Tag: ವಿಧಾನಪರಿಷತ್

  • ಎಚ್‍ಡಿ ದೇವೇಗೌಡರ ನಡೆಗೆ ಕುಮಾರಸ್ವಾಮಿ ಅಸಮಾಧಾನ!

    ಎಚ್‍ಡಿ ದೇವೇಗೌಡರ ನಡೆಗೆ ಕುಮಾರಸ್ವಾಮಿ ಅಸಮಾಧಾನ!

    ಬೆಂಗಳೂರು: ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆಯಿಂದ ದೊಡ್ಡ ಗೌಡರ ಮನೆಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಜೆಡಿಎಸ್ ವರಿಷ್ಠ ದೇವೇಗೌಡರ ಮೇಲೆ ಸಿಎಂ ಕುಮಾರಸ್ವಾಮಿ ಸಿಟ್ಟು ಮಾಡಿಕೊಂಡಿದ್ದಾರಂತೆ.

    ತಮ್ಮ ಆಪ್ತ ಮಾಜಿ ಶಾಸಕ ಕೋನರೆಡ್ಡಿ ಅವರಿಗೆ ಪರಿಷತ್ ಟಿಕೆಟ್ ಕೊಡಲು ಕುಮಾರಸ್ವಾಮಿ ನಿರ್ಧರಿಸಿದ್ದರು. ಅಲ್ಲದೇ ಕೋನರೆಡ್ಡಿಗೆ ನಾಮಪತ್ರ ಸಲ್ಲಿಸಲು ಶಾಸಕರ ಸಹಿಯುಳ್ಳ ನಾಮಪತ್ರವನ್ನೂ ಕೂಡ ಕೊಟ್ಟಿದ್ದರು. ಆದ್ರೆ ಕೊನೆ ಘಳಿಗೆಯಲ್ಲಿ ದೇವೇ ಗೌಡರು ರಮೇಶ್ ಗೌಡಗೆ ಟಿಕೆಟ್ ನೀಡಿದ್ದಾರೆ. ದೇವೇಗೌಡರ ಈ ನಡೆಗೆ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಅಣ್ಣ ರೇವಣ್ಣ ಹಾಗೂ ಕುಟುಂಬದವರ ಹಸ್ತಕ್ಷೇಪದಿಂದ ಕೋನರೆಡ್ಡಿಗೆ ಕೊನೆ ಘಳಿಗೆಯಲ್ಲಿ ಟಿಕೆಟ್ ತಪ್ಪಿತ್ತು. ಕುಟುಂಬದ ಒತ್ತಡಕ್ಕೆ ಮಣಿದ ದೇವೇಗೌಡರು ರಮೇಶ್ ಗೌಡಗೆ ಟಿಕೆಟ್ ನೀಡಿದ್ದರು. ಇದ್ರೀಂದ ಕೋಪಗೊಂಡಿರೋ ಕುಮಾರಸ್ವಾಮಿ, ನಿವಾಸ ಪದ್ಮನಾಭನಗರಕ್ಕೆ ಹೋಗುತ್ತಿಲ್ಲ ಎಂಬುದಾಗಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಎಂ ಮಾತು ಅಧಿಕಾರಿಗಳೂ ಕೇಳ್ತಿಲ್ಲ: ಬಸವರಾಜ್ ಹೊರಟ್ಟಿ

    ಸಿಎಂ ಮಾತು ಅಧಿಕಾರಿಗಳೂ ಕೇಳ್ತಿಲ್ಲ: ಬಸವರಾಜ್ ಹೊರಟ್ಟಿ

    ಬಳ್ಳಾರಿ: ಸರ್ಕಾರ ಟೇಕ್ ಆಫ್ ಆಗಿಲ್ಲ ಎಂಬ ವಿರೋಧ ಪಕ್ಷದ ಆರೋಪದ ನಡುವೆಯೇ ಜೆಡಿಎಸ್ ಮುಖಂಡರು ಹಾಗೂ ಪರಿಷತ್ ಸಭಾಪತಿ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದೇಶವನ್ನು ರಾಜ್ಯದ ಅಧಿಕಾರಿಗಳೂ ಕೇಳುತ್ತಿಲ್ಲವೆಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಮಂಡ್ಯದ ರೈತರ ಆತ್ಮಹತ್ಯೆ ಕಣ್ಣಲ್ಲಿ ನೀರು ಬರಿಸುತ್ತಿದೆ. ರೈತನ ಆತ್ಮಹತ್ಯೆಗೂ ಮುನ್ನ ಅಧಿಕಾರಿಗಳು ಸಿಎಂ ಕುಮಾರಸ್ವಾಮಿಯವರ ಆದೇಶ ಪಾಲಿಸಿದ್ದರೆ ಆ ರೈತನ ಆತ್ಮಹತ್ಯೆ ತಡೆಗಟ್ಟಬಹುದಿತ್ತು. ಆದರೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಲೇ ಅನ್ನದಾತರ ಆತ್ಮಹತ್ಯೆಯಾಗುತ್ತಿದೆ ಎಂದು ಕಿಡಿಕಾರಿದರು.

    ಸಿಎಂ ಕುಮಾರಸ್ವಾಮಿಯವರು ಸಾಲಮನ್ನಾ ಮಾಡಿದ್ದಾರೆ, ಆದರೆ ಅಧಿಕಾರಿಗಳು ಸಾಲಮನ್ನಾ ಜಾರಿ ಮಾಡಲು ವಿಳಂಬ ಮಾಡುತ್ತಿದ್ದಾರೆ. ಮಂಡ್ಯ ರೈತನ ಆತ್ಮಹತ್ಯೆ ವಿಚಾರದಲ್ಲಿ ತೋಟಗಾರಿಕೆ ಸಚಿವ ಮನಗೂಳಿ ನೀಡಿದ ಹೇಳಿಕೆ ಸರಿಯಲ್ಲ. ತೋಟಗಾರಿಕೆ ಸಚಿವರ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ ನೀಡಬೇಕು. ರೈತರ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಶನಿವಾರ ಮಂಡ್ಯ ಘಟನೆ ಬಗ್ಗೆ ಟಿವಿಯಲ್ಲೂ ನೋಡುತ್ತಿದ್ದೆ, ಆದರೆ ಘಟನೆ ನೋಡಿದ ನಂತರ ಊಟ ಮಾಡಲಾಗದೇ ಟಿವಿ ಆಫ್ ಮಾಡಿ ಮಲಗಿಬಿಟ್ಟೆ ಎಂದು ಬೇಸರ ವ್ಯಕ್ತಪಡಿಸಿದರು.  ಇದನ್ನೂ ಓದಿ: ನಮ್ಮ ಶವಗಳನ್ನು ಕಾರ್ಪೊರೇಶನ್ ನಲ್ಲಿ ಬಿಸಾಕಿ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

    ಕ್ಷೇತ್ರದ ಜನತೆಗೆ ನಾನು ಮಂತ್ರಿಯಾಗಬೇಕೆನ್ನುವ ಆಸೆ ಬಹಳ ಇತ್ತು. ಆದರೆ ಈಗ ವಿಧಾನ ಪರಿಷತ್ ಸಭಾಪತಿಯಾಗಿದ್ದೇನೆ. ನಾನೂ ಅಲ್ಲಿಯೂ ಸಾಕಾಗಿದ್ದೇನೆ, ಇಲ್ಲಿಯೂ ಸಾಕಾಗಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದರು. ಇದನ್ನೂ ಓದಿ: ತಾಳ್ಮೆಯಿಂದ ಇರುವಂತೆ ಹೇಳಿದ್ದೆ, ಆದ್ರೆ ದುಡುಕಿನ ನಿರ್ಧಾರ – ಮಂಡ್ಯ ರೈತನ ಆತ್ಮಹತ್ಯೆ ಬಗ್ಗೆ ಸಿಎಂ ವಿಷಾದ

    ಅಧಿಕಾರಿಗಳು ಸಿಎಂ ಮಾತನ್ನು ಕೇಳ್ತಿಲ್ಲ ಎಂಬ ಬಸವರಾಜ ಹೊರಟ್ಟಿ ಅವರ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಸೆಕ್ಷನ್ ನಲ್ಲಿ ಬರೆಯಿರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಸ್ವೀಟ್ ಕೊಡಲು ಹೋಗಿದ್ದ ಎಂ.ಸಿ ವೇಣುಗೋಪಾಲ್ ಮೇಲೆ ಗುಂಡೂರಾವ್ ಗರಂ

    ಸ್ವೀಟ್ ಕೊಡಲು ಹೋಗಿದ್ದ ಎಂ.ಸಿ ವೇಣುಗೋಪಾಲ್ ಮೇಲೆ ಗುಂಡೂರಾವ್ ಗರಂ

    ಬೆಂಗಳೂರು: ಕೂಸು ಹುಟ್ಟುವ ಮೊದಲೇ ಕುಲಾವಿ ಏಕೆ ಅಂತ ಸ್ವೀಟ್ ಕೊಡಲು ಹೋದವ ಎಂ.ಸಿ ವೇಣುಗೋಪಾಲ್ ಮೇಲೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿಟ್ಟಾಗಿದ್ದಾರೆ.

    ವಿಧಾನಪರಿಷತ್ ನಾಮನಿರ್ದೇಶನ ಆಗುವ ಖುಷಿಯಲ್ಲಿ ವೇಣುಗೋಪಾಲ್ ಅವರು ಗುಂಡೂರಾವ್ ಅವರಿಗೆ ಸ್ವೀಟ್ ನೀಡಲು ಹೋಗಿದ್ದ ಸಂದರ್ಭದಲ್ಲಿ ಅವರು ಗರಂ ಆಗಿದ್ದಾರೆ. ಹೀಗಾಗಿ ಸ್ವೀಟ್ ಕೊಟ್ಟು ಸಂಭ್ರಮಿಸಲು ಹೋದ ವೇಣುಗೋಪಾಲ್ ಅವರಿಗೆ ನಿರಾಶೆ ಕಾದಿದೆ.


    ವಿಧಾನ ಪರಿಷತ್‍ಗೆ ನಾಮನಿರ್ದೇಶನಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಸುಳಿವು ನೀಡಿತ್ತು. ಆಕಾಂಕ್ಷಿ ಆಗಿರುವ ಎಂ.ಸಿ ವೇಣುಗೋಪಾಲ್ ಹೆಸರು ಅಂತಿಮ ಅನ್ನೋ ಸುದ್ದಿ ಕೇಳಿಬಂದಿತ್ತು. ಇದೇ ಖುಷಿಯಲ್ಲಿ ಎಂ.ಸಿ.ವೇಣುಗೋಪಾಲ್ ಅವರು ಗುಂಡೂರಾವ್ ಅವರಿಗೆ ಸಿಹಿ ನೀಡಲು ಹೋಗಿದ್ದರು. ಈ ವೇಳೆ ಗುಂಡೂರಾವ್ ಸಿಡಿಮಿಡಿಗೊಂಡಿದ್ದಾರಂತೆ.

    ಈಗಲೇ ನೀವು ಸ್ವೀಟ್ ಕೊಟ್ಕೊಂಡು ಓಡಾಡಿ. ಅಮೇಲೆ ಹೆಚ್ಚು ಕಮ್ಮಿ ಆದ್ರೆ ಏನ್ಮಾಡ್ತೀರಿ. ಈಗಾಗಲೇ ಪಕ್ಷದೊಳಗೆ ಸಾಕಷ್ಟು ಅಸಮಾಧಾನಗಳು ಇವೆ. ಇದು ಇನ್ನಷ್ಟು ಹೆಚ್ಚಾಗಬೇಕಾ? ಎಐಸಿಸಿಯಿಂದ ಹೆಸರು ಅಂತಿಮ ಆಗುವ ತನಕ ಸುಮ್ಮನೆ ಇರಿ. ಸ್ವೀಟ್ ಹಂಚಬೇಡಿ ಅಂತ ಸಿಟ್ಟಿನಿಂದಲೇ ಗುಂಡೂರಾವ್ ಅವರು ವೇಣುಗೋಪಾಲ್‍ಗೆ ಸಲಹೆ ನಿಡಿದ್ದಾರೆ ಅಂತ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಎಂ.ಸಿ.ವೇಣುಗೋಪಾಲ್ ಅವರು ಡಿಸಿಎಂ ಜಿ.ಪರಮೇಶ್ವರ್ ಅವರ ಪರಮಾಪ್ತರಾಗಿದ್ದು, 2013ರಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪರಾಭವಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv