Tag: ವಿದೇಶಿ ಪ್ರವಾಸಿಗರು

  • ವಿರುಪಾಪುರ ಗಡ್ಡೆಯಲ್ಲಿ ಹೊಸ ವರ್ಷಾಚರಣೆ- ಮೋಜು ಮಸ್ತಿಗೆ ಪೊಲೀಸ್ ಬ್ರೇಕ್

    ವಿರುಪಾಪುರ ಗಡ್ಡೆಯಲ್ಲಿ ಹೊಸ ವರ್ಷಾಚರಣೆ- ಮೋಜು ಮಸ್ತಿಗೆ ಪೊಲೀಸ್ ಬ್ರೇಕ್

    ಕೊಪ್ಪಳ: ಹೊಸ ವರ್ಷಕ್ಕೆ ಮದ್ಯ ಅಮಲಿನಲ್ಲಿ ತೇಲಲು ತುದ್ದಿಗಾಲ ಮೇಲೆ ನಿಂತಿದ್ದ ವಿದೇಶಿ ಪ್ರವಾಸಿಗರಿಗೆ ಪೋಲಿಸ್ ಇಲಾಖೆ ಬ್ರೇಕ್ ಹಾಕಿದೆ. ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳಲು ರೆಸ್ಟೋರೆಂಟ್ ಮಾಲೀಕರು ತಯಾರಿ ನಡೆಸಿದ್ದರು. ರೆಸ್ಟೋರೆಂಟ್‍ಗೆ ಬರುವ ಪ್ರವಾಸಿಗರಿಗೆ 2ರಿಂದ 3ಸಾವಿರ ರೂ.ವರೆಗೂ ದರ ನಿಗದಿ ಮಾಡಿದ್ದರು. ಆದರೆ ಸಂಭ್ರಮಾಚರಣೆ ಹೆಸರಿನಲ್ಲಿ ಮೋಜು ಮಸ್ತಿಗೆ ಯಾವುದೇ ಅವಕಾಶ ಇಲ್ಲ ಎಂದು ಡಿವೈಎಸ್‍ಪಿ ಡಾ.ಚಂದ್ರಶೇಖರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ವಿರುಪಾಪುರ ಗಡ್ಡೆ ಸುತ್ತಮುತ್ತ 40 ಕ್ಕೂ ಹೆಚ್ಚು ರೆಸ್ಟೋರೆಂಟ್‍ಗಳಿದ್ದು. ಗಡ್ಡಿಯಲ್ಲಿ ಇರುವ ರೆಸಾರ್ಟ್ ಮಾಲೀಕರಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡಿ ಮಾತನಾಡಿದ ಡಿವೈಎಸ್‍ಪಿ ಡಾ.ಚಂದ್ರಶೇಖರ್ ಅವರು, ಪ್ರತಿವರ್ಷ ಹೊಸವರ್ಷದ ಆಚರಣೆಯನ್ನು ವಿದೇಶಿ ಮಾದರಿಯಲ್ಲಿ ಮದ್ಯ ಸೇವಿಸಿ ಕುಣಿದು ಕುಪ್ಪಳಿಸಿದರೆ ಕಾನೂನು ಪ್ರಕಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಕಳೆದ ವರ್ಷ ಕೆಲವು ರೆಸಾರ್ಟ್‍ಗಳ ಮಾಲೀಕರು ಕಾನೂನು ಪ್ರಕಾರ ತಪ್ಪು ಮಾಡಿ ಶಿಕ್ಷೆಯನ್ನು ಅನುಭವಿಸಿದ್ದರು. ಈ ವರ್ಷವೂ ತಪ್ಪು ಮಾಡಿದರೆ ಕಠಿಣವಾದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ನಮ್ಮ ದೇಶದಲ್ಲಿ ಒಳ್ಳೆಯ ಸಂಪ್ರದಾಯವಿದೆ. ಬೇರೆ ದೇಶದ ಸಂಸ್ಕೃತಿಯನ್ನು ಇಲ್ಲಿ ಆಚರಣೆ ಮಾಡಿದರೆ ತಪ್ಪು. ಏಕೆಂದರೆ ನಿಮಗೆ ಅದು ವ್ಯವಹಾರ ಮಾತ್ರವಷ್ಟೇ. ಆದರೆ ನಿಯಮಗಳನ್ನು ಪಾಲನೆ ಮಾಡುವುದಿಲ್ಲ. ವಿದೇಶಿಯರಿಗೆ ಬೈಕ್ ನೀಡುವ ಮುನ್ನ ಅವರ ಬಳಿ ಅಂತಾರಾಷ್ಟ್ರೀಯ ವಾಹನ ಚಾಲನೆ ಪರವಾನಗಿ ಇರಬೇಕು. ರೆಸಾರ್ಟ್ ಮಾಲೀಕರು ಪರವಾನಗಿ ಇರುವವರಿಗೆ ಮಾತ್ರ ವಾಹನ ನೀಡಿ. ಜೊತೆಗೆ ಹೆಲ್ಮೆಟ್ ನೀಡುವುದು ಕಡ್ಡಾಯ. ಈ ಬಗ್ಗೆ ರೆಸಾರ್ಟ್ ಎದುರು ನಾಮ ಫಲಕ ಹಾಕಬೇಕು. ದೇಶ ಮತ್ತು ವಿದೇಶಿ ಪ್ರವಾಸಿಗರ ಮಾಹಿತಿ ಮತ್ತು ದಾಖಲೆಗಳು ಪಡೆಯಬೇಕು ಎಂದು ನಿಯಮಗಳ ಅರಿವು ಮೂಡಿಸಿದರು.

    ದೇಶ ಮತ್ತು ವಿದೇಶಗಳಿಂದ ಬರುವ ಪ್ರವಾಸಿಗರು ಅರೆನಗ್ನವಾಗಿ ಬಟ್ಟೆ ಧರಿಸಿ ಅಂಜನಾದ್ರಿ ಬೆಟ್ಟ, ಪಂಪಾಸರೋವರ, ಋಷಿಮುಖ ಪರ್ವತ ಸೇರಿದಂತೆ ಪ್ರಸಿದ್ಧ ದೇವಸ್ಥಾನದಲ್ಲಿ ಭೇಟಿ ನೀಡುವುದರಿಂದ ಸ್ಥಳೀಯರಿಗೆ ಮುಜುಗರವಾಗುತ್ತದೆ. ಅನೈತಿಕ ಚಟುವಟಿಕೆಗಳು ಕಂಡು ಬಂದರೆ ಕಾನೂನು ರೀತಿ ಕ್ರಮಕೈಕೊಳ್ಳುತ್ತೇವೆ. ಈಗಾಗಲೇ ವಿರುಪಾಪುರ ಗಡ್ಡಿಯಲ್ಲಿ ಕೆಲವರು ಗಂಜ ಮತ್ತು ಮದ್ಯ ಮಾರಾಟ ಮಾಡಿ ಪೊಲೀಸರ ಕೈಗೆ ಸಿಕ್ಕಿ ಪ್ರಕರಣ ದಾಖಲಾಗಿದೆ. ಮೋಜು ಮಸ್ತಿಗೆ ಯಾವುದೇ ಅವಕಾಶ ಇಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸಿಪಿಐ ಸುರೇಶ್ ತಳವಾರ, ಪಿಎಸ್‍ಐ ದೊಡ್ಡಪ್ಪ.ಜೆ ಸೇರಿದಂತೆ ಇತ್ತರರು ಉಪಸ್ಥಿತರಿದ್ದರು.

  • ವಿಮಾನ ಅಪಘಾತಕ್ಕೀಡಾಗಿ 12 ಮಂದಿ ದುರ್ಮರಣ

    ವಿಮಾನ ಅಪಘಾತಕ್ಕೀಡಾಗಿ 12 ಮಂದಿ ದುರ್ಮರಣ

    ಸ್ಯಾನ್ ಜೋಸ್: ಕೋಸ್ಟಾರಿಕಾದಲ್ಲಿ ವಿಮಾನ ಅಪಘಾತಕ್ಕೀಡಾಗಿ 12 ಮಂದಿ ಮೃತಪಟ್ಟ ಘಟನೆ ನಡೆದಿದೆ.

    ಕೊಸ್ಟಾರಿಕಾ ರಾಜಧಾನಿ ಸ್ಯಾನ್ ಜೋಸ್‍ನಿಂದ ಸುಮಾರು 230 ಕಿಮೀ ದೂರದಲ್ಲಿರೋ ಪ್ರಸಿದ್ಧ ಪ್ರವಾಸಿ ತಾಣ ಪಂಟಾ ಇಸ್ಲಿಟಾ ಎಂಬ ಶಿಖರದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರಲ್ಲಿ 10 ಮಂದಿ ಅಮೆರಿಕ ಪ್ರಜೆಗಳು ಹಾಗೂ ಇಬ್ಬರು ಸ್ಥಳೀಯ ಪೈಲಟ್ ಗಳಾಗಿದ್ದಾರೆ ಎಂದು ಕೊಸ್ಟಾರಿಕಾ ಸರ್ಕಾರ ಹೇಳಿದೆ. ಘಟನೆಗೆ ಕಾರಣವೇನೆಂದು ಇನ್ನಷ್ಟೇ ತಿಳಿದುಬರಬೇಕಿದೆ ಅಂತ ಅಲ್ಲಿನ ಭದ್ರತಾ ಸಚಿವಾಲಯ ತಿಳಿಸಿದೆ.

    ನಾಗರಿಕಾ ವಿಮಾನಯಾನ ಸಂಸ್ಥೆಯ ನಿರ್ದೇಶಕ ಎನಿಯೊ ಕುಬಿಲ್ಲೊ ಅವರು ಸ್ಥಳಿಯ ಮಾಧ್ಯಮಗಳ ಜೊತೆ ಘಟನೆ ಕುರಿತು ಮಾತನಾಡಿ, ಘಟನೆಯಲ್ಲಿ 10 ವಿದೇಶಿ ಪ್ರವಾಸಿಗರು ಹಾಗೂ ಇಬ್ಬರು ಸ್ಥಳೀಯ ಪೈಲೆಟ್ ಗಳು ದುರ್ಮರಣಕ್ಕೀಡಾಗಿದ್ದಾರೆ ಅಂತ ಹೇಳಿದ್ದಾರೆ.

    2010 ರಿಂದ 2014ರ ವರೆಗೆ ಕೋಸ್ಟಾರಿಕಾದ ಅಧ್ಯಕ್ಷರಾಗಿದ್ದ ಲಾರಾ ಚಿಂಚಿಲ್ಲಾ, ತನ್ನ ಸೋದರ ಸಂಬಂಧಿಯೊಬ್ಬರು ವಿಮಾನ ದುರಂತದಲ್ಲಿ ಮೃತಪಟ್ಟಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ವಿಮಾನದಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ. ದುರಂತದಿಂದಾಗಿ ವಿಮಾನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸಂಪೂರ್ಣ ಸುಟ್ಟು ಹೋಗಿದೆ. ಹೀಗಾಗಿ ಮೃತರ ಪತ್ತೆಗೆ ಶವಪರೀಕ್ಷೆ ನಡೆಸಬೇಕಿದೆ ಎಂದು ಭದ್ರತಾ ಸಚಿವ ಗುಸ್ಟಾವೊ ಮಾತಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

  • 3 ಫಾರಿನ್ ಪ್ರವಾಸಿಗರಿಗೆ ಅಪಘಾತ- ಚಿಕಿತ್ಸೆ ಕೊಡಿಸಿ, ಮನೆಯಲ್ಲಿ ಊಟ ನೀಡಿ ಆತಿಥ್ಯ ತೋರಿದ ಶಿಡ್ಲಘಟ್ಟ ಜನ

    3 ಫಾರಿನ್ ಪ್ರವಾಸಿಗರಿಗೆ ಅಪಘಾತ- ಚಿಕಿತ್ಸೆ ಕೊಡಿಸಿ, ಮನೆಯಲ್ಲಿ ಊಟ ನೀಡಿ ಆತಿಥ್ಯ ತೋರಿದ ಶಿಡ್ಲಘಟ್ಟ ಜನ

    ಚಿಕ್ಕಬಳ್ಳಾಪುರ: ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶದ ಮೂಲಮಂತ್ರ ಅತಿಥಿ ದೇವೋಭವ. ಶತ್ರುಗಳಿಗೂ ಒಳ್ಳೆಯದನ್ನು ಬಯಸುವ ಸ್ವಭಾವ ಭಾರತೀಯರದ್ದು. ಇಲ್ಲಿಗೆ ಬಂದ ಮೂವರು ಪ್ರವಾಸಿಗರು ಸಂಕಷ್ಟದಲ್ಲಿದ್ದಾಗ ಸ್ಪಂದಿಸಿ, ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದ್ದಾರೆ.

    ಭಾರತಕ್ಕೆ ಪ್ರತಿವರ್ಷ ಏನಿಲ್ಲ ಅಂದ್ರೂ 30 ರಿಂದ 40 ಲಕ್ಷ ವಿದೇಶಿಗರು ಪ್ರವಾಸಕ್ಕೆ ಅಂತಾನೇ ಬರ್ತಾರೆ. ಹೀಗೆ ಪ್ರವಾಸಕ್ಕೆ ಅಂತ ಬಂದಿದ್ದ ಲಂಡನ್ ಮತ್ತು ಫ್ರಾನ್ಸ್ ಮೂಲದ ಮೂವರು ವಿದೇಶಿಗರು ಕೇರಳ ಟ್ರಿಪ್ ಮುಗಿಸಿ ಮೈಸೂರು, ಬೆಂಗಳೂರು ನೋಡ್ಕೊಂಡು ಗುರುವಾರದಂದು ಚಿಕ್ಕಬಳ್ಳಾಪುರ ಮಾರ್ಗವಾಗಿ ತಿರುಪತಿಗೆ ಹೊರಟಿದ್ರು.

    ಆಟೋದಲ್ಲಿ ಹೋಗ್ತಿದ್ದಾಗ ಬೈಕ್ ಅಚಾನಕ್ ಆಗಿ ಅಡ್ಡ ಬಂತು. ಅಪಘಾತ ತಪ್ಪಿಸಲು ಹೋಗಿ ಆಟೋ ಪಲ್ಟಿಯಾಗಿ ಲಂಡನ್ ಮೂಲದ ಫ್ರೆಡ್, ಟಾಯ್, ಹಾಗು ಫ್ರಾನ್ಸ್ ಮೂಲದ ಫೀಬಿ ಗಾಯಗೊಂಡಿದ್ರು.

    ಅಪಘಾತ ಆಗ್ತಿದ್ದಂತೆ ಶಿಡ್ಲಘಟ್ಟದ ಜನ ವಿದೇಶಿಗರನ್ನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆಸ್ಪತ್ರೆಯವರು ಉಚಿತವಾಗೇ ಟ್ರೀಟ್‍ಮೆಂಟ್ ಕೊಟ್ಟಿದ್ದರೆ. ಹಸಿವಿನಿಂದ ಇದ್ದವರಿಗೆ ಇಲ್ಲಿನ ಜನ ಮನೆಗೆ ಕರ್ಕೊಂಡು ಹೋಗಿ ಆತಿಥ್ಯ ಕೊಟ್ಟಿದ್ದಾರೆ.ಅಕ್ಕಪಕ್ಕದ ಜನರೆಲ್ಲಾ ಬಂದು ಹೂವು ಕೊಟ್ಟು ಶುಭ ಕೋರಿ, ವಿದೇಶಿ ಮಹಿಳೆಯ ಕೈಗೆ ಮೆಹಂದಿ ಹಾಕಿ ನಮ್ಮ ಸಂಸ್ಕೃತಿ ಪರಿಚಯ ಮಾಡಿಕೊಟ್ಟಿದ್ದಾರೆ

    ಕನ್ನಡಿಗರ ಆತಿಥ್ಯ ಸ್ವೀಕರಿಸಿದ ವಿದೇಶಿಗರು ಕೂಡ ತುಂಬಾ ಖುಷಿಪಟ್ಟಿದ್ದಾರೆ. ಇದೀಗ ಈ ಮೂವರು ವಿದೇಶಿ ಪ್ರವಾಸಿಗರು ಚೇತರಿಸಿಕೊಂಡು ಪ್ರವಾಸ ಮುಂದುವರೆಸಿದ್ದಾರೆ.

  • ಬಳ್ಳಾರಿಯಲ್ಲಿ ವಿದೇಶಿಗರ ದರ್ಬಾರ್ – ಹಂಪಿ ದೇಗುಲದಲ್ಲೇ ಮದ್ಯಾರಾಧನೆ

    ಬಳ್ಳಾರಿಯಲ್ಲಿ ವಿದೇಶಿಗರ ದರ್ಬಾರ್ – ಹಂಪಿ ದೇಗುಲದಲ್ಲೇ ಮದ್ಯಾರಾಧನೆ

    – ಚಪ್ಪಲಿ ಹಾಕಿ ಭಾರತೀಯ ಸಂಸ್ಕೃತಿಗೆ ಅಪಮಾನ

    ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿ ಬರಬರುತ್ತಾ ಅನೈತಿಕ ತಾಣವಾಗುತ್ತಿದೆಯಾ ಎಂಬ ಅನುಮಾನಗಳು ಇದೀಗ ಮೂಡಿವೆ. ಯಾಕಂದ್ರೆ ಮಂಗಳವಾರ ಸಂಜೆ ವಿದೇಶಿ ಪ್ರವಾಸಿಗರು ವಿಶ್ವ ಪ್ರಸಿದ್ದಿ ವಿರೂಪಾಕ್ಷೇಶ್ವರ ದೇವಾಲಯದಲ್ಲೇ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡು ದೇವಸ್ಥಾನದ ಆವರಣದಲ್ಲೆಲ್ಲಾ ಮದ್ಯಸೇವನೆ ಮಾಡುತ್ತಾ ಓಡಾಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಅಲ್ಲದೇ ದೇವಸ್ಥಾನದ ಪ್ರಾಗಂಣದಲ್ಲಿ ಚಪ್ಪಲಿ ಧರಿಸಿಕೊಂಡು ನಡೆದಾಡಿದ್ದು ಸಹ ವಿದೇಶಿ ಪ್ರವಾಸಿಗರ ಸ್ವೇಚ್ಛಾಚಾರವನ್ನು ಎತ್ತಿತೋರಿಸುತ್ತಿತ್ತು. ದೇವಸ್ಥಾನದಲ್ಲಿ ಹತ್ತಾರು ಕಾವಲುಗಾರರು, ಹಾಗೂ ಧಾರ್ಮಿಕ ದತ್ತಿ ಇಲಾಖೆ ಕಚೇರಿಯಿದ್ದರೂ ಸಹ ಯಾರೊಬ್ಬರು ಸಹ ವಿದೇಶಿ ಪ್ರವಾಸಿಗರ ಈ ವರ್ತನೆಯನ್ನು ವಿರೋಧಿಸದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ದೇವಸ್ಥಾನದ ಆವರಣದಲ್ಲಿ ಮದ್ಯಪಾನ-ಚಪ್ಪಲಿಯನ್ನು ನಿಷೇಧಿಸಿದ್ರೂ ವಿದೇಶಿ ಪ್ರವಾಸಿಗರು ಕ್ಯಾರೆ ಎನ್ನದೇ ದುರ್ವವರ್ತನೆ ತೋರಿದ್ದಾರೆ. ವಿದೇಶಿ ಪ್ರವಾಸಿಗರು ಪ್ರವಾಸದ ನೆಪದಲ್ಲಿ ಹಂಪಿಯಲ್ಲಿ ಸ್ವೇಚ್ಛಾಚಾರದಿಂದ ವರ್ತನೆ ಮಾಡುತ್ತಿದ್ದಾರೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.