Tag: ವಿಶ್ವವಿದ್ಯಾಲಯ

  • ಹಣ ಕೊಟ್ಟು ಡಾಕ್ಟರೇಟ್ ಪಡೆದ ರೌಡಿಶೀಟರ್ ಯಶಸ್ವಿನಿ ಗೌಡ?

    ಹಣ ಕೊಟ್ಟು ಡಾಕ್ಟರೇಟ್ ಪಡೆದ ರೌಡಿಶೀಟರ್ ಯಶಸ್ವಿನಿ ಗೌಡ?

    ಬೆಂಗಳೂರು: ಶಿಕ್ಷಣ ಪಡೆದು ಡಾಕ್ಟರೇಟ್ ಪದವಿ ಪಡೆಯುವುದು ನೋಡಿದ್ದೇವೆ, ಆದರೆ ಹಣ ಕೊಟ್ಟರೆ ರೌಡಿ ಶೀಟರ್ ಗೂ ಡಾಕ್ಟರ್ ನೀಡುವ ದಂಧೆ ನಗರದಲ್ಲಿ ನಡೆಯುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ರೌಡಿಶೀಟರ್ ಹೊಂದಿರುವ ಯಶಸ್ವಿನಿ ಗೌಡ ಅವರ ಸಾಮಾಜಿಕ ಸೇವೆ ಮೆಚ್ಚಿ ವಿಶ್ವವಿದ್ಯಾಲಯವೊಂದು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

    ಅಮೆರಿಕ ಮೂಲದ `ಇಂಟರ್‍ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ’ ಮೂಲಕ ಯಶಸ್ವಿನಿ ಗೌಡ ಡಾಕ್ಟರೇಟ್ ಪಡೆದಿದ್ದಾರೆ. ಯಶಸ್ವಿನಿ ಗೌಡ ಅವರ ಸಾಮಾಜಿಕ ಸೇವೆ ಮೆಚ್ಚಿ ಡಾಕ್ಟರೇಟ್ ನೀಡಿದ್ದಾಗಿ ಯೂನಿವರ್ಸಿಟಿ ತಿಳಿಸಿದೆ. ಆದರೆ ಇಂಟರ್‍ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿಗೆ ದುಡ್ಡು ಕೊಟ್ಟು ಡಾಕ್ಟರೇಟ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

    ಬೆಂಗಳೂರಲ್ಲಿ ಡಾಕ್ಟರೇಟ್ ಕೊಡಿಸಲು ಗ್ಯಾಂಗ್ ಒಂದು ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದ್ದು, ಒಂದು ಡಾಕ್ಟರೇಟ್ ಪದವಿ ನೀಡಲು 75 ಸಾವಿರ ರೂ. ನಿಂದ 1.50 ಲಕ್ಷದವರೆಗೂ ವಸೂಲಿ ಮಾಡುತ್ತಾರೆ. ಹೆಚ್ಚು ಸುದ್ದಿಯಾಗುವ ಜನರನ್ನೇ ಟಾರ್ಗೆಟ್ ಮಾಡುವ ಈ ‘ಡಾಕ್ಟರೇಟ್ ಗ್ಯಾಂಗ್’, ಅರ್ಜಿ ಕೊಟ್ಟು ನಿಮ್ಮ ಅವರ ಮಾಹಿತಿ ಪಡೆದುಕೊಂಡು ಡಾಕ್ಟರೇಟ್ ಕೊಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆಯಂತೆ.

    ಭಾರತದಲ್ಲಿ ಈ ಹಿಂದೆ ಇಂತಹ ಅಕ್ರಮದಲ್ಲಿ ತೊಡಗಿದ್ದ ಕೆಲ ಯೂನಿವರ್ಸಿಟಿಗಳಿಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಕಡಿವಾಣ ಹಾಕಿತ್ತು. ಆದರೆ ವಿದೇಶಿ ವಿಶ್ವವಿದ್ಯಾಲಯಗಳಿಂದ ಸದ್ಯ ಡಾಕ್ಟರೇಟ್ ಪಡೆದುಕೊಳ್ಳುತ್ತಿರುವ ದಂಧೆಗೆ ಸರ್ಕಾರ ಕಡಿವಾಣ ಹಾಕುತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಉಗ್ರ ಸಂಘಟನೆ ಸೇರಿಕೊಂಡ ಯುಪಿ ವಿದ್ಯಾರ್ಥಿ!

    ಉಗ್ರ ಸಂಘಟನೆ ಸೇರಿಕೊಂಡ ಯುಪಿ ವಿದ್ಯಾರ್ಥಿ!

    ಲಕ್ನೋ: ನಾಪತ್ತೆಯಾಗಿದ್ದ ಉತ್ತರ ಪ್ರದೇಶದ ಖಾಸಗಿ ವಿಶ್ವವಿದ್ಯಾಲಯದ ಕಾಶ್ಮೀರಿ ವಿದ್ಯಾರ್ಥಿ ಉಗ್ರ ಸಂಘಟನೆ ಸೇರಿಕೊಂಡಿದ್ದಾನೆ ಎನ್ನಲಾಗಿದ್ದು, ಆತನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಗ್ರೇಟರ್ ನೋಯ್ಡಾ ಶಾರ್ಡಾ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷ ಓದುತ್ತಿದ್ದ ಶ್ರೀನಗರ ಮೂಲದ ಅಹ್ತೇಶಮ್ ಬಿಲಾಲ್ ಸೋಫಿ ಉಗ್ರ ಸಂಘಟನೆಗೆ ಸೇರಿದ್ದಾನೆ. ಅಹ್ತೇಶಮ್ ದೆಹಲಿಗೆ ಹೋಗುವುದಾಗಿ ಹೇಳಿ ಅಕ್ಟೋಬರ್ 28ರಂದು ನಾಪತ್ತೆಯಾಗಿದ್ದ. ಅವನು ವಿಶ್ವವಿದ್ಯಾಲಯ ಬಿಟ್ಟು ಹೋದ ನಂತರದ ದಿನ ಕ್ಯಾಂಪಸ್‍ನಲ್ಲಿ ಭಾರತೀಯ ಹಾಗೂ ಅಫ್ಘಾನ್ ವಿದ್ಯಾರ್ಥಿಗಳು ಜಗಳವಾಡಿದ್ದರು ಎಂದು ವರದಿಯಾಗಿದೆ.

    ಅಹ್ತೇಶಮ್ ನಾಪತ್ತೆಯಾದ ಕುರಿತು ಗ್ರೇಟರ್ ನೋಯ್ಡಾ ಹಾಗೂ ಶ್ರೀನಗರದ ಖನ್ಯಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಐಎಸ್‍ಜೆಕೆ ಉಗ್ರ ಸಂಘಟನೆಯ ಉಡುಪು ಧರಿಸಿದ ಅಹ್ತೇಶಮ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಎಸ್‍ಜೆಕೆ ಸಂಘಟನೆ ಐಸಿಸ್ ಸಿದ್ಧಾಂತಗಳನ್ನು ಅಳವಡಿಸಿಕೊಂಡಿದ್ದು, ಅದರ ಪ್ರೇರಣೆಯಲ್ಲಿ ಕೆಲಸ ಮಾಡುತ್ತಿದೆ.

    ಗ್ರೇಟರ್ ನೋಯ್ಡಾದಿಂದ ಕಾಶ್ಮೀರದವರೆಗೆ ವಿದ್ಯಾರ್ಥಿ ಬಂದಿರುವುದನ್ನು ಟ್ರಾಕ್ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಸಂಪರ್ಕ ಸಾಧಿಸಿಕೊಂಡು ವಿದ್ಯಾರ್ಥಿಯ ಪತ್ತೆಗೆ ಕಾರ್ಯಾಚರಣೆ ನಡೆದಿದೆ ಎಂದು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿ ಮೂಲಗಳು ತಿಳಿಸಿವೆ.

    ಜಮ್ಮು ಮತ್ತು ಕಾಶ್ಮೀರ ಪರ್ವತ ಶ್ರೇಣಿಯಲ್ಲಿ ಉಗ್ರ ಸಂಘಟನೆ ನೆಲೆ ಕಂಡುಕೊಂಡಿದೆ. ಅವರೊಂದಿಗೆ ಅಹ್ತೇಶಮ್ ಕೂಡ ಇದ್ದಾನೆ ಎನ್ನಲಾಗಿದೆ. ಜೊತೆಗೆ ಅಹ್ತೇಶಮ್ ಮೊಬೈಲ್ ಟ್ರ್ಯಾಕ್ ಮಾಡಿರುವ ಗೌತಮ ಬುದ್ಧನಗರ ಪೊಲೀಸರು, ವಿದ್ಯಾರ್ಥಿ ಪುಲ್ವಾಮ ಜಿಲ್ಲೆಯ ದಕ್ಷಿಣ ಕಾಶ್ಮೀರ ಭಾಗದಲ್ಲಿ ಇದ್ದಾನೆ ಎಂದು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

    ಪುಲ್ವಾಮ ಸೇರಿದ್ದು ಹೇಗೆ?:
    ಗ್ರೇಟರ್ ನೋಯ್ಡಾದಿಂದ ಅಕ್ಟೋಬರ್ 28ರಂದು ದೆಹಲಿಗೆ ಬಂದ ಅಹ್ತೇಶಮ್, ಅಲ್ಲಿಂದ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶ್ರೀನಗರಕ್ಕೆ ಬಂದು ಪುಲ್ವಾಮ ಸೇರಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಅಂದು ಮಧ್ಯಾಹ್ನ 4.30ಕ್ಕೆ ತನ್ನ ತಂದೆಗೆ ಕರೆ ಮಾಡಿ ಮಾತನಾಡಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮತ್ತೆ ಮಾನ ಹರಾಜು – ಸಿರಿಯಾಕ್ಕಿಂತಲೂ ಪಾಕಿಸ್ತಾನ ಅಪಾಯಕಾರಿ ದೇಶ

    ಮತ್ತೆ ಮಾನ ಹರಾಜು – ಸಿರಿಯಾಕ್ಕಿಂತಲೂ ಪಾಕಿಸ್ತಾನ ಅಪಾಯಕಾರಿ ದೇಶ

    ಲಂಡನ್: ಪಾಕಿಸ್ತಾನ ಸಿರಿಯಾ ದೇಶಕ್ಕಿಂತ ಮಾನವಕುಲಕ್ಕೆ ಅಪಾಯ ತಂದ್ದೊಡುವ ಅಪಾಯಕಾರಿ ದೇಶ ಎಂಬುದಾಗಿ ನೂತನ ಅಧ್ಯಯನವೊಂದು ತಿಳಿಸಿದೆ.

    ಉಗ್ರರಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಎಂದು ಭಾರತ ಹೇಳುತ್ತಾ ಬಂದಿದ್ದರೂ ಅದನ್ನು ಅಲ್ಲಗೆಳೆಯುತ್ತಿರುವ ಪಾಕಿಸ್ತಾನದ ನೈಜ ಮುಖವಾಡ ಈಗ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಸ್ಟ್ರಾಟೆಜಿಕ್ ಫೊರೆಟೈಟ್ ಗ್ರೂಪ್ (ಎಸ್‍ಎಫ್‍ಜಿ) ಅಧ್ಯಯನದಲ್ಲಿ ಕಳಚಿ ಬಿದ್ದಿದೆ.

    “ಹ್ಯುಮಾನಿಟಿ ಅಟ್ ರಿಸ್ಕ್- ಗ್ಲೋಬಲ್ ಟೆರೆರ್ ಥ್ರೆಟ್ ಇಂಡಿಕೆಂಟ್” ಶೀರ್ಷಿಕೆ ಅಡಿ ಪ್ರಕಟಗೊಂಡ ವರದಿಯಲ್ಲಿ, ಪಾಕಿಸ್ತಾನದಲ್ಲಿ ಅತೀ ಹೆಚ್ಚು ಉಗ್ರ ಸಂಘಟನೆಗಳು ಇದ್ದು, ಅಘ್ಘಾನ್, ತಾಲಿಬಾನ್ ಮತ್ತು ಲಷ್ಕರ್ – ಇ- ತೊಯ್ಬಾ ಅಂತರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಭಯೋತ್ಪಾದಕ ಸಂಘಟನೆಯಾಗಿದೆ. ಪಾಕಿಸ್ತಾನ ಈ ಉಗ್ರರಿಗೆ ತನ್ನ ದೇಶದಲ್ಲಿ ಆಶ್ರಯ ನೀಡಿ, ಜಗತ್ತಿನ ಅತೀ ಅಪಾಯಕಾರಿ ದೇಶವಾಗಿ ಹೊರಹೊಂದಿದೆ ಎನ್ನುವ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಿದೆ.

    ತಾಲಿಬಾನ್ ಸೇರಿದಂತೆ ಅತ್ಯಂತ ಅಪಾಯಕಾರಿ ಉಗ್ರ ಸಂಘಟನೆಗಳಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನ, ಅವರಿಗೆ ಎಲ್ಲಾ ರೀತಿಯ ಬೆಂಬಲವನ್ನ ನೀಡುತ್ತಿದೆ. ಮುಂದಿನ 2030 ವರ್ಷಕ್ಕೆ, ಹೆಚ್ಚುತ್ತಿರುವ ಉಗ್ರರ ದಾಳಿ ಮತ್ತು ಶಸ್ತ್ರಾಸ್ತ್ರಗಳ ದುರ್ಬಳಕೆಯ ಪರಿಣಾಮ ಮಾನವ ಕುಲದ ಉನ್ನತಿ ಮತ್ತು ಜೀವನ ವಿನಾಶದ ಅಂಚನ್ನು ತಲುಪಲಿದೆ. ಇವೆಲ್ಲವೂ ಭಯೋತ್ಪಾದನೆಯೊಂದಿಗೆ ಪರಸ್ಪರ ಸಂಬಂಧ ಹೊಂದಿದೆ ಎಂದು 80 ಪುಟಗಳ ವರದಿಯಲ್ಲಿ ಕಟುವಾಗಿ ವಿವರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗದಗ ಗ್ರಾಮೀಣ ವಿವಿಗೆ ಸಿದ್ದಲಿಂಗ ಶ್ರೀಗಳ ಹೆಸರು : ಸಿಎಂ ಎಚ್‍ಡಿಕೆ

    ಗದಗ ಗ್ರಾಮೀಣ ವಿವಿಗೆ ಸಿದ್ದಲಿಂಗ ಶ್ರೀಗಳ ಹೆಸರು : ಸಿಎಂ ಎಚ್‍ಡಿಕೆ

    ಗದಗ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ಆರ್ ಡಿಪಿಆರ್)ಕ್ಕೆ ಶ್ರೀಗಳ ಹೆಸರು ನಾಮಕರಣ ಮಾಡುವ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ಮಾಡುವುದಾಗಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ತೋಂಟದಚಾರ್ಯ ಶ್ರೀಗಳ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಸಿಎಂ, ಶ್ರೀಗಳ ಅಗಲಿಕೆಯಿಂದ ಆಘಾತ ಉಂಟಾಗಿದೆ. ವೈಯಕ್ತಿಕವಾಗಿ ನಾನು ಒಬ್ಬ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ. ಉತ್ತರ ಕರ್ಣಾಟಕದ ಬಗ್ಗೆ ನನಗೆ ಹಲವಾರು ಹೊಸ ವಿಚಾರಗಳನ್ನು ತಿಳಿಸಿದವರಲ್ಲಿ ಶ್ರೀಗಳು ಪ್ರಮುಖರು. ನಾಡಿಗೆ ಅವರು ಕೊಟ್ಟ ಕೊಡುಗೆ ಅಪಾರ. ಭಕ್ತರು ಗದಗ ಗ್ರಾಮೀಣ ವಿಶ್ವವಿದ್ಯಾಲಯಕ್ಕೆ ಸಿದ್ದಲಿಂಗ ಶ್ರೀಗಳ ಹೆಸರು ಇಡುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಸಂಪುಟದಲ್ಲಿ ಚರ್ಚೆ ನಡೆಸುತ್ತೇನೆ. ಗದಗಿನ ಮಲ್ಲ ಸಮುದ್ರದ ಪಕ್ಕದಲ್ಲಿ ಗ್ರಾಮೀಣ ವಿಶ್ವವಿದ್ಯಾಲಯ ನಿರ್ಮಾಣವಾಗುತ್ತಿದ್ದು, ಭಕ್ತರ ಮನವಿಯನ್ನು ಸ್ವೀಕರಿಸಿದ್ದೇನೆ ಎಂದರು.

    ಶ್ರೀಗಳ ಅಗಲಿಕೆ ಸುದ್ದಿ ಕೇಳಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಶ್ರೀಗಳ ಅಗಲಿಕೆಯಿಂದ ಸಮಾಜಕ್ಕೆ ಆಗಿರುವ ನಷ್ಟಕ್ಕಿಂತ ಹೆಚ್ಚು ನನಗೆ ನಷ್ಟ ಆಗಿದೆ. ಅವರು ಕೇವಲ ಉತ್ತರ ಕರ್ಣಾಟಕದ ಸ್ವಾಮೀಜಿ ಅಲ್ಲ. ಇಡೀ ನಾಡಿನ ಶ್ರೀಗಳು. ಅವರ ಕಾರ್ಯಗಳನ್ನು ನಾಗನೂರು ಶ್ರೀಗಳು ಮುಂದುವರಿಸಿಕೊಂಡು ಹೋಗುತ್ತಾರೆ. ಈ ಕುರಿತ ನಂಬಿಕೆ ನನಗಿದೆ. ಅಲ್ಲದೇ ಇಬ್ಬರ ನಡುವೇ ಅವಿನಾಭಾವ ಸಂಬಂಧ ಇದ್ದು, ನನ್ನ ಮೊದಲ ಗ್ರಾಮ ವಾಸ್ತವ್ಯ ನಾಗನುರು ಮಠದಿಂದಲೇ ಆರಂಭ ಮಾಡಿರುವೆ. ನಾಗನುರು ಶ್ರೀಗಳು ತೋಂಟದಚಾರ್ಯ ಮಠವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಲಿ ಎಂದು ಹಾರೈಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿವಿ ಕ್ಯಾಂಪಸ್‍ನಲ್ಲಿ ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನಕ್ಕಾಗಿ ಪ್ರಿಯಕರನನ್ನು ಕೊಂದಿದ್ದ ಆರೋಪಿಗಳು ಅರೆಸ್ಟ್

    ವಿವಿ ಕ್ಯಾಂಪಸ್‍ನಲ್ಲಿ ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನಕ್ಕಾಗಿ ಪ್ರಿಯಕರನನ್ನು ಕೊಂದಿದ್ದ ಆರೋಪಿಗಳು ಅರೆಸ್ಟ್

    ಕಲಬುರಗಿ: ಪ್ರೇಯಸಿಯ ಕತ್ತಿನಲ್ಲಿದ್ದ ಚಿನ್ನ ಹಾಗೂ ಮೊಬೈಲ್‍ಗಾಗಿ ಪ್ರಿಯಕರಿಗೆ ಚಾಕು ಇರಿದು ಕೊಲೆಗೈದಿದ್ದ ಇಬ್ಬರು ಆರೋಪಿಗಳನ್ನು ನರೋಣ ಪೊಲೀಸರು ಬಂಧಿಸಿದ್ದಾರೆ.

    ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಮನೋಜ್ ಅಲಿಯಾಸ್ ಪ್ರಸಾದ್ ಮಠಪತ್ತಿ ಕೊಲೆಯಾಗಿದ ದುರ್ದೈವಿ. ಕಲಬುರಗಿ ಹೊರವಲಯದ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಕಳೆದ ತಿಂಗಳು 23ರಂದು ಘಟನೆ ನಡೆದಿದ್ದು, ಕೃತ್ಯ ಎಸಗಿದ್ದ ಕಡಗಂಚಿ ಗ್ರಾಮದ ಶಾಂತಪ್ಪ ದಂಡಘುಟಿ ಹಾಗೂ ಇನ್ನೋರ್ವ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆಗಿದ್ದೇನು?: ಮನೋಜ್ ಹೈದರಾಬಾದ್‍ನಲ್ಲಿ ಕೆಲಸ ಮಾಡುತ್ತಿದ್ದು, ಭಾಲ್ಕಿ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದ. ದ್ವಿತೀಯ ವರ್ಷದ ಸ್ನಾತಕೋತ್ತರ ಪದವಿ ಓದುತ್ತಿದ್ದ ಪ್ರೇಯಸಿಯನ್ನು ಭೇಟಿಯಾಗಲು ಬಂದಿದ್ದ. ಈ ವೇಳೆ ತನ್ನ ಜನ್ಮದಿನ ಇಲ್ಲದಿದ್ದರೂ, ಕೇಂದ್ರಿಯ ವಿಶ್ವವಿದ್ಯಾಲಯದ ಕಟ್ಟಡ ಒಂದರ ಮೇಲೆ ಕೇಕ್ ಕತ್ತರಿಸಿ ಮನೋಜ್ ಸಂಭ್ರಮಿಸಿದ್ದ. ಬಳಿಕ ಕ್ಯಾಂಪಸ್‍ನಲ್ಲಿ ಏಕಾಂತವಾಗಿ ಮನೋಜ್ ತನ್ನ ಪ್ರೇಯಸಿಯ ಜೊತೆಗೆ ಕುಳಿತಿದ್ದ.

    ಕಳ್ಳತನ ಮಾಡಲು ಬಂದಿದ್ದ ಶಾಂತಪ್ಪ ದಂಡಘುಟಿ ಹಾಗೂ ಮತ್ತೋರ್ವ ಯುವಕ ಪ್ರೇಮಿಗಳಿಗೆ ಚಾಕು ತೋರಿಸಿ ಮೊಬೈಲ್ ಹಾಗೂ ಚಿನ್ನದ ಸರ ನೀಡುವಂತೆ ತಿಳಿಸಿದ್ದಾರೆ. ಆದರೆ ಇದಕ್ಕೆ ಹೆದರದ ಮನೋಜ್, ಅವರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಶಾಂತಪ್ಪ ಚಾಕು ಬೀಸಿದ ಪರಿಣಾಮ ಮನೋಜ್ ಕುತ್ತಿಗೆಗೆ ಬಲವಾದ ಹೊಡೆತ ಬಿದ್ದಿದೆ. ಮನೋಜ್ ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾನೆ ಎಂದು ಮತ್ತೆ ಹೊಟ್ಟೆಗೆ ಚಾಕುನಿಂದ ಇರಿದು ಕೊಲೆ ಮಾಡಿ, ಯುವತಿಯ ಬಳಿ ಇದ್ದ ಸರ ಹಾಗೂ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಮನೋಜ್ ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದ. ಈ ಕುರಿತು ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಆರೋಪಿಗಳು ಸಿಕ್ಕಿದ್ದು ಹೇಗೆ?:
    ಯುವತಿಯಿಂದ ಕಿತ್ತುಕೊಂಡು ಬಂದಿದ್ದ ಮೊಬೈಲ್ ಅನ್ನು ತಮ್ಮ ಗ್ರಾಮದ ಕಡಗಂಚಿಯ ನಿವಾಸಿ ಲಕ್ಷ್ಮಣ ಎಂಬವರಿಗೆ ಮಾರಾಟ ಮಾಡಿದ್ದಾರೆ. ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಗ್ರಾಮಕ್ಕೆ ಬಂದಿದ್ದ. ಆರೋಪಿಗಳಿಂದ ಕಡಿಮೆ ಬೆಲೆ ಮೊಬೈಲ್ ಪಡೆದಿದ್ದ ಲಕ್ಷ್ಮಣ ಮತ್ತೆ ಪುಣೆಗೆ ಕೆಲಸಕ್ಕೆ ಮರಳಿದ್ದ. ಯುವತಿ ನೀಡಿದ ಮಾಹಿತಿ ಆಧಾರದ ಮೇಲೆ ಫೋನ್ ಟ್ರ್ಯಾಕ್ ಮಾಡಿದ ಪೊಲೀಸರು, ಮೊಬೈಲ್ ಪುಣೆಯಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡು ಲಕ್ಷ್ಮಣನನ್ನು ವಶಕ್ಕೆ ಪಡೆದು, ಕರೆ ತಂದಿದ್ದರು.

    ಲಕ್ಷ್ಮಣನನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದ ತಕ್ಷಣವೇ ಪೊಲೀಸರು ಬಲೆ ಬೀಸಿ ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ನಾವು ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿಲ್ಲ. ಚಾಕು ತಗುಲಿಸಿದ್ದರಿಂದ ಎಲ್ಲಿ ನಮ್ಮ ಹೆಸರು ಹೇಳುತ್ತಾನೆ ಅಂತಾ ಕೊಲೆ ಮಾಡಿದ್ದೇವೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಈ ಹಿಂದೆ ಕ್ಯಾಂಪಸ್ ನಿರ್ಜನ ಪ್ರದೇಶದಲ್ಲಿ ಸಿಗುತ್ತಿದ್ದ ಪ್ರೇಮಿಗಳನ್ನು ಬೆದರಿಸಿ, ಅವರಿಂದ ಹಣ ದೋಚುತ್ತಿದ್ದೇವು ಅಂತಾ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ವಿಶ್ವವಿದ್ಯಾಲಯದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಇಲ್ಲದಿರುದನ್ನು ಕೆಲ ದುಷ್ಕರ್ಮಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ಈ ಹಿಂದೆ ಕ್ಯಾಂಪಸ್‍ನಲ್ಲಿ ಕುರಿ ಮೇಯಿಸುವ ನೇಪದಲ್ಲಿ ಬಂದು, ಕಳ್ಳತನ ಮಾಡುತ್ತಿದ್ದರು. ತರಗತಿಗಳು ಮುಗಿದ ಮೇಲೆ ಕ್ಯಾಂಪಸ್‍ನಲ್ಲಿ ಏಕಾಂಗಿಯಾಗಿ ಸಿಗುತ್ತಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿ, ಹಣ ದೋಚುತ್ತಿದ್ದರು ಎನ್ನವ ಮಾಹಿತಿ ಲಭ್ಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಫ್ರೀ ಸಾಫ್ಟ್ ವೇರ್ ಇದ್ರೂನೂ ಖಾಸಗಿಯೇ ಬೇಕು- ವಿವಿಗಳಿಂದ ಕೋಟಿ ಕೋಟಿ ಲೂಟಿ!

    ಫ್ರೀ ಸಾಫ್ಟ್ ವೇರ್ ಇದ್ರೂನೂ ಖಾಸಗಿಯೇ ಬೇಕು- ವಿವಿಗಳಿಂದ ಕೋಟಿ ಕೋಟಿ ಲೂಟಿ!

    ಬೆಂಗಳೂರು: ರೈತರ ಸಾಲ ಮನ್ನಾ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋ ಸರ್ಕಾರ, ಖರ್ಚು ಕಡಿಮೆ ಮಾಡಿ ಅಂತ ಸಿ.ಎಂ ಕುಮಾರಸ್ವಾಮಿಯವರು ಎಷ್ಟೇ ಮನವಿ ಮಾಡಿದ್ರು ಅವರ ಸಚಿವರು ಮಾತ್ರ ಖರ್ಚುಮಾಡ್ತಾನೆ ಇದ್ದಾರೆ.

    2015 ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಯನ್ನ ಬಳಸಿಕೊಳ್ಳದೇ ವಿವಿ ಬೇಜವಾಬ್ದಾರಿಯನ್ನು ತೋರಿದೆ. ಸರ್ಕಾರ ಉಚಿತವಾಗಿ ನೀಡಿರೋ ನಿಖ್ ಸಾಫ್ಟ್ ವೇರ್ ಅನ್ನು ಎಲ್ಲಾ ವಿವಿಗಳು ಬಳಸಬೇಕು ಅಂತ ಸರ್ಕಾರಿ ಆದೇಶವಿದ್ರೂ ಅದನ್ನು ಉಲ್ಲಂಘಿಸಿದೆ. ಅದನ್ನು ಬಳಸದೇ ಖಾಸಗಿ ಸಂಸ್ಥೆಗಳ ಮೂಲಕ ಮಹತ್ವದ ಪರೀಕ್ಷಾ ದಾಖಲಾತಿಗೆ ಮಾರ್ಕ್ಸ್ ಕಾರ್ಡ್ ಪ್ರಿಂಟ್‍ಗೆ ಟೆಂಡರ್ ಕರೆದಿದ್ದಾರೆ. ಹಾಗಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ತನ್ನ ವ್ಯಾಪ್ತಿ ಅಡಿಯಲ್ಲಿ ಬರೋ ಎಲ್ಲಾ ವಿಶ್ವವಿದ್ಯಾಲಯಗಳು ಖಾಸಗಿ ಸಾಫ್ಟ್ ವೇರ್ ಖರೀದಿಗೆ ಮೌಖಿಕ ಆದೇಶ ನೀಡಿದ್ದಾರೆ.

    ಒಂದೇ ಕೆಲಸಕ್ಕೆ ವಿವಿಗಳಿಂದ ಎರಡೆರಡು ಸಾಫ್ಟ್ ವೇರ್ ಅನ್ನ ಖರೀದಿ ಮಾಡುತ್ತಿದ್ದು, ಇದಕ್ಕಾಗಿ ಕೋಟಿ ಕೊಟಿ ರೂ ವೆಚ್ಚವನ್ನು ಖರ್ಚುಮಾಡುವ ಪರಿಸ್ಥಿತಿ ಬಂದಿದೆ. ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ದಾವಣಗೆರೆ, ಕಲಬರುಗಿ ವಿವಿಗಳಿಂದ ಈ ರೀತಿ ಖರೀದಿಗಳು ಸಾಧ್ಯವಾಗುತ್ತಿದೆ.

  • ಸಿದ್ದರಾಮಯ್ಯಗೆ ಸಚಿವ ಜಿಟಿ ದೇವೇಗೌಡ ಟಾಂಗ್

    ಸಿದ್ದರಾಮಯ್ಯಗೆ ಸಚಿವ ಜಿಟಿ ದೇವೇಗೌಡ ಟಾಂಗ್

    ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವಿನ ಗುದ್ದಾಟ ಮುಂದುವರಿದಿದೆ. ಸಿದ್ದರಾಮಯ್ಯ ಕಾಲದಲ್ಲಿ ನೇಮಕ ಮಾಡಿದ್ದ ಸಿಂಡಿಕೇಟ್ ಸದಸ್ಯರ ನೇಮಕಾತಿ ರದ್ದು ಮಾಡಿರುವುದನ್ನು ಸಚಿವ ಜಿಟಿ ದೇವೇಗೌಡ ಮತ್ತೆ ಪ್ರಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರ ಬಂದರು ಹಿಂದಿನ ಸರ್ಕಾರದ ನೇಮಕಾತಿ ರದ್ದು ಮಾಡಲಾಗುತ್ತದೆ. ಹೀಗಾಗಿ ನಾನು ಅದನ್ನೇ ಮಾಡಿದ್ದೇನೆ. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಬಿಜೆಪಿ ಅವಧಿಯ ಸದಸ್ಯರ ನೇಮಕ ಮಾಡಿ 6 ತಿಂಗಳು ಮಾತ್ರ ಕಳೆದಿದ್ದರು ರದ್ದು ಮಾಡಿದ್ದರು ಎಂದು ಹೇಳುವ ಮೂಲಕ ಟಾಂಗ್ ನೀಡಿದರು.

    ಹಿಂದಿನ ಸರ್ಕಾರದಲ್ಲಿ ಅರ್ಹತೆ ಇಲ್ಲದವರನ್ನು ಸಿಂಡಿಕೇಟ್, ಅಕಾಡೆಮಿಕ್ ಸದಸ್ಯರಾಗಿ ನೇಮಕ ಮಾಡಲಾಗಿದೆ. ನಮ್ಮ ಸರ್ಕಾರದಲ್ಲಿ ಹೀಗೆ ಆಗುವುದಿಲ್ಲ. ಈ ಹುದ್ದೆಗೆ ಅರ್ಹತೆ ಇರುವವರನ್ನು ನೇಮಕ ಮಾಡಲಾಗುತ್ತೆ. ಇದರಲ್ಲಿ ರಾಜಕೀಯ ಮಧ್ಯಪ್ರವೇಶ ಮಾಡುವುದನ್ನ ತಡೆಯಲಾಗುವುದು. ತಜ್ಞರನ್ನು ಮಾತ್ರ ಆಯ್ಕೆ ಮಾಡಲಾಗುವುದು ಎಂದು ಮಾಜಿ ಸಿಎಂಗೆ ಮತ್ತೊಮ್ಮೆ ಚಾಟಿ ಬೀಸಿದರು. ಇನ್ನು ವಿವಿಧ ವಿಶ್ವವಿಶ್ವದ್ಯಾಲಯಗಳ ಕುಲಪತಿಗಳ ನೇಮಕಕ್ಕೆ ಸಮಿತಿ ರಚಿಸಿ ಈ ಸಮಿತಿ ನೀಡಿದ ಹೆಸರುಗಳನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುತ್ತದೆ. ಈ ಬಳಿಕ ನಿಯಮಗಳ ಪ್ರಕಾರ ಕುಲಪತಿಗಳ ನೇಮಕ ಮಾಡಲಾಗುತ್ತದ ಎಂದರು.

  • ಬಳ್ಳಾರಿ ವಿಎಸ್‍ಕೆ ವಿವಿ ನೇಮಕಾತಿಯಲ್ಲಿ ಅಕ್ರಮ – ಕುಲಪತಿ, ಕುಲಸಚಿವರಿಂದ್ಲೇ ದೊಡ್ಡ ಗೋಲ್‍ಮಾಲ್!

    ಬಳ್ಳಾರಿ ವಿಎಸ್‍ಕೆ ವಿವಿ ನೇಮಕಾತಿಯಲ್ಲಿ ಅಕ್ರಮ – ಕುಲಪತಿ, ಕುಲಸಚಿವರಿಂದ್ಲೇ ದೊಡ್ಡ ಗೋಲ್‍ಮಾಲ್!

    ಬಳ್ಳಾರಿ: ಸದಾ ಒಂದಿಲ್ಲೊಂದು ಹಗರಣಗಳಲ್ಲಿ ಸುದ್ದಿಯಾಗ್ತಿರೋ ಬಳ್ಳಾರಿಯಲ್ಲಿ ಇದೀಗ ಮತ್ತೊಂದು ಅಕ್ರಮ ನಡೆದಿದೆ. ಬಳ್ಳಾರಿ ವಿಎಸ್‍ಕೆ ವಿವಿ ನೇಮಕಾತಿಯಲ್ಲಿ ಗೋಲ್‍ಮಾಲ್ ನಡೆದಿದೆ.

    ವಿಶ್ವ ವಿದ್ಯಾಲಯದ ನೇಮಕಾತಿಗಳಲ್ಲಿ ಅಕ್ರಮ ತಡೆಗಟ್ಟಬೇಕಾದ ಕುಲಪತಿ ಹಾಗೂ ಆಡಳಿತ ವಿಭಾಗದ ಕುಲಸಚಿವರೇ ತಮ್ಮ ಸಂಬಂಧಿಕರಿಗೆ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆಗಳನ್ನು ಕೊಡಿಸಲು ವಿವಿ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ.

    ವಿಶ್ವ ವಿದ್ಯಾಲಯದ ಕುಲಪತಿ ಎಂ ಎಸ್ ಸುಭಾಷ್ ರ ಅಳಿಯ ರಮೇಶ್ ಚಂದ್ರಹಾಸ ಹಾಗೂ ಆಡಳಿತ ಕುಲಸಚಿವ ಎಸ್‍ಎ ಪಾಟೀಲರ ಪುತ್ರ ಸಂತೋಷ್ ಪಾಟೀಲ ನಿಯಮ ಉಲ್ಲಂಘಿಸಿ ಪರೀಕ್ಷೆ ಬರೆದಿರುವುದು ಇದೀಗ ಬಯಲಾಗಿದೆ. ಕುಲಪತಿ ಹಾಗೂ ಆಡಳಿತ ಕುಲಸಚಿವರು ನಡೆಸಿದ ಅಕ್ರಮದ ವಿರುದ್ಧ ಇದೀಗ ಮೌಲ್ಯಮಾಪನ ಕುಲಸಚಿವರೇ ತಕರಾರು ತಗೆದಿದ್ದಾರೆ.

    ಪೊಲೀಸ್ ಪೇದೆಯಿಂದ ಹಿಡಿದು ಉನ್ನತ ಹುದ್ದೆಗಳ ನೇಮಕಾತಿ ವೇಳೆ ಪರೀಕ್ಷಾರ್ಥಿಗಳಿಗೆ ಪರೀಕ್ಷೆ ವೇಳೆ ನಕಲು ಪ್ರತಿ ನೀಡಲಾಗುತ್ತೆ. ಆದ್ರೆ ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿವಿಯ ನೇಮಕಾತಿ ವೇಳೆ ಕುಲಪತಿಗಳು ಹಾಗೂ ಆಡಳಿತ ವಿಭಾಗದ ಕುಲಸಚಿವರ ಸಂಬಧಿಕರಿಗೆ ಅನೂಕೂಲ ಮಾಡಿಕೊಡುವ ಸಲುವಾಗಿ ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳಿಗೆ ಓಎಂಆರ್ ಕಾರ್ಬನ್ ಕಾಫಿ ನೀಡಿರಿಲಿಲ್ಲ. ಅಲ್ಲದೇ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆಗಳನ್ನು ಸೀಡ್ ಕವರ್‍ನಲ್ಲಿ ತರದೇ ಓಪನ್ ಕವರ್‍ನಲ್ಲಿದ್ದ ಪ್ರಶ್ನೆ ಪ್ರತಿಕೆಗಳನ್ನು ಪರೀಕ್ಷಾರ್ಥಿಗಳಿಗೆ ನೀಡಿರುವುದು ಅಕ್ರಮವೆಂದು ಮೌಲ್ಯಮಾಪನ ಕುಲಸಚಿವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

    ಪರೀಕ್ಷಾ ವಿಭಾಗವನ್ನು ಪರಿಗಣಿಸದೆ ನಿಯಮ ಮೀರಿ ನೇಮಕಾತಿ ನಡೆಸಿರುವ ಬಗ್ಗೆ ಮೌಲ್ಯಮಾಪನ ಕುಲಸಚಿವ ಹೊನ್ನೂ ಸಿದ್ದಾರ್ಥ, ರಾಜ್ಯಪಾಲರಿಗೆ ಬರೆದಿರುವ ಪತ್ರ ಇದೀಗ ಪಬ್ಲಿಕ್ ಟಿವಿ ಲಭ್ಯವಾಗಿದೆ. ಲಿಖಿತವಾಗಿ ದೂರು ಸಲ್ಲಿಕೆ ಮಾಡಿರುವ ಮೌಲ್ಯಮಾಪನ ಕುಲಸಚಿವರು ಅಕ್ರಮ ನೇಮಕಾತಿ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

    ನೇಮಕಾತಿಗಳ ನಿಯಮದಡಿಯಲ್ಲಿ ಅರ್ಹತೆಯಿದ್ದವರು ಯಾರೂ ಬೇಕಾದ್ರೂ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ಆದ್ರೆ ಸಂಬಧಿಕರಿಗೆ ಉದ್ಯೋಗ ಕೊಡಿಸಲು ಓಎಂಆರ್ ನಕಲು ಪ್ರತಿಗಳನ್ನ ನೀಡದಿರುವುದು ಹಾಗೂ ತೆರದ ಕವರ್‍ನಲ್ಲಿದ್ದ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾರ್ಥಿಗಳಿಗೆ ವಿತರಣೆ ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಆಡಳಿತ ವಿಭಾಗದ ಕುಲಸಚಿವರು ಹಾಗೂ ಕುಲಪತಿಗಳು ತಮ್ಮ ಸಂಬಂಧಿಕರನ್ನು ನೇಮಕಾತಿ ಮಾಡಲು ನಡೆಸಿದ ಈ ಅಕ್ರಮದ ಬಗ್ಗೆ ತನಿಖೆ ಸ್ವಂತ ಮೌಲ್ಯಮಾಪನ ಕುಲಸಚಿವರೇ ತಕರಾರು ತಗೆದು ರಾಜ್ಯಪಾಲರಿಗೆ ದೂರು ಸಲ್ಲಿಸಿರುವುದರಿಂದ ಅಕ್ರಮ ನೇಮಕಾತಿ ಪ್ರಕರಣ ಇದೀಗ ವಿವಾದ ಸೃಷ್ಠಿ ಮಾಡಿದಂತಾಗಿದೆ. ಈ ಬಗ್ಗೆ ರಾಜ್ಯಪಾಲರು ಎನೂ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ.

     

  • ವಿಡಿಯೋ: ಫ್ಲೋರಿಡಾದಲ್ಲಿ ಬ್ರಿಡ್ಜ್ ಕುಸಿದು ಬಿದ್ದ ದೃಶ್ಯ ಡ್ಯಾಶ್‍ಕ್ಯಾಮ್ ನಲ್ಲಿ ಸೆರೆ

    ವಿಡಿಯೋ: ಫ್ಲೋರಿಡಾದಲ್ಲಿ ಬ್ರಿಡ್ಜ್ ಕುಸಿದು ಬಿದ್ದ ದೃಶ್ಯ ಡ್ಯಾಶ್‍ಕ್ಯಾಮ್ ನಲ್ಲಿ ಸೆರೆ

    ಫ್ಲೋರಿಡಾ: ಕಳೆದ ವಾರ ಫ್ಲೋರಿಡಾದಲ್ಲಿ ಪಾದಚಾರಿ ಸೇತುವೆ ಕುಸಿದು 6 ಮಂದಿ ಸಾವುನ್ನಪ್ಪಿದ್ದು, ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ದಕ್ಷಿಣ ಫ್ಲೋರಿಡಾದ ಮಿಯಾಮಿ ವಿಶ್ವವಿದ್ಯಾಲಯದ ಬಳಿ ಮಾರ್ಚ್ 15 ರಂದು ಸೇತುವೆ ಕುಸಿದಿತ್ತು. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿ, ಹಲವು ವಾಹನಗಳು ಜಖಂಗೊಂಡಿದ್ದವು.

    174 ಅಡಿ ಎತ್ತರವಿರುವ ಸೇತುವೆಯು ಫ್ಲೋರಿಡಾ ವಿಶ್ವವಿದ್ಯಾಲಯ ಮತ್ತು ಸ್ವೀಟ್‍ವಾಟರ್ ನಗರವನ್ನ ಸಂಪರ್ಕಿಸಲು ನಿರ್ಮಾಣ ಮಾಡಲಾಗಿತ್ತು. ಅಲ್ಲದೇ ಮಾರ್ಚ್ 10ರಂದು ಸೇತುವೆಯನ್ನ ಲೋಕಾರ್ಪಣೆ ಮಾಡಲಾಗಿತ್ತು. ವಾಹನ ದಟ್ಟಣೆ ಇರುವ ರಸ್ತೆಯನ್ನ ದಾಟಲು ಜನರಿಗೆ ಅನುಕೂಲವಾಗಲು ಈ ಸೇತುವೆಯನ್ನ ನಿರ್ಮಿಸಲಾಗಿತ್ತು.

     

    ಸುಮಾರು 14.2 ಮಿಲಿಯನ್ ಡಾಲರ್ (ಅಂದಾಜು 92 ಕೋಟಿ ರೂ.) ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಸೇತುವೆ, ಚಂಡಮಾರುತಗಳನ್ನ ಸಹಿಸಬಲ್ಲ ಮತ್ತು 100 ವರ್ಷಗಳ ಕಾಲ ಬಾಳಿಕೆ ಬರುವ ಹಾಗೆ ನಿರ್ಮಿಸಲಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿತ್ತು.

    ವಿಪರ್ಯಾಸವೆಂಬಂತೆ ಸೇತುವೆ ಲೋಕಾರ್ಪಣೆಗೊಂಡ ಕೆಲವೇ ದಿನಗಳಲ್ಲಿ ಕುಸಿದು ಬಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಸದ್ಯ ರಾಷ್ಟ್ರೀಯ ಸಾರಿಗೆ ಮತ್ತು ಸುರಕ್ಷತಾ ಮಂಡಳಿಯ ತಂಡವು ಸೇತುವೆ ಕುಸಿದ ಕಾರಣದ ಬಗ್ಗೆ ತನಿಖೆ ನಡೆಸುತ್ತಿದೆ.

    ಕಳೆದ ವರ್ಷ ಆಗಸ್ಟ್ ನಲ್ಲಿ ಫ್ಲೋರಿಡಾ ವಿಶ್ವವಿದ್ಯಾಲಯದ 18 ವರ್ಷದ ವಿದ್ಯಾರ್ಥಿನಿಯೊಬ್ಬರು ರಸ್ತೆ ದಾಟುವ ವೇಳೆ ಅಪಘಾತ ಸಂಭವಿಸಿ ಸಾವನ್ನಪ್ಪಿದ್ದರು. ಘಟನೆಯ ಬಳಿಕ ವೇಗವರ್ಧಿತ ಸೇತುವೆ ನಿರ್ಮಾಣ ತಂತ್ರಜ್ಞಾನವನ್ನು ಬಳಸಿ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು.

    https://www.instagram.com/p/BgWp1fCBPqG/?taken-at=249903486

  • ಕಳೆದ ವಾರವಷ್ಟೇ ಲೋಕಾರ್ಪಣೆಗೊಂಡಿದ್ದ ಪಾದಚಾರಿ ಸೇತುವೆ ಕುಸಿದು 4 ಮಂದಿ ಸಾವು

    ಕಳೆದ ವಾರವಷ್ಟೇ ಲೋಕಾರ್ಪಣೆಗೊಂಡಿದ್ದ ಪಾದಚಾರಿ ಸೇತುವೆ ಕುಸಿದು 4 ಮಂದಿ ಸಾವು

    ಫ್ಲೋರಿಡಾ: ಕಳೆದ ವಾರವಷ್ಟೇ ಲೋಕಾರ್ಪಣೆಗೊಂಡಿದ್ದ ಪಾದಚಾರಿ ಸೇತುವೆ ಕುಸಿದು ನಾಲ್ಕು ಮಂದಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಫ್ಲೋರಿಡಾದ ಮಿಯಾಮಿ ವಿಶ್ವವಿದ್ಯಾಲಯದ ಬಳಿ ಗುರುವಾರದಂದು ನಡೆದಿದೆ. ಸೇತುವೆಯ ಅಡಿಯಲ್ಲಿ 8 ಕಾರುಗಳು ಹಾಗೂ ಇನ್ನೂ ಹಲವಾರು ಮಂದಿ ಸಿಲುಕಿದ್ದಾರೆಂದು ವರದಿಯಾಗಿದೆ.

    ಸೇತುವೆಯ ಅಡಿಯಲ್ಲಿ ಸಿಲುಕಿ ಕಾರುಗಳು ಜಖಂಗೊಂಡಿದ್ದು, 9 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನ ಹತ್ತಿರದ ಆಸ್ಪತ್ರೆಗೆ ಸೇರಿಸಿಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

    173 ಅಡಿ ಎತ್ತರವಿರುವ ಸೇತುವೆಯು ಫ್ಲೋರಿಡಾ ವಿಶ್ವವಿದ್ಯಾಲಯ ಮತ್ತು ಸ್ವೀಟ್‍ವಾಟರ್ ನಗರವನ್ನ ಸಂಪರ್ಕಿಸುತ್ತದೆ. ಸೇತುವೆಯನ್ನ ಮಾರ್ಚ್ 10ರಂದು ಲೋಕಾರ್ಪಣೆ ಮಾಡಲಾಗಿತ್ತು. ವಾಹನ ದಟ್ಟಣೆ ಇರುವ ರಸ್ತೆಯನ್ನ ದಾಟಲು ಜನರಿಗೆ ಅನುಕೂಲವಾಗಲು ಈ ಸೇತುವೆಯನ್ನ ನಿರ್ಮಿಸಲಾಗಿತ್ತು.

    ಸುಮಾರು 14.2 ಮಿಲಿಯನ್ ಡಾಲರ್ (ಅಂದಾಜು 92 ಕೋಟಿ ರೂ.) ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸೇತುವೆ, ಚಂಡಮಾರುತಗಳನ್ನ ಸಹಿಸಬಲ್ಲ ಮತ್ತು 100 ವರ್ಷಗಳ ಕಾಲ ಬಾಳಿಕೆ ಬರುವ ಹಾಗೆ ನಿರ್ಮಿಸಲಾಗಿದೆ ಎಂದು ವಿಶ್ವವಿದ್ಯಾಲಯ ಹೇಳಿತ್ತು.

    ವಿಪರ್ಯಾಸವೆಂದರೆ ಸೇತುವೆ ಲೋಕಾರ್ಪಣೆಗೊಂಡ ಕೆಲವೇ ದಿನಗಳಲ್ಲಿ ಕುಸಿದು ಬಿದ್ದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ರಾಷ್ಟ್ರೀಯ ಸಾರಿಗೆ ಮತ್ತು ಸುರಕ್ಷತಾ ಮಂಡಳಿಯ ತಂಡವು ಸೇತುವೆ ಕುಸಿದ ಕಾರಣದ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ.

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ಘಟನೆಯ ಸಂಕ್ಷಿಪ್ತ ವಿವರವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳನ್ನ ಸಲ್ಲಿಸಿದ್ದಾರೆ. ಗವರ್ನರ್ ಸ್ಕಾಟ್, ಸೆನೆಟರ್ ಮಾರ್ಕೊ ರುಬಿಯೊರೊಂದಿಗೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.

    https://www.instagram.com/p/BgWnBIrFepW/?utm_source=ig_embed

    https://www.instagram.com/p/BgWp1fCBPqG/?utm_source=ig_embed