Tag: ವಿವಾಹ

  • ಗೂಗಲ್ ಚಿತ್ರದ ಪ್ರಮೋಶನ್ ವೇಳೆ ಮದ್ವೆ ವದಂತಿ ಬಗ್ಗೆ ರಹಸ್ಯ ಬಿಚ್ಚಿಟ್ಟ ಶುಭಾ ಪೂಂಜಾ

    ಗೂಗಲ್ ಚಿತ್ರದ ಪ್ರಮೋಶನ್ ವೇಳೆ ಮದ್ವೆ ವದಂತಿ ಬಗ್ಗೆ ರಹಸ್ಯ ಬಿಚ್ಚಿಟ್ಟ ಶುಭಾ ಪೂಂಜಾ

    ಚಿತ್ರದುರ್ಗ: ಸ್ಯಾಂಡಲ್‍ವುಡ್‍ನ ಮೊಗ್ಗಿನ ಮನಸ್ಸಿನ ನಟಿ ಶುಭಾ ಪೂಂಜಾ ಮದುವೆ ಹಾಗೂ ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ನಟಿ ಶುಭಾ ಪೂಂಜಾ ಬುಧವಾರ ಕೋಟೆನಾಡು ಚಿತ್ರದುರ್ಗಕ್ಕೆ ಗೂಗಲ್ ಚಿತ್ರತಂಡದೊಂದಿಗೆ ಪ್ರಮೋಶನ್ ಗಾಗಿ ಆಗಮಿಸಿದ್ದರು. ಈ ವೇಳೆ ಅವರ ನಿಜಜೀವನದ ಅನೇಕ ಸತ್ಯಗಳನ್ನು ಪಬ್ಲಿಕ್ ಟಿವಿ ಮುಂದೆ ಬಿಚ್ಚಿಟ್ಟರು. ಅದೇನೆಂದರೆ ಈ ಹಿಂದೆ ಶೂಟಿಂಗ್ ವೇಳೆ ಯಾರೋ ಅಭಿಮಾನಿಗಳು ಮಾಡಿದ ಅವಾಂತರಕ್ಕೆ ಶುಭ ಪೂಂಜಾ ವಿವಾಹ ಗೂಗಲ್ ಚಿತ್ರದ ನಿರ್ದೇಶಕ ಹಾಗು ನಟ ನಾಗೇಂದ್ರ ಪ್ರಸಾದ್ ಜೊತೆ ಆಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ ವಿವಾಹ ಆಗಿಲ್ಲ, ಅದು ಕೇವಲ ಚಿತ್ರೀಕರಣಕ್ಕಾಗಿ ಹಾಗೆ ಸಿದ್ಧವಾಗಿದ್ದೆವು. ಆದರೆ ದೇವಸ್ಥಾನದಲ್ಲಿ ಶೂಟಿಂಗ್ ಮಾಡೋ ವೇಳೆ ಯಾರೋ ಅಭಿಮಾನಿಯೊಬ್ಬ ಆ ಚಿತ್ರ ತೆಗೆದು ಎಲ್ಲೆಡೆ ಪ್ರಚಾರ ಮಾಡಿದ್ದ ಎಂದರು.

    ನಾನು ಸದ್ಯಕ್ಕೆ ಇನ್ನು ನಾಲ್ಕು ವರ್ಷದವರೆಗೆ ರಾಜಕೀಯಕ್ಕೆ ಬರಲ್ಲ. ಆದರೆ ಮುಂದೇನು ಆಗುತ್ತೆ ಎನ್ನುವುದು ಗೊತ್ತಿಲ್ಲ ಎಂದು ಹೇಳುವ ಮೂಲಕ ರಾಜಕೀಯ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದರು.

    ಈ ಗೂಗಲ್ ಚಿತ್ರದಲ್ಲಿ ಸಾಹಿತಿ ನಾಗೇಂದ್ರ ಪ್ರಸಾದ್ ನಟಿಸಿ ನಿರ್ದೇಶಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಾಗೇಂದ್ರ ಪ್ರಸಾದ್, ನಿತ್ಯವೂ ಮಧ್ಯಮ ವರ್ಗದ ಕುಟುಂಬಗಳಲ್ಲಿ ನಡೆಯುವ ಘಟನೆಗಳ ಆಧಾರಿತ ಚಿತ್ರ ಇದಾಗಿದೆ. ಎಲ್ಲಾ ವಯೋಮಾನದವರಿಗೂ ಈ ಗೂಗಲ್ ಚಿತ್ರ ಇಷ್ಟವಾಗಲಿದ್ದು, ಈಗಾಗಲೇ ಚಿತ್ರದ ಹಾಡುಗಳು ಎಲ್ಲರ ಮನಸೆಳೆದಿವೆ. ಅಲ್ಲದೇ ಈವರಗೆ ಕೇವಲ ಗ್ಲಾಮರಸ್ ಹಾಗು ಹಳ್ಳಿ ಹುಡುಗಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಶುಭಾ ಪೂಂಜಾ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಗೃಹಿಣಿಯಾಗಿ ಅಭಿನಯಿಸುತ್ತಿದ್ದಾರೆ. ಯುವಕರ ಹಾರ್ಟ್ ಬೀಟ್ ಇನ್ನಷ್ಟು ಹೆಚ್ಚಿಸುವಂಥಹ ಸಂಭಾಷಣೆ, ಚಿತ್ರಕಥೆ ಹಾಗು ರಸಿಕತೆಯ ದೃಶ್ಯಗಳು ಚಿತ್ರದಲ್ಲಿದೆ. ಆದರೆ ಶುಭಾ ಪೂಂಜಾ ಜೊತೆ ನಾನು ವಿವಾಹವಾಗಿಲ್ಲ. ಕೇವಲ ಶೂಟಿಂಗ್ ಗಾಗಿ ಹಾಕಿದ್ದ ಕಾಸ್ಟ್ಯೂಮ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಈ ಅವಾಂತರ ಸೃಷ್ಟಿಸಿದೆ ಎಂದು ಸ್ಪಷ್ಟಪಡಿಸಿದರು.

    ಬ್ಯೂಟಿ ಕ್ವೀನ್ ಅಮೃತರಾವ್ ಹಾಗು ಉದಯೋನ್ಮುಖ ನಾಯಕನಟ ದೀಪಕ್ ಕೂಡ ಉತ್ತಮವಾಗಿ ಅಭಿನಯಿಸಿ ಎಲ್ಲರನ್ನು ರಂಜಿಸಲಿದ್ದಾರೆ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದ್ರು.

    ಒಟ್ಟಾರೆ ಕೋಟೆನಾಡು ಚಿತ್ರದುರ್ಗದಲ್ಲಿ ಗೂಗಲ್ ಚಿತ್ರತಂಡ ಭರ್ಜರಿಯಾಗಿ ಪ್ರಮೋಷನ್ ಮಾಡಿತು. ಕಾಲೇಜುಗಳ ಆವರಣ ಹಾಗು ಕೋಟೆ ಮುಂಭಾಗದಲ್ಲಿ ಅಭಿಮಾನಿಗಳೊಂದಿಗೆ ಚಿತ್ರದ ಹಾಡುಗಳನ್ನು ಸ್ಥಳದಲ್ಲಿಯೇ ಬಾರ್ ಕೋಡ್ ಮೂಲಕ ಡೌನ್‍ಲೋಡ್ ಮಾಡಿಕೊಳ್ಳುವ ಅವಕಾಶ ಕಲ್ಪಿಸಿ ವಿಭಿನ್ನವಾಗಿ ಪ್ರಮೋಶನ್ ಮಾಡಿ ಮನಸೆಳೆದರು.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ

    ಮಡಿಕೇರಿ: ಖ್ಯಾತ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಕೊಡಗಿನ ಅಶ್ವಿನಿ ಪೊನ್ನಪ್ಪ ಮಾಡೆಲ್ ಪೊನ್ನಚೇಟಿರ ಕರನ್ ಮೇದಪ್ಪ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಕೊಡವ ಸಮಾಜದಲ್ಲಿ ಈ ಅದ್ಧೂರಿ ವಿವಾಹ ಸಮಾರಂಭ ಕೊಡವರ ಸಂಪ್ರದಾಯದಂತೆ ನಡೆಯುತ್ತಿದೆ. ಕೊಡವ ಉಡುಗೆ ತೊಟ್ಟು ವಿವಾಹ ಸಾಂಪ್ರದಾಯಕವಾಗಿ ನಡೆಯುತ್ತಿದೆ.

    ವಿವಾಹ ನಂತರ ಸಂಪ್ರಾದಾಯದಂತೆ ವಧು ಮತ್ತು ವರ ಇಬ್ಬರು ಗಂಗೆಪೂಜೆ ಕಾರ್ಯವನ್ನು ಮಾಡಲಿದ್ದಾರೆ. ಅಮ್ಮತ್ತಿಯ ಕೊಡವ ಸಮಾಜದ ಹಾಲ್ ನಲ್ಲಿ ಮಂಟಪವನ್ನು ಮದುವಣಗಿತ್ತಿಯಂತೆ ಸಿಂಗರಿಸಲಾಗಿದೆ.

    ಇನ್ನು ಕೊಡವ ಸಂಪ್ರದಾಯದಂತೆ ಕೊಡಗಿನ ಖಾದ್ಯಗಳಾದ ಪಂದಿಕರಿ, ಕಡಂಬಟ್ಟು ಪೋರ್ಕ್ ಡ್ರೈ, ಚಿಕ್ಕನ್, ಮಟ್ಟನ್ ಸೇರಿದಂತೆ ಇನ್ನಿತರ ಬಗೆ ಬಗೆಯ ಖಾದ್ಯಗಳು ಮತ್ತು ಸಸ್ಯಹಾರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

    ವಿವಾಹ ಮಹೋತ್ಸವಕ್ಕೆ ಕುಟುಂಬಸ್ಥರು ಮತ್ತು ಆಪ್ತರನ್ನು ಆಹ್ವಾನ ಮಾಡಲಾಗಿದ್ದು ಗಣ್ಯಾತಿಗಣ್ಯರು ಆಗಮಿಸಿದ್ದಾರೆ.

  • ಪ್ರಕೃತಿ ಮಡಿಲಲ್ಲಿ ಹಿಂದೂ ಸಂಪ್ರದಾಯದಂತೆ ಅಮೆರಿಕ ಹುಡುಗಿಯ ಕೈ ಹಿಡಿದ ಕನ್ನಡಿಗ

    ಪ್ರಕೃತಿ ಮಡಿಲಲ್ಲಿ ಹಿಂದೂ ಸಂಪ್ರದಾಯದಂತೆ ಅಮೆರಿಕ ಹುಡುಗಿಯ ಕೈ ಹಿಡಿದ ಕನ್ನಡಿಗ

    ತುಮಕೂರು: ಭಾರತೀಯ ಸಂಸ್ಕೃತಿಗೆ ಮಾರುಹೋದ ಅಮೆರಿಕ ಯುವತಿಯೊಬ್ಬರು ಕನ್ನಡದ ಹುಡುಗನ ಜೊತೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ಗಮನ ಸೆಳೆದಿದ್ದಾರೆ.

    ಜಿಲ್ಲೆಯ ತೋವಿನಕೆರೆ ಸಮೀಪದ ಉಪ್ಪಾರಪಾಳ್ಯದ ತೋಟದಲ್ಲಿ, ಪ್ರಕೃತಿ ಮಡಿಲಲ್ಲಿ ಹಿಂದೂ ಸಂಪ್ರದಾಯದಂತೆ ಅಮೆರಿಕದ ನ್ಯೂಜೆರ್ಸಿಯಲ್ಲಿ ವಿಜ್ಞಾನಿಯಾಗಿರುವ ಟಾರಾ ಹಾಗೂ ಬೆಂಗಳೂರಿನ ಡಾ. ಅಜಯ್ ಸಪ್ತಪದಿ ತುಳಿದಿದ್ದಾರೆ.

    ಡಾ. ಅಜಯ್ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುವಾಗ ಟಾರಾ ಪರಿಚಯವಾಗುತ್ತಾರೆ. ನಂತರ ಇಬ್ಬರ ಮಧ್ಯೆ ಪ್ರೀತಿ ಆರಂಭವಾಗುತ್ತದೆ. ಬಳಿಕ ಟಾರಾ ಭಾರತೀಯ ಸಂಪ್ರದಾಯದಂತೆ ಮದುವೆಯಾಗುವ ಬಯಕೆಯನ್ನು ಅಜಯ್ ಮುಂದೆ ವ್ಯಕ್ತಪಡಿಸಿದ್ದಾರೆ. ಟಾರಾ ಆಸೆಯಂತೆ ಅಜಯ್ ತನ್ನ ತಂದೆಯ ಸ್ನೇಹಿತರಾದ ಶ್ರೀಕಂಠ ಪ್ರಸಾದ್ ಅವರ ತೋಟದಲ್ಲಿ ಸಕಲ ತಯಾರಿ ನಡೆಸಿ ಪ್ರಕೃತಿ ಮಡಿಲಲ್ಲಿ ಸತಿಪತಿಗಳಾಗಿದ್ದಾರೆ.

    ವಧು ಟಾರಾ ಸೀರೆ ಉಟ್ಟು, ಹೂವಿನ ಹಾರ ಹಾಕಿಕೊಂಡು ಥೇಟ್ ಭಾರತೀಯ ನಾರಿಯಂತೆ ಕಂಗೊಳಿಸಿದ್ದಾರೆ. ಬಳಿಕ ಗೋ ಪೂಜೆ ನೆರವೇರಿಸಿ ಆರತಿ ಬೆಳಗಿದ್ದಾರೆ. ಎತ್ತಿನ ಗಾಡಿಯ ದಿಬ್ಬಣ, ಒನಕೆ ಕುಟ್ಟುವ ಶಾಸ್ತ್ರ, ಧಾನ್ಯ ಬೀಸುವ ಶಾಸ್ತ್ರ ಹೀಗೆ ಎಲ್ಲಾ ಸಂಪ್ರದಾಯವನ್ನೂ ಚಾಚೂ ತಪ್ಪದೆ ಮಾಡಿ ಸಪ್ತಪದಿ ತುಳಿದಿದ್ದಾರೆ.

    https://www.youtube.com/watch?v=BI0ZgGuhABI

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭುವನೇಶ್ವರ್ ಕುಮಾರ್, ಜಹೀರ್-ಸಾಗರಿಕಾ ಸರಳ ವಿವಾಹ: ಫೋಟೋಗಳಲ್ಲಿ ನೋಡಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭುವನೇಶ್ವರ್ ಕುಮಾರ್, ಜಹೀರ್-ಸಾಗರಿಕಾ ಸರಳ ವಿವಾಹ: ಫೋಟೋಗಳಲ್ಲಿ ನೋಡಿ

    ನವದೆಹಲಿ: ಟೀಂ ಇಂಡಿಯಾದಲ್ಲಿ ಯಶಸ್ವಿ ಬೌಲರ್ ಗಳಾಗಿ ಮಿಂಚಿರುವ ಭುವನೇಶ್ವರ್ ಕುಮಾರ್ ಹಾಗೂ ಮಾಜಿ ವೇಗದ ಬೌಲರ್ ಜಹೀರ್ ಖಾನ್ ತಮ್ಮ ಪ್ರೇಯಸಿಯರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭುವನೇಶ್ವರ್ ಕುಮಾರ್ ತಮ್ಮ ಬಹುಕಾಲದ ಗೆಳತಿ ನೂಪುರ್ ನಗರ್ ಜೊತೆ ಸಪ್ತಪದಿ ತುಳಿದರು. ಈ ವಿವಾಹ ಸಮಾರಂಭದಲ್ಲಿ ಭಾರತ ತಂಡದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು, ರಾಜಕಾರಣಿಗಳು ಆಪ್ತ ಕುಟುಂಬ ವರ್ಗದ ಗೆಳೆಯರು ಭಾಗವಹಿಸಿದ್ದರು.

     

    ಪ್ರಸ್ತುತ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭುವಿ, ಎರಡನೇ ಹಾಗೂ ಮೂರನೇ ಪಂದ್ಯದಿಂದ ವಿನಾಯ್ತಿ ಪಡೆದಿದ್ದಾರೆ. ನವೆಂಬರ್ 26 ಮತ್ತು 30 ರಂದು ಕ್ರಮವಾಗಿ ಬುಲಂದರ್ ಹಾಗೂ ದೆಹಲಿಯಲ್ಲಿ ಔತಣ ಕೂಟವನ್ನು ಏರ್ಪಡಿಸಲಾಗಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ದೆಹಲಿಯಲ್ಲಿ ಇರಲಿರುವ ಟೀಂ ಇಂಡಿಯಾ ಆಟಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ಚಕ್ ದೇ ಇಂಡಿಯಾ ಖ್ಯಾತಿಯ ನಟಿ ಸಾಗರಿಕಾ ಘಟ್ಕೆ ಕೂಡ ಮುಂಬೈನಲ್ಲಿ ಸರಳ ವಿವಾಹ ಮಾಡಿಕೊಂಡಿದ್ದಾರೆ. ಗುರುವಾರ ಮುಂಬೈನ ವಿವಾಹ ನೋಂದಣಿ ಕಚೇರಿಗೆ ತೆರಳಿದ್ದ ಜಹೀರ್ ಹಾಗೂ ಸಾಗರಿಕಾ ತಮ್ಮ ವಿವಾಹ ನೋಂದಣಿ ಮಾಡಿಸಿದರು.

    ಇನ್ನು ಸರಳ ಮದುವೆ ಸಮಾರಂಭದಲ್ಲಿ ಜಹೀರ್ ಮತ್ತು ಸಾಗರಿಕಾ ಅವರ ಕುಟುಂಬಸ್ಥರು ಹಾಗೂ ಕೆಲವೇ ಆಪ್ತರು ಮಾತ್ರ ಉಪಸ್ಥಿತರಿದ್ದರು. ಈ ಕುರಿತು ಸಂತೋಷ ಹಂಚಿಕೊಂಡಿರುವ ಜಹೀರ್ ಆಪ್ತ ಅಜ್ನಾನ ಶರ್ಮಾ ತಮ್ಮ ಟ್ವಿಟರ್ ಖಾತೆಯಲ್ಲಿ ಅಪರೂಪದ ಕ್ಷಣಗಳನ್ನು ಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ದಂಪತಿ, ಸಾಗರಿಕಾ ಗೆಳತಿ ನಟಿ ವಿದ್ಯಾ ಮಲ್ವಾಡೆ, ಬಾಲಿವುಡ್ ನಿರ್ದೇಶಕ ಅಭಿಷೇಕ್ ಕಪೂರ್ ದಂಪತಿ, ಕ್ರಿಕೆಟಿಗ ಯುವರಾಜ್ ಸಿಂಗ್ ಪತ್ನಿ ನಟಿ ಹೇಝಲ್ ಕೀಚ್ ಹಾಗೂ ಕ್ರಿಕೆಟಿಗ ಹರ್ಭಜನ್ ಸಿಂಗ್ ಭಾಗವಹಿಸಿದ್ದರು.

     

     

    https://twitter.com/BhuviKingdom/status/933861902483984385

    https://twitter.com/BhuviKingdom/status/933712576634011648

    https://twitter.com/BhuviKingdom/status/933669756816703488

    https://twitter.com/BhuviKingdom/status/933667867106488321

    https://twitter.com/BhuviKingdom/status/933666838122192897

    https://twitter.com/BhuviKingdom/status/933659005620174848

    https://twitter.com/BhuviKingdom/status/933501807166238720

    https://twitter.com/BhuviKingdom/status/933500018555682816

    https://twitter.com/BhuviKingdom/status/933499174305153024

    https://www.instagram.com/p/Bb1ybsFnbk7/?taken-by=imbhuvifc

    https://www.instagram.com/p/Bb1owmJng_X/?taken-by=imbhuvifc

    https://www.instagram.com/p/Bb1waHUnm2a/?taken-by=imbhuvifc

    https://www.instagram.com/p/BbzbZUinOJM/?taken-by=imbhuvifc

    https://www.instagram.com/p/BbzcMZuHEVA/?taken-by=imbhuvifc

    https://www.instagram.com/p/Bb18KFFD9wV/?hl=en&taken-by=sagarikaghatge

    https://www.instagram.com/p/BbWyYcVjeu7/?hl=en&taken-by=sagarikaghatge

    https://www.instagram.com/p/BaylYchDsqN/?hl=en&taken-by=sagarikaghatge

    https://www.instagram.com/p/BVxJO0IDzD9/?hl=en&taken-by=sagarikaghatge

    https://www.instagram.com/p/Bb1UrF_AKdE/?hl=en&taken-by=vidyamalavade

  • ಪಿಎಸ್‍ಐ ವಿರುದ್ಧ ಅಕ್ರಮ ಸಂಬಂಧದ ಆರೋಪ- ಮೊದಲ ಪತ್ನಿಯಿಂದ ಮನೆ ಮುಂದೆ ಧರಣಿ

    ಪಿಎಸ್‍ಐ ವಿರುದ್ಧ ಅಕ್ರಮ ಸಂಬಂಧದ ಆರೋಪ- ಮೊದಲ ಪತ್ನಿಯಿಂದ ಮನೆ ಮುಂದೆ ಧರಣಿ

    ಹಾವೇರಿ: ಪಿಎಸ್‍ಐ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಿ ಮೊದಲ ಪತ್ನಿ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಮೃತ್ಯುಂಜಯ ನಗರದಲ್ಲಿ ನಡೆದಿದೆ.

    ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‍ಐ ಟಿ.ಮಂಜಣ್ಣ ವಿರುದ್ಧ ಅಕ್ರಮ ಸಂಬಂಧದ ಆರೋಪ ಮಾಡಲಾಗಿದೆ. ಮಂಜಣ್ಣ ಅವರ ಮೊದಲ ಪತ್ನಿ ಸ್ವಪ್ನಾ ಈ ಆರೋಪ ಮಾಡಿದ್ದು, ಮಕ್ಕಳು ಮತ್ತು ಸಂಬಂಧಿಕರ ಸಮೇತ ತನ್ನ ಗಂಡನ ಮನೆ ಮುಂದೆ ಧರಣಿ ಕುಳಿತಿದ್ದಾರೆ.

    ಪಿಎಸ್‍ಐ ಮಂಜಣ್ಣ ಸ್ವಪ್ನಾ ಅವರ ಆರೋಪ ಅಲ್ಲಗಳೆದಿದ್ದಾರೆ. ಮನೆಗೆ ಸಂಬಂಧಿಕರು ಬಂದಿದ್ದರೂ ಅಕ್ರಮ ಸಂಬಂಧದ ಪಟ್ಟವನ್ನು ಸ್ವಪ್ನಾ ಕಟ್ಟುತ್ತಿದ್ದಾಳೆ. ಕೋರ್ಟಿನಲ್ಲಿ ವಿಚ್ಛೇದನ ಆಗಿದೆ ಹಾಗೂ ಕೆವಿಟ್ ಕೂಡ ಸಲ್ಲಿಸಿದ್ದೇನೆ. ಆದರೂ ಪದೇ ಪದೇ ಸ್ವಪ್ನಾ ಗಲಾಟೆ ಮಾಡುತ್ತಿದ್ದಾಳೆ ಎಂದು ಪಿಎಸ್‍ಐ ತಿಳಿಸಿದ್ದಾರೆ.

    ರಾಣೇಬೆನ್ನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಸಿಪಿಐ ಮಂಜುನಾಥ ನಲವಾಗಿಲ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

     

     

  • ಮದುವೆಯಾಗಿ 10 ವರ್ಷ ಮಕ್ಕಳಿಲ್ಲದೆ ಕೊರಗ್ತಿದ್ದ ದಂಪತಿಗೆ ತ್ರಿವಳಿ ಮಕ್ಕಳ ಸೌಭಾಗ್ಯ

    ಮದುವೆಯಾಗಿ 10 ವರ್ಷ ಮಕ್ಕಳಿಲ್ಲದೆ ಕೊರಗ್ತಿದ್ದ ದಂಪತಿಗೆ ತ್ರಿವಳಿ ಮಕ್ಕಳ ಸೌಭಾಗ್ಯ

    ಮೈಸೂರು: ಮದುವೆಯಾಗಿ 10 ವರ್ಷ ಮಕ್ಕಳಿಲ್ಲದೆ ಕೊರಗುತ್ತಿದ್ದ ದಂಪತಿಗೆ ತ್ರಿವಳಿ ಮಕ್ಕಳು ಜನಿಸಿದ ಘಟನೆ ನಂಜನಗೂಡುನಲ್ಲಿ ನಡೆದಿದೆ.

    ನಂಜನಗೂಡು ತಾಲೂಕಿನ ಮಾದಾಪುರ ಗ್ರಾಮದ ಮಂಜುನಾಥ್ ಮತ್ತು ರೂಪಾ ದಂಪತಿಗೆ ಮೂರು ಮಕ್ಕಳು ಜನನವಾಗಿದೆ. ಒಂದು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿಗೆ ರೂಪಾ ಜನ್ಮ ನೀಡಿದ್ದಾರೆ. ರೂಪಾ ನಂಜನಗೂಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

    ಹೆರಿಗೆಯ ನಂತರ ತಾಯಿ – ಮಕ್ಕಳು ಆರೋಗ್ಯವಾಗಿದ್ದಾರೆ. ರೂಪಾ ಹಾಗೂ ಮಂಜುನಾಥ್ ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮಕ್ಕಳಿಲ್ಲದ ಕೊರಗಿನಲ್ಲಿದ್ದ ಈ ದಂಪತಿಗೆ ತ್ರಿವಳಿ ಮಕ್ಕಳ ಜನನದಿಂದ ಖುಷಿ ತಂದಿದೆ.

  • ಬಿಜೆಪಿ ಅಧಿಕಾರಕ್ಕೆ ಬಂದ್ರೆ ವಿವಾಹ ಖಾತೆ ಸಚಿವರ ಹುದ್ದೆ ಸೃಷ್ಟಿಸ್ತೀವಿ: ಶ್ರೀರಾಮುಲು

    ಬಿಜೆಪಿ ಅಧಿಕಾರಕ್ಕೆ ಬಂದ್ರೆ ವಿವಾಹ ಖಾತೆ ಸಚಿವರ ಹುದ್ದೆ ಸೃಷ್ಟಿಸ್ತೀವಿ: ಶ್ರೀರಾಮುಲು

    ಬಳ್ಳಾರಿ: ಮದುವೆ ಮಾಡೋಕೆ ಲಕ್ಷಾಂತರ ರೂಪಾಯಿ ಹಣ ಬೇಕು. ಆದ್ರೆ ಸರ್ಕಾರಿ ಖರ್ಚಿನಲ್ಲೇ ಸಾಮೂಹಿಕ ಮದುವೆ ಮಾಡಿಸೋ ಭಾಗ್ಯವನ್ನು ಬಿಜೆಪಿ ಜಾರಿಗೆ ತರೋದಾಗಿ ಸಂಸದ ಶ್ರೀರಾಮುಲು ಹೇಳಿದ್ದಾರೆ.

    ಅಷ್ಟೆ ಅಲ್ಲ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಸಾಮೂಹಿಕ ಮದುವೆ ಮಾಡಿಸೋಕೆ ವಿವಾಹ ಖಾತೆ ಸಚಿವರ ಹುದ್ದೆ ಸೃಷ್ಟಿ ಮಾಡ್ತಾರಂತೆ. ಇದು ವಿಶೇಷ, ವಿಚಿತ್ರವಾದ ಯೋಜನೆಯಾದ್ರೂ ಬಡವರನ್ನು ಸೆಳೆಯಲು ಸಂಸದ ಶ್ರೀರಾಮುಲು ಇಂಹದ್ದೊಂದು ಐಡಿಯಾ ಮಾಡಿದ್ದಾರೆ.

    ಬಳ್ಳಾರಿಯಲ್ಲಿಂದು ಸಂಸದ ಶ್ರೀರಾಮುಲು ನೇತೃತ್ವದಲ್ಲಿ 19 ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು. 56 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭ ಉದ್ದೇಶಿಸಿ ಮಾತನಾಡಿದ ಶ್ರೀರಾಮುಲು, ಬಡವರ ಮದುವೆಯನ್ನು ಸರ್ಕಾರಿ ಖರ್ಚಿನಲ್ಲೇ ಮಾಡಿಸುವ ಮಹತ್ವಾಕಾಂಕ್ಷೆ ಹೊಂದಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಸಾಮೂಹಿಕ ವಿವಾಹ ಖಾತೆ ಸಚಿವ ಸ್ಥಾನವನ್ನು ಸೃಷ್ಟಿಸಿ ಆ ಮೂಲಕ ಬಡವರ ಮದುವೆಗಳನ್ನು ಸರ್ಕಾರಿ ಖರ್ಚಿನಲ್ಲೇ ಮಾಡಿಸುತ್ತೇವೆ ಅಂದ್ರು.

    ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳುವ ಕಾರ್ಯ ಮಾಡುವ ಯೋಜನೆ ರೂಪಿಸುವುದಾಗಿ ಶ್ರೀರಾಮುಲು ಹೇಳಿದ್ರು.

  • ಹೆಸರು ಬದಲಾವಣೆ ವಿಚಾರಕ್ಕೆ ಪತ್ನಿಯೊಂದಿಗೆ ಜಗಳ- ಯೋಧ ಆತ್ಮಹತ್ಯೆ

    ಹೆಸರು ಬದಲಾವಣೆ ವಿಚಾರಕ್ಕೆ ಪತ್ನಿಯೊಂದಿಗೆ ಜಗಳ- ಯೋಧ ಆತ್ಮಹತ್ಯೆ

    ಬೆಳಗಾವಿ: ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪತ್ನಿಯ ಜೊತೆಗೆ ಜಗಳವಾಡಿ ಯೋಧರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

    ಬೈಲಹೊಂಗಲ ತಾಲೂಕಿನ ಗಣಿಕೊಪ್ಪ ಗ್ರಾಮದಲ್ಲಿ ಬಿಎಸ್‍ಎಫ್ ಯೋಧ ಬಸವರಾಜ್ ಉರ್ಫ್ ರಫೀಕ್ ಮುಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕಾರಣವೇನು?: ಬಸವರಾಜ್ ಅವರ ತಾಯಿ ಮೂಲತಃ ಮುಸ್ಲಿಂ ಸಮಾಜಕ್ಕೆ ಸೇರಿದವರಾಗಿದ್ದು, ಹಿಂದೂ ವ್ಯಕ್ತಿಯನ್ನು ಮದುವೆಯಾಗಿದ್ದರು. ಆದ್ರೆ ಪತಿ ಸದ್ಯಪ್ಪ ಸಾವಿನ ನಂತರ ತಾಯಿ ಶಾಂತವ್ವ ಮತ್ತೆ ಮುಸ್ಲಿಂ ಸಮುದಾಯಕ್ಕೆ ಮತಾಂತರಗೊಂಡು ಶಹಜಾನ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದರು. ಶಹಜಾನ್ ಮಗ ಬಿಎಸ್‍ಎಫ್ ಯೋಧ ಬಸವರಾಜ್ ಕೂಡ ಮುಸ್ಲಿಂ ಯುವತಿಯನ್ನು ಮದುವೆಯಾಗಿ ತನ್ನ ಹೆಸರನ್ನು ಬಸವರಾಜ್ ಬದಲಾಗಿ ರಫೀಕ್ ಮುಲ್ಲಾ ಎಂದು ಬದಲಾವಣೆ ಮಾಡಿಕೊಂಡಿದ್ದರು. ಆದ್ರೆ ಈ ಬದಲಾವಣೆ ವಿಚಾರದಲ್ಲಿ ಪತ್ನಿ ಹಾಗೂ ತಾಯಿಯೊಂದಿಗೆ ಆಗಾಗ ಜಗಳವಾಗುತ್ತಿತ್ತು.

    ಇತ್ತೀಚೆಗಷ್ಟೇ ಜಮ್ಮುವಿನ ಪೂಂಚ್ ಸೆಕ್ಟರ್ ನಲ್ಲಿ ಕೆಲಸ ಮಾಡುತ್ತಿದ್ದ ಯೋಧ ಬಸವರಾಜ್ ಅವರು ರಜೆ ಮೇಲೆ ಗ್ರಾಮಕ್ಕೆ ಆಗಮಿಸಿದ್ದರು. ಸೋಮವಾರ ರಾತ್ರಿ ಕೂಡ ಇದೇ ವಿಚಾರಕ್ಕೆ ಪತ್ನಿಯೊಂದಿಗೆ ಜಗಳವಾಡಿದ ಸೈನಿಕ ಮನನೊಂದು ಮನೆ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ ಚಿಕಿತ್ಸೆ ಫಲಿಸದೆ ಯೋಧ ಬಸವರಾಜ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.

    ಬಸವರಾಜ್ ಅವರು ಪತ್ನಿ ಬಶೀರಾ ಹಾಗೂ ಅಯಾನ್, ಹಸನ್ ಸಾಬ್ ಎಂಬ ಇಬ್ಬರು ಮಕ್ಕಳನ್ನ ಅಗಲಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಬಿಎಸ್‍ಎಫ್ ಕಾರ್ಯಾಲಯದ ಅನುಮತಿ ಸಿಕ್ಕ ನಂತರ ಶವ ಪರೀಕ್ಷೆ ನಡೆಸುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.