Tag: ವಿಶಾಖಪಟ್ಟಣ

  • ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು ಯೋಗಶಿಕ್ಷಕನ ಬರ್ಬರ ಹತ್ಯೆ!

    ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು ಯೋಗಶಿಕ್ಷಕನ ಬರ್ಬರ ಹತ್ಯೆ!

    ಹೈದರಾಬಾದ್: ಯೋಗ ಶಿಕ್ಷಕರೊಬ್ಬರನ್ನು ದುಷ್ಕರ್ಮಿಗಳಿಬ್ಬರು ಮನಸೋ ಇಚ್ಚೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ ಭಯಾನಕ ಘಟನೆ ನಡೆದಿದೆ.

    ಯೋಗ ಮಾಸ್ಟರ್ ವೆಂಕಟರಮಣನ್ ಕೊಲೆಯಾದ ವ್ಯಕ್ತಿ. ಶುಕ್ರವಾರ ರಾತ್ರಿ ಸುಮಾರು 10.11ರ ವೇಳೆಗೆ ವಿಶಾಖಪಟ್ಟಣ ನಗರದ ವೂಡ ಕಾಲೋನಿಯಲ್ಲಿ ವೆಂಕಟರಮಣನ್ ಕೊಲೆ ನಡೆದಿದೆ. ವೆಂಕಟರಮಣನ್ ಕೊಲೆಯ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ವಿಡಿಯೋದಲ್ಲಿ ಏನಿದೆ?: ಮೊದಲಿಗೆ ವೆಂಕಟರಮಣನ್ ಒಬ್ಬ ವ್ಯಕ್ತಿಯ ಜೊತೆ ಕಾಣಿಸಿಕೊಳ್ಳುತ್ತಾರೆ. ಕ್ಷಣಾರ್ಧದಲ್ಲಿ ವೆಂಕಟರಮಣನ್ ಜೊತೆಗಿರುವ ವ್ಯಕ್ತಿ ಅವಸರವಾಗಿ ಮುಂದೆ ಹೋಗುತ್ತಾನೆ. ರಸ್ತೆಯಲ್ಲಿ ಒಂಟಿಯಾಗಿ ವೆಂಕಟರಮಣನ್ ನಿಂತಾಗ ಹಿಂದಿನಿಂದ ಬಂದ ದುಷ್ಕರ್ಮಿ ತನ್ನ ಕೈಯಲ್ಲಿರುವ ಕಬ್ಬಿಣದ ರಾಡ್ ನಿಂದ ತಲೆಯ ಭಾಗಕ್ಕೆ ಹಲ್ಲೆ ಮಾಡುತ್ತಾನೆ. ಹಲ್ಲೆಗೊಳಗಾದ ವೆಂಕಟರಮಣನ್ ಸ್ಥಳದಲ್ಲೇ ಕುಸಿದು ಬೀಳುತ್ತಾರೆ. ಕೂಡಲೇ ಈ ಮೊದಲು ವೆಂಕರಮಣನ್ ಜೊತೆಗಿದ್ದ ವ್ಯಕ್ತಿ ಬಂದು, ಅವನು ಕೂಡ ಹಲ್ಲೆ ಮಾಡುತ್ತಾನೆ. ಹೀಗೆ ಇಬ್ಬರು ದುಷ್ಕರ್ಮಿಗಳು ಮೂರು ಬಾರಿ ಹಲ್ಲೆ ನಡೆಸಿದ್ದಾರೆ.

    ಈ ಸಂಬಂಧ ನಗರದ ವಿಮಾನ ನಿಲ್ದಾಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ವಿಶೇಷ ಜಾಲ ಬೀಸಿದ್ದಾರೆ. 2017ರಲ್ಲಿ ವಿಶಾಖಪಟ್ಟಣ ನಗರವೊಂದರಲ್ಲಿಯೇ 40 ಕೊಲೆಗಳು ನಡೆದಿವೆ ಎಂದು ಅಂಕಿ ಅಂಶಗಳು ಹೇಳುತ್ತವೆ. 2018 ಜನವರಿ ಒಂದೇ ತಿಂಗಳಲ್ಲಿ 4 ಕೊಲೆಗಳು ನಡೆದಿವೆ.

    https://www.youtube.com/watch?v=Mracbur3XWQ

  • ಮೂವರು ಮಕ್ಕಳ ಎದುರೇ ತಾಯಿಯ ಮೇಲೆ ಗ್ಯಾಂಗ್ ರೇಪ್!

    ಮೂವರು ಮಕ್ಕಳ ಎದುರೇ ತಾಯಿಯ ಮೇಲೆ ಗ್ಯಾಂಗ್ ರೇಪ್!

    ವಿಶಾಖಪಟ್ಟಣ: ಮೂವರು ಮಕ್ಕಳ ಕಣ್ಣೆದುರೇ ಮೂವತ್ತೈದು ವರ್ಷದ ಮಹಿಳೆಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಆಂಧ್ರದಲ್ಲಿ ನಡೆದಿದೆ

    ನಗರದ ಇಬ್ಬರು ಪುರುಷರು ಮನೆಯಲ್ಲಿ ತನ್ನ ಗಂಡ ಇಲ್ಲದ ವೇಳೆಯಲ್ಲಿ ನನ್ನ ಮೂವರು ಮಕ್ಕಳ ಮುಂದೆಯೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಘಟನೆ ಸೋಮವಾರ ಸಂಜೆ ತನ್ನ ಗಂಡ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ನಡೆದಿದೆ ಅಂತಾ ಗಾಜುವಾಕ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ. ನಾಲ್ವರ ಗುಂಪು ತನ್ನ ಮನೆಯನ್ನೂ ಹಾನಿಗೊಳಿಸಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

    ನಾಲ್ವರ ಪೈಕಿ ಇಬ್ಬರು ಮಕ್ಕಳ ಮುಂದೆಯೇ ಅತ್ಯಾಚಾರ ಎಸಗಿದ್ದಾರೆ. ಜತೆಗೆ, ಈ ವಿಷಯವನ್ನು ಬಹಿರಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಹಿಳೆಗೆ ಬೆದರಿಕೆ ಹಾಕಿದ್ದಾರೆ ಎಂದು ಠಾಣೆಯ ಎಸ್‍ಐ ಟಿ ಇಮ್ಮಾನ್ವೆಲ್ ರಾಜು ತಿಳಿಸಿದ್ದಾರೆ.

    ಆರೋಪಿಗಳ ವಿರುದ್ಧ ಐಪಿಸಿ 376ರ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

  • ಸ್ವಚ್ಚ ರೈಲ್ವೆ ನಿಲ್ದಾಣಗಳ ಪಟ್ಟಿ ಪ್ರಕಟ: ವಿಶಾಖಪಟ್ಟಣ ಫಸ್ಟ್, ದರ್ಭಾಂಗ್ ಲಾಸ್ಟ್, ಬೆಂಗಳೂರು?

    ಸ್ವಚ್ಚ ರೈಲ್ವೆ ನಿಲ್ದಾಣಗಳ ಪಟ್ಟಿ ಪ್ರಕಟ: ವಿಶಾಖಪಟ್ಟಣ ಫಸ್ಟ್, ದರ್ಭಾಂಗ್ ಲಾಸ್ಟ್, ಬೆಂಗಳೂರು?

    ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣ ರೈಲು ನಿಲ್ದಾಣ ದೇಶದಲ್ಲೇ ಅತ್ಯಂತ ಸ್ವಚ್ಛ ರೈಲು ನಿಲ್ದಾಣ ಎಂಬ ಹೆಗ್ಗಳಿಕಗೆ ಪಾತ್ರವಾಗಿದ್ದರೆ, ಬಿಹಾರದ ದರ್ಭಂಗ್ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

    ದೇಶದ 407 ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿಯನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಪ್ರಕಟಿಸಿದ್ದಾರೆ. ನಮ್ಮ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ ಪಟ್ಟಿಯಲ್ಲಿ 10ನೇ ಸ್ಥಾನವನ್ನು ಪಡೆದುಕೊಂಡಿದೆ. `ಎ’ ಕೆಟಗಿರಿಯಲ್ಲಿರುವ ರಾಜ್ಯದ ರಾಯಚೂರು ನಿಲ್ದಾಣ 66 ನೇ ಸ್ಥಾನದಲ್ಲಿದೆ. ಕಳೆದ ಬಾರಿ ಇದೇ ರಾಯಚೂರು ನಿಲ್ದಾಣ 330ನೇ ಸ್ಥಾನವನ್ನು ಹೊಂದಿತ್ತು.

    ಸ್ವಚ್ಛ ರೈಲು ಅಭಿಯಾನದ ಅಡಿಯಲ್ಲಿ ರೈಲ್ವೆ ಇಲಾಖೆ ದೇಶದ ಸ್ವಚ್ಛ ರೈಲು ನಿಲ್ದಾಣಗಳ ಸಮೀಕ್ಷೆ ನಡೆಸಲಾಗಿದೆ. ದೇಶಾದ್ಯಂತ ಅತಿ ಹೆಚ್ಚು ಕಾರ್ಯನಿರ್ವಹಿಸುವ 75 ರೈಲು ನಿಲ್ದಾಣಗಳ ಪೈಕಿ ವಿಶಾಖಪಟ್ಟಣ ರೈಲ್ವೆ ನಿಲ್ದಾಣ ಅತ್ಯಂತ ಸ್ವಚ್ಛ ರೈಲು ನಿಲ್ದಾಣವಾಗಿದ್ದು, ಸಿಕಂದರಾಬಾದ್ ಮತ್ತು ಜಮ್ಮು-ಕಾಶ್ಮೀರ ರೈಲು ನಿಲ್ದಾಣ ಕ್ರಮವಾಗಿ 2 ಮತ್ತು 3ನೇ ಸ್ಥಾನವನ್ನು ಪಡೆದಿವೆ.

    ರೈಲ್ವೆ ನಿಲ್ದಾಣಗಳನ್ನು ಎ1, ಎ, ಬಿ, ಸಿ., ಡಿ, ಇ ಮತ್ತು ಎಫ್ ಎಂದು ವರ್ಗಿಕರಿಸಲಾಗಿದೆ. ವಾರ್ಷಿಕವಾಗಿ 50 ಕೋಟಿ ರೂ. ಗಳಿಸುವ ನಿಲ್ದಾಣಗಳು ಎ1 ವಿಭಾಗದಲ್ಲಿ ಬರುತ್ತವೆ. ವಾರ್ಷಿಕವಾಗಿ 6 ರಿಂದ 50 ಕೋಟಿ ರೂ. ಗಳಿಸುವ ನಿಲ್ದಾಣಗಳು `ಎ’ ವಿಭಾಗದಲ್ಲಿ ಸೇರ್ಪಡೆಯಾಗುತ್ತವೆ. ಇನ್ನು ಉಳಿದ ಸಬ್ ಅರ್ಬನ್ ರೈಲ್ವೆ ನಿಲ್ದಾಣಗಳು `ಸಿ’ ವಿಭಾಗದಲ್ಲಿ ಬರುತ್ತವೆ. ಉಳಿದ ಹಾಲ್ಟ್ ಸ್ಟೇಶ್‍ನ್‍ಗಳು `ಎಫ್’ ವಿಭಾಗದಲ್ಲಿ ಸೇರುತ್ತದೆ.

    ಒಟ್ಟು 75 ರೈಲು ನಿಲ್ದಾಣಗಳು `ಎ1′ ವರ್ಗದಲ್ಲಿವೆ. 332 ರೈಲು ನಿಲ್ದಾಣಗಳು `ಎ’ ವಿಭಾಗದಲ್ಲಿ ಬರುತ್ತವೆ. ಈ 332 ನಿಲ್ದಾಣಗಳಲ್ಲಿ ಪಂಜಾಬ್ ರಾಜ್ಯದ ಬಿಯಾಸ್ ರೈಲು ನಿಲ್ದಾಣ ಸ್ವಚ್ಛತೆಯಲ್ಲಿ ಮೊದಲ ಸ್ಥಾನದಲ್ಲಿದೆ. ಬಿಹಾರ ರಾಜ್ಯದ ಜೊಗ್ಬನಿ ನಿಲ್ದಾಣ ಕೊನೆಯ ಸ್ಥಾನದಲ್ಲಿದೆ.