Tag: ವೈದ್ಯಕೀಯ ಉಪಕರಣ

  • ಭಾರತದಿಂದ ವೈದ್ಯಕೀಯ ಉಪಕರಣ ಬಯಸಿದ ರಷ್ಯಾ

    ಭಾರತದಿಂದ ವೈದ್ಯಕೀಯ ಉಪಕರಣ ಬಯಸಿದ ರಷ್ಯಾ

    ನವದೆಹಲಿ: ಉಕ್ರೇನ್‌ ಆಕ್ರಮಣದ ನಂತರ ರಷ್ಯಾದ ವಿರುದ್ಧ ಯೂರೋಪ್‌ ಒಕ್ಕೂಟ ವಿಧಿಸಿರುವ ನಿರ್ಬಂಧಗಳ ಪರಿಣಾಮವಾಗಿ, ರಷ್ಯಾ ಭಾರತದಿಂದ ಹೆಚ್ಚಿನ ವೈದ್ಯಕೀಯ ಉಪಕರಣಗಳನ್ನು ಬಯಸಿದೆ.

    ಭಾರತ ಮತ್ತು ರಷ್ಯಾದ ವೈದ್ಯಕೀಯ ಉಪಕರಣ ಕಂಪನಿಗಳು ಏಪ್ರಿಲ್ 22 ರಂದು ವರ್ಚುವಲ್ ಸಭೆಯಲ್ಲಿ ಸರಬರಾಜುಗಳನ್ನು ಹೆಚ್ಚಿಸುವ ವಿಧಾನಗಳ ಕುರಿತು ಚರ್ಚಿಸಲಿವೆ ಎಂದು ಭಾರತೀಯ ವೈದ್ಯಕೀಯ ಸಾಧನ ಉದ್ಯಮ ಸಂಘದ ಫೋರಂ ಸಂಯೋಜಕ ರಾಜೀವ್ ನಾಥ್ ಹೇಳಿದ್ದಾರೆ. ದ್ವಿಪಕ್ಷೀಯ ಸಂಬಂಧಗಳನ್ನು ಉತ್ತೇಜಿಸುವ ವ್ಯವಹಾರ ಕುರಿತು ರಷ್ಯಾ ದೃಢೀಕರಿಸಿದೆ. ಇದನ್ನೂ ಓದಿ: ಕಾಬೂಲ್‌ ಶಾಲೆಯಲ್ಲಿ ಸ್ಫೋಟ- 6 ಮಂದಿ ಸಾವು

    ರಷ್ಯಾ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸುತ್ತಿರುವ ಕಾರಣ ದ್ವಿಪಕ್ಷೀಯ ವ್ಯಾಪಾರವನ್ನು ನಿರ್ವಹಿಸಲು ಶೀತಲ ಸಮರದ ಸಮಯದಲ್ಲಿ ಬಳಸಿದಂತೆಯೇ ಸ್ಥಳೀಯ ಕರೆನ್ಸಿಗಳಲ್ಲಿ ಪಾವತಿ ವ್ಯವಸ್ಥೆಗೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ. ರಷ್ಯಾಕ್ಕೆ ರಫ್ತುಗಳನ್ನು ಹೆಚ್ಚಿಸಲು ಭಾರತವು ಆಶಿಸುತ್ತಿದೆ. ಉಕ್ರೇನ್‌ ಮೇಲಿನ ಯುದ್ಧದಿಂದಾಗಿ ರಷ್ಯಾವನ್ನು ಪ್ರತ್ಯೇಕಿಸಲು ಪ್ರಯತ್ನಿಸಿದ ನಂತರ ರಷ್ಯಾದ ತೈಲವನ್ನು ಖರೀದಿಸಲು ಮುಂದಾಗಿದ್ದಕ್ಕೆ ಭಾರತವನ್ನು ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ಟೀಕಿಸಿದ್ದವು.

    ಈ ವರ್ಷ ರಫ್ತುಗಳನ್ನು ಸುಮಾರು 2 ಶತಕೋಟಿ ರೂಪಾಯಿಗಳಿಗೆ ಹೆಚ್ಚಿಸುವ ಆಶಯವನ್ನು ಭಾರತ ವ್ಯಕ್ತಪಡಿಸಿದೆ. ಉಕ್ರೇನ್‌ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಸಾರಿದ ನಂತರ ಯುರೋಪ್ ಮತ್ತು ಚೀನಾದಿಂದ ಆಮದುಗಳನ್ನು ತೀವ್ರವಾಗಿ ಕಡಿತಗೊಂಡಿದೆ. ಇದನ್ನೂ ಓದಿ: ನಮ್ಮಿಂದ ತಪ್ಪಾಗಿದೆ: ಕ್ಷಮೆ ಕೇಳಿದ ಶ್ರೀಲಂಕಾ ಅಧ್ಯಕ್ಷ

  • ಅಮೆರಿಕದಲ್ಲಿರುವ ನರಸಿಂಹಮೂರ್ತಿಯವರಿಂದ ಮಡಿಕೇರಿ ಆಸ್ಪತ್ರೆಗೆ ಕೋಟಿ ಮೌಲ್ಯದ ವೈದ್ಯಕೀಯ ಉಪಕರಣ ಕೊಡುಗೆ

    ಅಮೆರಿಕದಲ್ಲಿರುವ ನರಸಿಂಹಮೂರ್ತಿಯವರಿಂದ ಮಡಿಕೇರಿ ಆಸ್ಪತ್ರೆಗೆ ಕೋಟಿ ಮೌಲ್ಯದ ವೈದ್ಯಕೀಯ ಉಪಕರಣ ಕೊಡುಗೆ

    ಮಡಿಕೇರಿ: ಅಮೆರಿಕದಲ್ಲಿ ನೆಲೆಸಿರುವ ಮೂಲತಃ ಮಂಡ್ಯ ಜಿಲ್ಲೆಯ ಹಳ್ಳಿಗೆರೆಯವರಾದ ನರಸಿಂಹಮೂರ್ತಿ ಹಾಗೂ ಪುತ್ರ ವಿವೇಕ್ ಮೂರ್ತಿ ಅವರು ಕೋಟಿ ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ನೀಡಿದ್ದಾರೆ.

    ಕೋವಿಡ್ ಬೇಗೆಯಲ್ಲಿ ಭಾರತ ಬೇಯುತ್ತಿರುವಾಗ ಹುಟ್ಟೂರಿಗೆ ನೆರವಾಗುವ ದೃಷ್ಟಿಯಿಂದ ನರಸಿಂಹ ಮೂರ್ತಿ ಅವರು, ಮಂಡ್ಯ ಜಿಲ್ಲೆಯ ಹಾಗೂ ಕೊಡಗು ಜಿಲ್ಲೆಗೆ ಸಹಕಾರ ನೀಡುವ ಮೂಲಕ ತಾಯ್ನಾಡಿನ ಸಂಕಷ್ಟಕ್ಕೆ ನೆರವಾಗಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ನರಸಿಂಹಮೂರ್ತಿ, ವಿವೇಕ್ ಮೂರ್ತಿ ಅವರ ಸ್ಕೋಪ್ ಸಂಸ್ಥೆಯ ಮೂಲಕ ನಗರದ ಕೋವಿಡ್ ಆಸ್ಪತ್ರೆಗೆ 2.40 ಕೋಟಿ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಬಡ ಜನರ ಸೇವೆಗೆ ಮುಂದಾಗಿರುವ ನರಸಿಂಹಮೂರ್ತಿ, ವಿವೇಕ್ ಮೂರ್ತಿ ಅವರ ಸ್ಕೋಪ್ ಸಂಸ್ಥೆಯ ಕಡೆಯಿಂದ ಜಿಲ್ಲೆಗೆ ಉಪಕರಣಗಳನ್ನು ನೀಡಿದ್ದು, ಇನ್ನಷ್ಟು ಸಹಕಾರ ನೀಡುವುದಾಗಿ ನರಸಿಂಹಮೂರ್ತಿ ಹೇಳಿದ್ದಾರೆ.

    ಅಮೆರಿಕದ ಆರೋಗ್ಯ ಸಚಿವಾಲಯದಲ್ಲಿ ಪ್ರಮುಖ ಹುದ್ದೆ ಹೊಂದಿರುವ ಭಾರತೀಯ ಸಂಜಾತ ವಿವೇಕ್ ಮೂರ್ತಿ, ನರಸಿಂಹ ಮೂರ್ತಿ ಅವರ ಪುತ್ರರಾಗಿದ್ದಾರೆ. ಅಮೆರಿಕದಲ್ಲಿ ಬರಾಕ್ ಒಬಾಮಾ ಸರ್ಕಾರ ಇದ್ದಾಗಲೇ ವಿವೇಕ್ ಮೂರ್ತಿ ಅವರನ್ನು ಈ ಹುದ್ದೆಗೆ ನೇಮಿಸಿದ್ದು, ವಿವೇಕ್ ವೃತ್ತಿ ಕೌಶಲ್ಯಕ್ಕೆ ಮೆಚ್ಚುಗೆ ಸೂಚಿಸಿದ್ದ ಬೈಡೆನ್ ಕೂಡ ವಿವೇಕ್ ಅವರನ್ನು ಇದೇ ಹುದ್ದೆಯಲ್ಲಿ ಮುಂದುವರೆಸಿದ್ದಾರೆ. ತಮ್ಮ ಸ್ಕೋಪ್ ಸಂಸ್ಥೆ ಮೂಲಕ ಇದೀಗ ಭಾರತದ ಕೆಲವು ಸಣ್ಣ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಮುಂದಾಗಿರುವ ವಿವೇಕ್ ಮೂರ್ತಿ, ಮಡಿಕೇರಿ ಕೋವಿಡ್ ಆಸ್ಪತ್ರೆ ಸೇರಿದಂತೆ ರಾಜ್ಯದ 12 ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಈ ಆಸ್ಪತ್ರೆಗಳಿಗೆ 70 ಆಕ್ಸಿಜನ್ ಉಪಕರಣ, 4 ವೆಂಟಿಲೇಟರ್, ಅತ್ಯುತ್ತಮ ಗುಣಮಟ್ಟದ ಮಾಸ್ಕ್, ವೈದ್ಯಕೀಯ ಉಪಕರಣಗಳನ್ನು ನೀಡಲಿದ್ದಾರೆ. 12 ಆಸ್ಪತ್ರೆಗಳಿಗೆ ಸ್ಕೋಪ್ ಫೌಂಡೇಶನ್ ವಿನಿಯೋಗಿಸಲಿರುವ ಮೊತ್ತವೇ 2.40 ಕೋಟಿ ರೂ. ಗಳಾಗಿದ್ದು, ಇಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಮಂಡ್ಯ ಜಿಲ್ಲೆ ಹಸಿರು ಕ್ರಾಂತಿಯಾಗಲು ಕೊಡಗಿನ ಕಾವೇರಿ ಮಾತೆ ಸೇವೆ ಅಪಾರ ಎಂದು ತಿಳಿಸಿದ ಅವರು, ಕೊಡಗು ಹಾಗೂ ತಮಗೂ ಅಪಾರವಾದ ನಂಟಿದೆ ಜಿಲ್ಲೆಗೆ ಸೇವೆ ಮಾಡಲು ಖುಷಿಯಾಗುತ್ತದೆ ಎಂದು ವೀಡಿಯೋ ಹೇಳಿಕೆ ಮೂಲಕ ತಿಳಿಸಿದ್ದಾರೆ.

  • ಸತ್ಯ-ಅಸತ್ಯತೆಯನ್ನು ಜನತೆಯ ಮುಂದಿಡಿ- ‘ಕೈ’ ಆರೋಪಕ್ಕೆ ಅಪ್ಪಚ್ಚು ರಂಜನ್ ಸಲಹೆ

    ಸತ್ಯ-ಅಸತ್ಯತೆಯನ್ನು ಜನತೆಯ ಮುಂದಿಡಿ- ‘ಕೈ’ ಆರೋಪಕ್ಕೆ ಅಪ್ಪಚ್ಚು ರಂಜನ್ ಸಲಹೆ

    ಮಡಿಕೇರಿ: ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ. ಎಂದು ವಿರೋಧ ಪಕ್ಷ ಆರೋಪಿಸುತ್ತಿದ್ದು ಈ ಬಗ್ಗೆ ಸರ್ಕಾರ ತನಿಖೆ ನಡೆಸಿ ಸತ್ಯ-ಅಸತ್ಯತೆಯನ್ನು ಜನತೆಯ ಮುಂದೆ ಇಡಬೇಕು ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸಲಹೆ ನೀಡಿದ್ದಾರೆ.

    ಮಡಿಕೇರಿಯಲ್ಲಿ ಮಾತಾನಾಡಿದ ಅವರು, ವಿರೋಧ ಪಕ್ಷದ ಆರೋಪಗಳಿಗೆ ಅಗತ್ಯವಾದ ಮಾಹಿತಿ ಹಾಗೂ ದಾಖಲೆಗಳನ್ನು ಕೊಡಬೇಕಾಗಿರುವುದು ಆಡಳಿತ ಪಕ್ಷದವಾದ ನಮ್ಮ ಜವಾಬ್ದಾರಿ. ಬಿಜೆಪಿ ಸರ್ಕಾರದ ಮೇಲಿನ ಆರೋಪಕ್ಕೆ ಈಗಾಗಲೇ ಉಪ ಮುಖ್ಯಮಂತ್ರಿ ಅಶೋಕ್ ಸೇರಿದಂತೆ ಹಲವರು ಉತ್ತರವನ್ನು ಕೊಟ್ಟಿದ್ದಾರೆ ಎಂದರು.

    ಕೊರೊನಾ ಸಮಯದಲ್ಲಿ 665 ಕೋಟಿ ಖರ್ಚು ಮಾಡಿದ್ದೇವೆ ಎಂದು ಆಡಳಿತ ಪಕ್ಷದ ಸಚಿವರು ಹೇಳುತ್ತಾರೆ. ಮತ್ತೊಂದೆಡೆ ವಿರೋಧ ಪಕ್ಷದವರು 4 ಸಾವಿರ ಕೋಟಿ ಅಂತಾರೆ. ಹೀಗೆ ಇರುವಾಗ 2 ಸಾವಿರ ಕೋಟಿ ಹಣ ದುರುಪಯೋಗವಾಗಲು ಹೇಗೆ ಸಾಧ್ಯ. ಸುಮ್ಮನೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವ ಬದಲು ದಾಖಲೆಗಳ ಸಮೇತ ಮಾತನಾಡಬೇಕು ಎಂದು ಅಪ್ಪಚ್ಚು ರಂಜನ್ ಕಿಡಿಕಾರಿದ್ದಾರೆ.