Tag: ವಿದ್ಯಾ ಸಾಗರ್

  • ಪತಿ ಕಳೆದುಕೊಂಡ ನೋವಿನಲ್ಲೂ ಮೀನಾ ಬಗ್ಗೆ ವದಂತಿ ನಿಂತಿಲ್ಲ : ಬಿಡಿಗಾಸು ಕೊಟ್ಟಿಲ್ಲವಂತೆ ಪತಿ

    ಪತಿ ಕಳೆದುಕೊಂಡ ನೋವಿನಲ್ಲೂ ಮೀನಾ ಬಗ್ಗೆ ವದಂತಿ ನಿಂತಿಲ್ಲ : ಬಿಡಿಗಾಸು ಕೊಟ್ಟಿಲ್ಲವಂತೆ ಪತಿ

    ತ್ತೀಚೆಗಷ್ಟೇ ಪತಿಯನ್ನು ಕಳೆದುಕೊಂಡಿರುವ ನಟಿ ಮೀನಾಗೆ ವದಂತಿಗಳ ಮೇಲೆ ವದಂತಿಗಳು ಕಾಡುತ್ತಿವೆ. ಅವರು ಪತಿಯನ್ನು ಕಳೆದುಕೊಂಡಿದ್ದು ಪಾರಿವಾಳದಿಂದ ಉಂಟಾದ ಸೋಂಕಿನಿಂದ ಅಂತಾಯಿತು. ಕೋವಿಡ್ ಅವರನ್ನು ತುಂಬಾ ಬಾಧಿಸಿತು ಎಂದೂ ಹೇಳಲಾಯಿತು. ಇದೀಗ ಮೀನಾ ಮತ್ತು ದಂಪತಿಯ ಕುರಿತು ಮತ್ತೊಂದು ಸುದ್ದಿ ಹರಿದಾಡುತ್ತಿದೆ. ನೂರಾರು ಕೋಟಿ ಆಸ್ತಿ ಹೊಂದಿದ್ದ ಮೀನಾ ಪತಿ ವಿದ್ಯಾ ಸಾಗರ್ ಹೆಂಡತಿಗಾಗಿ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ ಎಂದು ಹೇಳಲಾಗುತ್ತಿದೆ.

    ತಮಿಳಿನ ಅನೇಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ವಿದ್ಯಾಸಾಗರ್ ಅವರು 250 ಕೋಟಿಗೂ ಅಧಿಕ ಆಸ್ತಿಯನ್ನು ಮಗಳ ಹೆಸರಿನಲ್ಲಿ ವಿಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಲ್ ನಲ್ಲಿ ಮಗಳು ನೀನಿಕಾ ಹೆಸರು ಉಲ್ಲೇಖಿಸಿ, ವಯಸ್ಸಿನ ನಂತರ ಈ ಆಸ್ತಿಯನ್ನು ಮಗಳು ಮತ್ತು ಅವಳ ಪತಿಯು ಹೊಂದತಕ್ಕದ್ದು ಎಂದು ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಆಗಸ್ಟ್ ಮೂರನೇ ವಾರದಲ್ಲಿ ರವಿಚಂದ್ರನ್ ಪುತ್ರನ ಮದುವೆ: ಹಸೆಮಣೆ ಏರಲು ಮನೋರಂಜನ್ ಸಿದ್ಧತೆ

    ಆದರೆ, ಕೆಲವರು ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. ವಿದ್ಯಾ ಸಾಗರ್ ಅವರು ಪತ್ನಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಹಾಗಾಗಿ ಅವರು ಹಾಗೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಲು ಮೀನಾ ಶಕ್ತರಾಗಿಲ್ಲ. ಪತಿಯನ್ನು ಕಳೆದುಕೊಂಡ ನೋವಿನಲ್ಲಿರುವ ಅವರು ಮೊನ್ನೆಯಷ್ಟೇ ನನ್ನ ಖಾಸಗಿ ಬದುಕನ್ನೂ ಗೌರವಿಸಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದರು. ಆದರೂ, ವದಂತಿಗಳೂ ಮಾತ್ರ ಇನ್ನೂ ನಿಂತಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಮೀನಾ ಪತಿ ಸಾವಿಗೆ ಕುರಿತ ಅನುಮಾನಕ್ಕೆ ಸ್ಪಷ್ಟನೆ ನೀಡಿದ ನಟಿ ಖೂಷ್ಬೂ

    ಮೀನಾ ಪತಿ ಸಾವಿಗೆ ಕುರಿತ ಅನುಮಾನಕ್ಕೆ ಸ್ಪಷ್ಟನೆ ನೀಡಿದ ನಟಿ ಖೂಷ್ಬೂ

    ಖ್ಯಾತ ನಟಿ ಮೀನಾ ಪತಿ ವಿದ್ಯಾಸಾಗರ್ ಅವರು ನಿಧನರಾಗಿದ್ದಾರೆ. ನಟಿ ಖೂಷ್ಬೂ ಮೀನಾ ಅವರ ಬೆನ್ನಿಗೆ ನಿಂತಿದ್ದಾರೆ. ಅವರ ಸಾವಿನ ಬೆನ್ನಲ್ಲೇ ಕೊರೊನಾದಿಂದ ಮೃತರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೀನಾ ಪತಿಯ ಸಾವಿನ ಕುರಿತು ನಟಿ ಖೂಷ್ಬೂ ಸ್ಪಷ್ಟನೆ ನೀಡಿದ್ದಾರೆ.

    ಕನ್ನಡ ಮತ್ತು ದಕ್ಷಿಣ ಚಿತ್ರರಂಗದಲ್ಲಿ ಗಮನ ಸೆಳೆದ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಇತ್ತಿಚೆಗೆಷ್ಟೇ ನಿಧನರಾದರು. ಇಡೀ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿರುವ ಈ ಸಮಯದಲ್ಲಿ ಮೀನಾ ಪತಿಯ ಸಾವಿನ ಕುರಿತು ನಾನಾ ವದಂತಿಗಳು ಹರಿದಾಡುತ್ತಿದೆ. ಕೊರೊನಾದಿಂದಲೇ ಮೀನಾ ಪತಿ ಸಾವಾಗಿದೆ ಎಂಬ ಸುದ್ದಿಯ ಬೆನ್ನಲ್ಲೇ ನಟಿ ಖೂಷ್ಬೂ ಮೀನಾ ಪತಿ ಸಾವಿಗೆ ಕೊರೋನಾ ಕಾರಣ ಅಲ್ಲ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಟೆನ್ನಿಸ್ ಕ್ಲಬ್ ಮತ್ತು ಬಾಲಿವುಡ್ ನಟ ಆಮೀರ್ ಖಾನ್ ಫಸ್ಟ್ ಲವ್

    ಕೆಲ ತಿಂಗಳ ಮೀನಾ ಕುಟುಂಬದವರಿಗೆ ಕೊರೋನಾ ತಗುಲಿತ್ತು ಬಳಿಕ ಎಲ್ಲರೂ ಗುಣಮುಖರಾಗಿದ್ದರು. ಇತ್ತೀಚೆಗೆ ಮೀನಾ ಪತಿ ಶ್ವಾಸಕೋಶದ ಸೋಕಿನಿಂದ ಬಳಲುತ್ತಿದ್ದರು. ಬಳಿಕ ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕೊರೋನಾ ಬಳಿಕ ಶ್ವಾಸಕೋಶದ ಸಮಸ್ಯೆಯಿಂದ ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಊಹಾಪೋಹಗಳಿಗೂ ನಟಿ ಖೂಷ್ಬೂ, ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

    ಮಾಧ್ಯಮದವರು ಜವಾಬ್ದಾರಿಯುತವಾಗಿ ಇರಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಮೀನಾ ಪತಿಗೆ ಮೂರು ತಿಂಗಳ ಹಿಂದೆಯೇ ಕೊವೀಡ್ ಆಗಿತ್ತು. ಆದರಿಂದ ಶ್ವಾಸಕೋಶದ ಸ್ಥಿತಿ ಹದಗೆಟ್ಟಿತ್ತು. ಅವರು ಕೊವೀಡ್‌ನಿಂದಲೇ ಮೃರಾಗಿದ್ದಾರೆ ಎಂದು ತಪ್ಪು ಮಾಹಿತಿ ನೀಡುವ ಮೂಲಕ ಭಯ ಹುಟ್ಟುಹಾಕಬೇಡಿ. ನಾವು ಎಚ್ಚರಿಕೆಯಿಂದ ಇರಬೇಕು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸ್ನೇಹಿತೆ ಮೀನಾ ಕುಟುಂಬಕ್ಕೆ ನಟಿ ಖೂಷ್ಬೂ ಬೆನ್ನಿಗೆ ನಿಂತಿದ್ದಾರೆ.

     

    View this post on Instagram

     

    A post shared by Meena Sagar (@meenasagar16)

    ಇದೀಗ ಪತಿ ವಿದ್ಯಾ ಸಾಗರ್ ಸಾವಿನ ಕುರಿತು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಬೇಡಿ ಅಂತಾ ನಟಿ ಮೀನಾ ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಿಕೊಂಡಿದ್ದಾರೆ. ಸಂಕಷ್ಟದ ಸಮಯದಲ್ಲಿ ನೆರವಿಗೆ ನಿಂತವರಿಗೆ ಧನ್ಯವಾದ ತಿಳಿಸಿದ್ದಾರೆ.

    Live Tv

  • ನಟಿ ಮೀನಾ ಪತಿ ವಿದ್ಯಾಸಾಗರ್ ಸಾವಿಗೆ ಪಾರಿವಾಳದ ಹಿಕ್ಕೆ ಕಾರಣವಾಯ್ತಾ?

    ನಟಿ ಮೀನಾ ಪತಿ ವಿದ್ಯಾಸಾಗರ್ ಸಾವಿಗೆ ಪಾರಿವಾಳದ ಹಿಕ್ಕೆ ಕಾರಣವಾಯ್ತಾ?

    ದೀರ್ಘಕಾಲದಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ದಕ್ಷಿಣದ ಹೆಸರಾಂತ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ನಿನ್ನೆಯಷ್ಟೇ ನಿಧನರಾಗಿದ್ದಾರೆ. ಹಲವು ತಿಂಗಳಿನಿಂದ ಶ್ವಾಸಕೋಶ ಸಂಬಂಧಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ವಿದ್ಯಾಸಾಗರ್ ನಿಧನದ ನಂತರ  ಆ ಸಾವಿನ ಕುರಿತು ಹಲವು ರೀತಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಅವರ ಸಾವಿಗೆ ಪಾರಿವಾಳ ಕೂಡ ಕಾರಣ ಎನ್ನಲಾಗುತ್ತಿದೆ.

    ವಿದ್ಯಾ ಸಾಗರ್ ಅವರಿಗೆ ಕೋವಿಡ್ ಆಗಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೂಡ ಪಡೆದಿದ್ದರಂತೆ. ಹುಷಾರಾದ ನಂತರ ಮತ್ತೆ ಅವರಿಗೆ ಜ್ವರ ಮತ್ತಿತರ ಸಮಸ್ಯೆಗಳು ಕಾಣಿಸಿಕೊಂಡಿವೆ. ಆನಂತರ ಶ್ವಾಸಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಅದಕ್ಕೂ ಚಿಕಿತ್ಸೆ ಪಡೆಯುತ್ತಿದ್ದರಂತೆ. ಅಂಗಾಂಗ ದಾನಿಗಳು ಸಿಕ್ಕರೆ, ಈ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತಂತೆ. ಅದಕ್ಕಾಗಿ ಅವರು ಕಾಯುತ್ತಿದ್ದರಂತೆ. ಅಷ್ಟರಲ್ಲಿ ಅವರಿಗೆ ತೀವ್ರ ಶ್ವಾಸಕೋಶದ ತೊಂದರೆ ಆಯಿತಂತೆ. ಅದಕ್ಕೆ ಕಾರಣ ಪಾರಿವಾಳದ ಹಿಕ್ಕೆ ಎನ್ನಲಾಗುತ್ತಿದೆ. ಅವರ ಮನೆ ಸುತ್ತಮುತ್ತಲೂ ಪಾರಿವಾಳಗಳು ಜಾಸ್ತಿ. ಆಹಿಕ್ಕೆ ಯ ವಾಸನೆಯು ಅವರ ಅಲರ್ಜಿಗೆ ಕಾರಣವಾಗಿತ್ತಂತೆ. ಈ ರೀತಿಯ ಸುದ್ದಿಗಳು ಹರಡುತ್ತಿವೆ. ಇದನ್ನೂ ಓದಿ:ಸಾವರ್ಕರ್ ಅವಹೇಳನ : ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಹತ್ಯೆ ಮಾಡುವುದಾಗಿ ಪತ್ರ

    ಪಾರಿವಾಳದ ಹಿಕ್ಕೆ ಯಿಂದ ಬರುತ್ತಿದ್ದ ದುರ್ವಾಸನೆಯನ್ನು ಅವರಿಂದ ತಡೆದುಕೊಳ್ಳಲು ಆಗುತ್ತಿರಲಿಲ್ಲವಂತೆ. ಅದನ್ನು ತುಂಬಾ ಸಲ ಹೇಳಿದ್ದೂ ಉಂಟಂತೆ. ಈ ಹಿಕ್ಕೆಯಿಂದಾಗಿಯೇ ಅವರಿಗೆ ಅಲರ್ಜಿ ಜಾಸ್ತಿ ಆಯಿತಂತೆ. ವಿದ್ಯಾಸಾಗರ್ ಅವರ ಸಾವಿಗೂ ಇದೂ ಒಂದು ಕಾರಣ ಇರಬಹುದು ಎಂದು ವರದಿ ಆಗುತ್ತಿದೆ.

    Live Tv