Tag: ವಿಶ್ವಕಪ್

  • ಆಸೀಸ್ ವಿಶ್ವಕಪ್ ತಂಡ ಪ್ರಕಟ – ವಾರ್ನರ್, ಸ್ಮಿತ್ ಕಮ್ ಬ್ಯಾಕ್

    ಆಸೀಸ್ ವಿಶ್ವಕಪ್ ತಂಡ ಪ್ರಕಟ – ವಾರ್ನರ್, ಸ್ಮಿತ್ ಕಮ್ ಬ್ಯಾಕ್

    ಸಿಡ್ನಿ: 2015 ಚಾಂಪಿಯನ್ ತಂಡ ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್ ಹಣಾಹಣಿಗೆ 15 ಆಟಗಾರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಚೆಂಡು ವಿರೂಪಗೊಳಿಸಿ ನಿಷೇಧಕ್ಕೆ ಒಳಗಾಗಿದ್ದ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ತಂಡದಲ್ಲಿ ಸ್ಥಾನ ಪಡೆದು ಕಮ್ ಬ್ಯಾಕ್ ಮಾಡಿದ್ದಾರೆ.

    ಸ್ಮಿತ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದರು ಕೂಡ ಫಿಂಚ್ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದು, ಅಲೆಕ್ಸ್ ಕೆರ್ರಿ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ನಿಷೇಧ ಪೂರ್ಣಗೊಂಡ ಬಳಿಕ ಮಾಜಿ ನಾಯಕ ಸ್ಮಿತ್‍ಗೆ ಇದು ಮೊದಲ ಅವಕಾಶವಾಗಿದೆ. ಕಳೆದ ತಿಂಗಳಷ್ಟೇ ಸ್ಮಿತ್ ಮೇಲಿನ ನಿಷೇಧ 1 ವರ್ಷ ಅವಧಿ ಪೂರ್ಣಗೊಂಡಿತ್ತು. ಪಾಕಿಸ್ತಾನ ವಿರುದ್ಧ ನಡೆದ ಸಿಮೀತ ಓವರ್ ಗಳ ಸರಣಿಯ ಅಂತಿಮ 2 ಪಂದ್ಯಗಳಿಗೆ ಇಬ್ಬರು ಆಟಗಾರರು ಅರ್ಹರಾಗಿದ್ದರೂ ಕೂಡ ಆಯ್ಕೆ ಸಮಿತಿ ಅವಕಾಶ ನೀಡಿರಲಿಲ್ಲ.

    ಈಗಾಗಲೇ 5 ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿರುವ ಆಸೀಸ್ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡದಲ್ಲಿ ಒಂದಾಗಿದೆ. ಮೇ 30 ರಿಂದ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಆರಂಭವಾಲಿದ್ದು, ಆಸೀಸ್ ಜೂನ್ 01 ರಂದು ಆಫ್ಘಾನಿಸ್ತಾನ ವಿರುದ್ಧ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

    ತಂಡ: ಆ್ಯರೋನ್ ಫಿಂಚ್ (ನಾಯಕ), ಉಸ್ಮಾನ್ ಖವಾಜ, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಶೇನ್ ಮಾರ್ಶ್, ಗ್ಲೇನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋಯ್ನಿಸ್, ಅಲೆಕ್ಸ್ ಕೆರ್ರಿ, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೇ ರಿಚರ್ಡ್ ಚನ್, ನಾಥನ್ ಕೌಲ್ಡರ್ ನೀಲ್, ಜೇಸನ್ ಬೆಹ್ರನ್ ಡ್ರಾಪ್, ನೇಥನ್ ಲಯನ್, ಆ್ಯಡಂ ಜಂಪಾ.

  • ವಿಶೇಷ ಚೇತನ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿದ ಕೆಎಲ್ ರಾಹುಲ್

    ವಿಶೇಷ ಚೇತನ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿದ ಕೆಎಲ್ ರಾಹುಲ್

    ಮುಂಬೈ: 2019ರ ಐಪಿಎಲ್ ಆವೃತ್ತಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್ ಕಳೆದ 7 ಪಂದ್ಯಗಳಲ್ಲಿ 317 ರನ್ ಸಿಡಿಸಿ ಮಿಂಚಿದ್ದಾರೆ. ಅಲ್ಲದೇ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದರು. ಈ ಪಂದ್ಯದ ಬಳಿಕ ಸಿಕ್ಕ ಬಿಡುವಿನ ಅವಧಿಯಲ್ಲಿ ರಾಹುಲ್ ವಿಶೇಷ ಚೇತನ ಮಕ್ಕಳ ಕೇಂದ್ರಕ್ಕೆ ಭೇಟಿ ಸಮಯ ಕಳೆದಿದ್ದಾರೆ.

    ಮುಂಬೈ ಬಂದ್ರಾ ಪ್ರದೇಶದಲ್ಲಿರುವ ಮುಸ್ಕಾನ್ ಫೌಂಡೇಶನ್‍ನ ವಿಶೇಷ ಚೇತನ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿದ್ದ ರಾಹುಲ್ ಮಕ್ಕಳೊಂದಿಗೆ ಸ್ವಲ್ಪ ಸಮಯವನ್ನು ಕಳೆದಿದ್ದಾರೆ. ಈ ವೇಳೆ ಮಕ್ಕಳೊಂದಿಗೆ ತೆಗೆದುಕೊಂಡಿದ್ದ ಫೋಟೋಗಳನ್ನು ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

    ಕೆಎಲ್ ರಾಹುಲ್ ಅವರು ನಮ್ಮ ಮಕ್ಕಳ ಕೇಂದ್ರಕ್ಕೆ ಭೇಟಿ ನೀಡಿ ಸಮಯವನ್ನು ಕಳೆದಿದ್ದಾರೆ. ಸ್ಟಾರ್ ಆಟಗಾರರು ಇಂತಹ ಕಾರ್ಯಕ್ಕೆ ಮುಂದಾಗಿದ್ದು ಉತ್ತಮ ನಡೆಯಾಗಿದ್ದು, ಅವರ ಈ ಭೇಟಿ ಕೆಲ ಮಕ್ಕಳಿಗೆ ಪ್ರೇರಣೆ ಆಗಲಿದೆ. ರಾಹುಲ್ ಭೇಟಿಯಿಂದ ಮಕ್ಕಳು ಅಚ್ಚರಿಗೊಂಡಿದ್ದರು. ಇದನ್ನಷ್ಟೇ ನಾವು ಸ್ಟಾರ್ ಗಳಿಂದ ನಿರೀಕ್ಷೆ ಮಾಡುತ್ತೇವೆ. ಅವರಿಗೆ ಧನ್ಯವಾದ ಎಂದು ಸಂಸ್ಥೆ ಪೋಸ್ಟ್ ನಲ್ಲಿ ತಿಳಿಸಿದೆ.

    ರಾಹುಲ್ ಕಳೆದ ವರ್ಷ ಫಾರ್ಮ್ ಸಮಸ್ಯೆಯಿಂದ ನಿರಾಸೆ ಮೂಡಿಸಿದ್ದರು. ಆದರೆ ಸದ್ಯ ರಾಹುಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವುದು ವಿಶ್ವಕಪ್ ಆಯ್ಕೆ ಬಗ್ಗೆ ಮೇಲೆ ಕುತೂಹಲ ಮೂಡಿಸಿದೆ. ನಾಳೆ ಬಿಸಿಸಿಐ ವಿಶ್ವಕಪ್ ಟೂರ್ನಿಗೆ 15 ಆಟಗಾರರ ಪಟ್ಟಿಯನ್ನು ಘೋಷಣೆ ಮಾಡುವ ಸಾಧ್ಯತೆ ಇದ್ದು, 26 ವರ್ಷದ ಕೆಎಲ್ ರಾಹುಲ್ ಸ್ಥಾನ ಪಡೆಯುತ್ತರಾ ಎಂಬ ಕುತೂಹಲ ಹೆಚ್ಚಿದೆ.

  • ಸೆಹ್ವಾಗ್ ಕನಸಿನ ತಂಡದಲ್ಲಿ ಕೆಎಲ್ ರಾಹುಲ್‍ಗೆ ಸ್ಥಾನ

    ಸೆಹ್ವಾಗ್ ಕನಸಿನ ತಂಡದಲ್ಲಿ ಕೆಎಲ್ ರಾಹುಲ್‍ಗೆ ಸ್ಥಾನ

    ಮುಂಬೈ: 2019 ವಿಶ್ವಕಪ್‍ಗೆ ಟೀಂ ಇಂಡಿಯಾ ತಂಡದ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತಮ್ಮ ಕನಸಿನ ತಂಡವನ್ನು ಆಯ್ಕೆ ಮಾಡಿದ್ದಾರೆ.

    2015ರ ವಿಶ್ವಕಪ್ ತಂಡಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸೆಹ್ವಾಗ್ 8 ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿದ್ದಾರೆ.

    ವಿಶ್ವಕಪ್ ಟೂರ್ನಿ ಮೇ ತಿಂಗಳಿನಿಂದ ಆರಂಭವಾಗಲಿದ್ದು, ಟೀಂ ಇಂಡಿಯಾ ಅಧಿಕೃತ ತಂಡ ಏ.15ಕ್ಕೆ ಘೋಷಣೆಯಾಗುವ ಸಾಧ್ಯತೆ ಇದೆ. ಇತ್ತ ಸೆಹ್ವಾಗ್ ತಮ್ಮ ತಂಡದಲ್ಲಿ ಐವರು ಬ್ಯಾಟ್ಸ್ ಮನ್ ಗಳು, 2 ವಿಕೆಟ್ ಕೀಪರ್ ಗಳು ಸೇರಿದಂತೆ ಮೂವರು ಅಲೌಂಡರ್ ಗಳೊಂದಿಗೆ 5 ಬೌಲರ್ ಗಳನ್ನು ಆಯ್ಕೆ ಮಾಡಿದ್ದಾರೆ.

    ಸದ್ಯ ಐಪಿಎಲ್ ಟೂರ್ನಿ ಸಾಗುತ್ತಿರುವ ಹಿನ್ನೆಲೆಯಲ್ಲಿ ತಂಡದ ಎಲ್ಲಾ ಆಟಗಾರರು ಬ್ಯುಸಿಯಾಗಿದ್ದು, ತಂಡದಲ್ಲಿ ಪ್ರಮುಖ 4 ಸ್ಥಾನಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆದಿದೆ. ಇತ್ತ ತಂಡದ ಘೋಷಣೆ ಆದ ಬೆನ್ನಲ್ಲೇ ಆಟಗಾರರು ವಿಶ್ವಕಪ್‍ಗೆ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳುಲು ಸಾಧ್ಯವಾಗಲಿದೆ.

    ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಎಂಎಸ್ ಧೋನಿ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಶಮಿ, ಕೇದಾರ್ ಜಾಧವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಚಹಲ್, ವಿಜಯ್ ಶಂಕರ್, ಬುಮ್ರಾ, ರಿಷಬ್ ಪಂತ್.

    ಧೋನಿಗೆ 2-3 ಪಂದ್ಯ ನಿಷೇಧ: ಇದೇ ವೇಳೆ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಮೈದಾನದಲ್ಲಿ ಅಂಪೈರ್ ಗಳೊಂದಿಗೆ ವಾಗ್ವಾದ ನಡೆಸಿದ ಬಗ್ಗೆ ಸೆಹ್ವಾಗ್ ಪ್ರತಿಕ್ರಿಯೆ ನೀಡಿದ್ದಾರೆ. ಮೈದಾನದಲ್ಲಿ ಇಂತಹ ವರ್ತನೆ ತೋರಿದ ಹಿನ್ನೆಲೆಯಲ್ಲಿ ಧೋನಿ ಅವರಿಗೆ 2 ರಿಂದ 3 ಪಂದ್ಯಗಳ ನಿಷೇಧ ಮಾಡುವುದಕ್ಕೆ ಅರ್ಹ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರಿಗೆ ಕೇವಲ ಪಂದ್ಯದ ಶೇ.50ರಷ್ಟು ಸಂಭಾವನೆಯನ್ನು ಮಾತ್ರ ದಂಡವಾಗಿ ವಿಧಿಸಲಾಗಿದೆ. ಮುಂದಿನ ಅವಧಿಯಲ್ಲಿ ಬೇರೆ ತಂಡದ ನಾಯಕ ಕೂಡ ಇದೇ ರೀತಿ ವರ್ತನೆ ಮಾಡಿದರೆ ಅಂಪೈರ್ ಗಳಿಗೆ ಯಾವ ರೀತಿಯ ಬೆಲೆ ಇರಲಿದೆ ಎಂದು ಪ್ರಶ್ನಿಸಿದ್ದಾರೆ.

  • ವಿಶ್ವಕಪ್ ಪ್ರೇಕ್ಷಕರಿಗೆ ಬಂಪರ್ ಅಫರ್ ಕೊಟ್ಟ ಐಸಿಸಿ!

    ವಿಶ್ವಕಪ್ ಪ್ರೇಕ್ಷಕರಿಗೆ ಬಂಪರ್ ಅಫರ್ ಕೊಟ್ಟ ಐಸಿಸಿ!

    ಲಂಡನ್: ಕ್ರಿಕೆಟ್ ಮೈದಾನದಲ್ಲಿ ವಿಶ್ವಕಪ್ ಮ್ಯಾಚ್ ನೋಡುತ್ತಾ ಕೈಯಲ್ಲಿ ತಣ್ಣನೆಯ ಬಿಯರ್ ಹಿಡಿದು ಪಂದ್ಯ ವೀಕ್ಷಣೆ ಮಾಡಬೇಕೆಂದು ಆಸೆ ಹೊಂದಿರುವ ಕ್ರಿಕೆಟ್ ಪ್ರೇಮಿಗಳಿಗೆ ಐಸಿಸಿ ಬಂಪರ್ ಆಫರ್ ನೀಡಿದೆ. ಬಿಯರ್ ಬೆಲೆ ದುಬಾರಿ ಎಂದು ಮೂಗು ಮುರಿಯುತ್ತಿದ್ದ ಮಂದಿಗೆ ಡಿಸ್ಕೌಂಟ್ ಬೆಲೆಯಲ್ಲಿ ಬಿಯರ್ ನೀಡುವುದಾಗಿ ತಿಳಿಸಿದೆ.

    ಈ ಬಾರಿ ವಿಶ್ವಕಪ್ ಟೂರ್ನಿಯನ್ನು ಆಯೋಜಿಸುತ್ತಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇದೇ ಮೊದಲ ಬಾರಿಗೆ ಬಿಯರಿಗೆ ಡಿಸ್ಕೌಂಟ್ ನೀಡಿ ನಿಮ್ಮ ಪರವಾಗಿ ಹಣವನ್ನು ಪಾವತಿಸುತ್ತೇವೆ ಎಂದು ಹೇಳಿದೆ.

    ವಿಶ್ವಕಪ್ ಟೂರ್ನಿಯ ಬಿಯರ್ ಪೂರೈಕೆ ಮಾಡಲು ಭಾರತ ಮೂಲದ ಬಿರಾ 91 ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇಂಗ್ಲೆಂಡ್ 11 ಕ್ರೀಡಾಂಗಣದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿದೆ. ಈ ಎಲ್ಲಾ ಕಡೆ ಬಿರಾ 91 ಸಂಸ್ಥೆಯ ಬಿಯರ್ ಗಳನ್ನೇ ಪೂರೈಕೆ ಮಾಡಲಿದೆ. ಒಂದು ಬಿಯರ್ ಟಿನ್ 9.70 ಡಾಲರ್ (ಸುಮಾರು 670 ರೂ.)ಗೆ ನೀಡಲು ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆ ಬಿಯರ್ ಸಂಸ್ಥೆಗಳಿಗೆ ಕೋರಿತ್ತು. ಆದರೆ ಅಲ್ಲಿನ ಸಂಸ್ಥೆಗಳು 15.5 ಡಾಲರ್ ನೀಡಲೇ ಬೇಕೆಂದು ಪಟ್ಟು ಹಿಡಿದ ಕಾರಣ ಈ ಕ್ರಮಕ್ಕೆ ಮುಂದಾಗಿದೆ.

    ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಬರುವ ಅಭಿಮಾನಿಗಳಿಗೆ ನಿರಾಸೆ ಆಗದಂತೆ ನೋಡಿಕೊಳ್ಳಲು ತೀರ್ಮಾನಿಸಿದೆ. ಸುಮಾರು 4 ಕೋಟಿ 52 ಲಕ್ಷ ರೂ. ಮೊತ್ತದಷ್ಟು ಡಿಸ್ಕೌಂಟ್ ನೀಡಲು ಐಸಿಸಿ ನಿರ್ಧರಿಸಿದೆ. ಈ ಮೊತ್ತವನ್ನು ಐಸಿಸಿ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸಮಾನವಾಗಿ ಭರಿಸಲಿದೆ.

  • ಮೊಹಾಲಿಯಲ್ಲಿ ಕೆಎಲ್ ರಾಹುಲ್ ಅಪರೂಪದ ಸಾಧನೆ

    ಮೊಹಾಲಿಯಲ್ಲಿ ಕೆಎಲ್ ರಾಹುಲ್ ಅಪರೂಪದ ಸಾಧನೆ

    ಮೊಹಾಲಿ : ಐಪಿಎಲ್ 12ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅರ್ಧ ಶತಕ ಸಿಡಿಸಿ ಅಪರೂಪದ ಸಾಧನೆ ಮಾಡಿದ್ದಾರೆ.

    ಐಪಿಎಲ್ 12ನೇ ಆವೃತ್ತಿಯ ಭಾಗವಾಗಿ ಏಪ್ರಿಲ್ 8 ರಂದು ನಡೆದ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಅರ್ಧ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಪಂದ್ಯದಲ್ಲಿ 53 ಎಸೆತಗಳ ನೆರವಿನಿಂದ 7 ಬೌಂಡರಿ, 1 ಸಿಕ್ಸರ್ ಸಿಡಿಸಿ 71 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಪಡೆದಿದ್ದರು.

    ಕಳೆದ ವರ್ಷ ಇದೇ ಮೊಹಾಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೇ ಕೇವಲ 14 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗದ ಅರ್ಧ ಶತಕ ಸಿಡಿಸಿದ ಸಾಧನೆಯನ್ನ ಮಾಡಿದ್ದರು. ಆ ಮೂಲಕ ಯೂಸಫ್ ಪಠಾಣ್ ಅವರ ಹೆಸರಿನಲ್ಲಿ ಇದ್ದ ದಾಖಲೆಯನ್ನು ಅಳಿಸಿ ಹಾಕಿದ್ದರು. ಯೂಸುಫ್ ಪಠಾಣ್ 2015 ರಲ್ಲಿ 15 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದರು. ಒಂದು ವರ್ಷದ ಅವಧಿಯ ಅಂತರದಲ್ಲಿ ಕಾಕತಾಳಿಯವಾಗಿ ಎಂಬಂತೆ ಅರ್ಧ ಶತಕದ ಸಾಧನೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನ ವಹಿಸಿದ್ದಾರೆ.

    2019ರ ಐಪಿಎಲ್ ಆರಂಭಕ್ಕೂ ಮುನ್ನ ಫಾರ್ಮ್ ಸಮಸ್ಯೆ ಎದುರಿಸಿದ್ದ ರಾಹುಲ್ ಟೂರ್ನಿಯ ಎರಡು ಪಂದ್ಯದಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಆದರೆ ಆ ಬಳಿಕ ನಡೆದ 4 ಪಂದ್ಯಗಳಲ್ಲಿ 3 ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಕಾಫಿ ವಿಥ್ ಕರಣ್ ಶೋ ಬಳಿಕ ವಿವಾದಕ್ಕೆ ಸಿಲುಕಿದ್ದ ರಾಹುಲ್ ನಿಷೇಧಕ್ಕೆ ಒಳಗಾಗಿದ್ದರು. ಆದರೆ ಬಿಸಿಸಿಐ ನಿಷೇಧ ತೆರವುಗೊಳಿಸಿದ ಬಳಿಕ ಇಂಗ್ಲೆಂಡ್ ಎ ತಂಡದ ವಿರುದ್ಧ ಆಡುವ ಅವಕಾಶ ಪಡೆದು ರಾಹುಲ್ ದ್ರಾವಿಡ್ ಅವರ ಸಲಹೆಗಳೊಂದಿಗೆ ಮತ್ತೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದಿದ್ದರು. ಸದ್ಯ ರಾಹುಲ್ ಮಹತ್ವದ ವಿಶ್ವಕಪ್ ರೇಸ್‍ನಲ್ಲಿದ್ದಾರೆ. ಇತ್ತ ಆಡಿರುವ 6 ಪಂದ್ಯಗಳಲ್ಲಿ 4 ರಲ್ಲಿ ಗೆಲುವು ಪಡೆದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬುಧವಾರ ಮುಂಬೈ ತಂಡವನ್ನು ಎದುರಿಸಲಿದೆ.

  • ಏಪ್ರಿಲ್ 15ಕ್ಕೆ ಟೀಂ ಇಂಡಿಯಾ ವಿಶ್ವಕಪ್ ತಂಡ ಪ್ರಕಟ

    ಏಪ್ರಿಲ್ 15ಕ್ಕೆ ಟೀಂ ಇಂಡಿಯಾ ವಿಶ್ವಕಪ್ ತಂಡ ಪ್ರಕಟ

    ಮುಂಬೈ: 2019 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ 15 ಮಂದಿಯ ಆಟಗಾರರ ಪಟ್ಟಿಯನ್ನ ಏಪ್ರಿಲ್ 15ಕ್ಕೆ ಬಿಸಿಸಿಐ ಪ್ರಕಟಿಸಲಿದೆ.

    ವಿರಾಟ್ ಕೊಹ್ಲಿ ನಾಯತ್ವದ ಟೀಂ ಇಂಡಿಯಾ ಈ ಬಾರಿ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದ್ದು, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈಟ್ ನೀಡುವ ನಿರೀಕ್ಷೆ ಇದೆ. ಇದುವರೆಗೂ ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್ 15 ಆಟಗಾರರ ತಂಡದ ಪಟ್ಟಿಯನ್ನು ಏಪ್ರಿಲ್ 3 ರಂದು ಪ್ರಕಟಿಸಿತ್ತು.

    ಟೀಂ ಇಂಡಿಯಾ ತಂಡದಲ್ಲಿ ಪ್ರಮುಖವಾಗಿ ನಂ.4ರ ಬ್ಯಾಟ್ಸ್ ಮನ್ ಸ್ಥಾನ ಕುರಿತ ಆಯ್ಕೆ ಬಗ್ಗೆ ಹೆಚ್ಚಿನ ಕುತೂಹಲವಿದೆ. ಈಗಾಗಲೇ ವಿಶ್ವಕಪ್ ಉದ್ದೇಶದಿಂದ ಈ ಸ್ಥಾನದಲ್ಲಿ ಹಲವು ಆಟಗಾರರನ್ನ ಬಿಸಿಸಿಐ ಆಯ್ಕೆ ಸಮಿತಿ ಪ್ರಯೋಗ ನಡೆಸಿದೆ. ಅಂಬಟಿ ರಾಯುಡು, ದಿನೇಶ್ ಕಾರ್ತಿಕ್, ವಿಜಯ್ ಶಂಕರ್ ಅವರು ಹೆಸರುಗಳು ರೇಸ್ ನಲ್ಲಿದ್ದು, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಕೂಡ ಪಟ್ಟಿಯಲ್ಲಿದ್ದಾರೆ.

    ಟೀಂ ಇಂಡಿಯಾ ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾಧವ್, ಎಂಎಸ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ತಂಡದ ಬೆನ್ನೆಲುಬಾಗಿದ್ದು, ಟಾಪ್ ಮೂರು ಸ್ಥಾನದಲ್ಲಿ ರೋಹಿತ್ ಶರ್ಮಾ, ಶಿಖರ್ ಧವನ್, ನಾಯಕ ವಿರಾಟ್ ಕೊಹ್ಲಿ ತಂಡದ ಶಕ್ತಿಯಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ತಂಡದ ವೇಗದ ಬೌಲರ್ ಗಳ ಪಟ್ಟಿಯಲ್ಲಿದ್ದರೆ, ಕುಲ್ದೀಪ್ ಯಾದವ್, ಚಹಲ್ ಸ್ಪೀನ್ ಬೌಲರ್ ಗಳಾಗಿ ಹೆಚ್ಚಿನ ಪ್ರಭಾವ ಬೀರಿದ್ದಾರೆ. ಟೀಂ ಇಂಡಿಯಾ ಜೂನ್ 06 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡುವ ಮೂಲಕ ವಿಶ್ವಕಪ್ ಹೋರಾಟವನ್ನ ಆರಂಭಿಸಲಿದೆ.

  • ಐಪಿಎಲ್ 2019: ವಿಶ್ವಕಪ್ ಆಟಗಾರರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದ ಕೊಹ್ಲಿ

    ಐಪಿಎಲ್ 2019: ವಿಶ್ವಕಪ್ ಆಟಗಾರರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದ ಕೊಹ್ಲಿ

    ಬೆಂಗಳೂರು: ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಆಡುವುದು ಅವರಿಗೆ ಬಿಟ್ಟ ವಿಚಾರ. ಆದರೆ ವಿಶ್ವಕಪ್‍ನಲ್ಲಿ ಆಡುವುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಆದ್ದರಿಂದ ಅಂತಹ ಅವಕಾಶವನ್ನು ಯಾರು ತಪ್ಪಿಸಿಕೊಳ್ಳುವುದಿಲ್ಲ. ಪರಿಣಾಮ ನಾವು ಯಾವುದೇ ಆಟಗಾರರಿಗೆ ನಿರ್ಬಂಧ ಹೇರಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರ್ ಸಿಬಿ ಆ್ಯಪ್ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಕೊಹ್ಲಿ ಭಾಗವಹಿಸಿ ಮಾತನಾಡಿದರು. ಆಟಗಾರರಿಗೆ ಇಷ್ಟೇ ಪಂದ್ಯಗಳನ್ನು ಆಡಬೇಕು ಎಂದು ಹೇಳಲು ಸಾಧ್ಯವಿಲ್ಲ. ನಾನು 10 ರಿಂದ 15 ಪಂದ್ಯಗಳನ್ನು ಆಡುವ ಸಾಮಥ್ರ್ಯವನ್ನು ಹೊಂದಿದ್ದರೆ, ಅಷ್ಟು ಮಾತ್ರವೇ ಆಡಲು ಸಾಧ್ಯ. ನನಗಿಂತ ಹೆಚ್ಚಿನ ಸಾಮಥ್ರ್ಯ ಹೊಂದಿರುವ ಆಟಗಾರರು ಇದ್ದಾರೆ. ಇದು ವೈಯಕ್ತಿಕ ವಿಚಾರ ಎಂದರು. ಅಲ್ಲದೇ ಐಪಿಎಲ್‍ನಲ್ಲಿ ಎಲ್ಲಾ ತಂಡಗಳು ಬಲಿಷ್ಠವಾಗಿವೆ, ಇದರ ನಡುವೆಯೇ ನಮ್ಮಿಂದ ಸಾಧ್ಯವಾಗುವ ಶ್ರೇಷ್ಠ ಪ್ರದರ್ಶನವನ್ನ ನೀಡುತ್ತೇವೆ ಎಂದು ಹೇಳಿದ್ರು.

    ಆರ್ ಸಿಬಿ ಆ್ಯಪ್: 12ನೇ ಆವೃತ್ತಿ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾರ್ಚ್ 23 ರಿಂದ ಚುಟುಕು ಕ್ರಿಕೆಟ್ ಸರಣಿ ಆರಂಭವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿಯಡೆಗೆ ತಯಾರಿ ಆರಂಭಿಸಿದೆ. ಆರಂಭಿಕ ಆವೃತ್ತಿಯಿಂದ ಈವರೆಗೂ ಆರ್‍ಸಿಬಿ ಸೋತರೂ ಗೆದ್ದರೂ ಅಭಿಮಾನಿಗಳಿಗೆ ಕೊರತೆ ಇಲ್ಲ ಎಂಬುವುದನ್ನು ಎಲ್ಲಿರಿಗೂ ತಿಳಿದಿದೆ.

    ಇತ್ತ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಲು ಆರ್‍ಸಿಬಿ ವಿಶೇಷ ಆ್ಯಪ್‍ವೊಂದನ್ನ ಸಿದ್ಧಪಡಿಸಿದೆ. ನಗರದಲ್ಲಿ ಇಂದು ಆರ್ ಸಿಬಿ ಆ ವಿಶಿಷ್ಟ ಮೊಬೈಲ್ ಆಪ್ ಅನ್ನ ಬಿಡುಗಡೆಗೊಳಿತು. ಕಾರ್ಯಕ್ರಮದಲ್ಲಿ ಕೋಚ್ ಗ್ಯಾರಿ ಕಸ್ಟರ್ನ್, ಬೌಲಿಂಗ್ ಕೋಚ್ ಆಶಿಶ್ ನೆಹ್ರಾ ಪಾಲ್ಗೊಂಡಿದ್ರು.

  • ಅನಿಲ್ ಕುಂಬ್ಳೆ ಕನಸಿನ ವಿಶ್ವಕಪ್ ಟೀಂ

    ಅನಿಲ್ ಕುಂಬ್ಳೆ ಕನಸಿನ ವಿಶ್ವಕಪ್ ಟೀಂ

    ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ, ಮಾಜಿ ಕೋಚ್ ಆಗಿರುವ ಅನಿಲ್ ಕುಂಬ್ಳೆ ತಮ್ಮ ಕನಸಿನ ವಿಶ್ವಕಪ್ ಟೀಂ ಇಂಡಿಯಾ ಘೋಷಣೆ ಮಾಡಿದ್ದು, ಆಡುವ 15 ಆಟಗಾರರ ಪಟ್ಟಿಯಲ್ಲಿ ಕೆಲ ಮುಖ್ಯ ಆಟಗಾರರಿಗೆ ಸ್ಥಾನ ನೀಡಿದ್ದಾರೆ.

    ಕುಂಬ್ಳೆ ತಮ್ಮ ತಂಡದಲ್ಲಿ ಆಯ್ಕೆ ಮಾಡಿರುವ ಆಟಗಾರರಿಗೆ ಕೆಲ ಕಾರಣಗಳನ್ನು ನೀಡಿದ್ದು, ರೋಹಿತ್ ಶರ್ಮಾ, ಧವನ್ ಅವರಿಗೆ ಆರಂಭಿಕರ ಸ್ಥಾನ ನೀಡಿದ್ದಾರೆ. ನಂ.3 ಆಟಗಾರರಾಗಿ ಕೊಹ್ಲಿಗೆ ಅವಕಾಶ ನೀಡಿದ್ದರೆ, ಅಚ್ಚರಿ ಎಂಬಂತೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅವರಿಗೆ 4ನೇ ಕ್ರಮಾಂಕವನ್ನು ನೀಡಿದ್ದಾರೆ.

    ಅಂಬಟಿ ರಾಯುಡು ನಂ.4 ರೇಸ್ ನಲ್ಲಿದ್ದರೂ ಕೂಡ ಕೆಲ ಪಂದ್ಯಗಳಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದ್ದಾರೆ. ಉಳಿದಂತೆ 5ನೇ ಸ್ಥಾನದಲ್ಲಿ ಕೇಧಾರ್ ಜಾಧವ್‍ಗೆ ಅವರನ್ನು ಆಡಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಹಾರ್ದಿಕ್ ಪಾಂಡ್ಯ, ಭುವನಶ್ವರ್ ಕುಮಾರ್ ಅವರಿಗೆ ಅಲೌಂಡರ್ ಸ್ಥಾನ ನೀಡಿದ್ದಾರೆ. ಉಳಿದಂತೆ ಬೌಲಿಂಗ್ ನಲ್ಲಿ ಕುಲ್ದೀಪ್ ಯಾದವ್, ಚಹಲ್, ಶಮಿ, ಬುಮ್ರಾ, ಜೋಡಿ ಅತ್ಯುತ್ತಮ ಎಂದಿದ್ದಾರೆ.

    ತಂಡದಲ್ಲಿ ಅವಕಾಶ ಪಡೆದಿರುವ ಆಟಗಾರರ ಪಟ್ಟಿಯಲ್ಲಿ ಉಮೇಶ್ ಯಾದವ್ ಬದಲಾಗಿ ಖಲೀಲ್ ಅಹ್ಮದ್‍ರನ್ನು ಆಯ್ಕೆ ಮಾಡಿದ್ದು, ರಿಷಬ್ ಪಂತ್, ವಿಜಯ್ ಶಂಕರ್ ಕೂಡ 15 ಆಟಗಾರರ ಪಟ್ಟಿಯಲ್ಲಿದ್ದಾರೆ. ಕುಂಬ್ಳೆರ ಈ ತಂಡ ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡ ಎಂದೇ ಹೇಳಬಹುದಾಗಿದ್ದು, ವಿಶ್ವಕಪ್ ವೇಳೆ ಆಗ್ರ ಕ್ರಮಾಂಕ ವಿಫಲವಾದರೆ ಧೋನಿ 4ನೇ ಕ್ರಮಾಂಕದಲ್ಲಿ ಉತ್ತಮವಾಗಿ ನಿಭಾಯಿಸಿ 80% ರಷ್ಟು ಗೆಲುವು ಖಚಿತ ಎಂಬ ಲೆಕ್ಕಾಚಾರ ಮುಂದಿಟ್ಟಿದ್ದಾರೆ.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೊಹಮ್ಮದ್ ಶಮಿ ವಿರುದ್ಧ ಚಾರ್ಜ್‍ಶೀಟ್ ದಾಖಲು

    ಮೊಹಮ್ಮದ್ ಶಮಿ ವಿರುದ್ಧ ಚಾರ್ಜ್‍ಶೀಟ್ ದಾಖಲು

    ಕೋಲ್ಕತ್ತಾ: ಲೈಂಗಿಕ ದೌರ್ಜನ್ಯ ಹಾಗೂ ವರದಕ್ಷಿಣೆ ಕಿರುಕುಳ ಆರೋಪ ಎದುರಿಸುತ್ತಿರುವ ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಕೋಲ್ಕತ್ತಾ ಪೊಲೀಸರು ಚಾರ್ಜ್‍ಶೀಟ್ ದಾಖಲಿಸಿದ್ದಾರೆ.

    ವಿಶ್ವಕಪ್ ಟೂರ್ನಿಗೆ ಕೆಲ ಸಮಯ ಬಾಕಿ ಇರುವ ವೇಳೆಯಲ್ಲೇ ಶಮಿ ವಿರುದ್ಧ ಚಾರ್ಜ್‍ಶೀಟ್ ದಾಖಲಾಗಿರುವುದಿಂದ ಶಮಿ ವಿಶ್ವಕಪ್ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

    ಶಮಿ ಪತ್ನಿ ಹಸಿನ್ ಜಹಾನ್ ಶಮಿ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಕುಟುಂಬ ನಿರ್ವಹಣೆಗಾಗಿ ಪ್ರತಿ ತಿಂಗಳು 7 ಲಕ್ಷ ರೂ. ಕೋರಿ ಮನವಿ ಸಲ್ಲಿಸಿದ್ದಾರೆ. ಜಾಹನ್ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಾಲಯ ಮಗಳ ಜೀವನಕ್ಕಾಗಿ 80 ಸಾವಿರ ರೂ. ನೀಡುವಂತೆ ತಿಳಿಸಿತ್ತು. ಗುರುವಾರ ಶಮಿ ಹಾಗೂ ಅವರ ಕುಟುಂಬ ಮೇಲೆ ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) ಮತ್ತು 254ಎ (ಲೈಂಗಿಕ ದೌರ್ಜನ್ಯ) ಸೆಕ್ಷನ್ ಅಡಿ ಪೊಲೀಸರು ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.

    ಶಮಿ ಅವರ ವಿರುದ್ಧ ಪತ್ನಿ ಜಹಾನ್ ಮ್ಯಾಚ್ ಫಿಕ್ಸಿಂಗ್ ಆರೋಪ ಕೂಡ ಮಾಡಿದ್ದರು. ಅಲ್ಲದೇ ಈ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ ಎಂದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಶಮಿ ಬೇರೆ ಬೇರೆ ಮಹಿಳೆಯರೊಂದಿಗೆ ಇದ್ದ ಫೋಟೋ ಹಾಗೂ ಚಾಟ್ ಮಾಡಿದ್ದ ಸ್ಕ್ರಿನ್ ಶಾರ್ಟ್ ಗಳನ್ನು ಪೋಸ್ಟ್ ಮಾಡಿದ್ದರು. ಅಲ್ಲದೇ ಸಹೋದರನೊಂದಿಗೆ ಸಂಬಂಧ ಹೊಂದುವಂತೆ ಶಮಿ ಒತ್ತಡ ಹಾಕಿದ್ದರು ಎಂದು ಜಹಾನ್ ಗಂಭೀರ ಆರೋಪಗಳನ್ನು ಮಾಡಿದ್ದರು. ಆದರೆ ಈ ಎಲ್ಲಾ ಆರೋಪಗಳನ್ನು ಶಮಿ ನಿರಾಕರಿಸಿದ್ದರು.

    ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶಮಿ ಆಸೀಸ್ ವಿರುದ್ಧ ಆಡಿದ್ದರು. 9 ಓವರ್ ಬೌಲ್ ಮಾಡಿದ್ದ ಶಮಿ 57 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡು ಮುಖಭಂಗ ಅನುಭವಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಗಮವಾಯ್ತ ವಿಜಯ್ ಶಂಕರ್ ವಿಶ್ವಕಪ್ ಹಾದಿ?

    ಸುಗಮವಾಯ್ತ ವಿಜಯ್ ಶಂಕರ್ ವಿಶ್ವಕಪ್ ಹಾದಿ?

    ನಾಗ್ಪುರ: ಆಸೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಲ್ಲೂ ಮಿಂಚಿದ ಯುವ ಆಟಗಾರ ವಿಜಯ್ ಶಂಕರ್ ಈ ಮೂಲಕ ತಮ್ಮ ವಿಶ್ವಕಪ್ ಹಾದಿಯನ್ನ ಸುಗಮ ಮಾಡಿಕೊಂಡಿದ್ದಾರೆ.

    ಇಂದಿನ ಪಂದ್ಯದಲ್ಲಿ ಅವರು ನೀಡಿದ ಪ್ರದರ್ಶನ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪ್ರಶಂಸೆಗೆ ಕಾರಣವಾಗಿದೆ. ಟೀಂ ಇಂಡಿಯಾಗೆ 500ನೇ ಗೆಲುವಿನ ಸವಿ ಪಡೆಯಲು ಕೂಡ ಶಂಕರ್ ಕಾರಣರಾದರು.

    ಅಂತಿಮ ಓವರಿನಲ್ಲಿ ಮ್ಯಾಜಿಕ್ ಮಾಡಿದ ಶಂಕರ್ ತಾವು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಅರ್ಹರು ಎಂಬ ಸಂದೇಶವನ್ನು ಆಯ್ಕೆ ಸಮಿತಿಗೆ ರವಾನಿಸಿದರು. ಅರ್ಧ ಶತಕ ಸಿಡಿಸಿ ಸೆಟ್ ಬ್ಯಾಟ್ಸ್ ಮನ್ ಆಗಿದ್ದ ಸ್ಟೋಯಿನ್ಸ್ ಹಾಗೂ ಜಂಪಾ ವಿಕೆಟ್ ಪಡೆದ ಶಂಕರ್ ಪ್ರಶಂಸೆಗೆ ಪಡೆದಿದ್ದಾರೆ.

    ಇದಕ್ಕೂ ಮುನ್ನ ಬ್ಯಾಟಿಂಗ್‍ನಲ್ಲೂ ಮಿಂಚಿದ ಶಂಕರ್ ನಾಯಕ ಕೊಹ್ಲಿ ಅವರೊಂದಿಗೆ ಉಪಯುಕ್ತ ಇನ್ನಿಂಗ್ಸ್ ನಿರ್ಮಿಸಿದರು. ಒಂದಂತದಲ್ಲಿ ಕೊಹ್ಲಿಗಿಂತ ವೇಗವಾಗಿ ರನ್ ಗಳಿಸಿದ ಶಂಕರ್ 46 ರನ್ ಗಳಿಸಿದ್ದ ವೇಳೆ ದುದೃಷ್ಟವಶಾತ್ ರನೌಟ್ ಆದ್ರು. ಆದರೆ ಈ ಪಂದ್ಯದಲ್ಲಿ ಶಂಕರ್ ಅರ್ಧ ಶತಕ ಸಿಡಿಸಲು ಅರ್ಹರಾಗಿದ್ದರು.

    ಪಂದ್ಯ ಆರಂಭಕ್ಕೂ ಮುನ್ನವೇ ಅನುಭವಿ ಜಡೇಜಾ ಹಾಗು ಶಂಕರ್ ನಡುವೇ ವಿಶ್ವಕಪ್ ಆಯ್ಕೆಗೆ ಪೈಪೋಟಿ ನಡೆಯುತ್ತಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದರು. ಆಯ್ಕೆ ಸಮಿತಿ ಬೌಲಿಂಗ್ ವಿಭಾಗದಲ್ಲಿ ಬುಮ್ರಾ, ಭುವನೇಶ್ವರ್, ಶಮಿ ಮುಂದಾಳತ್ವದಲ್ಲಿ ಹೆಜ್ಜೆ ಇಟ್ಟಿರುವುದು ಸ್ಪಷ್ಟವಾಗುತ್ತಿದೆ. ಇತ್ತ ಗಾಯದ ಸಮಸ್ಯೆಯಿಂದ ಆಸೀಸ್ ಟೂರ್ನಿಗೆ ಅಲಭ್ಯವಾಗಿರುವ ಹಾರ್ದಿಕ್ ವಿಶ್ವಕಪ್‍ಗೆ ಚೇತರಿಕೊಳ್ಳುವ ವಿಶ್ವಾಸ ಇದೆ. ಇದರಂತೆ ಹೆಚ್ಚಿನ ಆಯ್ಕೆಯಾಗಿ ಶಂಕರ್ ಹಾಗೂ ರವೀಂದ್ರ ಜಡೇಜಾ ಪ್ರದರ್ಶನ ಮೇಲೆ ಆಯ್ಕೆ ಸಮಿತಿ ಕಣ್ಣಿಟ್ಟಿದೆ. ಒಂದು ಪ್ರದರ್ಶನ ಮೇಲೆ ಆಟಗಾರರ ಆಯ್ಕೆ ಖಚಿತ ಪಡಿಸುವುದು ಕಷ್ಟಸಾಧ್ಯವಾದರು. ಇಂದಿನ ಪಂದ್ಯದಲ್ಲಿ ಶಂಕರ್ ಆಯ್ಕೆ ಸಮಿತಿಯ ಗಮನ ಸೆಳೆದಿರುವುದು ಪಕ್ಕ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv