Tag: ವಿಶ್ವಕಪ್

  • ವಿಶ್ವಕಪ್ ಆಯ್ಕೆಗೆ ‘ಆರೋಗ್ಯಕರ ತಲೆನೋವಾದ’ ರಿಷಬ್ ಪಂತ್

    ವಿಶ್ವಕಪ್ ಆಯ್ಕೆಗೆ ‘ಆರೋಗ್ಯಕರ ತಲೆನೋವಾದ’ ರಿಷಬ್ ಪಂತ್

    – ಆಯ್ಕೆಯ ರೇಸ್‍ನಲ್ಲಿ ರಹಾನೆ, ವಿಜಯ್ ಶಂಕರ್: ಎಂಎಸ್‍ಕೆ ಪ್ರಸಾದ್

    ಮುಂಬೈ: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಮುಂದಿನ ವಿಶ್ವಕಪ್ ಸರಣಿಗೆ ಆಯ್ಕೆ ಆಗುವುದು ಬಹುತೇಕ ಖಚಿತ ಆಗಿದೆ ಎನ್ನಲಾಗಿದೆ.

    ಈ ಕುರಿತು ಟೀಂ ಇಂಡಿಯಾ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಅವರು ಮಾಹಿತಿ ನೀಡಿದ್ದು, ವಿಶ್ವಕಪ್ ತಂಡದ ಆಯ್ಕೆ ವೇಳೆ ರಿಷಬ್ ಪಂತ್‍ರನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಅಲ್ಲದೇ ರಿಷಬ್ ಪಂತ್ ಆಯ್ಕೆ ಆರೋಗ್ಯಕರ ತಲೆನೋವಾಗಿದೆ ಎಂದು ತಿಳಿಸಿದ್ದಾರೆ.

    ರಿಷಬ್ ಟೀಂ ಇಂಡಿಯಾಗೆ ಆಯ್ಕೆಯಾದ ಬಳಿಕ ಅವರ ಬ್ಯಾಟಿಂಗ್‍ನಲ್ಲಿ ಉತ್ತಮ ಸುಧಾರಣೆ ಆಗಿದೆ. ಮತ್ತಷ್ಟು ಪರಿಪಕ್ವತೆ ಸಾಧಿಸಲು ಟೀಂ ಇಂಡಿಯಾ ಎ ತಂಡ ಸೇರುವಂತೆ ಸಾಕಷ್ಟು ಅವಕಾಶಗಳನ್ನು ಅವರಿಗೆ ನೀಡಿದ್ದೇವೆ. ಮೊದಲು ರಿಷಬ್‍ರನ್ನು ದಪ್ಪ ಚರ್ಮದ ವ್ಯಕ್ತಿ ಎಂದು ತಿಳಿದಿದ್ದೇವು. ಆದರೆ ಇಂದು ಆತ ಅನುಭವಿ ಆಟಗಾರರಂತಾಗಿದ್ದು, ತಂಡಕ್ಕೆ ಸಾಕಷ್ಟು ಬದ್ಧತೆಯನ್ನು ತೋರಿದ್ದಾರೆ ಎಂದರು.

    ಇದೇ ವೇಳೆ ರಹಾನೆ ಹಾಗೂ ವಿಜಯ್ ಶಂಕರ್ ಅವರನ್ನು ಆಯ್ಕೆ ವೇಳೆ ಪರಿಗಣಿಸಲಾಗುತ್ತದೆ. ಏಕೆಂದರೆ ಅವರು ದೇಶಿಯ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಅಂದಹಾಗೇ ಕಳೆದ 11 ಇನ್ನಿಂಗ್ಸ್ ಗಳಲ್ಲಿ ರಹಾನೆ 74.62 ಸರಾಸರಿಯಲ್ಲಿ 597 ರನ್ ಗಳಿಸಿದ್ದಾರೆ. 2018 ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಏಕದಿನ ಪಂದ್ಯಗಳನ್ನು ಆಡಿದ್ದರು. ತಂಡದಲ್ಲಿ ಸದ್ಯ ಮಧ್ಯಮ ಕ್ರಮಾಂಕದ ಆಯ್ಕೆ ಕುರಿತು ಹೆಚ್ಚಿನ ಒತ್ತು ನೀಡಲಾಗುತ್ತಿದೆ.

    2019 ವಿಶ್ವಕಪ್ ಟೂರ್ನಿಗೆ 15 ಆಟಗಾರರ ಪಟ್ಟಿಯನ್ನು ಪ್ರಕಟ ಮಾಡಲು ಏಪ್ರಿಲ್ 23 ಅಂತಿಮ ದಿನಾಂಕವಾಗಿದೆ. ಜೂನ್ 05 ರಂದು ಟೀಂ ಇಂಡಿಯಾ ದಕ್ಷಿಣ ಆಫ್ರಿಕಾರನ್ನು ಎದುರಿಸುವ ಮೂಲಕ ವಿಶ್ವಕಪ್ ಜರ್ನಿಯನ್ನು ಆರಂಭಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಸಿಸಿ ಪ್ರಶಸ್ತಿ ಪಡೆದು ವಿಶ್ವದಾಖಲೆ ನಿರ್ಮಿಸಿದ ಕೊಹ್ಲಿ

    ಐಸಿಸಿ ಪ್ರಶಸ್ತಿ ಪಡೆದು ವಿಶ್ವದಾಖಲೆ ನಿರ್ಮಿಸಿದ ಕೊಹ್ಲಿ

    ದುಬೈ: ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈಗ ಐಸಿಸಿ ನೀಡುವ ಪ್ರಶಸ್ತಿಯಲ್ಲೂ ವಿಶ್ವದಾಖಲೆ ಬರೆದಿದ್ದಾರೆ.

    ಐಸಿಸಿ ವರ್ಷದ ಪುರುಷ ಆಟಗಾರ, ವರ್ಷದ ಟೆಸ್ಟ್, ಏಕದಿನ ಆಟಗಾರ, ವರ್ಷದ ಟೆಸ್ಟ್ ಮತ್ತು ಏಕದಿನ ನಾಯಕ ಪ್ರಶಸ್ತಿಯನ್ನು ಕೊಹ್ಲಿ ಪಡೆದಿದ್ದಾರೆ. ಈ ಮೂಲಕ ಒಂದೇ ವರ್ಷ 5 ಪ್ರಶಸ್ತಿಗಳನ್ನು ಪಡೆದ ವಿಶ್ವದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆಯನ್ನು ಕೊಹ್ಲಿ ಪಡೆದುಕೊಂಡಿದ್ದಾರೆ.

    ಕೊಹ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ 13 ಟೆಸ್ಟ್ ಪಂದ್ಯಗಳಿಂದ 55.08 ಸರಾಸರಿಯಲ್ಲಿ 1,322 ರನ್ ಗಳಿಸಿದ್ದು, ಇದರಲ್ಲಿ ಐದು ಶತಕಗಳು ಸೇರಿದೆ. 14 ಏಕದಿನ ಪಂದ್ಯಗಳಿಂದ 6 ಶತಕಗಳೊಂದಿಗೆ 133.55 ಸರಾಸರಿಯಲ್ಲಿ 1,202 ರನ್ ಸಿಡಿಸಿದ್ದಾರೆ. ಉಳಿದಂತೆ 10 ಟಿ20 ಪಂದ್ಯಗಳಲ್ಲಿ 211 ರನ್ ಗಳಿಸಿದ್ದಾರೆ.

    30 ವರ್ಷದ ನಾಯಕ ವಿರಾಟ್ ಕೊಹ್ಲಿ 2008ರಲ್ಲಿ ನಡೆದ ಐಸಿಸಿ ಅಂಡರ್ 19 ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾಗೆ ಆಯ್ಕೆ ಆಗಿದ್ದರು. ಸದ್ಯ ಟೆಸ್ಟ್ ಹಾಗೂ ಏಕದಿನ ಮಾದರಿ ಕ್ರಿಕೆಟಿನಲ್ಲಿ ನಂ.1 ಶ್ರೇಯಾಂಕ ಪಡೆದಿರುವ ಕೊಹ್ಲಿ, ಈ ಎರಡು ಮಾದರಿಗಳಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಕೊಹ್ಲಿ ಕಳೆದ ಬಾರಿ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿ ಹಾಗೂ ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೇ 2012 ರಲ್ಲಿ ಐಸಿಸಿ ಏಕದಿನ ಪ್ರಶಸ್ತಿಯನ್ನು ಕೂಡ ಪಡೆದಿದ್ದರು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ಐಸಿಸಿ ಪ್ರಶಸ್ತಿಯ ಗೌರವ ಲಭಿಸಿರುವುದು ಸಂತಸ ತಂದಿದ್ದು, ವರ್ಷದುದ್ದಕ್ಕೂ ಆಟಗಾರ ಪಟ್ಟ ಶ್ರಮಕ್ಕೆ ಸಿಗುವ ಬಹುಮಾನವಾಗಿದೆ. ಇದರೊಂದಿಗೆ ತಂಡ ಕೂಡ ಉತ್ತಮ ಪ್ರದರ್ಶನ ನೀಡುತ್ತಿರುವುದು ಮತ್ತಷ್ಟು ಸಂತಸಕ್ಕೆ ಕಾರಣವಾಗಿದ್ದು, ವಿಶ್ವ ಮಟ್ಟದಲ್ಲಿ ಗೌರವ ಸಿಗುವುದು ಯಾವುದೇ ಆಟಗಾರನಿಗೆ ಹೆಮ್ಮೆ ಅನಿಸುತ್ತದೆ ಎಂದಿದ್ದಾರೆ.

    ಇಂತಹ ಪ್ರಶಸ್ತಿಗಳು ನಿಮ್ಮನ್ನು ಮತ್ತಷ್ಟು ಉತ್ತಮ ಪ್ರದರ್ಶನ ಹಾಗೂ ಸಾಧನೆ ಮಾಡುವುಕ್ಕೆ ಪ್ರೇರಣೆ ಆಗಿದೆ. ಕ್ರಿಕೆಟ್ ಆಟದಲ್ಲಿ ಸ್ಥಿತ ಪ್ರದರ್ಶನ ನೀಡುವುದು ಬಹಳ ಮುಖ್ಯವಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 160 ಕೋಟಿ ರೂ.ಪಾವತಿಸಿ, ಇಲ್ಲವೇ 2023 ವಿಶ್ವಕಪ್ ಆಯೋಜನೆ ಕೈಬಿಡಿ: ಐಸಿಸಿ ಎಚ್ಚರಿಕೆ

    160 ಕೋಟಿ ರೂ.ಪಾವತಿಸಿ, ಇಲ್ಲವೇ 2023 ವಿಶ್ವಕಪ್ ಆಯೋಜನೆ ಕೈಬಿಡಿ: ಐಸಿಸಿ ಎಚ್ಚರಿಕೆ

    ದುಬೈ: 2016 ವಿಶ್ವಕಪ್ ಆಯೋಜನೆಗೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಡಿಸೆಂಬರ್ 31ರ ವೇಳೆಗೆ 160 ಕೋಟಿ ರೂ. ಗಳನ್ನು ಐಸಿಸಿಗೆ ಪಾವತಿ ಮಾಡಬೇಕು ಎಂದು ಸೂಚನೆ ನೀಡಿದೆ.

    ಮುಂದಿನ 2021ರ ಚಾಂಪಿಯನ್ಸ್ ಟ್ರೋಫಿ ಹಾಗೂ 2023ರ ಏಕದಿನ ವಿಶ್ವಕಪ್ ಆತಿಥ್ಯ ಪಡೆದುಕೊಳ್ಳಲು ಐಸಿಸಿ ತಿಳಿಸಿದ ಮೊತ್ತವನ್ನು ಬಿಸಿಸಿಐ ಪಾವತಿ ಮಾಡಬೇಕಿದ್ದು, ಇಲ್ಲವಾದರೆ ಟೂರ್ನಿಯ ಆಯೋಜನೆಯ ಅವಕಾಶವನ್ನು ಕೈ ಬಿಡುವಂತೆ ಸೂಚನೆಯನ್ನು ಐಸಿಸಿ ನೀಡಿದೆ.

    ಏನಿದು ಪ್ರಕರಣ: 2016 ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಬಿಸಿಸಿಐ ಆಯೋಜನೆ ಮಾಡಿತ್ತು. ಈ ವೇಳೆಗೆ ಐಸಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಯಾವುದೇ ರೀತಿಯ ವಿನಾಯಿತಿ ನೀಡಿರಲಿಲ್ಲ. ಸದ್ಯ ಈ ಮೊತ್ತವನ್ನು ಬಿಸಿಸಿಐ ಪಾವತಿ ಮಾಡದ ಕಾರಣ ಐಸಿಸಿ ಒತ್ತಡ ಈ ತಂತ್ರವನ್ನು ಬಳಕೆ ಮಾಡಿದೆ. ಐಸಿಸಿ ಸೂಚನೆಯಂತೆ 160 ಕೋಟಿ ರೂ. ಪಾವತಿ ಮಾಡಲು ಬಿಸಿಸಿಐಗೆ ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿದೆ.

    ವಿಶ್ವಕಪ್ ಮೊತ್ತದ ಹಣ ಪಾವತಿ ಸಂಬಂಧಿಸಿದಂತೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಸಿಂಗಪುರ್ ನಲ್ಲಿ ನಡೆದಿದ್ದ ಐಸಿಸಿ ಸಭೆಯಲ್ಲೂ ಬಿಸಿಸಿಐಗೆ ಮಾಹಿತಿ ನೀಡಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಒಂದು ವೇಳೆ 160 ಕೋಟಿ ರೂ ಪಾವತಿ ಮಾಡದಿದ್ದರೆ, 2023ರ ಐಸಿಸಿ ಏಕದಿನ ವಿಶ್ವಕಪ್ ಹಾಗೂ 2021 ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಯನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಜೊತೆಗೆ ಪ್ರಸಕ್ತ ವರ್ಷದಲ್ಲಿ ಯಾವುದೇ ರೀತಿಯ ಪಾಲು ಸಹ ನೀಡುವುದಿಲ್ಲ ಎಂದು ಅದು ತಿಳಿಸಿದೆ.

    ಐಸಿಸಿಗೆ 160 ಕೋಟಿ ರೂಪಾಯಿ ಪಾವತಿ ಮಾಡುವುದಕ್ಕೆ 10 ದಿನಗಳ ಕಾಲಾವಕಾಶ ಇದೆ. ಒಂದು ವೇಳೆ ಒತ್ತಡದ ಹೊರತಾಗಿಯೂ ಬಿಸಿಸಿಐ ಪಾವತಿ ಮಾಡಲು ನಿರಾಕರಿಸಿದರೆ ಐಸಿಸಿ ತನಗೆ ಪ್ರಸಕ್ತ ವರ್ಷದ ಭಾರತದ ಆದಾಯ ಹಂಚಿಕೆಯಲ್ಲಿ ಕಡಿತಗೊಳಿಸುತ್ತದೆ ಎಂಬ ಮಾತು ಸಹ ಕೇಳಿ ಬಂದಿದೆ. ಒಂದೊಮ್ಮೆ ಪಾವತಿ ಬಿಸಿಸಿಐ ಪಾವತಿ ಮಾಡಲು ವಿಫಲವಾದರೆ 2021ರ ಚಾಂಪಿಯನ್ ಟ್ರೋಫಿ ಹಾಗೂ 2023ರ ವಿಶ್ವಕಪ್ ಆಯೋಜನೆಯ ಅವಕಾಶ ಬಿಸಿಸಿಐ ಕೈ ತಪ್ಪುತ್ತದೆ. ಈ ಕುರಿತು ಐಸಿಸಿ ಮಂಡಳಿ ನಿರ್ಧಾರ ಮಾಡಲಿದೆ ಎಂಬ ಎಚ್ಚರಿಕೆಯೂ ಲಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಧೋನಿ ರಣಜಿ ಆಡುವುದು ಒಳ್ಳೆ ಚಿಂತನೆ ಅಲ್ಲ : ಜಾರ್ಖಂಡ್ ಕೋಚ್

    ಧೋನಿ ರಣಜಿ ಆಡುವುದು ಒಳ್ಳೆ ಚಿಂತನೆ ಅಲ್ಲ : ಜಾರ್ಖಂಡ್ ಕೋಚ್

    ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಆಸೀಸ್ ಟೂರ್ನಿಯಲ್ಲಿ ಭಾಗವಹಿಸದ ಕಾರಣ ರಣಜಿ ಪಂದ್ಯದಲ್ಲಿ ಆಡಬೇಕಿತ್ತು ಎಂದು ಟೀಕೆ ಮಾಡಿದ್ದ ವಿಶ್ಲೇಷಕರಿಗೆ ಜಾರ್ಖಂಡ್ ತಂಡಧ ಕೋಚ್ ಉತ್ತರಿಸಿದ್ದು, ಇದು ಯುವ ಕ್ರಿಕೆಟ್ ಆಟಗಾರರ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.

    ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಕೋಚ್ ರಾಜೀವ್ ಕುಮಾರ್, ಧೋನಿ ರಣಜಿ ಕ್ರಿಕೆಟ್ ಆಡುವುದು ಒಳ್ಳೆಯ ಚಿಂತನೆ ಅಲ್ಲ. ಏಕೆಂದರೆ ಹಲವು ಯುವ ಆಟಗಾರರು ಪಂದ್ಯದಲ್ಲಿ ಆಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿ ಆಯ್ಕೆಗಾರರ ಗಮನ ಸೆಳೆಯಲು ಶ್ರಮಿಸುತ್ತಿದ್ದಾರೆ. ಆದರೆ ಧೋನಿ ಆಡುವುದರಿಂದ ಯುವ ಆಟಗಾರರ ಅವಕಾಶ ಕೈ ತಪ್ಪುತ್ತದೆ ಎಂದು ತಿಳಿಸಿದ್ದಾರೆ.

    ಧೋನಿ ಯುವ ಆಟಗಾರರ ಬಗ್ಗೆ ಸಾಕಷ್ಟು ಆಸಕ್ತಿ ವಹಿಸಿದ್ದು ತರಬೇತಿ ವೇಳೆ ಹಲವು ಬಾರಿ ಹಾಜರಿದ್ದು, ಬ್ಯಾಟಿಂಗ್ ಸೇರಿದಂತೆ ಹಲವು ವಿಚಾರಗಳಲ್ಲಿ ಸಲಹೆ ನೀಡಿದ್ದಾರೆ. ಇದರಿಂದ ಆಟಗಾರರ ಪ್ರದರ್ಶನ ಶೈಲಿಯೇ ಬದಲಾಗಿದೆ. ಇದು ಆಟಗಾರರಿಗೆ ಮತ್ತಷ್ಟು ಸಹಕಾರಿ ಆಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಟೀಂ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್, ಧೋನಿ ಹಾಗೂ ಶಿಖರ್ ಧವನ್ ಆಸೀಸ್ ಟೂರ್ನಿಯಲ್ಲಿ ಭಾಗವಹಿಸದಿದ್ದರು ಯಾಕೆ ರಣಜಿ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದರು.

    ಧೋನಿ ಆಸೀಸ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಆಗಿರಲಿಲ್ಲ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಟೆಸ್ಟ್ ಟೂರ್ನಿ ಆಡಿಲ್ಲ. ಅಂದರೆ ಅಕ್ಟೋಬರ್ ನಿಂದ ಮುಂದಿನ ಜನವರಿ ವರೆಗೂ ಧೋನಿ ಟೀಂ ಇಂಡಿಯಾ ಪರ ಆಡಿಲ್ಲ. ಅದ್ದರಿಂದ ರಣಜಿ ಟೂರ್ನಿಯಲ್ಲಿ ಧೋನಿ ಭಾಗವಹಿಸಬೇಕಿತ್ತು. ಒಂದೊಮ್ಮೆ ಆಸೀಸ್ ಹಾಗೂ ಮುಂದಿನ ನ್ಯೂಜಿಲೆಂಡ್ ಸರಣಿಯಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡದಿದ್ದರೆ, ಮುಂದಿನ ವಿಶ್ವಕಪ್ ತಂಡಕ್ಕೆ ಧೋನಿ ಆಯ್ಕೆ ಮಾಡುವ ಪ್ರಶ್ನೆ ಉದ್ಭವಿಸುತ್ತದೆ. ಆಟದಲ್ಲಿ ಹೆಚ್ಚಿನ ಸಮಯ ವಿಶ್ರಾಂತಿ ತೆಗೆದುಕೊಳ್ಳುವುದು ಹೆಚ್ಚಿನ ಪರಿಣಾಮ ಉಂಟುಮಾಡುತ್ತದೆ ಎಂದು ಸುನೀಲ್ ಗವಾಸ್ಕರ್ ಹೇಳಿದ್ದರು.

    ಉಳಿದಂತೆ ಜನವರಿ 12 ರಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಧೋನಿ ಭಾಗವಹಿಸಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಧೋನಿ ನಡುವಿನ ಮನಸ್ತಾಪದ ಬಗ್ಗೆ ನಿವೃತ್ತಿ ಬಳಿಕ ಗೌತಮ್ ಗಂಭೀರ್ ಸ್ಪಷ್ಟನೆ

    ಧೋನಿ ನಡುವಿನ ಮನಸ್ತಾಪದ ಬಗ್ಗೆ ನಿವೃತ್ತಿ ಬಳಿಕ ಗೌತಮ್ ಗಂಭೀರ್ ಸ್ಪಷ್ಟನೆ

    ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಜತೆ ಭಿನ್ನಾಭಿಪ್ರಾಯ ಇರಬಹುದೇ ಹೊರತು ವೈರತ್ವವಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

    ತಮ್ಮ ನಿವೃತ್ತಿಯ ಘೋಷಣೆ ಬಳಿಕ ಮಾಧ್ಯಮ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಗಂಭೀರ್, ನನ್ನ ಮತ್ತು ಧೋನಿಯ ನಡುವೆ ಭಿನ್ನಾಭಿಪ್ರಾಯಗಳಿರಬಹುದೇ ಹೊರತು ವೈರತ್ವವಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಯಾವುದೇ ಆಟಗಾರನಿಗೆ ವಿದಾಯದ ಪಂದ್ಯ ನಡೆಸಬೇಕೆಂದು ಇಲ್ಲ ಎಂದು ತಮ್ಮ ಅಂತಿಮ ಪಂದ್ಯವಾದ ಆಂಧ್ರಪ್ರದೇಶದ ವಿರುದ್ಧದ ರಣಜಿ ಕುರಿತ ಪ್ರಶ್ನೆಗೆ ಉತ್ತರಿಸಿದರು.

    ಇದೇ ವೇಳೆ 2015ರ ವಿಶ್ವಕಪ್ ಟೂರ್ನಿಯಲ್ಲಿ ತಮಗೇ ಅವಕಾಶ ನೀಡದ ಅಸಮಾಧಾನ ವ್ಯಕ್ತಪಡಿಸಿದ ಗಂಭೀರ್, ನನ್ನೊಂದಿಗೆ ಆಡಿದ ಎಲ್ಲಾ ಆಟಗಾರರಿಗೂ 2 ರಿಂದ ಮೂರು ವಿಶ್ವಕಪ್ ಆಡಿದ್ದಾರೆ. ಆದರೆ ನಾನು ಮಾತ್ರ ಆ ಅವಕಾಶ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ನಾನು ಆಡಿದ ವಿಶ್ವಕಪ್ ಪಂದ್ಯದಲ್ಲಿ ನೀಡಿದ ಪ್ರದರ್ಶನ ಬಗ್ಗೆ ನನಗೆ ತೃಪ್ತಿ ಇದೆ. ಯಾವುದೇ ಒಬ್ಬ ಆಟಗಾರ ತಂಡದ ಕೀ ಪ್ಲೇಯರ್ ಆಗಿರುವ ವೇಳೆ ಆತನಿಗೆ ಅವಕಾಶ ನೀಡಬೇಕು. ಆದರೆ 2015 ರಲ್ಲಿ ನನಗೆ ಅವಕಾಶ ನೀಡದಿರುವುದು ಬೇಸರದ ವಿಚಾರ ಎಂದರು.

    2011ರ ವಿಶ್ವಕಪ್ ಫೈನಲ್ ಗೆದ್ದ ಪಂದ್ಯದ ಹೀರೋ ಆಗಿದ್ದ ಗಂಭೀರ್, ಬಳಿಕ ನಡೆದ ಬೆಳವಣಿಗೆಗೆಗಳಲ್ಲಿ 2015ರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಈ ವೇಳೆ ಗಂಭೀರ್ ಅವಕಾಶ ವಂಚಿತರಾಗಲು ತಂಡದ ನಾಯಕತ್ವ ವಹಿಸಿದ್ದ ಧೋನಿ ಕಾರಣ ಎಂಬ ಆರೋಪ ಮಾಡಲಾಗಿತ್ತು. ಉಳಿದಂತೆ ದೆಹಲಿ ಹಾಗು ಆಂಧ್ರಪ್ರದೇಶ ನಡುವಿನ ರಣಜಿ ಪಂದ್ಯ ಗಂಭೀರ್ ಅವರ ವೃತ್ತಿ ಜೀವನದ ಅಂತಿಮ ಪಂದ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಗಂಭೀರ್ ರಾಜಕೀಯ ಪ್ರವೇಶ ಮಾಡುತ್ತಾರೆ ಎನ್ನಲಾಗಿದೆ. ಇದನ್ನು ಓದಿ : ಬಾಲಿವುಡ್ ಬಾದ್ ಶಾ ನಿಂದ ಗಂಭೀರ್‌ಗೆ ಪ್ರೀತಿಯ ಸಂದೇಶ

    37 ವರ್ಷದ ಗೌತಮ್ ಗಂಭೀರ್ 2003ರ ಏಪ್ರಿಲ್ 11ರಂದು ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ 149ನೇ ಆಟಗಾರನಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು. ಬಳಿಕ 2004ರ ನವೆಂಬರ್ 3ರಂದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ 249ನೇ ಆಟಗಾರನಾಗಿ ಆಡಿದ್ದರು. ಗೌತಮ್ ಇದುವರೆಗೂ ಒಟ್ಟು 147 ಏಕದಿನ ಪಂದ್ಯಗಳನ್ನಾಡಿದ್ದು, 39.68ರ ಸರಾಸರಿಯಲ್ಲಿ 5,238 ರನ್ ಗಳಿಸಿದ್ದಾರೆ. ಇದರಲ್ಲಿ 11 ಶತಕ ಹಾಗೂ 34 ಅರ್ಧ ಶತಕಗಳನ್ನು ಒಳಗೊಂಡಿದೆ. ಕೊನೆಯದಾಗಿ 2013ರ ಜನವರಿ 27ರಂದು ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯವನ್ನು ಆಡಿದ್ದರು. ಟೆಸ್ಟ್ ನಲ್ಲಿ 58 ಪಂದ್ಯಗಳನ್ನು ಆಡಿರುವ ಗಂಭೀರ್, 41.95 ಸರಾಸರಿಯಲ್ಲಿ 4,154 ರನ್ ಗಳಿಸಿದ್ದಾರೆ. ಇದರಲ್ಲಿ 9 ಶತಕ ಸೇರಿದಂತೆ 22 ಅರ್ಧ ಶತಕಗಳು ದಾಖಲಾಗಿವೆ. ಟೆಸ್ಟ್ ನಲ್ಲಿ ಗರಿಷ್ಠ 206 ಹೊಡೆದಿದ್ದಾರೆ. ಅಲ್ಲದೇ ಟಿ-20ಯಲ್ಲಿ 37 ಪಂದ್ಯಗಳನ್ನಾಡಿ 27.41ರ ಸರಾಸರಿಯಲ್ಲಿ 932 ರನ್ ಗಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾಕಿ ವಿಶ್ವಕಪ್ ಟೂರ್ನಿಗೆ ಅದ್ಧೂರಿ ಚಾಲನೆ – ಭಾರತಕ್ಕೆ ದಕ್ಷಿಣ ಆಫ್ರಿಕಾ ಸವಾಲು

    ಹಾಕಿ ವಿಶ್ವಕಪ್ ಟೂರ್ನಿಗೆ ಅದ್ಧೂರಿ ಚಾಲನೆ – ಭಾರತಕ್ಕೆ ದಕ್ಷಿಣ ಆಫ್ರಿಕಾ ಸವಾಲು

    ಭುವನೇಶ್ವರ: ಹಾಕಿ ಪುರುಷರ ವಿಶ್ವಕಪ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದ್ದು, ಒಡಿಶಾ ರಾಜಧಾನಿ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್‍ನ ಶಾರೂಕ್ ಖಾನ್, ಮಾಧುರಿ ದೀಕ್ಷಿತ್, ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಕೂಡ ಭಾಗಿಯಾಗಿದ್ದರು.

    ಈ ಬಾರಿಯ ಟೂರ್ನಿಯಲ್ಲಿ 16 ತಂಡಗಳು ಸೆಣಸಲಿದ್ದು, ನಾಲ್ಕು ಗುಂಪುಗಳಾಗಿ ತಂಡಗಳನ್ನು ವಿಂಗಡಿಸಲಾಗಿದೆ. ಕೆನಡಾ, ದಕ್ಷಿಣ ಆಫ್ರಿಕಾ, ಬೆಲ್ಜಿಯಂ ತಂಡಗಳೊಂದಿಗೆ ಭಾರತ ಟೂರ್ನಿಯ ಸಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಅರ್ಜೆಂಟೀನಾ, ನ್ಯೂಜಿಲೆಂಡ್, ಸ್ಪೇನ್, ಫ್ರಾನ್ಸ್ ತಂಡಗಳು ಎ, ಆಸ್ಟ್ರೇಲಿಯಾ, ಇಂಗ್ಲೆಂಡ್, ಐರ್ಲೆಂಡ್, ಚೀನಾ ತಂಡಗಳು ಬಿ ಹಾಗೂ ನೆದರ್ಲೆಂಡ್ಸ್, ಜರ್ಮನಿ, ಮಲೇಷ್ಯಾ, ಪಾಕಿಸ್ತಾನ ತಂಡಗಳು ಡಿ ಗುಂಪಿನಲ್ಲಿದೆ.

    ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ ಭುವನೇಶ್ವರದ ಕಳಿಂಗಾ ಸ್ಟೇಡಿಯಂನಲ್ಲಿ ಚಾಲನೆ ಸಿಗಲಿದ್ದು, ಮೊದಲ ಪಂದ್ಯ ಇಂದು ಸಂಜೆ 5 ಗಂಟೆಗೆ ನಡೆಯಲಿದೆ. ಭಾರತ-ದಕ್ಷಿಣ ಆಫ್ರಿಕಾ ಹಾಗೂ ಬೆಲ್ಜಿಯಂ-ಕೆನಡಾ ತಂಡಗಳು ಮುಖಾಮುಖಿ ಆಗಲಿವೆ. ಹಾಕಿ ವಿಶ್ವಕಪ್‍ನ 14ನೇ ಆವೃತ್ತಿಯ ಟೂರ್ನಿಗೆ ಆತಿಥ್ಯವಹಿಸಿಕೊಂಡಿರುವ ಭಾರತದ ಒಮ್ಮೆ ಮಾತ್ರ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದು, ಈ ಬಾರಿ ಭಾರತ ತವರು ಅಭಿಮಾನಿಗಳ ಬೆಂಬಲ ಸಿಗಲಿದೆ. ಉಳಿದಂತೆ ಭಾರತ 3ನೇ ಬಾರಿ ಹಾಕಿ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುತ್ತಿದ್ದು, 8 ವರ್ಷಗಳ ನಂತರ ಈ ಬಾರಿ ಟೂರ್ನಿಯನ್ನು ನಡೆಸುತ್ತಿದೆ.

    ಇತ್ತೀಚೆಗಷ್ಟೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ಜತೆ ಜಂಟಿ ಚಾಂಪಿಯನ್ ಆಗಿದ್ದ ಭಾರತ, 1975ರಲ್ಲಿ ಮಲೇಷ್ಯಾದಲ್ಲಿ ನಡೆದ ವಿಶ್ವಕಪ್ ನಲ್ಲಿ ಟ್ರೋಫಿ ಗೆದ್ದಿತ್ತು. ಅಂದು ತಂಡದ ಸಾರಥ್ಯವಹಿಸಿದ್ದ ಅಜಿತ್ ಪಾಲ್ ಸಿಂಗ್ ಸಾರಥ್ಯದಲ್ಲಿ ಚೊಚ್ಚಲ ಚಾಂಪಿಯನ್ ಆಗಿದ್ದ ಭಾರತ ಬಳಿಕ 2ನೇ ಬಾರಿ ಚಾಂಪಿಯನ್ ಆಗುವ ಕನಸು ಕಾಣುತ್ತಿದೆ. 43 ವರ್ಷಗಳಿಂದ ವಿಶ್ವಕಪ್ ಪದಕ ಪಡೆಯದ ಭಾರತಕ್ಕೆ ಈ ಬಾರಿ ತವರಿನ ಟೂರ್ನಿ ಚಾಂಪಿಯನ್ ಆಗಲು ಸುವರ್ಣಾವಕಾಶ ಲಭಿಸಿದ್ದು, ಮನ್ ಪ್ರೀತ್ ಸಿಂಗ್ ತಂಡದ ನಾಯಕತ್ವ ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2011ರ ವಿಶ್ವಕಪ್ ಗೆಲುವಿನ ಹಿಂದಿನ ರಹಸ್ಯ ಬಿಚ್ಚಿಟ್ಟ ಧೋನಿ

    2011ರ ವಿಶ್ವಕಪ್ ಗೆಲುವಿನ ಹಿಂದಿನ ರಹಸ್ಯ ಬಿಚ್ಚಿಟ್ಟ ಧೋನಿ

    ಮುಂಬೈ: 2011ರ ವಿಶ್ವಕಪ್ ಪೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕರಾಗಿದ್ದಎಂಎಸ್ ಧೋನಿ ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಮಾಡಿ ಕಣಕ್ಕೆ ಇಳಿದಿದ್ದು ಪ್ರತಿಯೊಬ್ಬ ಅಭಿಮಾನಿಗೆ ತಿಳಿದಿರುವ ಸಂಗತಿ. ಆದರೆ ಅಂದಿನ ಶ್ರೀಲಂಕಾ ತಂಡದ ವಿರುದ್ಧದ ಪಂದ್ಯದ ಗೆಲುವಿಗೆ ಮತ್ತೊಂದು ಪ್ರಮುಖ ಕಾರಣದ ಬಗ್ಗೆ ಎಂಎಸ್ ಧೋನಿ ತಿಳಿಸಿದ್ದಾರೆ.

    ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಂದು ಭಾರತ 275 ರನ್ ಗಳ ಗುರಿಹೊಂದಿತ್ತು. ಆದರೆ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರು ಬೇಗ ಔಟಾದರು. ಈ ವೇಳೆ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಜೋಡಿಯಾಗಿ 83 ರನ್ ಗಳ ಕೊಡುಗೆ ನೀಡಿದ್ದರು. ಆದರೆ 22ನೇ ಓವರ್ ಬಳಿಕ ಶ್ರೀಲಂಕಾ ತಂಡ ಮೇಲುಗೈ ಸಾಧಿಸುವ ಸೂಚನೆ ಸಿಕ್ಕಿತ್ತು. ಅದ್ದರಿಂದ ವಿರಾಟ್ ಕೊಹ್ಲಿ ಔಟಾಗುತ್ತಿದಂತೆ ಧೋನಿ ಬ್ಯಾಟಿಂಗ್ ಇಳಿದಿದ್ದರು.

    ಭಾರತ 48.2 ಓವರ್ ಗಳಲ್ಲಿ ಧೋನಿ, ಗಂಭೀರ್ ಅವರ ಉತ್ತಮ ಆಟದಿಂದಾಗಿ ಜಯಗಳಿಸಿತ್ತು. ಧೋನಿ ಸಿಕ್ಸರ್ ಸಿಡಿಸಿ ಗೆಲುವು ತಂದಿದ್ದರು. ಈ ಕುರಿತು ಮಾತನಾಡಿರುವ ಧೋನಿ, ಶ್ರೀಲಂಕಾ ಆಟಗಾರರಾದ ಮುತ್ತಯ್ಯ ಮುರಳೀಧರನ್ ಹಾಗೂ ನುವಾನ್ ಕುಲಶೇಖರ್ ರಂತಹ ಆಟಗಾರರೊಂದಿಗೆ ಐಪಿಎಲ್‍ನಲ್ಲಿ ಆಡಿದ್ದ ಅನುಭವ ನನಗೆ ಸಹಕಾರಿ ಆಯಿತು. ಆ ಸಂದರ್ಭದಲ್ಲಿ ಮುರಳೀಧರನ್ ಬೌಲಿಂಗ್ ಮಾಡುತ್ತಿದ್ದರು. ಚೆನ್ನೈ ಪರ ಆಡುತ್ತಿದ್ದ ವೇಳೆ ಅವರೊಂದಿಗೆ ಸಾಕಷ್ಟು ಸಮಯ ಆಡಿದ್ದೆ. ಅದ್ದರಿಂದಲೇ ಸುಲಭವಾಗಿ ರನ್‍ಗಳಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

    ಪಂದ್ಯದಲ್ಲಿ ಗೌತಮ್ ಗಂಭೀರ್ 3 ರನ್ ಗಳಿಂದ ಶತಕ ವಂಚಿತರಾದರು. ಆದರೆ ಧೋನಿ ಪಂದ್ಯದ ಅಂತಿಮ ಕ್ಷಣದವರೆಗೂ ಬ್ಯಾಟಿಂಗ್ ನಡೆಸಿ ಗೆಲುವಿಗೆ ಕಾರಣರಾಗಿದ್ದರು. ಧೋನಿ ಕ್ಯಾಪ್ಟನ್ ಪಟ್ಟದಿಂದ ಕೆಳಗಿಳಿದ ಬಳಿಕವೂ ಕೊಹ್ಲಿಗೆ ಸಾಕಷ್ಟು ಬಾರಿ ಸಲಹೆ ನೀಡುತ್ತಾ ತಂಡ ಗೆಲುವಿಗೆ ಕಾರಣರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಹಿಳಾ ಟಿ20 ವಿಶ್ವಕಪ್: ಮಿಂಚಿದ ಸ್ಮೃತಿ ಮಂದಾನ – ಆಸೀಸ್ ವಿರುದ್ಧ ಭರ್ಜರಿ ಗೆಲುವು

    ಮಹಿಳಾ ಟಿ20 ವಿಶ್ವಕಪ್: ಮಿಂಚಿದ ಸ್ಮೃತಿ ಮಂದಾನ – ಆಸೀಸ್ ವಿರುದ್ಧ ಭರ್ಜರಿ ಗೆಲುವು

    ಗಯಾನ: ಇಲ್ಲಿನ ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಟಿ20 ಮಹಿಳಾ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಟೀಂ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 48 ರನ್‍ಗಳ ಅಮೋಘ ಗೆಲುವು ಪಡೆಯಿತು.

    ಟೀಂ ಇಂಡಿಯಾ ನೀಡಿದ 168 ರನ್‍ಗಳ ಗುರಿ ಬೆನ್ನಟ್ಟಿದ ಆಸೀಸ್ ತಂಡ 19.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 119 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಅನುಜಾ ಪಾಟೀಲ್ 3 ವಿಕೆಟ್, ದೀಪ್ತಿ ಶರ್ಮಾ, ಪೂನಂ ಯಾದವ್, ರಾಧ ಯಾದವ್ ತಲಾ 2 ವಿಕೆಟ್ ಪಡೆದರು.

    ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಸ್ಮೃತಿ ಮಂದಾನ 9 ಬೌಂಡರಿ 3 ಸಿಕ್ಸರ್ ನೆರವಿನಿಂದ 83 ರನ್ ಸಿಡಿಸಿ ಮಿಂಚಿದರು. ಉಳಿದಂತೆ ನಾಯಕಿ ಹರ್ಮನ್ ಪ್ರೀತ್ ಕೌರ್ ತಲಾ 3 ಬೌಂಡರಿ, ಸಿಕ್ಸರ್ ಗಳ ಮೂಲಕ ಕೇವಲ 27 ಎಸೆತಗಳಲ್ಲಿ 43 ರನ್ ಕಲೆಹಾಕಿದ್ರು. ನಿಗದಿತ 20 ಓವರ್ ಗಳಲ್ಲಿ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 167 ರನ್ ಕಲೆ ಹಾಕಿತ್ತು. ಬಲಿಷ್ಠ ಆಸೀಸ್ ತಂಡವನ್ನ ಮಣಿಸಿದ ಟೀಂ ಇಂಡಿಯಾ ಗ್ರೂಪ್ ಬಿ ಯಲ್ಲಿ ಟಾಪ್ ಸ್ಥಾನ ಪಡೆಯಿತು.

    ಪಂದ್ಯದಲ್ಲಿ 82 ರನ್ ಗಳಿಸಿದ ಸ್ಮೃತಿ ಮಂದಾನ ಒಂದು ಸಾವಿರ ರನ್ ಪೂರೈಸಿದರು. ಈ ಮೂಲಕ ಭಾರತದ ಪರ ವೇಗವಾಗಿ ಒಂದು ಸಾವಿರ ರನ್ ಪೂರೈಸಿದ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಿಶ್ವಕಪ್ ಮುನ್ನವೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಅಲ್‍ರೌಂಡರ್ ಬ್ರಾವೋ ವಿದಾಯ

    ವಿಶ್ವಕಪ್ ಮುನ್ನವೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಅಲ್‍ರೌಂಡರ್ ಬ್ರಾವೋ ವಿದಾಯ

    ಮುಂಬೈ: ವೆಸ್ಟ್ ಇಂಡೀಸ್ ತಂಡದ ಅಲ್‍ರೌಂಡರ್ ಬ್ರಾವೋ ತಮ್ಮ 14 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದು, ಕೇವಲ ಫ್ರಾಂಚೈಸಿ ಟಿ20 ಕ್ರಿಕೆಟ್ ಟೂರ್ನಿಗಳಲ್ಲಿ ಮಾತ್ರ ಭಾಗವಹಿಸುತ್ತೇನೆ ಎಂದು ತಿಳಿಸಿದ್ದಾರೆ.

    2004 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಬ್ರಾವೋ ಇದುವರೆಗೂ 40 ಟೆಸ್ಟ್, 164 ಏಕದಿನ ಹಾಗೂ 66 ಟಿ20 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬ್ರಾವೋ, ಇಂದು ನಾನು ಅಂತರಾಷ್ಟ್ರೀಯ ಕ್ರಿಕೆಟ್‍ನ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಘೋಷಿಸುತ್ತಿದ್ದೇನೆ. ಆದರೆ ಇಂದಿಗೂ ಇಂಗ್ಲೆಂಡಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಪಡೆದ ಟೆಸ್ಟ್ ಕ್ಯಾಪ್ ಘಟನೆ ಈಗಲೂ ನೆನಪಿದೆ. ನನ್ನ ಸುದೀರ್ಘ ವೃತ್ತಿ ಜೀವನದಲ್ಲಿ ಆಟದ ಮೇಲಿನ ಫ್ಯಾಷನ್ ಹಾಗೂ ಉತ್ಸಾಹವನ್ನು ಉಳಿಸಿಕೊಂಡು ಬಂದಿದ್ದು, ಸದ್ಯ ನಾನು ವಿದಾಯ ಘೋಷಣೆ ಮಾಡುತ್ತಿರುವುದಾಗಿ ತಿಳಿಸಿದರು.

    ನನ್ನ ಜೀವನದ ಯಶಸ್ವಿಗೆ ಹಲವು ಮಂದಿ ಸಹಕಾರ ನೀಡಿದ್ದಾರೆ. ಅದರಲ್ಲೂ ನನ್ನ ಕುಟುಂಬ, ಕ್ರಿಕೆಟ್ ತರಬೇತಿ ನೀಡಿದ ಕ್ಯೂಪಿಸಿಸಿ ಸಂಸ್ಥೆ, ಅಲ್ಲದೇ ಅಭಿಮಾನಿಗಳು ಕೂಡ ನನ್ನ ಯಶಸ್ಸಿಗೆ ಕಾರಣರಾಗಿದ್ದಾರೆ. ಹಲವು ಲೆಜೆಂಡ್ ಆಟಗಾರರೊಂದಿಗೆ ಕ್ರಿಕೆಟ್ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡ ಅನುಭವ ಸ್ಮರಣಿಯ. ಅದ್ದರಿಂದ ವಿಶ್ವಾದ್ಯಂತ ನಡೆಯುವ ಟೂರ್ನಿಗಳಲ್ಲಿ ಭಾಗವಹಿಸುವ ಮೂಲಕ ನನ್ನ ಕ್ರಿಕೆಟ್ ಅನ್ನು ಮುಂದುವರಿಸುತ್ತೇನೆ ಎಂದರು.

    https://twitter.com/DHONIism/status/1048786997085491200

    ಕಳೆದ ಎರಡು ವರ್ಷಗಳ ಹಿಂದೆ ದುಬೈನಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಟಿ20 ಪಂದ್ಯದಲ್ಲಿ ಕೊನೆಯ ಬಾರಿ ಬ್ರಾವೋ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. ಉಳಿದಂತೆ 2014ರ ಅಕ್ಟೋಬರ್ ನಲ್ಲಿ ನಡೆದ ಏಕದಿನ ಹಾಗೂ 2010 ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಕೇವಲ ಅಲ್‍ರೌಂಡರ್ ಮಾತ್ರವಲ್ಲದೇ ಬ್ರಾವೋ ಭಾರತದ ಪ್ರವಾಸದಲ್ಲಿ ವಿಂಡೀಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದರು. ಆದರೆ ಈ ಸರಣಿಯಲ್ಲಿ ವಿಂಡೀಸ್ ಕ್ರಿಕೆಟ್ ಸಂಸ್ಥೆಯೊಂದಿಗೆ ಉಂಟಾದ ಮನಸ್ತಾಪದಿಂದ ಟೂರ್ನಿಯಿಂದ ಅರ್ಧದಲ್ಲೇ ವಾಪಸ್ ತೆರಳಿದ್ದನ್ನು ನೆನೆಯಬಹುದಾಗಿದೆ. ಇದನ್ನು ಓದಿ: ಗೆಲುವಿನ ಸಂಭ್ರಮಾಚರಣೆ ಮುಂದುವರಿಸಿದ ಸಿಎಸ್‍ಕೆ – ಬ್ರಾವೋ ಹೊಸ ಹಾಡು ವೈರಲ್

    ಬ್ರಾವೋ ತಮ್ಮ ವೃತ್ತಿ ಜೀವನದ ಟೆಸ್ಟ್ ಕ್ರಿಕೆಟ್‍ನಲ್ಲಿ 2,200 ರನ್, 86 ವಿಕೆಟ್, ಏಕದಿನ ಮಾದರಿಯಲ್ಲಿ 2,968 ರನ್, 199 ವಿಕೆಟ್ ಮತ್ತು ಟಿ20ಯಲ್ಲಿ 1,142 ರನ್ 52 ವಿಕೆಟ್ ಪಡೆದು ಆಲ್‍ರೌಂಡರ್ ಆಗಿ ಮಿಂಚಿದ್ದಾರೆ. ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಭಾಗವಹಿಸಿದ್ದು, 2008 ರಿಂದ ಸತತವಾಗಿ ಚೆನ್ನೈ ತಂಡದ ಪರ ಆಡಿದ್ದರು. ಇದೂವರೆಗೂ ಐಪಿಎಲ್ ನಲ್ಲಿ 122 ಪಂದ್ಯಗಳನ್ನಾಡಿರುವ ಬ್ರಾವೋ 1,379 ರನ್ 136 ವಿಕೆಟ್ ಪಡೆದಿದ್ದಾರೆ. ಕ್ರಿಕೆಟ್ ಮಾತ್ರವಲ್ಲದೇ ಬ್ರಾವೋ ಅದ್ಭುತ ಸಿಂಗರ್ ಕೂಡ ಆಗಿದ್ದು, ಹಲವು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೇ ಸಿಎಸ್‍ಕೆ ಪ್ರಚಾರಕ್ಕಾಗಿ ತಮ್ಮದೇ ಬ್ಯಾಂಡ್ ಮೂಲಕ ಹಾಡನ್ನು ಬಿಡುಗಡೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಬಟಿ ರಾಯುಡು ಪರ ಬ್ಯಾಟ್ ಬೀಸಿದ ಕ್ಯಾಪ್ಟನ್ ಕೊಹ್ಲಿ

    ಅಂಬಟಿ ರಾಯುಡು ಪರ ಬ್ಯಾಟ್ ಬೀಸಿದ ಕ್ಯಾಪ್ಟನ್ ಕೊಹ್ಲಿ

    ಮುಂಬೈ: 2019ರ ವಿಶ್ವಕಪ್‍ಗೆ ಉತ್ತಮ ತಂಡದ ಸಿದ್ಧತೆಯಲ್ಲಿರುವ ನಾಯಕ ವಿರಾಟ್ ಕೊಹ್ಲಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗೆ ಅಂಬಟಿ ರಾಯುಡು ಅವರ ಸ್ಥಿರ ಪ್ರದರ್ಶನ ಪರಿಹಾರ ನೀಡಬಲ್ಲರು ಎಂದು ಹೇಳಿದ್ದಾರೆ. ಈ ಮೂಲಕ ರಾಯುಡು ಪರ ಬ್ಯಾಟ್ ಬೀಸಿದ್ದಾರೆ.

    ಟೀಂ ಇಂಡಿಯಾ ಬ್ಯಾಟಿಂಗ್ ಕ್ರಮಾಂಕ ಉತ್ತಮವಾಗಿದ್ದು, ಆದರೆ 4ನೇ ಸ್ಥಾನಕ್ಕೆ ಆಟಗಾರನ ಆಯ್ಕೆ ಮಾತ್ರ ಸಮಸ್ಯೆ ಆಗಿದೆ. ಈ ಸ್ಥಾನದಲ್ಲಿ ಆಡಲು ರಾಯುಡು ಆಡಲು ಉತ್ತಮ ಆಟಗಾರನಾಗಿದ್ದು, ಆಯ್ಕೆ ಸಮಿತಿಯೂ ಕೂಡ ಇದೇ ಅಭಿಪ್ರಾಯ ಹೊಂದಿದೆ ಎಂದು ತಿಳಿಸಿದ್ದಾರೆ.

    ವಿಶ್ವಕಪ್ ಗುರಿಯಾಗಿಸಿ ತಂಡದ ಸಿದ್ದತೆಯಲ್ಲಿರುವ ನಮಗೆ 4ನೇ ಕ್ರಮಾಂಕದ ಬ್ಯಾಟಿಂಗ್ ಮಾತ್ರ ಸಮಸ್ಯೆ ಆಗಿದೆ. ಈ ಸ್ಥಾನ ತುಂಬಲು ನಾವು ಹಲವು ಆಟಗಾರರಿಗೆ ಅವಕಾಶ ನೀಡಿದ್ದೇವೆ. ಆದರೆ ಆ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಆದರೆ ಏಷ್ಯಾಕಪ್ ಕ್ರಿಕೆಟ್‍ನಲ್ಲಿ ರಾಯುಡು ಪ್ರದರ್ಶನ ಉತ್ತಮವಾಗಿದ್ದು, ವಿಶ್ವಕಪ್ ವೇಳೆಗೆ ಹೆಚ್ಚಿನ ಅವಕಾಶ ನೀಡಲಾಗುವುದು. ವಿಶ್ವಕಪ್ ವೇಳೆಗೆ ಉಳಿದಿರುವ 18 ಪಂದ್ಯಗಳಿಂದ ಉತ್ತಮ ಬ್ಯಾಟಿಂಗ್ ಕ್ರಮಾಂಕವನ್ನು ಸಿದ್ದಪಡಿಸಲಾಗುವುದು ಎಂದು ತಿಳಿಸಿದರು.

    ರಾಯುಡು ಅನುಭವಿ ಆಟಗಾರರಾಗಿದ್ದು, ಐಪಿಎಲ್ ಸೇರಿದಂತೆ ಸಾಕಷ್ಟು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತ ಪರ ಏಕದಿನ ಮಾದರಿಯಲ್ಲಿ ಉತ್ತಮ ದಾಖಲೆಯನ್ನ ಹೊಂದಿದ್ದಾರೆ. ಶೀಘ್ರವೇ ಬ್ಯಾಟಿಂಗ್ ಕ್ರಮಾಂಕವನ್ನು ಸಿದ್ಧಗೊಳಿಸುವುದಾಗಿ ತಿಳಿಸಿದರು.

    2018 ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ರಾಯುಡು ಉತ್ತಮ ಪ್ರದರ್ಶನವನ್ನು ನೀಡಿದ್ದು, 43.00 ಸರಾಸರಿಯಲ್ಲಿ 602 ರನ್ ಗಳಿಸಿದ್ದರು. ಆದರೆ ಯೋಯೋ ಟೆಸ್ಟ್ ಪಾಸ್ ಮಾಡಲು ವಿಫಲರಾಗಿದ್ದ ರಾಯುಡು ಬಳಿಕ ಇಂಗ್ಲೆಂಡ್ ಟೂರ್ನಿಯಿಂದ ಹೊರ ಉಳಿದಿದ್ದರು. ಆದರೆ ಏಷ್ಯಾಕಪ್‍ಗೆ ಕಮ್‍ಬ್ಯಾಕ್ ಮಾಡುವ ಮೂಲಕ ಟೂರ್ನಿಯಲ್ಲಿ 6 ಇನ್ನಿಂಗ್ಸ್ ಗಳಲ್ಲಿ 43.75 ಸರಾಸರಿಯಲ್ಲಿ 175 ರನ್ ಗಳಿಸಿ ಮಿಂಚಿದ್ದರು.

    ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಟೂರ್ನಿಯಲ್ಲಿ ಕೊಹ್ಲಿ ಬ್ಯಾಟಿಂಗ್ ಕ್ರಮಾಂಕಕ್ಕೆ ಸಿದ್ಧತೆ ನಡೆಸಿದ್ದಾರೆ. ಇತ್ತ ವಿಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೆ ತಂಡ ಪ್ರಕಟವಾಗಿದ್ದು ಯುವ ಆಟಗಾರ ರಿಷಬ್ ಪಂತ್ 12ರ ಬಳಗದಲ್ಲಿ ಸ್ಥಾನ ಪಡೆದಿದ್ದು, ಪಾದಾರ್ಪಣೆ ಮಾಡಲು ಸಿದ್ಧತೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv