Tag: ವಿನಯ್

  • ವದಂತಿಗೆ ಬ್ರೇಕ್, ಕಡೆಗೂ ಸ್ನೇಹಿತ್ ಜೊತೆ ಕಾಣಿಸಿಕೊಂಡ ವಿನಯ್

    ವದಂತಿಗೆ ಬ್ರೇಕ್, ಕಡೆಗೂ ಸ್ನೇಹಿತ್ ಜೊತೆ ಕಾಣಿಸಿಕೊಂಡ ವಿನಯ್

    ಬಿಗ್ ಬಾಸ್ ಶೋ (Bigg Boss Kannada 10) ಮುಗಿದಿದ್ದರೂ ಕೂಡ ಬಿಗ್ ಬಾಸ್ ಸ್ಪರ್ಧಿಗಳ ಹವಾ ಕಮ್ಮಿಯಾಗಿಲ್ಲ. ಇತ್ತೀಚೆಗೆ ಚಾಮುಂಡಿ ಬೆಟ್ಟಕ್ಕೆ ವಿನಯ್ (Vinay Gowda) ಗುಂಪು ಭೇಟಿ ಕೊಟ್ಟಿದ್ದರು. ವಿನಯ್ ತಂಡದವರೇ ಆಗಿರುವ ಸ್ನೇಹಿತ್ (Snehith Gowda) ಮಾತ್ರ ಗೈರಾಗಿದ್ದರು. ಕೊನೆಗೂ ಸ್ನೇಹಿತ್ ಜೊತೆ ವಿನಯ್ ಕಾಣಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಅಮೃತಧಾರೆ ಸೀರಿಯಲ್‌ಗೆ ‘ಕಾಂತಾರ’ ನಟಿ ಎಂಟ್ರಿ

    ಬಿಗ್ ಬಾಸ್ ಫಿನಾಲೆ ಮುಗಿದ್ಮೇಲೆ ಪಾಪರೆಡ್ಡಿಪಾಳ್ಯ ಗ್ಯಾಂಗ್ ಎಂದೇ ದೊಡ್ಮನೆಯಲ್ಲಿ ಖ್ಯಾತಿ ಪಡೆದಿದ್ದ ವಿನಯ್, ನಮ್ರತಾ, ರಕ್ಷಕ್ ಬುಲೆಟ್, ಮೈಕಲ್ ಅಜಯ್, ಪವಿ ಪೂವಪ್ಪ ಹಾಗೂ ಇಶಾನಿ ಒಟ್ಟಿಗೆ ಪಾರ್ಟಿ ಮಾಡಿದ್ದರು. ಬಳಿಕ ವಿನಯ್ ಗೌಡ, ನಮ್ರತಾ, ರಕ್ಷಕ್ ಬುಲೆಟ್ (Rakshak Bullet) ಹಾಗೂ ಮೈಕಲ್ ಮೈಸೂರಿಗೆ ಭೇಟಿ ಕೊಟ್ಟಿದ್ದರು. ಚಾಮುಂಡಿ ಬೆಟ್ಟಕ್ಕೆ ಹೋಗಿ, ದೇವಿಯ ದರ್ಶನ ಪಡೆದಿದ್ದರು. ಇಲ್ಲಿಯೂ ಕೂಡ ಸ್ನೇಹಿತ್ ಗೈರಾಗಿದ್ದರು. ಆಗ ಅಭಿಮಾನಿಗಳು ಕೇಳಿದ್ದು ಒಂದೇ ಪ್ರಶ್ನೆ ಸ್ನೇಹಿತ್ ಎಲ್ಲಿ?

     

    View this post on Instagram

     

    A post shared by Vinay Gowda (@vinaygowdaactor)

    ವಿನಯ್ ಗುಂಪಿನಿಂದ ಸ್ನೇಹಿತ್ ದೂರಾ ಆದ್ರಾ ಎಂಬ ವದಂತಿಗೆ ಈಗ ಸ್ಪಷ್ಟನೆ ಸಿಕ್ಕಿದೆ. ವಿನಯ್ ಮತ್ತು ಸ್ನೇಹಿತ್ ಜೊತೆಯಾಗಿ ವರ್ಕೌಟ್ ಮಾಡಿರುವ ವಿಡಿಯೋ ಹಾಕುವ ಮೂಲಕ ವದಂತಿಗಳಿಗೆ ಉತ್ತರ ಕೊಟ್ಟಿದ್ದಾರೆ. ‘ಸ್ನೇಹಿತನನ್ನು ಎಂದಿಗೂ ಬಿಡಬೇಡಿ’ ಎಂದು ವಿನಯ್ ಅಡಿಬರಹ ನೀಡಿದ್ದಾರೆ.

    ಇಬ್ಬರ ವರ್ಕೌಟ್ ವಿಡಿಯೋ ನೋಡ್ತಿದ್ದಂತೆ ಸದಾ ಹೀಗೆ ಇರಿ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ನಮ್ರತಾ ಜೊತೆಗೆ ಸ್ನೇಹಿತ್‌ ಫ್ರೆಂಡ್‌ಶಿಪ್ ಬ್ರೇಕಪ್‌ ಆಗಿದೆ. ಅದು ವಿನಯ್‌ ಜೊತೆಗಿನ ಸ್ನೇಹಕ್ಕೂ ಎಫೆಕ್ಟ್‌ ಆಗಿದ್ಯಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಇತ್ತು. ಈಗವಿನಯ್ ಗುಂಪಿನಲ್ಲಿ ಸ್ನೇಹಿತ್ ಇಲ್ವಾ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

  • Bigg Boss Kannada- ಅದೊಂದು ನೋವು ಕಾಡುತ್ತಿದೆ: ವಿನಯ್ ಬಿಚ್ಚಿಟ್ಟ ಹೃದಯಂತರಾಳ

    Bigg Boss Kannada- ಅದೊಂದು ನೋವು ಕಾಡುತ್ತಿದೆ: ವಿನಯ್ ಬಿಚ್ಚಿಟ್ಟ ಹೃದಯಂತರಾಳ

    ವಿನಯ್ (Vinay) ಮೊದಲ ಬಾರಿ ಮನಸಿನ ಮಾತನ್ನು ಹಂಚಿಕೊಂಡಿದ್ದಾರೆ. ಬಿಗ್‌ ಬಾಸ್‌ನಿಂದ (Bigg Boss Kannada) ಹೊರ ಬಂದ ಮೇಲೆ ಒಳಗಿದ್ದ ಸಂತಸ, ನೋವು, ಎಲ್ಲವನ್ನು ಹರವಿಟ್ಟಿದ್ದಾರೆ. ಗೆಲ್ಲಲೇಬೇಕೆಂದು ಅಖಾಡಕ್ಕೆ ಇಳಿದಿದ್ದ ಆನೆ ಈಗ ಏನನ್ನು ಹೇಳಿದ್ದಾರೆ ? ಯಾರನ್ನು ದೂರಿದ್ದಾರೆ ? ಯಾರನ್ನು ಹತ್ತಿರ ಬಿಟ್ಟುಕೊಂಡಿದ್ದಾರೆ ? ಸುದೀಪ್, ಸಂಗೀತಾ ಸೇರಿದಂತೆ ಎಲ್ಲರ ಬಗ್ಗೆ ಏನೇನು ಅನಿಸಿಕೆ ಹರವಿಟ್ಟಿದ್ದಾರೆ ? ಅದರ ಎಕ್ಸ್ ಕ್ಲ್ಯೂಸಿವ್  ಮಾಹಿತಿ ಇಲ್ಲಿದೆ.


    ಆನೆ ಘೀಳಿಟ್ಟಿದೆ. ಅಫ್‌ಕೋರ್ಸ್ ಬಿಗ್‌ಬಾಸ್ ಮನೆಯಲ್ಲಿದ್ದಾಗಲೇ ಆನೆ ಸುಮ್ಮನಿರಲಿಲ್ಲ. ಆಟ ಆಡುತ್ತಾ ಆಡುತ್ತಾ ರೊಚ್ಚೆಗೇಳುತ್ತಿದ್ದರು. ಸೇಮ್ ಟೈಮ್ ಇನ್ನೊಬ್ಬರನ್ನು ಅದೇ ರೀತಿ ಕೆಣಕುತ್ತಿದ್ದರು. ಅದನ್ನು ಉದ್ದೇಶ ಪೂರ್ವಕವಾಗಿ ಮಾಡಿರಲಿಲ್ಲ. ಆದರೆ ಕೆಲವರು ಹಾಗಂದುಕೊಂಡರು. ಏನಾದರೂ ಆಗಲಿ, ಕೊನೆಗೂ ಬಿಗ್‌ ಬಾಸ್ ಟಾಪ್ ಫೈವ್ ಸ್ಪರ್ಧಿಗಳಲ್ಲಿ ಒಬ್ಬರಾದರು. ಕರುನಾಡಿನಿಂದ ಶಬ್ಬಾಶ ಎನಿಸಿಕೊಂಡರು. ದಟ್ ಈಸ್ ವಿನಯ್ ಪವರ್.

    ಬಿಗ್‌ ಬಾಸ್ ಮನೆಯಲ್ಲಿ ವಿನಯ್ ಕೊನೇವರೆಗೂ ಇದ್ದರು. ಆರಂಭದಲ್ಲಿ ಇವರು ಅಷ್ಟು ದಿನ ಇರುವುದಿಲ್ಲ ಎಂದು ಎಲ್ಲರೂ ತಿಳಿದಿದ್ದರು. ಆದರೆ ಆ ನಂಬಿಕೆಯನ್ನು ಆನೆ ಸುಳ್ಳು ಮಾಡಿತು. ದಿನ ದಿನಕ್ಕೆ ಇವರು ಜನರ ಮೆಚ್ಚುಗೆ ಪಡೆಯುತ್ತಾ ಹೋದರು. ಉಳಿದ ಸ್ಪರ್ಧಿಗಳನ್ನು ಹಿಂದಿಕ್ಕಿದರು. ಅಷ್ಟೇ ಅಲ್ಲ, ಇನ್ನೇನು ಟ್ರೋಫಿ ಇವರ ಕೈಗೆ ಕಿಚ್ಚ ಕೊಡುತ್ತಾರೆ ಎಂದು ಅಂದುಕೊಂಡಿದ್ದರು ಜನರು. ಆದರೆ ಹಾಗಾಗಲಿಲ್ಲ. ಅದಕ್ಕೆ ವಿನಯ್‌ಗೆ ಬೇಸರ ಅಗುಳಿನಷ್ಟೂ ಇಲ್ಲ. ಕಾರಣ ನಾಡಿನ ತುಂಬಾ ಸಿಕ್ಕ ಪ್ರೀತಿ ಹಾಗೂ ಗೌರವ.

    ವಿನಯ್ ಮೊದಲಿಂದಲೂ ಯಾರ ಮುಲಾಜಿಗೂ ಬೀಳಲಿಲ್ಲ. ಯಾರ ಜೊತೆಯೂ ಹೀಗೆ ಇರಬೇಕೆಂದು ನಾಟಕ ಮಾಡಲಿಲ್ಲ. ನಾನು ಇರುವುದೇ ಹೀಗೆ. ಇದೇ ರೀತಿ ಆಡುತ್ತೇನೆ ಎನ್ನುತ್ತಲೇ ಎಲ್ಲರ ಮನಸನ್ನು ಗೆದ್ದರು. ಅಫ್‌ಕೋರ್ಸ್ ಇದನ್ನೇ ಸ್ಪರ್ಧಿಗಳಿಗೆ ಹೇಳಲು ಬರುವುದಿಲ್ಲ. ಯಾಕೆಂದರೆ ಸಂಗೀತಾ ಹಾಗೂ ವಿನಯ್ ಬಿಗ್‌ಬಾಸ್‌ಗೆ ಬರುವ ಮುನ್ನವೇ ಜತೆಯಾಗಿ ಕೆಲಸ ಮಾಡಿದ್ದರು. ಆದರೆ ಮನೆ ಒಳಗೆ ಕಾಲಿಟ್ಟಾಗ ಇಬ್ಬರೂ ವೈರಿಗಳು ಅನ್ನೋ ರೀತಿ ವರ್ತಿಸಲು ಆರಂಭಿಸಿದರು. ಅದಕ್ಕೆ ಕಾರಣ ಏನು?

    ಸಂಗೀತಾ ಹಾಗೂ ವಿನಯ್ ಒಂದು ಮನೆಯಲ್ಲಿ ಅಲ್ಲ. ಒಂದು ಊರಿನಲ್ಲಿ ಇರಲೂ ಸಾಧ್ಯ ಇಲ್ಲ. ಆ ಮಟ್ಟಕ್ಕೆ ಇಬ್ಬರೂ ಹಲ್ಲಲ್ಲು ಕಡಿಯುತ್ತಿದ್ದರು. ಟಾಸ್ಕ್ಗಳಲ್ಲಿ ಇಬ್ಬರೂ ಅದು ಯಾವ ರೀತಿ ಹಾಕ್ಯಾಟಕ್ಕೆ ಬಿದ್ದಿದ್ದರೆಂದು ಎಲ್ಲರಿಗೂ ಗೊತ್ತು. ಬಳೆ ಟಾಸ್ಕ್ನಲ್ಲಂತೂ ಅದು ತಾರಕಕ್ಕೆ ಮುಟ್ಟಿತ್ತು. ಸುದೀಪ್ ಕೂಡ ಇವರ ನಡುವೆ ಎಂಟ್ರಿ ಕೊಡಬೇಕಾಯಿತು. ಸಂಗೀತ ವರ್ತನೆಯೇ ನನ್ನ ಹಾಗೂ ಅವರ ನಡುವೆ ಜಗಳಕ್ಕೆ ಬುನಾದಿ ಹಾಕಿತು ಎಂದು ಸತ್ಯವನ್ನು ಒಪ್ಪಿಕೊಂಡಿದ್ದಾರೆ ವಿನಯ್. ಆನೆ.. ಇದು ಬಿಗ್‌ಬಾಸ್ ಮನೆಗೆ ಹೋದ ಮೇಲೆ ವಿನಯ್‌ಗೆ ಸಿಕ್ಕ ಬಿರುದು. ಮೊದಮೊದಲು ಅದನ್ನು ಪಾಸಿಟಿವ್ ಆಗಿಯೇ ಉಳಿದ ಸ್ಪರ್ಧಿಗಳು ಬಳಸಿಕೊಂಡರು. ವಿನಯ್ ಕೂಡ ಆನೆ ಪದವನ್ನು ಹೆಮ್ಮೆಯಿಂದ ಹೆಗಲ ಮೇಲೆ ಹೊತ್ತುಕೊಂಡರು. ಆದರೆ ದಿನ ಕಳೆದಂತೆ ಸ್ಪರ್ಧಿಗಳು ಆನೆಯನ್ನೇ ಟಾರ್ಗೆಟ್ ಮಾಡಿದರು. ಆ ಪದದಿಂದಲೇ ವಿನಯ್‌ರನ್ನು ಹಣಿಯಲು ಸಜ್ಜಾದರು. ಅದ್ಯಾಕೆ ಹಾಗಾಯಿತು? ಏನಾಯಿತು ? ಅದರಿಂದ ಒಳ್ಳೆಯದಾಯಿತಾ?

    ಇದೆಲ್ಲದರ ನಡುವೆ ವಿನಯ್ ಅದೊಂದು ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಇವರನ್ನೇನೊ ಆನೆ ಎಂದು ಕರೆದು ಬಿಟ್ಟರು. ಇದನ್ನು ಜೀವನದ ಕೊನೆವರೆಗೂ ಉಳಿಸಿಕೊಳ್ಳುತ್ತೇನೆ ಎಂದೂ ವಿನಯ್ ಹೇಳಿದ್ದಾರೆ. ಆದರೆ ಈ ಆನೆಗೆ ನಿಜವಾದ ಮಾವುತ ಯಾರು? ಯಾರಿಂದ ವಿನಯ್ ಕೊನೇವರೆಗೂ ಆಟದಲ್ಲಿ ಉಳಿದರು, ಬೆಳೆದರು, ತಪ್ಪಿದ್ದಲ್ಲಿ ತಿದ್ದಿಕೊಂಡರು? ಅದಕ್ಕೆ ಉತ್ತರ ಒಂದೇ. ಅದೇ ಕಿಚ್ಚ ಸುದೀಪ್. ಆ ಮಹಾ ಮಾವುತ ಇದ್ದದ್ದಕ್ಕಾಗಿಯೇ ನಾನು ಕರುನಾಡನ್ನು ಗೆದ್ದಿದ್ದೇನೆ ಎನ್ನುತ್ತಾರೆ ವಿನಯ್.

    ಈ ಎಲ್ಲ ಕಿತ್ತಾಟ, ಜಗಳಾಟದ ನಡುವೆ ಅದೊಂದು ನೋವು ಇವರನ್ನು ಕಾಡುತ್ತಿದೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೂ ಜೀವವನ್ನು ಹಿಂಡುತ್ತಿದೆ. ಅದೇನು ಗೊತ್ತೆ? ಬಿಗ್‌ ಬಾಸ್‌ನ ಟಾಪ್ 2 ಸ್ಥಾನದಲ್ಲಿ ನಾನೂ ಒಬ್ಬನಾಗಿರಬೇಕಿತ್ತು. ಅದೊಂದು ಕನಸು ಕಂಡಿದ್ದೆ. ಅದ್ಯಾಕೆ ಹಾಗಾಯಿತೊ ಗೊತ್ತಾಗಲಿಲ್ಲ. ಇದು ವಿನಯ್‌ರನ್ನು ಕಾಡುತ್ತಿರುವ ನೋವು. ಕೊನೇ ಇಬ್ಬರು ಸ್ಪರ್ಧಿಗಳಲ್ಲಿ ವಿನಯ್ ಖಂಡಿತ ಇರುತ್ತಾರೆ ಎಂದೇ ಜನರು ತಿಳಿದಿದ್ದರು. ಆದರೆ ಹಾಗಾಗಲಿಲ್ಲ.

     

    ಇದು ವಿನಯ್ ಬಿಗ್‌ ಬಾಸ್ ಸೀಸನ್ 10ರ ಪಯಣ. ಇಲ್ಲಿಗೆ ಇದು ಮುಗಿದಿದೆ. ಆದರೆ ಈ ಅರಮನೆಯಿಂದ ವಿನಯ್ ಅನೇಕ ಸಂಗತಿಗಳನ್ನು ಹೊತ್ತುಕೊಂಡು ಹೊರ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಕಿಚ್ಚನ ಜೊತೆ ಬೆಳ್ಳಿ ತೆರೆ ಮೇಲೆ ಮೆರವಣಿಗೆ ಹೊರಟರೂ ಅಚ್ಚರಿ ಇಲ್ಲ. ಅದೊಂದು ಕನಸು ಈಗಲೂ ಇವರನ್ನು ನಿದ್ದೆ ಮಾಡಲು ಬಿಡುತ್ತಿಲ್ಲ. ಏನಾದರಾಗಲಿ ಬಿಗ್ ಆನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಹೊಸ ಸಾಹಸ ಮಾಡಲಿ. ಕರುನಾಡನ್ನು ಬೇರೊಂದು ರೀತಿ ಗೆದ್ದು ಬೀಗಲಿ.

  • ಒಂದೇ ಸಿನಿಮಾದಲ್ಲಿ ಸುದೀಪ್-ವಿನಯ್ ಗೌಡ? ಕಿಚ್ಚ ಏನಂದ್ರು?

    ಒಂದೇ ಸಿನಿಮಾದಲ್ಲಿ ಸುದೀಪ್-ವಿನಯ್ ಗೌಡ? ಕಿಚ್ಚ ಏನಂದ್ರು?

    ದೊಡ್ಮನೆ ಆಟಕ್ಕೆ ಅದ್ಧೂರಿಯಾಗಿ ತೆರೆ ಬಿದ್ದಿದೆ. ‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ವಿನ್ನರ್ ಆಗಿ ಕಾರ್ತಿಕ್ ಮಹೇಶ್ (Karthik Mahesh) ಹೊರಹೊಮ್ಮಿದ್ದಾರೆ. ಪ್ರತಾಪ್ ಮೊದಲ ರನ್ನರ್ ಅಪ್ ಆಗಿದ್ದು, 2ನೇ ರನ್ನರ್ ಅಪ್ ಆಗಿ ಸಂಗೀತಾ, 3ನೇ ರನ್ನರ್ ಅಪ್ ಆಗಿ ವಿನಯ್ (Vinay) ಸ್ಥಾನ ಪಡೆದಿದ್ದಾರೆ. ಇದರ ನಡುವೆ ವಿನಯ್ ಜೊತೆ ಸುದೀಪ್ (Sudeep) ಸಿನಿಮಾ ಮಾಡ್ತಾರಾ ಎಂಬುದಕ್ಕೆ ಉತ್ತರ ಸಿಕ್ಕಿದೆ.

    ‘ಬಿಗ್ ಬಾಸ್’ (Bigg Boss Kannada 10) ಮನೆಯ ವಿಲನ್ ಎಂದೇ ಫೇಮಸ್ ಆಗಿದ್ದ ವಿನಯ್ ಗೌಡ. ಈ ಸೀಸನ್‌ನ ಕೇಂದ್ರ ಬಿಂದು ಆಗಿದ್ದರು. ವಾಹಿನಿಯ ಟಿಆರ್‌ಪಿ ಪೀಸ್ ಎಂದು ಹೇಳಿದರೆ ತಪ್ಪಾಗಲಾರದು. ‘ವಿನಯ್- ಸಂಗೀತಾ (Sangeetha) ಇಲ್ಲದಿದ್ದರೆ ಈ ಸೀಸನ್ ಅಪೂರ್ಣ’ ಎಂದು ಸುದೀಪ್ ಹೇಳಿದ್ದರು. ಇದೆಲ್ಲದರ ನಡುವೆ ಅಭಿಮಾನಿಗಳು ತಮ್ಮ ಆಸೆಯೊಂದನ್ನು ಸುದೀಪ್ ಮುಂದೆ ಇಟ್ಟಿದ್ದಾರೆ. ಇದನ್ನೂ ಓದಿ:ಪ್ರತಾಪ್ ಮತ್ತು ನನ್ನದು ಅಕ್ಕ ತಮ್ಮ ಸಂಬಂಧ: ಸಂದರ್ಶನದಲ್ಲಿ ಸಂಗೀತಾ ಮಾತು

    ಸೋಮವಾರ (ಜ.29) ‘ಆಸ್ಕ್ ಮೀ ಸೆಷನ್’ ಸೋಷಿಯಲ್ ಮೀಡಿಯಾದಲ್ಲಿ ನಡೆಸಿದ್ದರು. ಇದರಲ್ಲಿ ಅಭಿಮಾನಿಗಳ ಪ್ರಶ್ನೆಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ನೀವು ಹಾಗೂ ವಿನಯ್ ಗೌಡ ಅವರನ್ನ ಒಂದು ಸಿನಿಮಾದಲ್ಲಿ ಒಟ್ಟಿಗೆ ನೋಡಲು ಬಯಸುತ್ತಿದ್ದೇವೆ. ಇದು ಸಾಧ್ಯವಾಗುತ್ತಾ ಸರ್? ಎಂದು ಅಭಿಮಾನಿಯೊಬ್ಬರು ಎಂಬುವರು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ಕಿಚ್ಚ ಸುದೀಪ್, ಖಂಡಿತ. ವಿನಯ್ ಅವರದ್ದು ಅಮೇಜಿಂಗ್ ಪರ್ಸನಾಲಿಟಿ ಎಂದಿದ್ದಾರೆ. ಈ ಮೂಲಕ ವಿನಯ್ ಜೊತೆ ನಟಿಸಲು ಸಿದ್ಧ ಎಂದಿದ್ದಾರೆ.

    ವಿನಯ್ ಈಗಾಗಲೇ ಸಾಕಷ್ಟು ಸೀರಿಯಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ದೊಡ್ಮನೆಯಿಂದ ಹೊರಬರುತ್ತಿದ್ದಂತೆ ಉತ್ತಮ ಸಿನಿಮಾ ಅವಕಾಶಗಳು ಹರಿದು ಬರುತ್ತಿವೆ.

  • Bigg Boss Kannada: ಕಾರ್ತಿಕ್, ವಿನಯ್ ಬಗ್ಗೆ ಸಂಗೀತಾ ಹೇಳಿದ್ದೇನು?

    Bigg Boss Kannada: ಕಾರ್ತಿಕ್, ವಿನಯ್ ಬಗ್ಗೆ ಸಂಗೀತಾ ಹೇಳಿದ್ದೇನು?

    ಬಿಗ್ ಬಾಸ್ (Bigg Boss Kannada) ಮನೆಯ ಫ್ರೆಂಡ್ ಶಿಪ್ ಮತ್ತು ಜರ್ನಿಯ ಕುರಿತು ಸಂಗೀತಾ (Sangeetha) ಸಾಕಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅವರ ಮನದಾಳದ ಮಾತು ಇಲ್ಲಿದೆ. ನನಗೆ ಫ್ರೆಂಡ್‌ಷಿಪ್ ಆಗೋದು ತುಂಬ ಕಷ್ಟ. ಈ ಮನೆಯಲ್ಲಿ ಪ್ರಾರಂಭದಲ್ಲಿಯೇ ಕಾರ್ತಿಕ್ ಮತ್ತು ತನಿಷಾ ಜೊತೆಗೆ ಫ್ರೆಂಡ್‌ಷಿಪ್ ಆಯ್ತು. ಸಡನ್ ಆಗಿ ಆದ ಫ್ರೆಂಡ್‌ಷಿಪ್ ಅಷ್ಟೇ ಸಡನ್ ಆಗಿ ಹೋಗುವ ಸಾಧ್ಯತೆಯೂ ಸಾಕಷ್ಟು ಇರುತ್ತವೆ. ಹಾಗೇ ಆಯ್ತು. ನನ್ನದು ಮತ್ತು ಅವರದು ಕೆಲವು ಚಕಮಕಿ ನಡೆಯಿತು. ಅದು ಕೊನೆಯವರೆಗೂ ಮುಂದುವರಿಯಿತು.

    ಅವರ ಕಡೆಯಿಂದ ಸರಿಪಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅದನ್ನು ಒಪ್ಪಿಕೊಳ್ಳಲು ನಾನು ಸಿದ್ಧಳಿಲ್ಲ. ಯಾಕೆಂದರೆ ನಾನು ಅಲ್ಲಿ ಬರೀ ಗೇಮ್ ಆಡ್ತಾ ಇರ್ಲಿಲ್ಲ. ನನಗೆ ಬೇಜಾರಾಯ್ತು, ಹರ್ಟ್‌ ಆಯ್ತು ಅಂದರೆ ಅವರನ್ನು ಮಾತಾಡಿಸಲು ತುಂಬ ಕಷ್ಟವಾಗುತ್ತದೆ. ಅದನ್ನೆಲ್ಲ ಬದಿಗಿಟ್ಟು ಅವರನ್ನು ವಿನ್ನರ್ ಅಂತ ನೋಡಿದಾಗ, ಖಂಡಿತ ಅವರು ಅವ್ರ ಗೇಮ್ ಅನ್ನು ತುಂಬ ಚೆನ್ನಾಗಿ ಆಡಿದಾರೆ. ಅವರಿಗೆ ಕಂಗ್ರಾಜುಲೇಷನ್ಸ್ ಹೇಳ್ತೀನಿ.

    ವಿನಯ್ (Vinay) ನಾನು ಈ ಮೊದಲು ಒಂದು ಧಾರಾವಾಹಿಯಲ್ಲಿ ನಟಿಸಿದ್ದೆವು. ಅಲ್ಲಿಯೂ ನನಗೂ ಅವರಿಗೂ ಸುಮಾರು ಗಲಾಟೆಗಳು ನಡೆದಿದಾವೆ. ಆದರೆ ಅವ್ರು ಸಹಜವಾಗಿ ಒಳ್ಳೆಯವರು. ಒಳ್ಳೆಯ ವ್ಯಕ್ತಿತ್ವದವರು. ಸ್ವಲ್ಪ ಗಲಾಟೆಗಳು ಆಗ್ತವೆ. ನಾನೂ ಸ್ವಲ್ಪ ನೇರ ವ್ಯಕ್ತಿತ್ವದವರು. ಮುಖದ ಮೇಲೇ ಹೇಳುತ್ತೇನೆ. ಹಾಗಾಗಿಯೇ ಸ್ವಲ್ಪ ಗಲಾಟೆಗಳು ನಡೆಯುತ್ತಿತ್ತು. ಅದೇ ರೀತಿ ಮನೆಯಲ್ಲಿಯೂ ಗಲಾಟೆಗಳು ಆಗಿವೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕು ಅಂದರೆ, ಪರಸ್ಪರರ ಬಗ್ಗೆ ನಮಗೆ ಗೌರವ ಇದೆ. ಅದು ಯಾವತ್ತೂ ಇರುತ್ತದೆ ಎಂದು ಭಾವಿಸುತ್ತೇನೆ.

    ಮುಂದಿನ ದಿನಗಳಲ್ಲಿ ಫ್ರೆಂಡ್‌ಷಿಪ್‌ಗಳು ಹೇಗೆ ಮುಂದುವರಿಯುತ್ತದೆ ಎಂದು ಹೇಳುವುದು ಕಷ್ಟ. ಯಾಕೆಂದರೆ ನಾನು ಈಗಷ್ಟೇ ನೂರಹನ್ನೆರಡು ದಿನಗಳನ್ನು ಕಳೆದು ಹೊರಗೆ ಬರ್ತಿದೀನಿ. ಮನೆಯವರನ್ನು, ಸ್ನೇಹಿತರನ್ನು, ಜನರನ್ನು ಭೇಟಿಯಾಗಬೇಕು. ಹೊರಗೆ ಏನು ನಡೆಯತ್ತಿದೆ ಎಂದು ತಿಳಿದುಕೊಳ್ಳಬೇಕು. ಮನೆಯೊಳಗೆ ಒಂದು ಗೇಮ್ ಆಡ್ತಿದ್ವಿ ಅಂದುಕೊಂಡು, ಅಲ್ಲಿನ ಪ್ರೆಸ್ಟ್ರೇಷನ್, ಕೋಪ, ಸಿಟ್ಟು ಎಲ್ಲವನ್ನೂ ಅಲ್ಲೇ ಬಿಟ್ಟು ಹೊರಗೆ ಹೊಸ ಜೀವನ ಶುರುವಾಗಬಹುದು. ನೋಡಬೇಕು.

    ಜಿಯೊಸಿನಿಮಾ ಫನ್‌ಫ್ರೈಡೆ ಟಾಸ್ಕ್‌ಗಳು ನನಗೆ ಇಷ್ಟ. ಕೆಲವು ಇಟ್ಟಿಗೆಗಳನ್ನು ಇಟ್ಟುಕೊಂಡು ಪಾಸ್ ಮಾಡಿಕೊಂಡು ಹೋಗುವ ಟಾಸ್ಕ್‌ ನಂಗೆ ತುಂಬ ಇಷ್ಟವಾಗಿತ್ತು. ಅದರಲ್ಲಿ ನಾನು ಗೆದ್ದಿದ್ದೇನೆ ಕೂಡ. ಪ್ರತಿ ಸಲ ಜಿಯೊಸಿನಿಮಾ ಟಾಸ್ಕ್‌ಗೆ ಕಾಯುತ್ತಿದ್ದೆವು. ಮ್ಯೂಸಿಕಲ್ ಪಾಟ್‌ ಕೂಡ ಇಷ್ಟವಾಗಿತ್ತು. ಅದರಲ್ಲಿ ನಾನು ಪೌಲ್ ಮಾಡಿದೆ. ಆದರೆ ಹೇಳಲಿಲ್ಲ. ಆದರೂ ನಾನೇ ಒಪ್ಪಿಕೊಂಡು ಹೊರಗೆ ಬಂದಿದ್ದೆ.

    ಬಿಗ್‌ಬಾಸ್‌ ಮನೆ ನಾನು ತುಂಬ ಅಂದ್ರೆ ತುಂಬ ನೊಂದುಕೊಂಡಿದ್ದ ಜಾಗ. ಯಾವಾಗ ಹೊರಗಡೆ ಬರ್ತೀನೋ ಅಂತ ಕಾಯ್ತಿದ್ದೆ. ಯಾಕೆಂದರೆ ಕೊನೆಯ ಕೆಲವು ವಾರಗಳನ್ನು ಬಿಟ್ಟರೆ ಉಳಿದೆಲ್ಲ ದಿನಗಳಲ್ಲಿ ಇಡೀ ಮನೆಯೇ ನನ್ನ ವಿರುದ್ಧವಿತ್ತು. ಎಲ್ಲರ ಎದುರಿನಲ್ಲಿಯೂ ನಾನು ಪ್ರೂವ್ ಮಾಡಿಕೊಳ್ಳಬೇಕಾಗುತ್ತಿತ್ತು. ಆದರೆ, ಆ ಬಾತ್‌ರೂಮ್‌ ಏರಿಯಾ ಮತ್ತು ಟ್ರಿಯನ್ನು ಮಿಸ್ ಮಾಡ್ಕೋತೀನಿ. ಎಲ್ಲದಕ್ಕಿಂತ ಹೆಚ್ಚಾಗಿ ಮಿರರ್ ಅನ್ನು ಮಿಸ್ ಮಾಡ್ಕೋತೀನಿ. ನನ್ನ ಅರ್ಧ ಜರ್ನಿ ನಾನು ಅದರ ಜೊತೆಗೇ ಕಳೆದಿದ್ದೇನೆ. ಅಲ್ಲಿರುವ ದೇವಿ ವಿಗ್ರಹವನ್ನು ಮಿಸ್ ಮಾಡ್ಕೋತೀನಿ. ಅದರಿಂದ ತುಂಬ ಶಕ್ತಿ ಪಡೆದುಕೊಂಡಿದ್ದೇನೆ.

     

    ನನಗೆ ಬಿಗ್‌ಬಾಸ್‌ ಮನೆಯ ಧ್ವನಿಯ ಮೇಲೆ ಎಷ್ಟು ಕ್ರಶ್ ಇತ್ತು ಎಂದರೆ, ಕೊನೆಯ ಗಳಿಗೆಯಲ್ಲಿಯೂ ಅವರಿಗೆ ಏನಾದ್ರೂ ಮಾತಾಡಿಬಿಗ್‌ಬಾಸ್ ಎಂದು ಕೇಳಿಕೊಳ್ಳುತ್ತಿದ್ದೆ. ಅಲ್ಲದೆ ನಾನು ಯಾವಾಗ ಕುಗ್ಗಿದ್ದೆನೋ ಆಗೆಲ್ಲ ಬಿಗ್‌ಬಾಸ್ ನನಗೆ ಅಕ್ಷರಶಃ ತುಂಬ ಸಪೋರ್ಟ್‌ ಮಾಡಿದಾರೆ. ನನ್ನ ಇಡೀ ಜರ್ನಿಯಲ್ಲಿ ಅವರ ಸಪೋರ್ಟ ತುಂಬ ಇದೆ. ಅದನ್ನು ನಾನು ಎಂದೆಂದಿಗೂ ಮರೆಯಲ್ಲ.

  • ನಾನು ಫೇಕ್ ಅಲ್ಲ, ವಿಲನ್ ಅಂದ್ಕೊಂಡರೂ ಪರವಾಗಿಲ್ಲ: ವಿನಯ್ ಗೌಡ

    ನಾನು ಫೇಕ್ ಅಲ್ಲ, ವಿಲನ್ ಅಂದ್ಕೊಂಡರೂ ಪರವಾಗಿಲ್ಲ: ವಿನಯ್ ಗೌಡ

    ಬಿಗ್ ಬಾಸ್ (Bigg Boss Kannada)  ಮನೆಯಿಂದ ಹೊರ ಬಂದ ನಂತರ ಸಂಗೀತಾ ಕುರಿತಾಗಿಯೂ ಹಲವಾರು ವಿಚಾರಗಳನ್ನು ವಿನಯ್ (Vinay) ಹಂಚಿಕೊಂಡಿದ್ದಾರೆ. ಸಂಗೀತಾ ವಿಷಯ ತಗೊಂಡ್ರೆ ಸಂಗೀತಾ ಪಾರ್ವತಿಯಾಗಿ, ಸತಿಯಾಗಿ ನನ್ನ ಜೊತೆಗೆ ನಟಿಸಿದ್ದಳು. ಇಲ್ಲಿ ಬಂದಾಗ, ಮೊದಲ ವಾರದ ನಾಮಿನೇಷನ್‌ನಲ್ಲಿ ಅವ್ರು ನನ್ನ ಫ್ರೆಂಡ್ಸು, ಹಾಗಾಗಿ ನಾಮಿನೇಟ್ ಮಾಡ್ಬಾರ್ದು ಅಂತ ಇರ್ಲಿಲ್ಲ. ನಾನು ಇಲ್ಲಿಗೆ ಗೇಮ್ ಆಡೋದಿಕ್ಕೆ ಬಂದಿದ್ದೆ. ಅವರು ಮಾಡಿರುವ ತಪ್ಪುಗಳಿಗೆ ನಾಮಿನೇಟ್ ಮಾಡಿದೆ. ಫ್ರೆಂಡ್ಸ್, ಗೊತ್ತಿರೋರು, ಬಿಟ್ಟುಬಿಡೋಣ ಅಂತ ಅಂದುಕೊಳ್ಳಲಿಲ್ಲ. ಅವರಿಬ್ಬರೂ ತಪ್ಪು ಮಾಡಿದ್ರು, ನಾನು ಹೇಳಿದ ಮೇಲೂ ತಪ್ ಮಾಡಿದ್ರು, ನಾಮಿನೇಟ್ ಮಾಡಿದೆ. ಅದರಿಂದ ಅವರು ನನ್ನ ಬಗ್ಗೆ ನಕಾರಾತ್ಮಕವಾಗಿ ತಿಳಿದುಕೊಂಡರು. ಗೊತ್ತಿರೋರನ್ನೇ ನಾಮಿನೇಟ್ ಮಾಡ್ತಾನೆ. ಫ್ರೆಂಡ್ಸ್‌ನೇ ನಾಮಿನೇಟ್ ಮಾಡ್ತಾನೆ ಎಂದುಕೊಂಡರು.

    ನೂರಕ್ಕೂ ಹೆಚ್ಚು ದಿನಗಳ ಕಾಲ ಆಕ್ಟಿಂಗ್ ಮಾಡೋದಕ್ಕೆ ಆಗುವುದಿಲ್ಲ. ನೂರಕ್ಕೂ ಹೆಚ್ಚು ದಿನ ಆಕ್ಟ್ ಮಾಡಿದ್ರೂ ಆ ಆಕ್ಟಿಂಗ್‌ನ ಲೈಫ್‌ಲಾಂಗ್ ಹಾಗೇ ಮಾಡಿಕೊಂಡು ಹೋಗಬೇಕು. ಇಷ್ಟರಲ್ಲೇ ಆ ಆಕ್ಟಿಂಗ್ ಮುಗಿಯತ್ತೆ. ಯಾರು ಯಾರು ಮನೆಯೊಳಗೆ ಫೇಕ್ ಆಗಿದ್ರು ಎಂದು ನಿಮಗೆ ಗೊತ್ತಾಗತ್ತೆ. ಯಾಕೆಂದರೆ ಜೀವನಪರ್ಯಂತ ಆಕ್ಟಿಂಗ್ ಮಾಡಿಕೊಂಡು ಹೋಗೋದಕ್ಕೆ ಸಾಧ್ಯವಿಲ್ಲ. ಮನಸಾರೆ ಎಲ್ಲರಿಗೂ ಬೆಸ್ಟ್ ವಿಶಸ್ ಹೇಳ್ತೀನಿ. ಆಕ್ಟಿಂಗ್ ಕಂಟಿನ್ಯೂ ಮಾಡಿ ಲೈಫ್‌ನಲ್ಲಿ ಚೆನ್ನಾಗಿರಿ.

    ನಾನು ಎಲ್ಲಿಗೂ ಫೇಕ್ ಆಗಿಲ್ಲ. ಯಾರಿಗೆ ಎಷ್ಟು ಬೇಜಾರಾದ್ರೂ ಪರವಾಗಿಲ್ಲ. ಯಾರು ಎಷ್ಟೇ ಅಹಂಕಾರ ಎಂದು ಹೇಳಿದರೂ ಪರವಾಗಿಲ್ಲ. ಯಾರು ಎಷ್ಟೇ ವಿಲನ್ ಅಂದ್ರೂ ಪರವಾಗಿಲ್ಲ… ನಾನದನ್ನು ಒಪ್ಕೋತೀನಿ. ನಾನು ವಿಲನ್ನೇ. ಮನೆಯೊಳಗೆ ಜೆನ್ಯೂನ್ ಆಗಿ ಆಡಿದ್ದು, ನಮ್ರತಾ, ಪವಿ… ಮೈಕಲ್ ಜಂಟಲ್‌ಮನ್. ಸಿರಿ, ವರ್ತೂರು ಸಂತೋಷ್ ಹೀಗೆ ಬೆರಳೆಣಿಕೆಯಷ್ಟು ಜನರು ಮಾತ್ರವೇ ಜೆನ್ಯೂನ್ ಆಗಿದ್ರು. ಕಾರ್ತಿಕ್, ಸಂಗಿತಾ, ಮತ್ತು ಪ್ರತಾಪ್ ಟಾಪ್‌ 3ಗೆ ಹೋಗಿದ್ದಾರೆ ಅಂದ್ರೆ ಅದರ ಕ್ರೆಡಿಟ್ ನನಗೇ ಸಲ್ಲಬೇಕು. ಆ ಮೂವರೂ ನನ್ನ ಜೊತೆಗೆ ಜಗಳ ಮಾಡಿಕೊಂಡೇ, ಫೈಟ್ ಮಾಡಿಕೊಂಡೇ ಅಲ್ಲಿಗೆ ತಲುಪಿರುವುದು. ನನಗೆ ಕಾರ್ತೀಕ್ ಗೆಲ್ಲಬೇಕು ಅಂತಲೇ ಆಸೆ ಇತ್ತು.

    ಜಿಯೊಸಿನಿಮಾ ಫನ್‌ ಫ್ರೈಡೆ ಬಂತು ಅಂದ್ರೇ ಕುತೂಹಲ ನಮಗೆ. ಜಗಳ ಎಲ್ಲ ಮಾಡದೆ ಮಜಾ ಮಾಡೋಕೆ ಸಿಗತ್ತೆ ಅಂತ. ಮೊದಲ ವಾರದ ಮ್ಯೂಸಿಕಲ್ ಪಾಟ್ ಗೇಮ್ ನನಗೆ ತುಂಬ ಇಷ್ಟವಾಗಿತ್ತು. ಲಾಸ್ಟ್‌ನಲ್ಲಿ ಬಾಲ್‌ನ ಆ ಕಡೆ ಈ ಕಡೆ ತಳ್ಳುವ ಟಾಸ್ಕ್ ಚೆನ್ನಾಗಿತ್ತು. ಎಲ್ಲ ಫ್ರೈಡೇಗಳೂ ಸಖತ್ತಾಗಿದ್ದವು. ಅದಕ್ಕಾಗಿ ಕಾಯುತ್ತಿದ್ದೆವ ನಾವು. ಯಾರಿಗೆ ಏನು ಅನಿಸಿತೋ ನನಗೆ ಗೊತ್ತಿಲ್ಲ. ನಾನು ನನ್ನ ಮನಸ್ಸಿಗೆ ಮತ್ತು ನನ್ನ ಫ್ಯಾಮಿಲಿಗೆ ನಿಷ್ಠನಾಗಿದ್ದೆ. ಅಷ್ಟೇ ಸಾಕು. ಬಿಗ್‌ಬಾಸ್‌ ಮನೆಯಲ್ಲಿ ನನ್ನ ಫೆವರೇಟ್ ಮೊಮೆಂಟ್ ಅಂದರೆ ಕ್ಯಾಪ್ಟನ್ ಆಗಿದ್ದು. ಹಾಗೆಯೇ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಇನ್ನೊಂದು ಅವಿಸ್ಮರಣೀಯ ಗಳಿಗೆ. ಯಾಕೆಂದರೆ ನೂರಕ್ಕೂ ಹೆಚ್ಚು ದಿನಗಳ ಕಾಲ ಕಾದು ಕಾದು, ಇನ್ನು ಸಿಗುವುದಿಲ್ಲ ಎಂಬ ಹಂತದಲ್ಲಿ ಸಿಕ್ಕಿದ ಚಪ್ಪಾಳೆ ಅದು. ಅದರಲ್ಲಿಯೂ ಅವರು ಹೇಳಿದ ಒಂದಿಷ್ಟು ಮಾತುಗಳು ಆಳಕ್ಕೆ ನಾಟಿತು.

     

    ಬಿಗ್‌ಬಾಸ್‌ಗೆ ತುಂಬ ತುಂಬ ಥ್ಯಾಂಕ್ಸ್ ಹೇಳುವುದಕ್ಕೆ ಇಷ್ಟಪಡ್ತೀನಿ. ಎಲ್ಲೋ ಇದ್ದಿದ್ದ ನನ್ನನ್ನು ಕರೆದುಕೊಂಡು ಬಂದು, ಇಷ್ಟುದೊಡ್ಡ ವೇದಿಕೆ ಕೊಟ್ಟಿದೆ. ಇಷ್ಟು ದಿನ ನನ್ನನ್ನು ಮಹದೇವ, ಶಿವ ಎಂದು ನನ್ನ ಪಾತ್ರಗಳ ಮೂಲಕ ಗುರುತು ಹಿಡಿಯುತ್ತಿದ್ದರು. ಈಗ ಹೊರಗೆ ಬಂದಾಗ ಜನರು ನನ್ನನ್ನು ವಿನಯ್ ಎಂದು ಗುರ್ತು ಹಿಡಿಯುತ್ತಾರೆ. ಆ ವಿಷಯಕ್ಕೆ ನಾನು ಬಿಗ್‌ಬಾಸ್‌ಗೆ ಕೃತಜ್ಞನಾಗಿರುತ್ತೇನೆ.

  • Bigg Boss Kannada: ಎದುರಾಳಿ ಆನೆಯನ್ನು ಕಾರ್ತಿಕ್ ಸೋಲಿಸಿದ್ದು ಹೇಗೆ?

    Bigg Boss Kannada: ಎದುರಾಳಿ ಆನೆಯನ್ನು ಕಾರ್ತಿಕ್ ಸೋಲಿಸಿದ್ದು ಹೇಗೆ?

    ಕಾರ್ತಿಕ್ (Karthik) ಅವರ ಬಿಗ್‌ಬಾಸ್ (Bigg Boss Kannada) ಜರ್ನಿಯಲ್ಲಿ ವಿನಯ್ ಗೌಡ  (Vinay)ಅವರ ಪಾಲು ದೊಡ್ಡದಿದೆ. ಬಿಗ್‌ಬಾಸ್‌ ಷೋಗಿಂತಲೂ ಮೊದಲಿನಿಂದ, ಅಂದರೆ ಕಳೆದ ಹತ್ತು ವರ್ಷಗಳಿಂದ ಸ್ನೇಹಿತರಾಗಿದ್ದ ವಿನಯ್ ಮತ್ತು ಕಾರ್ತೀಕ್ ಸ್ನೇಹಿತರು. ಮೊದಲ ಬಾರಿಗೆ ಬಿಗ್‌ಬಾಸ್ ಮನೆಯಲ್ಲಿ ಭೇಟಿಯಾದಾಗ ವಿನಯ್, ‘ಫಿನಾಲೆ ದಿನ ಸುದೀಪ್ ಅವರ ಒಂದು ಕೈಯಲ್ಲಿ ನಿನ್ನ ಕೈ ಇದ್ದರೆ, ಇನ್ನೊಂದು ಕೈಯಲ್ಲಿ ನನ್ನ ಕೈ ಇರಬೇಕು’ ಎಂದು ಕಾರ್ತಿಕ್ ಅವರ ಹೆಗಲು ತಟ್ಟಿದ್ದರು. ಹಾಗೆಂದು ಅವರು ಎಂದು ಹೆಗಲೆಣೆಯಾಗಿ ಆಡಿಲ್ಲ. ಸದಾ ಎದುರಾಳಿಗಳಾಗಿ ಒಬ್ಬರಿಗೊಬ್ಬರು ಕೌಂಟರ್ ಕೊಟ್ಟುಕೊಂಡೇ ಆಡಿದರು. ಅದು ಕೆಲವೊಮ್ಮೆ ಅತಿರೇಕಕ್ಕೆ ಹೋಗಿದ್ದೂ ಇದೆ.

    ಹಳ್ಳಿ ಟಾಸ್ಕ್ ಆಗುವಾಗ ವಿನಯ್ ಮತ್ತು ಕಾರ್ತಿಕ್ ನಡುವೆ ಜಗಳ ತಾರಕಕ್ಕೇರಿತ್ತು. ಸಂಗೀತಾ ಮತ್ತು ವಿನಯ್ ನಡುವಿನ ಜಗಳ ನಿಲ್ಲಿಸುವಲ್ಲಿಯೂ ಕಾರ್ತಿಕ್ ಮುಖ್ಯಪಾತ್ರ ವಹಿಸಿದ್ದರು. ನಂತರ ರಾಕ್ಷಸರು ಗಂಧರ್ವರು ಟಾಸ್ಕ್‌ನಲ್ಲಿ ಇದು ಇನ್ನೊಂದು ಹಂತಕ್ಕೆ ಹೋಗಿತ್ತು. ವಿನಯ್ ರಾಕ್ಷಸನಾದಾಗ, ಕಾರ್ತಿಕ್ ಮುಖಕ್ಕೆ ಹಿಟ್ಟು ಎರೆಚಿದ್ದು ಕಾರ್ತಿಕ್ ಸಹನೆಯನ್ನು ಕೆಣಕಿತ್ತು. ಅವರು ಕೋಪದಲ್ಲಿ ನೆಲಕ್ಕೆಸೆದ ಚಪ್ಪಲಿ ವಿನಯ್ ಮೇಲೆ ಹೋಗಿ ಬಿದ್ದಿತ್ತು. ಇದು ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿತ್ತು.

    ಇಷ್ಟೆಲ್ಲ ಆದರೂ ವಿನಯ್ ಜೊತೆಗಿನ ಕಾರ್ತಿಕ್ ಸ್ನೇಹಕ್ಕೆ ಕುಂದು ಬಂದಿಲ್ಲ. ಇತ್ತೀಚೆಗಷ್ಟೇ, ‘ನಿಮ್ಮ ಜೊತೆಗೆ ಫಿನಾಲೆಯಲ್ಲಿ ಇರುವ ಇನ್ನೊಬ್ಬ ಸ್ಪರ್ಧಿ ಯಾರಾಗಿರಬೇಕು?’  ಎಂಬ ಬಿಗ್‌ಬಾಸ್ ಪ್ರಶ್ನೆಗೆ ಕಾರ್ತಿಕ್ ಆರಿಸಿಕೊಂಡಿದ್ದು ವಿನಯ್ ಅವರ ಹೆಸರನ್ನೇ.

    ಕಳೆದ ಕೆಲವು ವಾರಗಳ ಹಿಂದೆ ಕಾರ್ತಿಕ್ ನಮ್ರತಾ ನಡುವೆ ತಮಾಷೆಯ ಮಾತುಕತೆಗಳು ನಡೆಯುತ್ತಿದ್ದವು. ಕಾರ್ತಿಕ್‌, ನಮ್ರತಾ ಜೊತೆಗೆ ಡೇಟಿಂಗ್ ಹೋಗುವ ಟ್ರ್ಯಾಕ್‌ ತುಂಬ ವಾರಗಳಿಂದಲೂ ನಡೆಯುತ್ತಲೇ ಬಂದಿತ್ತು. ಹಲವು ಸಲ ಕಾರ್ತಿಕ್ ತಮಾಷೆಗಾಗಿ, ನಮ್ರತಾ ಜೊತೆಗೆ ಫ್ಲರ್ಟ್ ಮಾಡುತ್ತಿರುವಂತೆಯೇ ನಡೆದುಕೊಳ್ಳುತ್ತಿದ್ದರು. ಅದನ್ನು ನಮ್ರತಾ ಕೂಡ ಅಷ್ಟೇ ಹೆಲ್ದಿಯಾಗಿ ತೆಗೆದುಕೊಂಡು ಫ್ರಾಂಕ್ ಮಾಡುತ್ತಿದ್ದರು. ‘ಕಾರ್ತೀಕ್ ಕೈ ಹಿಡಿದುಕೊಂಡಾಗ ನನಗೇನೋ ಕಂಫರ್ಟ್‌ ಫೀಲ್ ಆಗುತ್ತದೆ. ನನಗೆ ಎಂದೂ ಅವರ ಟಚ್ ಬ್ಯಾಡ್ ಎನಿಸಿಲ್ಲ’ ಎಂದು ನಮ್ರತಾ ಹಲವು ಬಾರಿ ಹೇಳಿದ್ದರು.

    ಆದರೆ ಈ ಎಲ್ಲದಕ್ಕೂ ಹೊಸದೇ ತಿರುವು ಬಂದಿದ್ದು, ಈ ಸೀಸನ್‌ನ ಹಳೆಯ ಸ್ಪರ್ಧಿಗಳು ಮತ್ತೆ ಮನೆಯೊಳಗೆ ಬಂದಾಗ. ಒಂದೆಡೆ ಸ್ನೇಹಿತ್‌, ಮನೆಯೊಳಗೆ ಬಂದು ನಮ್ರತಾಳನ್ನು ನಿರ್ಲಕ್ಷಿಸಿದರು. ‘ನೀವು ಕಾರ್ತಿಕ್ ನಡೆಗಳು ಹೊರಗಡೆ ಅಗ್ಲಿಯಾಗಿ ಕಾಣಿಸುತ್ತಿವೆ’ ಎಂದು ಪದೇ ಪದೇ ಹೇಳಿದ್ದರು. ಕಾರ್ತೀಕ್‌ಗೆ ಕೂಡ, ‘ನಿಮ್ಮೊಳಗೊಬ್ಬ ಜಂಟಲ್‌ಮೆನ್ ನೋಡಿದ್ದೀನಿ. ಹಾಗೇ ಇರಿ’ ಎಂದಿದ್ದರು. ಸಿರಿ, ಕಾರ್ತಿಕ್ ಅವರನ್ನು ಪಕ್ಕಕ್ಕೆ ಕರೆದು ‘ನಮ್ರತಾ ಜೊತೆಗೆ ಹಾಗೆ ನಡೆದುಕೊಳ್ಳುವುದನ್ನು ಬಿಡು’ ಎಂದು ಬುದ್ಧಿ ಹೇಳಿದ್ದರು. ಇದು ತಮ್ಮ ನಡವಳಿಕೆ ಹೊರಗಿನಿಂದ ನೋಡುವವರಿಗೆ ಅಗ್ಲಿಯಾಗಿ ಕಾಣಿಸುತ್ತಿದೆ ಎಂದು ಅನಿಸುವಂತೆ ಆಯಿತು. ಅದು ಅವರನ್ನು ಸಾಕಷ್ಟು ಕುಗ್ಗಿಸಿತು ಕೂಡ.

  • Bigg Boss: ವಿನಯ್‌ ಆಟಕ್ಕೆ ಬ್ರೇಕ್‌ ಹಾಕಿದ ‌’ಬಿಗ್‌ ಬಾಸ್’

    Bigg Boss: ವಿನಯ್‌ ಆಟಕ್ಕೆ ಬ್ರೇಕ್‌ ಹಾಕಿದ ‌’ಬಿಗ್‌ ಬಾಸ್’

    ಬಿಗ್‌ ಬಾಸ್ ಕನ್ನಡ 10ನೇ ಸೀಸನ್ ಮೂರನೇ ರನ್ನರ್ ಅಪ್ ಆಗಿ ವಿನಯ್ ಗೌಡ (Vinay Gowda)  ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಎಲಿಮಿನೇಷನ್ (Elimination) ಚಕ್ರದ ಕುರ್ಚಿಯಲ್ಲಿ ಕಾರ್ತಿಕ್, ಸಂಗೀತಾ, ಪ್ರತಾಪ್ ಮತ್ತು ವಿನಯ್ ಕೂತಿದ್ದರು. ತಿರುಗುಣಿ ತಿರುಗುತ್ತಿದ್ದ ಹಾಗೆಯೇ ಮೂವರ ಉಸಿರೂ ಅಷ್ಟೇ ಏರಿಳಿಯುತ್ತಿತ್ತು. ಎಲ್ಲ ಸ್ಪರ್ಧಿಗಳು ಕಣ್ಣುಮುಚ್ಚಿ ಪ್ರಾರ್ಥಿಸುತ್ತಿದ್ದರು. ಕೊನೆಗೂ ವಿನಯ್ ಎದುರಿಗೆ ಬಂದಾಗ ಮನೆಯ ಬಾಗಿಲು ತೆರೆದುಕೊಂಡಿತು. ವಿನಯ್ ಮನೆಯಿಂದ ಹೊರಬಂದಿದ್ದಾರೆ.

    ದೊಡ್ಮನೆಯ ಆನೆ ವಿನಯ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಟಾಪ್ 2ನಲ್ಲಿ ವಿನಯ್ ಇದ್ದೇ ಇರುತ್ತಾರೆ ಎಂದು ಭಾವಿಸಿದ್ದ ಪ್ರೇಕ್ಷಕರಿಗೆ ವಿನಯ್ ಎಲಿಮಿನೇಷನ್ ಶಾಕ್ ಕೊಟ್ಟಿದೆ.‌ ಇದನ್ನೂ ಓದಿ:Bigg Boss: ಫಿನಾಲೆಯಲ್ಲಿ ಮುಗ್ಗರಿಸಿದ ಪಂತು- ವರ್ತೂರು ಸಂತೋಷ್ ಔಟ್

    ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೂ ಟಫ್ ಸ್ಪರ್ಧಿಯಾಗಿಯೇ ಗುರುತಿಸಿಕೊಂಡವರು ವಿನಯ್. ಸಂಗೀತಾ, ಕಾರ್ತಿಕ್ ಅಂತಹ ಸ್ಟ್ರಾಂಗ್ ಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟಿದ್ದಾರೆ ವಿನಯ್. ತುಕಾಲಿ ಸಂತು ಎಲಿಮಿನೇಟ್ ನಂತರ ವರ್ತೂರು ಸಂತೋಷ್, ವಿನಯ್ ಔಟ್ ಆಗಿದ್ದಾರೆ. ಟಾಪ್ 3ನೇ ಸ್ಥಾನದಲ್ಲಿ ಕಾರ್ತಿಕ್, ಪ್ರತಾಪ್‌, ಸಂಗೀತಾ ಇದ್ದಾರೆ.

  • Bigg Boss: 5 ಫೈನಲಿಸ್ಟ್‌ಗಳ ನಡುವೆ ಟಫ್ ಫೈಟ್- ಯಾರಿಗೆ ಸಿಗಲಿದೆ ಗೆಲುವು?

    Bigg Boss: 5 ಫೈನಲಿಸ್ಟ್‌ಗಳ ನಡುವೆ ಟಫ್ ಫೈಟ್- ಯಾರಿಗೆ ಸಿಗಲಿದೆ ಗೆಲುವು?

    ಅಂತೂ ಇಂತೂ ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ (Bigg Boss Kannada 10) ತೆರೆ ಬೀಳುವ ಸಮಯ ಬಂದಿದೆ. ದೊಡ್ಮನೆಯ ವಿನ್ನರ್ ಯಾರಾಗಬಹುದು ಎಂದು ಕನ್ನಡಿಗರು ಎದುರು ನೋಡ್ತಿದ್ದಾರೆ. ಅದಕ್ಕೆ ಉತ್ತರ, ಇಂದು (ಜ.28) ರಾತ್ರಿ ಬಿಗ್ ಬಾಸ್ ಫಿನಾಲೆ ಎಪಿಸೋಡ್‌ನಲ್ಲಿ ಸಿಗಲಿದೆ. ತುಕಾಲಿ ಸಂತು ನಂತರ ಇನ್ನೂಳಿದ 5 ಫೈನಲಿಸ್ಟ್‌ಗಳ ನಡುವೆ ಗೆಲುವಿಗಾಗಿ ಟಫ್ ಫೈಟ್ ಶುರುವಾಗಿದೆ.

    ಈ ಬಾರಿ 6 ಜನ ಸ್ಪರ್ಧಿಗಳು ಫೈನಲಿಸ್ಟ್‌ಗಳಾಗಿ ಫಿನಾಲೆಗೆ ಎಂಟ್ರಿ ಪಡೆದುಕೊಂಡಿದ್ದರು. ಇದು ಸುದೀಪ್ ಅವರು ಸ್ಪರ್ಧಿಗಳಿಗೆ ನೀಡಿದ ಉಡುಗೊರೆಯಾಗಿತ್ತು. ನಿನ್ನೆ ಎಪಿಸೋಡ್‌ನಲ್ಲಿ (ಜ.27) 6ನೇ ರನ್ನರ್ ಅಪ್ ಆಗಿ ತುಕಾಲಿ ಸಂತೋಷ್ ಹೊರಬಂದಿದ್ದಾರೆ. ಇದನ್ನೂ ಓದಿ:ಇಂದು ಹಾಸ್ಯನಟ ನಾಗಭೂಷಣ್ ಮದುವೆ

    ಸದ್ಯ ಫಿನಾಲೆ ಹಣಾಹಣಿಯಲ್ಲಿ ಕಾರ್ತಿಕ್ ಮಹೇಶ್ (Karthik Mahesh), ಸಂಗೀತಾ (Sangeetha), ಡ್ರೋನ್ ಪ್ರತಾಪ್, ವಿನಯ್, ವರ್ತೂರು ಸಂತೋಷ್ ಇದ್ದಾರೆ. ಈ 5 ಸ್ಪರ್ಧಿಗಳಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.‌ ಇದನ್ನೂ ಓದಿ:ಹನುಮಾನ್ ಶಕ್ತಿಗೆ ಬಾಕ್ಸ್ ಆಫೀಸ್ ಉಡೀಸ್: 14 ದಿನಕ್ಕೆ 250 ಕೋಟಿ ಲೆಕ್ಕ

    5 ಜನ ಸ್ಪರ್ಧಿಗಳು ಸ್ಟ್ರಾಂಗ್ ಇದ್ದಾರೆ. ಮೈಂಡ್ ಗೇಮ್, ಜನ ಬಲ, ಟಾಸ್ಕ್ ಅಂತ ಬಂದಾಗ ಠಕ್ಕರ್ ಕೊಡುವ ಗುಣ ಎಲ್ಲವೂ ಇದೆ. ಹೀಗಿರುವಾಗ ಯಾರಿಗೆ ಗೆಲುವಿನ ಲಕ್ಷ್ಮಿ ಒಲಿಯುತ್ತಾಳೆ ಎಂಬುದು ಅಭಿಮಾನಿಗಳ ಯಕ್ಷ ಪ್ರಶ್ನೆಯಾಗಿದೆ.

    ಈ ಸೀಸನ್‌ನಲ್ಲಿರೋ ಎಕೈಕ ಮಹಿಳಾ ಸ್ಪರ್ಧಿ ಎಂದರೆ ಅದು ಸಂಗೀತಾ ಶೃಂಗೇರಿ. ಮೊದಲ ದಿನದಿಂದಲೂ ಟಫ್ ಫೈಟ್ ನೀಡುತ್ತಲೇ ಬಂದಿದ್ದಾರೆ. ವಿನಯ್, ಕಾರ್ತಿಕ್ ಏನು ಕಮ್ಮಿಯಿಲ್ಲ. ಎದುರಾಳಿಗಳಿಗೆ ಠಕ್ಕರ್ ಕೊಟ್ಟು ಬರುವ ಸ್ಪರ್ಧಿಗಳು. ವರ್ತೂರು ಸಂತೋಷ್, ಪ್ರತಾಪ್ ಸೈಲೆಂಟ್ ಆಗಿದ್ರು ಕೂಡ ಸಮಯ ಬಂದಾಗ ವೈಲೆಂಟ್ ಆಗಿ ಆಟ ಆಡಿದ್ದು ಇದೆ. ಹಾಗಾಗಿ ವಿನ್ನರ್ ಘೋಷಣೆಗೆ ಬಿಗ್ ಬಾಸ್ ಫಿನಾಲೆ ಎಪಿಸೋಡ್ ಪ್ರಸಾರ ಆಗುವವರೆಗೂ ಕಾಯಬೇಕಿದೆ.

  • Bigg Boss Kannada 10: ಫಿನಾಲೆಗೆ ಕೌಂಟ್‌ಡೌನ್, ಯಾರಾಗ್ತಾರೆ ‘ಬಿಗ್ ಬಾಸ್’ ವಿನ್ನರ್?

    Bigg Boss Kannada 10: ಫಿನಾಲೆಗೆ ಕೌಂಟ್‌ಡೌನ್, ಯಾರಾಗ್ತಾರೆ ‘ಬಿಗ್ ಬಾಸ್’ ವಿನ್ನರ್?

    ‘ಬಿಗ್ ಬಾಸ್ ಸೀಸನ್ 10′ (Bigg Boss Kannada 10) ರಿಯಾಲಿಟಿ ಶೋ ಮುಗಿಯಲು ದಿನಗಣನೆ ಶುರುವಾಗಿದೆ. ಸ್ಪರ್ಧಿಗಳೆಲ್ಲರೂ ಎಲಿಮಿನೇಟ್ ಆಗಿ ಈಗ 6 ಸ್ಪರ್ಧಿಗಳು ಫಿನಾಲೆ ವೇದಿಕೆಗೆ ತಲುಪಿದ್ದಾರೆ. ಇವರಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

    ಫಿನಾಲೆ ದಿನ ಅಂತಿಮವಾಗಿ ಇಬ್ಬರು ಸ್ಪರ್ಧಿಗಳು ಸುದೀಪ್ ಜೊತೆ ಇರಲಿದ್ದಾರೆ. ಅವರಲ್ಲಿ ಒಬ್ಬರಿಗೆ ಮಾತ್ರ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ. ಇದೀಗ ಅಂತಿಮವಾಗಿ ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ (Drone Prathap), ವಿನಯ್, ಕಾರ್ತಿಕ್, ತುಕಾಲಿ ಸಂತೂ, ವರ್ತೂರು ಸಂತೋಷ್ (Varthur Santhosh) ಫಿನಾಲೆಗೆ ಎಂಟ್ರಿ ಪಡೆದಿದ್ದಾರೆ.

    ಇದರ ಮಧ್ಯೆ ಒಬ್ಬರ ಎಲಿಮಿನೇಷನ್ ಈ ವಾರದ ಮಧ್ಯೆ ನಡೆಯಲಿದೆ ಎಂದು ಹೇಳಲಾಗಿತ್ತು. ಅದು ಫಿನಾಲೆ ದಿನವೇ ತಿಳಿಯಲಿದೆ ಎನ್ನಲಾಗುತ್ತಿದೆ. ಸದ್ಯ ಉಳಿದುಕೊಂಡಿರುವ 6 ಜನ ಸ್ಪರ್ಧಿಗಳಲ್ಲಿ ಸಖತ್ ಪೈಪೋಟಿ ಇದೆ. ಇದನ್ನೂ ಓದಿ:ಸ್ನೇಹಿತ್ ಜೊತೆ ಫ್ರೆಂಡ್‌ಶಿಪ್ ಕಂಟಿನ್ಯೂ ಮಾಡ್ತಾರಾ? ನಮ್ರತಾ ಸ್ಪಷ್ಟನೆ

    ಈ ಹಿಂದಿನ ಸೀಸನ್‌ನಲ್ಲಿ ಹಿರಿಯ ನಟಿ ಶೃತಿ ವಿನ್ನರ್ ಆಗಿದ್ದರು. ಈ ಸೀಸನ್‌ನಲ್ಲಿ ಮಹಿಳಾ ಸ್ಪರ್ಧಿ ಸಂಗೀತಾ ಶೃಂಗೇರಿ (Sangeetha Sringeri) ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಅವರೇ ವಿನ್ನರ್ ಆಗುವ ಸಾಧ್ಯತೆಯಿದೆ ಎಂದು ಅಭಿಮಾನಿಗಳು ಲೆಕ್ಕಾಚಾರವಾಗಿದೆ. ಉಳಿದುಕೊಂಡಿರುವ ಪ್ರತಿ ಸ್ಪರ್ಧಿಗಳು ಕೂಡ ಟಫ್ ಫೈಟ್ ಕೊಡುತ್ತಿದ್ದಾರೆ.

    ಬಿಗ್ ಬಾಸ್ ಕನ್ನಡ 10 ಫಿನಾಲೆ ಇದೇ ಜನವರಿ 27, 28ರಂದು ನಡೆಯಲಿದೆ. ಅಂದು ಬಿಗ್ ಬಾಸ್ ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

  • ನಿಮ್ಮ ಲೈಫ್‌ಗೆ ನಾನೇ ಶನಿ ಆಗ್ತೀನಿ- ಗುಡುಗಿದ ಸಂಗೀತಾ

    ನಿಮ್ಮ ಲೈಫ್‌ಗೆ ನಾನೇ ಶನಿ ಆಗ್ತೀನಿ- ಗುಡುಗಿದ ಸಂಗೀತಾ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಪ್ರೇಮಿಗಳಾಗಿದ್ದ ಸಂಗೀತಾ ಮತ್ತು ಕಾರ್ತಿಕ್ ಬದ್ಧ ವೈರಿಗಳಾಗಿದ್ದಾರೆ. ಸಾಕಷ್ಟು ಬಾರಿ ಕಾರ್ತಿಕ್ ನನ್ನ ಸ್ನೇಹ ಬಳಸಿಕೊಂಡರು ಎಂದು ಸಂಗೀತಾ ಆರೋಪಿಸಿದ್ದರು. ಈಗ ಕಾರ್ತಿಕ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಿಮ್ಮ ಲೈಫ್‌ಗೆ ನಾನೇ ಶನಿ ಆಗ್ತೀನಿ ಎಂದು ಕಾರ್ತಿಕ್‌ಗೆ ನೇರವಾಗಿ ಸಂಗೀತಾ (Sangeetha Sringeri) ಮಾತನಾಡಿದ್ದಾರೆ.

    ದೊಡ್ಮನೆ ಆಟ ಮುಗಿಯಲು ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಇದರ ನಡುವೆ ‘ಬಿಗ್ ಬಾಸ್’ ಮನೆಮಂದಿಗೆ ಪ್ರಕ್ರಿಯೆಯೊಂದನ್ನು ಮಾಡಿಸಿದ್ದಾರೆ. ಸ್ಪರ್ಧಿಗಳು ಫೋಟೋ ಹಾಕಿ ಬಾಕ್ಸಿಂಗ್ ಮಾಡೋದು. ತಮ್ಮ ಅನಿಸಿಕೆಗಳನ್ನು ಹೇಳಿ ಸ್ಪರ್ಧಿಗಳ ಫೋಟೋಗೆ ಪಂಚ್ ಕೊಡುವ ಅವಕಾಶ ‘ಬಿಗ್ ಬಾಸ್’ ನೀಡಿದ್ದಾರೆ. ಇದನ್ನೂ ಓದಿ:‘ಲವ್ ರೀಸೆಟ್’ ಅಂತಿದ್ದಾರೆ ನಟಿ ಸಂಜನಾ ಬುರ್ಲಿ

    ಇನ್ನೂ ಈ ಹಿಂದೆ ಸಂಗೀತಾರನ್ನು ಶನಿ ಎಂದು ಕರೆದು ಕಾರ್ತಿಕ್ ನೇರವಾಗಿ ಸಂಗೀತಾ ಕೆಂಗಣ್ಣಿಗೆ ಗುರಿಯಾಗಿದ್ದರು. ಇದನ್ನು ಕೇಳಿ ಸಂಗೀತಾ ಸಿಟ್ಟಾಗಿದ್ದರು. ಈಗ ಅವರು ಕಾರ್ತಿಕ್ ಮೇಲಿರುವ ಕೋಪವನ್ನು ತೀರಿಸಿಕೊಂಡಿದ್ದಾರೆ. ಬಾಕ್ಸಿಂಗ್ ಗ್ಲೌಸ್ ಹಾಕಿ ಸ್ಪರ್ಧಿಗಳ ಭಾವಚಿತ್ರಕ್ಕೆ ಗುದ್ದೋಕೆ ಅವಕಾಶವನ್ನು ಉಪಯೋಗಿಸಿಕೊಂಡಿದ್ದಾರೆ. ಆಗ ಸಂಗೀತಾ ಅವರು ಕಾರ್ತಿಕ್ ಬಗ್ಗೆ ಇರೋ ಕೋಪ ತೀರಿಸಿಕೊಂಡರು. ಕಾರ್ತಿಕ್ ಎಲ್ಲರನ್ನೂ ಬಳಸಿಕೊಳ್ಳುತ್ತಾರೆ ಎಂಬ ಆರೋಪವನ್ನು ಮಾಡಿದರು. ಜೊತೆಗೆ ನಾನು ನಿಮ್ಮ ಬಾಳಲ್ಲಿ ಶನಿ ಆಗಿದ್ದೀನಿ, ಮುಂದೆಯೂ ಆಗಿರುತ್ತೇನೆ ಎಂದು ತಿರುಗೇಟು ನೀಡಿದ್ದರು.

    ಮುಂದಿನ ಸರದಿ ಕಾರ್ತಿಕ್‌ಗೆ (Karthik Mahesh) ಕೂಡ ಬಂದಿದೆ. ಆಗ ಸಂಗೀತಾ ಫೋಟೋ ಹಾಕಿ ಬಾಕ್ಸಿಂಗ್ ಮಾಡಿದ್ದಾರೆ. ಸಂಗೀತಾ ಮೇಡಂ ಇಲ್ಲಿಗೆ ನಾನು ಫ್ರೆಂಡ್‌ಶಿಪ್ ಮಾಡುವುದಕ್ಕೆ ಬಂದಿಲ್ಲ. ಟ್ರೋಫಿ ಗೆದ್ದು ತೆಗೆದುಕೊಂಡು ಹೋಗುವುದಕ್ಕೆ ಬಂದಿರುವುದು ಅಂತ ಹೇಳಿ ಸಂಗೀತಾ ಫೋಟೋಗೆ ಅಷ್ಟೇ ಆಕ್ರೋಶದಿಂದ ಗುದ್ದಿದ್ದಾರೆ.