Tag: ವಿಶೇಷ ಅಭಿಮಾನಿ

  • ವಿಶೇಷ ಅಭಿಮಾನಿಯನ್ನು ಭೇಟಿಯಾಗಿ ಆಟೋಗ್ರಾಫ್ ನೀಡಿದ ವಿರಾಟ್

    ವಿಶೇಷ ಅಭಿಮಾನಿಯನ್ನು ಭೇಟಿಯಾಗಿ ಆಟೋಗ್ರಾಫ್ ನೀಡಿದ ವಿರಾಟ್

    ಇಂದೋರ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂದು ಇಂದೋರ್ ನಲ್ಲಿ ಅವರ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿಯಾಗಿ ಆಟೋಗ್ರಾಫ್ ನೀಡಿದ್ದಾರೆ.

    ಬಾಂಗ್ಲಾದೇಶದ ವಿರುದ್ಧ ಇಂದೋರ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಮತ್ತು 130 ರನ್‍ಗಳ ಅಂತರದಲ್ಲಿ ಪಂದ್ಯವನ್ನು ಗೆದ್ದುಕೊಂಡಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಮೈದಾನದಲ್ಲಿ ಕೊಹ್ಲಿ ಅವರ ನಾಯಕತ್ವವನ್ನು ಶ್ಲಾಘಿಸಿರುವ ಕ್ರೀಡಾಭಿಮಾನಿಗಳು. ಮೈದಾನದಾಚೆಗೆ ಅವರ ಹೃದಯಂತಿಕೆ ನೋಡಿ ಬೆರಗಾಗಿದ್ದಾರೆ.

    ಇಂದೋರ್ ಪಂದ್ಯ ಮುಗಿಸಿ ಹೊರಡುತ್ತಿದ್ದ ಕೊಹ್ಲಿ ಅವರನ್ನು ಭೇಟಿಯಾಗಲು ಅವರ ವಿಶೇಷ ಅಂಗವಿಕಲ ಅಭಿಮಾನಿಯೊಬ್ಬರು ಬಾಗಿಲ ಬಳಿ ಕಾದು ಕುಳಿತಿದ್ದರು. ಆಗ ಅವರ ಬಳಿ ಬಂದ ಕೊಹ್ಲಿ ಅವರು ತಂದಿದ್ದ ಕ್ಯಾಪ್ ಮೇಲೆ ಆಟೋಗ್ರಾಫ್ ಹಾಕಿ ಅವರನ್ನು ಮಾತನಾಡಿಸಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಕೊಹ್ಲಿ ಅಭಿಮಾನಿಗಳು ಇದನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

    ಮೈದಾನದಲ್ಲಿ ಅಬ್ಬರಿಸುವ ಕೊಹ್ಲಿ ಅವರ ತಮ್ಮ ಅಭಿಮಾನಿಗಳ ಬಳಿ ಈ ರೀತಿ ನಡೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆ ದಕ್ಷಿಣ ಅಫ್ರಿಕಾ ವಿರುದ್ಧ ಟೆಸ್ಟ್ ಸರಣಿ ವೇಳೆ ಮೈದಾನಕ್ಕೆ ಬಂದಿದ್ದ ವೈಜಾಗ್ ಅಭಿಮಾನಿಯೊಬ್ಬನನ್ನು ಕೂಡ ಕೊಹ್ಲಿ ಅವರ ಭೇಟಿಯಾಗಿ ಮಾತನಾಡಿಸಿದ್ದರು. ಆ ಅಭಿಮಾನಿ ವಿರಾಟ್ ಕೊಹ್ಲಿ ಅವರ ಜರ್ಸಿ ಸಂಖ್ಯೆ ಸೇರಿದಂತೆ ಅವರ ಹೆಸರನ್ನು ತಮ್ಮ ಮೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದರು.

    ಇದರ ಜೊತೆಗೆ ಕೊಹ್ಲಿ ಅವರು ಬಾಂಗ್ಲಾ ವಿರುದ್ಧ ಪಂದ್ಯ ನಡೆಯುವ ವೇಳೆ ಅಭಿಮಾನಿಯೊಬ್ಬ ಏಕಾಏಕಿ ಕ್ರೀಡಾಂಗಣದಲ್ಲಿ ಹಾಕಿದ್ದ ಬೇಲಿಯನ್ನು ಹಾರಿ ಮೈದಾನಕ್ಕೆ ಪ್ರವೇಶ ಮಾಡಿದ್ದ. ಅಲ್ಲದೇ ನೇರ ಟೀಂ ಇಂಡಿಯಾ ಆಟಗಾರರು ನಿಂತಿದ್ದ ಸ್ಥಳಕ್ಕೆ ತೆರಳಿ ಕೊಹ್ಲಿ ಕಾಲಿಗೆ ನಮಸ್ಕರಿಸಿದ್ದರು. ಕೂಡಲೇ ಕ್ರೀಡಾಂಗಣದ ಸಿಬ್ಬಂದಿ ಎಚ್ಚೆತ್ತು, ಅಭಿಮಾನಿಯನ್ನು ಹೊರ ಕರೆದುಕೊಂಡು ಮುಂದಾಗಿದ್ದರು, ಆದರೆ ಈ ವೇಳೆ ಸಿಬ್ಬಂದಿಯನ್ನು ತಡೆದ ಕೊಹ್ಲಿ ಅಭಿಮಾನಿಯೊಂದಿಗೆ ಮಾತನಾಡಿ ಅವರನ್ನು ಏನೂ ಮಾಡಬೇಡಿ ಎಂದು ಸೂಚಿಸಿ ಕಳುಹಿಸಿಕೊಟ್ಟಿದ್ದರು.

    ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯ ಈ ವಿಡಿಯೋ ವೈರಲ್ ಆಗಿದ್ದು, ಸಿಬ್ಬಂದಿಗೆ ಅಭಿಮಾನಿಯನ್ನು ಏನು ಮಾಡದಂತೆ ಸೂಚನೆ ನೀಡಿದ್ದ ಕೊಹ್ಲಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಅಭಿಮಾನಿಯ ಈ ಹುಚ್ಚಾಟಕ್ಕೆ ರಕ್ಷಣಾ ಸಿಬ್ಬಂದಿ ಮಾತ್ರ ಅವಾಕ್ ಆಗಿದ್ದರು. ಈ ಹಿಂದೆ ಇಂತಹದ್ದೇ ಘಟನೆ ನಡೆದ ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್ ರಕ್ಷಣಾ ಸಿಬ್ಬಂದಿಯ ವಿರುದ್ಧ ಕೆಂಡಾಮಂಡಲರಾಗಿದ್ದರು. ಪಂದ್ಯವನ್ನು ಉಚಿತವಾಗಿ ನೋಡಲು ರಕ್ಷಣಾ ಸಿಬ್ಬಂದಿಯನ್ನು ನೇಮಕ ಮಾಡಿದಂತೆ ಕಾಣುತ್ತಿದೆ. ಭಾರತದಲ್ಲೇ ಇಂತಹ ಘಟನೆಗಳು ನಡೆಯುತ್ತದೆ ಎಂದು ಟೀಕೆ ಮಾಡಿದ್ದರು.