Tag: ವಿಶ್ವಾಸಮತ

  • ಕಾಂಗ್ರೆಸ್‍ಗೆ ಇಂದು ವಿಶ್ವಾಸಮತದ ಅಗ್ನಿ ಪರೀಕ್ಷೆ – ಗೆಲ್ಲುವ ವಿಶ್ವಾಸದಲ್ಲಿ ಗೆಹ್ಲೋಟ್ ಕೈ ಪಡೆ

    ಕಾಂಗ್ರೆಸ್‍ಗೆ ಇಂದು ವಿಶ್ವಾಸಮತದ ಅಗ್ನಿ ಪರೀಕ್ಷೆ – ಗೆಲ್ಲುವ ವಿಶ್ವಾಸದಲ್ಲಿ ಗೆಹ್ಲೋಟ್ ಕೈ ಪಡೆ

    – ಕೊನೆ ಕ್ಷಣದಲ್ಲಿ ಚೆಕ್ ಮೆಟ್ ಕೊಡ್ತಾರಾ ಸಚಿನ್ ಪೈಲಟ್?

    ನವದೆಹಲಿ: ರಾಜಸ್ಥಾನ ಕಾಂಗ್ರೆಸ್ಸಿನಲ್ಲಿ ಎದ್ದಿದ್ದ ಬಂಡಾಯದ ಬಿರುಗಾಳಿ ಶಮನವಾಗಿದೆ. ಮಾಜಿ ಡಿಸಿಎಂ ಸಚಿನ್ ಪೈಲಟ್ ವಾಪಸ್ ಪಕ್ಷಕ್ಕೆ ಮರಳಿದ್ದಾರೆ. ಇಂದು ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯವನ್ನು ಮಂಡಿಸಲಿದೆ. ಕೈ ಪಡೆ ವಿಶ್ವಾಸದಲ್ಲಿದ್ದರೂ ಸಚಿನ್ ಪೈಲಟ್ ಕೊನೆ ಕ್ಷಣದಲ್ಲಿ ಕೈಕೊಡುವ ಆಂತಕದಲ್ಲಿದೆ.

    ರಾಜಸ್ಥಾನದ ಕಾಂಗ್ರೆಸ್ ಸರ್ಕಾರದಲ್ಲಿ ಎದ್ದಿದ್ದ ಬಂಡಾಯದ ಬಿರುಗಾಳಿ ತಣ್ಣಗಾಗಿದೆ. ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಪಣತೊಟ್ಟಿದ್ದ ಸಚಿನ್ ಪೈಲಟ್ ಮತ್ತು ಬೆಂಬಲಿಗ ಶಾಸಕರು ಕಾಂಗ್ರೆಸ್ ಗೆ ಮರಳಿದ್ದಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡಿದ್ದೇವೆ ಅಂತ ಸಚಿನ್ ಪೈಲಟ್ ಹೇಳಿದ್ದಾರೆ.

    ಈ ಮಧ್ಯೆ ಇಂದಿನಿಂದ ರಾಜಸ್ಥಾನ ವಿಧಾನಸಭೆ ಕಲಾಪವೂ ಪ್ರಾರಂಭವಾಗಲಿದ್ದು, ಸದನ ಪ್ರಾರಂಭವಾಗುತ್ತಿದ್ದಂತೆ ಬಿಜೆಪಿ ಅವಿಶ್ವಾಸ ಗೊತ್ತುವಳಿ ಮಂಡಿಸಲಿದೆ. ಇದಕ್ಕಾಗಿ ಸಿಎಂ ಅಶೋಕ್ ಗೆಹ್ಲೋಟ್ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಉಭಯ ನಾಯಕರು ನಗುತ್ತಾ ಪರಸ್ಪರ ಮಾತನಾಡಿದ್ದಾರೆ.

    ಗುರುವಾರ ರಾಜಸ್ಥಾನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಈ ನಿರ್ಧಾರ ಮಾಡಿದ್ದಾರೆ. ವಿಶ್ವಾಸಮತ ಗೆಲ್ಲುವ ವಿಶ್ವಾಸವಿದ್ದರೂ ಕಾಂಗ್ರೆಸ್ ನಾಯಕರಿಗೆ ಪೈಲಟ್ ಮೇಲೆ ಅನುಮಾನ ಹೋಗಿಲ್ಲ. ಹಾಗಾಗಿ ಇಂದು ನಡೆಯುವ ವಿಶ್ವಾಸ ಮತ ಮಂಡನೆ ಕುತೂಹಲ ಮೂಡಿಸಿದ್ದು, ಕೊನೆ ಕ್ಷಣದವರೆಗೂ ಮಹತ್ವದ ತಿರುವು ಪಡೆಯಬಹುದು. ಪೈಲಟ್ ಕಾಂಗ್ರೆಸ್ ಚೆಕ್ ಮೇಟ್ ಇಡಬಹುದು ಎನ್ನಲಾಗುತ್ತಿದೆ.

  • ವಿಶ್ವಾಸಮತದಲ್ಲೂ ಬಿಎಸ್‍ವೈಗೆ ಗೆಲುವು ನಿಶ್ಚಿತ

    ವಿಶ್ವಾಸಮತದಲ್ಲೂ ಬಿಎಸ್‍ವೈಗೆ ಗೆಲುವು ನಿಶ್ಚಿತ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೋಮವಾರ ಬಹುಮತ ಗೆಲ್ಲುವುದು ಬಹುತೇತ ಖಚಿತವಾಗಿದೆ. ಯಾಕಂದರೆ ಬಹುಮತ ಸಾಬೀತು ವೇಳೆ ನಾವೂ ಬರಲ್ಲ ಎಂದು ಅತೃಪ್ತರು ಮುಂಬೈನಲ್ಲೇ ಪಟ್ಟು ಹಿಡಿದು ಕುಳಿತಿದ್ದಾರೆ.

    ಹೌದು. ಸ್ಪೀಕರ್ ಅವರು ಇನ್ನೂ ಕೂಡ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸದನಕ್ಕೆ ಹಾಜರಾಗದಿರಲು ನಿರ್ಧರಿಸಿದ್ದು, ಅತೃಪ್ತ ಶಾಸಕರೆಲ್ಲರೂ ಗೈರು ಹಾಜರಾದರೆ ಬಿಎಸ್‍ವೈ ಬಹುಮತ ಗೆಲ್ಲುವುದು ಪಕ್ಕಾ ಆಗಿದೆ.

    ಮುಂಬೈನಲ್ಲೆ ಉಳಿದುಕೊಂಡರೆ ಸದನಕ್ಕೆ ತಮ್ಮ ಗೈರಿನಿಂದ ದೋಸ್ತಿಗಳ ಸಂಖ್ಯೆ ಕಡಿಮೆಯಾಗುವುದಲ್ಲದೇ ಬಿಜೆಪಿ ಬಹುಮತ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಅಲ್ಲದೆ ಬಿಎಸ್‍ವೈ ಬಹುಮತ ಸಾಬೀತು ಮಾಡುವವರೆಗೂ ಅತೃಪ್ತರು ಯಾರನ್ನೂ ಭೇಟಿಯಾಗದಿರಲು ನಿರ್ಧರಿಸಿದ್ದಾರೆ. ಬಿಎಸ್‍ವೈ ಬಹುಮತ ಗೆದ್ದ ನಂತರವಷ್ಟೇ ಅಂದರೆ ಸೋಮವಾರ ಇಲ್ಲವೇ ಮಂಗಳವಾರ ಅತೃಪ್ತರು ರಾಜ್ಯಕ್ಕೆ ಮರಳಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಶುಕ್ರವಾರ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರಲ್ಲಿ ಯಾವ ರೀತಿ ಮಂದಹಾಸ ಮೂಡಿದೆಯೋ ಅದೇ ರೀತಿ ಅತೃಪ್ತ ಶಾಸಕರಲ್ಲೂ ಮೂಡಿದ್ದು, ನಾವು ಗೆದ್ದೆವು ಎಂದು ಸಂತಸ ಪಟ್ಟಿದ್ದರು.

    ಮುಂಬೈನಲ್ಲಿರುವ ಅತೃಪ್ತ ಶಾಸಕರು ಸಂಜೆ ಕೊಲ್ಲಾಪುರದ ಮಹಾಲಕ್ಷ್ಮೀ ದೇವಾಲಯಕ್ಕೆ ಭೇಟಿ ನೀಡಿ ದೇವಾಲಯದಲ್ಲಿ ವಿಜಯದ ಸಂಕೇತವಾಗಿ ಕುಂಕುಮವನ್ನು ಧರಿಸಿ ಪರಸ್ಪರ ಸಂತಸ ಹಂಚಿಕೊಂಡಿದ್ದರು. ನಾವು ಅಂದುಕೊಂಡಂತೆ ಎಲ್ಲ ನಡೆದಿದ್ದು, ಯಾವುದೂ ಹುಸಿಯಾಗಿಲ್ಲ ನಾವು ಗೆದ್ದಿದ್ದೇವೆ ಎಂದು ಸಂಭ್ರಮಿಸಿದ್ದರು.

  • ಸೋಮವಾರ ಎಲ್ಲದ್ದಕ್ಕೂ ಇತಿಶ್ರೀ

    ಸೋಮವಾರ ಎಲ್ಲದ್ದಕ್ಕೂ ಇತಿಶ್ರೀ

    ಬೆಂಗಳೂರು: ರಾಜ್ಯಪಾಲರ ಆದೇಶವನ್ನು ಧಿಕ್ಕರಿಸಿದ ರಾಜ್ಯಸರ್ಕಾರ ಸೋಮವಾರಕ್ಕೆ ವಿಶ್ವಾಸ ಮತಯಾಚನೆಯನ್ನು ಮುಂದೂಡಿದಿದೆ. ಈ ಮೂಲಕ ದೋಸ್ತಿ ಸರ್ಕಾರಕ್ಕೆ ಇನ್ನು ಎರಡು ದಿನ ಜೀವದಾನ ಸಿಕ್ಕಿದೆ. ಸೋಮವಾರ 11 ಗಂಟೆಗೆ ಸದನವನ್ನು ಮುಂದೂಡಿದ ಸ್ಪೀಕರ್ ರಮೇಶ್ ಕುಮಾರ್, ಎಲ್ಲದ್ದಕ್ಕೂ ಸೋಮವಾರವೇ ಇತಿಶ್ರೀ ಹಾಡಲಾಗುವುದು ಎಂದು ಹೇಳಿದ್ದಾರೆ.

    2ನೇ ದಿನವಾದ ಇಂದು ಕೂಡ ನಡೆಸಿದ್ದು ಬರೀ ಕಾಲಹರಣ. ಸಮಯ ಮುಂದೂಡಿಕೆಗೆ ನಾಟಕದ ಮೇಲೆ ನಾಟಕ. ಒಮ್ಮೆ ಸ್ಪೀಕರ್‍ಗೂ, ಮಗದೊಮ್ಮೆ ಸಿಎಂಗೂ ಪತ್ರ ಬರೆದಿದ್ದ ರಾಜ್ಯಪಾಲರು ಇವತ್ತು ಮಧ್ಯಾಹ್ನ 1.30ರ ಒಳಗೆ ವಿಶ್ವಾಸಮತ ಯಾಚನೆ ಮುಗಿಸಬೇಕು ಎಂದು ಗುರುವಾರ ಆದೇಶಿಸಿದ್ದರು. ಬೆಳಗ್ಗೆ ಕಲಾಪ ಆರಂಭವಾದಾಗ ರಾಜಭವನದ ವಿಶೇಷಾಧಿಕಾರಿ ಸದನಕ್ಕೆ ಆಗಮಿಸಿದ್ದರು.

    ಮಧ್ಯಾಹ್ನ 1:30 ಆದರೂ ವಿಶ್ವಾಸಮತ ಪ್ರಕ್ರಿಯೆ ಮುಗಿಯ ಕಾರಣ ರಾಜ್ಯಪಾಲರಿಗೆ ವರದಿ ನೀಡಿದರು. ವರದಿ ಆಧರಿಸಿ ಇವತ್ತು ಕಲಾಪ ಮುಗಿಯುವುದರ ಒಳಗಡೆ ವಿಶ್ವಾಸಮತ ಮುಗಿಸಲೇಬೇಕು ಅಂತ ಮುಖ್ಯಮಂತ್ರಿಗೆ ರಾಜ್ಯಪಾಲರು ಮತ್ತೊಂದು ಆದೇಶ ಪ್ರಕಟಿಸಿದರು.

    ರಾಜ್ಯಪಾಲರ ಎರಡನೇ ಲವ್‍ಲೆಟರ್ ನೋವು ತಂದಿದೆ ಅಂತ ಸಿಎಂ ಹೇಳಿದರು. ಆದರೆ ಸಂಜೆಯಾದರೂ ಮುಗಿಯದ ಲಕ್ಷಣ ಕಾಣಲಿಲ್ಲ. ದೋಸ್ತಿ ಪಕ್ಷದ ಶಾಸಕರೆಲ್ಲರೂ ಸೋಮವಾರಕ್ಕೆ ಕಲಾಪ ಮುಂದೂಡಿ, ನಾವು ನಮ್ಮ ಕ್ಷೇತ್ರದ ಸಮಸ್ಯೆ ಆಲಿಸಬೇಕು ಅಂತ ಪ್ರಸ್ತಾಪ ಮುಂದಿಟ್ಟರು.

    ಮುಖ್ಯಮಂತ್ರಿ ಅವರಂತೂ, ನಾನು ಇನ್ನಷ್ಟು ಮಾತನಾಡೋದಿದೆ. ಸೋಮವಾರ ವಿಶ್ವಾಸಮತ ಮುಗಿಸಿಬಿಡೋಣ ಎಂದರು. ಇದಕ್ಕೆ ಸಿದ್ದರಾಮಯ್ಯ ಕೂಡ ದನಿಗೂಡಿಸಿದರು. ಆದರೆ ಬಿಜೆಪಿ ಶಾಸಕರು ಯಾವುದೇ ಕಾರಣಕ್ಕೂ ಮುಂದೂಡಬೇಡಿ. ಇವತ್ತೇ ವಿಶ್ವಾಸಮತ ಪ್ರಕ್ರಿಯೆ ಮುಗಿಸಿಬಿಡಿ. ಇಲ್ಲದಿದ್ದರೆ, ವಿಶ್ವಾಸಮತ ಪ್ರಕ್ರಿಯೆ ಬಗ್ಗೆ ಅನುಮಾನ ಬರಲಿದೆ ಅಂತ ಸಂಶಯ ವ್ಯಕ್ತಪಡಿಸಿದರು.

    ಯಡಿಯೂರಪ್ಪ ಮಾತನಾಡಿ, ಇವತ್ತು ಎಷ್ಟು ಹೊತ್ತಾದರೂ ಸರಿ. ನಾವು ಮಾತಾಡಲ್ಲ. ಅವರೇ ಎಷ್ಟು ಹೊತ್ತಾದರೂ ಮಾತಾಡಲಿ. ನಾವ್ಯಾರೂ ಮಾತಾಡಲ್ಲ. ರಾಜ್ಯಪಾಲರಿಗೆ ಗೌರವ ಕೊಟ್ಟಂತೆ ಆಗುತ್ತದೆ ಎಂದರು. ಆದರೆ ಲೇಟಾಗ್ತಿದೆ. ಒಂದು ವಾರ ಆಗಿದೆ. ನಾವು ಮನೆಗೆ ಹೋಗಬೇಕು. ನಮ್ಮನ್ನ ಬಿಟ್ಟುಬಿಡಿ ಎಂದು ದೋಸ್ತಿ ಪಕ್ಷದ ಶಾಸಕರು ಗಲಾಟೆ ಎಬ್ಬಿಸಿದ್ರು. ಡಿಪ್ಯೂಟಿ ಸ್ಪೀಕರ್ ಸುಮ್ನೇ ಕೂತ್ಕೋಳ್ರಿ ಅಂದ್ರು ಬಿಡ್ಲಿಲ್ಲ. ಮತ್ತೆ ಬಂದ ಸ್ಪೀಕರ್ ರಮೇಶ್‍ಕುಮಾರ್ ಕೊನೆಗೆ ಸೋಮವಾರಕ್ಕೆ ಕಲಾಪ ಮುಂದೂಡಿದರು.

  • ರಾಜ್ಯಪಾಲರು, ಕೇಂದ್ರ ಸರ್ಕಾರ ಮುಂದೇನು ಮಾಡಬಹುದು?

    ರಾಜ್ಯಪಾಲರು, ಕೇಂದ್ರ ಸರ್ಕಾರ ಮುಂದೇನು ಮಾಡಬಹುದು?

    ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕಾನೂನು ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ಅಲ್ಪಮತಕ್ಕೆ ಕುಸಿದಿರುವ ದೋಸ್ತಿ ಸರ್ಕಾರದ ವಿರುದ್ಧ ಕ್ರಮಕ್ಕೆ ಖುದ್ದು ರಾಜ್ಯಪಾಲರೇ ಅಖಾಡಕ್ಕಿಳಿಯುವ ಸಾಧ್ಯತೆಗಳಿವೆ.

    ವಿಶ್ವಾಸಮತಕ್ಕೆ 2 ಬಾರಿ ಸೂಚನೆ ರವಾನಿಸಿದ್ದರೂ, ಮುಂದಾಗದಿರುವುದನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಕೇಂದ್ರಕ್ಕೆ ಒಂದು ವರದಿಯನ್ನೂ ಕೂಡ ರಾಜ್ಯಪಾಲ ವಜೂಭಾಯ್ ವಾಲಾ ರವಾನಿಸಿದ್ದಾರೆ.

    ರಾಜ್ಯಪಾಲರು ಏನ್ ಮಾಡಬಹುದು?
    ಆಯ್ಕೆ 1- ರಾಜಕೀಯ ಬಿಕ್ಕಟ್ಟು ಕೇಂದ್ರಕ್ಕೆ 2ನೇ ವರದಿ ಸಲ್ಲಿಸಬಹುದು
    ಆಯ್ಕೆ 2- ಮತ್ತೆ 3ನೇ ಬಾರಿಗೆ ವಿಶ್ವಾಸಮತಕ್ಕೆ ಸೂಚಿಸಬಹುದು
    ಆಯ್ಕೆ 3- ವಿಧಾನಸಭೆ ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು
    ಆಯ್ಕೆ 4- ಸಂಖ್ಯಾಬಲ ಆಧರಿಸಿ ಅತಿದೊಡ್ಡ ಪಕ್ಷ ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಬಹುದು

    ಕೇಂದ್ರ ಸರ್ಕಾರ ಏನ್ ಮಾಡಬಹುದು?
    ಆಯ್ಕೆ 1- ರಾಜ್ಯಪಾಲರ ಶಿಫಾರಸ್ಸನ್ನು ಗಂಭೀರವಾಗಿ ಪರಿಗಣಿಸುವುದು
    ಆಯ್ಕೆ 2- ಕೇಂದ್ರ ಸಂಪುಟ ವ್ಯವಹಾರಗಳ ಸಭೆಯಲ್ಲಿ ಚರ್ಚಿಸಿ ಸಂಪುಟ ಸಭೆಗೆ ವರ್ಗಾಯಿಸಬಹುದು
    ಆಯ್ಕೆ 3- ಸಂಪುಟ ಸಭೆ ಕರೆದು ರಾಷ್ಟ್ರಪತಿ ಆಳ್ವಿಕೆ ಶಿಫಾರಸ್ಸಿಗೆ ಒಪ್ಪಿಗೆ ಸೂಚಿಸುವುದು
    ಆಯ್ಕೆ 4- ರಾಷ್ಟ್ರಪತಿಗಳಿಂದ ಅಂಕಿತ ಪಡೆದುಕೊಳ್ಳಬಹುದು
    ಆಯ್ಕೆ 5- ಅಲ್ಪಕಾಲ ರಾಷ್ಟ್ರಪತಿ ಆಡಳಿತವನ್ನು ಹೇರಬಹುದು
    ಆಯ್ಕೆ 6- ಎಷ್ಟು ದಿನ ವಿಶ್ವಾಸ ವಿಳಂಬ ಮಾಡಬಹುದು ಅಂತ ಕಾದು ನೋಡಬಹುದು

  • ಇಂದೇ ವಿಶ್ವಾಸಮತ ಪೂರ್ಣಗೊಳಿಸಿ – ಸ್ಪೀಕರ್‌ಗೆ ರಾಜ್ಯಪಾಲರ ಖಡಕ್ ಸಂದೇಶ

    ಇಂದೇ ವಿಶ್ವಾಸಮತ ಪೂರ್ಣಗೊಳಿಸಿ – ಸ್ಪೀಕರ್‌ಗೆ ರಾಜ್ಯಪಾಲರ ಖಡಕ್ ಸಂದೇಶ

    ಬೆಂಗಳೂರು: ಸಿಎಂ ಕುಮಾರಸ್ವಾಮಿ ಅವರು ಇಂದು ಸದನದಲ್ಲಿ ಮಂಡನೆ ಮಾಡಿದ್ದ ವಿಶ್ವಾಸ ಮತಯಾಚನೆ ಪ್ರಕ್ರಿಯೆಯನ್ನು ಇಂದೇ ಪೂರ್ಣಗೊಳಿಸುವಂತೆ ಸ್ಪೀಕರ್ ಅವರಿಗೆ ರಾಜ್ಯಪಾಲರು ಖಡಕ್ ಸಂದೇಶ ನೀಡಿದ್ದಾರೆ.

    ಭೋಜನ ವಿರಾಮದ ವೇಳೆ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಶಾಸಕರು ಸ್ಪೀಕರ್ ನಡೆಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯಪಾಲರು ಅಧಿಕಾರಿಗಳಿಂದ ವರದಿ ಪಡೆದಿದ್ದರು. ವರದಿ ಪಡೆದ ಬಳಿಕ ಸ್ಪೀಕರ್ ಅವರಿಗೆ ಸೂಚನೆ ನೀಡಿರುವ ರಾಜ್ಯಪಾಲರು ಇಂದೇ ವಿಶ್ವಾಸಮತಯಾಚನೆಯನ್ನು ಮುಗಿಸಿ ಎಂದು ಸೂಚನೆ ನೀಡಿದ್ದಾರೆ. ರಾಜ್ಯಪಾಲರ ಪತ್ರವನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಸದನದಲ್ಲಿ ಓದಿ ವಿವರಣೆ ನೀಡಿದ್ದು, ಸದನ ಸದಸ್ಯರ ಗಮನಕ್ಕೆ ತಂದಿದ್ದಾರೆ.

    ಇತ್ತ ರಾಜ್ಯಪಾಲರ ಪತ್ರಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಮಾತನಾಡಿದ ಕೃಷ್ಣಬೈರೇಗೌಡ ಅವರು, ಇಂದು ಸದನದಲ್ಲಿ ವಿಶ್ವಾಸಮತ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಕೆಲ ಕಾನೂನಿನ ಗೊಂದಲಗಳು ಆರಂಭವಾಗಿದೆ. ಆದ್ದರಿಂದ ಇದನ್ನು ಅಷ್ಟು ಬೇಗ ತೀರ್ಮಾನ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಚರ್ಚೆ ನಡೆಯಬೇಕಿದೆ ಎಂದು ಸ್ಪೀಕರ್ ಅವರಿಗೆ ತಿಳಿಸಿದರು. ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಅವರು, ನಾನು ಯಾರ ಒತ್ತಡಕ್ಕೂ ಮಣಿಯುವುದಿಲ್ಲ. ಈ ಬಗ್ಗೆ ನಾನು ಕಾನೂನು ತಜ್ಞರ ಸಲಹೆ ಪಡೆಯುತ್ತೇನೆ ಎಂದರು.

    ಕಾಂಗ್ರೆಸ್ ಸದಸ್ಯರ ಮಾತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಬಿಎಸ್ ಯಡಿಯೂರಪ್ಪ ಅವರು, ನಮಗೆ ಚರ್ಚೆ ನಡೆಸುವ ಬಗ್ಗೆ ಯಾವುದೇ ಆಕ್ಷೇಪ ಇಲ್ಲ. ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಚರ್ಚೆ ನಡೆಯಲಿ ಎಂದರು. ಆದರೆ ಇಂದೇ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಪೂರ್ಣಗೊಳ್ಳಲಿ. ಆಡಳಿತ ಪಕ್ಷದ ಎಲ್ಲಾ ನಾಯಕರಿಗೆ ಮಾತನಾಡಲು ಅವಕಾಶ ನೀಡಿ, ನಮಗೆ ಕೇವಲ 5 ನಿಮಿಷ ಅವಕಾಶ ನೀಡಿದರೆ ಸಾಕು ಒಬ್ಬರೋ ಇಬ್ಬರೋ ಮಾತನಾಡುತ್ತಾರೆ ಎಂದು ತಿಳಿಸಿದರು.

    ಈ ವೇಳೆ ಕೃಷ್ಣಬೈರೇಗೌಡರು ಮಾತನಾಡಿ ಸದನದಲ್ಲಿ ಚರ್ಚೆ ನಡೆಯುತ್ತಿರುವಾಗ ಬಿಜೆಪಿ ಸದಸ್ಯರು ಹಿಂದಿನ ಬಾಗಿಲಿನಿಂದ ಹೋಗಿ ರಾಜ್ಯಪಾಲರ ಮೂಲಕ ಸೂಚನೆ ತರುವುದಿಲ್ಲ ಸರಿಯಲ್ಲ. ಇಲ್ಲೇ ಚರ್ಚೆ ಮಾಡಬಹುದು ಎಂದಾಗ ಈಶ್ವರಪ್ಪ ಇಡಿ ರಾಜ್ಯದ ಜನತೆ ನೋಡುತ್ತಿದ್ದಾರೆ. ಹೀಗಾಗಿ ನಾವು ರಾಜ್ಯಪಾಲರಲ್ಲಿ ಹೋಗಿ ದೂರು ನೀಡಿದ್ದೇವೆ ಎಂದರು. ಸ್ಪೀಕರ್ ರಮೇಶ್ ಕುಮಾರ್ ಮಾತನಾಡಿ ಇಲ್ಲಿ ಅನಾವಶ್ಯಕವಾಗಿ ರಾಜ್ಯಪಾಲರನ್ನು ಎಳೆ ತರುವುದು ಬೇಡ. ನಾವು ಹೋಗಿ ಮನವಿ ನೀಡಿದ್ದೇವೆ ಎಂದು ಬಿಜೆಪಿ ಸದಸ್ಯರೇ ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಬಿಜೆಪಿ ನಾಯಕರು ಹೋಗದೇ ರಾಜ್ಯಪಾಲರು ಸೂಚನೆ ನೀಡಿದ್ದರೆ ಆಗ ಪ್ರಶ್ನಿಸಬಹುದಿತ್ತು. ದಯವಿಟ್ಟು ರಾಜ್ಯಪಾಲರನ್ನು ಈ ಚರ್ಚೆಗೆ ಎಳೆದು ತರಬೇಡಿ ಎಂದು ಮನವಿ ಮಾಡಿದರು.

  • ಅಧಿಕಾರ ಶಾಶ್ವತವಲ್ಲ, ಗೂಟಾ ಹೊಡ್ಕೊಂಡು ಕೂತಿರುವ ಭ್ರಮೆಯೂ ನನಗಿಲ್ಲ: ಸಿಎಂ

    ಅಧಿಕಾರ ಶಾಶ್ವತವಲ್ಲ, ಗೂಟಾ ಹೊಡ್ಕೊಂಡು ಕೂತಿರುವ ಭ್ರಮೆಯೂ ನನಗಿಲ್ಲ: ಸಿಎಂ

    – ನನ್ನ ಮೇಲೆ ಬಿಎಸ್‍ವೈಗೆ ವಿಶೇಷ ಕಾಳಜಿ ಬಂದಿದೆ
    – ಮೈತ್ರಿ ಪಕ್ಷ ನನ್ನ ನಾಯಕತ್ವದಲ್ಲಿ ಇರುತ್ತೋ ಇಲ್ವೋ?

    ಬೆಂಗಳೂರು: ಅಧಿಕಾರ ಶಾಶ್ವತವಲ್ಲ. ನಾವು ಗೂಟಾ ಹೊಡೆದುಕೊಂಡು ಕೂತಿದ್ದೇವೆ ಎನ್ನುವ ಭ್ರಮೆಯೂ ನನಗಿಲ್ಲ ಸಿಎಂ ಹೇಳಿದ್ದಾರೆ.

    ವಿಶ್ವಾಸಮತಯಾಚನೆ ವೇಳೆ ಮಾತನಾಡಿದ ಸಿಎಂ, ಸರ್ಕಾರ ರಚನೆ ಮಾಡಲು ವಿರೋಧ ಪಕ್ಷದ ನಾಯಕರು ಬಹಳ ಅತುರದಲ್ಲಿದ್ದಾರೆ ಎಂದರು. ಆಗ ಸ್ಪೀಕರ್ ರಮೇಶ್ ಕುಮಾರ್ ಅವರು, ಯಾಕೆ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ವಿಶ್ವಾಸ ಮತಯಾಚನೆ ಚರ್ಚೆಯೇ ಆಗದೇ ಮನವಿ ಮಾಡುತ್ತಿದ್ದಾರೆ. ಈ ಹಿಂದಿನ ವಿಶ್ವಾಸಮತದ ಯಾಚನೆಯ ಬಗ್ಗೆ ಬಿ.ಎಸ್.ಯಡಿಯೂರಪ್ಪ ಅವರು ಉಲ್ಲೇಖಿಸಿದ್ದಾರೆ. ಹಿಂದಿನ ವಿಶ್ವಾಸಮತ, ಅವಿಶ್ವಾಸಮತ ಮಂಡನೆಯಾಗಿರುವ ಸಂದರ್ಭ ಬೇರೆ ಇತ್ತು. ಆದರೆ ಇಂದಿನ ಪರಿಸ್ಥಿತಿಯೇ ಬೇರೆ ಎಂದು ಕುಟುಕಿದರು.

    ವಿಶ್ವಾಸಮತ ಮಂಡನೆ ಮಾಡುವ ಪರಿಸ್ಥಿತಿ ಯಾವ ಹಿನ್ನಲೆಯಲ್ಲಿ ಬಂದಿದೆ? ಯಾವ ಕಾರಣಕ್ಕೆ ಬಂದಿದೆ ಎನ್ನುವುದು ಗೊತ್ತಿದೆ. ಸ್ಪೀಕರ್ ಅಧಿಕಾರದ ಸ್ಥಾನದ ಬಗ್ಗೆಯೂ ಅಪನಂಬಿಕೆ ಮೂಡವಂತೆ ಮಾಡಿ ಸುಪ್ರೀಂ ಮೊರೆ ಹೋಗಿದ್ದಾರೆ. ನಿಮ್ಮ ಬಗ್ಗೆ ವಿಪಕ್ಷಗಳಿಗೆ ನಂಬಿಕೆ ಇಲ್ಲ ಎಂದು ಸಿಎಂ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಮಾರ್ಮಿಕವಾಗಿ ಪ್ರಶ್ನಿಸಿದರು.

    ವಿಪಕ್ಷಕ್ಕೆ ಮಾನ ಮರ್ಯಾದೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮಗೆ ಅಲ್ಪ ಸ್ವಲ್ಪ ಮರ್ಯಾದೆ ಇದೆ. ಇಲ್ಲಿ ಇರುವರರಿಗೆ ಸ್ವಲ್ಪ ಮರ್ಯಾದೆ ಇದೆ ಅಂದುಕೊಳ್ಳುತ್ತೇನೆ ಎಂದು ಕಿಡಿಕಾರಿದರು.

    ರೆಬಲ್ ಶಾಸಕರು ಸ್ಪೀಕರ್ ಅವರಿಗೆ ಸಲ್ಲಿಸಿದ ರಾಜೀನಾಮೆಯಲ್ಲಿರುವ ಕಾರಣ ಹಾಗೂ ಸುಪ್ರೀಂಕೋರ್ಟ್ ನಲ್ಲಿ ಮಂಡಿಸಿದ ಕಾರಣ ಇವೆರಡನ್ನೂ ಇಟ್ಟಕೊಂಡು ಚರ್ಚೆ ನಡೆಸಲೇ ಬೇಕು. ಇದಕ್ಕೆ ಸ್ಪಷ್ಟನೆ ಬೇಕು ಎಂದು ಸಿಎಂ ಪಟ್ಟು ಹಿಡಿದರು.

    ಆರಂಭದಲ್ಲಿ ನಗುತ್ತಾ ಭಾಷಣ ಆರಂಭಿಸಿದ ಸಿಎಂ ಕೆಲ ನಿಮಿಷಗಳಲ್ಲೇ ಆವೇಶದಿಂದ ಮಾತು ಮುಂದುವರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸಮ್ಮಿಶ್ರ ಸರ್ಕಾರದದ ಬಗ್ಗೆ ಟೀಕಿಸಿದ್ದಾರೆ. ಬರಗಾಲದ ಬಗ್ಗೆ ಚರ್ಚೆ ಮಾಡಬೇಕಾಗಿದೆ. ನಮಗಿಂತ ಹೆಚ್ಚಾಗಿ ಬರ ಪೀಡಿತ ಪ್ರದೇಶಗಳಿಗೆ ಭೇಟಿ ಮಾಡಿದ್ದಾರೆ. ಜನರ ಕಷ್ಟಗಳಿಗೆ ಹೇಗೆ ಸ್ಪಂದಿಸಿದ್ದೇವೆ ಎನ್ನುವ ಬಗ್ಗೆ ಚರ್ಚೆ ಮಾಡಬೇಕಿದೆ ಎಂದರು.

    ಜಿಂದಾಲ್ ಪ್ರಕರಣ ಎತ್ತಿಕೊಂಡ ಸಿಎಂ, ಜಿಂದಾಲ್ ವಿಚಾರದಲ್ಲಿ ಸಾಕಷ್ಟು ಅನುಮಾನ ಜನರಲ್ಲಿ ಹುಟ್ಟುಹಾಕಿದ್ದಾರೆ. ಜನರಿಗೆ ಈಗ ಇದರ ಬಗ್ಗೆ ಮಾಹಿತಿಯ ಕೊರತೆ ಇದೆ. ನಾನು ಇತ್ತೀಚೆಗೆ ಮಾಧ್ಯಮದ ಜೊತೆಯೂ ಮಾತನಾಡಿಲ್ಲ. ಈಗ ಸ್ಪಷ್ಟನೆ ಕೊಡಬೇಕು. ನನ್ನ ಆಡಳಿತದ ಮಾಹಿತಿಯನ್ನು ಬಗ್ಗೆ ಜನರ ಮುಂದೆ ಇಡಬೇಕು ಎಂದು ಹೇಳಿದರು.

    ಐಎಂಎ ಪ್ರಕರಣದಲ್ಲಿ ನಮ್ಮ ನಿಲುವಿನ ಬಗ್ಗೆ ಚರ್ಚೆಯಾಗಬೇಕು. ಬರಗಾಲ, ಜಿಂದಾಲ್, ಐಎಂಎ ವಿಚಾರ ಹಾಗೂ ಆಡಳಿತ ಯೋಜನೆ, ಈ ಮೂರು ವಿಚಾರದಲ್ಲಿ ಚರ್ಚೆ ಹಾಗೂ ಸ್ಪಷ್ಟನೆಗೆ ಅವಕಾಶ ನೀಡುವಂತೆ ಸಿಎಂ, ಸ್ಪೀಕರ್ ರಮೇಶ್ ಕುಮಾರ್ ಅವರ ಬಳಿ ಮನವಿ ಮಾಡಿಕೊಂಡರು.

    ಮೈತ್ರಿ ಪಕ್ಷ ನನ್ನ ನಾಯಕತ್ವದಲ್ಲಿ ಇರುತ್ತೋ ಇಲ್ವೋ? ಬೇರೆ ಯಾರಾದರೂ ಮುಂದುವರಿಸುತ್ತಾರೋ ಇಲ್ವೋ ಗೊತ್ತಿಲ್ಲ ಎಂದು ಹೇಳಿ ಕುತೂಹಲ ಮೂಡಿಸಿದರು.