Tag: ವೀಕೆಂಡ್‌ ವಿತ್‌ ರಮೇಶ್‌ 5

  • 7ನೇ ತರಗತಿಯಲ್ಲಿ ಇರುವಾಗಲೇ ರಾಜಕಾರಣಿ ಆಗಬೇಕು ಎಂದು ತೀರ್ಮಾನ ಮಾಡಿದ್ದೆ- ಡಿಕೆಶಿ ಓಪನ್‌ ಟಾಕ್

    7ನೇ ತರಗತಿಯಲ್ಲಿ ಇರುವಾಗಲೇ ರಾಜಕಾರಣಿ ಆಗಬೇಕು ಎಂದು ತೀರ್ಮಾನ ಮಾಡಿದ್ದೆ- ಡಿಕೆಶಿ ಓಪನ್‌ ಟಾಕ್

    ಕಿರುತೆರೆಯ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಶೋನಲ್ಲಿ (Weekend With Ramesh) ಸಾಧಕರ ಸಾಧನೆಯ ಬಗ್ಗೆ ಅದ್ಭುತವಾಗಿ ತೋರಿಸಲಾಗುತ್ತಿದೆ. ಇದೀಗ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (Dk Shivakumar) ಅವರು ಕೆಂಪು ಕುರ್ಚಿ ಎರುತ್ತಿದ್ದಾರೆ. ರಾಜಕೀಯ ಸಾಧನೆಯ ಬಗ್ಗೆ ಮಾತನಾಡಿದ್ದಾರೆ.

    ರಮೇಶ್ ಅರವಿಂದ್ (Ramesh Aravind) ಜೊತೆ ಈಗಾಗಲೇ ವೀಕೆಂಡ್ ಟೆಂಟ್ ನಲ್ಲಿ ರಮ್ಯಾ, ಡಾಲಿ, ಪ್ರೇಮ್, ಜೈ ಜಗದೀಶ್, ಪ್ರಭುದೇವ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ. ಇದೀಗ ಟ್ರಬಲ್ ಶೂಟರ್ ಡಿಕೆಶಿ ಅವರು ಸಾಧಕರ ಸೀಟ್‌ನ ಅಲಂಕರಿಸಿದ್ದಾರೆ. ಸದ್ಯ ಡಿಕೆಶಿ ಅವರು ಪಾಲ್ಗೊಂಡಿರುವ ವಾಹಿನಿ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.‌ ಇದನ್ನೂ ಓದಿ:ಹಿರಣ್ಯ ಚಿತ್ರಕ್ಕೆ ನಾಯಕಿಯಾದ ಖಾಸಗಿ ಕಂಪೆನಿ ಉದ್ಯೋಗಿ ರಿಹಾನಾ

    ನಾನು 7ನೇ ತರಗತಿಯಲ್ಲಿ ಇರುವಾಗಲೇ ರಾಜಕಾರಣಿ ಆಗಬೇಕು ಎಂದು ತೀರ್ಮಾನ ಮಾಡಿದ್ದೆ ಎಂದು ಡಿಕೆಶಿ ಅವರು ಹೇಳಿದ್ದಾರೆ. ಬಳಿಕ ಡಿಕೆಶಿ, ಒಬ್ಬ ಒಳ್ಳೆಯ ಆಡಳಿತಗಾರ ಎಂದು ಸಿಎಂ ಸಿದ್ಧರಾಮಯ್ಯ ಬಣ್ಣಿಸಿದ್ದಾರೆ. ಹೊರಗಡೆ ಅವರು ತುಂಬಾ ಟಫ್ ವ್ಯಕ್ತಿ, ಆದರೆ ಮನೆಯಲ್ಲಿ ಅವರು ತುಂಬಾ ಎಮೋಷನಲ್ ಎಂದು ಡಿಕೆಶಿ ಪತ್ನಿ ಮಾತನಾಡಿದ್ದಾರೆ. ಪುತ್ರಿ, ನನ್ನ ತಂದೆಯೇ ನನ್ನ ಹೀರೋ ಎಂದು ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ರಾಜೀವ್ ಗಾಂಧಿ ಅವರು ನನ್ನ ನೋಡಿದ್ದರು. ಯೂ ಆರ್ ಸೆಲೆಕ್ಟೆಟೆಡ್ ಫಾರ್ ವರ್ಲ್ಡ್ ಯೂತ್ ಸ್ಟುಡೆಂಟ್ ಫೆಸ್ಟಿವಲ್ ಅಂದ್ರು. ಬೈ ಬರ್ತ್ ನಾನೊಬ್ಬ ರೈತ, ಆದರೆ ನನ್ನ ಆಸಕ್ತಿ ಇರೋದು ರಾಜಕಾರಣದಲ್ಲಿ ಎಂದು ಡಿಕೆಶಿ ಅವರು ವೀಕೆಂಡ್ ವಿತ್ ರಮೇಶ್‌ನಲ್ಲಿ ಮಾತನಾಡಿದ್ದಾರೆ. ಈ ಕುರಿತ ಪ್ರೋಮೋ ನೆಟ್ಟಿಗರ ಗಮನ ಸೆಳೆಯುತ್ತಿದೆ.

    ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು ಭಾಗಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡ ಭಾಗಿಯಾಗಿದ್ದರು. ಇದೀಗ ಡಿಕೆಶಿ ಕೆಂಪು ಖುರ್ಚಿ ಏರುತ್ತಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಿಕೆ. ಶಿವಕುಮಾರ್ ಅವರ ಬಾಲ್ಯ, ಶಿಕ್ಷಣ, ರಾಜಕೀಯ ಎಂಟ್ರಿ, ಗೆಲುವು, ಜೊತೆಗೆ ಸಿಬಿಐ, ಇಡಿ, ಐಟಿ ಪ್ರಕರಣಗಳ ಬಗ್ಗೆಯೂ ಅನಾವರಣವಾಗಲಿದೆ.

    ಈ ವಾರಾಂತ್ಯ ಡಿಕೆಶಿ ಅವರ ಎಪಿಸೋಡ್ ಚಿತ್ರೀಕರಣ ಮಾಡಲಾಗಿತ್ತು. ಅದರಂತೆ ವಾರಾಂತ್ಯ ಜೂನ್ 10 ಮತ್ತು 11ರ ರಾತ್ರಿ 9ಕ್ಕೆ ಡಿಕೆಶಿ ಅವರ ಎಪಿಸೋಡ್ ಪ್ರಸಾರವಾಗಲಿದೆ. ಒಟ್ನಲ್ಲಿ ಡಿಕೆಶಿ ಅವರ ರಾಜಕೀಯ ಸಾಧನೆಯ ಕಥೆ ಕೇಳೋದ್ದಕ್ಕೆ ಡಿಕೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ಶಂಕರ್ ನಾಗ್ ಇದ್ದಿದ್ರೆ ಕರ್ನಾಟಕದಲ್ಲಿ ಸ್ಲಮ್ ಇರ್ತಾ ಇರಲಿಲ್ಲ- ಸಿಹಿ ಕಹಿ ಚಂದ್ರು

    ಶಂಕರ್ ನಾಗ್ ಇದ್ದಿದ್ರೆ ಕರ್ನಾಟಕದಲ್ಲಿ ಸ್ಲಮ್ ಇರ್ತಾ ಇರಲಿಲ್ಲ- ಸಿಹಿ ಕಹಿ ಚಂದ್ರು

    ಕಿರುತೆರೆಯ ಜನಪ್ರಿಯ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ಈ ವಾರ ಸಿಹಿ- ಕಹಿ ಚಂದ್ರು (Sihi Kahi Chandru) ಅವರು ಸಾಧಕರ ಸೀಟ್ ಅಲಂಕರಿಸಿದ್ದಾರೆ. ತಮ್ಮ ಬಾಲ್ಯದ ತುಂಟಾಟ, ನಟನೆ, ಅಡುಗೆ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಹಿರಿಯ ನಟ ಸಿಹಿ ಕಹಿ ಚಂದ್ರು ಅವರು ಮಾತನಾಡಿದ್ದಾರೆ. ಈ ವೇಳೆ ಶಂಕರ್ ನಾಗ್ (Shankar Nag) ಜೊತೆಗಿನ ಒಡನಾಟದ ಬಗ್ಗೆ ಚಂದ್ರು ಅವರು ಬಿಚ್ಚಿಟ್ಟಿದ್ದಾರೆ.

    ವೀಕೆಂಡ್ ಟೆಂಟ್‌ನಲ್ಲಿ ಶಂಕರ್‌ನಾಗ್ (Shankar Nag) ಪರಿಚಯ ತಮಗೆ ಆಗಿದ್ದು ಹೇಗೆ? ಎಂಬುದರಿಂದ ಮಾತು ಆರಂಭಿಸಿದ ಸಿಹಿ-ಕಹಿ ಚಂದ್ರು, ನಾನು ಕಾಲೇಜು ಪ್ರೆಸಿಡೆಂಟ್ ಆಗಿದ್ದಾಗ ಶಂಕರ್‌ನಾಗ್ ಅವರನ್ನು ಕಾಲೇಜಿಗೆ ಅತಿಥಿಯಾಗಿ ಆಹ್ವಾನಿಸಲು ಹೋಗಿದ್ದೆ ಆಗ ಅವರು ಪುಸ್ತಕವೊಂದನ್ನು ಕೊಟ್ಟು ಓದಿಕೊಂಡು ಬಂದು ಚರ್ಚಿಸುವಂತೆ ಹೇಳಿದರು. ನನಗೆ ಅರ್ಥವಾಗದಾಗ ಅವರೇ ಅದನ್ನು ಹೇಗೆ ಓದಬೇಕು ಎಂದು ಹೇಳಿಕೊಟ್ಟರು, ಅದಾದ ಮೇಲೆ ಓದಿ ಅವರೊಟ್ಟಿಗೆ ಚರ್ಚಿಸಿದೆ. ಆಗ ಅವರು ನಮ್ಮ ಕಾಲೇಜಿಗೆ ಬರಲು ಒಪ್ಪಿಕೊಂಡು ಅತಿಥಿಯಾಗಿ ಬಂದರು ಎಂದು ಶಂಕರ್‌ನಾಗ್ ಅವರೊಟ್ಟಿಗಿನ ಮೊದಲ ಭೇಟಿಯನ್ನು ಸ್ಮರಿಸಿದರು. ಬಳಿಕ ನೋಡಿಸ್ವಾಮಿ ನಾವಿರೋದೆ ಹೀಗೆ ನಾಟಕದ ರಿಹರ್ಸಲ್‌ಗೆ ಹೋಗುತ್ತಿದ್ದರು. ಅಲ್ಲಿ ಶಂಕರ್ ನಾಗ್ ಅವರು ತಮ್ಮನ್ನು ಗುರುತಿಸಿ ‘ಮಾಲ್ಗುಡಿ ಡೇಸ್’ (Malgudi Days) ತಂಡಕ್ಕೆ ಸೇರಿಸಿಕೊಂಡ ವಿಷಯ ಹೇಳಿದರು. ಆಗ ಶಂಕರ್‌ನಾಗ್ ಅವರು ಹೇಗೆ ಪಟ-ಪಟನೆ ಕೆಲಸ ಮಾಡುತ್ತಿದ್ದರು ಎಂಬ ವಿಚಾರವನ್ನ ಚಂದ್ರು ಬಿಚ್ಚಿಟ್ಟರು. ಇದನ್ನೂ ಓದಿ:ಸಾವಿನ ಬಗ್ಗೆ ಸುಳ್ಳು ಸುದ್ದಿ, ಅಪಪ್ರಚಾರ ಮಾಡಿದವರಿಗೆ ದ್ವಾರಕೀಶ್ ಸ್ಪಷ್ಟನೆ

    ‘ನರಸಿಂಹ’ (Narasimha) ಎಂಬ ಹೆಸರಿನ ಸಿನಿಮಾದಲ್ಲಿ ಶಂಕರ್ ನಾಗ್ (Shankarnag) ಜೊತೆ ನಟಿಸುತ್ತಿದ್ದೆ, ಹೊಸ ಮನೆ ಕಟ್ಟಿಸಿದ್ದೀನಿ ನಿನಗೆ ತೋರಿಸುತ್ತೀನಿ ಎಂದು ಅವರ ಮೆಟಡೋರ್‌ನಲ್ಲಿ ಕೂಡಿಸಿಕೊಂಡು ಕರೆದುಕೊಂಡು ಹೋದರು. ಅದಾಗಲೇ ದೊಡ್ಡ ನಟರಾಗಿದ್ದ ಅವರು ಯಾವುದೋ ದೊಡ್ಡ ಮನೆ ಕಟ್ಟಿದ್ದಾರೆ ಎಂದುಕೊಂಡು ಹೋಗಿ ನೋಡಿದರೆ ಅಲ್ಲಿ ಸಣ್ಣ ಮನೆ ಇತ್ತು. ಒಂದು ಕೋಣೆಯ ಸರಳವಾದ ಮನೆ ನನಗೆ ಆಶ್ಚರ್ಯವಾಯಿತು ಎಂದು ನೆನಪು ಮಾಡಿಕೊಂಡರು.

    ಈ ಮನೆಯನ್ನು ಬರೀ ಎರಡು ದಿನದಲ್ಲಿ ಕಟ್ಟಿದ್ದೀವಿ, ರೆಡಿಮೇಡ್ ಬ್ಲಾಕ್ಸ್‌ಗಳನ್ನು ಬಳಸಿ ಕಟ್ಟಿರುವ ಮನೆ ಇದು. ಇದು ಜರ್ಮನಿಯ ತಂತ್ರಜ್ಞಾನ. ಇದನ್ನು ಕಟ್ಟಲು ಖರ್ಚಾಗಿರುವುದು ಹದಿನೈದು ಸಾವಿರ ರೂಪಾಯಿ ಅಷ್ಟೇ. ಇಂಥಹಾ ಸರಳ ಮನೆಯನ್ನು ರಾಜ್ಯದ ಎಲ್ಲಕಡೆ ಕಟ್ಟಿಸಬೇಕು ಅಂದುಕೊಂಡಿದ್ದೇನೆ. ಈ ತಂತ್ರಜ್ಞಾನ ಬಳಸಿ ಮನೆ ಕಟ್ಟಿಸಿದರೆ ರಾಜ್ಯದಲ್ಲಿರುವ ಸ್ಲಮ್‌ಗಳೆಲ್ಲ ನಿರ್ಮೂಲನೆ ಆಗುತ್ತವೆ, ಗುಡಿಸಲು ವಾಸ ಎಂಬುದೇ ಇರಲ್ಲ. ಈ ಮನೆ ಕಟ್ಟಿಸಲು ಸರ್ಕಾರದಿಂದ ಹತ್ತುಸಾವಿರ ಸಬ್ಸಿಡಿ ಕೊಡಿಸಲು ಪ್ರಯತ್ನ ಮಾಡುತ್ತಿದ್ದೀನಿ, ಸರ್ಕಾರದಿಂದ ರಿಯಾಯಿತಿ ಸಿಕ್ಕರೆ ನಾನು ಕರ್ನಾಟಕದಲ್ಲಿರುವ ಸ್ಲಮ್ ನಿರ್ಮೂಲನೆ ಮಾಡುತ್ತೇನೆ ಎಂದು ಹೇಳಿದ್ದರು. ಬಡವರ ಪರವಾಗಿ ಶಂಕರ್ ನಾಗ್‌ಗೆ ಇರುವ ಕಾಳಜಿ ಬಗ್ಗೆ ಚಂದ್ರು ವಿವರಿಸಿದರು.

    ಅವರು ಅಂದು ಆಡಿದ ಆ ಮಾತು ನಾನು ಜೀವನದಲ್ಲಿ ಮರೆಯುವಂತಿಲ್ಲ, ಆಗಿನ ಕಾಲಕ್ಕೆ ಅವರದ್ದು ಅದೆಂಥ ಯೋಚನೆ, ಆ ಯೋಜನೆ ಬಂದಿದ್ದರೆ ನಿಜವಾಗಿಯೂ ನಮ್ಮದು ಗುಡಿಸಲು ಮುಕ್ತ ರಾಜ್ಯವಾಗಿಬಿಟ್ಟಿರುತ್ತಿತ್ತು. ಶಂಕರ್‌ನಾಗ್ ಇದ್ದಿದ್ದೇ ಹಾಗೆ ಸದಾ ಸಕ್ರಿಯ, ಕೆಲಸ ಮಾಡುವಾಗಲೂ ಚಟ-ಪಟ ಎನ್ನುತ್ತಾ ಕೆಲಸ ಮಾಡುತ್ತಿದ್ದರು ಎಂದ ಚಂದ್ರು, ಶಂಕರ್‌ನಾಗ್ ಅವರು ನನ್ನ ಬದುಕಿನ ಗುರು ಎಂದು ಸಿಹಿ ಕಹಿ ಚಂದ್ರು ಬಿಚ್ಚಿಟ್ಟರು.

  • Weekend With Ramesh ಶೋನಲ್ಲಿ ಪ್ರೇಮ ಪ್ರಸಂಗ ಬಿಚ್ಚಿಟ್ಟ ಮಂಡ್ಯ ರಮೇಶ್

    Weekend With Ramesh ಶೋನಲ್ಲಿ ಪ್ರೇಮ ಪ್ರಸಂಗ ಬಿಚ್ಚಿಟ್ಟ ಮಂಡ್ಯ ರಮೇಶ್

    ಕಿರುತೆರೆಯ ಜನಪ್ರಿಯ ಶೋ Weekend With Ramesh-5 ಕಾರ್ಯಕ್ರಮದಲ್ಲಿ ಖ್ಯಾತ ನಟ ಅವಿನಾಶ್ ನಂತರ ಮಂಡ್ಯ ರಮೇಶ್ (Mandya Ramesh) ಅವರು ಸಾಧಕರ ಸೀಟ್ ಅನ್ನ ಅಲಂಕರಿಸಿದ್ದಾರೆ. ನಟ ರಮೇಶ್ ಅರವಿಂದ್ (Ramesh Aravind) ಜೊತೆ ತಮ್ಮ ಲವ್ ಸ್ಟೋರಿ (Love Story), ಮದುವೆ (Wedding), ಜರ್ಮನಿಯ ನಡೆದ ಘಟನೆ ಬಗ್ಗೆ ಮಂಡ್ಯ ರಮೇಶ್ ಹಂಚಿಕೊಂಡಿದ್ದಾರೆ.

    ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಈಗಾಗಲೇ ರಮ್ಯಾ, ಪ್ರಭುದೇವ, ಡಾಲಿ, ದತ್ತಣ್ಣ ಹೀಗೆ ಹಲವರು ಭಾಗವಹಿಸಿ ತಮ್ಮ ಬದುಕಿನ ಸ್ಪೂರ್ತಿದಾಯಕ ಕಥೆಗಳನ್ನ ಹಂಚಿಕೊಂಡಿದ್ದಾರೆ. ಇದೀಗ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರ ಸರದಿ. ಪತ್ನಿ ಸರೋಜಾ (Saroja) ಅವರನ್ನ ಮೊದಲು ಭೇಟಿಯಾಗಿದ್ದು ಎಲ್ಲಿ? ಲವ್ ಕಹಾನಿ ಶುರುವಾಗಿದ್ದು ಹೇಗೆ? ಮಗಳು ದಿಶಾ ಬಂದ ಮೇಲೆ ಬದುಕಿನಲ್ಲಿ ಎದುರಿಸಿದ ಸವಾಲಿನ ಬಗ್ಗೆ ಮಂಡ್ಯ ರಮೇಶ್ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಐರೆನ್ ಲೆಗ್ ಎಂದು ಟೀಕಿಸಿದವರಿಗೆ ಉತ್ತರ ಕೊಟ್ಟ ಶ್ರುತಿ ಹಾಸನ್

    ಮಂಡ್ಯ ರಮೇಶ್- ಸರೋಜಾ ಅವರು ಮೊದಲು ನೀನಾಸಂನಲ್ಲಿ ಭೇಟಿ ಮಾಡಿದ್ದರು. ಸರೋಜ ಅವರು ಬಿಂದಾಸ್ ಆಗಿ ಅವರ ಪಾಡಿಗೆ ಅವರು ಇರುತ್ತಿದ್ದರು. ಒಮ್ಮೆ ಸರೋಜ ಅವರು ಏನೋ ಒಂದು ಸಣ್ಣ ತಪ್ಪನ್ನು ಮಾಡಿದ್ದರು. ಇದು ಡಿಸಿಪ್ಲಿನ್ ಕಮಿಟಿ ಲೀಡರ್ ಆಗಿದ್ದ ಮಂಡ್ಯ ರಮೇಶ್ ಗಮನಕ್ಕೆ ಬಂತು. ನೀನಾಸಂನಲ್ಲಿ ಸರೋಜ ಅವರಿಗೆ ಶಿಸ್ತಿನ ಪಾಠ ಮಾಡಿದ್ದರು. ಕೆಲದಿನಗಳ ಬಳಿಕ ಮಂಡ್ಯ ರಮೇಶ್ ಅವರಿಗೆ ಅಪಘಾತವಾಗಿತ್ತು. ಆಸ್ಪತ್ರೆಯಲ್ಲಿ ರಮೇಶ್ ಅವರಿಗೆ ಒಂದು ವಾರಗಳ ಕಾಲ ಮೂರ್ಛೆ ತಪ್ಪೋದು, ಎಚ್ಚರ ಆಗೋದು ಆಗುತ್ತಿತ್ತಂತೆ. ಅಷ್ಟೂ ದಿನ ರಮೇಶ್ ಅವರನ್ನು ಸರೋಜಾ ನೋಡಿಕೊಳ್ಳುತ್ತಿದ್ದರು. ಅದನ್ನು ನೋಡಿ ರಮೇಶ್ ಅವರ ಅಕ್ಕ ನಾವಿದ್ದಾಗ ಇವಳ್ಯಾಕೆ ನಿನ್ನ ಟ್ರೀಟ್‌ಮೆಂಟ್ ಮಾಡ್ತಿದ್ದಾಳೆ, ಏನು ವಿಶೇಷ ಅಂತಾ ರಮೇಶ್‌ಗೆ ಪ್ರಶ್ನೆ ಕೇಳಲು ಆರಂಭಿಸಿದರು. ಮನಸ್ಸಿನಲ್ಲಿ ಏನೂ ಇಲ್ಲದಿದ್ದರೂ ಕೂಡ ಎಷ್ಟೋ ಪ್ರೇಮ ಪ್ರಸಂಗಗಳು ಬೇರೆಯವರು ಹೇಳಿ ಹೇಳಿ ಹುಟ್ಟತ್ತಂತೆ ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.

    ಅಪಘಾತ ಆದ ಬಳಿಕ ಪ್ರೇಮದ ಗಳಿಗೆಗಳು ಹುಟ್ಟಲು ಆರಂಭಿಸಿದವಂತೆ. ಕೊನೆಗೂ ಇವರಿಬ್ಬರು ಮದುವೆಯಾದರು. ಮಗು ಹುಟ್ಟಿತು. ಇಬ್ಬರು ಕಲಾವಿದರು ಜರ್ಮನಿಯಲ್ಲಿ ನಾಟಕವೊಂದರಲ್ಲಿ ನಟಿಸಬೇಕಿತ್ತು. ಆ ವೇಳೆ ಮಗಳು ದಿಶಾ (Disha) ಚಿಕ್ಕವಳು. ಮಗಳನ್ನು ಎತ್ತಿಕೊಂಡು ಗಲೀಜು ಮಾಡಿಕೊಂಡರೆ ಕಾಸ್ಟ್ಯೂಮ್ ಹಾಳಾಗುತ್ತದೆ ಅಂತ ಮುಟ್ಟದೆ ಮಗಳನ್ನು ಸಂತೈಸುತ್ತಿದ್ದರಂತೆ. ಜರ್ಮನಿಯಲ್ಲಿ ನಾಟಕದ ಸಮಯದಲ್ಲಿ ಮಗು ತುಂಬ ಅತ್ತಾಗ ಸರೋಜ ಅವರು ಎದೆಹಾಲು ಕುಡಿಸುತ್ತಿದ್ದರು. ಆಮೇಲೆ ನಾಟಕ ಶುರು ಆಯ್ತು ಅಂತ ಅವರು ಎದೆಯಿಂದ ಮಗುವನ್ನು ಕಿತ್ತಿಟ್ಟು ನಾಟಕ ಮಾಡಲು ಆರಂಭಿಸಿದರು. ಎಲ್ಲರೂ ಯಾಕೆ ಸರೋಜ ಅವರು ಇಷ್ಟು ಬೆವತರು ಅಂತ ಅಂದುಕೊಂಡರು. ಆದರೆ ಎದೆಯಿಂದ ಮಗುವನ್ನು ಕಿತ್ತಿಟ್ಟು ಬಂದಿದ್ದರಿಂದ ಇಡೀ ಮೈ ಹಾಲಾಗಿ ಹೋಗಿತ್ತು ಎಂದು ಮಂಡ್ಯ ರಮೇಶ್ ಅವರು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

  • ದಾಂಪತ್ಯ ಜೀವನ, ಮಗನ ಆರೋಗ್ಯದ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ಟ ಅವಿನಾಶ್‌ ದಂಪತಿ

    ದಾಂಪತ್ಯ ಜೀವನ, ಮಗನ ಆರೋಗ್ಯದ ಬಗ್ಗೆ ಅಸಲಿ ವಿಚಾರ ಬಿಚ್ಚಿಟ್ಟ ಅವಿನಾಶ್‌ ದಂಪತಿ

    ಕಿರುತೆರೆ ಜನಪ್ರಿಯ Weekend With Ramesh-5 ಕಾರ್ಯಕ್ರಮಕ್ಕೆ ಖ್ಯಾತ ನಟ ಅವಿನಾಶ್ (Actor Avinash) ಅತಿಥಿಯಾಗಿ ಸಾಧಕರ ಸೀಟ್ ಅಲಂಕರಿಸಿದ್ದಾರೆ. ಈ ವಾರ ಅವಿನಾಶ್ ಅವರ ಬಾಲ್ಯ, ಕೆರಿಯರ್, ನಟಿ ಮಾಳವಿಕಾ ಜೊತೆಗಿನ ಮದುವೆ, ಪುತ್ರ ಗಾಲವ್ ಬಗ್ಗೆ ಅವಿನಾಶ್ ಮನಬಿಚ್ಚಿ ಮಾತನಾಡಿದ್ದಾರೆ.

    ಸ್ಯಾಂಡಲ್‌ವುಡ್‌ನ ಸ್ಟಾರ್ ಜೋಡಿಗಳಲ್ಲಿ ಒಂದಾಗಿರುವ ಅವಿನಾಶ್- ಮಾಳವಿಕಾ (Actress Malavika) ಅವರದ್ದು ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದ್ದು, ಮೊದಲು ಭೇಟಿಯಾಗಿದ್ದು, ಮದುವೆ ಪ್ರಸ್ತಾಪ ಬಂದಿದ್ದು ಯಾರಿಂದ ಎಂಬ ಮಾಹಿತಿಯನ್ನ ನಟ ರಮೇಶ್ ಅರವಿಂದ್ (Ramesh Aravind) ಜೊತೆ ಅವಿನಾಶ್ ದಂಪತಿ ಹಂಚಿಕೊಂಡಿದ್ದಾರೆ. ಹಾಗೆಯೇ ದೇವರ ಮಗು ಗಾಲವ್ ಬಗ್ಗೆ ಭಾವುಕರಾಗಿದ್ದಾರೆ. ಇದನ್ನೂ ಓದಿ:‘ಅಗ್ನಿಸಾಕ್ಷಿ’ ಸೀರಿಯಲ್‌ ನಟ ಸಂಪತ್‌ ಜಯರಾಮ್‌ ಆತ್ಮಹತ್ಯೆ

    ಕಿರುತೆರೆಯ ‘ಮಾಯಾಮೃಗ’ (Mayamruga) ಧಾರಾವಾಹಿಯಲ್ಲಿ ನಾವಿಬ್ಬರು ಒಟ್ಟಿಗೆ ಅಭಿನಯಿಸಿದ್ವಿ. ಸ್ನೇಹಿತರಾಗಿದ್ವಿ. ನಮ್ಮಿಬ್ಬರ ಮಧ್ಯೆ ವಯಸ್ಸಿನ ಅಂತರವಿತ್ತು. ಆದರೆ, ಇಬ್ಬರೂ ಯೋಚನೆ ಮಾಡುವ ರೀತಿ ಒಂದೇ ಇತ್ತು. ಒಟ್ಟಿಗೆ ಇರಬಹುದೇನೋ ಅಂತ ನನಗೆ ಅನಿಸಿತ್ತು. ಆದರೆ, ಕೇಳುವ ಧೈರ್ಯ ನನಗೆ ಇರಲಿಲ್ಲ ಎಂದರು ಅವಿನಾಶ್. ಮಾಳವಿಕಾ ಹಾಗೂ ಅವಿನಾಶ್ ಮಧ್ಯೆ ವಯಸ್ಸಿನ ಅಂತರ ಎಷ್ಟಿದೆ ಅಂದ್ರೆ. ಮಾಳವಿಕಾ 9 ವರ್ಷ ವಯಸ್ಸಿನಲ್ಲಿದ್ದಾಗ ಅವಿನಾಶ್ ಆಗಲೇ ಲೆಕ್ಚರರ್ ಆಗಿದ್ದರು. ಇವರಿಬ್ಬರು ಭೇಟಿಯಾಗಿದ್ದು ‘ಮಾಯಾಮೃಗ’ ಧಾರಾವಾಹಿಯ ಸೆಟ್‌ನಲ್ಲಿ.

    ಮಾಯಾಮೃಗ ಶುರು ಆದ್ಮೇಲೆ ಇಬ್ಬರೂ ಕ್ಲೋಸ್ ಫ್ರೆಂಡ್ಸ್ ಆಗಿದ್ದರು. ಒಂದು ದಿನ ಅವಿನಾಶ್ ಮನೆಗೆ ಮಾಳವಿಕಾ ಮನೆಗೆ ಬಂದಿದ್ದರು. ನನ್ನ ಮನಸ್ಸಿನಲ್ಲಿ ಬಂತು.. ನಮ್ಮ ಹುಡುಗಿನ ಮದುವೆ ಆಗ್ತೀಯಾ ಅಂತಾ ಮಾಳವಿಕಾ ತಾಯಿ ನೇರವಾಗಿ ಕೇಳಿದಾಗ ಅವಿನಾಶ್ ಶಾಕ್ ಆಗ್ಬಿಟ್ಟರು. ಮನೆಗೆ ಹೋಗಿ ಅಣ್ಣಂದಿರ ಜೊತೆ ಮಾತನಾಡಬೇಕು ಎಂದರು. ಹಾಂಗ್ ಕಾಂಗ್‌ನಿಂದ ಅಣ್ಣನನ್ನ ಕರೆಯಿಸಿ ಮಾಳವಿಕಾಳನ್ನ ನೋಡಿದರು. ನಾವು ಎಂಗೇಜ್‌ಮೆಂಟ್ ಮಾಡಲಿಲ್ಲ. ಫೆಬ್ರವರಿ 26ರಂದು ಮದುವೆ ಮಾಡಿಬಿಟ್ವಿ ಎಂದು ಮಾಳವಿಕಾ ತಾಯಿ ಸಾವಿತ್ರಿ ಮಾತನಾಡಿದರು.

    ನಮ್ಮ ಮಗ ಗಾಲವ್. ದೈವ ಸಂಕಲ್ಪ ಇತ್ತು. ಅದಕ್ಕೆ ಗಾಲವ್ (Gaalav) ಹುಟ್ಟಿದ. ಗಾಲವ್ ಎಲ್ಲರಂತೆ ಅಲ್ಲ. ಅದು ಗೊತ್ತಾಗೋಕೆ ಒಂದಷ್ಟು ವರ್ಷ ಆಯ್ತು. 14 ವರ್ಷಗಳಲ್ಲಿ ಇದೇ ಮೊದಲ ಬಾರಿ ಗಾಲವ್ ಯಾವುದಾದರೂ ಸೆಟ್‌ಗೆ ಬಂದಿರೋದು. ಗಾಲವ್ ಹುಟ್ಟಿದಾಗ ಎಲ್ಲಾ ಮಕ್ಕಳ ತರಹ ಇರಲಿಲ್ಲ. ಒಬ್ಬೊಬ್ಬರು ಒಂದೊಂಥರ ಅವನ ಬಗ್ಗೆ ಮಾತನಾಡಿದರು. ಒಬ್ಬರು ಯಾವುದೋ ಯೋಗಿ ತರಹ ಇದ್ದಾನೆ ಅಂದರು. ಇನ್ನೊಬ್ಬರು ನಾರ್ಮಲ್ ಅಲ್ಲವೇ ಅಲ್ಲ ಎಂದರು. ಸುಮಾರು 50 ದಿನ ಐಸಿಯುನಲ್ಲಿದ್ದ. ನಂತರ ವಾಪಸ್ ಮನೆಗೆ ಬಂದ. ನಂತರ ಯಾವ ಅಪ್ಪ-ಅಮ್ಮನೂ ಮಾಡಿಸದೇ ಇರುವ ಒಂದು ಟೆಸ್ಟ್ ಮಾಡಿಸಿದ್ವಿ. ಯಾವ ಕಾರಣಕ್ಕೆ ಮಗು ಹೀಗೆ ಹುಟ್ಟತ್ತೆ ಅಂತ ತಿಳಿಯೋಕೆ. ಜೆನೆಟಿಕ್ ಟೆಸ್ಟ್ ಮಾಡಿದಾಗ ಗೊತ್ತಾಯಿತು Wolf Hirschhorn Syndrome ಇದೆ ಅಂತ. ಅದು ಯಾರಿಗೂ ಗೊತ್ತೇ ಇಲ್ಲ. ಯಾವ ನ್ಯೂರಾಲಜಿಸ್ಟ್ ಕೂಡ ನಮಗೆ ಹೇಳಲಿಲ್ಲ. ಈ ಸಿಂಡ್ರೋಮ್‌ನಲ್ಲಿ ಬುದ್ಧಿ ಮಾಂದ್ಯತೆ ಇದೆ. ಮಾತು ಬರೋದಿಲ್ಲ. ನಡಿಗೆ ಸ್ವಲ್ಪ ಮಟ್ಟಿಗೆ ಬರಬಹುದು. ಆಯಸ್ಸಿನ ಬಗ್ಗೆ ನಿಶ್ಚಿಯ ಇಲ್ಲ. ಜೆನೆಟಿಕ್ ಟೆಸ್ಟ್ ಬಳಿಕ ನಿಮ್ಮ ಕಾರಣಕ್ಕೂ ಮಗ ಹೀಗಿಲ್ಲ. ಅವಿನಾಶ್ ಕಾರಣಕ್ಕೂ ಮಗ ಹೀಗಿಲ್ಲ. ಯು ಆರ್ ಜಸ್ಟ್ ಅನ್‌ಲಕ್ಕಿ ಎಂದರು ಡಾಕ್ಟರ್. ಜಗತ್ತಿನಲ್ಲಿ 2000 ಮಕ್ಕಳು ಹೀಗಿದ್ದಾರೆ ಎಂದು ಡಾಕ್ಟರ್ ತಿಳಿಸಿದ್ದರು ಎಂದು ನಟಿ ಮಾಳವಿಕಾ ಮಾತನಾಡಿದ್ದಾರೆ.

    ಗಾಲವ್‌ನ ನೋಡಿಕೊಳ್ಳೋದು ಕಾಳಿ ಎಂಬುವರು. ಅವರ ಬಗ್ಗೆ ಮಾತನಾಡಿದ ಮಾಳವಿಕಾ, ಕಾಳಿ ನಮ್ಮನೆ ಯಶೋದಾ. ನಾನು ಹೆತ್ತವಳು ಅಷ್ಟೇ. ಹುಟ್ಟಿದಾಗಿನಿಂದ ಗಾಲವ್‌ನ ನೋಡಿಕೊಂಡಿರುವುದು ಕಾಳಿ ಅವರು. ಇನ್ನೂ ಮಗನ ಬಗ್ಗೆ ಮಾತನಾಡಿದ ಅವಿನಾಶ್, ದೇವರು ನಮ್ಮ ಜೊತೆ ಇದ್ದಾನೆ. ಒಂದು ದಿನ ಇವನು ದೇವರ ಜೊತೆ ಹೋಗ್ತಾನೆ ಎಂದು ಮಾತನಾಡಿದ್ದಾರೆ.

  • ಡಾಲಿ ಪೋಲಿತನ ಬಗ್ಗೆ ಗುಣಗಾನ ಮಾಡಿದ ‘ಕಾಂತಾರ’ ಲೀಲಾ

    ಡಾಲಿ ಪೋಲಿತನ ಬಗ್ಗೆ ಗುಣಗಾನ ಮಾಡಿದ ‘ಕಾಂತಾರ’ ಲೀಲಾ

    ಕಿರುತೆರೆಯ ಬಿಗ್ ಶೋ Weekend With Ramesh ಕಾರ್ಯಕ್ರಮದಲ್ಲಿ ಡಾಲಿ ಧನಂಜಯ (Daali Dhananjay) ಅವರು ಸಾಧಕರ ಸೀಟ್ ಅನ್ನ ಅಲಂಕರಿಸಿದ್ದಾರೆ. ರಂಗಾಯಣ, ಸಿನಿಮಾ ಜರ್ನಿ ಬಗ್ಗೆ ಸಾಕಷ್ಟು ವಿಚಾರಗಳನ್ನ ಡಾಲಿ ಹಂಚಿಕೊಂಡಿದ್ದಾರೆ. ಈ ವೇಳೆ ಡಾಲಿ ಸಹನಟಿ ‘ಕಾಂತಾರ’ (Kantara) ನಟಿ ಸಪ್ತಮಿ ಭಾಗಿಯಾಗಿ, ಧನಂಜಯ ಬಗ್ಗೆ ಹಾಡಿಹೊಗಳಿದ್ದಾರೆ.

    ‘ಕಾಂತಾರ’ ಸಿನಿಮಾ ಸಂಚಲನ ಮೂಡಿಸಿದ ಸಪ್ತಮಿ ಗೌಡ ಅವರು ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮೂಲಕ ಚಂದನವನಕ್ಕೆ ಡಾಲಿಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ವೀಕೆಂಡ್ ಟೆಂಟ್‌ನಲ್ಲಿ ಭಾಗಿಯಾಗಿರುವ ಸಪ್ತಮಿ ಗೌಡ ಅವರು, ಧನಂಜಯ (Dhananjay) ಅವರು ಮುಗ್ಧರ ರೀತಿ ಕಾಣ್ತಾರೆ, ಆದರೆ ಅವರು ಮುಗ್ಧರಲ್ಲ, ತುಂಬಾ ಪೋಲಿ. ನಾವೆಲ್ಲ ಅವರ ಜೋಕ್‌ಗಳನ್ನು ಕೇಳಿದ್ದೇವೆ. ನಮ್ಮ ಕಾಲೇಜ್‌ಗೆ ಮುಖ್ಯ ಅತಿಥಿಯಾಗಿ ಧನಂಜಯ ಅವರು ಬಂದಿದ್ದರು. ಆಗಲೇ ನಾನು ಅವರನ್ನು ಮೊದಲು ಭೇಟಿ ಮಾಡಿದ್ದೆ. ಸ್ವಲ್ಪ ದಿನದ ಹಿಂದೆ ಲಿಫ್ಟ್‌ನಲ್ಲಿದ್ದಾಗ ಯಾರೋ ಬಂದು ಧನಂಜಯ ಜೊತೆ ಸೆಲ್ಫಿ ತಗೊಂಡರು. ಆಗ ಡಾಲಿ ಇಲ್ಲಿ ಸಪ್ತಮಿ ಗೌಡ ಕೂಡ ಇಲ್ಲೇ ಇದ್ದಾರೆ ಎಂದರು. ನಾನು ಬೆಳೆಯಬೇಕು, ನಮ್ಮವರೂ ಬೆಳೆಯಬೇಕು ಎನ್ನುವ ಗುಣ ಧನಂಜಯ ಅವರಿಗೆ ಇದೆ. ಸೆಲ್ಫ್ ಮೇಡ್ ವ್ಯಕ್ತಿಗೆ ಕಷ್ಟ ಬರಬಾರದು, ಯಾವಾಗಲೂ ನಗುತ್ತಾ ಇರಬೇಕು. ಇನ್ನು ನಾನು ಅವರ ಹೆಸರನ್ನು ನನ್ನ ಫೋನ್‌ನಲ್ಲಿ ದಕ್ಷಿಣಾಪಥೇಶ್ವರ ಅಂತ ಸೇವ್ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

    ‘ಕಾಂತಾರ’ ನಟಿ ಬಗ್ಗೆ ಡಾಲಿ ಮಾತನಾಡಿ, ಸಪ್ತಮಿ ಗೌಡ(Saptami Gowda) ಅವರು ಇಲ್ಲಿಗೆ ಬರುತ್ತಾರೆ ಅಂತ ಅಂದುಕೊಂಡಿರಲಿಲ್ಲ. ‘ಕಾಂತಾರ’ ಸಿನಿಮಾ ಹಿಟ್ ಆದ ನಂತರ ಹಿಂದಿಯವರೆಲ್ಲ ನಿಮ್ಮ ಜೊತೆ ಫೋಟೋ ತೆಗೆಸಿಕೊಳ್ತಾರೆ ಅಂತ ರೇಗಿಸುತ್ತಿರುತ್ತೇವೆ. ಸಪ್ತಮಿಯನ್ನು ನಾನು ಉಮೇಶಣ್ಣನ ಮಗಳು ಅಂತ ಕರಿತೀನಿ. ಸಪ್ತಮಿ ಗೌಡ ಇರೋ ಕಾಲೇಜ್‌ಗೆ ಬರಬೇಕು ಅಂತ ನಂಗೆ ಹೇಳಿದಾಗ ನಾನು ಹೋದೆ, ಅಲ್ಲಿ ಸಪ್ತಮಿ ಎಲ್ಲ ಹುಡುಗರನ್ನು ಕಂಟ್ರೋಲ್ ಮಾಡ್ತಿದ್ರು, ಡಾನ್ ತರ ಅವಾಜ್ ಹಾಕ್ತಿದ್ರು. ಆಗಲೇ ಪೊಲೀಸಪ್ಪನ ಮಗಳು ಅಂತ ಗೊತ್ತಾಯ್ತು. ‘ಪಾಪ್‌ಕಾರ್ನ್ ಮಂಕಿ ಟೈಗರ್’ ಪಾತ್ರದಲ್ಲಿ ಸಪ್ತಮಿಯನ್ನು ಹಾಕಿಕೊಳ್ತೀನಿ ಅಂತ ಸೂರಿ ಸರ್ (Director Soori) ಹೇಳಿದಾಗ ಸಪ್ತಮಿ ಕಾಲೇಜಿನಲ್ಲಿ ವರ್ತಿಸಿದ್ದು ನೆನಪಾಯ್ತು. ಆಗಲೇ ಕ್ಯಾರೆಕ್ಟರ್‌ಗೆ ಹೊಂದಿಕೆ ಆಗುತ್ತೆ ಅಂತಾ ಫಿಕ್ಸ್ ಆದೆ ಎಂದು ಧನಂಜಯ ಹೇಳಿದ್ದಾರೆ. ಇದನ್ನೂ ಓದಿ:ಪಸಂದಾಗಿದೆ ‘ರವಿಕೆ ಪ್ರಸಂಗ’ ಎಂದ ಗೀತಾಭಾರತಿ ಭಟ್

    ಇದೀಗ ‘ಉತ್ತರಾಕಾಂಡ’ ಸಿನಿಮಾದಲ್ಲಿ ಮತ್ತೆ ಡಾಲಿ ಮತ್ತು ಸಪ್ತಮಿ ಗೌಡ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಮೋಹಕ ತಾರೆ ರಮ್ಯಾ (Ramya) ಕೂಡ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

  • ಐರನ್ ಲೆಗ್ ಎಂದು ಕಟುಕಿದ ದಿನಗಳ ಬಗ್ಗೆ ಕಣ್ಣೀರಿಟ್ಟ ಡಾಲಿ

    ಐರನ್ ಲೆಗ್ ಎಂದು ಕಟುಕಿದ ದಿನಗಳ ಬಗ್ಗೆ ಕಣ್ಣೀರಿಟ್ಟ ಡಾಲಿ

    ಟಿವಿ ಪರದೆ ಮೂಲಕ ಅಪಾರ ಅಭಿಮಾನಿಗಳನ್ನ ಗೆದ್ದಂತಹ Weekend With Ramesh 5 ಶೋನಲ್ಲಿ ಡಾಲಿ ಧನಂಜಯ್ ಸಾಧಕರ ಸೀಟ್ ಅನ್ನ ಅಲಂಕರಿಸಿದ್ದಾರೆ. ಬಣ್ಣದ ಬದುಕಿಗೆ ಕಾಲಿಟ್ಟಾಗ ಡಾಲಿಗೆ ಎದುರಾದ ಅವಕಾಶಗಳ ಕೊರತೆ, ಹೀಯಾಳಿಸಿದ ದಿನಗಳ ಬಗ್ಗೆ ಕಣ್ಣೀರಿಟ್ಟಿದ್ದಾರೆ. ಐರನ್ ಲೆಗ್ ಎಂದು ಕೆಟ್ಟ ಪದಗಳಲ್ಲಿ ಕುಟುಕಿದ ದಿನಗಳ ಬಗ್ಗೆ ಡಾಲಿ ಭಾವುಕರಾಗಿದ್ದಾರೆ.

    2013ರಲ್ಲಿ ‌’ಡೈರೆಕ್ಟರ್ಸ್‌ ಸ್ಪೆಷಲ್ʼ (Directors Special) ಸಿನಿಮಾ ಮೂಲಕ ಡಾಲಿ ಧನಂಜಯ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಹೀರೋ ಆಗಿ ನಟಿಸುತ್ತಿದ್ದ ಡಾಲಿಗೆ, ತಿರುವು ಕೊಟ್ಟ ಸಿನಿಮಾ ಅಂದ್ರೆ ಶಿವಣ್ಣ ಜೊತೆಗಿನ ‘ಟಗರು’ (Tagaru) ಚಿತ್ರ. ಶಿವರಾಜ್‌ಕುಮಾರ್ ಮುಂದೆ ಡಾಲಿ (Daali) ಆಗಿ ಅಬ್ಬರಿಸಿದ ಮೇಲೆಯೇ ಧನಂಜಯ್ ಲಕ್ ಚೇಂಜ್ ಆಗಿದ್ದು, ಪ್ರತಿಭಾನ್ವಿತ ನಟ ಡಾಲಿಗೆ ನಂತರ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬಂದ್ವು. ಇಂದು ನಟ, ನಿರ್ಮಾಪಕ, ಲಿರಿಕ್ಸ್ ರೈಟರ್ ಆಗಿ ಬೆಳೆದಿದ್ದಾರೆ. ಆದರೆ ತಾವು ಚಿತ್ರರಂಗಕ್ಕೆ ಕಾಲಿಟ್ಟ ಸಂದರ್ಭದಲ್ಲಿ ತಮ್ಮ ಕಷ್ಟದ ದಿನಗಳು ಹೇಗಿತ್ತು ಎಂಬುದನ್ನ ಮಾತನಾಡಿದ್ದಾರೆ. ಇದನ್ನೂ ಓದಿ:ಚುನಾವಣಾ ರಾಯಭಾರಿಯಾಗಿ ಖ್ಯಾತನಟ ಸತೀಶ್ ನೀನಾಸಂ ನೇಮಕ

    ಧನಂಜಯ್ ಐರನ್ ಲೆಗ್ (Iron Leg) ಅವನನ್ನು ಹಾಕೋಂಡು ಸಿನಿಮಾ ಮಾಡಿದರೆ ಜನ ಬರಲ್ಲ ಅಂತ ಹೇಳುತ್ತಿದ್ದರು. ಎಲ್ಲಾ ತೆಗೆದುಕೊಂಡು ಧನಂಜಯ್ ಮೇಲೆ ಹಾಕಿದ್ರೆ ಹೇಗೆ ಎಲ್ಲರ ಎದುರು ಕೆಟ್ಟ ಪದಗಳಲ್ಲಿ ಹೇಳಿಬಿಟ್ಟರೆ ನಮಗೆ ಹೇಗಾಗುತ್ತೆ. ಯಾಕೆ ನೀವು ನಿಮ್ಮ ಹೀರೋನಾ ಹೀರೋ ರೀತಿ ನೋಡಿಕೊಳ್ಳಲ್ಲ. ನಾನು ಸಿನಿಮಾ ಕಲಿತುಕೊಂಡು ಬಂದಿದ್ದೀನಿ ಅಲ್ವಾ? ಹೀಗಾಗಿ ನನ್ನ ಕೋಪ ಎಲ್ಲಾ ತೆಗೆದು ಡಾಲಿ ಮೇಲೆ ಹಾಕಿ ಪಾತ್ರ ಮಾಡಿದಕ್ಕೆ ಇಂಡಸ್ಟ್ರಿಯಲ್ಲಿ ನಿಂತುಕೊಂಡೆ ಎಂದು ಧನಂಜಯ್ ಹೇಳಿದ್ದಾರೆ.

    ಬಳಿಕ ಡಾಲಿ ಬಗ್ಗೆ ಶಿವಣ್ಣ ಹಾಡಿ ಹೊಗಳಿದ್ದಾರೆ. ಧನಂಜಯ್ ಜೊತೆ ಕೆಲಸ ಮಾಡುವುದಕ್ಕೆ ಖುಷಿ ಇದೆ. ಅವರಲ್ಲಿ ಸದಾ ಜೋಶ್ ಇರುತ್ತೆ. ನನ್ನ ಪ್ರೀತಿ ಮತ್ತು ವಿಶ್ ಸದಾ ನಿಮ್ಮ ಜೊತೆ ಇರುತ್ತದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ವಿಡಿಯೋ ಮೂಲಕ ಮಾತನಾಡಿದ್ದಾರೆ. ಶಿವಣ್ಣ ಅವರ ಜೊತೆ ನಾನು ಎಮೋಷನಲ್ ಆಗಿ ಕನೆಕ್ಟ್ ಆಗುತ್ತೀನಿ ನನ್ನನ್ನು ಮಗನ ರೀತಿ ನೋಡಿಕೊಂಡಿದ್ದಾರೆ ಎಂದು ಧನಂಜಯ್ ಹೇಳಿದ್ದಾರೆ. ಮತ್ತೊಂದು ಖುಷಿ ಏನೆಂದರೆ ಅಪ್ಪು ಸರ್ ಜೊತೆ ಸ್ಕ್ರೀನ್ ಶೇರ್ ಮಾಡಿರುವುದು, ನೆನಪುಗಳು ಅಷ್ಟೇ ನಮ್ಮ ಜೀವನದಲ್ಲಿ ದೊಡ್ಡ ಕಲೆಕ್ಷನ್ ಆಗಿ ಉಳಿಯುವುದು. ಏನ್ ಏನ್ ಕೊಡಬೇಕು ಪ್ರತಿಯೊಂದನ್ನು ತುಂಬಾ ಪ್ರೀತಿಯಿಂದ ಕೊಟ್ಟಿದ್ದಾರೆ ಎಂದು ಡಾಲಿ ಮಾತನಾಡಿದ್ದಾರೆ.

  • ಪತಿಯ ಜೀವ ಉಳಿಸಿದ ಡಾ.ಮಂಜುನಾಥ್ ಬಗ್ಗೆ ಸುಧಾ ಬರಗೂರು ಹೇಳಿದ್ದೇನು?

    ಪತಿಯ ಜೀವ ಉಳಿಸಿದ ಡಾ.ಮಂಜುನಾಥ್ ಬಗ್ಗೆ ಸುಧಾ ಬರಗೂರು ಹೇಳಿದ್ದೇನು?

    ಕಿರುತೆರೆಯ ಜನಪ್ರಿಯ Weekend With Ramesh ಶೋಗೆ ಈ ವಾರ ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ (Dr. Manjinath) ಎಂಟ್ರಿ ಕೊಟ್ಟಿದ್ದಾರೆ. ಅದೆಷ್ಟೋ ಜೀವಗಳಿಗೆ ಮರು ಜೀವ ಕೊಟ್ಟಿರುವ ಸ್ಪೂರ್ತಿಯ ಕಥೆಯನ್ನ ಏಳೆ ಏಳೆಯಾಗಿ ನಟ ರಮೇಶ್ ಅರವಿಂದ್ (Ramesh Aravind) ಬಿಚ್ಚಿಟ್ಟಿದ್ದಾರೆ. ಡಾ. ಮಂಜುನಾಥ್ ಅವರು ಕೂಡ ಸಾಕಷ್ಟು ತೆರೆಮರೆಯ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಸದಾ ನಗಿಸುವ ಸುಧಾ ಬರಗೂರು (Sudha Baragur) ಅವರ ಪತಿಯ ಜೀವ ಉಳಿದಿದ್ದೇ ಡಾ.ಮಂಜುನಾಥ್ ಅವರ ಅರೈಕೆ ಮತ್ತು ಚಿಕಿತ್ಸೆಯಿಂದ ಎಂದು ಅಸಲಿ ಸಂಗತಿಯನ್ನ ಮಾತನಾಡಿದ್ದಾರೆ.

    ವೈದ್ಯೋ ನಾರಾಯಣೋ ಹರಿಃ ಎಂಬುದು ಅಕ್ಷರಶಃ ಸತ್ಯ. ಅದಕ್ಕೆ ತಾಜಾ ಉದಾಹರಣೆ ಪದ್ಮಶ್ರೀ ಡಾ.ಮಂಜುನಾಥ್ ಅವರು ಎಂದರೆ ತಪ್ಪಾಗಲಾರದು. ವೈದ್ಯಕೀಯ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರ. 50 ಲಕ್ಷ ಹೃದಯ ಸಮಸ್ಯೆಯುಳ್ಳ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇನ್ನೂ ಮಾತಿನ ಕಟ್ಟೆಯಲ್ಲಿ ಸುಧಾ ಬರಗೂರು ಕೂತರೆ ಅವರ ಹಾಸ್ಯದಿಂದಾನೇ ಅದೆಷ್ಟೋ ಮನಸ್ಸುಗಳು ನಕ್ಕು ನಕ್ಕು ತಣ್ಣಗಾಗುತ್ತವೆ. ಆದರೆ, ಸದಾ ನಗಿಸುವ ಸುಧಾ ಬರಗೂರು ಜೀವನದಲ್ಲೂ ಅಳುವ ಸನ್ನಿವೇಶಗಳು ಬಂದಿದ್ದವು. ಸುಧಾ ಬರಗೂರು ಅವರ ಪತಿ ಜಯಪ್ರಕಾಶ್ ಬರಗೂರು ಅವರ ಹಾರ್ಟ್‌ನಲ್ಲಿ ಸಮಸ್ಯೆ ಇದ್ದಂತಹ ದಿನ. ಆ ವೇಳೆ ಸುಧಾ ಬರಗೂರು ಅವರ ಪತಿಗೆ ಯಾವುದೇ ತೊಂದರೆಯಾಗದಂತೆ ಕಾಪಾಡಿದ್ದು ಡಾ. ಮಂಜುನಾಥ್.

    ವೀಕೆಂಡ್ ಟೆಂಟ್‌ನಲ್ಲಿ ನಡೆದ ಸತ್ಯವನ್ನೆಲ್ಲಾ ಸುಧಾ ಬರಗೂರು ತಿಳಿಸಿದ್ದಾರೆ. ನಾನು ಇವತ್ತೇನಾದರೂ ಚೆನ್ನಾಗಿದ್ದರೆ ಅದರ ಮೊದಲ ಕ್ರೆಡಿಟ್ ಡಾಕ್ಟರ್‌ಗೆ ಎರಡನೇ ಕ್ರೆಡಿಟ್ ನನ್ನ ಗಂಡನಿಗೆ. ನಾನು ನಗಿಸೋದನ್ನ ಕರ್ನಾಟಕ ಜನತೆ ನೋಡಿದ್ದಾರೆ. ಆದರೆ ಅಳುವ ಸುಧಾರನ್ನ ನೋಡಿ, ಕಣ್ಣೀರು ಒರೆಸುವ ಕೆಲಸ ಮಾಡಿದ್ದರೆ ಅದು ಇವರೇ ಎಂದು ಡಾ.ಮಂಜುನಾಥ್ ಬಗ್ಗೆ ಗೌರವ ಪೂರ್ವಕವಾಗಿ ಮಾತನಾಡಿದ್ದಾರೆ. ಡಾ.ಮಂಜುನಾಥ್ ಅಭಿಮಾನಿ ಸಂಘದ ಅಜೀವ ಸದಸ್ಯೆ ನಾನು. ನನ್ನ ಗಂಡನಿಗೆ ಹಾರ್ಟ್ ಪ್ರಾಬ್ಲಮ್. ಹೌದು, ನನ್ನಂತಹ ಬಾಯಾಳಿನ ಮದುವೆ ಆದ್ಮೇಲೆ ಹಾರ್ಟ್ ಪ್ರಾಬ್ಲಮ್ ಬರಲೇಬೇಕು. 15-16 ವರ್ಷದ ಹಿಂದೆ. ನಂಜನಗೂಡು ದೇವಸ್ಥಾನದಲ್ಲಿ ಇವರು ಬಿದ್ದು ಹೋದ್ರು. ತಕ್ಷಣ ಮಂಜುನಾಥ್ ಸರ್‌ಗೆ ಕರೆ ಮಾಡಿ, ಯಜಮಾನ್ರು ಹೀಗೆ ಬಿದ್ದು ಹೋದ್ರು ಅಂದೆ. ಕರೆದುಕೊಂಡು ಬನ್ನಿ ಅಂದ್ರು. ಕೇವಲ ಹದಿನೈದು ನಿಮಿಷದಲ್ಲಿಯೇ ಐಸಿಯೂ ವಾರ್ಡ್‌ನಲ್ಲಿ ಎಲ್ಲಾ ರೆಡಿಯಾಗಿತ್ತು. ನಾನು ಕಲಾವಿದೆ ಅಂತಲ್ಲ, ಮಂಜುನಾಥ್ ಸರ್ ಹೇಳಿದ್ರು ಅನ್ನೋ ಕಾರಣಕ್ಕೆ. ಇದನ್ನೂ ಓದಿ: ವಾಯುಪಡೆ ಅಧಿಕಾರಿಯಾದ ನಟ ವರುಣ್ ತೇಜ್

    ಡಾಕ್ಟರ್‌ಗೂ ದೇವರಿಗೂ ಕೋಪ ಬರಿಸಬಾರದು. ಯಾಕಂದ್ರೆ, ದೇವರಿಗೆ ಕೋಪ ಬಂದ್ರೆ ಡಾಕ್ಟರ್ ಬಳಿ ಕಳಿಸ್ತಾನೆ. ಡಾಕ್ಟರ್‌ಗೆ ಕೋಪ ಬಂದ್ರೆ ದೇವರ ಬಳಿಯೇ ಕಳುಹಿಸಿ ಬಿಡ್ತಾರೆ. ಶ್ರೀಕ್ಷೇತ್ರ ಧರ್ಮಸ್ಥಳ ದೂರ ಅಲ್ವಾ. ಅದಕ್ಕೆ ಆಗಾಗ ಇಲ್ಲೆ ಇರುವ ಮಂಜುನಾಥ ಸ್ವಾಮಿ ದರ್ಶನ ಮಾಡಿಕೊಂಡು ಬಂದರೆ ನಮ್ಮಮನೆ ಸ್ವಾಮಿ ಖುಷಿಯಾಗಿ ಇರುತ್ತಾರೆ. ಇದು ನನ್ನ ವೈಯಕ್ತಿಕ ಅನುಭವ ಎಂದು ಡಾ.ಮಂಜುನಾಥ್ ಬಗ್ಗೆ ಸುಧಾ ಬರಗೂರು ಹೇಳಿದ್ದಾರೆ.

  • ಆ ಒಂದು ಕ್ಯಾಸೆಟ್‌ನಿಂದ ಪ್ರಭುದೇವ ಭವಿಷ್ಯ ಬದಲಾಯಿಸಿತು

    ಆ ಒಂದು ಕ್ಯಾಸೆಟ್‌ನಿಂದ ಪ್ರಭುದೇವ ಭವಿಷ್ಯ ಬದಲಾಯಿಸಿತು

    ಸಾಧಕನ ಸಾಧನೆಯ ಕಥೆ ಹೇಳುವ ಜನಪ್ರಿಯ Weekend with Ramesh 5 ಶೋನಲ್ಲಿ ತಮ್ಮ ಬದಕು ಬದಲಾದ ಕಥೆಯನ್ನ ಹೇಳಿದ್ದಾರೆ. ಪ್ರಭುದೇವ (Prabhudeva) ಕೈಗೆ ಸಿಕ್ಕ ಆ ಒಂದು ಕ್ಯಾಸೆಟ್‌ನಿಂದ ಅವರ ಭವಿಷ್ಯ ಬದಲಾಗಿದ್ದು, ಹೇಗೆ? ಎಂದು ಹೇಳಿದ್ದಾರೆ.

    ಬಾಲ್ಯದಿಂದಲೇ ನೃತ್ಯ ರಂಗದಲ್ಲಿ ಪ್ರಭುದೇವಗೆ ಒಲವಿತ್ತು. ಹಾಗಾಗಿ ಭರತನಾಟ್ಯ ಸೇರಿದಂತೆ ಹಲವು ಶೈಲಿಯ ನೃತ್ಯವನ್ನ ನಟ ಕರಗತ ಮಾಡಿಕೊಂಡರು. ತಂದೆಯ ಹಾದಿಯಲ್ಲಿಯೇ ಪ್ರಭುದೇವ ಸಾಗಿದ್ದರು. ಪ್ರಭುದೇವ ನೃತ್ಯ ಕಲಿಯುವಾಗ ಅವರಿಗೆ ಥ್ರಿಲ್ಲರ್ ಹೆಸರಿನ ಕ್ಯಾಸೆಟ್ ಸಿಕ್ಕಿತ್ತು. ವಿಶ್ವಪ್ರಸಿದ್ಧ ಡ್ಯಾನ್ಸರ್ ಮೈಕಲ್ ಜಾಕ್ಸನ್ ಅವರ 1982ರ ಸೂಪರ್ ಹಿಟ್ ಆಲ್ಬಂ ಥ್ರಿಲ್ಲರ್. ಬೀಟ್ ಇಟ್ ಸೇರಿದಂತೆ ಹಲವು ಹಾಡುಗಳು ಆ ಆಲ್ಬಂನಲ್ಲಿದ್ದವು. ಪ್ರಭುದೇವ ಅವರು ಆ ಆಲ್ಬಂನ ವಿಸಿಆರ್ ಕ್ಯಾಸೆಟ್ ಅನ್ನು ತೆಗೆದುಕೊಂಡು ಅದನ್ನು ನೋಡಲು ವಿಸಿಆರ್ ಅನ್ನು ಬಾಡಿಗೆ ತಂದಿದ್ದರಂತೆ. ಆ ಕ್ಯಾಸೆಟ್ ನೋಡುತ್ತಲೇ ನನಗೆ ರೋಮಾಂಚನವಾಗಿ ಬಿಟ್ಟಿತು. ನಾನು ಹೊಸದೇನನ್ನೋ ನೋಡಿದೆ. ಅಲ್ಲಿಯವರೆಗೆ ನಾನು ಆ ರೀತಿಯ ಡ್ಯಾನ್ಸ್ ನೋಡಿರಲೇ ಇಲ್ಲ. ಮೈಕಲ್ ಜಾಕ್ಸನ್ ಡ್ಯಾನ್ಸ್ ಮಾಡಿದ ರೀತಿ ನನ್ನನ್ನು ಬೆರಗಾಗಿಸಿತು ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ ಭಟ್- ರಶ್ಮಿಕಾ ಮಂದಣ್ಣ

    ಅಂದು ಮೈಕಲ್ ಜಾಕ್ಸನ್‌ರ ಥ್ರಿಲ್ಲರ್ ನೋಡಿದ ಬಳಿಕ ಆ ಮಾದರಿಯ ಡ್ಯಾನ್ಸ್ ನನ್ನನ್ನು ಕಾಡಲು ಆರಂಭಿಸಿತು. ನಾನು ಎಲ್ಲಿದ್ದರು ಏನು ಮಾಡುತ್ತಿದ್ದರೂ ಡ್ಯಾನ್ಸ್ ಮಾಡಲು ಆರಂಭಿಸಿದೆ. ಒಂದು ರೀತಿ ಹುಚ್ಚನಾಗಿಬಿಟ್ಟಿದ್ದೆ, ನೃತ್ಯ ಕಲಿಯುವಾಗಲು ಮಧ್ಯದಲ್ಲಿ ಒಂದೊಂದು ಬ್ರೇಕ್ ಡ್ಯಾನ್ಸ್ ಸ್ಟೆಪ್ಸ್ ಸೇರಿಸಿಬಿಡುತ್ತಿದ್ದ, ನನ್ನ ಗುರುಗಳು ನನ್ನನ್ನು ಬೈಯ್ಯುತ್ತಿದ್ದರೂ ಆದರೂ ಆ ಅಭ್ಯಾಸ ನನ್ನಿಂದ ಹೋಗುತ್ತಿರಲಿಲ್ಲ ಎಂದ ಪ್ರಭುದೇವ, ಮೈಕಲ್ ಜಾಕ್ಸನ್ ನನ್ನ ಮೇಲೆ ಬೀರಿದ ಪ್ರಭಾವ ಬಹಳ ದೊಡ್ಡದು ಎಂದು ಪ್ರಭುದೇವ ಸ್ಮರಿಸಿದರು.

    ಶೋನಲ್ಲಿ ಹಲವು ಬಾರಿ ಅವರು ಮೈಕಲ್ ಜಾಕ್ಸನ್ ಅವರನ್ನು ನೆನಪು ಮಾಡಿಕೊಂಡರು ಪ್ರಭುದೇವ. ಮೈಕಲ್ ಜಾಕ್ಸನ್ (Michael Jackson) ಒಮ್ಮೆ ಮುಂಬೈಗೆ ಬಂದಾಗ ನಿರ್ಮಾಪಕರೊಬ್ಬರ ಸಹಾಯದಿಂದ ತಾವು ಅವರನ್ನು ಭೇಟಿಯಾಗಿದ್ದಾಗಿಯೂ, ಅಂದು ಅವರು ನನಗೆ ಏನೋ ಹೇಳಿದರು ಆದರೆ ಅದು ನನಗೆ ನೆನಪಿಲ್ಲ ಏಕೆಂದರೆ ಅವರನ್ನು ನೋಡಿ ನಾನು ಶಾಕ್‌ನಲ್ಲಿದ್ದೆ ಅವರನ್ನೇ ನೋಡುತ್ತಿದ್ದೆ ಎಂದಿದ್ದಾರೆ. ಶೋನ ಕೊನೆಯಲ್ಲಿ ನಿಮ್ಮ ಈ ಸಾಧನೆಗೆ ಮುಖ್ಯ ಕಾರಣಕರ್ತರು ಯಾರೆಂದಾಗ ತಮಗೆ ನೃತ್ಯ ಹೇಳಿಕೊಟ್ಟ ಧರ್ಮರಾಜ್ ಮಾಸ್ಟರ್, ಲಕ್ಷ್ಮಿನಾರಾಯಣ ಮಾಸ್ಟರ್ ಎಂದ ಪ್ರಭುದೇವ, ಮೈಕಲ್ ಜಾಕ್ಸನ್ ಸಹ ತಮಗೆ ಗುರುವೇ ಎಂದು  ಪ್ರಭುದೇವ ಮಾತನಾಡಿದ್ದಾರೆ.

  • ಅಪ್ಪ ಅಂದು ಬೆನ್ನ ಮೇಲೆ ಕೊಟ್ಟ ಆ ಸಣ್ಣ ಏಟು ನನ್ನನ್ನು ಬದಲಾಯಿಸಿತು: ಪ್ರಭುದೇವ

    ಅಪ್ಪ ಅಂದು ಬೆನ್ನ ಮೇಲೆ ಕೊಟ್ಟ ಆ ಸಣ್ಣ ಏಟು ನನ್ನನ್ನು ಬದಲಾಯಿಸಿತು: ಪ್ರಭುದೇವ

    ಟಿವಿ ಲೋಕದ Weekend With Ramesh 5 ಕಾರ್ಯಕ್ರಮದಲ್ಲಿ ಡ್ಯಾನ್ಸಿಂಗ್ ಲೆಜೆಂಡ್ ಪ್ರಭುದೇವ (Prabhudeva) ಭಾಗವಹಿಸಿದ್ದಾರೆ. ತಮ್ಮ ಜೀವನದ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಪಿಯುಸಿ ಫೇಲ್ ಆದಾಗ, ಪ್ರಭುದೇವ ಅವರ ತಂದೆ ಮೂಗೂರು ಸುಂದರ್ (Mugur Sundar) ಮನಸ್ಥಿತಿ ಹೇಗಿತ್ತು? ತಂದೆ ಮಾಡಿದ ಕಾರ್ಯದಿಂದ ತಮಗೆ ಅದ್ಯಾವ ರೀತಿ ಪ್ರಭಾವ ಬೀರಿತು ಎಂಬುದನ್ನ ಪ್ರಭುದೇವ ಹಂಚಿಕೊಂಡಿದ್ದಾರೆ.

    ವೀಕೆಂಡ್ ಟೆಂಟ್‌ನಲ್ಲಿ ರಮ್ಯಾ ಬಳಿಕ ಪ್ರಭುದೇವ 2ನೇ ಅತಿಥಿಯಾಗಿ ಭಾಗಿಯಾಗಿದ್ದಾರೆ. ಪ್ರಭುದೇವ ಅವರ ಸ್ಪಷ್ಟ ಕನ್ನಡಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಡ್ಯಾನ್ಸ್ ಅನ್ನೇ ಕೆರಿಯರ್ ಆಗಿ ಬದಲಾಯಿಸಿಕೊಂಡು ನಟ, ನಿರ್ದೇಶಕ, ಕೊರಿಯೋಗ್ರಾಫರ್ ಬೆಳೆದಿದ್ದು ಹೇಗೆ ಎಂಬುದನ್ನ ಪ್ರಭುದೇವ ಹೇಳಿದ್ದಾರೆ. ಜೊತೆಗೆ ತಂದೆಯ ಬೆಂಬಲದ ಬಗ್ಗೆ ಅಚ್ಚರಿಯ ಮಾಹಿತಿ ತಿಳಿಸಿದ್ದಾರೆ. ಪ್ರತಿ ವ್ಯಕ್ತಿಯು ಕೂಡ ಸಾಧನೆಯ ಹಾದಿಗೆ ಕಾಲಿಡಲು ಅವರ ಕುಟುಂಬದವರು ನೀಡುವ ಬೆಂಬಲ ಬಹಳ ಮುಖ್ಯವಾಗುತ್ತದೆ. ಪ್ರಭುದೇವಗೆ ಅಂಥಹಾ ಬೆಂಬಲ ದೊರಕಿದ್ದು,ಅವರ ತಂದೆ ಮೂಗುರು ಸುಂದರ್‌ ಅವರಿಂದಲೇ. ಅವರು ಮಾಡಿದ್ದು ಬಹಳ ಸರಳವಾದ ಕಾರ್ಯವಷ್ಟೆ ಆದರೆ ಅದು ಪ್ರಭುದೇವ ಜೀವನದಲ್ಲಿ ಬಹಳ ಮಹತ್ವದ ಕಾರ್ಯವಾಯಿತು. ಅದರ ಬಗ್ಗೆ ವೀಕೆಂಡ್ ವಿತ್ ರಮೇಶ್‌ನಲ್ಲಿ ಪ್ರಭುದೇವ ಮಾತನಾಡಿದ್ದಾರೆ. ಇದನ್ನೂ ಓದಿ: ‘ಅಭಿರಾಮಚಂದ್ರ’ನಿಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್

    ಡ್ಯಾನ್ಸ್‌ನಲ್ಲಿ ಚಿಕ್ಕಂದಿನಿಂದಲೂ ಅಪ್ರತಿಮರಾಗಿದ್ದ ಪ್ರಭುದೇವ ಅವರು ಓದಿನಲ್ಲಿ ಮೊದಲಿನಿಂದಲೂ ಬಹಳ ಹಿಂದೆ ಇದರಂತೆ. ಅದರಲ್ಲಿಯೂ ರಸಾಯನಶಾಸ್ತ್ರವೆಂದರೆ ಪ್ರಭುದೇವಗೆ ಭಯವೋ ಭಯ. ಹೀಗಿರುವಾಗ ಪಿಯುಸಿಯಲ್ಲಿ ಪ್ರಭುದೇವ ಫೇಲ್ ಆಗಿಬಿಡುತ್ತಾರೆ. ಅಂದು ಬಹಳ ಭಯದಲ್ಲಿದ್ದ ಪ್ರಭುದೇವ ಮನೆಗೆ ಬಂದರೆ ಅಪ್ಪ ಮನೆಯಲ್ಲಿಯೇ ಇದ್ದಾರೆ. ಫೇಲ್ ಆಗಿ ಭಯದಲ್ಲಿ ರೂಂನಲ್ಲಿ ಕೂತಿದ್ದರಂತೆ ಪ್ರಭು, ಮಗ ಫೇಲ್ ಆಗಿದ್ದಾನೆಂದು ತಿಳಿದ ಮೂಗೂರು ಸುಂದರ್ ಅವರು ನಿಧಾನಕ್ಕೆ ಪ್ರಭು ಇದ್ದ ರೂಮಿಗೆ ಬಂದಿದ್ದಾರೆ. ಏನಾಯ್ತು ಎಂದು ಕೇಳಿದಾಗ ಫೇಲ್ ಆಗಿದ್ದೇನೆ ಎಂದರಂತೆ. ಆಗ ಮೂಗುರು ಸುಂದರ್ ಅವರು ಪ್ರಭುದೇವ ಬೆನ್ನನ್ನು ಎರಡು ಬಾರಿ ಮೆತ್ತಗೆ ತಟ್ಟಿ, ಪರವಾಗಿಲ್ಲ ನಿನಗೆ ಏನು ಇಷ್ಟವಾಗುತ್ತದೆಯೋ ಅದನ್ನು ಮಾಡು ಎಂದರಂತೆ.

    ಆ ಕ್ಷಣ ಪ್ರಭುದೇವಗೆ ಅಳು ಬಂದುಬಿಟ್ಟಿತಂತೆ, ಆದರೆ ಅಪ್ಪ ಅಂದು ಬೆನ್ನ ಮೇಲೆ ಕೊಟ್ಟ ಆ ಸಣ್ಣ ಏಟು ನನ್ನನ್ನು ಬದಲಾಯಿಸಿತು ಎಂದಿದ್ದಾರೆ ಪ್ರಭುದೇವ. ಅದಾದ ಬಳಿಕ ನಾನು ಬದಲಾಗಿಬಿಟ್ಟೆ, ಅಪ್ಪ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಲೇ ಬೇಕು ಎಂಬ ಹಠಕ್ಕೆ ಬಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಅಂದು ಅಪ್ಪ ಬೆನ್ನು ತಟ್ಟಿದ್ದರಿಂದಲೇ ನಾನು ಇಂದಿನ ಪ್ರಭುದೇವ ಆಗಲು ಸಾಧ್ಯವಾಗಿದ್ದು ಎಂದಿದ್ದಾರೆ ಪ್ರಭು.