Tag: ವಿಶ್ವ ದಾಖಲೆ

  • 328 ದಿನ ಬಾಹ್ಯಾಕಾಶದಲ್ಲಿದ್ದ ಗಗನಯಾತ್ರಿಯನ್ನು ಅಪ್ಪಿ ಮುದ್ದಾಡಿದ ಶ್ವಾನ – ವಿಡಿಯೋ

    328 ದಿನ ಬಾಹ್ಯಾಕಾಶದಲ್ಲಿದ್ದ ಗಗನಯಾತ್ರಿಯನ್ನು ಅಪ್ಪಿ ಮುದ್ದಾಡಿದ ಶ್ವಾನ – ವಿಡಿಯೋ

    ವಾಷಿಂಗ್ಟನ್: 328 ದಿನ ಬಾಹ್ಯಾಕಾಶದಲ್ಲಿ ಇದ್ದು ಬಂದ ನಾಸಾದ ಮಹಿಳಾ ಗಗನಯಾತ್ರಿಯನ್ನು ಶ್ವಾನ ಅಪ್ಪಿ ಮುದ್ದಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ನಾಸಾದ ಗಗನಯಾತ್ರಿ ಕ್ರಿಸ್ಟನ್ ಕೋಚ್ 328 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಇದ್ದು, ಫೆಬ್ರವರಿ 6 ರಂದು ವಾಪಸ್ ಬಂದಿದ್ದು ಮನೆಗೆ ತೆರಳಿದ್ದಾರೆ. ಮನೆಗೆ ಹೋದಾಗ ಆಕೆ ಪ್ರೀತಿಯ ನಾಯಿ ಅವರನ್ನು ಬರಮಾಡಿಕೊಂಡ ರೀತಿಯನ್ನು ವಿಡಿಯೋ ಮಾಡಿ ಕೋಚ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಶ್ವಾನದ ಪ್ರೀತಿಯನ್ನು ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

    ಕೋಚ್ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ 30 ಸೆಕೆಂಡಿನ ವಿಡಿಯೋದಲ್ಲಿ, ಕೋಚ್ ತನ್ನ ಪತಿಯ ಜೊತೆ ಬರುವುದನ್ನು ಗಮನಿಸಿದ ಶ್ವಾನ ಅವರು ಮನೆಯೊಳಗೆ ಬರುವ ಮುಂಚೆಯೇ ಬಾಗಿಲ ಬಳಿ ಬಹಳ ಉತ್ಸಾಹದಿಂದ ಕಾಯುತ್ತಿರುತ್ತದೆ. ಬಾಗಿಲು ತೆರೆದು ಒಳ ಬಂದ ಕೋಚ್ ಅವರನ್ನು ತುಂಬ ಖುಷಿಯಾಗಿ ಅಪ್ಪಿಕೊಂಡು ಮುದ್ದಾಡುತ್ತದೆ. ವಿಡಿಯೋದಲ್ಲಿ ಬಹಳ ದಿನದ ನಂತರ ಕೋಚ್ ಅವರನ್ನು ಕಂಡ ಶ್ವಾನದ ಸಂತೋಷವನ್ನು ನಾವು ಕಾಣಬಹುದು.

    ಕ್ರಿಸ್ಟನ್ ಕೋಚ್ ಅವರು ಈ ಶ್ವಾನವನ್ನು ಮಾನವೀಯ ಸಮಾಜದಿಂದ ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಕೋಚ್ ಅವರು, ಯಾರು ಹೆಚ್ಚು ಉತ್ಸುಕರಾಗಿದ್ದರೋ ಎಂದು ನನಗೆ ಗೊತ್ತಿಲ್ಲ. ಒಂದು ವರ್ಷದ ನಂತರ ಅವಳು ನನ್ನನ್ನು ನೆನಪಿಸಿಕೊಂಡಿದ್ದಕ್ಕೆ ಸಂತೋಷವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ನಾಸಾದಲ್ಲಿ 2013 ರಿಂದ ಗಗನಯಾತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕ್ರಿಸ್ಟನ್ ಕೋಚ್, 2019 ಮಾರ್ಚ್ 14 ರಂದು ಬಾಹ್ಯಕಾಶಕ್ಕೆ ಹೋಗಿ ಸತತ 328 ದಿನಗಳ ನಂತರ ಅಂದರೆ ಫೆಬ್ರವರಿ 6 ರಂದು ಭೂಮಿಗೆ ವಾಪಸ್ ಆಗಿದ್ದರು. ಈ ಮೂಲಕ ಅತೀ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಇದ್ದು ಬಂದ ಮಹಿಳೆ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

  • ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿಭಾಯ್ – ವಿಶ್ವ ದಾಖಲೆ ನಿರ್ಮಿಸಿದ ಯಶ್ ಬರ್ತ್ ಡೇ

    ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿಭಾಯ್ – ವಿಶ್ವ ದಾಖಲೆ ನಿರ್ಮಿಸಿದ ಯಶ್ ಬರ್ತ್ ಡೇ

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯಶ್ ಅವರ 34ನೇ ಹುಟ್ಟುಹಬ್ಬ ವಿಶ್ವ ದಾಖಲೆ ಪಟ್ಟಿಗೆ ಸೇರಿದೆ.

    ಬೆಂಗಳೂರಿನ ನಾಯಂಡಹಳ್ಳಿ ಸಿಗ್ನಲ್ ಬಳಿ ನಂದಿ ಲಿಂಕ್ ಗ್ರೌಂಡ್‍ನಲ್ಲಿ ನಡೆದ ಯಶ್ ಬರ್ತ್ ಡೇಗೆ 5000 ಸಾವಿರ ಕೆ.ಜಿ ಕೇಕ್ ತಯಾರು ಮಾಡಲಾಗಿತ್ತು. ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಆಗಮಿಸಿದ ನಟ ಯಶ್ 5000 ಕೆ.ಜಿ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಅಲಹಬಾದ್‍ನಿಂದ ಆಗಮಿಸಿದ ವರ್ಲ್ಡ್ ರೆಕಾರ್ಡ್ ಕಮಿಟಿ ಅಧ್ಯಕ್ಷ ಪವನ್ ಸಾಲಂಗಿ ಐದು ಸಾವಿರ ಕೆಜಿ ಕೇಕ್ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಮಾತಾಡಿದ ಅಧ್ಯಕ್ಷ ಪವನ್ ಸಾಲಂಗಿ, ಇದು ಸೌತ್ ಇಂಡಿಯಾದಲ್ಲೇ ಮೊದಲು ಮತ್ತು ಇಲ್ಲಿಯವರೆಗೆ ಯಾವುದೇ ಸೆಲೆಬ್ರಿಟಿ ಐದು ಸಾವಿರ ಕೆಜಿ ಕೇಕ್ ಕಟ್ ಮಾಡಿ ಬರ್ತ್ ಡೇ ಆಚರಿಸಿಕೊಂಡಿಲ್ಲ. ಹಾಗಾಗಿ ಇದು ವಿಶ್ವ ದಾಖಲೆ ಪಟ್ಟಿಗೆ ಸೇರಲಿದೆ ಎಂದರು.

    ಇನ್ನೂ ಹುಟ್ಟುಹಬ್ಬಕ್ಕೆ 216 ಅಡಿ ಕಟೌಟ್ ಕೂಡ ನಿರ್ಮಿಸಿರುವುದು ಕೂಡ ದಾಖಲೆಯಾಗಿದೆ. ನಂದಿ ಲಿಂಕ್ ಗ್ರೌಂಡ್‍ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ಯಶ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು.

     

    ಈ ಹಿಂದೆ ತಮಿಳುನಾಡಿನಲ್ಲಿ ಅಭಿಮಾನಿಗಳು ನಟ ಸೂರ್ಯ ಅವರ ವಿಶ್ವದ ಅತೀ ದೊಡ್ಡ ಕಟೌಟ್ ನಿರ್ಮಿಸಿದ್ದರು. ಸೂರ್ಯ ಅವರ ಕಟೌಟ್ 215 ಅಡಿ ಎತ್ತರವಿತ್ತು. ಈಗ ಯಶ್ ಅಭಿಮಾನಿಗಳು 216 ಅಡಿ ಎತ್ತರದ ಕಟೌಟ್ ನಿರ್ಮಿಸಿ ಸೂರ್ಯ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ.

  • ಸಚಿನ್ ಅಪರೂಪದ ದಾಖಲೆಯನ್ನ ಮುರಿಯುತ್ತಾರ ರೋಹಿತ್ ಶರ್ಮಾ?

    ಸಚಿನ್ ಅಪರೂಪದ ದಾಖಲೆಯನ್ನ ಮುರಿಯುತ್ತಾರ ರೋಹಿತ್ ಶರ್ಮಾ?

    ಮುಂಬೈ: 2019ರ ವಿಶ್ವಕಪ್ ಕ್ರಿಕೆಟ್‍ನ ಎರಡು ದಿನಗಳ ಅವಧಿಯಲ್ಲಿ ಎರಡು ಪ್ರಮುಖ ವಿಶ್ವ ದಾಖಲೆಗಳನ್ನು ಮುರಿಯಲಾಗಿತ್ತು. ಸದ್ಯ ಸಚಿನ್ ವಿಶ್ವಕಪ್ ದಾಖಲೆಯನ್ನು ಮುರಿಯುವ ಅವಕಾಶವನ್ನು ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹೊಂದಿದ್ದಾರೆ.

    ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಪಿಚ್ ಬ್ಯಾಟ್ಸ್ ಮನ್ ಗಳಿಗೆ ಹೆಚ್ಚು ಅನುಕೂಲವಾಗಿದ್ದು, ರನ್‍ಗಳು ಹೆಚ್ಚು ಹರಿದು ಬರುತ್ತಿದೆ. ಪರಿಣಾಮ 2003ರ ವಿಶ್ವಕಪ್ ಟೂರ್ನಿಯಲ್ಲಿ 673 ರನ್ ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಯಾರು ಮುರಿಯಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.

    2003ರ ಬಳಿಕ ಮೂರು ವಿಶ್ವಕಪ್ ಟೂರ್ನಿ ನಡೆದರೂ ಈ ದಾಖಲೆಯನ್ನು ಸರಿಗಟ್ಟಿಲ್ಲ. ಈ ಬಾರಿಯ ಟೂರ್ನಿಯಲ್ಲಿ ಆಸೀಸ್‍ನ ಡೇವಿಡ್ ವಾರ್ನರ್ 447 ರನ್ ಗಳಿಸಿ ಟಾಪ್ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಆ ಬಳಿಕ ಶಕಿಬ್ ಅಲ್ ಹ¸ನ್À 425, ಜೋ ರೂಟ್ 424 ರನ್ ಆರೋನ್ ಫಿಂಚ್ 396 ಹಾಗೂ 5ನೇ ಸ್ಥಾನದಲ್ಲಿ 319 ರನ್ ಗಳಿಸಿರುವ ರೋಹಿತ್ ಶರ್ಮಾ ಇದ್ದಾರೆ. ಇದೇ ವೇಗದಲ್ಲಿ ನಾಲ್ವರು ಬ್ಯಾಟ್ಸ್ ಮನ್‍ಗಳು ಬ್ಯಾಟ್ಸ್ ಬೀಸಿದರೆ ಸಚಿನ್ ದಾಖಲೆ ಮುರಿಯುವ ಸಾಧ್ಯತೆ ಹೆಚ್ಚಿದೆ.

    6 ಪಂದ್ಯಗಳಿಂದ 89.40 ಸರಾಸರಿಯಲ್ಲಿ ವಾರ್ನರ್ 447 ರನ್ ಗಳಿಸಿದ್ದು, ಇನ್ನು 3 ಲೀಗ್ ಪಂದ್ಯಗಳನ್ನು ಆಡುವ ಅವಕಾಶ ಹೊಂದಿದ್ದು, ಸಚಿನ್ ದಾಖಲೆ ಮುರಿಯುವ ಅವಕಾಶ ಹೊಂದಿದ್ದಾರೆ. ಆದರೆ ಭಾರತ ರೋಹಿತ್ ಶರ್ಮಾ 159.50 ಸರಾಸರಿಯಲ್ಲಿ 319 ರನ್ ಗಳಿಸಿದ್ದು, ಇದೇ ವೇಗದಲ್ಲಿ ಬ್ಯಾಟಿಂಗ್ ನಡೆಸಿದರೆ 800 ಪ್ಲಸ್ ಗಳಿಸುವ ಅವಕಾಶ ಇದೆ.

    ಅಂದಹಾಗೇ ಜೂನ್ 18ರಂದು ಇಂಗ್ಲೆಂಡ್ ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಬೌಲರ್ ರಶಿದ್ ಖಾನ್ 9 ಓವರ್ ಗಳಲ್ಲಿ 110 ರನ್ ನೀಡಿ ಕೆಟ್ಟ ದಾಖಲೆಯನ್ನು ನಿರ್ಮಿಸಿದ್ದರು. ಆ ಬಳಿಕ ನಡೆದ ಆಸ್ಟ್ರೇಲಿಯಾ, ಬಾಂಗ್ಲಾದೇಶದ ನಡುವಿನ ಪಂದ್ಯದಲ್ಲಿ ಇತ್ತಂಡಗಳು 714 ರನ್ ಸಿಡಿಸಿ ದಾಖಲೆ ನಿರ್ಮಿಸಿದ್ದವು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಆಸೀಸ್ 5 ವಿಕೆಟ್ ಕಳೆದುಕೊಂಡು 381 ರನ್ ಗಳಿಸಿದ್ದರೆ, ಬಾಂಗ್ಲಾ 8 ವಿಕೆಟ್ ನಷ್ಟಕ್ಕೆ 333 ರನ್ ಗಳಿಸಿ ಸೋಲುಂಡಿತ್ತು.

    2003ರ ಟೂರ್ನಿಯಲ್ಲಿ ಸೂಪರ್ ಸಿಕ್ಸ್ ಸೇರಿಸಲಾಗಿತ್ತು. ಲೀಗ್ ನಲ್ಲಿ ಆಯ್ಕೆಯಾದ ಟಾಪ್ 6 ತಂಡಗಳು ಮತ್ತೆ ಆಡಬೇಕಿತ್ತು. ಇದರಲ್ಲಿನ ಟಾಪ್ 4 ತಂಡಗಳು ಸೆಮಿಫೈನಲ್ ಗೆ ಆಯ್ಕೆಯಾಗಿದ್ದವು. ನಂತರದ ವಿಶ್ವಕಪ್ ಪಂದ್ಯಗಳಲ್ಲಿ ಸೂಪರ್ ಸಿಕ್ಸ್ ಕೈಬಿಡಲಾಗಿತ್ತು. ಸಚಿನ್ ತೆಂಡೂಲ್ಕರ್ 11 ಪಂದ್ಯಗಳ 11 ಇನ್ನಿಂಗ್ಸ್ ನಲ್ಲಿ 61.18 ಸರಾಸರಿಯಲ್ಲಿ 673 ರನ್ ಹೊಡೆದಿದ್ದರು. 89.25 ಸ್ಟ್ರೈಕ್ ರೇಟ್‍ನಲ್ಲಿ 6 ಅರ್ಧಶತಕ ಒಂದು ಶತಕವನ್ನು ಸಚಿನ್ ಸಿಡಿಸಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಒಂದು ದಿನಕ್ಕೆ 1 ಸಾವಿರ ಜನಕ್ಕೆ ಕೈಯಾರೆ ಊಟ ತಿನ್ನಿಸಿ ವ್ಯಕ್ತಿಯಿಂದ ವಿಶ್ವ ದಾಖಲೆ

    ಒಂದು ದಿನಕ್ಕೆ 1 ಸಾವಿರ ಜನಕ್ಕೆ ಕೈಯಾರೆ ಊಟ ತಿನ್ನಿಸಿ ವ್ಯಕ್ತಿಯಿಂದ ವಿಶ್ವ ದಾಖಲೆ

    ಹೈದರಾಬಾದ್: ವ್ಯಕ್ತಿಯೊಬ್ಬರು ತನ್ನ ಕೈಯಾರೆ ದಿನಕ್ಕೆ 1 ಸಾವಿರಕ್ಕೂ ಅಧಿಕ ಜನಕ್ಕೆ ಊಟ ತಿನ್ನಿಸಿ ವಿಶ್ವ ದಾಖಲೆ ಮಾಡಿದ್ದಾರೆ.

    ಹೈದರಾಬಾದ್ ಮೂಲದ ಸರ್ಕಾರೇತರ ಸಂಸ್ಥೆ “ಸರ್ವ್ ನೀಡಿ” ಸ್ಥಾಪಕ ಗೌತಮ್ ಕುಮಾರ್ ಒಂದೇ ದಿನದಲ್ಲಿ 1 ಸಾವಿರಕ್ಕೂ ಅಧಿಕ ಜನಕ್ಕೆ ಊಟ ತಿನ್ನಿಸಿ ಯೂನಿರ್ವಸಲ್ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲೆ ಮಾಡಿದ್ದಾರೆ.

    ಗೌತಮ್ ಭಾನುವಾರ ಮೂರು ಸ್ಥಳಗಳಲ್ಲಿ 1,000ಕ್ಕೂ ಹೆಚ್ಚು ಜನರಿಗೆ ಊಟ ತಿನ್ನಿಸಿದ್ದಾರೆ. ಗೌತಮ್ ಮೊದಲು ಗಾಂಧಿ ಆಸ್ಪತ್ರೆ, ರಾಜೇಂದ್ರ ನಗರ ಹಾಗೂ ಚೌತುಪಾಲ್‍ನ ಅಮ್ಮ-ನಾನಾ ವೃದ್ಧಶ್ರಮದಲ್ಲಿ ಇದ್ದ ಜನರಿಗೆ ಊಟ ಮಾಡಿಸಿದ್ದಾರೆ. ಯೂನಿರ್ವಸಲ್ ಬುಕ್ ಆಫ್ ರೆಕಾರ್ಡ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಕೆ.ವಿ ರಮಣ ರಾವ್ ಹಾಗೂ ತೆಲಂಗಾಣವನ್ನು ಪ್ರತಿನಿಧಿಸುವ ಟಿ.ಎಂ ಶ್ರೀಲತಾ ಅವರು ಗೌತಮ್ ಕುಮಾರ್ ಅವರಿಗೆ ಈ ಪ್ರಶಸ್ತಿ ಪತ್ರವನ್ನು ನೀಡಿದ್ದಾರೆ.

    ನಾನು ಸರ್ವ್ ನೀಡಿ ಸಂಸ್ಥೆಯನ್ನು 2014ರಲ್ಲಿ ಶುರು ಮಾಡಿದೆ. ಈಗ ಈ ಸಂಸ್ಥೆಯಲ್ಲಿ 140ಕ್ಕೂ ಹೆಚ್ಚು ಸ್ವಯಂ ಸೇವಕರಿದ್ದಾರೆ. 2014ರಿಂದ ನಾವು ಈ ರೀತಿಯ ಸಮಾಜ ಸೇವೆ ಕೆಲಸಗಳು ಮಾಡುತ್ತಿದ್ದೇವೆ. ಆದರೆ ಈಗ ನಾನು 1,000ಕ್ಕೂ ಹೆಚ್ಚು ಜನರಿಗೆ ಊಟ ತಿನ್ನಿಸಿದ್ದೇನೆ. ಹಾಗಾಗಿ ಇದು ವಿಶ್ವ ದಾಖಲೆ ಆಗಿದೆ. “ಯಾರೂ ಅನಾಥರಂತೆ ಸಾಯಬಾರದು, ಯಾರು ಕೂಡ ಹಸಿವಿನಿಂದ ಸಾಯಬಾರದು” ಇದು ನನ್ನ ಸಂಸ್ಥೆಯ ಮುಖ್ಯ ಉದ್ದೇಶ ಎಂದು ತಿಳಿಸಿದರು.

  • ಮೂರು ವಿಶ್ವದಾಖಲೆಗಳನ್ನು ಯೋಧರಿಗೆ ಸಮರ್ಪಿಸಿದ ತನುಶ್ರೀ ಪಿತ್ರೋಡಿ!

    ಮೂರು ವಿಶ್ವದಾಖಲೆಗಳನ್ನು ಯೋಧರಿಗೆ ಸಮರ್ಪಿಸಿದ ತನುಶ್ರೀ ಪಿತ್ರೋಡಿ!

    ಉಡುಪಿ: ಉಗ್ರರ ಪುಲ್ವಾಮಾ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು, ಭಾರತದಾದ್ಯಂತ ಜನ ವಿಜಯೋತ್ಸವ ಆಚರಿಸುತ್ತಿರುವ ಬೆನ್ನಲ್ಲೇ ಉಡುಪಿಯ ತನುಶ್ರೀ ಪಿತ್ರೋಡಿ ತನ್ನ ಮೂರು ವಿಶ್ವದಾಖಲೆಗಳನ್ನು ಯೋಧರಿಗೆ ಸಮರ್ಪಿಸಿ ದೇಶಭಕ್ತಿ ಮೆರೆದಿದ್ದಾಳೆ.

    ಒಂದು ನಿಮಿಷದಲ್ಲಿ ಅತಿ ಹೆಚ್ಚು ನಿರಾಲಂಬ ಪೂರ್ಣ ಚಕ್ರಾಸನ ಮತ್ತು ಧನುರಾಸನ ಮಾಡಿದ್ದಕ್ಕೆ ತನುಶ್ರೀ ಪಿತ್ರೋಡಿ ಹೆಸರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಹಾಗೂ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಪುಸ್ತಕಕ್ಕೆ ಸೇರ್ಪಡೆಯಾಗಿತ್ತು. ಇದೀಗ ಆ ಮೂರೂ ದಾಖಲೆಗಳನ್ನು ಭಾರತದ ವೀರ ಯೋಧರಿಗೆ ಈ ಪುಟ್ಟ ಬಾಲಕಿ ಸಮರ್ಪಣೆ ಮಾಡಿದ್ದಾಳೆ. ದೇಶದಲ್ಲಿ ಯೋಧರು ಮಾಡುವ ಕೆಲಸಕ್ಕಿಂತ ಮಿಗಿಲಾದ ಕೆಲಸ ಇನ್ಯಾವುದೂ ಇಲ್ಲ ಅಂತ ತನುಶ್ರೀ ಹೇಳಿದ್ದಾಳೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ತನುಶ್ರೀ, 13 ದಿನದ ಹಿಂದೆ ಉಗ್ರಗಾಮಿಗಳು ನಮ್ಮ ಸೈನಿಕರನ್ನು ಕೊಂದಿದ್ದರು. ಅದನ್ನು ಟಿವಿಯಲ್ಲಿ ನೋಡಿ ಕಣ್ಣೀರು ಬಂತು. ನಾನು ಒಂದು ವರ್ಷದ ಹಿಂದೆ ಮಾಡಿದ ದಾಖಲೆ ಮತ್ತು ವಾರದ ಹಿಂದೆ ಮಾಡಿರುವ ಮತ್ತೆರಡು ದಾಖಲೆಗಳನ್ನು ಯೋಧರಿಗೆ ಸಮರ್ಪಿಸುತ್ತೇನೆ ಎಂದು ತಿಳಿಸಿದ್ದಾಳೆ.

    ಪಾಕಿಸ್ತಾನದ ಉಗ್ರರು ಭಾರತದಲ್ಲಿ ದಾಳಿ ಮಾಡಿ 40 ಸೈನಿಕರನ್ನು ಹತ್ಯೆ ಮಾಡಿದ ಫೋಟೋಗಳನ್ನು ನೋಡಿ ಬಹಳ ಬೇಸರವಾಗಿದೆ. ಈಗ ನಮ್ಮ ದೇಶದ ಸೈನಿಕರು ಪಾಕಿಸ್ತಾನದವರನ್ನು ದಾಳಿ ಮಾಡಿ ಕೊಂದಿದ್ದಾರೆ. ನನ್ನ ಎಲ್ಲಾ ಪ್ರಶಸ್ತಿಯ ಗೌರವ ನಮ್ಮ ದೇಶದ ಸೈನಿಕರಿಗೆ ಸಲ್ಲಬೇಕು. ಇದು ನನ್ನ ಆಸೆಯೂ ಹೌದು, ನಮ್ಮ ತಂದೆ ತಾಯಿಯ ಆಸೆಯೂ ಹೌದು. ನಾವು ಮನೆಯಲ್ಲಿ ಆರಾಮವಾಗಿ ಇರುತ್ತೇವೆ. ಸೈನಿಕರು ಮನೆ ಬಿಟ್ಟು- ಸಂಬಂಧದವರನ್ನು ಬಿಟ್ಟು ದೇಶ ರಕ್ಷಣೆ ಮಾಡುತ್ತಾರೆ. ಪ್ರಶಸ್ತಿಯನ್ನು ಸೈನಿಕರಿಗೆ ಅರ್ಪಣೆಮಾಡಿದ್ದು ಶಾಲೆಯ ಶಿಕ್ಷಕರಿಗೂ ಖುಷಿಯಾಗಿದೆ ಎಂದು ತನುಶ್ರೀ ಸಂತೋಷಪಟ್ಟಳು.

    ತನುಶ್ರೀ ಪಿತ್ರೋಡಿ ಪೋಷಕರು ಮಾತನಾಡಿ, ದೇಶಾಭಿಮಾನ ಮಕ್ಕಳಲ್ಲಿ ತುಂಬುವುದು ಎಲ್ಲಾ ತಂದೆ ತಾಯಿಗಳ ಕರ್ತವ್ಯ. ದೇಶಕ್ಕೆ, ಸೈನಿಕರಿಗೆ ನಮ್ಮಿಂದ ಏನೂ ಕೊಡಲು ಸಾಧ್ಯವಿಲ್ಲ. ಬಿಸಿಲು ಮಳೆ ಚಳಿಯನ್ನು ಲೆಕ್ಕಿಸದೇ ದೇಶವನ್ನು ಹಗಲಿರುಳು ಅವರು ಕಾಯುತ್ತಾರೆ. ಈ ಪ್ರಶಸ್ತಿಯನ್ನು ಯೋಧರಿಗೆ ಅರ್ಪಿಸುವುದರಿಂದ ಅವರ ಮನಸ್ಸಿಗೆ ಖುಷಿಯಾದರೆ, ಅವರ ಮುಖದಲ್ಲಿ ಒಂದು ನಗು ಮೂಡಿದರೆ ಅಷ್ಟೇ ಸಾಕು. ಮಗಳು ವಿಶ್ವದಾಖಲೆ ಯೋಧರಿಗೆ ಅರ್ಪಿಸಿದ್ದು ಬಹಳ ಖುಷಿಯಾಗಿದೆ. ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಸಂಹಾರ ಮಾಡಿದ್ದು ಮನಸ್ಸಿಗೆ ನೆಮ್ಮದಿ ತಂದಿದೆ. 40 ಯೋಧರ ಆತ್ಮಕ್ಕೆ ಶಾಂತಿ ಸಿಕ್ಕರೆ ಅಷ್ಟೇ ಸಾಕು. ಭಾರತೀಯ ಸೇನೆಗೆ ನಮ್ಮದೊಂದು ಸೆಲ್ಯೂಟ್ ಎಂದು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಇಡೀ ಕುಟುಂಬ ಶ್ರದ್ಧಾಂಜಲಿ ಸಲ್ಲಿಸಿ, ವಾಯುಸೇನೆಯ ದಾಳಿಗೆ ಅಭಿನಂದನೆ ಸಲ್ಲಿಸಿದೆ.

    https://www.youtube.com/watch?v=zduxBSmQEHo

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಯಸ್ಸು 10, ವಿಶ್ವದಾಖಲೆಗಳು ನಾಲ್ಕು – ಇದು ಉಡುಪಿಯ ತನುಶ್ರೀ ಪಿತ್ರೋಡಿಯ ಸಾಧನೆ

    ವಯಸ್ಸು 10, ವಿಶ್ವದಾಖಲೆಗಳು ನಾಲ್ಕು – ಇದು ಉಡುಪಿಯ ತನುಶ್ರೀ ಪಿತ್ರೋಡಿಯ ಸಾಧನೆ

    – ಒಂದೇ ದಿನ ಎರಡು ದಾಖಲೆ

    ಉಡುಪಿ: ಈಗಾಗಲೇ ಎರಡು ವಿಶ್ವದಾಖಲೆ ಮಾಡಿರುವ 10ರ ಪೋರಿ, ಒಂದೇ ದಿನ ಮತ್ತೆರಡು ದಾಖಲೆ ಮಾಡಿದ್ದಾಳೆ. ದೇಹದೊಳಗೆ ಮೂಳೆ ಇದ್ಯೋ ಇಲ್ಲವೋ ಅಂತ ಡೌಟ್ ಬರುವಂತೆ ಉಡುಪಿಯ ತನುಶ್ರೀ ಸಾವಿರಾರು ಜನರನ್ನು ಚಕಿತಗೊಳ್ಳುವಂತೆ ಮಾಡಿದ್ದಾಳೆ.

    ಉಡುಪಿಯ ತನುಶ್ರೀ ಪಿತ್ರೋಡಿಗೆ ಈ 10 ವರ್ಷ. ಆದರೆ ಜೀವಮಾನದಲ್ಲಿ ಹೆಚ್ಚಿನವರಿಂದ ಅಸಾಧ್ಯವಾದುದನ್ನು ಬಾಲ್ಯದಲ್ಲೇ ಸಾಧಿಸಿದ್ದಾಳೆ. ಭರತನಾಟ್ಯ- ಯಕ್ಷಗಾನ ಕಲೆಯಲ್ಲಿ ಪರಿಣತಿ ಪಡೆದಿರುವ ಈಕೆ ಯೂಟ್ಯೂಬ್‍ನಲ್ಲಿ ನೋಡಿ ಯೋಗ ಕಲಿತು ವಿಶ್ವದಾಖಲೆ ಮೇಲೆ ವಿಶ್ವದಾಖಲೆ ಮಾಡಿದ್ದಾಳೆ. ತನುಶ್ರೀ ಉಡುಪಿಯ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ಹಿಂದೆ ನಿರಾಲಂಭ ಪೂರ್ಣ ಚಕ್ರಾಸನದಲ್ಲಿ ಎರಡು ದಾಖಲೆ ಮಾಡಿದ್ದಳು. 1 ನಿಮಿಷದಲ್ಲಿ 42 ಬಾರಿ ಆಸನ ಮಾಡಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಳು. ಇದೀಗ ಒಂದು ನಿಮಿಷದಲ್ಲಿ 60ಕ್ಕೂ ಹೆಚ್ಚು ಬಾರಿ ಧನುರಾಸನ ಮಾಡಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸೇರಿದ್ದಾಳೆ.

    ಸಂಸ್ಥೆಯ ಏಷ್ಯಾ ಹೆಡ್ ಮನೀಷ್ ಉಡುಪಿಗೆ ಬಂದು ಸಾಧಕಿ ತನುಶ್ರೀಗೆ ಸರ್ಟಿಫಿಕೇಟ್ ಕೊಟ್ಟು ಬೆನ್ನು ತಟ್ಟಿದ್ದಾರೆ. ಈ ಹಿಂದೆಯೂ ಬಾಲಕಿಯ ಸಾಧನೆ ನೋಡಿದ್ದೇವೆ. ಜೀವನದಲ್ಲಿ ಮತ್ತಷ್ಟು ದಾಖಲೆಗಳು ಮಾಡುವ ಮತ್ತು ಬೆಳೆದು ದೊಡ್ಡ ಹೆಸರು ಮಾಡುವ ಎಲ್ಲಾ ಲಕ್ಷಣ ಇದೆ ಅಂತ ಹೇಳಿದರು.

    ಸಾಧಕಿ ತನುಶ್ರೀ ಮಾತನಾಡಿ, ಮೈದಾನದಲ್ಲಿ ನಾನು ಪ್ರ್ಯಾಕ್ಟೀಸ್ ಮಾಡಿಯೇ ಇರಲಿಲ್ಲ. ಕ್ಯಾಮೆರಾಗಳು, ಜನರು ಎಲ್ಲ ಸೇರಿದಾಗ ಬಹಳ ಮುಜುಗರ ಆಯ್ತು. ನರ್ವಸ್ ಆಗದಂತೆ ತಂದೆ ತಾಯಿ ಹುರಿದುಂಬಿಸಿದರು. ಕಾನ್ಸನ್ಟ್ರೇಶನ್ ಮಾಡಿ ಸಾಧಿಸಿಯೇ ಬಿಟ್ಟೆ ಅಂತ ಹೇಳಿದ್ದಾಳೆ.

    ಮನೆಯೊಳಗೆ ಚಾವಡಿಯಲ್ಲಿ- ಟೆರೇಸ್ ಮೇಲೆ ಅಭ್ಯಾಸ ಮಾಡುತ್ತಿದ್ದ ತನ್ನ ಶಾಲೆಯ ಮೈದಾನದಲ್ಲಿ ಪ್ರಥಮ ಪ್ರಯೋಗದಲ್ಲೇ ದಾಖಲೆ ಮಾಡಿದ್ದಾಳೆ. ತಂದೆ ಉದಯಕುಮಾರ್- ತಾಯಿ ಸಂಧ್ಯಾ ಈ ಸಾಧನೆಯ ಹಿಂದಿರುವ ಬೆನ್ನೆಲುಬು.

    ತನುಶ್ರೀ ತಂದೆ ಉದಯಕುಮಾರ್, ತಾಯಿ ಸಂಧ್ಯಾ ಮಾತನಾಡಿ, ನಾವು ಅವಳಿಗೆ ಎಲ್ಲಾ ವಿಷಯದಲ್ಲಿ ಸಪೋರ್ಟ್ ಮಾಡುತ್ತೇವೆ. ಯೋಗ ಕ್ಲಾಸಿಗೆ ಅವಳು ಹೋಗದೇ ಯುಟ್ಯೂಬ್ ನೋಡಿಯೇ ಈ ನಾಲ್ಕು ದಾಖಲೆ ಮಾಡಿದ್ದಾಳೆ. ಯಕ್ಷಗಾನ -ಭರತನಾಟ್ಯದಲ್ಲೂ ಸಾಧನೆ ಮಾಡುವ ಹಂಬಲ ಅವಳಲ್ಲಿದೆ. ಕಲಿಕೆಯಲ್ಲೂ ಮುಂದಿರುವುದರಿಂದ ಪಠ್ಯೇತರ ಚಟುವಟಿಕೆಗೆ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

    ಸಾಧಕಿಗೆ ಸ್ಥಳದಲ್ಲೇ ಪ್ರಾವಿಜನ್ ಸರ್ಟಿಫಿಕೇಟ್ ಕೊಡಲಾಗಿದೆ. ಯೋಗ ದಿನಾಚರಣೆಯ ಪಬ್ಲಿಕ್ ಹೀರೋ ಆಗಿದ್ದ ತನುಶ್ರೀ ಒಂದು ನಿಮಿಷದ ರೆಕಾರ್ಡ್ ಜೊತೆ ತನುಶ್ರೀ ಮೋಸ್ಟ್ ನಂಬರ್ ಆಫ್ ಧನುರಾಸನ ಎಂಬ ದಾಖಲೆಯನ್ನೂ ಮಾಡಿದ್ದಾಳೆ. ಒಂದು ನಿಮಿಷ 1.46 ಸೆಕೆಂಡುಗಳ ಕಾಲ ಧನುರಾಸನ ಮಾಡಿ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾಳೆ. ಮತ್ತಷ್ಟು ದಾಖಲೆ ಮಾಡುವ ತಯಾರಿಯನ್ನು ತನುಶ್ರೀ ಮಾಡಿಕೊಳ್ಳುತ್ತಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಶ್ವದಾಖಲೆ ಬರೆದ ಅಸ್ಸಾಂ ಚಹಾ: 1 ಕೆಜಿ ಎಲೆಗಳಿಗೆ 39 ಸಾವಿರ!

    ವಿಶ್ವದಾಖಲೆ ಬರೆದ ಅಸ್ಸಾಂ ಚಹಾ: 1 ಕೆಜಿ ಎಲೆಗಳಿಗೆ 39 ಸಾವಿರ!

    ಗುವಾಹಟಿ: ಅಸ್ಸಾಂನ ದಿಬ್ರುಗಡ್ ಜಿಲ್ಲೆಯ ಮನೋಹರಿ ಟೀ ಎಸ್ಟೇಟ್ ತನ್ನ ಚಹಾದ ಎಲೆಗಳ ಮಾರಾಟದಲ್ಲಿ ವಿಶ್ವದಾಖಲೆ ಬರೆದಿದೆ. ಇದೇ ಮೊದಲಿಗೆ ಪ್ರತಿ ಕೆ.ಜಿ ಗೆ 39,001 ರೂ. ಗೆ ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಿ ಸುದ್ದಿಯಾಗಿದೆ.

    ರಾಷ್ಟ್ರಮಟ್ಟದಲ್ಲಿ ಚಹಾದ ಎಲೆಗಳ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಇದೇ ಮೊದಲಿಗೆ ಇಷ್ಟೊಂದು ಬೆಲೆಗೆ ಮಾರಾಟವಾಗಿದ್ದು, ಇತಿಹಾಸದ ದಾಖಲೆಯನ್ನೇ ಸೃಷ್ಟಿಸಿದೆ ಎಂದು ಗುವಾಹಟಿನ ಚಹಾದ ಹರಾಜು ಕೇಂದ್ರ ತಿಳಿಸಿದೆ.

    ವಿಶ್ವಾದ್ಯಂತ ಯಾವುದೇ ಹರಾಜು ಕೇಂದ್ರದಲ್ಲಿ ಚಹಾ ಈ ರೀತಿ ಹೆಚ್ಚಿನ ಬೆಲೆಗೆ ಮಾರಾಟವಾಗಿರಲಿಲ್ಲ. ಇದೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಹರಾಜಾಗಿದೆ. ಇದು ಹೆಮ್ಮೆ ಪಡುವಂತಹ ಕ್ಷಣವಾಗಿದೆ. ನಮ್ಮ ಸಂಸ್ಥೆ ವಿಶೇಷ ವೈವಿಧ್ಯತೆಗಳಿಗೆ ವೇದಿಕೆಯಾಗಿದ್ದು, ಇತರ ಚಹಾದ ಬೆಳೆಗಾರರಿಗೆ ಪ್ರೋತ್ಸಾಹದಾಯಕವಾಗಿದೆ. ಚಹಾದ ಎಲೆಗಳನ್ನು ದೆಹಲಿ ಮತ್ತು ಅಹಮದಾಬಾದ್‍ನಲ್ಲಿದ್ದ ಖರೀದಿಗಾರರಿಗೆ ಮಾರಲಾಯಿತು ಎಂದು ಗುವಾಹಟಿಯ ಚಹಾದ ಹರಾಜು ಕೇಂದ್ರದ ದಿನೇಶ್ ಬಿಹಾನಿರವರು ಹೇಳಿದರು.

    ಮನೋಹರಿ ಟೀ ಎಸ್ಟೇಟ್ ಮಾಲೀಕರಾದ ರಾಜನ್ ಲೋಹಿಯಾರವರ ಮಾರ್ಗದರ್ಶನದಲ್ಲಿ ಸಿ.ಕೆ. ಪರಾಶರವರು ಚಹಾವನ್ನು ಬೆಳೆಸುತ್ತಿದ್ದರು. ಅವರು ಬೆಳೆಯುವುದಕ್ಕೆ ಬೇಕಾದ ಎಲ್ಲಾ ಸೌಲಭ್ಯವನ್ನು ಒದಗಿಸುವ ಮೂಲಕ ಎಲೆಗಳ ಗುಣಮಟ್ಟ, ಸಾಕಷ್ಟು ಶ್ರಮವಹಿಸಿ ಬೆಳದಿದ್ದರಿಂದ ಈ ರೀತಿಯ ಬೆಲೆ ಪಡೆಯಲು ಸಾಧ್ಯವಾಯಿತು. ಚಹಾದ ಎಲೆಗಳು ನೋಡಲು 24 ಕ್ಯಾರೆಟ್ ಚಿನ್ನದ ಹಾಗೇ ಇವೆ ಎಂದು ಲೋಹಿಯ ಹೇಳಿದರು.

    ನಮ್ಮ ಗ್ರಾಹಕರು ಉತ್ತಮ ಗುಣಮಟ್ಟದ ಚಹಾವನ್ನು ಹೆಚ್ಚಾಗಿ ಬೇಡಿಕೆ ಇಡುತ್ತಾರೆ. ಹಾಗಾಗಿ ಕಳೆದ ವರ್ಷ ಡೋನಿ ಪ್ಲೋ ಟೀ ಎಸ್ಟೇಟ್‍ನ ಚಹಾದ ಎಲೆಗಳನ್ನು 18,801 ರೂ ಗೆ ಮಾರಾಟ ಮಾಡಲಾಗಿತ್ತು. ಗುವಾಹಟಿ ಚಹಾದ ಕೇಂದ್ರವೇ ಅತಿ ದೊಡ್ಡ ಹರಾಜು ಕೇಂದ್ರವಾಗಿದ್ದು, ಪ್ರತಿ ಬಾರಿ ದಾಖಲೆಯ ಬೆಲೆ ಪ್ರತಿ ಕೆ.ಜಿಗೆ 511 ರೂ ಮಾತ್ರವಿತ್ತು ಎಂದು ಸೌರಭ್ ಟೀ ಎಸ್ಟೇಟ್ ನ ಮಾಲೀಕ ಎಂ.ಎಲ್ ಮಹೇಶ್ವರಿರವರು ಹೇಳಿದರು.

  • 17 ರನ್ ಹೊಡೆದ್ರೆ ವಿರಾಟ್ ಕೊಹ್ಲಿ ಮುಡಿಗೆ ಮತ್ತೊಂದು ವಿಶ್ವದಾಖಲೆ!

    17 ರನ್ ಹೊಡೆದ್ರೆ ವಿರಾಟ್ ಕೊಹ್ಲಿ ಮುಡಿಗೆ ಮತ್ತೊಂದು ವಿಶ್ವದಾಖಲೆ!

    ಡಬ್ಲಿನ್: ಭಾರತದ ಕ್ರಿಕೆಟ್ ತಂಡದ ನಾಯಕ ಕೊಹ್ಲಿ ಅವರಿಗೆ ಮುಡಿಗೆ ಮತ್ತೊಂದು ದಾಖಲೆ ಸೇರಲು ಸಿದ್ಧವಾಗಿದ್ದು, ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ದಾಖಲೆ ಬರೆಯಲು ವೇದಿಕೆ ಸಿದ್ಧವಾಗಿದೆ.

    ಅಂದಹಾಗೇ 29 ವರ್ಷದ ಕೊಹ್ಲಿ 2 ಸಾವಿರ ರನ್ ಗಳಿಸಿದ ವೇಗದ ಆಟಗಾರ ಎಂಬ ವಿಶ್ವದಾಖಲೆ ನಿರ್ಮಿಸಲು ಕೇವಲ 17 ರನ್ ಗಳು ಬಾಕಿ ಇದೆ. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೊಹ್ಲಿ 17 ರನ್ ಗಳಿಸಿದರೆ ಟಿ20 ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆ ಅವರ ಹೆಸರಿಗೆ ಬರೆಯಲ್ಪಡುತ್ತದೆ.

    ಕೊಹ್ಲಿ 57 ಪಂದ್ಯಗಳ 53 ಇನ್ನಿಂಗ್ಸ್ ನಲ್ಲಿ ಬ್ಯಾಟ್ ಮಾಡಿ 50.84 ರ ಸರಾಸರಿಯಲ್ಲಿ 1,983 ರನ್ ಗಳಿಸಿದ್ದಾರೆ. ಸದ್ಯ ಕೊಹ್ಲಿ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು, ಒಂದೊಮ್ಮೆ 17 ರನ್ ಗಳಿಸಿದರೆ ಕಡಿಮೆ ಪಂದ್ಯವಾಡಿ ವೇಗವಾಗಿ 2 ಸಾವಿರ ರನ್ ಗಳಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಅಲ್ಲದೇ ಈ ಪಂದ್ಯದಲ್ಲಿ 17 ರನ್ ಗಳಿಸದೇ ಇದ್ದರೂ ಟೂರ್ನಿಯಲ್ಲಿ ಕೊಹ್ಲಿಗೆ ದಾಖಲೆ ನಿರ್ಮಿಸಲು ಹೆಚ್ಚಿನ ಅವಕಾಶವಿದೆ.

    ಸದ್ಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮೆಕ್ಲಮ್ 68 ಪಂದ್ಯಗಳ 66 ಇನ್ನಿಂಗ್ ಆಡಿ 2 ಸಾವಿರ (2,140) ರನ್ ಪೂರೈಸಿದ್ದಾರೆ. ಉಳಿದಂತೆ ನ್ಯೂಜಿಲೆಂಡಿನ ಮಾರ್ಟಿನ್ ಗುಪ್ಟಿಲ್ 2,271 ರನ್ ಗಳಿಸಿದ್ದರೆ, ಪಾಕಿಸ್ತಾನ ಆಟಗಾರ ಮಲ್ಲಿಕ್ 1,989 ರನ್ ಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ.

    ವಿಶ್ವ ಟಿ20 ಶ್ರೇಯಾಂಕ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿರುವ ಕೊಹ್ಲಿ ಇದುವರೆಗೂ ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಶತಕ ಸಿಡಿಸಿಲ್ಲ. ಇನ್ನು ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ 2007 ರ ಬಳಿಕ ನಾಲ್ಕು ಬಾರಿ ಮಾತ್ರ ಮುಖಾಮುಖಿ ಆಗಿದೆ. ಸದ್ಯದ ಟೂರ್ನಿಯಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಲಿದ್ದು, ಬಳಿಕ ಇಂಗ್ಲೆಂಡ್ ಪ್ರವಾಸ ಆರಂಭಿಸಲಿದೆ.

  • ದಕ್ಷಿಣ ಆಫ್ರಿಕಾದಿಂದ ಕೊಹ್ಲಿಯ ವಿಶ್ವದಾಖಲೆ ನಿರ್ಮಾಣದ ಕನಸು ಭಗ್ನ!

    ದಕ್ಷಿಣ ಆಫ್ರಿಕಾದಿಂದ ಕೊಹ್ಲಿಯ ವಿಶ್ವದಾಖಲೆ ನಿರ್ಮಾಣದ ಕನಸು ಭಗ್ನ!

    ಸೆಂಚೂರಿಯನ್: ಭಾರತದ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ 135 ರನ್ ಗಳಿಂದ ಗೆದ್ದುಕೊಳ್ಳುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ.

    287 ರನ್ ಗಳ ಗುರಿಯನ್ನು ಪಡೆದ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 50.2 ಓವರ್ ಗಳಲ್ಲಿ 151 ರನ್ ಗಳಿಗೆ ಆಲೌಟ್ ಆಯ್ತು. 3 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿದ್ದ ಭಾರತ ತನ್ನ ಐದನೇ ದಿನದಾಟದಲ್ಲಿ 7 ವಿಕೆಟ್ ಗಳ ಸಹಾಯದಿಂದ ಕೇವಲ 116 ರನ್ ಕೂಡಿ ಹಾಕಿತು.

    ರೋಹಿತ್ ಶರ್ಮಾ 47 ರನ್(74 ಎಸೆತ, 6 ಬೌಂಡರಿ, 1 ಸಿಕ್ಸರ್), ಮೊಹಮ್ಮದ್ ಶಮಿ 28 ರನ್(24 ಎಸೆತ, 5 ಬೌಂಡರಿ), ಪಾರ್ಥಿವ್ ಪಟೇಲ್ 19 ರನ್(49 ಎಸೆತ, 2 ಬೌಂಡರಿ) ಹೊಡೆದು ಔಟಾದರು. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‍ಗಿಡಿ 12.2 ಓವರ್ ಹಾಕಿ 3 ಮೇಡನ್ ಮಾಡಿ 47 ರನ್ ನೀಡಿ 6 ವಿಕೆಟ್ ಕೀಳುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಕಗಿಸೊ ರಬಡಾ 3 ವಿಕೆಟ್ ಕಿತ್ತರು.

     

    ವಿಶ್ವದಾಖಲೆ ಕೈ ತಪ್ಪಿತು:
    ಈ ಪಂದ್ಯವನ್ನು ಸೋಲುವ ಮೂಲಕ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವದಾಖಲೆ ನಿರ್ಮಿಸುವ ಅಪೂರ್ವ ಅವಕಾಶವನ್ನು ಕಳೆದುಕೊಂಡಿದೆ. ತವರಿನಲ್ಲಿ ನಡೆದ ಲಂಕಾ ಸರಣಿಯನ್ನು ಗೆಲ್ಲುವ ಮೂಲಕ ಭಾರತ ಸತತ ಒಂಭತ್ತು ಸರಣಿ ಜಯವನ್ನು ದಾಖಲಿಸಿತ್ತು. ಈ ಜಯದೊಂದಿಗೆ ಕೊಹ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಅವರ ಸಾಧನೆಯನ್ನು ಸರಿಗಟ್ಟಿದ್ದರು.

    ಒಂದು ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿದ್ದರೆ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದ ವಿಶ್ವದ ಮೊದಲ ನಾಯಕ ಎನ್ನುವ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗುತ್ತಿದ್ದರು. ಆದರೆ ಫಾ ಡು ಪ್ಲೇಸಿಸ್ ಪಡೆ 135 ರನ್ ಗಳಿಂದ ಗೆಲ್ಲುವ ಮೂಲಕ ಕೊಹ್ಲಿ ಕನಸನ್ನು ಭಗ್ನಗೊಳಿಸಿದೆ.

  • ವಿಶ್ವ ದಾಖಲೆ ಪುಟ ಸೇರ್ತು 26,558 ಅಡಿ ಉದ್ದದ ವೆಡ್ಡಿಂಗ್ ಡ್ರೆಸ್

    ವಿಶ್ವ ದಾಖಲೆ ಪುಟ ಸೇರ್ತು 26,558 ಅಡಿ ಉದ್ದದ ವೆಡ್ಡಿಂಗ್ ಡ್ರೆಸ್

    ಪ್ಯಾರಿಸ್: 26,558 ಅಡಿ(8095 ಮೀಟರ್) ಉದ್ದದ ವೆಡ್ಡಿಂಗ್ ಡ್ರೆಸ್‍ವೊಂದನ್ನ ಫ್ರಾನ್ಸ್ ನಲ್ಲಿ ತಯಾರಿಸಲಾಗಿದೆ. ಇದು ಜಗತ್ತಿನ ಅತೀ ಉದ್ದದ ವೆಡ್ಡಿಂಗ್ ಡ್ರೆಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಗಿನ್ನಿಸ್ ವಿಶ್ವ ದಾಖಲೆಯ ಪುಟ ಸೇರಿದೆ.

    ಕನ್ ಸ್ಟ್ರಕ್ಷನ್ ಕಂಪನಿ ಡೈನಮಿಕ್ ಪ್ರಾಜೆಕ್ಟ್ಸ್, 15 ಸ್ವಸಹಾಯಕರ ಸಹಾಯ ಪಡೆದು 2 ತಿಂಗಳ ಅವಧಿಯಲ್ಲಿ ಈ ಡ್ರೆಸ್ ತಯಾರಿಸಿದೆ. ಮೊದಲು ಪ್ರತ್ಯೇಕ ತುಂಡುಗಳನ್ನ ತಯಾರಿಸಿಕೊಂಡು ನಂತರ ಉದ್ದದ ವೆಡ್ಡಿಂಗ್ ಡ್ರೆಸ್ ಹೊಲಿಯಲಾಗಿದೆ. ಈ ಹಿಂದೆ ದಾಖಲೆ ಮಾಡಿದ್ದ 3,949.8 ಅಡಿ(1203.9 ಮೀಟರ್) ಉದ್ದದ ಬಟ್ಟೆಯನ್ನು ಕೂಡ ಈ ತಂಡ ಬಳಸಿಕೊಂಡಿದೆ.

    ಲೇಸ್ ತಯಾರಿಕೆಗೆ ಪ್ರಸಿದ್ಧವಾಗಿರೋ ಫ್ರಾನ್ಸ್ ನ ಕಾಡ್ರಿಯಲ್ಲಿ ಈ ವೆಡ್ಡಿಂಗ್ ಡ್ರೆಸ್ ಅನಾವರಣ ಮಾಡಲಾಯಿತು. ವೃತ್ತಿಪರ ಸರ್ವೇಯರ್ ಕ್ರಿಸ್ಟೋಫ್ ಡ್ಯುಮೋಂಟ್ ಹಾಗೂ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ನ ತೀರ್ಪುಗಾರರಾದ ರಾಬ್ ಮೊಲ್ಲಿ ಡ್ರೆಸ್ ನ ಉದ್ದಳತೆಯನ್ನ ಪರಿಶೀಲಿಸಿ ಕಂಪನಿಗೆ ಸರ್ಟಿಫಿಕೇಟ್ ನೀಡಿದ್ದಾರೆ.

    ಬಳಿಕ ವೆಡ್ಡಿಂಗ್ ಡ್ರೆಸ್ ವಿವಿಧ ಭಾಗಗಳಾಗಿ ಕತ್ತರಿಸಿ ಮಾರಾಟ ಮಾಡಲಾಗಿದೆ. ಇದರಿಂದ ಬಂದ ಹಣವನ್ನ ದಾನ ಮಾಡಲಾಗಿದೆ.