Tag: ವೆಚ್ಚ

  • ಮದ್ವೆಗೆ ಕುದುರೆ ಬದಲು ಸಮುದ್ರ ವಿಮಾನದಲ್ಲಿ ರಣ್‍ವೀರ್ ಎಂಟ್ರಿ- ರೆಸಾರ್ಟ್ ಒಂದು ದಿನದ ಬಾಡಿಗೆ ಎಷ್ಟು?

    ಮದ್ವೆಗೆ ಕುದುರೆ ಬದಲು ಸಮುದ್ರ ವಿಮಾನದಲ್ಲಿ ರಣ್‍ವೀರ್ ಎಂಟ್ರಿ- ರೆಸಾರ್ಟ್ ಒಂದು ದಿನದ ಬಾಡಿಗೆ ಎಷ್ಟು?

    ಇಟಲಿ: ಬಾಲಿವುಡ್‍ನ ಬಾಜಿರಾವ್ ಹಾಗೂ ಮಸ್ತಾನಿಯಾದ ರಣ್‍ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಇಂದು ಇಟಲಿಯಲ್ಲಿರುವ ಲೇಕ್ ಕೊಮೊ ಸರೋವರದ ತೀರದಲ್ಲಿ ಮದುವೆಯಾಗಲಿದ್ದಾರೆ.

    ವಿಲ್ಲಾ ಡೆಲ್ ಬಾಲ್‍ಬಿಯಾನೆಲ್ಲೋದಲ್ಲಿ ನಡೆಯಲಿರುವ ಈ ಮದುವೆಯ ಸ್ಥಳಕ್ಕೆ 700 ವರ್ಷದ ಇತಿಹಾಸ ಇದೆ. ಸರೋವರದ ತೀರದಲ್ಲಿ ದೀಪ್‍ವೀರ್ ಮದುವೆ ಮಂಟಪವಿದ್ದು, ರಣ್‍ವೀರ್ ಸಿಂಗ್ ಕುದುರೆ ಏರಿ ಬರುವ ಬದಲು ಸಮುದ್ರ ವಿಮಾನದಲ್ಲಿ ಎಂಟ್ರಿ ನೀಡಲಿದ್ದಾರೆ.

    ರಣ್‍ವೀರ್ ಸಿಂಗ್ ಹಾಗೂ ಅವರ ಕುಟುಂಬದವರು ಮಾತ್ರ ಸಮುದ್ರದ ವಿಮಾನದಲ್ಲಿ ಮದುವೆ ಮಂಟಪಕ್ಕೆ ಎಂಟ್ರಿ ನೀಡಲಿದ್ದಾರೆ. ಆದರೆ ಸಂಬಂಧಿಕರಿಗಾಗಿ ರಣ್‍ವೀರ್ ದುಬಾರಿ ಬೆಲೆಯ ಯಾಚ್‍ಗಳನ್ನು ಬುಕ್ ಮಾಡಿದ್ದಾರೆ ಎಂದು ವರದಿಯಾಗಿದೆ.

    ರಣ್‍ದೀಪ್ ಹಾಗೂ ಅವರ ಸಂಬಂಧಿಕರು ತಂಗಿರುವ ರೆಸಾರ್ಟ್‍ನಲ್ಲಿ ಒಟ್ಟು 75 ರೂಮ್, 4 ರೆಸ್ಟೋರೆಂಟ್ ಹಾಗೂ ಬಾರ್, 4 ಕಾನ್ಫರೇನ್ಸ್ ರೂಂ, ಸ್ಪಾ, ಇನ್‍ಡೋರ್ ಸ್ವಿಮ್ಮಿಂಗ್ ಪೂಲ್ ಇದೆ. ಈ ಜಾಗ ಒಟ್ಟು 26,000 ಚದರ ಅಡಿ ಇದ್ದು, ಮದುವೆ ಮಂಟಪಕ್ಕೆ 40-45 ನಿಮಿಷ ಬೋಟ್‍ನಲ್ಲಿ ಪ್ರಯಾಣಿಸಬೇಕು.

    ಈ ರೆಸಾರ್ಟ್ ನಲ್ಲಿರುವ ರೂಮಿನ ಒಂದು ದಿನದ ಬಾಡಿಗೆ 400 ಯೂರೋ ಎಂದರೆ 33 ಸಾವಿರ ರೂ. ಸದ್ಯ ರಣ್‍ವೀರ್ ಹಾಗೂ ದೀಪಿಕಾ 75 ರೂಮ್‍ಗಳನ್ನು ಬುಕ್ ಮಾಡಿದ್ದಾರೆ. ಹಾಗಾಗಿ ಅವರು ಒಂದು ದಿನಕ್ಕೆ 24,75,000 ರೂ. ನೀಡುತ್ತಿದ್ದು, ಒಂದು ವಾರಕ್ಕೆ 1,73,25,000 ರೂ. ನೀಡಿದ್ದಾರೆ ಎಂದು ವರಿದಯಾಗಿದೆ. ಸದ್ಯ ರಣ್‍ದೀಪ್ ನ. 17ರವರೆಗೂ ರೆಸಾರ್ಟ್ ಬುಕ್ ಮಾಡಿದ್ದಾರೆ.

    ಡೇವಿಡ್ ಬೋವೆ, ಜಾರ್ಜ್ ಕ್ಲೂನಿ ಮತ್ತು ಕಿಮ್ ಕರ್ದಾಶಿಯನ್ ಮುಂತಾದವರು ಕೂಡಾ ಲೇಕ್ ಕೊಮೊ ತಾಣದಲ್ಲಿ ಮದುವೆಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಹಚ್ಚಹಸಿರಾಗಿ ಸುಂದರವಾಗಿದ್ದ ಪಾರ್ಕ್ ಅಭಿವೃದ್ಧಿಗೆ ಬರೋಬ್ಬರಿ 1.30 ಕೋಟಿ ರೂ. ಖರ್ಚು!

    ಹಚ್ಚಹಸಿರಾಗಿ ಸುಂದರವಾಗಿದ್ದ ಪಾರ್ಕ್ ಅಭಿವೃದ್ಧಿಗೆ ಬರೋಬ್ಬರಿ 1.30 ಕೋಟಿ ರೂ. ಖರ್ಚು!

    ಬೆಂಗಳೂರು: ನಗರದ ಶಾಸಕ ಹಾಗೂ ಬಿಬಿಎಂಪಿ ಸದಸ್ಯರು ಸೇರಿ ಹಚ್ಚಹಸಿರಾಗಿ ಎಲ್ಲ ಸೌಲಭ್ಯವಿದ್ದ ಪಾರ್ಕ್ ಅಭಿವೃದ್ಧಿ ಮಾಡುತ್ತೇವೆ ಎಂದು ಸುಮಾರು 1.30 ಕೋಟಿ ಖರ್ಚು ಮಾಡಿದ್ದಾರೆ.

    ಶಂಕರಮಠ ಬಳಿಯ ಸ್ವಾಮಿ ವಿವೇಕಾನಂದ ಪಾರ್ಕ್ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಖರ್ಚು ಮಾಡಿದ್ದಾರೆ. ಈಗಾಗಲೇ ಈ ಪಾರ್ಕಿನಲ್ಲಿ ವಾಕಿಂಗ್ ಪಾಥ್ ಗಳಿಗೆ ಕಾಬುಲ್ ಕಲ್ಲು, ಸಾವಿರಾರು ವರ್ಷ ಆದ್ರೂ ಅಲುಗಾಡದ ಕಲ್ಲುಗಳು ಮತ್ತು ಹಸಿರು ಗಿಡ ಮರಗಳು ಇದ್ದವು. ಆದರೆ ಈ ಪಾರ್ಕನ್ನು ಶಾಸಕ ಗೋಪಾಲಯ್ಯ ಹಾಗೂ ಬಿಬಿಎಂಪಿ ಸದಸ್ಯರು ಸೇರಿ ಅಭಿವೃದ್ಧಿ ಮಾಡುತ್ತೇವೆ ಅಂತ ಚೆನ್ನಾಗಿದ್ದ ಗಿಡಗಳನ್ನ, ಕಲ್ಲುಗಳನ್ನ ಕಿತ್ತು ಹೊಸದಾಗಿ ಕಾಂಕ್ರೀಟ್ ಹಾಕಿ ಟೈಲ್ಸ್ ಪಾಥ್ ಮಾಡುತ್ತಿದ್ದಾರೆ.

    ಟೈಲ್ಸ್ ಪಾಥ್ ನಲ್ಲಿ ಮಳೆ ನೀರು ಬಂದರೆ ನೀರು ಭೂಮಿಗೆ ಇಂಗೋದೆ ಇಲ್ಲ. ಹಳೆಯ ವಾಕಿಂಗ್ ಪಾಥ್ ಗೆ ಏನಾಗಿತ್ತು. ಅಭಿವೃದ್ಧಿ ಮಾಡಿ ಅಂದರೆ ಅನಾವಶ್ಯಕವಾಗಿ ದುಡ್ಡನ್ನ ಯಾಕೆ ಹಾಳು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ನರೇಂದ್ರ ಬಾಬು ಅವರು ಆಕ್ರೋಶಗೊಂಡು ಪ್ರಶ್ನಿಸಿದ್ದಾರೆ.

    ಈ ಪಾರ್ಕ್ ನಲ್ಲಿ ಈಗಾಗಲೇ ಒಂದು ಓಪನ್ ಜಿಮ್ ಇದೆ. ಇದೀಗ ಮತ್ತೊಂದು ಜಿಮ್ ಮಾಡುತ್ತಿದ್ದಾರೆ. ಇದಕ್ಕಾಗಿ 30 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದ್ದ ಗಿಡಗಳನ್ನೆಲ್ಲ ಕಡಿದು ಹಾಕಿ ಹೊಸ ಗಿಡಗಳನ್ನ ನೆಡುವುದಕ್ಕೆ 30 ಲಕ್ಷ ರೂಪಾಯಿಗಳನ್ನ ಬಳಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅಭಿವೃದ್ಧಿ ಹೆಸರಲ್ಲಿ ಚೆನ್ನಾಗಿ ಬೆಳೆದಿದ್ದ ಮರಗಳಿಗೆ ಕೊಡಲಿ ಹಾಕಿದ್ದಾರೆ. ಅಭಿವೃದ್ಧಿ ಕಾಮಗಾರಿ ಬಗ್ಗೆ ಟೆಂಡರ್ ಪಡೆದಿರುವವರು ಯಾರು?, ಯಾವ ನಿಧಿಯಿಂದ ಹಣ ಬಂದಿದೆ? ಎಷ್ಟು ಹಣದಲ್ಲಿ ಕಾಮಗಾರಿ ನಡೆಯುತ್ತಿದೆ? ಅಂತಾ ಸರ್ವಾಜನಿಕರಿಗೆ ತಿಳಿಯುವಂತೆ ನೋಟಿಸ್ ಹಾಕಬೇಕು. ಆದ್ರೆ ಇಲ್ಲಿ ಅದೂ ಕೂಡ ಹಾಕಿಲ್ಲ. ಈ ಪಾರ್ಕ್ ಅಭಿವೃದ್ಧಿಗೆ ಸುಮಾರು 1.30 ಕೋಟಿ ಖರ್ಚು ಮಾಡುತ್ತಿದ್ದು, ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾವು ಈ ಸಂಬಂಧ ದೂರು ದಾಖಲು ಮಾಡುತ್ತೇವೆ ಎಂದು ಮಾಜಿ ಉಪಮೇಯರ್ ಹರೀಶ್ ಎಚ್ಚರಿಸಿದ್ದಾರೆ.

    ಮಾಜಿ ಶಾಸಕ ನರೇಂದ್ರ ಬಾಬು

    ಈ ಬಗ್ಗೆ ಶಾಸಕ ಗೋಪಾಲಯ್ಯ ಪ್ರತಿಕ್ರಿಯಿಸಿ, ಯಾವುದೇ ದುಂದುವೆಚ್ಚ ಮಾಡುತ್ತಿಲ್ಲ. ಹಣ ದುರುಪಯೋಗ ಮಾಡಿದರೆ ಜನ ಮತ್ತೆ ನನ್ನ ಶಾಸಕ ಮಾಡುತ್ತಿರಲಿಲ್ಲ. ನನ್ನ ಕ್ಷೇತ್ರದ ಇತರೆ ಪಾರ್ಕ್ ನ ಅಭಿವೃದ್ಧಿ ಮಾದರಿಯಲ್ಲೇ ಇಲ್ಲೂ ಅಭಿವೃದ್ಧಿ ಮಾಡುತ್ತಿದ್ದೇವೆ. ಜನರ ಜೊತೆ ಮಾತನಾಡಿಯೇ ಅಲ್ಲಿ ಹೊಸ ಮಾದರಿಯ ಪಾರ್ಕ್ ಮಾಡುತ್ತಿರುವುದು. ಪಾರ್ಕ್ ಉದ್ಘಾಟನೆಯಾದ ಮೇಲೆ ನೋಡಿ ಬೆಂಗಳೂರಿನ ಬೆಸ್ಟ್ ಪಾರ್ಕ್ ಆಗುತ್ತದೆ ಎಂದು ಹೇಳುವ ಮೂಲಕ ಸಮರ್ಥಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರಾಷ್ಟ್ರಪತಿ ಭವನದ ಉದ್ಯಾನವನ ನಿರ್ವಹಣೆಗೆ 12.70 ಕೋಟಿ ರೂ. ವೆಚ್ಚ!

    ರಾಷ್ಟ್ರಪತಿ ಭವನದ ಉದ್ಯಾನವನ ನಿರ್ವಹಣೆಗೆ 12.70 ಕೋಟಿ ರೂ. ವೆಚ್ಚ!

    ಬೆಳಗಾವಿ: ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಉದ್ಯಾನವನದ ನಿರ್ವಹಣೆಗಾಗಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 12.70 ಕೋಟಿ ರೂಪಾಯಿ ವೆಚ್ಚಮಾಡಲಾಗಿದೆ ಎಂದು ಆರ್ ಟಿಐ ಮೂಲಕ ಬಹಿರಂಗವಾಗಿದೆ.

    ನಗರದ ಆರ್ ಟಿಐ ಕಾರ್ಯಕರ್ತರಾದ ಭೀಮಪ್ಪ ಗಡಾದ ರವರು, ರಾಷ್ಟ್ರಪತಿ ಭವನ ಉದ್ಯಾನವನದ ಖರ್ಚು-ವೆಚ್ಚಗಳ ಬಗ್ಗೆ ಆರ್ ಟಿಐ ಅಡಿಯಲ್ಲಿ ಪ್ರಶ್ನಿಸಿದಾಗ ಈ ಸತ್ಯ ಹೊರಬಂದಿದೆ. ಉದ್ಯಾನವನದ ನಿರ್ವಹಣೆಗಾಗಿ ಇಷ್ಟೊಂದು ಹಣ ವೆಚ್ಚ ಮಾಡುವ ಅವಶ್ಯಕತೆ ಇದೆಯೇ ಎಂದು ಭೀಮಪ್ಪ ಗಡಾದ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಆರ್ ಟಿಐ ಅಡಿಯಲ್ಲಿ ರಾಷ್ಟ್ರಪತಿ ಭವನದಿಂದ ಪಡೆದಿರುವ ಮಾಹಿತಿಯನ್ನು ಗುರುವಾರ ಸುದ್ದಿಮಾಧ್ಯಮಗಳಿಗೆ ಭೀಮಪ್ಪ ಗಡಾದ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾಹಿತಿ ನೀಡಿದ ಅವರು, ಉದ್ಯಾನವನ ನಿರ್ವಹಣೆಗಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 12.70 ಕೋಟಿ ರೂ., ಹೂದೋಟ ಯಂತ್ರೋಪಕರಣಗಳ ಖರೀದಿಗಾಗಿ 1.46 ಕೋಟಿ ರೂ. ಹಾಗೂ ಉದ್ಯಾನವನ ಸಿಬ್ಬಂದಿಯವರ ವೇತನಕ್ಕಾಗಿ ಪ್ರತಿವರ್ಷ ಅಂದಾಜು 8.64 ಕೋಟಿ ರೂ. ವೆಚ್ಚ ಮಾಡಲಾಗಿದ್ದು ಸುಮಾರು 20 ಕೋಟಿ ಉದ್ಯಾನವನ ನಿರ್ವಹಣೆಗೆ ಖರ್ಚಾಗಿದೆ ಎಂದು ತಿಳಿಸಿದ್ದಾರೆ.

    ಇಷ್ಟೊಂದು ಹಣ ವೆಚ್ಚ ಮಾಡಿ ಉದ್ಯಾನವನ ನಿರ್ವಹಣೆ ಮಾಡುವುದರಿಂದ ಏನಾದರೂ ಪ್ರಯೋಜನವಾಗುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಕೂಡಲೇ ರಾಷ್ಟ್ರಪತಿಗಳ ಈ ಕುರಿತು ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

    ಸರ್ಕಾರದ ವಿವಿಧ ಯೋಜನೆಗಳ ಪಿಂಚಣಿಗೆ ಹಣ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ. ಪಿಂಚಣಿ ಬಂದಿಲ್ಲವೆಂದು ವಯೋವೃದ್ಧರು, ವಿಧವೆಯರು ಧರಣಿ ಮಾಡುವುದು ಎಲ್ಲಾ ಕಡೆ ನಡೆಯುತ್ತಲೇ ಇರುತ್ತದೆ. ಪರಿಸ್ಥಿತಿ ಹೀಗಿರುವಾಗ, ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುತ್ತಿರುವುದು ಎಷ್ಟು ಸರಿ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.