Tag: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

  • ಪೇಜಾವರ ಶ್ರೀಗಳ ಆರೋಗ್ಯದಲ್ಲಿ ವೃದ್ಧಿ- ಕೃಷ್ಣಾಪುರ ಶ್ರೀ

    ಪೇಜಾವರ ಶ್ರೀಗಳ ಆರೋಗ್ಯದಲ್ಲಿ ವೃದ್ಧಿ- ಕೃಷ್ಣಾಪುರ ಶ್ರೀ

    ಉಡುಪಿ: ಪೇಜಾವರ ಶ್ರೀಗಳ ಅನಾರೋಗ್ಯ ಹಿನ್ನೆಲೆಯಲ್ಲಿ ಕೆಎಂಸಿಯಲ್ಲಿ ಕಳೆದೆರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದು, ಶ್ರೀಗಳ ಎದೆಯಲ್ಲಿರುವ ಕಫ ನೀರಾಗುತ್ತಿದೆ. ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಪೇಜಾವರ ಕಿರಿಯಶ್ರೀ, ಕೃಷ್ಣಾಪುರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗುರುಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವಯೋ ಸಹಜದಿಂದಾಗಿ ನಿಧಾನವಾಗಿ ಗುಣಮುಖರಾಗಲು ಆಗುತ್ತಿದ್ದಾರೆ. ಭಕ್ತರು ಯಾರು ಕೂಡ ಉದ್ವೇಗಕ್ಕೆ ಒಳಗಾಗಬೇಡಿ. ಎಲ್ಲರೂ ಅಲ್ಲಲ್ಲೇ ಪ್ರಾರ್ಥನೆ ಮಾಡಿ ಎಂದು ಹೇಳಿದರು. ವೆಂಟಿಲೇಟರ್ ನಲ್ಲೆ ಉಸಿರಾಟ ಮುಂದುವರಿಸಲಾಗಿದೆ. ನಾವೂ ಪೂಜೆ ಮಾಡುತ್ತಿದ್ದೇವೆ. ಕರ್ನಾಟಕ ಅಲ್ಲದೇ ಇತರ ರಾಜ್ಯಗಳಲ್ಲೂ ಪ್ರಾರ್ಥನೆ ನಡೆಯುತ್ತಿದೆ ಎಂದು ತಿಳಿಸಿದರು.

    ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಶ್ರೀಗಳ ಆರೋಗ್ಯ ವಿಚಾರಿಸಿ, ಚೇತರಿಕೆ ನಿಧಾನವಾಗಿ ಆಗುತ್ತಿದೆ. ಬೇಗ ಚೇತರಿಕೆ ಆಗುವಂತೆ ದೇವರು ಮಾಡಲಿ. ಮತ್ತೆ ಅವರು ಬಂದು ನಮಗೆಲ್ಲರಿಗೂ ಮಾರ್ಗದರ್ಶನ ಮಾಡಲಿ ಎಂದು ಹೇಳಿದರು. ಪಲಿಮಾರು ಕಿರಿಯ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಆಸ್ಪತ್ರೆಗೆ ಬಂದು ಪೇಜಾವರಶ್ರೀ ಆರೋಗ್ಯದ ಕಾಳಜಿ ತೋರಿದ್ದಾರೆ.

    ಕಳೆದ ಎರಡು ದಿನಗಳಲ್ಲಿ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಅವರ ಶಿಷ್ಯ ಸುಶ್ರೀಂದ್ರ ತೀರ್ಥ, ಸೋದೆ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಕಾಣಿಯೂರು ವಿದ್ಯಾವಲ್ಲಭ ಶ್ರೀ, ಅದಮಾರು ಮಠದ ವಿಶ್ವಪ್ರಿಯ ಮತ್ತು ಈಶಪ್ರಿಯ ತೀರ್ಥ ಸ್ವಾಮೀಜಿಗಳು ಬಂದು ಪೇಜಾವರಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.

  • ಹಾರೆ ಹಿಡಿದ್ರೆ ಕೃಷಿಕ, ಮುಂಡಾಸು ಕಟ್ಟಿದ್ರೆ ಗೋಪಾಲಕ- ಉಡುಪಿಯ ವಿಶ್ವಪ್ರಸನ್ನ ತೀರ್ಥರು ನಮ್ಮ ಪಬ್ಲಿಕ್ ಹೀರೋ

    ಹಾರೆ ಹಿಡಿದ್ರೆ ಕೃಷಿಕ, ಮುಂಡಾಸು ಕಟ್ಟಿದ್ರೆ ಗೋಪಾಲಕ- ಉಡುಪಿಯ ವಿಶ್ವಪ್ರಸನ್ನ ತೀರ್ಥರು ನಮ್ಮ ಪಬ್ಲಿಕ್ ಹೀರೋ

    ಉಡುಪಿ: ಹಾರೆ ಹಿಡಿದು ಹೊರಟರೆ ಕೃಷಿಕ. ಮುಂಡಾಸು ಕಟ್ಟಿ ನಿಂತರೆ ಗೋಪಾಲಕ. ಆರತಿ ಹಚ್ಚಿ ಕುಳಿತರೆ ಶ್ರೀಕೃಷ್ಣನ ಸೇವಕ. ಹೌದು. ಉಡುಪಿಯ ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನಮ್ಮ ಪಬ್ಲಿಕ್ ಹೀರೋ.

    ಮೂರು ಹೊತ್ತು ಪೂಜೆ ಮಾಡೋದು, ಭಕ್ತರು ಸೇರಿದಾಗ ಪ್ರವಚನ ಮಾಡಿ ನಾಲ್ಕು ಸದ್ವಿಚಾರಗಳನ್ನು ಹೇಳಿ ಧರ್ಮಪ್ರಚಾರ ಮಾಡೋದು ಸ್ವಾಮೀಜಿಗಳ ಕೆಲಸ. ಆದ್ರೆ ಉಡುಪಿಯ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತುಂಬಾ ವಿಭಿನ್ನ. ಡಿಗ್ರಿ ಮುಗಿದ ಬಳಿಕ ಸಂಸಾರದ ಕೊಂಡಿ ಕಳಚಿಕೊಂಡು ಮಠ ಸೇರಿದ್ರು. ಯಾವುದೇ ಪ್ರಚಾರದ ಅಪೇಕ್ಷೆಯಿಲ್ಲದೇ ಈ 53ರ ವಯಸ್ಸಲ್ಲೂ 23ರ ಯುವಕರಂತೆ ಚುರುಕಿನಿಂದ ಕೆಲಸ ಮಾಡ್ತಾರೆ. ಪೀಠಾಧಿಕಾರ ಪಡೆದ ನಂತರವೂ ಕೃಷಿಕರಾಗಿದ್ದಾರೆ. 2004ರಲ್ಲಿ ಉಡುಪಿಯಿಂದ 20 ಕಿಲೋಮೀಟರ್ ದೂರವಿರುವ ನೀಲಾವರ ಎಂಬಲ್ಲಿ 37 ಎಕ್ರೆ ಜಮೀನು ಖರೀದಿ ಮಾಡಿ ಗೋಶಾಲೆಯನ್ನು ಆರಂಭಿಸಿದರು. ಹೀಗಾಗಿ ಇವತ್ತು ಈ ನೀಲಾವರದಲ್ಲಿ 1,280ಕ್ಕೂ ಹೆಚ್ಚು ಗೋವುಗಳಿವೆ. ಗೋವುಗಳೆಂದ್ರೆ ಸ್ವಾಮೀಜಿಗೆ-ಸ್ವಾಮೀಜಿ ಅಂದ್ರೆ ಗೋವುಗಳಿಗೆ ಅಷ್ಟು ಪ್ರೀತಿ.

    ಗೋವುಗಳಿಗೆ ಆಹಾರದ ಸಮಸ್ಯೆ ಬರದಂತೆ ತಾವೇ ಮೇವನ್ನು ಬೆಳೆದು ಕಟಾವು ಮಾಡುತ್ತಾರೆ. ಸಾವಿರಾರು ಗೋವುಗಳಿದ್ದರೂ ಇಲ್ಲಿ ಸಿಗುತ್ತಿರೋದು ಕೇವಲ 22 ಲೀಟರ್ ಹಾಲು ಮಾತ್ರ. ಪ್ರತೀ ದಿನ ಸುಮಾರು 50 ಸಾವಿರ ರೂಪಾಯಿ ಗೋಶಾಲೆಗೆ ಖರ್ಚಾಗುತ್ತದೆ. ಸರ್ಕಾರ ಗೋಶಾಲೆಗೆ ಕೊಡೋ ನೆರವು ಕೂಡಾ ಕಡಿಮೆಯಾಗಿದೆ. ಆದ್ರೆ ಎಲ್ಲವನ್ನೂ ಪೇಜಾವರ ಕಿರಿಯ ಶ್ರೀಗಳೇ ಭರಿಸುತ್ತಾರೆ.

    ಇಷ್ಟೇ ಅಲ್ಲ ಬುದ್ದಿಮಾಂಧ್ಯ ಮಕ್ಕಳಿಗಾಗಿ ಪಕ್ಕದಲ್ಲೇ ಒಂದು ವಿಶೇಷ ಶಾಲೆ ತೆರೆದಿದ್ದಾರೆ. ಮೂವರು ಸಿಬ್ಬಂದಿಯನ್ನಿಟ್ಟು ಎಲ್ಲರ ಪೋಷಣೆ ಮಾಡುತ್ತಾರೆ. ಕಾಲ್ನಡಿಗೆಯಲ್ಲೇ ದೇಶ ಸಂಚಾರ ಮಾಡಿರುವ ಸ್ವಾಮೀಜಿ, ಹೋದಲೆಲ್ಲಾ ಪ್ರವಚನ ಮಾಡಿ ಹಣ ಸಂಗ್ರಹ ಮಾಡಿ ಅದನ್ನು ಗೋಶಾಲೆ ಹಾಗೂ ವಿಶೇಷ ಶಾಲೆಗೆ ಬಳಸುತ್ತಾರೆ. ಇದೆಲ್ಲದರ ಜೊತೆ ಮಠದ ದೊಡ್ಡ ಜವಾಬ್ದಾರಿ ಕೂಡಾ ನಿರ್ವಹಿಸುತ್ತಿದ್ದಾರೆ.