Tag: ವಿದೇಶಿ ಟೂರ್ನಿ

  • ಬಿಗ್ ಬ್ಯಾಶ್ ಆಡಲು ಆಸ್ಟ್ರೇಲಿಯಾಗೆ ಹೋಗ್ತಾರಾ ಯುವಿ?

    ಬಿಗ್ ಬ್ಯಾಶ್ ಆಡಲು ಆಸ್ಟ್ರೇಲಿಯಾಗೆ ಹೋಗ್ತಾರಾ ಯುವಿ?

    ನವದೆಹಲಿ: ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ (ಬಿಬಿಎಲ್) ಆಡಲು ಭಾರತದ ಮಾಜಿ ಆಟಗಾರ ಯುವರಾಜ್ ಸಿಂಗ್ ಆಸ್ಟ್ರೇಲಿಯಾಗೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ನಿವೃತ್ತಿ ನಂತರ ಕಳೆದ ವರ್ಷ ಬಿಸಿಸಿಐನಿಂದ ಅನುಮತಿ ಪಡೆದುಕೊಂಡಿದ್ದ ಯುವರಾಜ್, ಗ್ಲೋಬಲ್ ಟಿ-20 ಲೀಗ್ ಕೆನಡಾ ಮತ್ತು ಟಿ-10 ಲೀಗ್ ಅಬುಧಾಬಿ ಎಂಬ ಎರಡು ವಿದೇಶಿ ಟೂರ್ನಿಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಅವರು ಮುಂದಿನ ಡಿಸೆಂಬರ್ 3ರಂದು ಆರಂಭವಾಗುವ ಬಿಗ್ ಬ್ಯಾಶ್ ಲೀಗ್‍ನಲ್ಲೂ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್‍ಗೆ ವಿದಾಯ ಹೇಳಿದ್ದ ಯುವರಾಜ್ ಅವರು, ನಂತರ ವಿದೇಶಿ ಟೂರ್ನಿಯಲ್ಲಿ ಭಾಗವಹಿಸಿದ್ದರು. ಹೀಗಾಗಿ ಬಿಗ್ ಬ್ಯಾಶ್ ಲೀಗ್‍ನಲ್ಲೂ ಭಾಗವಹಿಸುವಂತೆ ಅವರಿಗೆ ಕರೆಗಳು ಬಂದಿವೆ ಎನ್ನಲಾಗಿದೆ. ಇದರ ಬಗ್ಗೆ ಮಾತನಾಡಿರುವ ಯುವರಾಜ್ ಸಿಂಗ್ ಅವರ ಮ್ಯಾನೇಜರ್ ಜೇಸನ್ ವಾರ್ನೆ, ನಾವು ಇದರ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ ಎಂದಿದ್ದಾರೆ. ಬಿಬಿಎಲ್ ಆಡಳಿತ ಮಂಡಳಿ ಕೂಡ ಯುವರಾಜ್‍ಗಾಗಿ ತಂಡವನ್ನು ಆಯ್ಕೆ ಮಾಡುತ್ತಿದೆ ಎನ್ನಲಾಗಿದೆ.

    ಈವರೆಗೂ ಇಂಡಿಯಾದ ಯಾವುದೇ ಆಟಗಾರ ಬಿಗ್ ಬ್ಯಾಶ್ ಲೀಗ್ ಆಡಿಲ್ಲ. 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಸಚಿನ್ ಅವರನ್ನು ಸಿಡ್ನಿ ಥಂಡರ್ ತಂಡ ಬಿಗ್ ಬ್ಯಾಶ್ ಆಡುವಂತೆ 2014ರಲ್ಲಿ ಕೇಳಿತ್ತು. ಆದರೆ ಸಚಿನ್ ಅವರು ಆಡಿರಲಿಲ್ಲ. ಇದಾದ ನಂತರ ಸದ್ಯ ಎರಡು ವಿದೇಶಿ ಟೂರ್ನಿ ಆಡಿರುವ ಯುವರಾಜ್ ಅವರನ್ನು ಬಿಬಿಎಲ್ ಆಡುವಂತೆ ಕೇಳಿಕೊಂಡಿದೆ. ಆದರೆ ಯುವರಾಜ್ ಬಿಬಿಎಲ್‍ನಲ್ಲಿ ಭಾಗವಹಿಸುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

    ಬಿಸಿಸಿಐ ನಿಯಮದ ಪ್ರಕಾರ ಪ್ರಸ್ತುತ ಇಂಡಿಯಾ ಟೀಂನಲ್ಲಿ ಆಡುತ್ತಿರುವ ಯಾವುದೇ ಆಟಗಾರ ಕೂಡ ವಿದೇಶಿ ಟೂರ್ನಿಯಲ್ಲಿ ಭಾಗವಹಿಸುವಂತಿಲ್ಲ. ನಿವೃತ್ತಿ ಹೊಂದಿದ ಬಳಿಕ ಬಿಸಿಸಿಐಯಿಂದ ಅನುಮತಿ ಪಡೆದು ವಿದೇಶಿ ಟೂರ್ನಿಗಳಲ್ಲಿ ಮಾಜಿ ಆಟಗಾರರು ಭಾಗಹಿಸಬಹುದು. ಅಂತೆಯೇ ಯುವರಾಜ್ ಸಿಂಗ್, ವಿರೇಂದ್ರ ಸೆಹ್ವಾಗ್, ಜಾಹಿರ್ ಖಾನ್, ಪ್ರವೀಣ್ ತಾಂಬೆ ಮತ್ತಿತರು ವಿದೇಶಿ ಟೂರ್ನಿಯಲ್ಲಿ ಭಾಗಹಿಸಿದ್ದಾರೆ.

  • ಟೀಂ ಇಂಡಿಯಾ ಕ್ರಿಕೆಟಿಗರಿಗೆ ಡಬಲ್ ಗಿಫ್ಟ್

    ಟೀಂ ಇಂಡಿಯಾ ಕ್ರಿಕೆಟಿಗರಿಗೆ ಡಬಲ್ ಗಿಫ್ಟ್

    ಮುಂಬೈ: ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ತವರು ನೆಲದಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಗಳು ಮಾತ್ರವಲ್ಲದೇ ವಿದೇಶಿ ನೆಲದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಆಡಳಿತ ಮಂಡಳಿ ಆಟಗಾರರಿಗೆ ಡಬಲ್ ಬೋನಾನ್ಜಾ ನೀಡಿದ್ದು, ವಿದೇಶಿ ಟೂರ್ನಿಗೆ ತೆರಳಿದ ಸಂದರ್ಭದಲ್ಲಿ ಆಟಗಾರರಿಗೆ ನೀಡುತ್ತಿದ್ದ ದಿನದ ಭತ್ಯೆಯನ್ನು ಡಬಲ್ ಮಾಡಿದೆ.

    ಟೀಂ ಇಂಡಿಯಾ ಆಟಗಾರರು ಮಾತ್ರವಲ್ಲದೆ ತಂಡದೊಂದಿಗೆ ತೆರಳುವ ಮ್ಯಾನೇಜ್‍ಮೆಂಟ್ ತಂಡ ಸದಸ್ಯರಿಗೆ ನೀಡುತ್ತಿದ್ದ ದಿನದ ಭತ್ಯೆಯನ್ನು ಹೆಚ್ಚಿಸಿದೆ. ಇದುವರೆಗೂ ದಿನದ ಭತ್ಯೆಯಾಗಿ ಆಟಗಾರರಿಗೆ 125 ಡಾಲರ್ (ಸುಮಾರು 8 ಸಾವಿರ ರೂ.) ನೀಡಲಾಗುತ್ತಿತ್ತು. ಸದ್ಯ ಭತ್ಯೆ ಹೆಚ್ಚಳ ಮಾಡಿರುವುದರಿಂದ 250 ಡಾಲರ್ (ಸುಮಾರು 17 ಸಾವಿರ ರೂ.) ಲಭಿಸಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ವರದಿಯ ಅನ್ವಯ ಕ್ರಿಕೆಟಿಗರ ದಿನದ ಭತ್ಯೆ ಮಾತ್ರವಲ್ಲದೇ ಪ್ರಯಾಣ ಭತ್ಯೆಯನ್ನು ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂಬ ಮಾಹಿತಿ ಇದೆ. ಆಟಗಾರರು, ಸಿಬ್ಬಂದಿಗೆ ಇತರ ಸೌಲಭ್ಯಗಳನ್ನು ಬಿಸಿಸಿಐ ಪ್ರತ್ಯೇಕವಾಗಿ ಮಾಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಕ್ಯಾಪ್ಟನ್ ವಿರಾಟ್ ಕೊಹ್ಲಿ ಡಿಮ್ಯಾಂಡ್ ಮೇರೆಗೆ ಆಟಗಾರರು ಹಾಗೂ ಸಿಬ್ಬಂದಿಯ ಸಂಬಳವನ್ನು ಬಿಸಿಸಿಐ ಶೇ.200 ರಷ್ಟು ಹೆಚ್ಚಿಸಿದ್ದ ಸಂಗತಿ ಎಲ್ಲರಿಗೂ ತಿಳಿಸಿದಿದೆ. ಪ್ರತಿ ವರ್ಷ ‘ಎ’ ಪ್ಲಸ್ ಶ್ರೇಣಿಯಲ್ಲಿದ್ದ ಆಟಗಾರರು 7 ಕೋಟಿ ರೂ. ಸಂಭಾವನೆಯನ್ನು ಪಡೆದರೆ, ‘ಎ’ ಗ್ರೇಡ್ ಪಟ್ಟಿಯಲ್ಲಿನ ಆಟಗಾರರು 5 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಿದ್ದಾರೆ. 2018 ರಲ್ಲಿ ಮೊದಲ ಬಾರಿಗೆ ಬಿಸಿಸಿಐ ತನ್ನ ಒಪ್ಪಂದ ಪಟ್ಟಿಯಲ್ಲಿ ‘ಎ’ ಪ್ಲಸ್ ಶ್ರೇಣಿಯನ್ನು ನೀಡಿತ್ತು. ಉಳಿದಂತೆ ‘ಬಿ’ ಶ್ರೇಣಿಯ ಆಟಗಾರರು 3 ಕೋಟಿ ರೂ., ‘ಸಿ’ ಶ್ರೇಣಿಯ ಆಟಗಾರರು 1 ಕೋಟಿ ರೂ. ಪಡೆಯುತ್ತಿದ್ದಾರೆ. ಮಹಿಳಾ ಕ್ರಿಕೆಟ್ ಆಟಗಾರರಲ್ಲಿ ‘ಎ’ ಶ್ರೇಣಿಯ ಆಟಗಾರರು 50 ಲಕ್ಷ ರೂ., ‘ಬಿ’ ಶ್ರೇಣಿಯ ಆಟಗಾರರು 30 ಲಕ್ಷ ರೂ. ಹಾಗೂ ‘ಸಿ’ ಶ್ರೇಣಿಯ ಆಟಗಾರರು 10 ಲಕ್ಷ ರೂ. ಪಡೆಯುತ್ತಿದ್ದಾರೆ.

  • ವಿದೇಶಿ ಟೂರ್ನಿಗೆ ಬರಲು ಪತ್ನಿಯರಿಗೂ ಅವಕಾಶ ನೀಡಿ: ವಿರಾಟ್ ಕೊಹ್ಲಿ

    ವಿದೇಶಿ ಟೂರ್ನಿಗೆ ಬರಲು ಪತ್ನಿಯರಿಗೂ ಅವಕಾಶ ನೀಡಿ: ವಿರಾಟ್ ಕೊಹ್ಲಿ

    ಮುಂಬೈ: ವಿದೇಶಿ ಪ್ರವಾಸದ ವೇಳೆ ಪತ್ನಿಯರಿಗೂ ಆಟಗಾರರ ಜೊತೆ ಬರಲು ಅವಕಾಶ ನೀಡಿ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್ ನೇಮಿಸಿದ ಬಿಸಿಸಿಐ ಆಡಳಿತ ಸಮಿತಿ, ಈ ಕುರಿತು ತಕ್ಷಣ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಪತ್ರಿಕ್ರಿಯೆ ನೀಡಿರುವುದಾಗಿ ವರದಿಯಾಗಿದೆ.

    ಪತ್ನಿಯರನ್ನು ಪ್ರವಾಸಕ್ಕೆ ಕರೆದುಕೊಂಡು ಬರಲು ಅನುಮತಿ ನೀಡುವಂತೆ ಕೊಹ್ಲಿ ಮನವಿ ಮಾಡಿದ್ದಾರೆ. ಆದರೆ ನಾವು ಕೂಡಲೇ ಯಾವುದೇ ತೀರ್ಮಾನ ಮಾಡುವುದಿಲ್ಲ. ಈ ನಿರ್ಧಾರ ಕೈಗೊಳ್ಳಲು ಸಮಿತಿಗೆ ಅವಕಾಶ ನೀಡಲಾಗುವುದು. ಸದ್ಯ ಈ ನಿಯಮ ಬದಲಾಗುವುದಿಲ್ಲ ಎಂದು ಆಡಳಿತ ಸಮಿತಿ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಮಾಡಿದೆ.

    ಸುದೀರ್ಘ ಅವಧಿಯ ವಿದೇಶಿ ಟೂರ್ನಿಯ ವೇಳೆ ಆಟಗಾರರ ಪತ್ನಿಯರಿಗೆ ತಂಡದೊಂದಿಗೆ ಬರುವ ಅವಕಾಶ ಕಲ್ಪಿಸುವ ಕುರಿತು ಕೊಹ್ಲಿ ಮನವಿ ಮಾಡಿದ್ದಾರೆ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾದ ಬೆನ್ನಲ್ಲೇ ಆಡಳಿತ ಮಂಡಳಿ ಈ ಪ್ರತಿಕ್ರಿಯೆ ನೀಡಿದೆ. ಅಲ್ಲದೇ ಈ ಕುರಿತ ನಿಯಮ ಬದಲಾವಣೆ ಮಾಡಲು ಟೀಂ ಇಂಡಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಸುನಿಲ್ ಸುಬ್ರಮಣ್ಯಂ ಅವರಿಗೆ ಮನವಿ ಮಾಡಿರುವುದಾಗಿ ಮೂಲಗಳಿಂದ ಮಾಧ್ಯಮಗಳಿಗೆ ಮಾಹಿತಿ ಲಭಿಸಿದೆ.

    ಟೀಂ ಇಂಡಿಯಾ ಸದ್ಯ ತವರು ನೆಲದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ನಡುವಿನ ಮೂರು ಮಾದರಿಯ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಇದಾದ ಬಳಿಕ ನವೆಂಬರ್ 21 ರಿಂದ ಆರಂಭವಾಗುವ ಆಸ್ಟೇಲಿಯಾ ವಿರುದ್ಧ ಟೂರ್ನಿಯಲ್ಲಿ ಭಾಗವಹಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv