Tag: ವಿವಿ ಸ್ಥಾಪನೆ

  • ರಾಮನಗರಕ್ಕೆ ಸಿಎಂ ಎಚ್‍ಡಿಕೆ, ಸಚಿವ ಡಿಕೆಶಿಯಿಂದ ಭರ್ಜರಿ ಗಿಫ್ಟ್!

    ರಾಮನಗರಕ್ಕೆ ಸಿಎಂ ಎಚ್‍ಡಿಕೆ, ಸಚಿವ ಡಿಕೆಶಿಯಿಂದ ಭರ್ಜರಿ ಗಿಫ್ಟ್!

    ಬೆಂಗಳೂರು: ರಾಮನಗರದಲ್ಲಿ ಆರೋಗ್ಯ ವಿಶ್ವವಿದ್ಯಾಲಯ ಸ್ಥಾಪನೆಗಿದ್ದ ತೊಡಗು ನಿವಾರಣೆ ಆಗಿದೆ ಅಂತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

    ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ರಾಮನಗರಕ್ಕೆ ಶಿಫ್ಟ್ ಮಾಡಲಾಗುತ್ತದೆ. ಸಾಕಷ್ಟು ವರ್ಷದಿಂದ ಭೂವಿವಾದ ವ್ಯಾಜ್ಯ ಕೋರ್ಟ್ ನಲ್ಲಿ ಇತ್ತು. ಡಿಕೆಶಿ ವೈದ್ಯಕೀಯ ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡಾಗ ಸ್ಥಳಾಂತರ ನಡೆಸಲು ಕ್ರಮ ಕೈಗೊಳ್ಳೊದಾಗಿ ಹೇಳಿದ್ರು. ಇದೀಗ ಸಿಎಂ ಟ್ವೀಟ್ ಮೂಲಕ ಭೂ ವಿವಾದ ಬಗೆಹರಿದಿದೆ. ಸದ್ಯದಲ್ಲಿಯೇ ರಾಮನಗರ ದಲ್ಲಿ ವಿವಿ ಸ್ಥಾಪನೆ ಮಾಡೋದಾಗಿ ಹೇಳಿದ್ದಾರೆ. ಇದನ್ನೂ ಓದಿ: ರಾಮನಗರಕ್ಕೆ ಗಿಫ್ಟ್ ಕೊಡಲು ಡಿಕೆಶಿ, ಸಿಎಂ ಎಚ್‍ಡಿಕೆ ನಡುವೆ ಫೈಟ್

    ಈ ಬಗ್ಗೆ ಸಿಎಂ ಆಫ್ ಕರ್ನಾಟಕ ಎಂಬ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದ್ದು ಅದರಲ್ಲಿ, ರಾಮನಗರದಲ್ಲಿ ಆರೋಗ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಇದ್ದ ತೊಡಕು ನಿವಾರಣೆಯಾಗಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಯಾಂಪಸ್ ರಾಮನಗರದಲ್ಲಿ ಸ್ಥಾಪನೆಯಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ಇದ್ದ ಭೂ ಒತ್ತುವರಿ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ ಅಂತ ತಿಳಿಸಲಾಗಿದೆ.