Tag: ವಿಷ್ಣುವರ್ದನ್

  • ಕನ್ನಡ ಚಿತ್ರರಂಗ ಇರುವವರೆಗೂ ವಿಷ್ಣು ಸರ್ ಜೀವಂತವಾಗಿ ಇರುತ್ತಾರೆ: ಕಿಚ್ಚ

    ಕನ್ನಡ ಚಿತ್ರರಂಗ ಇರುವವರೆಗೂ ವಿಷ್ಣು ಸರ್ ಜೀವಂತವಾಗಿ ಇರುತ್ತಾರೆ: ಕಿಚ್ಚ

    ಬೆಂಗಳೂರು: ಕನ್ನಡ ಚಿತ್ರರಂಗ ಇರುವವರೆಗೂ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಜೀವಂತವಾಗಿ ಇರುತ್ತಾರೆ ಎಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.

    ಕಿಚ್ಚ ಸದಾ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿ ಇರುತ್ತಾರೆ. ಅಭಿಮಾನಿಗಳ ಜೊತೆ ಚಾಟ್ ಮಾಡುತ್ತಾರೆ. ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿರುತ್ತಾರೆ. ಈಗ ಕಳೆದ ಮೇ 23ಕ್ಕೆ ಡಾ. ವಿಷ್ಣುವರ್ಧನ್ ಅವರು ಬಣ್ಣ ಹಚ್ಚಿ 48 ವರ್ಷಗಳು ಕಳೆದಿವೆ. ಈ ವಿಚಾರವಾಗಿಯೂ ಕೂಡ ಕಿಚ್ಚ ಟ್ವೀಟ್ ಮಾಡಿದ್ದಾರೆ.

    ಈ ಸುಂದರವಾದ ಕ್ಷಣಗಳನ್ನು ಸೆರೆಹಿಡಿಯಲು ಆ ಕ್ಯಾಮೆರಗಳು ಅದೃಷ್ಟ ಮಾಡಿದ್ದವು. ಅವುಗಳಿಗೆ ಅಂದು ಗೊತ್ತಿರಲಿಲ್ಲ ಇಂದು ನಾವು ಸೆರೆಹಿಡಿಯುತ್ತಿರುವ ವ್ಯಕ್ತಿ ಮುಂದೇ ಒಂದು ದಿನ ಲೆಜೆಂಡ್ ಆಗಿ ಬೆಳೆಯುತ್ತಾರೆ ಎಂದು. ನಾಗರಹಾವು ಸಿನಿಮಾ, ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಹಾಗೂ ವಿಷ್ಣು ಸರ್ ಅವರು ಕನ್ನಡ ಚಿತ್ರರಂಗ ಇರುವವರೆಗೂ ಜೀವಂತವಾಗಿ ಇರುತ್ತಾರೆ ಎಂದು ಕಿಚ್ಚ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

    ಈ ವಿಚಾರವಾಗಿ ವಿಷ್ಣುವರ್ಧನ್ ಅವರ ಟ್ವಿಟ್ಟರ್ ಫ್ಯಾನ್ಸ್ ಪೇಜ್ ಒಂದು ಯಾಜಮಾನರು ನಾಗರಹಾವು ಚಿತ್ರಕ್ಕಾಗಿ ಬಣ್ಣಹಚ್ಚಿ ಕ್ಯಾಮೆರಾ ಎದುರು ನಿಂತಿದಕ್ಕೆ ಇಂದಿಗೆ 48 ವರ್ಷ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಿಚ್ಚ ರೀಟ್ವೀಟ್ ಮಾಡಿದ್ದಾರೆ. ಇದಕ್ಕೆ ಸಂತಸ ವ್ಯಕ್ತಪಡಿಸಿರುವ ಕಿಚ್ಚ ಮತ್ತು ವಿಷ್ಣುವರ್ದನ್ ಅಭಿಮಾನಿಗಳು, ನೀವು ಕೂಡ ದಾದನ ಹಾಗೇ ಅಣ್ಣ ಎಂದು ಕಮೆಂಟ್ ಮಾಡಿದ್ದಾರೆ.

    ನಾಗರಹಾವು ಚಿತ್ರ 1972ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಮೊದಲ ಬಾರಿಗೆ ವಿಷ್ಣುವರ್ದನ್ ಅವರು ನಾಯಕ ನಟನಾಗಿ ಅಭಿನಯಿಸಿದ್ದರು. ಈ ಸಿನಿಮಾವನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡಿದ್ದು, ಎನ್ ವೀರಸ್ವಾಮಿ ಅವರು ನಿರ್ಮಾಣ ಮಾಡಿದ್ದರು. ಓರ್ವ ವಿದ್ಯಾರ್ಥಿ ಮತ್ತು ಶಿಕ್ಷರ ನಡುವಿನ ಬಾಂಧವ್ಯವನ್ನು ಈ ಸಿನಿಮಾದಲ್ಲಿ ಚೆನ್ನಾಗಿ ತೋರಿಸಲಾಗಿತ್ತು. ವಿಜಯ್ ಭಾಸ್ಕರ್ ಅವರ ಸಂಗೀತದಲ್ಲಿ ಮೂಡಿ ಬಂದಿದ್ದ ಹಾವಿನ ದ್ವೇಷ 12 ವರುಷ ಎಂಬ ಹಾಡು, ಚಿಗರು ಮೀಸೆ ಹುಡುಗ ರಾಮಾಚಾರಿಯನ್ನು ಕನ್ನಡಿಗರು ಒಪ್ಪಿ ಅಪ್ಪಿ ಮುದ್ದಾಡಿದ್ದರು.

    ಸುದೀಪ್ ಅವರು ವಿಷ್ಣವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಸದ್ಯ ಕಿಚ್ಚನ `ಕೋಟಿಗೊಬ್ಬ-3′ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಕೊರೊನಾ ವೈರಸ್ ಲಾಕ್‍ಡೌನ್ ನಿಂದ ಮುಂದಕ್ಕೆ ಹೋಗಿದೆ. ಈ ಸಿನಿಮಾದ ನಂತರ ಸುದೀಪ್ ಅವರು ಅನೂಪ್ ಭಂಡಾರಿ ನಿರ್ದೇಶನದ `ಫ್ಯಾಂಟಮ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ವಿಕ್ರಾಂತ್ ರೋಣ ಎಂಬ ಖಡಕ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ.