗೆ ಹಾಕಿ ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಅದಕ್ಕೆ ಮುಚ್ಚಳವನ್ನು ಮುಚ್ಚಿ ಅರ್ಧ ಗಂಟೆ ಬಿಡಿ.
    * ನಂತರ ಆ ಮುಚ್ಚಳವನ್ನು ತೆಗೆದರೆ ಚೈನೀಸ್ ಫಿಶ್ ಕರ್ರಿ ಸವಿಯಲು ಸಿದ್ಧ.

  • ವೈನ್ ಬೇಕು ವೈನ್ – ವಿಮಾನದಲ್ಲಿ ಮಹಿಳೆಯ ರಾದ್ಧಾಂತ: ವಿಡಿಯೋ

    ವೈನ್ ಬೇಕು ವೈನ್ – ವಿಮಾನದಲ್ಲಿ ಮಹಿಳೆಯ ರಾದ್ಧಾಂತ: ವಿಡಿಯೋ

    ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ನಡೆಸಿದ್ದ ಐರಿಷ್ ಮಹಿಳಾ ಪ್ರಯಾಣಿಕರೊಬ್ಬರು ವಿಮಾನದ ಸಿಬ್ಬಂದಿ ವೈನ್ ನೀಡಿಲ್ಲ ಎಂದು ಆರೋಪಿಸಿ ರಾದ್ಧಾಂತ ಸೃಷ್ಟಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮುಂಬೈನಿಂದ ಲಂಡನ್‍ಗೆ ಶನಿವಾರ ಬಿಸಿನೆಸ್ ಕ್ಲಾಸಿನಲ್ಲಿ ಪ್ರಯಾಣ ಬೆಳೆಸಿದ್ದ ಐರಿಷ್ ಮಹಿಳೆ ವಿಮಾನ ಸಿಬ್ಬಂದಿಗೆ ನಿಂದನೆ ಮಾಡಿದ್ದಾಳೆ. ವಿಮಾನದ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ವೈನ್ ನೀಡಲು ನಿರಾಕರಿಸಿದ್ದ ವೇಳೆ ಈ ಘಟನೆ ನಡೆದಿದೆ.

    ಮೊದಲು ಮಹಿಳೆಗೆ ವೈನ್ ಪೂರೈಕೆ ಮಾಡಲಾಗಿದ್ದು, ಆ ಬಳಿಕವೂ ಹೆಚ್ಚಿನ ಪ್ರಮಾಣದಲ್ಲಿ ವೈನ್ ನೀಡುವಂತೆ ಮಹಿಳೆ ಪಟ್ಟು ಹಿಡಿದಿದ್ದಾಳೆ. ಈ ವೇಳೆ ವಿಮಾನ ಸಿಬ್ಬಂದಿ ನಿರಾಕರಿಸಿದ ಕಾರಣ ಆಕೆ ಬಾಯಿಗೆ ಬಂದಂತೆ ಬೈದು ರಾದ್ಧಾಂತ ಮಾಡಿದ್ದಾಳೆ.

    ಮಹಿಳೆಯ ಏರ್ ಇಂಡಿಯಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ಎಷ್ಟೇ ಕುಗಾಡಿದರೂ ವಿಮಾನ ಸಿಬ್ಬಂದಿ ತಾಳ್ಮೆಯಿಂದಲೇ ಇದ್ದರು. ಇದನ್ನು ಕಂಡು ಮತ್ತಷ್ಟು ರೊಚ್ಚಿಗೆದ್ದ ಆಕೆ ಸಿಬ್ಬಂದಿ ಮೇಲೆ ಉಗುಳಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮಹಿಳೆಯ ಅಸಭ್ಯ ವರ್ತನೆಯನ್ನ ವಿಮಾನ ಸಿಬ್ಬಂದಿಯೇ ಮೊಬೈಲ್‍ನಲ್ಲಿ ಸೆರೆ ಹಿಡಿದ್ದಾರೆ. ಅಸಭ್ಯ ವರ್ತನೆ ಕಾರಣ ಲಂಡನ್ ವಿಮಾನ ನಿಲ್ದಾಣದಲ್ಲಿ ಆಕೆಯನ್ನು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ತಾನು ಅಂತರಾಷ್ಟ್ರೀಯ ಮಟ್ಟದ ವಕೀಲೆಯಾಗಿದ್ದು, ಪ್ರಯಾಣಿಕರಿಗೆ ಸರಿಯಾದ ಸೇವೆ ನೀಡಲು ನಿಮಗೆ ಆಗುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾಳೆ. ಘಟನೆ ವೇಳೆ ಸಹಪ್ರಯಾಣಿಕರು ಯಾರು ಮಾತನಾಡದೇ ಸುಮ್ಮನೆ ಕುಳಿತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವೈನ್ ತಯಾರಿಸಲು ಆನ್‍ಲೈನಲ್ಲಿ ಖರೀದಿಸಿದ್ದ ಹಾವು ಕಚ್ಚಿ ಮಹಿಳೆ ಸಾವು!

    ವೈನ್ ತಯಾರಿಸಲು ಆನ್‍ಲೈನಲ್ಲಿ ಖರೀದಿಸಿದ್ದ ಹಾವು ಕಚ್ಚಿ ಮಹಿಳೆ ಸಾವು!

    ಬೀಜಿಂಗ್: ವೈನ್ ತಯಾರಿಸಲು ಆನ್‍ಲೈನ್‍ನಲ್ಲಿ ಖರೀದಿಸಿದ್ದ ಹಾವು ಕಚ್ಚಿ ಮಹಿಳೆ ಸಾವನ್ನಪ್ಪಿದ್ದ ಘಟನೆ ಚೀನಾದಲ್ಲಿ ನಡೆದಿದೆ.

    21 ವರ್ಷದ ಮಹಿಳೆ ಆ ಹಾವನ್ನು ಇ-ಕಾಮರ್ಸ್ ಕಂಪನಿಯ ಜುಹಾನ್ ಜುಹಾನ್‍ನಿಂದ ಖರೀದಿಸಿದ್ದಳು. ಹಾವಿನ ವಿಷದಿಂದ ಮಹಿಳೆ ವೈನ್ ಮಾಡಲು ನಿರ್ಧರಿಸಿದ್ದಳು. ಹಾಗಾಗಿ ಆನ್‍ಲೈನ್‍ನಲ್ಲಿ ಹಾವನ್ನು ಆರ್ಡರ್ ಮಾಡಿದ್ದಳು. ಬಳಿಕ ಕೊರಿಯರ್ ಮೂಲಕ ಮಹಿಳೆಯ ಮನೆ ಬಾಗಿಲಿಗೆ ಹಾವು ಬಂದಿದೆ. ಈ ಬಾಕ್ಸ್ ನಲ್ಲಿ ವಿಷಪೂರಿತ ಹಾವು ಇರುವ ಬಗ್ಗೆ ಕೊರಿಯರ್ ನವರಿಗೂ ಗೊತ್ತಿರಲಿಲ್ಲ.

    ಹಾವಿನ ವಿಷದಿಂದ ವೈನ್ ಮಾಡುವ ಆಸೆ ಹೊಂದಿದ್ದ ಮಹಿಳೆಗೆ ವಿಷಕಾರಿ ಹಾವು ಕಚ್ಚಿದೆ. ಬಳಿಕ ಆ ಹಾವು ಮಹಿಳೆಯ ಮನೆಯ ಹತ್ತಿರ ಪತ್ತೆಯಾಗಿದೆ. ಕಚ್ಚಿದ ಬಳಿಕ ಹಾವು ಅದು ಕಾಡಿನತ್ತ ಹೋಗಿದೆ ಎಂದು ವರದಿಯಾಗಿದೆ.

    ನನ್ನ ಮಗಳು ಪಾರಂಪರಿಕವಾಗಿ ಔಷಧಿಯ ವೈನ್ ತಯಾರಿಸಲು ನಿರ್ಧರಿಸಿದ್ದಳು. ಈ ಔಷಧಿಯನ್ನು ಸ್ನೇಕ್ ವೈನ್ ಎಂದು ಕರೆಯುತ್ತಾರೆ. ಹಲವು ಕಾಯಿಲೆಗಳನ್ನು ಗುಣಪಡಿಸುವ ಸಾಮಥ್ರ್ಯ ಇರುವ ಕಾರಣ ಸ್ನೇಕ್ ವೈನ್ ತಯಾರಿಸಲು ಮುಂದಾಗಿದ್ದಳು ಎಂದು ಮೃತ ಮಹಿಳೆಯ ತಾಯಿ ಹೇಳಿದ್ದಾರೆ.