Tag: ವಿವಿಯನ್  ರಿಚರ್ಡ್ಸ್

  • ಬ್ಯಾಟಿಂಗ್ ವೇಳೆ ನಾನು ಮೃತಪಟ್ಟರೂ ದು:ಖವಿಲ್ಲ: ವಿವಿಯನ್ ರಿಚರ್ಡ್ಸ್

    ಬ್ಯಾಟಿಂಗ್ ವೇಳೆ ನಾನು ಮೃತಪಟ್ಟರೂ ದು:ಖವಿಲ್ಲ: ವಿವಿಯನ್ ರಿಚರ್ಡ್ಸ್

    ಸಿಡ್ನಿ: ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರು ಹೆಲ್ಮೆಟ್ ಇಲ್ಲದೆ ವೇಗದ ಬೌಲರ್ ಗಳ ಎಸೆತಗಳನ್ನು ಎದುರಿಸುತ್ತಿದ್ದರು. ಈ ವಿಚಾರವಾಗಿ ಮಾತನಾಡಿರುವ ಅವರು, ಬ್ಯಾಟಿಂಗ್ ಮಾಡುವಾಗ ನಾನು ಮೃತಪಟ್ಟರೂ ದು:ಖವಿಲ್ಲ ಎಂದು ಹೇಳಿದ್ದಾರೆ.

    ವಿವಿಯನ್ ರಿಚರ್ಡ್ಸ್ ಅವರು ಆಸ್ಟ್ರೇಲಿಯಾದ ಮಾಜಿ ಆಲ್‍ರೌಂಡರ್ ಶೇನ್ ವ್ಯಾಟ್ಸನ್ ನಡೆಸಿದ ಆನ್‍ಲೈನ್‍ನಲ್ಲಿ ಚಾಟ್‍ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಹೆಲ್ಮೆಟ್ ಇಲ್ಲದೆ ಬ್ಯಾಟಿಂಗ್ ಮಾಡುವಾಗ ಸತ್ತರೂ ಯಾವುದೇ ದುಃಖವಿಲ್ಲ ಅಂತ ರಿಚರ್ಡ್ಸ್ ಹೇಳಿದ್ದರು ಎಂದು ವ್ಯಾಟ್ಸನ್ ತಿಳಿಸಿದರು.

    ರಿಚರ್ಡ್ಸ್ ಅವರು 121 ಟೆಸ್ಟ್ ಪಂದ್ಯಗಳನ್ನು ಆಡಿ 8,540 ರನ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ಪರ 187 ಏಕದಿನ ಪಂದ್ಯಗಳಲ್ಲಿ 6,721 ರನ್ ದಾಖಲಿಸಿದ್ದಾರೆ. ರಿಚಡ್ರ್ಸ್ ಕಾಲದಲ್ಲಿ ಜೆಫ್ ಥಾಮನ್ಸ್, ಡೆನಿಸ್ ಲಿಲ್ಲಿ, ರಿಚರ್ಡ್ ಹ್ಯಾಡ್ಲಿ, ಮಾಲ್ಕಮ್ ಮಾರ್ಷಲ್ ಹಾಗೂ ಜೊಯೆಲ್ ಗಾರ್ನರ್ ಅವರಂತಹ ವಿಶ್ವದ ಅತ್ಯಂತ ಬಲಿಷ್ಠ ವೇಗದ ಬೌಲರ್‍ಗಳಿದ್ದರು. ಬಹುತೇಕ ಅವರು ಗಂಟೆಗೆ 150 ಕಿ.ಮೀ.ಗೂ ಅಧಿಕ ವೇಗದಲ್ಲಿ ಬೌಲಿಂಗ್ ಮಾಡುವ ಸಾಮಥ್ರ್ಯ ಹೊಂದಿದ್ದರು. ಆದರೂ ಕೂಡ ವಿವಿಯನ್ ರಿಚರ್ಡ್ಸ್ ಹೆಲ್ಮೆಟ್ ಧರಿಸದೆಯೇ ಆಟವಾಡಿ ಭರ್ಜರಿ ಬ್ಯಾಟಿಂಗ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು.

    ಆಟದ ಬಗೆಗಿನ ಉತ್ಸಾಹ ಹೇಗಿರುತ್ತದೆ ಅಂದ್ರೆ ನಾನು ಪ್ರೀತಿಸುವ ಆಟವನ್ನು ಆಡುತ್ತಾ ಸತ್ತರೂ ಅದು ನೋಯಿಸುವುದಿಲ್ಲ. ಹೀಗೆ ಅನೇಕ ಕ್ರೀಡಾಪಟುಗಳು ತಮ್ಮ ಕ್ರೀಡೆಯನ್ನು ಗೌರವಿಸುವವರನ್ನು ನಾನು ನೋಡುತ್ತಿದ್ದೆ. ಫಾರ್ಮುಲಾ-1ನಲ್ಲಿ ರೇಸರ್ ಕಾರು ಚಾಲನೆ ಮಾಡುತ್ತಿರುವುದನ್ನು ನಾನು ನೋಡುತ್ತಿದ್ದೆ. ಇದಕ್ಕಿಂತ ಹೆಚ್ಚು ಅಪಾಯಕಾರಿ ಯಾವುದಿದೆ? ನನ್ನ ದಂತವೈದ್ಯರು ನನಗೆ ಮೌತ್‍ಪೀಸ್ ನೀಡಿದ್ದರು. ಆದರೆ ಮೌತ್‍ಪೀಸ್‍ನಿಂದಾಗಿ ಚೂಯಿಂಗಮ್ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅದನ್ನು ನಾನು ಕೆಲವೇ ದಿನಗಳು ಬಳಸಿದ್ದೆ ಎಂದು ವಿವಿಯನ್ ರಿಚರ್ಡ್ಸ್ ಹೇಳಿದ್ದಾರೆ.

  • ಭಾರತ ಗೆದ್ದ ಅವಿಸ್ಮರಣೀಯ ಮೊದಲ ವಿಶ್ವಕಪ್‍ಗೆ ಇಂದು 36ರ ಸಂಭ್ರಮ

    ಭಾರತ ಗೆದ್ದ ಅವಿಸ್ಮರಣೀಯ ಮೊದಲ ವಿಶ್ವಕಪ್‍ಗೆ ಇಂದು 36ರ ಸಂಭ್ರಮ

    ನವದೆಹಲಿ: 1983 ಜೂನ್ 25 ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಮೊದಲ ಬಾರಿಗೆ ವಿಶ್ವ ಕಪ್ ಎತ್ತಿ ಹಿಡಿದು ಹೊಸ ಇತಿಹಾಸವನ್ನು ಈ ದಿನ ಸೃಷ್ಟಿಸಿತ್ತು.

    ಇಂದಿಗೆ ಭಾರತ ತಂಡ ಈ ಸಾಧನೆ ಮಾಡಿ 36 ವರ್ಷವಾಗಿದೆ. ಇಂಗ್ಲೆಂಡಿನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗು ಬಡಿದು ಚೊಚ್ಚಲ ವಿಶ್ವಕಪ್‍ನ್ನು ಗೆದ್ದು ಬೀಗಿತ್ತು. ಆ ಕಾಲಕ್ಕೆ ಕ್ರಿಕೆಟ್ ಸಾಮ್ರಾಜ್ಯವನ್ನು ಆಳುತ್ತಿದ್ದ ದೈತ್ಯ ವಿಂಡೀಸ್ ಪಡೆಯ ವಿರುದ್ಧ ಭಾರತ 43 ರನ್‍ಗಳ ಅಂತರದಲ್ಲಿ ಗೆಲುವು ಪಡೆದಿತ್ತು.

    ಅಂದು ಮೊದಲು ಟಾಸ್ ಗೆದ್ದು ವಿಂಡೀಸ್ ತಂಡದ ನಾಯಕ ಕ್ಲೈವ್ ಲಾಯ್ಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ರಾಬಟ್ರ್ಸ್, ಮಾರ್ಶಲ್, ಗಾರ್ನರ್, ಹೋಲ್ಡಿಂಗ್‍ನಂತಹ ಘಟಾನುಘಟಿ ಬೌಲರ್‍ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ ಕೇವಲ 54.4 ಓವರ್ ಗಳಲ್ಲಿ 183 ರನ್ ಗಳಿಸಿ ಅಲೌಟ್ ಆಗಿತ್ತು. ಇದರಲ್ಲಿ ಭಾರತ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಮಾತ್ರ 57 ಎಸೆತಗಳನ್ನು ಆಡಿ 38 ರನ್ ಗಳಿಸಿದ್ದರು. ಇದನ್ನು ಬಿಟ್ಟರೆ ನಾಯಕ ಕಪಿಲ್ ದೇವ್, ಕೀರ್ತಿ ಆಜಾದ್, ರೋಜರ್ ಬಿನ್ನಿ ಬ್ಯಾಟಿಂಗ್‍ನಲ್ಲಿ ವಿಫಲರಾಗಿದ್ದರು.

    ಈ ಸುಲಭ ಗುರಿಯನ್ನು ಬೆನ್ನಟ್ಟಿದ್ದ ವಿಂಡೀಸ್ ತಂಡಕ್ಕೆ ಬಹುದೊಡ್ಡ ಶಾಕ್ ಕಾದಿತ್ತು. ಭಾರತೀಯ ಬೌಲರ್‍ಗಳಾದ ಮೊಹಿಂದರ್ ಅಮರ್‍ನಾಥ್ ಮತ್ತು ಮದನ್ ಲಾಲ್ ಮಾರಕ ದಾಳಿಗೆ ಬಲಿಷ್ಠ ವಿಂಡೀಸ್ ಪಡೆ ನಲುಗಿ ಹೋಗಿತ್ತು. 7 ಓವರ್ ಬೌಲ್ ಮಾಡಿದ ಅಮರ್‍ನಾಥ್ 12 ರನ್ ನೀಡಿ 3 ವಿಕೆಟ್ ಕಿತ್ತಿದ್ದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಮದನ್ ಲಾಲ್ 31 ರನ್ ನೀಡಿ 3 ವಿಕೆಟ್ ಬಲಿ ಪಡೆದು ವಿಂಡೀಸ್ ಆಟಗಾರಿಗೆ ಪೆವಿಲಿಯನ್ ದಾರಿ ತೋರಿಸಿದ್ದರು.

    ಕಪಿಲ್ ಕ್ಯಾಚ್ ಭಾರತಕ್ಕೆ ಟ್ರೋಫಿ:
    ಒಂದು ಉತ್ತಮ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸುತ್ತದೆ ಎನ್ನುವ ಮಾತಿಗೆ ಪೂರಕ ಎಂಬಂತೆ 28 ಎಸೆತದಲ್ಲಿ 33 ರನ್ ಗಳಿಸಿ ಗೆಲುವಿನ ದಡಕ್ಕೆ ಮುನ್ನಡೆಸುತ್ತಿದ್ದ ಸಾರ್ವಕಾಲಿಕ ಶ್ರೇಷ್ಠ ಏಕದಿನ ಕ್ರಿಕೆಟಿಗ ವಿವಿಯನ್  ರಿಚರ್ಡ್ಸ್ ಬಾರಿಸಿದ ಚೆಂಡನ್ನು ಕಪಿಲ್ ಹಿಮ್ಮುಖವಾಗಿ ಓಡಿ ಕ್ಯಾಚ್ ಹಿಡಿದ್ದಿದ್ದರು. ಈ ಮೂಲಕ ಭಾರತ ತಂಡವನ್ನು ಮೊದಲ ವಿಶ್ವಕಪ್ ಕಡೆಗೆ ಕರೆದುಕೊಂಡು ಹೋಗಿದ್ದರು.

    ಎರಡು ಬಾರಿ ಗೆದಿದ್ದ ವೆಸ್ಟ್ ಇಂಡೀಸ್‍ನ ಗೆಲುವಿನ ಓಟಕ್ಕೆ ಭಾರತ ಪೂರ್ಣ ವಿರಾಮ ಹಾಕಿತು. 184 ರನ್ ಬೆನ್ನಟ್ಟಿದ ವಿಂಡೀಸ್ 140 ರನ್‍ಗಳಿಗೆ ಪತನ ಹೊಂದಿತ್ತು. ಈ ಮೂಲಕ ಭಾರತ 42 ರನ್‍ಗಳ ಜಯ ದಾಖಲಿಸಿ ತನ್ನ ಮೊದಲ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.