Tag: ವಿರಾಟಪರ್ವ

  • ಪೆನ್ ಹಿಡಿದು ಕಾದು ಕೂತ ಸಾಯಿ ಪಲ್ಲವಿ – ರೌಡಿ ಬೇಬಿ ಹೊಸ ಲುಕ್ ವೈರಲ್

    ಪೆನ್ ಹಿಡಿದು ಕಾದು ಕೂತ ಸಾಯಿ ಪಲ್ಲವಿ – ರೌಡಿ ಬೇಬಿ ಹೊಸ ಲುಕ್ ವೈರಲ್

    ಹೈದರಾಬಾದ್: ಅದ್ಭುತ ಅಭಿನಯ, ಡ್ಯಾನ್ಸ್, ಮುದ್ದಾದ ಮುಖದ ಮೂಲಕ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಖ್ಯಾತಿ ಗಳಿಸಿರುವ ಪ್ರೇಮಂ ಸುಂದರಿ ಸಾಯಿ ಪಲ್ಲವಿ ಫೋಟೋವೊಂದು ಎಲ್ಲೆಡೆ ವೈರಲ್ ಆಗುತ್ತಿದ್ದು, ಇತ್ತ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರೌಡಿ ಬೇಬಿಗೆ ನಟ ರಾಣಾ ದಗ್ಗುಬಾಟಿ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ.

    ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾದ ಸಾಯಿ ಪಲ್ಲವಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಅಭಿಮಾನಿಗಳ ಮನ ಗೆದ್ದಿದ್ದಾರೆ. 28ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಾಯಿಗೆ ಅಭಿಮಾನಿಗಳು ಹಾಗೂ ಸಿನಿ ಕಲಾವಿದರು ಶುಭಾಷಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಅಲ್ಲದೇ ಸಾಯಿ ಪಲ್ಲವಿ ನಟಿಸುತ್ತಿರುವ ‘ವಿರಾಟಪರ್ವಂ’ ಸಿನಿಮಾದ ಲುಕ್ ಕೂಡ ಇಂದೇ ರಿಲೀಸ್ ಆಗಿದ್ದು, ಈ ಪೋಸ್ಟ್‌ರ್‌ ಅನ್ನು ಹಂಚಿಕೊಂಡು ರಾಣಾ ರೌಡಿ ಬೇಬಿಗೆ ವಿಶ್ ಮಾಡಿದ್ದಾರೆ.

    ವಿರಾಟಪರ್ವಂ ಸಿನಿಮಾದಲ್ಲಿ ರಾಣಾ ನಾಯಕರಾಗಿದ್ದು, ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಕ್ಸಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಲುಕ್‍ನಲ್ಲಿ ಸಾಯಿ ಒಂದು ಬ್ಯಾಗ್ ಜೊತೆಯಲ್ಲಿಟ್ಟುಕೊಂಡು, ಕೈಯಲ್ಲಿ ಪೆನ್ನು ಹಿಡಿದು, ಯಾರಿಗೋ ಕಾಯುತ್ತಿರುವ ಹಾಗೆ ಕುಳಿತು ಕೊಂಡಿದ್ದಾರೆ. ‘ವಿರಾಟಪರ್ವಂ’ ಸಿನಿಮಾಗೆ ವೇಣು ಉಡುಗುಲ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರ ನಕ್ಸಲಿಸಂ ಬಗ್ಗೆ ಇರಲಿದ್ದು, ಹೃದಯಸ್ಪರ್ಶಿ ಪ್ರೇಮ ಕಥೆ ಚಿತ್ರದ ಹೈಲೈಟ್ ಎನ್ನಲಾಗಿದೆ. ಅದರಲ್ಲೂ ಈ ಸಿನಿಮಾದಲ್ಲಿ ಸಾಯಿ ಇದುವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ.

    ವಿರಾಟಪರ್ವಂ ಸಿನಿಮಾ ಜೊತೆಗೆ ಲವ್ ಸ್ಟೋರಿ ಸಿನಿಮಾದಲ್ಲಿಯೂ ಸಾಯಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಲವ್ ಸ್ಟೋರಿ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾ ಯಾವಾಗಪ್ಪ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು, ಸಿನಿಪ್ರಿಯರು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಸಾಯಿಗೆ ನಾಗ್ ಚೈತನ್ಯ ನಾಯಕರಾಗಿ ಸಾಥ್ ಕೊಟ್ಟಿದ್ದಾರೆ.

  • ಹತ್ತು ಹಲವು ವಿಶೇಷತೆಗಳ ‘ವಿರಾಟಪರ್ವ’ ಟೀಸರ್ ಮಾರ್ಚ್ 14ಕ್ಕೆ?

    ಹತ್ತು ಹಲವು ವಿಶೇಷತೆಗಳ ‘ವಿರಾಟಪರ್ವ’ ಟೀಸರ್ ಮಾರ್ಚ್ 14ಕ್ಕೆ?

    ಇತ್ತೀಚೆಗೆ ಚಂದನವನದಲ್ಲಿ ಪ್ರಯೋಗಾತ್ಮಕ ಸಿನಿಮಾಗಳು ಗಾಂಧಿನಗರದಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡುತ್ತಿವೆ. ಅಂತಹ ಸಿನಿಮಾಗಳು ಸಿನಿಪ್ರೇಕ್ಷಕರ ಮನಗೆಲ್ಲುವಲ್ಲಿಯೂ ಯಶಸ್ವಿ ಕೂಡ ಆಗುತ್ತಿದೆ. ಇದೀಗ ಅದೇ ಸಾಲಿಗೆ ಮತ್ತೊಂದು ತಂಡವೊಂದು ಸೇರ್ಪಡೆಗೊಂಡಿದೆ. ಆ ಚಿತ್ರತಂಡವೇ `ವಿರಾಟಪರ್ವ’. ಈಗಾಗಲೇ ಎರಡು ವಿಭಿನ್ನ ಪೋಸ್ಟರ್ ಗಳ ಮೂಲಕ ಈ ಚಿತ್ರ ಗಾಂಧಿನಗರ ಮಂದಿಯ ಹುಬ್ಬೇರಿಸುವಂತೆ ಮಾಡಿದೆ. ಇಂದೊಂದು ಹೈಪರ್ ಲಿಂಕ್ ಥ್ರಿಲ್ಲರ್ ಸಿನಿಮಾವಾಗಿದ್ದು, ಈ ಹಿಂದೆ ಮುದ್ದು ಮನಸ್ಸೇ ಸಿನಿಮಾ ನಿರ್ದೇಶನ ಮಾಡಿದ್ದ ಅನಂತ್ ಶೈನ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪ್ರಯೋಗಾತ್ಮಕ ಸಿನಿಮಾವಾಗಿರೋ ಈ ಚಿತ್ರದಲ್ಲಿ ಯಶ್ ಶೆಟ್ಟಿ, ಅರು ಗೌಡ, ಸಿದ್ದು, ಎಂ.ಜಿ. ಅಭಿನಯ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

    ಮೂರು ವಿಭಿನ್ನ ಕ್ಯಾರೆಕ್ಟರ್ ಗಳ ಮನಸ್ಥಿತಿಗಳ ಸಮಾಗಮ ಚಿತ್ರದಲ್ಲಿದ್ದು, ಯಶ್ ಶೆಟ್ಟಿ ಚಿತ್ರದಲ್ಲಿ ಯೋಧನಾಗಿ ಬಣ್ಣಹಚ್ಚಿದ್ದು ಚಿತ್ರದ ಇಂಟ್ರಸ್ಟಿಂಗ್ ವಿಚಾರಗಳಲ್ಲಿ ಒಂದಾಗಿದೆ. ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಹರಿವು ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕ ಮಂಸೂರೆ ಈ ಚಿತ್ರದ ಪಾತ್ರವೊಂದಕ್ಕೆ ಮೊದಲ ಬಾರಿ ಬಣ್ಣಹಚ್ಚಿದ್ದಾರೆ. 130ಕ್ಕೂ ಹೆಚ್ಚು ಲೊಕೇಶನ್ ಗಳಲ್ಲಿ `ವಿರಾಟಪರ್ವ’ ಚಿತ್ರ ಚಿತ್ರಣಗೊಂಡಿದ್ದು ಹೀಗೆ ಹತ್ತು ಹಲವು ವಿಶೇಷತೆಗಳು ಚಿತ್ರದಲ್ಲಿದೆ.

    ಎಸ್.ಆರ್.ಮೀಡಿಯಾ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿರೋ ಈ ಚಿತ್ರಕ್ಕೆ ಸುನೀಲ್ ರಾಜ್ ಬಂಡವಾಳ ಹೂಡಿದ್ದಾರೆ. ವಿನೀತ್ ರಾಜ್ ಮೆನನ್ ಸಂಗೀತ ನಿರ್ದೇಶನ, ಶಿವ ಬಿ.ಕೆ ಹಾಗೂ ಶಿವಸೇನಾ ಇಬ್ಬರು ಕ್ಯಾಮೆರಾಮ್ಯಾನ್ ಗಳ ಕ್ಯಾಮೆರಾ ವರ್ಕ್ ವಿರಾಟಪರ್ವ ಚಿತ್ರಕ್ಕಿದೆ.