Tag: ವಿವಾದಾತ್ಮಕ ಹೇಳಿಕೆ

  • ಶೂದ್ರ ಅಂದ್ರೆ ಸೂಳೆಮಕ್ಕಳು ಎಂದರ್ಥ ಅಂತ ಮನುಸ್ಮೃತಿಯಲ್ಲಿದೆ – ಕೆ. ಎಸ್ ಭಗವಾನ್

    ಶೂದ್ರ ಅಂದ್ರೆ ಸೂಳೆಮಕ್ಕಳು ಎಂದರ್ಥ ಅಂತ ಮನುಸ್ಮೃತಿಯಲ್ಲಿದೆ – ಕೆ. ಎಸ್ ಭಗವಾನ್

    ಮಂಡ್ಯ: ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ ಕೆ.ಎಸ್ ಭಗವಾನ್ ಮನುಸ್ಮೃತಿ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿ ರಾಮ ಹಾಗೂ ರಾಮ ಮಂದಿರ ನಿರ್ಮಾಣದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ್ದ ಕೆ.ಎಸ್ ಭಗವಾನ್, ಹಿಂದೂ ಧರ್ಮ ಉಳಿಬೇಕು ಅಂದ್ರೆ ಮೊದಲು ಶೂದ್ರ ಎಂಬ ಪದವನ್ನು ಮನುಸ್ಮೃತಿಯಿಂದ ತೆಗೆದು ಹಾಕಬೇಕು. ಶೂದ್ರ ಅಂದ್ರೆ ಬರೀ ಗುಲಾಮ ಅಂತಷ್ಟೇ ಅರ್ಥವಲ್ಲ. ಮನುಸ್ಮೃತಿಯಲ್ಲಿ ಶೂದ್ರ ಎಂದರೆ ಸೂಳೆಮಕ್ಕಳು ಎಂದರ್ಥ. ಅಂತಹ ಅಸಭ್ಯ ಪದ ನಮಗೆ ಬೇಕಾ? ಅದು ನಮಗೆ ಗೌರವ ತರುತ್ತಿದೆಯಾ? ಅಂತಹ ಮನುಸ್ಮೃತಿಯನ್ನು ಬಿಜೆಪಿಯವರು ತರುತ್ತೇನೆ ಅಂತಾರೆ, ಅದನ್ನು ಒಪ್ಪಿಕೊಳ್ತೀರಾ ಎಂದು ಪ್ರಶ್ನಿಸಿದ್ದಾರೆ.

    ಕಳೆದ ಎರಡು ವರ್ಷಗಳಿಂದ ನಾನು ವಾಲ್ಮೀಕಿ ರಾಮಾಯಣ ಅಧ್ಯಯನ ಮಾಡಿ `ರಾಮ ಮಂದಿರ ಏಕೆ ಬೇಡ’ ಎಂಬ ಪುಸ್ತಕವನ್ನು ಬರೆದಿದ್ದೇನೆ. ಅದನ್ನು ಓದಿದರೇ, ರಾಮ ಜನಸಾಮಾನ್ಯರಿಗೆ ವಿರುದ್ಧವಾಗಿದ್ದ ಎಂಬುದು ನಮಗೆ ಗೊತ್ತಾಗುತ್ತೆ. ರಾಮ ಚತುರ್ವರ್ಣದ ಪ್ರತಿನಿಧಿಯಾಗಿ ಅದನ್ನು ಉದ್ಧಾರ ಮಾಡಲು ರಾಮಾಯಣದಲ್ಲಿ ಗುರುತಿಸಿಕೊಂಡ. ಅವನು ನಿಜವಾದ ಮನುಷ್ಯನಲ್ಲ, ದೇವರಂತೂ ಅಲ್ಲವೇ ಅಲ್ಲ. ರಾಮನನ್ನು ದೇವರು ಎಂದು ವಾಲ್ಮೀಕಿ ರಾಮಾಯಣದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. ದೇವರು ಅಂತಾ ಯಾರಿಗೆ ಅನುಕೂಲವಾಯ್ತೋ, ಅಂತ ಪುರೋಹಿತರು ರಾಮ, ಕೃಷ್ಣನನ್ನು ದೇವರೆಂದು ಮಾಡಿಕೊಂಡಿದ್ದಾರೆ ಎಂದು ರಾಮನ ವಿರುದ್ಧ ಕಿಡಿಕಾರಿದರು.

    ಈ ದೇಶದಲ್ಲಿ ಶೇ.95 ರಷ್ಟು ಶೂದ್ರರಿದ್ದಾರೆ. ಅವರನ್ನೆಲ್ಲಾ ನೀವು ಗುಲಾಮರು, ಸೂಳೆಮಕ್ಕಳು ಎಂದರೆ ಒಪ್ಪುತ್ತೀರಾ? ಮನುಸ್ಮೃತಿಯ 8ನೇ ಅಧ್ಯಾಯ 415ನೇ ಶ್ಲೋಕದಲ್ಲಿ ಈ ವಿಚಾರವಿದೆ. ಜನರು ಇದನ್ನೆಲ್ಲ ತಿಳಿಯಬೇಕು ಎಂದು ಹೇಳುತ್ತಿದ್ದೇನೆ. ನನಗೆ ಗುಂಡಿಕ್ಕಿದರೂ ಇದನ್ನೆಲ್ಲ ತಿಳಿಸಿಯೇ ತಿಳಿಸುತ್ತೇನೆ. ನಾನು ಹೇಳುವುದು ವಿವಾದವಾದರು ಪರವಾಗಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗೋವು ಕಳ್ಳತನ ಕಡಿವಾಣಕ್ಕೆ ಮಹಿಳೆಯರು ತಲ್ವಾರ್ ಹಿಡಿಯಬೇಕು: ಮುರಳಿಕೃಷ್ಣ

    ಗೋವು ಕಳ್ಳತನ ಕಡಿವಾಣಕ್ಕೆ ಮಹಿಳೆಯರು ತಲ್ವಾರ್ ಹಿಡಿಯಬೇಕು: ಮುರಳಿಕೃಷ್ಣ

    ಮಂಗಳೂರು: ಗೋವುಗಳ ಕಳ್ಳತನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರತಿ ಮನೆ ಮನೆಯ ಹೆಂಗಸರು ತಲವಾರುಗಳನ್ನು ಹಿಡಿದುಕೊಂಡು ಉತ್ತರ ನೀಡಲು ಮುಂದಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‍ಪಿ) ಮುಖಂಡ ಮುರಳಿಕೃಷ್ಣ ಹಸಂತಡ್ಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದ ವಾಮಂಜೂರಿನಲ್ಲಿ ನಡೆದ ಗೋವು ಕಳ್ಳತನ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಗೋವು ಕಳ್ಳತನ ಮಾಡುವ ಒಬ್ಬ ಮತಾಂಧನಿಗೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ಮಹಿಳೆಯರನ್ನು ತಯಾರು ಮಾಡಲು ಹಿಂದೂ ಸಮಾಜ ಶ್ರಮಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನು ಮುಂದೆ ಗೋವುಗಳ ರಕ್ತ ಭೂಮಿಗೆ ಬಿದ್ದರೆ, ಗಲ್ಲಿ ಗಲ್ಲಿಗಳಲ್ಲಿ ರಕ್ತಪಾತ ಆಗುತ್ತದೆ. ಕೊನೆಗೆ ರಕ್ತಪಾತ ಆಯಿತು ಅಂತಾ ನಮ್ಮನ್ನು ದೂರಬೇಡಿ ಎಂದು ಹೇಳಿದ್ದಾರೆ.

    ಗೋವಿನ ರಕ್ಷಣೆಗಾಗಿ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯುತ್ತಿದೆ. ಒಬ್ಬ ಹಿಂದೂ ವ್ಯಕ್ತಿಯ ಕೆನ್ನೆ ಹೊಡೆದು ಯಾರು ನಮ್ಮ ತಂಟೆಗೆ ಬರುತ್ತಾರೋ, ಅವರ ಹತ್ತು ಕೆನ್ನೆಗಳಿಗೆ ಹೊಡೆಯುವ ಮೂಲಕ ಪ್ರತ್ಯುತ್ತರ ನೀಡುವ ಸಂಕಲ್ಪವನ್ನು ಹಿಂದೂ ಸಮಾಜ ಮಾಡುತ್ತದೆ ಎಂದು ಹೇಳಿದ್ದಾರೆ.

  • ದೇಶಕ್ಕೆ ಪಾಕಿಸ್ತಾನಕ್ಕಿಂತ ಬುದ್ಧಿಜೀವಿಗಳಿಂದಲೇ ಅಪಾಯ: ಶಾಸಕ ಯತ್ನಾಳ್

    ದೇಶಕ್ಕೆ ಪಾಕಿಸ್ತಾನಕ್ಕಿಂತ ಬುದ್ಧಿಜೀವಿಗಳಿಂದಲೇ ಅಪಾಯ: ಶಾಸಕ ಯತ್ನಾಳ್

    ವಿಜಯಪುರ: ನಮ್ಮ ದೇಶಕ್ಕೆ ಪಾಕಿಸ್ತಾನಕ್ಕಿಂತ ಅಪಾಯ ಇರುವುದು ದೇಶದ ಬುದ್ಧಿಜೀವಿಗಳಿಂದ. ಅವರಿಂದ ದೇಶ ಹಾಳಾಗಿದ್ದು ನಾನು ಗೃಹ ಮಂತ್ರಿಯಾದರೆ ಅವರಿಗೆ ಗುಂಡು ಹಾರಿಸಿ ಅಂತಾ ಆದೇಶ ನೀಡುತ್ತಿದ್ದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಉದ್ಘಾಟನೆ ನಂತರ ಮಾತನಾಡಿದ ಶಾಸಕರು, ಜಮ್ಮು ಮತ್ತು ಕಾಶ್ಮೀರ ಜನರು ನಮ್ಮ ದೇಶದ ಗಾಳಿ, ನೀರು, ಅನ್ನ ಸೇವಿಸುತ್ತಾರೆ. ನಾವು ಕಟ್ಟುವ ತೆರಿಗೆಯ ಹಣದಲ್ಲಿ ಹೆಚ್ಚಿನ ಪ್ರಮಾಣವನ್ನು ಅವರಿಗೆ ಖರ್ಚು ಮಾಡಲಾಗುತ್ತದೆ. ಆದರೆ ಬುದ್ಧಿಜೀವಿಗಳು ದೇಶದ ವಿರುದ್ಧ ಘೋಷಣೆ ಕೂಗುತ್ತಾರೆ, ಸೈನಿಕರ ಮೇಲೆ ಕಲ್ಲು ಎಸೆಯುತ್ತಾರೆ ಎಂದು ಹೇಳಿ ವಾಗ್ದಾಳಿ ನಡೆಸಿದರು.

    ದೇಶ ವಿರೋಧಿ ಜಟುವಟಿಕೆ ಮಾಡುವವರ ಮೇಲೆ ಹಲ್ಲೆ ಮಾಡಿದಾಗ ಮಾನವ ಹಕ್ಕು ಸಮಿತಿ ಮಧ್ಯೆ ಪ್ರವೇಶಿಸಿ ಅವರನ್ನು ರಕ್ಷಿಸುತ್ತಾರೆ. ಹಾಗಾದರೆ ಸೈನಿಕರ ಮೇಲೆ ಆಗುವ ಷೋಷಣೆಯನ್ನು ತಡೆಯಲು ಯಾವುದೇ ಸಮಿತಿ ಮುಂದೆ ಬರುವುದಿಲ್ಲ. ಒಂದು ವೇಳೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಇದ್ದಿದ್ದರೆ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನದ 370ನೇ ವಿಧಿ ಜಾರಿ ಆಗುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಈ ವಿಧಿಯನ್ನು ತೆಗೆದು ಹಾಕಲಿದ್ದಾರೆ. ಪಾಕಿಸ್ತಾನ ಭಾರತದ ವಿರುದ್ಧ ಎಂದಿಗೂ ಗೆಲ್ಲುವುದಿಲ್ಲ ಎಂದು ನುಡಿದರು.

    ಯೋಧರು -60 ಡಿಗ್ರಿ ಸೆಲ್ಸಿಯಸ್ ನಲ್ಲಿ ಕೆಲಸ ಮಾಡುತ್ತಾರೆ. ಆದರೆ ನಾವು 3 ಕಿ.ಮೀ. ಹೋಗುವುದಕ್ಕೆ ಪರದಾಡುತ್ತೇವೆ. ಇದು ನಮ್ಮ ದೇಶದ ದುರಂತವಾಗಿದೆ. ಇಸ್ರೇಲ್ ನಲ್ಲಿ ಹುಟ್ಟಿದ ಮಗುವು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕು. ಇಂತಹ ವ್ಯವಸ್ಥೆ ನಮ್ಮ ದೇಶದಲ್ಲಿ ಬರಬೇಕು ಎಂದ ಶಾಸಕರು, ಪಾಕಿಸ್ತಾನ ಭೂಪಟದಲ್ಲಿ ಇಲ್ಲದಂತೆ ಮಾಡುವ ಶಕ್ತಿ ನಮ್ಮ ಸೈನ್ಯಕ್ಕಿದೆ. ಪಾಕಿಸ್ತಾನ ಸೈನಿಕರು ಏನೂ ಗೆಲ್ಲದೆ ಎದೆಯ ಮೇಲೆ ಮೆಡಲ್‍ಗಳನ್ನ ಹಾಕಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

    ಸೈನಿಕರು ಸಾಯುವುದಕ್ಕೆ ಗಡಿಗೆ ಹೋಗುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮಿನ್ ಮಟ್ಟು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಮನೆಯಲ್ಲಿ ದೀಪಾವಳಿ ಆಚರಿಸದೆ, ಭಾರತದ ಗಡಿಗೆ ಭೇಟಿ ನೀಡಿ ಹಬ್ಬ ಆಚರಿಸುತ್ತಾರೆ ಎಂದು ಹೇಳಿದರು.

  • ಶಶಿ ತರೂರ್ ಮುಖಕ್ಕೆ ಮಸಿ ಬಳಿದವರಿಗೆ ನಗದು ಬಹುಮಾನ ಘೋಷಿಸಿದ ಅಲಿಗಢ್ ಮುಸ್ಲಿಂ ಯುವ ನಾಯಕ

    ಶಶಿ ತರೂರ್ ಮುಖಕ್ಕೆ ಮಸಿ ಬಳಿದವರಿಗೆ ನಗದು ಬಹುಮಾನ ಘೋಷಿಸಿದ ಅಲಿಗಢ್ ಮುಸ್ಲಿಂ ಯುವ ನಾಯಕ

    ನವದೆಹಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ ಬಿಜೆಪಿ ವಿರುದ್ಧ `ಹಿಂದೂ ಪಾಕಿಸ್ತಾನ’ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟ ಹಿನ್ನೆಲೆ ಅಲಿಗಢ್ ನ ಮುಸ್ಲಿಂ ಯುವ ಸಂಘಟನೆಯ ಅಧ್ಯಕ್ಷ ಮೊಹಮದ್ ಅಮೀರ್ ರಶೀದ್, ಶಶಿ ತರೂರ್ ಮುಖಕ್ಕೆ ಯಾರು ಕಪ್ಪು ಮಸಿ ಹಚ್ಚುವವರಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ.

    ತಿರುವನಂತಪುರಂ ನಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಶಿ ತರೂರ್, 2019ರ ಲೋಕ ಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದರೇ ಭಾರತ ಹಿಂದೂ ಪಾಕಿಸ್ತಾನ ಆಗಲಿದೆ ಎಂದು ಹೇಳಿದ್ದರು. ಬಳಿಕ ತರೂರ್ ಹೇಳಿಕೆಗೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗಿತ್ತು, ಸದ್ಯ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಯುವ ನಾಯಕ ಮೊಹಮದ್ ಅಮೀರ್ ರಶೀದ್, ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಬೇಜವಾಬ್ದಾರಿ ಹೇಳಿಕೆ ಕೊಟ್ಟಿರುವುದು ಕೇವಲ ಹಿಂದೂಗಳಿಗೆ ಮಾತ್ರವಲ್ಲ ದೇಶಪ್ರೇಮಿಗಳಾದ ಮುಸ್ಲಿಂ ಪ್ರಜೆಗಳಿಗೂ ನೋವು ಉಂಟುಮಾಡಿದೆ. ಭಾರತದಲ್ಲಿ ಒಂದಾಗಿ ವಾಸಿಸುತ್ತಿರುವ ಹಿಂದೂ ಮತ್ತು ಮುಸ್ಲಿಂ ಧರ್ಮದವರನ್ನು ಬೇರೆ ಮಾಡುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ.

    ಭಾರತವು ಬಿಜೆಪಿ ಸಾರಥ್ಯದಲ್ಲಿ ಪ್ರಗತಿ ಕಾಣುತ್ತಿರುವುದನ್ನು ಕಾಂಗ್ರೆಸ್‍ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ಅದಕ್ಕಾಗಿ ಅಧಿಕಾರ ಪಡೆಯಲು ಯಾವ ಮಟ್ಟಕ್ಕಾದರು ಇಳಿಯಲು ಕಾಂಗ್ರೆಸ್ ನಾಯಕರು ಸಿದ್ಧರಿದ್ದಾರೆ. ಅದ್ದರಿಂದ ಶಶಿ ತರೂರ್ ಮುಖಕ್ಕೆ ಯಾರು ಮಸಿ ಹಚ್ಚುತ್ತಾರೋ ಅವರಿಗೆ 11 ಸಾವಿರ ರೂ.ಗಳು ಬಹುಮಾನ ನೀಡಲಾಗುತ್ತದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ತರೂರ್ ಅವರ ಟೀಕೆಗಳಿಂದ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡದೆ ದೂರವುಳಿದಿದೆ. ಸದ್ಯ ಇಂತಹ ಹೇಳಿಕೆಗಳ ಮೂಲಕ ಆಡಳಿತ ಪಕ್ಷದ ವಿರೋಧವನ್ನು ಅವರು ಎದುರಿಸುತ್ತಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ವಿವಾದಾತ್ಮಕ ಹೇಳಿಕೆ ಮತ್ತು ಪ್ರತಿಕ್ರಿಯೆ ನೀಡುವುದರ ಬಗ್ಗೆ ಎಚ್ಚೆರಿಕೆ ನೀಡಲಾಗುವುದು ಎಂದು ಕಾಂಗ್ರೆಸ್ ತನ್ನ ಸದಸ್ಯರಿಗೆ ಸೂಚನೆ ನೀಡಿದೆ.

    ತರೂರ್ ಅವರ ಹೇಳಿಕೆ ಭಾರತದ ಪ್ರಜಾಪ್ರಭುತ್ವ ಹಾಗೂ ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

  • ಬಿಜೆಪಿ ಶಾಸಕ ಯತ್ನಾಳ್ ಗಡಿಪಾರು ಮಾಡಿ: ಕೈ, ಡಿಎಸ್‍ಎಸ್ ನಾಯಕರ ಆಗ್ರಹ

    ಬಿಜೆಪಿ ಶಾಸಕ ಯತ್ನಾಳ್ ಗಡಿಪಾರು ಮಾಡಿ: ಕೈ, ಡಿಎಸ್‍ಎಸ್ ನಾಯಕರ ಆಗ್ರಹ

    ವಿಜಯಪುರ: ಬಿಜೆಪಿ ಶಾಸಕ ಬನವನಗೌಡ ಪಾಟೀಲ್ ಯತ್ನಾಳ್‍ರ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ಮತ್ತು ದಲಿತ ಸಂಘರ್ಷ ಸಮಿತಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಶಾಸಕರ ಗಡಿಪಾರಿಗೆ ಪೊಲೀಸರಲ್ಲಿ ಮನವಿಯನ್ನು ಸಲ್ಲಿಸಿದ್ದಾರೆ.

    ಕಾಂಗ್ರೆಸ್ ಮತ್ತು ಡಿಎಸ್‍ಎಸ್‍ನ ಮುಖಂಡರು ಜಂಟಿಯಾಗಿ ಇಂದು ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ, ರಂಜಾನ್ ಮುಗಿಯುವವರೆಗೂ ಶಾಸಕ ಯತ್ನಾಳ್‍ರವರನ್ನು ಗಡಿಪಾರು ಮಾಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

    ಕಾಂಗ್ರೆಸ್‍ನ ಜಿಲ್ಲಾ ವಕ್ತಾರರಾದ ಎಸ್ ಎಂ ಪಾಟೀಲ ಗಣಿಹಾರ ಮಾತನಾಡಿ, ಶಾಸಕರು ಸಂವಿಧಾನಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿ, ಮುಸ್ಲಿಂಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಸಂವಿಧಾನಕ್ಕೆ ಕನಿಷ್ಠ ಗೌರವವನ್ನು ನೀಡಿಲ್ಲ. ಈ ಹಿನ್ನೆಲೆಯಲ್ಲಿ ಯತ್ನಾಳ್‍ರ ಶಾಸಕ ಸ್ಥಾನ ರದ್ದುಗೊಳಿಸುವಂತೆ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.

    ಕಳೆದ ವಾರದ ನಡೆದ ಸಮಾರಂಭದಲ್ಲಿ ಯತ್ನಾಳ್ ನನ್ನ ಕಚೇರಿಗೆ ಬುರ್ಖಾಧಾರಿಗಳು ಹಾಗೂ ಟೋಪಿಧಾರಿಗಳು ಬರುವುದು ಬೇಡ ಎಂದ್ದಿದ್ದರು. ಅಲ್ಲದೆ ನಾನು ಶಾಸಕನಾಗಿರುವುದು ಕೇವಲ ಹಿಂದೂ ಮತಗಳಿಂದ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಯತ್ನಾಳ್‍ರ ಈ ಹೇಳಿಕೆಯು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದನ್ನೂ ಓದಿ: ಎಂ.ಬಿ ಪಾಟೀಲ್ ಪರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬ್ಯಾಟಿಂಗ್

  • ಬುದ್ಧಿಜೀವಿಗಳು ಬರೆದ ಸಾಹಿತ್ಯಕ್ಕೆ ಅರ್ಥ, ತಲೆಬುಡ ಇರಲ್ಲ: ಅನಂತ್ ಕುಮಾರ್ ಹೆಗ್ಡೆ ಕಿಡಿ

    ಬುದ್ಧಿಜೀವಿಗಳು ಬರೆದ ಸಾಹಿತ್ಯಕ್ಕೆ ಅರ್ಥ, ತಲೆಬುಡ ಇರಲ್ಲ: ಅನಂತ್ ಕುಮಾರ್ ಹೆಗ್ಡೆ ಕಿಡಿ

    ಬೆಳಗಾವಿ: ತನ್ನ ವಿವಾದಾತ್ಮಕ ಹೇಳಿಕೆಯಿಂದಲೇ ಸದಾ ಸುದ್ದಿಯಲ್ಲಿರೋ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಇದೀಗ ಮತ್ತೆ ತನ್ನ ಹೇಳಿಕೆಯಿಂದಲೇ ಮತ್ತೆ ಸುದ್ದಿಯಾಗಿದ್ದಾರೆ.

    ನಗರದಲ್ಲಿ ಮಂಗಳವಾರ ಕೆ.ಎಲ್.ಇ ಜೀರಗಿ ಸಭಾಭವನದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ಕುರಿತ ರಾಷ್ಟ್ರೀಯ ಯುವ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬುದ್ಧಿಜೀವಿಗಳು ಹಾಗೂ ಸಾಹಿತಿಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಸೋ ಕಾಲ್ಡ್ ಬುದ್ಧಿ ಜೀವಿಗಳು ಬರಿದಿದ್ದೆಲ್ಲಾ ಸಾಹಿತ್ಯ, ಗೀಚಿದ್ದೆಲ್ಲಾ ಕಾವ್ಯ, ಅರ್ಥವೂ ಇರೋದಿಲ್ಲಾ, ತಲೆ, ಬುಡವೂ ಇರೋದಿಲ್ಲ. ಅವರಿಗೆ ಯಾವುದು ಇಂದು ಸರ್ಕಾರಿ ಸೈಟ್ ಬೇಕಾಗಿರುತ್ತೆ, ಅದಕ್ಕೆ ವಿಚಾರವಾದಿಗಳ ಪಟ್ಟ ಕಟ್ಟಿಕೊಂಡಿರುತ್ತಾರೆ ಅಂತ ಹೇಳಿದ್ದಾರೆ.

    ನಾವು ಮಾನವರಾಗಬೇಕು ಎಂದು ಸ್ಪಷ್ಟನೆ ಇಲ್ಲದವರು ಏನಾಗಬೇಕು ಎಂದು ಕೇಳಿದಾಗ ಮಾನವರಾಗಬೇಕು ಅಂತಾರೆ. ಹಾಗಾದ್ರೆ ನಾವು ದನಾನಾ ಎಂದು ಪ್ರಶ್ನಿಸಿದ ಅವರು, ನಾವು ಪ್ರಾಣಿಗಳ ತರಾ ಇದ್ದಿವಾ? ನಾವು ಹುಟ್ಟಿದ್ದೆ ಮಾನವರಾಗಿ. ಇನ್ನು ಆಗಬೇಕಾಗಿರುವುದು ದೇವರಾಗಿ. ಮನುಷ್ಯ ದೇವರಾಗಲು ಪ್ರಯತ್ನ ಮಾಡಬೇಕು. ಆದ್ರೆ ಕಲಿತಿರುವ ಸೋ ಕಾಲ್ಡ್ ಬುದ್ಧಿ ಜೀವಿಗಳು ಹೇಳತಾರೆ ನಾವು ಮಾನವರಾಗಬೇಕು. ಅವರ ದೃಷ್ಟಿಯಲ್ಲಿ ನಾವು ಹೆಂಗೆ ಕಂಡಿದ್ದೇವೆ ಗೊತ್ತಿಲ್ಲ. ಅವರಿಗೆ ದೃಷ್ಟಿ ದೋಷ ಆಗಿರಬೇಕು ಎಂದು ಅವರು ಹೇಳಿದ್ರು.

  • ರಾಮಾಯಣದಲ್ಲಿ ವಾಲ್ಮೀಕಿ ರಾಮನನ್ನು ಎಲ್ಲೂ ದೇವರೆಂದಿಲ್ಲ: ಭಗವಾನ್

    ರಾಮಾಯಣದಲ್ಲಿ ವಾಲ್ಮೀಕಿ ರಾಮನನ್ನು ಎಲ್ಲೂ ದೇವರೆಂದಿಲ್ಲ: ಭಗವಾನ್

    ಮೈಸೂರು: ರಾಮಾಯಣದಲ್ಲಿ ವಾಲ್ಮೀಕಿ ರಾಮನನ್ನು ಎಲ್ಲೂ ದೇವರು ಎಂದಿಲ್ಲ. ನಮ್ಮ ದೇಶದಲ್ಲಿ ಈಗ ರಾಮನ ದೇವಸ್ಥಾನಗಳನ್ನು ಕಟ್ಟಲು ಮುಂದಾಗುತ್ತಿದ್ದಾರೆ. ದೇವಸ್ಥಾನ ಕಟ್ಟುವ ಮೊದಲು ರಾಮನ ಬಗ್ಗೆ ಗಮನಿಸಬೇಕು ಎಂದು ಸಾಹಿತಿ ಪ್ರೋ ಕೆಎಸ್ ಭಗವಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ಜಗನ್ಮೋಹಕ ಅರಮನೆಯಲ್ಲಿ ಆಯೋಜಿಸಿದ್ದ ವಿಶಿಷ್ಟ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಭಗವಾನ್, ರಾಮಾಯಣದಲ್ಲಿ ವಾಲ್ಮೀಕಿ ರಾಮನನ್ನು ಎಲ್ಲೂ ದೇವರೆಂದಿಲ್ಲ. ಯಾರದ್ದೋ ಮಾತು ಕೇಳಿ ಸೀತೆಯನ್ನು ರಾಮ ಕಾಡಿಗೆ ಕಳುಹಿಸಿದ ಹಾಗೂ ಬ್ರಾಹ್ಮಣರ ಮಾತು ಕೇಳಿ ಶಂಭುಕ ತಲೆ ಕತ್ತರಿಸಿದ. ಇಂತವನನ್ನು ದೇವರು ಎಂದು ಹೇಗೆ ಕರೆಯಬೇಕು. ಈ ಅಂಶಗಳನ್ನು ನಮ್ಮ ದೇಶದಲ್ಲಿ ದೇವಸ್ಥಾನ ಕಟ್ಟಲು ಮುಂದಾಗುತ್ತಿರುವವರು ಗಮನದಲ್ಲಿಟ್ಟು ಕೊಳ್ಳಬೇಕು ಎಂದರು.

    ರಾಮಾಯಣದ ಪ್ರಮುಖ ಅಂಶಗಳು ಸಂಸ್ಕೃತದಲ್ಲಿ ಬಿಟ್ಟರೆ ಬೇರೆ ಎಲ್ಲೂ ಕೂಡ ಇಲ್ಲ. ಆದ್ದರಿಂದ ರಾಮನ ಬಗೆಗಿನ ಕೆಲ ಅಂಶಗಳು ಯಾರಿಗೂ ತಿಳಿದಿಲ್ಲ. ರಾಮ 11 ಸಾವಿರ ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದಾನೆ ಎಂದು ಎಲ್ಲರೂ ಹೇಳುತ್ತಾರೆ. ಮನುಷ್ಯನಿಗೆ ಇರುವುದು ಕೇವಲ 100 ವರ್ಷಗಳು, ಹೀಗಿರುವಾಗ ರಾಮ ಹೇಗೆ ಅಷ್ಟು ವರ್ಷಗಳ ಕಾಲ ರಾಜ್ಯಭಾರ ಮಾಡಲು ಸಾಧ್ಯ. ಸಂಸ್ಕೃತದಲ್ಲಿ ವರ್ಷ ಎಂದರೆ ದಿನ ಎಂದರ್ಥ ಹೀಗಾಗಿ ರಾಮ ಕೇವಲ 11 ವರ್ಷ ಮಾತ್ರ ರಾಜ್ಯಭಾರ ಮಾಡಿದ್ದಾನೆ ಎಂದು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.