Tag: ವಿದ್ಯುತ್ ದರ ಏರಿಕೆ

  • ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 22ಕ್ಕೆ ಕರ್ನಾಟಕ ಬಂದ್‌ಗೆ ಕರೆ

    ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 22ಕ್ಕೆ ಕರ್ನಾಟಕ ಬಂದ್‌ಗೆ ಕರೆ

    ಬೆಂಗಳೂರು: ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 22ಕ್ಕೆ ಕರ್ನಾಟಕ ಬಂದ್‌ಗೆ (Karnataka Bandh) ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೊ (KCC&I) ಕರೆ ನೀಡಿದೆ.

    ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆ ಜೂನ್ 22ರಂದು ರಾಜ್ಯಾದ್ಯಂತ ಕೈಗಾರಿಕೆಗಳು ಬಂದ್ ಇರಲಿವೆ. ಕೆಸಿಸಿ&ಐ ಹಾಗೂ ಇತರ ಎಲ್ಲಾ ಜಿಲ್ಲಾ ವಾಣಿಜ್ಯ ಮಂಡಳಿಯಿಂದ ಬಂದ್‌ಗೆ ಕರೆ ನೀಡಿಲಾಗಿದೆ. ಹೀಗಾಗಿ ಎಲ್ಲಾ ವ್ಯಾಪಾರ ಹಾಗೂ ಕೈಗಾರಿಕೆಗಳನ್ನು ಇಂಡಸ್ಟ್ರಿಗಳು ಸ್ತಬ್ಧಗೊಳಿಸಲಿವೆ. ಬಂದ್‌ಗೆ 25ಕ್ಕೂ ಹೆಚ್ಚು ಜಿಲ್ಲಾ ಚೇಂಬರ್‌ಗಳಿಂದ ಬೆಂಬಲ ದೊರಕಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಕೆಸಿಸಿ&ಐ, ಎಸ್ಕಾಂನ ವಿದ್ಯುತ್ ದರ ಅಸಹಜ ಬೆಲೆ ಏರಿಕೆಯನ್ನು ವಿರೋಧಿಸಿ ಬಂದ್‌ಗೆ ಕರೆ ನೀಡಲಾಗಿದೆ. ಕಳೆದ 8 ದಿನಗಳಿಂದ ವಿದ್ಯುತ್ ಶುಲ್ಕ ಹೆಚ್ಚಳದ ಪರಿಣಾಮದ ಗಂಭೀರತೆಯನ್ನು ಸರ್ಕಾರಕ್ಕೆ ತಿಳಿಸುವ ಪ್ರಯತ್ನ ಮಾಡಿದ್ದೇವೆ. ಆದರೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಈ ಬಂದ್‌ಗೆ ಕರೆ ನೀಡಿದ್ದೇವೆ. ಈ ಮೂಲಕವಾದರು ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತದೆ ಎಂದು ಭಾವಿಸಿದ್ದೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಹಂಪಿ ವಿವಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 85 ಲಕ್ಷ ರೂ. ಕರೆಂಟ್ ಬಿಲ್

    ಗದಗ ಜಿಲ್ಲಾ ಚೇಂಬರ್ ವಿಜಯಪುರ, ರಾಣೆಬೆನ್ನೂರು, ರಾಯಚೂರು, ತಾಳಿಕೋಟಿ, ವಿಜಯನಗರ, ಮೈಸೂರು, ದಾವಣಗೆರೆ, ಕೊಪ್ಪಳ, ಬಾಗಲಕೋಟೆ, ಧಾರವಾಡ, ಶಿರಸಿ, ಕಾರವಾರ, ಬೀದರ್, ಶಿವಮೊಗ್ಗ, ಕೋಲಾರ, ಮಂಡ್ಯ, ಚಿಕ್ಕಮಗಳೂರು, ಯಾದಗಿರಿ, ಚಿತ್ರದುರ್ಗ, ಕಲ್ಯಾಣ ಕರ್ನಾಟಕ, ಹಾವೇರಿ, ಹಾಸನ ಹಾಗೂ ಬಳ್ಳಾರಿಯಲ್ಲಿನ ಸಂಘಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಇದನ್ನೂ ಓದಿ: ಗಂಡ ಜೊತೆಗೆ ಬಾರದೇ ನಮಗೆ ಭದ್ರತೆ ಇಲ್ಲ; ಫ್ರೀ ಬಸ್ ಪ್ರಯಾಣ ಯೋಜನೆಗೆ ಮಹಿಳೆ ವಿರೋಧ

  • ವಿದ್ಯುತ್ ದರ ಏರಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ; ಸಿಎಂಗೆ ತನ್ವೀರ್ ಸೇಠ್ ಪತ್ರ

    ವಿದ್ಯುತ್ ದರ ಏರಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ; ಸಿಎಂಗೆ ತನ್ವೀರ್ ಸೇಠ್ ಪತ್ರ

    ಮೈಸೂರು: ವಿದ್ಯುತ್ ದರ ಏರಿಕೆ (Electricity Price Hike) ಮರುಪರಿಶೀಲನೆಗೆ ಒತ್ತಾಯಿಸಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ (Tanveer sait) ಸಿಎಂ ಸಿದ್ದರಾಮಯ್ಯಗೆ (Siddaramaiah) ಪತ್ರ ಬರೆದಿದ್ದಾರೆ.

    ಎರಡು ಪುಟಗಳ ಪತ್ರ ಬರೆದು ವಿದ್ಯುತ್ ದರ ಏರಿಕೆ ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಂಡ ಜಯ ಸಾಧಿಸಿದೆ. ಸರ್ಕಾರ ರಚನೆಯಾದ ದಿನವೇ 5 ಗ್ಯಾರಂಟಿಗಳನ್ನ ಘೋಷಣೆ ಮಾಡಲಾಗಿದೆ. ಅದರಲ್ಲಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ (200 Unit Free Electricity) ನೀಡುವುದು ಪ್ರಮುಖವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಉಚಿತ ವಿದ್ಯುತ್ ಘೋಷಣೆ ಬೆನ್ನಲ್ಲೇ ವ್ಯಾಪಾರಸ್ಥರಿಗೆ ಶಾಕ್ – ದರ ಏರಿಕೆ ಖಂಡಿಸಿ ಅಘೋಷಿತ ಬಂದ್

    ಸೌಲಭ್ಯ ಕೊಟ್ಟು ಕಿತ್ತುಕೊಂಡಂತಾಗಿದೆ:
    ಮುಂದುವರಿದು… ಉಚಿತ ವಿದ್ಯುತ್ ಘೋಷಣೆಗೆ ವ್ಯತಿರಿಕ್ತವೆಂಬಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಯಿಂದ ರಾಜ್ಯದ ಎಲ್ಲಾ ನಿಗಮಗಳಲ್ಲಿ ವಿದ್ಯುತ್ ದರ ಹೆಚ್ಚಿಸಲಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಚೇತರಿಸಿಕೊಳ್ಳದ ಜನಸಾಮಾನ್ಯರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸ್ತುತ ಸರ್ಕಾರ ಘೋಷಿಸಿರುವ 200 ಯೂನಿಟ್ ಉಚಿತ ಸೌಲಭ್ಯ ಜನ ಸಾಮಾನ್ಯರಿಗೆ ನೀಡಿ ಕಿತ್ತುಕೊಂಡಂತಾಗಿದೆ. ವಿದ್ಯುತ್ ದರ ಏರಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ವಿದ್ಯುತ್ ದರ ಏರಿಕೆ ಆದೇಶವನ್ನ ಮರುಪರಿಶೀಲಿಸಿ, ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದ ಕೋರಿದ್ದಾರೆ.

  • ಫಲಿತಾಂಶ ಹೊರಬೀಳುವ ಹೊತ್ತಿನಲ್ಲೇ ರಾಜ್ಯದ ಜನತೆಗೆ ಕರೆಂಟ್‌ ಶಾಕ್ – ವಿದ್ಯುತ್‌ ದರ ಹೆಚ್ಚಳ

    ಫಲಿತಾಂಶ ಹೊರಬೀಳುವ ಹೊತ್ತಿನಲ್ಲೇ ರಾಜ್ಯದ ಜನತೆಗೆ ಕರೆಂಟ್‌ ಶಾಕ್ – ವಿದ್ಯುತ್‌ ದರ ಹೆಚ್ಚಳ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಮತದಾನ ಮುಗಿದಿದ್ದು, ಫಲಿತಾಂಶ ಹೊರಬೀಳುವ ಹೊತ್ತಿನಲ್ಲೇ ರಾಜ್ಯದ ಜನತೆಗೆ ಕರೆಂಟ್‌ ಶಾಕ್‌ ಕೊಟ್ಟಿದೆ. ವಿದ್ಯುತ್‌ ದರ (Electricity Price) ಹೆಚ್ಚಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (Karnataka Electricity Regulatory Commission) ಆದೇಶ ಹೊರಡಿಸಿದೆ.

    ಪ್ರತಿ ಯೂನಿಟ್‌ಗೆ ಸರಾಸರಿ 70 ಪೈಸೆ ದರ ಹೆಚ್ಚಳ ಮಾಡಲಾಗಿದೆ. ಏಪ್ರಿಲ್ 1 ರಿಂದ ಅನ್ವಯ ಆಗುವಂತೆ ವಿದ್ಯುತ್‌ ದರ ಏರಿಸಲಾಗಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ವಿಧಾನಸಭೆ ಚುನಾವಣೆ 2023: ಕಣದಲ್ಲಿದ್ದ ಸಿನಿಮಾ ಸೆಲೆಬ್ರಿಟಿಗಳ ಕನಸು ನನಸಾಗತ್ತಾ?

    ಆರ್ಥಿಕ ವರ್ಷ 2023-24ನೇ ಸಾಲಿಗೆ ಎಲ್ಲಾ ವಿತರಣಾ ಪರವಾನಿಗೆದಾರರ ವ್ಯಾಪ್ತಿಯ ಗ್ರಾಹಕರಿಗೆ ಅನ್ವಯವಾಗುವಂತೆ ವಿದ್ಯುತ್‌ ದರ ಪರಿಷ್ಕರಿಸಲಾಗಿದೆ ಎಂದು ಆಯೋಗ ತಿಳಿಸಿದೆ.

  • ಪ್ರತಿ ಯೂನಿಟ್‍  ವಿದ್ಯುತ್‍ಗೆ 48 ಪೈಸೆ ಹೆಚ್ಚಳ: ನಗರದಲ್ಲಿ ಎಷ್ಟು? ಗ್ರಾಮಾಂತರದಲ್ಲಿ ಎಷ್ಟು? ಇಲ್ಲಿದೆ ಪೂರ್ಣ ಮಾಹಿತಿ

    ಪ್ರತಿ ಯೂನಿಟ್‍ ವಿದ್ಯುತ್‍ಗೆ 48 ಪೈಸೆ ಹೆಚ್ಚಳ: ನಗರದಲ್ಲಿ ಎಷ್ಟು? ಗ್ರಾಮಾಂತರದಲ್ಲಿ ಎಷ್ಟು? ಇಲ್ಲಿದೆ ಪೂರ್ಣ ಮಾಹಿತಿ

    ಬೆಂಗಳೂರು: ಪ್ರತಿ ಯೂನಿಟ್ ವಿದ್ಯುತ್‍ಗೆ 48 ಪೈಸೆ ಹೆಚ್ಚಳಕ್ಕೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‍ಸಿ) ಅನುಮೋದನೆ ನೀಡಿದೆ. ಏಪ್ರಿಲ್ 1 ರಿಂದಲೇ ಪರಿಷ್ಕೃತ  ದರ ಜಾರಿಗೆ ಬರಲಿದೆ ಎಂದು ಕೆಇಆರ್‍ಸಿ ಅಧ್ಯಕ್ಷ ಶಂಕರಲಿಂಗೇಗೌಡ ಹೇಳಿದ್ದಾರೆ.

    ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ನವೆಂಬರ್‍ನಲ್ಲಿ ಯೂನಿಟ್‍ಗೆ 1 ರೂ 48 ಪೈಸೆ ಹೆಚ್ಚಳಕ್ಕೆ ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ 48 ಪೈಸೆ ಹೆಚ್ಚಳ ಮಾಡಿದ್ದೇವೆ ಎಂದು ತಿಳಿಸಿದರು.

    ನಗರ ಪ್ರದೇಶದ ಗೃಹ ಬಳಕೆ
    30 ಯೂನಿಟ್ ವರೆಗೆ 3 ರೂ. ಇತ್ತು ಈಗ ಇದೀಗ 3 ರೂ 25 ಪೈಸೆಗೆ ಏರಿಕೆಯಾಗಿದೆ. 31ರಿಂದ 100 ಯೂನಿಟ್ ವರೆಗೆ 4 ರೂ. 40 ಪೈಸೆಯಿಂದ 4 ರೂ 70ಪೈಸೆಗೆ ಏರಿಕೆಯಾಗಿದೆ. 101 ರಿಂದ 200 ಯೂನಿಟ್ ವರೆಗೆ 5 ರೂ. 90 ಪೈಸೆಯಿಂದ 6 ರೂ. 25ಪೈಸೆಗೆ ಏರಿಕೆಯಾಗಿದ್ದರೆ, 200 ಯೂನಿಟ್ ಮೇಲ್ಪಟ್ಟು 6 ರೂ. 90 ಪೈಸೆಯಿಂದ 7 ರೂ. 30 ಪೈಸೆಗೆ ಏರಿಕೆಯಾಗಿದೆ.

    ಗ್ರಾಮೀಣ ಪ್ರದೇಶದ ಗೃಹ ಬಳಕೆ
    30 ಯೂನಿಟ್ ವರೆಗೆ 2 ರೂ. 90 ಪೈಸೆಯಿಂದ 3 ರೂ. 15 ಪೈಸೆಗೆ ಏರಿಕೆಯಾಗಿದ್ದರೆ, 31ರಿಂದ 100 ಯೂನಿಟ್ ವರೆಗೆ 4 ರೂ. 10 ಪೈಸೆಯಿಂದ 4 ರೂ 40ಪೈಸೆಗೆ ಏರಿಕೆಯಾಗಿದ್ದರೆ, 101ರಿಂದ 200 ಯೂನಿಟ್ ವರೆಗೆ 5 ರೂ. 60 ಪೈಸೆಯಿಂದ 5 ರೂ. 95ಪೈಸೆಗೆ ಏರಿಕೆಯಾಗಿದೆ. 200 ಯೂನಿಟ್ ಮೇಲ್ಪಟ್ಟು 6 ರೂ. 40 ಪೈಸೆಯಿಂದ 6 ರೂ. 80 ಪೈಸೆಗೆ ಏರಿಕೆಯಾಗಿದೆ.

    ಕೈಗಾರಿಕೆ
    ಎಲ್‍ಟಿ ಕೈಗಾರಿಕೆ 10 ಪೈಸೆಯಿಂದ ರಿಂದ 20 ಪೈಸೆಯಾಗಿದೆ. ಮೊದಲ 500 ಯೂನಿಟ್‍ಗೆ 5 ರೂ. 10 ಪೈಸೆಯಿಂದ 5 ರೂ. 25 ಪೈಸೆಗೆ ಏರಿಕೆಯಾಗಿದ್ದರೆ, 500 ಯೂನಿಟ್ ಮೇಲ್ಪಟ್ಟು 6 ರೂ. 30 ಪೈಸೆಯಿಂದ 6 ರೂ 50 ಪೈಸೆಗೆ ಏರಿಕೆಯಾಗಿದೆ.

    ಬೆಸ್ಕಾಂ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಎಚ್‍ಟಿ ಪ್ರತಿ ಯೂನಿಟ್‍ಗೆ 20 ಪೈಸೆಯಿಂದ ರಿಂದ 40 ಪೈಸೆ ಹೆಚ್ಚಳವಾಗಿದ್ದರೆ, ಎಲ್‍ಟಿ ವಾಣಿಜ್ಯ ಬಳಕೆಯ ಪ್ರತಿ ಯೂನಿಟ್‍ಗೆ 35 ಪೈಸೆ ಹೆಚ್ಚಳವಾಗಿದೆ.

    ಬೆಸ್ಕಾಂ ವ್ಯಾಪ್ತಿಯಲ್ಲಿ ನಗರ ಪ್ರದೇಶದ ಕೈಗಾರಿಕಾ ಬಳಕೆಗೆ ಮೊದಲ 500 ಯೂನಿಟ್ ಗೆ 5.10 ರಿಂದ 5.25 ಕ್ಕೆ ಏರಿಕೆಯಾಗಿದೆ. 500 ಯೂನಿಟ್ ಮೀರಿದ ಬಳಕೆಗೆ 6.30 ರಿಂದ 6.50 ಕ್ಕೆ ಏರಿಕೆಯಾಗಿದೆ.

    ಬೆಸ್ಕಾಂ ಹೊರತುಪಡಿಸಿದ ಎಸ್ಕಾಂಗಳಲ್ಲಿ ಮೊದಲ 500 ಯೂನಿಟ್ ಗೆ 4.95 ರೂ.ನಿಂದ 5.10 ರೂ.ಗೆ ಕ್ಕೆ ಏರಿಕೆಯಾಗಿದ್ದರೆ, 500 ರಿಂದ 1000 ಯೂನಿಟ್ ಬಳಕೆಗೆ 5.85 ರೂ. ನಿಂದ ರಿಂದ 6.05 ರೂಪಾಯಿಗೆ ಏರಿಕೆಯಾಗಿದೆ. 1000 ಯೂನಿಟ್ ಮೀರಿದ ಬಳಕೆಗೆ 6.15 ರೂ.ನಿಂದ 6.35 ರೂ.ಗೆ ಏರಿಕೆಯಾಗಿದೆ.

    ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ ಮತ್ತು ಇತರ ನಗರ ಪ್ರದೇಶಗಳಲ್ಲಿ ಬೃಹತ್ ಕೈಗಾರಿಕೆ ಬಳಕೆಗೆ 20 ರಿಂದ 40 ಪೈಸೆ ಏರಿಕೆಯಾಗಿದೆ. ಮೊದಲ ಒಂದು ಲಕ್ಷ ಯೂನಿಟ್ ಗೆ 6.25 ರಿಂದ 6.65 ಕ್ಕೆ ಏರಿಕೆಯಾಗಿದ್ದರೆ, ಒಂದು ಲಕ್ಷ ಯೂನಿಟ್ ಮೀರಿದ ಬಳಕೆಗೆ 6.75 ರಿಂದ 6.95 ಕ್ಕೆ ಏರಿಕೆಯಾಗಿದೆ.

    ಕುಡಿಯುವ ನೀರು ಸರಬರಾಜು ಮಾಡುವ ಎಲ್‍ಟಿ ಸ್ಥಾವರಗಳಿಗೂ ಶಾಕ್ ಸಿಕ್ಕಿದ್ದು, ಪ್ರತಿ ಯೂನಿಟ್‍ಗೆ 35 ಪೈಸೆ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಈ ದರ 3 ರೂ. 90 ಪೈಸೆಯಿಂದ 4 ರೂ. 25 ಪೈಸೆಗೆ ಹೆಚ್ಚಳವಾಗಿದೆ.

    ಉಚಿತ ವಿದ್ಯುತ್: ಹತ್ತು ಎಚ್ ಪಿ ವರೆಗಿನ ಕೃಷಿ ಪಂಪ್ ಸೆಟ್ ಗಳಿಗೆ, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಸಂಪರ್ಕಗಳಿಗೆ ಉಚಿತ ವಿದ್ಯುತ್ ಮುಂದವರಿಕೆಯಾಗಿದೆ. ಇದರಿಂದಾಗಿ 26.57 ಲಕ್ಷ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಸಿಗಲಿದೆ.

    ಯಾವ ವರ್ಷ ಎಸ್ಕಾಂಗಳ ಪ್ರಸ್ತಾವನೆ ಎಷ್ಟಿತ್ತು? ಕೆಇಆರ್‍ಸಿ ಎಷ್ಟು ಹೆಚ್ಚಳ ಮಾಡಿತ್ತು?
    2011-12 ರಲ್ಲಿ ಎಸ್ಕಾಂಗಳು 88 ಪೈಸೆ ಹೆಚ್ಚಳಕ್ಕೆ ಕೇಳಿದ್ದರೆ ಕೆಇಆರ್‍ಸಿ 23 ಪೈಸೆ ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು
    2012-13 ರಲ್ಲಿ ಎಸ್ಕಾಂಗಳು 73 ಪೈಸೆ ಹೆಚ್ಚಿಸುವಂತೆ ಕೇಳಿತ್ತು, ಆದರೆ 13 ಪೈಸೆ ಹೆಚ್ಚಳಕ್ಕೆ ಕೆಇಆರ್‍ಸಿ ಅನುಮೋದಿಸಿತ್ತು
    2013-14 ರಲ್ಲಿ 70 ಪೈಸೆ ಹೆಚ್ಚಿಸುವಂತೆ ಕೇಳಿತ್ತು. ಆದ್ರೆ 13 ಪೈಸೆ ಹೆಚ್ಚಳವಾಗಿತ್ತು
    2014-15 ರಲ್ಲಿ ಎಸ್ಕಾಂಗಳು 66 ಪೈಸೆ ಹೆಚ್ಚಿಸುವಂತೆ ಮನವಿ ಮಾಡಿತ್ತು, ಕೆಇಆರ್‍ಸಿ 13 ಪೈಸೆ ಹೆಚ್ಚಳಕ್ಕೆ ಅನುಮೋದನೆ ನೀಡಿತ್ತು
    2015-16 ರಲ್ಲಿ 1.02 ಪೈಸೆ ಹೆಚ್ಚಿಸುವಂತೆ ಪ್ರಸ್ತಾಪ ಮಾಡಿದ್ದರೆ, 30 ಪೈಸೆ ಏರಿಕೆ ಮಾಡಿತ್ತು
    2016-17 ರಲ್ಲಿ ಎಸ್ಕಾಂಗಳು 1.48 ರೂ. ಪೈಸೆ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಿತ್ತು, ಕೆಇಆರ್‍ಸಿ ಈಗ 48 ಪೈಸೆ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.