Tag: ವಿದ್ಯಾಪೀಠ ಶೈಕ್ಷಣಿಕ ಮೇಳ

  • ಪಬ್ಲಿಕ್ ಟಿವಿ `ವಿದ್ಯಾಪೀಠ’ – ಲಕ್ಕಿ ಡಿಪ್‌ನಲ್ಲಿ ಲ್ಯಾಪ್‌ಟಾಪ್‌, ಬೈಸಿಕಲ್ ಪಡೆದ ಅದೃಷ್ಟವಂತ ವಿದ್ಯಾರ್ಥಿಗಳು ಇವರೇ..

    ಪಬ್ಲಿಕ್ ಟಿವಿ `ವಿದ್ಯಾಪೀಠ’ – ಲಕ್ಕಿ ಡಿಪ್‌ನಲ್ಲಿ ಲ್ಯಾಪ್‌ಟಾಪ್‌, ಬೈಸಿಕಲ್ ಪಡೆದ ಅದೃಷ್ಟವಂತ ವಿದ್ಯಾರ್ಥಿಗಳು ಇವರೇ..

    ʻಪಬ್ಲಿಕ್ ಟಿವಿʼ (PUBLiC TV) ಪ್ರಸ್ತುತಿಯ ವಿದ್ಯಾಪೀಠ 8ನೇ ಆವೃತ್ತಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಮೊದಲ ದಿನವೇ ಸಾವಿರಾರು ವಿದ್ಯಾರ್ಥಿಗಳು ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ (Vidhyapeeta Education Expo) ಬಂದು ಮುಂದಿನ ಭವಿಷ್ಯಕ್ಕಾಗಿ ತಮ್ಮ ನೆಚ್ಚಿನ ಕಾಲೇಜುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕಾಲೇಜುಗಳ ಮಾಹಿತಿ ಜೊತೆ ಬಂಪರ್ ಗಿಫ್ಟ್‌ಗಳನ್ನೂ ಬಾಚಿಕೊಂಡರು.

    ಹೌದು. ಜೀನಿ ಪ್ರಾಯೋಜಕತ್ವದಲ್ಲಿ ಪ್ರತಿ ಒಂದು ಗಂಟೆಗೆ ಒಂದು ಬೈಸಿಕಲ್ ಮತ್ತು ಸಪ್ತಗಿರಿ ಎನ್‌ಪಿಎಸ್‌ ವಿಶ್ವವಿದ್ಯಾಲಯದ ಕಡೆಯಿಂದ ಎರಡು ದಿನಗಳಲ್ಲಿ 3 ಲ್ಯಾಪ್‌ಟಾಪ್ ಬಂಪರ್ ಗಿಫ್ಟ್ ಕೊಡಲಾಗ್ತಿದೆ. ಮೊದಲ ದಿನ 4 ವಿದ್ಯಾರ್ಥಿಗಳು ಬಂಪರ್ ಬೈಸಿಕಲ್ ಪಡೆದ್ರೆ, ಇಬ್ಬರು ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ ಬಹುಮಾನ ತಮ್ಮದಾಗಿಸಿಕೊಂಡರು. ಚಿಕ್ಕಬಳ್ಳಾಪುರದ ಪ್ರಣವ್ ಯಾದವ್, ವಿದ್ಯಾರ್ಥಿನಿ ಮಧು ಶ್ರೀ ಲ್ಯಾಪ್‌ಟಾಪ್‌ ಗೆದ್ದರೆ, ಹರ್ಷ, ಹೇಮಂತ್, ವರ್ಷಾ, ಮಿಥಿನ್ ಎಂಬ ವಿದ್ಯಾರ್ಥಿಗಳು ಬೈಸಿಕಲ್ ಪಡೆದ ಅದೃಷ್ಟವಂತರಾದ್ರು. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠ: ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್

    ಇದೇ ವೇಳೆ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ತಾಯಂದಿರು, ತಂದೆಯರಿಗೂ ಫನ್ ಗೇಮ್ ಆಡಿಸಲಾಯ್ತು. ಫನ್ ಗೇಮ್ ನಲ್ಲಿ ಪೋಷಕರು, ವಿದ್ಯಾರ್ಥಿಗಳು ಸಂತೋಷದಿಂದ ಭಾಗವಹಿಸಿ ವಿಶೇಷ ಬಹುಮಾನವನ್ನು ಗೆದ್ದರು. ಇದನ್ನೂ ಓದಿ: ಪಬ್ಲಿಕ್‌ ಟಿವಿಯ ‘ವಿದ್ಯಾಪೀಠ’ ಶೈಕ್ಷಣಿಕ ಮೇಳಕ್ಕೆ ಅದ್ದೂರಿ ಚಾಲನೆ

    ಇನ್ನೂ `ಪಬ್ಲಿಕ್ ಟಿವಿ’ ಹೆಮ್ಮೆಯ ಪ್ರಸ್ತುತಿ ವಿದ್ಯಾಪೀಠ 8ನೇ ಆವೃತಿ ಭರ್ಜರಿಯಾಗಿ ಪ್ರಾರಂಭವಾಗಿದೆ. ಮೊದಲ ದಿನವೇ ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು 4.5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಪೀಠಕ್ಕೆ ಆಗಮಿಸಿ ಜ್ಞಾನಾರ್ಜನೆ ಪಡೆದುಕೊಂಡರು. 120ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಬಂದು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ದಾರಿ ದೀಪವಾದವು. ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಎಕ್ಸ್‌ಪೋಗೆ ಆಗಮಿಸಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: AIಯೇ ಅಂತಿಮ ಅಲ್ಲ: ಹೆಚ್‌.ಆರ್‌.ರಂಗನಾಥ್‌

  • ಇಂದಿನಿಂದ `ಪಬ್ಲಿಕ್ ಟಿವಿ ವಿದ್ಯಾಪೀಠʼ – ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ತಪ್ಪದೇ ಬನ್ನಿ!

    ಇಂದಿನಿಂದ `ಪಬ್ಲಿಕ್ ಟಿವಿ ವಿದ್ಯಾಪೀಠʼ – ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ತಪ್ಪದೇ ಬನ್ನಿ!

    ಇದು ಪಿಯುಸಿ ವಿದ್ಯಾರ್ಥಿಗಳ ಜೀವನದ ಅತೀಮುಖ್ಯ ಘಟ್ಟ. ಈಗಾಗಲೇ ಪಿಯುಸಿ ಫಲಿತಾಂಶ ಬಂದಿದೆ. ಪಿಯು ನಂತರ ಮುಂದೇನು ಓದ್ಬೇಕು..? ಯಾವ ಕೋರ್ಸ್ ತಗೋಬೇಕು…? ಯಾವ ಕಾಲೇಜ್ ಬೆಸ್ಟ್..? ಇಂತಹ ಹತ್ತು ಹಲವು ಪ್ರಶ್ನೆಗಳು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಕಾಡ್ತಿರುತ್ತೆ. ಈ ಪ್ರಶ್ನೆಗಳಿಗೆ ಉತ್ತರ ನೀಡಲಿದೆ ʻಪಬ್ಲಿಕ್ ಟಿವಿʼಯ ವಿದ್ಯಾಪೀಠ (Public TV Vidhyapeeta).

    ಇಂದಿನಿಂದ 2 ದಿನಗಳ ಕಾಲ ಅಂದರೆ ಶನಿವಾರ ಮತ್ತು ಭಾನುವಾರ 2 ದಿನಗಳ ಕಾಲ ʻಪಬ್ಲಿಕ್ ಟಿವಿʼ (Public TV) ವತಿಯಿಂದ ಮೆಗಾ ಶೈಕ್ಷಣಿಕ ಮೇಳವನ್ನ ಬೆಂಗಳೂರಿನ ಅರಮನೆ ಮೈದಾನದಲ್ಲಿ (Bengaluru Palace Grounds) ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಈ ಶೈಕ್ಷಣಿಕ ಮೇಳ ನಡೆಯಲಿದ್ದು, ರಾಜ್ಯದ 120ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗಿಯಾಗಲಿರುವ ಕರ್ನಾಟಕದ ಅತೀದೊಡ್ಡ ಶೈಕ್ಷಣಿಕ ಮೇಳ ಇದಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶ ಇರಲಿದೆ. ಈ ಶೈಕ್ಷಣಿಕ ಮೇಳದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಕೆಸೆಟ್, ನೀಟ್ ಮತ್ತು ಕಾಮೆಡ್ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‍ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ.

    2 ದಿನವೂ ಮೇಳದಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡ ವಿದ್ಯಾರ್ಥಿಗಳಿಗೆ 1 ಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ಬೈಸಿಕಲ್ ಗಿಫ್ಟ್ ಸಿಗಲಿದೆ. ಜೊತೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಅಂಕಪಟ್ಟಿಯ ಫೋಟೋಕಾಪಿ ತಂದು ನೋಂದಣಿ ಮಾಡಿದರೆ ಸಪ್ರೈಸ್ ಗಿಫ್ಟ್ ಸಹ ಸಿಗಲಿದೆ.

    ಯಾವೆಲ್ಲಾ ಕಾಲೇಜುಗಳು ಆಗಮಿಸುತ್ತಿವೆ?
    ಪ್ಲಾಟಿನಂ ಆಯೋಜಕರು:
    ಗಾರ್ಡನ್‌ ಸಿಟಿ ಯೂನಿರ್ವಸಿಟಿ, ಸಿಎಂಆರ್‌ ಯೂನಿವರ್ಸಿಟಿ, ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಸಪ್ತಗಿರಿ ಎನ್‌ಪಿಎಸ್‌ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ.

    ಗೋಲ್ಡ್‌ ಪ್ರಾಯೋಜಕರು:
    ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಎಂಜಿನಿಯರಿಂಗ್‌, ಎಸ್‌ಜೆಬಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ದಿ ಆಕ್ಸ್‌ಫರ್ಡ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಟ್,‌ ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌, ನಾಗಾರ್ಜುನ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಎಎಂಸಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌.

    ಕ್ರಿಯೇಟಿವ್‌ ಸ್ಟಾಲ್‌ ಪಾರ್ಟ್ನರ್ಸ್‌:
    ರಾಮಯ್ಯ ಇನ್‌ಸ್ಟಿಟಯೂಟ್‌ ಆಫ್‌ ಟೆಕ್ನಾಲಜಿ, ಎಸ್‌ವಿಸಿಇ (ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್) ಬೆಂಗಳೂರು, ಪ್ರೆಸಿಡೆನ್ಸಿ ಯೂನಿರ್ವಸಿಟಿ, ನ್ಯೂ ಹಾರಿಜನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಕೆಎಲ್‌ಇ ಟೆಕ್ನಾಲಜಿ ಯೂನಿವರ್ಸಿಟಿ, ICFAI ಫೌಂಡೇಶನ್‌ ಫಾರ್‌ ಹೈಯರ್‌ ಎಜುಕೇಶನ್‌, ಪಾರುಲ್‌ ಯೂನಿವರ್ಸಿಟಿ, ಪ್ಲಾನ್‌ ಎಡು, ಫ್ಯೂಚರ್‌ ಮೆಡಿಕೊ.

    ಸಿಲ್ವರ್‌ ಪ್ರಯೋಜಕರು:
    ಚಾಣಕ್ಯ ಯೂನಿವರ್ಸಿಟಿ, ಪಿಇಎಸ್‌ ಯೂನಿವರ್ಸಿಟಿ, ದಯಾನಂದ ಸಾಗರ ಯೂನಿವರ್ಸಿಟಿ, ಬೃಂದಾವನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌, ಜಿಎಂ ಯೂನಿವರ್ಸಿಟಿ, ಎಐಎಂಎಸ್‌ ಇನ್‌ಸ್ಟಿಟ್ಯೂಟಸ್‌, ಎಬಿಬಿಎಸ್‌ ಬೆಂಗಳೂರು ಬಿ ಸ್ಕೂಲ್‌, ಕೃಪಾನಿಧಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌, ಎಸ್‌ಇಎ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್, ಸಿಟಿ ಕಾಲೇಜ್‌.

    ಪಾನೀಯ ಪ್ರಾಯೋಜಕರು
    ಸ್ಪ್ರಿಂಗ್ಸ್‌

    ಬ್ಯಾಂಕಿಂಗ್‌ ಪಾರ್ಟ್ನರ್‌:
    ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

    ಬೆವರೇಜ್‌ ಪಾರ್ಟ್‌ನರ್‌
    ಬಾಯರ್ಸ್‌ ಕಾಫಿ

    ಗಿಫ್ಟ್‌ ಸ್ಪಾನ್ಸರ್‌
    ಜೀನಿ ಸ್ಲಿಮ್‌, ವೇಯ್ಟ್‌ ಲಾಸ್‌ & ಎನರ್ಜಿ ಬೂಸ್ಟರ್‌.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99000 60815/ 99000 60891 

  • `ಪಬ್ಲಿಕ್ ಟಿವಿ’ ವಿದ್ಯಾಪೀಠಕ್ಕೆ ಬನ್ನಿ – ಗಂಟೆಗೊಂದು ಬೈಸಿಕಲ್ ಗೆಲ್ಲಿ!

    `ಪಬ್ಲಿಕ್ ಟಿವಿ’ ವಿದ್ಯಾಪೀಠಕ್ಕೆ ಬನ್ನಿ – ಗಂಟೆಗೊಂದು ಬೈಸಿಕಲ್ ಗೆಲ್ಲಿ!

    ಬೆಂಗಳೂರು: ಇದೇ ಶನಿವಾರ ಹಾಗೂ ಭಾನುವಾರ ಬೆಂಗಳೂರಿನ (Bengaluru) ಅರಮನೆ ಮೈದಾನದ (Palace Ground) ಗಾಯತ್ರಿ ವಿಹಾರದಲ್ಲಿ `ಪಬ್ಲಿಕ್ ಟಿವಿ’ ವತಿಯಿಂದ 8ನೇ ಎಜುಕೇಷನ್ ಎಕ್ಸ್‌ಪೋ `ವಿದ್ಯಾಪೀಠ’ ಆಯೋಜಿಸಲಾಗಿದೆ. ಮೊದಲ ದಿನ ಬೆಳಗ್ಗೆ 9 ರಿಂದ 10:30ರ ವರೆಗೆ ನೋಂದಣಿ ಮಾಡಿಸಿಕೊಂಡ ವಿದ್ಯಾರ್ಥಿಗಳು ಲಕ್ಕಿ ಡಿಪ್ ಮೂಲಕ ಪ್ರತಿ ಗಂಟೆಗೊಂದು ಬೈಸಿಕಲ್ ಗೆಲ್ಲುವ ಬಂಪರ್ ಅವಕಾಶ ನಿಮ್ಮದಾಗಲಿದೆ.

    ಪಿಯುಸಿ ವಿದ್ಯಾರ್ಥಿಗಳ ಜೀವನದ ಅತೀ ಮುಖ್ಯ ಘಟ್ಟ. ಈಗಾಗಲೇ ಪಿಯುಸಿ ಫಲಿತಾಂಶ ಬಂದಿದ್ದು, ಪಿಯು ನಂತರ ಮುಂದೇನು ಓದಬೇಕು? ಯಾವ ಕೋರ್ಸ್ ತಗೋಬೇಕು? ಯಾವ ಕಾಲೇಜ್ ಬೆಸ್ಟ್? ಇಂತಹ ಹತ್ತು ಹಲವು ಪ್ರಶ್ನೆಗಳು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಕಾಡುತ್ತಿರುತ್ತವೆ. ಈ ಎಲ್ಲಾ ಪ್ರಶ್ನೆಗಳ ಉತ್ತರಕ್ಕಾಗಿ `ಪಬ್ಲಿಕ್ ಟಿವಿ’ ಆಯೋಜಿಸಿರುವ 8ನೇ ಎಜುಕೇಷನ್ ಎಕ್ಸ್‌ಪೋ `ವಿದ್ಯಾಪೀಠ’ಕ್ಕೆ ಭೇಟಿ ನೀಡಿ.

    ಈ ಎಜ್ಯುಕೇಷನ್ ಎಕ್ಸ್‌ಪೋದಲ್ಲಿ ರಾಜ್ಯದ 120ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗಿಯಾಗಲಿದ್ದು, ಕರ್ನಾಟಕದ ಅತೀ ದೊಡ್ಡ ಶೈಕ್ಷಣಿಕ ಮೇಳ ಇದಾಗಿದೆ. ಸದ್ಯ ಈ ಎಕ್ಸ್ಪೋಗೆ ಅರಮನೆ ಮೈದಾನದಲ್ಲಿ ಭರದಿಂದ ಸಿದ್ಧತೆಗಳು ನಡೆದಿವೆ. ಇಲ್ಲಿ ಶಿಕ್ಷಣ ತಜ್ಞರು, ಕೌನ್ಸಿಲರ್ಸ್‌ಗಳು ಸಹ ಇರಲಿದ್ದು, ವಿದ್ಯಾರ್ಥಿಗಳ ಪ್ರತಿ ಪ್ರಶ್ನೆಗೂ ಎಕ್ಸ್‌ಪರ್ಟ್‌ಗಳು ಉತ್ತರ ಕೊಡುತ್ತಾರೆ. ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್, ಕಾಮೆಡ್ ಕೆ, ವೃತ್ತಿಪರ ಕೋರ್ಸ್ ಬಗ್ಗೆ ಮಾಹಿತಿ ಇಲ್ಲಿ ದೊರೆಯಲಿದೆ. ಇದರ ಜೊತೆಗೆ ಎಐ, ಸೈಬರ್ ಸೆಕ್ಯುರಿಟಿ ಮೊದಲಾದ ಹೊಸ ಕೋರ್ಸ್‌ಗಳ ಬಗ್ಗೆಯೂ ಮಾಹಿತಿ ದೊರೆಯಲಿದೆ.ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠ – ಮೊದಲ ದಿನವೇ ಬನ್ನಿ ಲ್ಯಾಪ್‌ಟಾಪ್‌ ಗೆಲ್ಲಿ!

    ಇಲ್ಲಿ ನೋಂದಣಿ ಮಾಡಿಸಿಕೊಂಡ ವಿದ್ಯಾರ್ಥಿಗಳು ಲಕ್ಕಿ ಡಿಪ್ ಮೂಲಕ ಮೊದಲ ದಿನ ಸ್ಪಾಟ್‌ನಲ್ಲಿ ಲ್ಯಾಪ್ ಟಾಪ್ ಹಾಗೂ ಎರಡನೇ ದಿನ ಗಂಟೆಗೊಂದು ಬೈಸಿಕಲ್ ತಮ್ಮದಾಗಿಸಿಕೊಳ್ಳುವ ಭರ್ಜರಿ ಅವಕಾಶ ನಿಮಗಾಗಿ ಕಾಯುತ್ತಿದೆ. ಇದರ ಜೊತೆಗೆ ವಿದ್ಯಾರ್ಥಿಗಳು 30 ಸೆಕೆಂಡ್‌ಗಳ ಕಾಲ ಅವರ ಯಾವುದೇ ಕಲಾ ಪ್ರತಿಭೆ ಪ್ರದರ್ಶಿಸಿದಲ್ಲಿ ಆಕರ್ಷಕ ಉಡುಗೊರೆ ಸಿಗಲಿದೆ. ಹಾಗೆಯೇ ಸ್ಲೋ ಸೈಕಲ್ ರೇಸ್ ಸಹ ನಡೆಯಲಿದ್ದು, ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ಸಿಗಲಿದೆ.

    ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಈ ಶೈಕ್ಷಣಿಕ ಮೇಳ ನಡೆಯಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶ ಇರಲಿದೆ. ಜೊತೆಗೆ 2 ದಿನವೂ ಮೇಳದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಅಂಕಪಟ್ಟಿಯ ಫೋಟೋಕಾಪಿ ತಂದು ನೋಂದಣಿ ಮಾಡಿದರೆ ಸರ್ಪ್ರೈಸ್ ಗಿಫ್ಟ್ ಸಹ ಸಿಗಲಿದೆ.

    ಯಾವೆಲ್ಲಾ ಕಾಲೇಜುಗಳು ಆಗಮಿಸುತ್ತಿವೆ?
    ಪ್ಲಾಟಿನಂ ಆಯೋಜಕರು:
    ಗಾರ್ಡನ್‌ ಸಿಟಿ ಯೂನಿರ್ವಸಿಟಿ, ಸಿಎಂಆರ್‌ ಯೂನಿವರ್ಸಿಟಿ, ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಸಪ್ತಗಿರಿ ಎನ್‌ಪಿಎಸ್‌ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ.

    ಗೋಲ್ಡ್‌ ಪ್ರಾಯೋಜಕರು:
    ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಎಂಜಿನಿಯರಿಂಗ್‌, ಎಸ್‌ಜೆಬಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ದಿ ಆಕ್ಸ್‌ಫರ್ಡ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಟ್,‌ ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌, ನಾಗಾರ್ಜುನ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಎಎಂಸಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌.

    ಕ್ರಿಯೇಟಿವ್‌ ಸ್ಟಾಲ್‌ ಪಾರ್ಟ್ನರ್ಸ್‌:
    ರಾಮಯ್ಯ ಇನ್‌ಸ್ಟಿಟಯೂಟ್‌ ಆಫ್‌ ಟೆಕ್ನಾಲಜಿ, ಎಸ್‌ವಿಸಿಇ (ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್) ಬೆಂಗಳೂರು, ಪ್ರೆಸಿಡೆನ್ಸಿ ಯೂನಿರ್ವಸಿಟಿ, ನ್ಯೂ ಹಾರಿಜನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಕೆಎಲ್‌ಇ ಟೆಕ್ನಾಲಜಿ ಯೂನಿವರ್ಸಿಟಿ, ICFAI ಫೌಂಡೇಶನ್‌ ಫಾರ್‌ ಹೈಯರ್‌ ಎಜುಕೇಶನ್‌, ಪಾರುಲ್‌ ಯೂನಿವರ್ಸಿಟಿ, ಪ್ಲಾನ್‌ ಎಡು, ಫ್ಯೂಚರ್‌ ಮೆಡಿಕೊ.

    ಸಿಲ್ವರ್‌ ಪ್ರಯೋಜಕರು:
    ಚಾಣಕ್ಯ ಯೂನಿವರ್ಸಿಟಿ, ಪಿಇಎಸ್‌ ಯೂನಿವರ್ಸಿಟಿ, ದಯಾನಂದ ಸಾಗರ ಯೂನಿವರ್ಸಿಟಿ, ಬೃಂದಾವನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌, ಜಿಎಂ ಯೂನಿವರ್ಸಿಟಿ, ಎಐಎಂಎಸ್‌ ಇನ್‌ಸ್ಟಿಟ್ಯೂಟಸ್‌, ಎಬಿಬಿಎಸ್‌ ಬೆಂಗಳೂರು ಬಿ ಸ್ಕೂಲ್‌, ಕೃಪಾನಿಧಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌, ಎಸ್‌ಇಎ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್, ಸಿಟಿ ಕಾಲೇಜ್‌.ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠ – ಸ್ಪಾಟ್‌ನಲ್ಲೇ ಲ್ಯಾಪ್‌ಟಾಪ್ ಗೆಲ್ಲಿ

    ಪಾನೀಯ ಪ್ರಾಯೋಜಕರು
    ಸ್ಪ್ರಿಂಗ್ಸ್‌

    ಬ್ಯಾಂಕಿಂಗ್‌ ಪಾರ್ಟ್ನರ್‌:
    ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

    ಬೆವರೇಜ್‌ ಪಾರ್ಟ್‌ನರ್‌
    ಬಾಯರ್ಸ್‌ ಕಾಫಿ

    ಗಿಫ್ಟ್‌ ಸ್ಪಾನ್ಸರ್‌
    ಜೀನಿ ಸ್ಲಿಮ್‌, ವೇಯ್ಟ್‌ ಲಾಸ್‌ & ಎನರ್ಜಿ ಬೂಸ್ಟರ್‌.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99000 60815/ 99000 60891

  • ಪಬ್ಲಿಕ್ ಟಿವಿ ವಿದ್ಯಾಪೀಠ – ಮೊದಲ ದಿನವೇ ಬನ್ನಿ ಲ್ಯಾಪ್‌ಟಾಪ್‌ ಗೆಲ್ಲಿ!

    ಪಬ್ಲಿಕ್ ಟಿವಿ ವಿದ್ಯಾಪೀಠ – ಮೊದಲ ದಿನವೇ ಬನ್ನಿ ಲ್ಯಾಪ್‌ಟಾಪ್‌ ಗೆಲ್ಲಿ!

    ಬೆಂಗಳೂರು: ಇದೇ ಶನಿವಾರ ಹಾಗೂ ಭಾನುವಾರ ಬೆಂಗಳೂರಿನ (Bengaluru) ಅರಮನೆ ಮೈದಾನ ಗಾಯತ್ರಿ ವಿಹಾರದಲ್ಲಿ `ಪಬ್ಲಿಕ್ ಟಿವಿ’ ವತಿಯಿಂದ 8ನೇ ಎಜುಕೇಷನ್ ಎಕ್ಸ್‌ಪೋ (Education Expo) `ವಿದ್ಯಾಪೀಠ’ (Vidhyapeeta) ಆಯೋಜಿಸಲಾಗಿದೆ. ಮೊದಲ ದಿನ ಬೆಳಗ್ಗೆ 9 ರಿಂದ 10:30 ರವರೆಗೆ ನೋಂದಣಿ ಮಾಡಿಸಿಕೊಂಡ ಒಬ್ಬ ವಿದ್ಯಾರ್ಥಿಗೆ ಲಕ್ಕಿ ಡಿಪ್ ಮೂಲಕ ಸಮಾರಂಭದ ನಂತರ ಸ್ಪಾಟ್‍ನಲ್ಲೇ ಲ್ಯಾಪ್ ಟಾಪ್ ಗೆಲ್ಲುವ ಅವಕಾಶವಿದೆ.

    ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಈ ಶೈಕ್ಷಣಿಕ ಮೇಳ ನಡೆಯಲಿದ್ದು, ರಾಜ್ಯದ ನಾನಾ ಭಾಗಗಳ 120ಕ್ಕೂ ಹೆಚ್ಚು ಕಾಲೇಜುಗಳು ಭಾಗಿಯಾಗಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶ ಇರಲಿದೆ. ಈ ಶೈಕ್ಷಣಿಕ ಮೇಳದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಕೆಸೆಟ್, ನೀಟ್ ಮತ್ತು ಕಾಮೆಡ್ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‍ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಪೀಠ – ಸ್ಪಾಟ್‌ನಲ್ಲೇ ಲ್ಯಾಪ್‌ಟಾಪ್ ಗೆಲ್ಲಿ

    ಜೊತೆಗೆ 2 ದಿನವೂ ಮೇಳದಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡ ವಿದ್ಯಾರ್ಥಿಗಳಿಗೆ 1 ಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ಬೈಸಿಕಲ್ ಗಿಫ್ಟ್ ಸಿಗಲಿದೆ. ಜೊತೆಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಅಂಕಪಟ್ಟಿಯ ಫೋಟೋಕಾಪಿ ತಂದು ನೋಂದಣಿ ಮಾಡಿದರೆ ಸಪ್ರೈಸ್ ಗಿಫ್ಟ್ ಸಹ ಸಿಗಲಿದೆ.

    ಯಾವೆಲ್ಲಾ ಕಾಲೇಜುಗಳು ಆಗಮಿಸುತ್ತಿವೆ?
    ಪ್ಲಾಟಿನಂ ಆಯೋಜಕರು:
    ಗಾರ್ಡನ್‌ ಸಿಟಿ ಯೂನಿರ್ವಸಿಟಿ, ಸಿಎಂಆರ್‌ ಯೂನಿವರ್ಸಿಟಿ, ರಾಮಯ್ಯ ಯೂನಿವರ್ಸಿಟಿ ಆಫ್‌ ಅಪ್ಲೈಡ್‌ ಸೈನ್ಸಸ್‌, ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಸಪ್ತಗಿರಿ ಎನ್‌ಪಿಎಸ್‌ ಯೂನಿವರ್ಸಿಟಿ, ರೇವಾ ಯೂನಿವರ್ಸಿಟಿ.

    ಗೋಲ್ಡ್‌ ಪ್ರಾಯೋಜಕರು:
    ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಎಂಜಿನಿಯರಿಂಗ್‌, ಎಸ್‌ಜೆಬಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ದಿ ಆಕ್ಸ್‌ಫರ್ಡ್‌ ಎಜುಕೇಷನಲ್‌ ಇನ್‌ಸ್ಟಿಟ್ಯೂಟ್,‌ ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌, ನಾಗಾರ್ಜುನ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಎಎಂಸಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌.

    ಕ್ರಿಯೇಟಿವ್‌ ಸ್ಟಾಲ್‌ ಪಾರ್ಟ್ನರ್ಸ್‌:
    ರಾಮಯ್ಯ ಇನ್‌ಸ್ಟಿಟಯೂಟ್‌ ಆಫ್‌ ಟೆಕ್ನಾಲಜಿ, ಎಸ್‌ವಿಸಿಇ (ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್) ಬೆಂಗಳೂರು, ಪ್ರೆಸಿಡೆನ್ಸಿ ಯೂನಿರ್ವಸಿಟಿ, ನ್ಯೂ ಹಾರಿಜನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌, ಕೆಎಲ್‌ಇ ಟೆಕ್ನಾಲಜಿ ಯೂನಿವರ್ಸಿಟಿ, ICFAI ಫೌಂಡೇಶನ್‌ ಫಾರ್‌ ಹೈಯರ್‌ ಎಜುಕೇಶನ್‌, ಪಾರುಲ್‌ ಯೂನಿವರ್ಸಿಟಿ, ಪ್ಲಾನ್‌ ಎಡು, ಫ್ಯೂಚರ್‌ ಮೆಡಿಕೊ.

    ಸಿಲ್ವರ್‌ ಪ್ರಯೋಜಕರು:
    ಚಾಣಕ್ಯ ಯೂನಿವರ್ಸಿಟಿ, ಪಿಇಎಸ್‌ ಯೂನಿವರ್ಸಿಟಿ, ದಯಾನಂದ ಸಾಗರ ಯೂನಿವರ್ಸಿಟಿ, ಬೃಂದಾವನ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌, ಜಿಎಂ ಯೂನಿವರ್ಸಿಟಿ, ಎಐಎಂಎಸ್‌ ಇನ್‌ಸ್ಟಿಟ್ಯೂಟಸ್‌, ಎಬಿಬಿಎಸ್‌ ಬೆಂಗಳೂರು ಬಿ ಸ್ಕೂಲ್‌, ಕೃಪಾನಿಧಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌, ಎಸ್‌ಇಎ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್, ಸಿಟಿ ಕಾಲೇಜ್‌. ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾಪೀಠದಲ್ಲಿ ಭಾಗಿಯಾಗಲಿವೆ 120ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು

    ಪಾನೀಯ ಪ್ರಾಯೋಜಕರು
    ಸ್ಪ್ರಿಂಗ್ಸ್‌

    ಬ್ಯಾಂಕಿಂಗ್‌ ಪಾರ್ಟ್ನರ್‌:
    ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

    ಬೆವರೇಜ್‌ ಪಾರ್ಟ್‌ನರ್‌
    ಬಾಯರ್ಸ್‌ ಕಾಫಿ

    ಗಿಫ್ಟ್‌ ಸ್ಪಾನ್ಸರ್‌
    ಜೀನಿ ಸ್ಲಿಮ್‌, ವೇಯ್ಟ್‌ ಲಾಸ್‌ & ಎನರ್ಜಿ ಬೂಸ್ಟರ್‌.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 99000 60815/ 99000 60891

  • ಪಬ್ಲಿಕ್ ಟಿವಿ ವಿದ್ಯಾಪೀಠ – ಸ್ಪಾಟ್‌ನಲ್ಲೇ ಲ್ಯಾಪ್‌ಟಾಪ್ ಗೆಲ್ಲಿ

    ಪಬ್ಲಿಕ್ ಟಿವಿ ವಿದ್ಯಾಪೀಠ – ಸ್ಪಾಟ್‌ನಲ್ಲೇ ಲ್ಯಾಪ್‌ಟಾಪ್ ಗೆಲ್ಲಿ

    ಬೆಂಗಳೂರು: ಇದೇ ಶನಿವಾರ ಹಾಗೂ ಭಾನುವಾರ ಪಬ್ಲಿಕ್ ಟಿವಿಯ (PUBLIC TV) ಎಜ್ಯುಕೇಷನ್ ಎಕ್ಸ್‌ಪೋ (Education Expo) ಬೆಂಗಳೂರಿನ (Bengaluru) ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದೆ.

    ಇದು ಪಬ್ಲಿಕ್ ಟಿವಿ ಆಯೋಜಿಸುತ್ತಿರುವ 8ನೇ ಆವೃತ್ತಿಯ ಶೈಕ್ಷಣಿಕ ಮೇಳವಾಗಿದೆ. ಈ ವಿದ್ಯಾಪೀಠದಲ್ಲಿ (Vidhyapeeta) ರಾಜ್ಯದ ನಾನಾ ಭಾಗಗಳ 120ಕ್ಕೂ ಹೆಚ್ಚು ಕಾಲೇಜುಗಳು ಭಾಗಿಯಾಗಲಿದ್ದು, ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ನಡೆಯಲಿದೆ.

    ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಫ್ರೀ ಎಂಟ್ರಿ ಇರಲಿದ್ದು, ಈ ಶೈಕ್ಷಣಿಕ ಮೇಳವೂ ಹಲವು ವಿಶೇಷತೆಗಳನ್ನು ಹೊಂದಿದೆ. ಎಕ್ಸ್‌ಪೋದ ಮೊದಲ ದಿನ ಬೆಳಗ್ಗೆ 9ರಿಂದ 10.30ರವರೆಗೆ ರಿಜಿಸ್ಟ್ರೇಷನ್ ಆದ ಒಬ್ಬ ವಿದ್ಯಾರ್ಥಿಗೆ ಲಕ್ಕಿಡಿಪ್ ಮೂಲಕ ಸಮಾರಂಭದ ನಂತರ ಸ್ಪಾಟ್‌ನಲ್ಲೇ ಲ್ಯಾಪ್‌ಟಾಪ್ ಗೆಲ್ಲುವ ಅವಕಾಶವಿದೆ.

    ಜೊತೆಗೆ ಎರಡು ದಿನವೂ ಮೇಳದಲ್ಲಿ ರಿಜಿಸ್ಟ್ರೇಷನ್ ಮಾಡಿದ ವಿದ್ಯಾರ್ಥಿಗಳಿಗೆ ಒಂದು ಗಂಟೆಗೊಮ್ಮೆ ಲಕ್ಕಿಡಿಪ್ ಮೂಲಕ ಸ್ಪಾಟ್‌ನಲ್ಲೇ ಬೈಸಿಕಲ್ ಬಹುಮಾನವಾಗಿ ಸಿಗಲಿದೆ. ಅಲ್ಲದೇ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 90%ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಅಂಕಪಟ್ಟಿಯ ಫೋಟೋಕಾಪಿ ತಂದು ರಿಜಿಸ್ಟ್ರೇಷನ್ ಮಾಡಿದರೇ ಸಪ್ರೈಸ್ ಗಿಫ್ಟ್ ಸಿಗಲಿದೆ.

    ಈ ಎಕ್ಸ್ಪೋದಲ್ಲಿ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್ ಮತ್ತು ಕಾಮೆಡ್ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದ್ದು, ತಪ್ಪದೇ ಪಬ್ಲಿಕ್ ಟಿವಿ ಎಜ್ಯುಕೇಷನ್ ಎಕ್ಸ್‌ಪೋಗೆ ಭೇಟಿ ನೀಡಿ.

  • ಪಬ್ಲಿಕ್‌ ಟಿವಿ ವಿದ್ಯಾಪೀಠ 7ನೇ ಆವೃತ್ತಿಗೆ ಅದ್ದೂರಿ ತೆರೆ

    ಪಬ್ಲಿಕ್‌ ಟಿವಿ ವಿದ್ಯಾಪೀಠ 7ನೇ ಆವೃತ್ತಿಗೆ ಅದ್ದೂರಿ ತೆರೆ

    – ತಾರೆಯರ ಕಲರವದೊಂದಿಗೆ ಮೆಗಾ ಎಕ್ಸ್‌ಪೋಗೆ ತೆರೆ
    – ಕೊನೆಯ ದಿನವು ಸಾವಿರಾರು ಸಂಖ್ಯೆಯಲ್ಲಿ ಎಕ್ಸ್‌ಪೋಗೆ ಹರಿದು ಬಂತು ವಿದ್ಯಾರ್ಥಿ ಸಮೂಹ

    ಬೆಂಗಳೂರು: ಪಬ್ಲಿಕ್ ಟಿವಿ (PublicTV) ಪ್ರಸ್ತುತಪಡಿಸಿದ ವಿದ್ಯಾಪೀಠ 7ನೇ ಆವೃತ್ತಿ ಎಜುಕೇಶನ್ ಎಕ್ಸ್‌ಪೋಗೆ (Vidhya Peeta Education Expo) ಯಶಸ್ವಿ ತೆರೆ ಬಿದ್ದಿದೆ. ಎರಡನೇ ದಿನ ಕೂಡ ಉತ್ತಮ ಜನ ಬೆಂಬಲ ಸಿಕ್ಕಿದ್ದು, ಎರಡನೇ ದಿನ ಸ್ಟಾರ್ ಕಲರವ ಮೂಲಕ ಕಾರ್ಯಕ್ರಮಕ್ಕೆ ಅದ್ದೂರಿ ತೆರೆ ಬಿದ್ದಿದೆ.

    ಬೆಳಗ್ಗೆ 9 ಗಂಟೆಗೆ ಆರಂಭವಾದ ಎಕ್ಸ್‌ಪೋಗೆ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರ ಬರುವಿಕೆ ಆರಂಭವಾಯಿತು. ಸಮಯ ಕಳೆದು ಬಿಸಿಲು ಏರಿಕೆಯಾದರೂ, ಜನರ ಬರುವಿಕೆ ಮಾತ್ರ ಇಳಿಕೆ ಕಾಣಲೇ ಇಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರು ಸ್ಟಾಲ್‌ಗಳಿಗೆ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿಗಳನ್ನ ಪಡೆದುಕೊಂಡರು. ನಿನ್ನೆ ಮೊದಲ ದಿನ 4 ಸಾವಿರ, ಎರಡನೇ ದಿನ 6 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿ ಎಕ್ಸ್‌ಪೋ ಕಾರ್ಯಕ್ರವನ್ನು ಯಶಸ್ವಿಗೊಳಿಸಿದರು. ಅಷ್ಟೇ ಅಲ್ಲದೆ ಎಕ್ಸ್‌ಪೋದಲ್ಲಿ ಭಾಗಿಯಾದ ವಿದ್ಯಾರ್ಥಿಗಳು ಆಯೋಜಿಸಿದ್ದ ಹಲವು ಚಟುವಟಿಕೆಗಳಲ್ಲಿ ಭಾಗಿಯಾಗಿ ರಂಜಿಸಿದರು. ಇದೇ ವೇಳೆ ಎಕ್ಸ್‌ಪೋ ಆಯೋಜನೆ ಸಂಬಂಧ ಪೋಷಕರು ಮಾತನಾಡಿ ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಎಜುಕೇಶನ್ ಎಕ್ಸ್‌ಪೋದಲ್ಲಿ ಹರ್ಷಿಕಾ ಪೂಣಚ್ಚ

    ಎಕ್ಸ್‌ಪೋ ಕೊನೆಯ ದಿನದ ಕಾರ್ಯಕ್ರಮದಲ್ಲಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಪ್ರದೀಪ್ ದೊಡ್ಡಯ್ಯ ಭಾಗಿಯಾಗಿದ್ದು ವಿಶೇಷವಾಗಿತ್ತು. ಎಕ್ಸ್‌ಪೋದ ಲಕ್ಕಿ ಡಿಪ್ ವಿನ್ನರ್‌ಗಳಿಗೆ ಈ ಇಬ್ಬರು ಕಲಾವಿದರು ಗಿಫ್ಟ್ ನೀಡಿ ಶುಭ ಕೋರಿದರು. ಬಳಿಕ ನಟಿ ಹರ್ಷಿಕಾ ಪೂಣಚ್ಚ ಮಾತ‌ನಾಡಿ, ಪಬ್ಲಿಕ್ ಟಿವಿ ಅದ್ಬುತ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ. ನಮ್ಮ ವಿದ್ಯಾಭ್ಯಾಸದ ಸಂದರ್ಭಗಳಲ್ಲಿ ಈ ರೀತಿಯ ಅವಕಾಶಗಳು ಇರಲಿಲ್ಲ. ಈಗ ಇಂತಹ ಸದಾವಕಾಶವನ್ನ ವಿದ್ಯಾರ್ಥಿಗಳು ಬಳಸಿಕೊಂಡು, ಉತ್ತಮ ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕೆಂದು ಸಲಹೆ ನೀಡಿದರು.

    ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಪಬ್ಲಿಕ್ ಟಿವಿ ಸಿಓಓ ಹರೀಶ್ ಕುಮಾರ್ ಅವರು ಕೂಡ ಸಂತಸ ವ್ಯಕ್ತಪಡಿಸಿದರು. ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. ಅದ್ಬುತವಾದಂತಹ ರೆಸ್ಪಾನ್ಸ್ ವ್ಯಕ್ತವಾಗಿದೆ‌. ಪೋಷಕರು ಮತ್ತು ವಿದ್ಯಾರ್ಥಿಗಳು ನಾನಾ ಭಾಗಗಳಿಂದ ಆಗಮಿಸಿ ಕಾರ್ಯಕ್ರಮ ಯಶಸ್ವಿ ಮಾಡಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಎಂದರು. ಇದನ್ನೂ ಓದಿ: ಇಂದು ಪಬ್ಲಿಕ್‌ ಟಿವಿ ವಿದ್ಯಾಪೀಠಕ್ಕೆ ಕೊನೆಯ ದಿನ – ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

  • ಪಬ್ಲಿಕ್‌ ಟಿವಿ ‘ವಿದ್ಯಾಪೀಠ’ ಮೆಗಾ ಶೈಕ್ಷಣಿಕ ಮೇಳ – 2ನೇ ದಿನವೂ ವಿದ್ಯಾರ್ಥಿಗಳಿಂದ ಭರ್ಜರಿ ರೆಸ್ಪಾನ್ಸ್‌

    ಪಬ್ಲಿಕ್‌ ಟಿವಿ ‘ವಿದ್ಯಾಪೀಠ’ ಮೆಗಾ ಶೈಕ್ಷಣಿಕ ಮೇಳ – 2ನೇ ದಿನವೂ ವಿದ್ಯಾರ್ಥಿಗಳಿಂದ ಭರ್ಜರಿ ರೆಸ್ಪಾನ್ಸ್‌

    ಬೆಂಗಳೂರು: ಪಬ್ಲಿಕ್‌ ಟಿವಿ ಪ್ರಸ್ತುತಪಡಿಸಿರುವ ವಿದ್ಯಾಪೀಠ 6ನೇ ಆವೃತ್ತಿ ಶೈಕ್ಷಣಿಕ ಮೇಳಕ್ಕೆ 2ನೇ ದಿನವೂ ಜನ ಸಾಗರ ಹರಿದು ಬರುತ್ತಿದೆ. ಬೃಹತ್‌ ಎಜುಕೇಷನ್‌ ಎಕ್ಸ್‌ಪೋ ಕೊನೆ ದಿನವಾಗಿದ್ದು, ಜನಜಾತ್ರೆ ನೆರೆದಿದೆ.

    ಮೇಳದ ಸ್ಟಾಲ್‌ಗಳ ಮುಂದೆ ವಿದ್ಯಾರ್ಥಿಗಳು ಹಾಗೂ ಪೋಷಕರು ಸಾಲುಗಟ್ಟಿ ನಿಂತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಅನೇಕ ಸ್ಪರ್ಧೆಗಳನ್ನು ಸಹ ಆಯೋಜನೆ ಮಾಡಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನ ಕೂಡ ನೀಡಲಾಗುವುದು.

    ಅಲ್ಲದೇ HAND WRITING ಎಕ್ಸ್‌ಪರ್ಟ್ ಡಾ. ರಫೀಉಲ್ಲಾ ಬೇಗ್‌ ಅವರು ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು.

    ಶೈಕ್ಷಣಿಕ ಮೇಳಕ್ಕೆ ಭಾನುವಾರವಾದ ಇಂದು ಕೊನೆ ದಿನವಾಗಿದ್ದು, ಸಂಜೆ 7 ಗಂಟೆವರೆಗೆ ಎಕ್ಸ್‌ಪೋ ನಡೆಯಲಿದೆ. ಸಿಇಟಿ ಸಂಬಂಧ ಸೆಮಿನಾರ್ ಸಹ ಜರುಗಲಿದೆ. ಇದಲ್ಲದೇ ಬೈಸಿಕಲ್, ಲ್ಯಾಪ್‌ಟಾಪ್, ಸೇರಿದಂತೆ ಹಲವು ಬಂಪರ್ ಗಿಫ್ಟ್ ಗೆಲ್ಲೋ ಅವಕಾಶ ವಿದ್ಯಾರ್ಥಿಗಳಿಗೆ ಸಿಗಲಿದೆ. ಬನ್ನಿ ಭಾಗವಹಿಸಿ ಜ್ಞಾನಾರ್ಜನೆ ಜೊತೆಗೆ ಆಕರ್ಷಕ ಬಹುಮಾನ ಗೆಲ್ಲಿ.

  • ಪಬ್ಲಿಕ್ ಟಿವಿ ‘ವಿದ್ಯಾಪೀಠ’ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ಚಾಲನೆ

    ಪಬ್ಲಿಕ್ ಟಿವಿ ‘ವಿದ್ಯಾಪೀಠ’ ಶೈಕ್ಷಣಿಕ ಮೇಳಕ್ಕೆ ಅದ್ಧೂರಿ ಚಾಲನೆ

    – ಉನ್ನತ ಶಿಕ್ಷಣ ಸಚಿವ ಸುಧಾಕರ್‌ರಿಂದ ಶೈಕ್ಷಣಿಕ ಮೇಳ ಉದ್ಘಾಟನೆ

    ಬೆಂಗಳೂರು: ಪಬ್ಲಿಕ್ ಟಿವಿ (Public TV) ಪ್ರಸ್ತುತಪಡಿಸಿರುವ ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳವಾದ ವಿದ್ಯಾಪೀಠ (Vidhyapeeta Education Expo) 6ನೇ ಆವೃತ್ತಿಗೆ ಇಂದು (ಶನಿವಾರ) ಅದ್ಧೂರಿ ಚಾಲನೆ ದೊರೆಯಿತು. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್ (M.C.Sudhakar) ಅವರು ಟೇಪ್ ಕಟ್ ಮಾಡುವ ಮೂಲಕ ಶೈಕ್ಷಣಿಕ ಮೇಳೆಕ್ಕೆ ಚಾಲನೆ ನೀಡಿದರು.

    ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಸುಧಾಕರ್ ಅವರಿಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್ (HR Ranganath) ಅವರು ಸೇರಿದಂತೆ ಇತರೆ ಗಣ್ಯರು ಸಾಥ್ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ಹೆಚ್.ಆರ್. ರಂಗನಾಥ್ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ಇಂದು ಚಾಲನೆ

    ಇದೇ ವೇಳೆ ಮಾತನಾಡಿದ ಸಚಿವ ಸುಧಾಕರ್ ಅವರು, ನಾನು ಸಚಿವನಾಗಿ ಉದ್ಘಾಟಿಸಿದ ಮೊದಲ ಕಾರ್ಯಕ್ರಮ ಇದು. ಇದು ನನ್ನ ಸೌಭಾಗ್ಯ ಎಂದು ಸಂತೋಷ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿ ವತಿಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಹೊಸ ಆಯಾಮಗಳನ್ನ ಪ್ರಾರಂಭ ಮಾಡಲಾಗಿದೆ. ಒಂದೇ ಸೂರಿನಡಿಯಲ್ಲಿ ಇಷ್ಟು ದೊಡ್ಡ ಶೈಕ್ಷಣಿಕ ಸಂಸ್ಥೆಗಳನ್ನು ಒಗ್ಗೂಡಿಸೋದು ಸುಲಭವಲ್ಲ. ಯಾರು ಕೂಡಾ ಇಂತಹ ದೊಡ್ಡ ಕಾರ್ಯಕ್ರಮ ಆಯೋಜಿಸಲು ಸಾಧ್ಯವಿಲ್ಲ. ಅದು ಪಬ್ಲಿಕ್ ಟಿವಿ, ಹೆಚ್.ಆರ್. ರಂಗನಾಥ್ ಅವರಿಂದ ಮಾತ್ರ ಸಾಧ್ಯ ಎಂದು ಬಣ್ಣಿಸಿದರು. ಇದನ್ನೂ ಓದಿ: ಇಂದು, ನಾಳೆ 2 ದಿನ ಪಬ್ಲಿಕ್‌ ಟಿವಿ ‘ವಿದ್ಯಾಪೀಠʼ – ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ

    ಹಿರಿಯರ ಮಾರ್ಗದರ್ಶನ, ಗುರುಗಳ ಸಲಹೆ-ಸೂಚನೆ ಮೇಲೆ ಜೀವನದ ಕಷ್ಟ ಸುಖಗಳ ಬಗ್ಗೆ ಸಲಹೆ ಪಡೆದು ಜೀವನ ಮಾಡ್ತೀವಿ. ನಮ್ಮ ಮುಂದೆ ಅನೇಕ ಆಯ್ಕೆಗಳು ಇವೆ. ಮೆಡಿಕಲ್, ಎಂಜಿನಿಯರಿಂಗ್ ಶಿಕ್ಷಣದಲ್ಲಿ ನಮಗೆ ಅವಕಾಶಗಳು ಸಾಕಷ್ಟಿವೆ. ಪದವಿ ಪಡೆದರೂ ಕೆಲಸ ಸಿಕ್ತಿಲ್ಲ. ನಮ್ಮ ರಾಜ್ಯದಲ್ಲಿ, ದೇಶದಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಇವೆ. ಆದರೆ ಎಲ್ಲರಿಗೂ ಅಲ್ಲಿ ಉದ್ಯೋಗ ಸಿಗೋದಿಲ್ಲ. ನಾವು ನಿರೀಕ್ಷೆ ಮಾಡಿದಷ್ಟು ಉದ್ಯೋಗ ಸೃಷ್ಟಿ ಆಗಿಲ್ಲ. ಹೀಗಾಗಿ ಹೊಸ ಹೊಸ ಕೋರ್ಸ್ಗಳು ನಮ್ಮ ಮುಂದೆ ಇವೆ. ಇದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಉನ್ನತ ಶಿಕ್ಷಣ ಇಲಾಖೆ ಹೊಸದು ನನಗೆ. ಮಾಹಿತಿ ಸಂಗ್ರಹ ಮಾಡುತ್ತಿದ್ದೇನೆ. ಈಗಾಗಲೇ ಅನೇಕ ವಿದ್ಯಾರ್ಥಿಗಳು ಸಮಸ್ಯೆಗಳನ್ನ ಹೇಳಿದ್ದಾರೆ. ಅನೇಕ ಖಾಸಗಿ, ಅಟಾನಮಸ್ ವಿವಿಗಳಲ್ಲಿ ಸಮಸ್ಯೆಗಳು ಇವೆ. ಸಮಸ್ಯೆಗಳನ್ನ ಹೇಗೆ ಪರಿಹಾರ ಮಾಡಬೇಕು ಅನ್ನೋ ನಿಟ್ಟಿನಲ್ಲಿ ಕೆಲಸ ಮಾಡ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ, On Spot ಗಿಫ್ಟ್ ಪಡ್ಕೊಳ್ಳಿ..!

    ಎನ್‌ಇಪಿ ರದ್ದು ವಿಚಾರವಾಗಿ ಮಾತನಾಡಿ, ಎನ್‌ಇಪಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮೊದಲು ಎನ್‌ಇಪಿ ಬಗ್ಗೆ ಪೂರ್ಣ ಮಾಹಿತಿ ಪಡೆಯುತ್ತೇನೆ. ಬಳಿಕ ಸಿಎಂ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ತಗೋತೀವಿ. ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದೇ ಇರೊ ರೀತಿ ಕ್ರಮದ ಬಗ್ಗೆ ನಿರ್ಧಾರ ಮಾಡ್ತೀವಿ ಎಂದು ಸ್ಪಷ್ಟಪಡಿಸಿದರು.

    ಕಾರ್ಯಕ್ರಮದಲ್ಲಿ ರೇವಾ ಯುನಿವರ್ಸಿಟಿ ಕುಲಪತಿಗಳಾದ ಶ್ಯಾಮರಾಜು, ಗಾರ್ಡನ್ ಸಿಟಿ ಯುನಿವರ್ಸಿಟಿ ಕುಲಪತಿಗಳಾದ ಡಾ. ವಿ.ಜಿ ಜೋಸೆಫ್, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್ಸ್ಟಿಟೂಷನ್ಸ್ ಅಧ್ಯಕ್ಷರಾದ ಡಿ.ಕೆ.ಮೋಹನ್, ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್ಸ್ಟಿಟೂಷನ್ಸ್ ಅಧ್ಯಕ್ಷರಾದ ರಾಜೀವ್ ಗೌಡ ಭಾಗವಹಿಸಿದ್ದರು.

    ಎಡಿ6 ಸಹಯೋಗದಲ್ಲಿ ಪಬ್ಲಿಕ್ ಟಿವಿಯು ‘ಇಂದಿನ ಕಲಿಕೆ, ನಾಳಿನ ದಾರಿದೀಪ’ ಘೋಷವಾಕ್ಯದೊಂದಿಗೆ ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ ‘ವಿದ್ಯಾಪೀಠ’ವನ್ನು ಆಯೋಜಿಸಿದೆ. ಬೆಂಗಳೂರು ಅರಮನೆ ಮೈದಾನದ ಗೇಟ್ ನಂಬರ್ 4ರ ಗಾಯತ್ರಿ ವಿಹಾರದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವಿದ್ಯಾಪೀಠ ಶೈಕ್ಷಣಿಕ ಮೇಳ ನಡೆಯಲಿದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವಿರುತ್ತದೆ. ಶೈಕ್ಷಣಿಕ ಮೇಳದಲ್ಲಿ ರಾಜ್ಯದ ನಾನಾ ಭಾಗಗಳ 100ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಂಡಿವೆ.

  • ನಾಳೆಯಿಂದ 2 ದಿನ ಪಬ್ಲಿಕ್‌ ಟಿವಿ ‘ವಿದ್ಯಾಪೀಠ’

    ನಾಳೆಯಿಂದ 2 ದಿನ ಪಬ್ಲಿಕ್‌ ಟಿವಿ ‘ವಿದ್ಯಾಪೀಠ’

    ಬೆಂಗಳೂರು: ಇಂದಿನ ಕಲಿಕೆ, ನಾಳಿನ ದಾರಿ ದೀಪ.. ಹೌದು, ಇದು ಪ್ರತಿಯೊಬ್ಬ ವಿದ್ಯಾರ್ಥಿಗೂ ಅನ್ವಯವಾಗುವ ಸಾಲುಗಳು. ಇದು ನಿಮ್ಮ ಪಬ್ಲಿಕ್ ಟಿವಿ (Public TV) ಪ್ರಸ್ತುತ ಪಡಿಸುತ್ತಿರೋ ವಿದ್ಯಾಪೀಠ (Vidhyapeeta) 6 ನೇ ಆವೃತ್ತಿಯ ಘೋಷವಾಕ್ಯ. ಇದೇ ಜೂನ್‌ 3 ಮತ್ತು 4ರಂದು ಶನಿವಾರ ಮತ್ತು ಭಾನುವಾರ ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ಬೆಂಗಳೂರಿನ (Bengaluru) ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ವೇದಿಕೆ ಸಿದ್ಧವಾಗಿದೆ. ವಿದ್ಯಾರ್ಥಿಗಳು ತಮ್ಮ ಉನ್ನತ ವಿದ್ಯಾಭ್ಯಾಸದ ಬಗ್ಗೆ ಇರುವ ಗೊಂದಲಗಳಗೆ ಈ ವೇದಿಕೆ ಉತ್ತರ ನೀಡಲಿದೆ.

    ಒಂದೇ ಸೂರಿನಡಿಯಲ್ಲಿ 100 ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗಿಯಾಗಲಿದ್ದು, ಕಾರ್ಯಕ್ರಮದ ಸಿದ್ಧತೆ ಹೇಗಿದೆ? ಎರಡು ದಿನದ ವಿದ್ಯಾಪೀಠದ ವಿಶೇಷತೆಗಳು ಏನು? ಯಾವ ರೀತಿಯಲ್ಲಿ ವಿದ್ಯಾಪೀಠ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅನುಕೂಲಕರವಾಗಲಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ. ಇದನ್ನೂ ಓದಿ: 105ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು Expoದಲ್ಲಿ ಭಾಗಿ, ಪ್ರವೇಶ ಉಚಿತ: ಸಿ.ಕೆ ಹರೀಶ್ ಕುಮಾರ್

    ಕಾರ್ಯಕ್ರಮ ವಿವರ:
    Ad6 ಸಹಯೋಗದಲ್ಲಿ ಪಬ್ಲಿಕ್‌ ಟಿವಿಯು ‘ಇಂದಿನ ಕಲಿಕೆ, ನಾಳಿನ ದಾರಿದೀಪ’ ಘೋಷವಾಕ್ಯದೊಂದಿಗೆ ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳ ‌’ವಿದ್ಯಾಪೀಠ’ವನ್ನು ಆಯೋಜಿಸಿದೆ. ಜೂನ್‌ 3 ಮತ್ತು 4ರಂದು ಬೆಂಗಳೂರು ಅರಮನೆ ಮೈದಾನದ ಗೇಟ್‌ ನಂಬರ್‌ 4ರ ಗಾಯತ್ರಿ ವಿಹಾರದಲ್ಲಿ ಬೆಳಗ್ಗೆ 10.೦೦ ಗಂಟೆಯಿಂದ ಸಂಜೆ 7.00 ಗಂಟೆಯವರೆಗೆ ವಿದ್ಯಾಪೀಠ ಶೈಕ್ಷಣಿಕ ಮೇಳ ನಡೆಯಲಿದೆ. ಇದು ವಿದ್ಯಾಪೀಠದ 6ನೇ ಆವೃತ್ತಿ ಎನ್ನುವುದೂ ವಿಶೇಷ. ಬೆಳಗ್ಗೆ 10 ರಿಂದ ಸಂಜೆ 7 ಗಂಟೆವರೆಗೆ ಶೈಕ್ಷಣಿಕ ಮೇಳ ನಡೆಯಲಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಉಚಿತ ಪ್ರವೇಶವಿರುತ್ತದೆ. ಶೈಕ್ಷಣಿಕ ಮೇಳದಲ್ಲಿ ರಾಜ್ಯದ ನಾನಾ ಭಾಗಗಳ 100ಕ್ಕೂ ಹೆಚ್ಚು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪದವಿ, ಸ್ನಾತಕೋತ್ತರ ಪದವಿ, ಕೆಸಿಇಟಿ, ನೀಟ್‌ ಮತ್ತು ಕಾಮೆಡ್‌ ಕೆ, ವೃತ್ತಿಪರ ಮತ್ತು ಔದ್ಯೋಗಿಕ ಕೋರ್ಸ್‌ಗಳ ಬಗ್ಗೆ ಒಂದೇ ಸ್ಥಳದಲ್ಲಿ ಸಮಗ್ರ ಮಾಹಿತಿ ಸಿಗಲಿದೆ. ಸಂವಾದದ ಮೂಲಕ ಪ್ರಮುಖ ಶಿಕ್ಷಣ ಸಂಸ್ಥೆಗಳ ದಾಖಲಾತಿ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಮಾಹಿತಿ ಪಡೆದುಕೊಳ್ಳಲು ಅವಕಾಶ ಇದೆ.

    ಗಿಫ್ಟ್‌ ತಗೊಳ್ಳಿ:
    2023ರಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿದ್ದರೆ ನಿಮ್ಮ ಅಂಕಪಟ್ಟಿ ಅಥವಾ ನಕಲು ಪ್ರತಿ (Xerox) ತೋರಿಸಿ ನೀವು ಗಿಫ್ಟ್‌ ಪಡೆದುಕೊಳ್ಳಬಹುದು. ಆದರೆ, ನೀವು ಪಡೆದ ಅಂಕ ಶೇ.60 ಅಥವಾ ಅದಕ್ಕಿಂತ ಮೇಲಿರಬೇಕು. ಸೆಕೆಂಡ್‌ ಪಿಯುಸಿಯಲ್ಲಿ 60-80% ಪಡೆದವರು, 80-95%, 95-100% ಪಡೆದವರು ಎಂದು ಗುರುತಿಸಿ ನಿಮ್ಮ ಅಂಕಗಳ ಆಧಾರದಲ್ಲಿ On Spot ಗಿಫ್ಟ್‌ ನೀಡಲಾಗುವುದು.

    ಹೆಸರು ನೋಂದಾಯಿಸಿ:
    ಶೈಕ್ಷಣಿಕ ಮೇಳಕ್ಕೆ ಬರುವ ಪ್ರತಿಯೊಬ್ಬರೂ ನಗರದ ಅರಮನೆ ಮೈದಾನದ ಗೇಟ್‌ ಬಳಿ ನೋಂದಣಿ ಕೇಂದ್ರ (Registration Counter) ದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರತಿ ಗಂಟೆಗೊಮ್ಮೆ ನಡೆಯುವ ಲಕ್ಕಿ ಡ್ರಾದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಗುವುದು. ಶೈಕ್ಷಣಿಕ ಮೇಳ ನಡೆಯುವ ಅರಮನೆ ಮೈದಾನ ಗಾಯತ್ರಿ ವಿಹಾರದ ಆವರಣದಲ್ಲಿಯೇ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನಿಧಾನಗತಿಯ ಸೈಕಲ್‌ ಪಂದ್ಯ (Slow Cycle Race), ವಿಷಯ ಆರಿಸಿಕೊಳ್ಳಿ, ಮಾತನಾಡಿ (Pick & Speak) ಮೊದಲಾದ ಆಕರ್ಷಕ ಸ್ಪರ್ಧೆಗಳು ವಿದ್ಯಾಪೀಠದಲ್ಲಿ ನಡೆಯಲಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ‘ವಿದ್ಯಾಪೀಠ’ಕ್ಕೆ ಬನ್ನಿ, On Spot ಗಿಫ್ಟ್ ಪಡ್ಕೊಳ್ಳಿ..!

    ಸೈಕಲ್‌, ಲ್ಯಾಪ್‌ಟಾಪ್‌ ಬಹುಮಾನ ಗೆಲ್ಲಿ:
    ಸ್ಲೋ ಸೈಕಲ್‌ ರೇಸ್‌ನಲ್ಲಿ ಭಾಗಿಯಾಗಿ ಗೆದ್ದವರು ಸೈಕಲ್‌ಗಳನ್ನು ಬಹುಮಾನವಾಗಿ ಪಡೆಯಬಹುದು. ಪಿಕ್‌ & ಸ್ಪೀಕ್‌ನಲ್ಲಿ ವಿಜೇತರಾದವರಿಗೆ ಲ್ಯಾಪ್‌ಟಾಪ್‌ಗಳು ಬಹುಮಾನವಾಗಿ ಸಿಗಲಿದೆ. 2 ದಿನಗಳ ಕಾಲ ನಡೆಯುವ ಸ್ಪರ್ಧೆಯಲ್ಲಿ 15 ಸೈಕಲ್‌ಗಳು ಹಾಗೂ 4 ಲ್ಯಾಪ್‌ಟಾಪ್‌ಗಳನ್ನು ಪ್ರಶಸ್ತಿ ರೂಪದಲ್ಲಿ ವಿಜೇತರಿಗೆ ನೀಡಲಾಗುವುದು.

    ವಿದ್ಯಾಪೀಠದ ಪ್ಲಾಟಿನಂ ಪ್ರಾಯೋಜಕರು
    ಗಾರ್ಡನ್‌ ಸಿಟಿ ಯೂನಿವರ್ಸಿಟಿ
    ರೇವಾ ಯೂನಿವರ್ಸಿಟಿ
    ರಾಮಯ್ಯ ಯೂನಿವರ್ಸಿಟಿ
    ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ
    ದಿ ಆಕ್ಸ್‌ಫರ್ಡ್‌ ಇನ್‌ಸ್ಟಿಟ್ಯೂಷನ್ಸ್‌.

    ಗೋಲ್ಡ್‌ ಪ್ರಾಯೋಜಕರು
    ಈಸ್ಟ್‌ ಪಾಯಿಂಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌
    ಸಿಎಂಆರ್‌ ಯೂನಿವರ್ಸಿಟಿ
    ಬಿಜಿಎಸ್‌ & ಎಸ್‌ಜೆಬಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌
    ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌
    ನಾಗಾರ್ಜುನ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ.

    ಕ್ರಿಯೇಟಿವ್‌ ಸ್ಟಾಲ್‌ ಪಾರ್ಟ್ನರ್ಸ್‌
    ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ
    ಎಸ್‌ವಿಸಿಇ (ಶ್ರೀ ವೆಂಕಟೇಶ್ವರ ಕಾಲೇಜ್‌ ಆಫ್‌ ಇಂಜಿನಿಯರಿಂಗ್)
    ನ್ಯೂ ಬಾಲ್ಡ್‌ವಿನ್‌ ಗ್ರೂಪ್‌ ಆಫ್‌ ಇನ್‌ಸ್ಟಿಟೂಷನ್ಸ್‌
    ನ್ಯೂ ಹಾರಿಜನ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌
    ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ
    ಕೆಎಲ್‌ಇ ಟೆಕ್ನಲಾಜಿಕಲ್‌ ಯೂನಿವರ್ಸಿಟಿ, ಇದನ್ನೂ ಓದಿ: ಪಬ್ಲಿಕ್‌ ಟಿವಿಯ ‘ವಿದ್ಯಾಪೀಠ’ – ಜೂನ್‌ 3, 4ಕ್ಕೆ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ

    ಸಿಲ್ವರ್‌ ಪ್ರಾಯೋಜಕರು
    ಆರ್‌ಆರ್‌ ಇನ್‌ಸ್ಟಿಟ್ಯೂಷನ್ಸ್‌
    ಪಿಇಎಸ್‌ ಯೂನಿವರ್ಸಿಟಿ
    ಆಚಾರ್ಯ
    ಪ್ರೆಸಿಡೆನ್ಸಿ ಯೂನಿವರ್ಸಿಟಿ
    ಎಜೆಎಂಎಸ್‌ ಇನ್‌ಸ್ಟಿಟ್ಯೂಟ್ಸ್‌
    ಪ್ಲ್ಯಾನ್‌ಎಜು
    ದಯಾನಂದ ಸಾಗರ್‌ ಇನ್‌ಸ್ಟಿಟ್ಯೂಷನ್ಸ್‌,
    ಟೇಲರ್ಸ್‌ ಯೂನಿವರ್ಸಿಟಿ
    ಎಸ್‌ಇಎ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌
    ಎಕ್ಸೆಲ್‌ ಅಕಾಡೆಮಿಕ್ಸ್‌
    ಚಾಣಕ್ಯ ಯೂನಿವರ್ಸಿಟಿ
    ಆಚಾರ್ಯ ಬೆಂಗಳೂರು ಬಿ ಸ್ಕೂಲ್

    ಬ್ಯಾಂಕಿಂಗ್‌ ಪಾರ್ಟನರ್
    ಕೆನರಾ ಬ್ಯಾಂಕ್

    ಬಿವರೇಜ್‌ ಪಾರ್ಟನರ್‌
    ನಂದಿನಿ – ಕೆಎಂಎಫ್‌
    ಬಾಯರ್ಸ್‌ ಕಾಫಿ

    ಗಿಫ್ಟ್‌ ಸ್ಪಾನ್ಸರ್‌
    ಜೀನಿ ಮಿಲೆಟ್‌ ಮಿಕ್ಸ್

    ಪಬ್ಲಿಕ್‌ ಟಿವಿ ಪ್ರಸ್ತುತಪಡಿಸುವ ವಿದ್ಯಾಪೀಠ ಶೈಕ್ಷಣಿಕ ಮೇಳಕ್ಕೆ ಬನ್ನಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9900060891 / 9900060204

  • ಪಬ್ಲಿಕ್ ಟಿವಿಯ ವಿದ್ಯಾಪೀಠಕ್ಕೆ ಯಶಸ್ವಿ ತೆರೆ

    ಪಬ್ಲಿಕ್ ಟಿವಿಯ ವಿದ್ಯಾಪೀಠಕ್ಕೆ ಯಶಸ್ವಿ ತೆರೆ

    ಬೆಂಗಳೂರು: ಪಬ್ಲಿಕ್ ಟಿವಿ ಆಯೋಜಿಸಿದ್ದ ವಿದ್ಯಾಪೀಠ ಶೈಕ್ಷಣಿಕ ಮೇಳದ 3ನೇ ಆವೃತ್ತಿ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಮೂರು ದಿನಗಳ ಕಾಲ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ವಿದ್ಯಾಪೀಠಕ್ಕೆ ಆಗಮಿಸಿ ಶೈಕ್ಷಣಿಕ ಮಾಹಿತಿ ಪಡೆದಿದ್ದಾರೆ.

    ವಿದ್ಯಾಪೀಠ ಶೈಕ್ಷಣಿಕ ಮೇಳದ 3 ದಿನವಾದ ಇಂದು ಹಲವು ಸ್ಪರ್ಧೆಗಳು ನಡೆದವು. ಚರ್ಚಾ ಸ್ಪರ್ಧೆಯಲ್ಲಿ ಸಂಜನಾ, ದೀಶಾ, ಸಾತ್ವಿಕ್, ಚೇತನ್, ಶ್ರೇಯಾ ವಿಜೇತರಾದರು. ಚಿತ್ರಕಲೆಯಲ್ಲಿ ರಕ್ಷಿತಾ, ಚಂದನ್, ನಯನಾ, ಯಶವಂತ್, ಭಾವನಾ ವಿಜೇತರಾದರು. ರಸಪ್ರಶ್ನೆಯಲ್ಲಿ ಸಿದ್ಧಾಂತ್, ಆದಿತ್ಯ, ಸ್ನೇಹಾ, ಮಿನು, ಸಾತ್ವಿಕ್ ಜಯಗಳಿಸಿದರು.

    ಪ್ರಾಜೆಕ್ಟ್ ವರ್ಕ್ ಸ್ಪರ್ಧೆಯಲ್ಲಿ ರೇವಾ ವಿಶ್ವವಿದ್ಯಾಲಯ, ಶ್ರೀ ವೆಂಕಟೇಶ್ವರ ಇಂಜಿನಿಯರಿಂಗ್ ಕಾಲೇಜ್, ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪ್ರಶಸ್ತಿ ಪಡೆದರು. ಸಂಗೀತ ಸ್ಪರ್ಧೆಯಲ್ಲಿ ದಿನೇಶ್, ಸಾಗರ್, ಶ್ರೇಯಾ, ಸ್ಮೃತಿ, ಸಂಜಯ್ ವಿಜೇತರಾದರು. ವಿಜೇತರಿಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್, ಗಾರ್ಡನ್ ಸಿಟಿ ಕಾಲೇಜ್ ಕುಲಪತಿ ಜೋಸೆಫ್ ಹಾಗೂ ರೇವಾ ವಿವಿ ಉಪಕುಲಪತಿ ಡಾ.ಕುಲಕರ್ಣಿ ಅವರು ಪ್ರಶಸ್ತಿ ಪ್ರಧಾನ ಮಾಡಿದರು.