Tag: ವಿವಿಪಿಎಟಿ

  • ಇವಿಎಂ ಸರಿ ಇಲ್ಲ ಅನ್ನೋರಿಗೆ ರಾಜ್ಯ ಚುನಾವಣಾ ಆಯೋಗ ಸವಾಲ್- 224 ಕ್ಷೇತ್ರಗಳಲ್ಲೂ ವಿವಿಪಿಎಟಿ ಅಳವಡಿಕೆ

    ಇವಿಎಂ ಸರಿ ಇಲ್ಲ ಅನ್ನೋರಿಗೆ ರಾಜ್ಯ ಚುನಾವಣಾ ಆಯೋಗ ಸವಾಲ್- 224 ಕ್ಷೇತ್ರಗಳಲ್ಲೂ ವಿವಿಪಿಎಟಿ ಅಳವಡಿಕೆ

    ಬೆಂಗಳೂರು: ಗುಜರಾತ್, ಹಿಮಾಚಲಪ್ರದೇಶದಲ್ಲಿ ಬಿಜೆಪಿ ಗೆಲುವಿನ ನಂತರ ಇವಿಎಂ ಮಷೀನ್ ಬಗ್ಗೆ ಕಾಂಗ್ರೆಸ್ ನಾಯಕರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ರಾಜ್ಯ ಚುನಾವಣಾ ಆಯೋಗ ಇವಿಎಂ ಹ್ಯಾಕ್ ಆಗೋಕೆ ಸಾಧ್ಯವೇ ಇಲ್ಲ ಅಂತಿದೆ. ಅಷ್ಟೇ ಅಲ್ಲ ಎಲ್ಲಾ ಇವಿಎಂಗಳಿಗೂ ವಿವಿಪಿಎಟಿ (ವೋಟರ್ ವೇರಿಫೈಡ್ ಪೇಪರ್ ಆಡಿಟ್ ಟ್ರಯಲ್) ಅಳವಡಿಕೆ ಮಾಡ್ತಿದೆ.

    ಭಾರೀ ಚರ್ಚೆಗೆ ಗ್ರಾಸವಾಗಿರೋ ಇವಿಎಂ ಹ್ಯಾಕ್ ವಿಚಾರ ರಾಜ್ಯ ಚುನಾವಣೆಗೂ ತಟ್ಟಿದೆ. ವಿಪಕ್ಷಗಳು ಇವಿಎಂ ಸರಿ ಇಲ್ಲ ಅಂತ ಸುದ್ದಿ ಮಾಡ್ತಿವೆ. ಇಂತಹ ಆಪಾದನೆಯಿಂದ ಮುಕ್ತಿ ಹೊಂದಲು ಮುಂದಾಗಿರೋ ರಾಜ್ಯ ಚುನಾವಣಾ ಆಯೋಗ, ವಿಧಾನಸಭೆ ಚುನಾವಣೆಯನ್ನ ಸೂಕ್ಷ್ಮ ಭದ್ರತೆಯಲ್ಲಿ ಮಾಡಲು ನಿರ್ಧರಿಸಿದೆ. ಇವಿಎಂ ಹ್ಯಾಕ್ ಆರೋಪ ಮುಕ್ತ ಮಾಡಲು ಎಲ್ಲಾ 224 ಕ್ಷೇತ್ರಗಳಲ್ಲಿ ವಿವಿಪಿಎಟಿ ಅಳವಡಿಕೆಗೆ ನಿರ್ಧಾರ ಮಾಡಿದೆ.

    ಸುಪ್ರೀಂ, ಹೈಕೋರ್ಟ್ ಗಳಲ್ಲೂ ಇವಿಎಂಗೆ ಜಯ: ಸಿಕ್ಕ ಸಿಕ್ಕ ಕಡೆ ವಿಪಕ್ಷಗಳು ಇವಿಎಂ ಸರಿ ಇಲ್ಲ ಅಂತಿದ್ದಾರೆ. ಆದ್ರೆ ರಾಜ್ಯ ಚುನಾವಣಾ ಆಯೋಗ ಇವಿಎಂ ಹ್ಯಾಕ್ ಮಾಡೋಕೆ ಸಾಧ್ಯವಿಲ್ಲ ಅಂತಿದೆ. ಈಗಾಗಲೇ ಇವಿಎಂ ವಿರುದ್ಧ ಸವಾಲ್ ಹಾಕಿರೋರು ಸೋತಿದ್ದು, ನಮ್ಮ ಟೆಕ್ನಾಲಜಿ ಸೂಪರ್ ಅಂತಿದೆ ಆಯೋಗ. ಇಷ್ಟು ಮಾತ್ರವಲ್ಲ ಹೀಗೆ ಇವಿಎಂ ಸರಿ ಇಲ್ಲ ಅಂತ ನಡೆದ ಅನೇಕ ಕಾನೂನು ಸಮರಗಳಲ್ಲೂ ಇವಿಎಂಗಳಿಗೇ ಜಯ ಸಿಕ್ಕಿವೆ.

    ಇವಿಎಂ ಪರವಾದ ತೀರ್ಪುಗಳು:
    > 1982 ಕೇರಳ ಹೈಕೋರ್ಟ್- ಎ.ಸಿ.ಜೋಷಿ ವರ್ಸಸ್ ಸಿವನ್ ಪಿಳ್ಳೈ.
    > 2001 ಮದ್ರಾಸ್ ಹೈಕೋರ್ಟ್- ಎಐಡಿಎಂಕೆ ವರ್ಸಸ್ ಚುನಾವಣಾ ಆಯೋಗ.
    > 2004- ದೆಹಲಿ ಹೈಕೋರ್ಟ್- ವಿಪುಲ್ವಾ ಶರ್ಮ ವರ್ಸಸ್ ಕೇಂದ್ರ ಸರ್ಕಾರ.
    > 1999- ಕರ್ನಾಟಕ ಹೈಕೋರ್ಟ್- ಮೈಕಲ್ ಫರ್ನಾಂಡಿಸ್ ವರ್ಸಸ್ ಜಾಫರ್ ಶರೀಫ್.

    ಈ ಎಲ್ಲಾ ಕೇಸ್‍ಗಳಲ್ಲಿ ಘನ ನ್ಯಾಯಾಲಯಗಳು ಇವಿಎಂ ವಿಶ್ವಾಸಾರ್ಹತೆಯನ್ನ ಎತ್ತಿ ಹಿಡಿದಿವೆ.

    ವಿವಿಪಿಎಟಿ ಎಂದರೇನು?: ಈ ವ್ಯವಸ್ಥೆಯಲ್ಲಿ ವೋಟ್ ಹಾಕಿದ 7 ಸೆಕೆಂಡ್ ಬಳಿಕ ಮತದಾರರ ಕೈಗೆ ಒಂದು ಪೇಪರ್ ಬರುತ್ತೆ. ಇದರಲ್ಲಿ ವೋಟ್ ಯಾರಿಗೆ ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಬಹುದು. ಆದರೆ ಈ ಪೇಪರನ್ನು ಬೂತ್‍ನಿಂದ ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ. ನಾನು ಹಾಕಿರುವ ಅಭ್ಯರ್ಥಿಗೆ ಮತ ಬಿದ್ದಿದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿ ಅಲ್ಲೇ ಇರುವ ಪೆಟ್ಟಿಗೆಯ ಒಳಗೆ ಚೀಟಿಯನ್ನು ಹಾಕಬೇಕಾಗುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನವಣಾ ಆಯೋಗಕ್ಕೆ ಕಳೆದ ವರ್ಷ ಸಲಹೆ ನೀಡಿತ್ತು.

  • ವಿವಿಪಿಎಟಿ ಇಲ್ಲದೆ ಇವಿಎಂ ಬಳಕೆ – ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

    ವಿವಿಪಿಎಟಿ ಇಲ್ಲದೆ ಇವಿಎಂ ಬಳಕೆ – ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

    ನವದೆಹಲಿ: ಎಲೆಕ್ರ್ಟಾನಿಕ್ ವೋಟಿಂಗ್ ಮಷೀನ್ ಜೊತೆಗೆ ವಿವಿಪಿಎಟಿ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ ಹಾಗೂ ಕೇಂದ್ರಕ್ಕೆ ನೋಟಿಸ್ ನೀಡಿದೆ.

    ಚುನಾವಣೆಗಳಲ್ಲಿ ವಿವಿಪಿಎಟಿ ಇಲ್ಲದೆ ಇವಿಎಂ ಬಳಕೆ ಮಾಡಲಾಗುತ್ತಿರುವುದನ್ನು ಪ್ರಶ್ನಿಸಿ ಉತ್ತರಪ್ರದೇಶದ ಮಾಜಿ ಸಿಎಂ ಮಾಯಾವತಿಯ ಬಹುಜನ ಸಮಾಜ ವಾದಿ ಪಕ್ಷ ಅರ್ಜಿ ಸಲ್ಲಿಸಿತ್ತು. ಇದರ ಜೊತೆಗೆ ಇನ್ನೂ ಕೆಲವರು ವೈಯಕ್ತಿಕವಾಗಿ ಅರ್ಜಿಗಳನ್ನು ಸಲ್ಲಿಸಿದ್ರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಿವಿಪಿಎಟಿ ಇಲ್ಲದೆ ಇವಿಎಂ ಬಳಸಲಾಗುತ್ತಿರುವ ಬಗ್ಗೆ ಮೇ 8 ರೊಳಗೆ ಉತ್ತರಿಸುವಂತೆ ಚುನಾವಣಾ ಆಯೋಗ ಹಾಗೂ ಕೇಂದ್ರಕ್ಕೆ ಆದೇಶಿಸಿದೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಿದ ಹಿರಿಯ ವಕೀಲರಾದ ಪಿ ಚಿದಂಬರಂ, ಚುನಾವಣೆಗಳಲ್ಲಿ ಇವಿಎಂ ಜೊತೆ ವಿವಿಪಿಎಟಿ ಬಳಸುವುದು ಕಡ್ಡಾಯ. ಆದ್ರೆ ಬಹುತೇಕ ಸಂದರ್ಭಗಳಲ್ಲಿ ಅದನ್ನು ಮಾಡಲಾಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‍ಗೆ ತಿಳಿಸಿದರು.

    ನ್ಯಾ. ಚೆಲಮೇಶ್ವರ್ ನೇತೃತ್ವದ ಪೀಠವನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ವಕೀಲರಾದ ಕಪಿಲ್ ಸಿಬಿಲ್, ಭಾರತವನ್ನು ಹೊರತುಪಡಿಸಿ ವಿಶ್ವದಲ್ಲಿ ಎಲ್ಲೂ ಇವಿಎಂ ಬಳಕೆ ಮಾಡುತ್ತಿಲ್ಲ ಎಂದು ಹೇಳಿದ್ರು.

    ಇತ್ತೀಚೆಗೆ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನ ರದ್ದುಗೊಳಿಸಲು ಒತ್ತಾಯಿಸುವಂತಿಲ್ಲ ಎಂದು ಪ್ರಮುಖ ಅರ್ಜಿದಾರರಾದ ಬಿಎಸ್‍ಪಿಗೆ ಸುಪ್ರೀಂ ಸ್ಪಷ್ಟವಾಗಿ ಹೇಳಿದೆ. ಇದಕ್ಕೆ ಒಪ್ಪಿಕೊಂಡಿರೋ ಬಿಎಸ್‍ಪಿ, ಮೊದಲು ಚುನಾವಣಾ ಆಯೋಗ ಹಾಗೂ ಕೇಂದ್ರದಿಂದ ಉತ್ತರ ಬರುವವರೆಗೂ ಕಾಯುವುದಾಗಿ ಹೇಳಿದೆ.

    ಈ ಪ್ರಕರಣದ ಮುಂದಿನ ವಿಚಾರಣೆ ಮೇ 8ರಂದು ನಡೆಯಲಿದೆ.

    ಇದನ್ನೂ ಓದಿ: ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

    ವಿವಿಪಿಎಟಿ ಅಂದ್ರೇನು?: ಈ ಬಾರಿ ಕರ್ನಾಟಕದಲ್ಲಿ ನಡೆದ ಎರಡು ಉಪಚುನಾವಣೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ) ವ್ಯವಸ್ಥೆಯನ್ನು ಜಾರಿ ಮಾಡಲಾಗಿತ್ತು. ಈ ವ್ಯವಸ್ಥೆಯಲ್ಲಿ ವೋಟ್ ಹಾಕಿದ 7 ಸೆಕೆಂಡ್ ಬಳಿಕ ಮತದಾರರ ಕೈಗೆ ಒಂದು ಪೇಪರ್ ಬರುತ್ತೆ. ಇದರಲ್ಲಿ ವೋಟ್ ಯಾರಿಗೆ ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಬಹುದು. ಆದರೆ ಈ ಪೇಪರ್ ಅನ್ನು ಬೂತ್‍ನಿಂದ ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ. ನಾನು ಹಾಕಿರುವ ಅಭ್ಯರ್ಥಿಗೆ ಮತ ಬಿದ್ದಿದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿ ಅಲ್ಲೇ ಇರುವ ಪೆಟ್ಟಿಗೆಯ ಒಳಗಡೆ ಚೀಟಿಯನ್ನು ಹಾಕಬೇಕಾಗುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನವಣಾ ಆಯೋಗಕ್ಕೆ ಕಳೆದ ವರ್ಷ ಸಲಹೆ ನೀಡಿತ್ತು.