Tag: ವೀರಣ್ಣ ಚರಂತಿಮಠ

  • ವಕ್ಫ್‌ ಪ್ರತಿಭಟನೆ ನಡೆಯುವ ಮುನ್ನವೇ ಬಾಗಲಕೋಟೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

    ವಕ್ಫ್‌ ಪ್ರತಿಭಟನೆ ನಡೆಯುವ ಮುನ್ನವೇ ಬಾಗಲಕೋಟೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

    ಬಾಗಲಕೋಟೆ: ವಕ್ಫ್‌ ಬೋರ್ಡ್‌ (Waqf Board) ವಿರುದ್ಧದ ಪ್ರತಿಭಟನೆ ನಡೆಯುವ ಮುನ್ನವೇ ಬಾಗಲಕೋಟೆ ಬಿಜೆಪಿಯಲ್ಲಿ (Bagalkot BJP) ಭಿನ್ನಮತ ಸ್ಫೋಟಗೊಂಡಿದೆ.

    ಇಂದು ಕರ್ನಾಟಕ ಬಿಜೆಪಿ ರಾಜ್ಯವ್ಯಾಪಿ ವಕ್ಫ್ ವಿರುದ್ಧ  ನಮ್ಮ ಭೂಮಿ ನಮ್ಮ ಹಕ್ಕು ಪ್ರತಿಭಟನೆ ಆಯೋಜಿಸಿತ್ತು. ಈ ಪ್ರತಿಭಟನೆ ಆಗಮಿಸಿದ ಹಾಲಿ ಎಂಎಲ್‌ಸಿ ಪಿಹೆಚ್ ಪೂಜಾರ (MLC PH Pujar), ಮಾಜಿ ಎಂಎಲ್ ಎ ವೀರಣ್ಣ ಚರಂತಿಮಠ (Veeranna Charantimath) ಬೆಂಬಲಿಗರು ಬಿಜೆಪಿ ಕಾರ್ಯಾಲಯದಲ್ಲಿ ಪರಸ್ಪರ ವಾಗ್ವಾದ ನಡೆಸಿದ್ದಾರೆ.

    ಪಿಹೆಚ್ ಪೂಜಾರ ಬೆಂಬಲಿಗರು ಬಂದರೆ ನಾವು ಪ್ರತಿಭಟನೆಗೆ ಬರುವುದಿಲ್ಲ ವೀರಣ್ಣ ಚರಂತಿಮಠ ಬೆಂಬಲಿಗರು ಹೇಳಿದರೆ ನಾವು ಬಂದೇ ಬರುತ್ತೇವೆ ಎಂದು ಹಾಲಿ ಪರಿಷತ್‌ ಸದಸ್ಯ ಪಿ ಹೆಚ್ ಪೂಜಾರ ಬೆಂಬಲಿಗರು ಪಟ್ಟ ಹಿಡಿದಿದ್ದಾರೆ. ಇದನ್ನೂ ಓದಿ: ಮೀನುಗಾರಿಕೆ ದೋಣಿಗೆ ಡಿಕ್ಕಿ ಹೊಡೆದ ಭಾರತೀಯ ನೌಕಾಪಡೆ ಜಲಾಂತರ್ಗಾಮಿ – ಇಬ್ಬರು ಮೀನುಗಾರರು ನಾಪತ್ತೆ

     

    ಎರಡು ಬಣಗಳ ನಡುವಿನ ತಿಕ್ಕಾಟ ಜೋರಾಗುತ್ತಿದ್ದಂತೆ ಗೊಂದಲ ಸರಿಪಡಿಸಲು ಬಿಜೆಪಿ ಮುಖಂಡರ ಕಚೇರಿಯಲ್ಲಿ ಸಭೆ ನಡೆಸಿದರು. ಎರಡು ಬಣಗಳ ಜೊತೆ ಮಾತನಾಡಿದರೂ ಯಾವುದೇ ಫಲ ಸಿಗಲಿಲ್ಲ.

    ಅಂತಿಮವಾಗಿ ಬಾಗಲೋಟೆಯ ಡಿಸಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ವೀರಣ್ಣ ಚರಂತಿಮಠ ಬೆಂಬಲಿಗರು ಭಾಗವಹಿಸಿದರೆ ಪಿ ಹೆಚ್ ಪೂಜಾರ ಬೆಂಬಲಿಗರು ಬಿಜೆಪಿ ಕಚೇರಿಯಲ್ಲೇ ಉಳಿದರು.

     

  • ಯಾವುದೇ ರಿವರ್ಸ್ ಆಪರೇಷನ್ನೂ ಇಲ್ಲ, ಮಣ್ಣೂ ಇಲ್ಲ- ವೀರಣ್ಣ ಚರಂತಿಮಠ

    ಯಾವುದೇ ರಿವರ್ಸ್ ಆಪರೇಷನ್ನೂ ಇಲ್ಲ, ಮಣ್ಣೂ ಇಲ್ಲ- ವೀರಣ್ಣ ಚರಂತಿಮಠ

    ಬಾಗಲಕೋಟೆ: ಸಮ್ಮಿಶ್ರ ಸರ್ಕಾರದ ಕೆಲಸ ಎಲ್ಲ ಮುಗಿದಿದೆ, ಅದರ ಬಗ್ಗೆ ಯಾಕೆ ಕೇಳುತ್ತಿರಿ. ಕಾಂಗ್ರೆಸ್‍ನಿಂದ ಯಾವುದೇ ರಿವರ್ಸ್ ಆಪರೇಷನ್ನೂ ಇಲ್ಲ, ಯಾವ ಮಣ್ಣೂ ಇಲ್ಲ ಎಂದು ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಬಿದ್ದು ಹೋಗುತ್ತೆ ಅನ್ನೋ ನಿರೀಕ್ಷೆ ಇದೆ. ಬಿಜೆಪಿ ಪಕ್ಷದಿಂದ ಯಾವುದೇ ಅತೃಪ್ತರನ್ನು ನಾವು ಟಚ್ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಬಿಜೆಪಿ ಶಾಸಕ ಬಸವರಾಜ್ ದಡೇಸ್ಗೂರು ಹೆಸರು ರಿವರ್ಸ್ ಆಪರೇಶನ್‍ನಲ್ಲಿ ಕೇಳಿಬಂದಿತ್ತು. ಆದರೆ ಅವರು ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಜೊತೆ ಹೋಗಿದ್ದಾರೆ ಅಷ್ಟೇ. ಅವನು ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ. ಬೈರತಿ ಬಸವರಾಜ್, ಮುನಿರತ್ನ, ಎಸ್.ಟಿ ಸೋಮಶೇಖರ್ ಇವರೆಲ್ಲ ಸಿದ್ದರಾಮಯ್ಯ ಅವರ ಶಿಷ್ಯರು. ಈಗ ಅವರೇ ಬಡಿದಾಡ್ತಿದ್ದಾರೆ, ಅವರ ಅವರ ಮಧ್ಯೆಯೇ ಬೆಂಕಿ ಹತ್ತಿದೆ ಎಂದು ಹೇಳಿದರು.

    ಸಮ್ಮಿಶ್ರ ಸರ್ಕಾರ ನೆಗೆದು ಬೀಳುತ್ತದೆ. ಅವರು ನಗೆದುಬಿದ್ದರೆ 105 ಸಂಖ್ಯೆ ಇರುವ ನಾವು ಏಕೆ ಅಧಿಕಾರಕ್ಕೆ ಬರಬಾರದು. ಬಹುಮತಕ್ಕೆ ಇನ್ನೂ ಎಂಟು ಜನ ಶಾಸಕರ ಅವಶ್ಯಕತೆ ಇದೆ. ರಾಜ್ಯದಲ್ಲಿ ನಾವು ಅಭಿವೃದ್ಧಿ ಹರಿಕಾರರು ಎಂದು ಜನ ಬಹಳ ಅಂತರದಿಂದ ನಮ್ಮನ್ನು ಗೆಲ್ಲಿಸಿದ್ದಾರೆ. ಒಂದು ವರ್ಷವಾದರೂ ಯಾವುದೇ ಅಭಿವೃದ್ಧಿ ಕಾಮಗಾರಿ ಆಗಿಲ್ಲ. ಹೀಗಾಗಿ ಮೊದಲು ನಮಗೆ ನಮ್ಮ ಸರ್ಕಾರ ಬರಬೇಕಿದೆ ಎಂದು ತಿಳಿಸಿದರು.

    ಶಾಸಕರ ರಾಜೀನಾಮೆ ಹಿಂದೆ ರಾಜ್ಯಪಾಲರ ಕುಮ್ಮಕ್ಕಿದೆ ಎಂಬ ಡಿಸಿಎಂ ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಇವರ ಹಿಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಜ್ ರಂತೆ ಅಲ್ಲ, ಇವರು ವಜುಭಾಯ್ ವಾಲಾ, ಅತ್ಯಂತ ಡೀಸೆಂಟ್ ವ್ಯಕ್ತಿ. ಶಾಸಕರ ರಾಜೀನಾಮೆ ಹಿಂದೆ ರಾಜ್ಯಪಾಲರ ಕುಮ್ಮಕ್ಕಿಲ್ಲ. ರಾಜೀನಾಮೆ ಕೊಟ್ಟ ಶಾಸಕರು ಭದ್ರತೆ ಕೇಳಿದ್ದಾರೆ. ಭದ್ರತೆ ನೀಡಿದ್ದಾರೆ ಅಷ್ಟೇ ಎಂದು ಹೇಳಿದರು.

  • ನಾವು ಸರ್ಕಾರ ರಚನೆ ಮಾಡ್ತೀವಿ: ಬಿಜೆಪಿ ಶಾಸಕ ಚರಂತಿಮಠ ಹೊಸ ಬಾಂಬ್

    ನಾವು ಸರ್ಕಾರ ರಚನೆ ಮಾಡ್ತೀವಿ: ಬಿಜೆಪಿ ಶಾಸಕ ಚರಂತಿಮಠ ಹೊಸ ಬಾಂಬ್

    ಬಾಗಲಕೋಟೆ: ರಾಜ್ಯದಲ್ಲಿ ಸರ್ಕಾರ ಇದೆ ಅಂತಾ ನಮಗೆ ಅನಿಸುತ್ತಿಲ್ಲ. ಇಂದು ಅವರ ಅವರೇ ಹೊಡೆದಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನಾವು ಸರ್ಕಾರ ರಚನೆ ಮಾಡಲು ಹೊರಟ್ಟಿದ್ದೇವೆ ಎಂದು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಜನರಲ್ಲಿ ಆಪರೇಷನ್ ಕಮಲದ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಬಿಂಬಿಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಬೇಕು ಅನ್ನೋದು ನಾಡಿನ ಜನರ ಅಭಿಪ್ರಾಯವಾಗಿದೆ. ಇದೇ 18ರಂದು ಮಂಗಳವಾರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ವಿಶೇಷ ಶಾಸಕಾಂಗದ ಸಭೆಯನ್ನು ಕರೆದಿದ್ದಾರೆ. ಸಭೆಗೆ ಬಿಜೆಪಿಯ ಎಲ್ಲ ಶಾಸಕರು ಹಾಜರಾಗಲಿದ್ದೇವೆ. ಅಲ್ಲಿ ಏನು ಆಗುತ್ತೆ ಎಂಬವುದನ್ನು ಸಭೆಯ ಬಳಿಕ ತಿಳಿಸಲಾಗುವುದು ಎಂದು ಹೇಳಿದರು.

    ಒಂದು ವೇಳೆ ನಮ್ಮ ಶಾಸಕರು ರೆಸಾರ್ಟ್ ಗೆ ಹೋದ್ರೆ ನಾನು ಬಾಗಲಕೋಟೆ ಬಿಟ್ಟು ಎಲ್ಲಿಯೂ ಹೋಗಲ್ಲ. ನಾನು ಎಂದಿಗೂ ಬಿಜೆಪಿ ಬಿಡುವನಲ್ಲ. ಮ್ಮಲ್ಲಿರುವ 104 ಶಾಸಕರಲ್ಲಿ ಒಬ್ಬರನ್ನ ಟಚ್ ಮಾಡಲಿ ನೋಡೋಣ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಸವಾಲು ಹಾಕಿದ್ರು. ಮಂಗಳವಾರದ ಶಾಸಕಾಂಗದ ಸಭೆಯ ಬಳಿಕ ಸರ್ಕಾರ ರಚನೆಯ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv