Tag: ವಿಜ್ಞಾನ

  • ಚಂದ್ರಗ್ರಹಣ- ಮೂಢನಂಬಿಕೆ ಧಿಕ್ಕರಿಸಿ ಹೊಸ ಜೀವನಕ್ಕೆ ಕಾಲಿಟ್ಟ ನವಜೋಡಿ

    ಚಂದ್ರಗ್ರಹಣ- ಮೂಢನಂಬಿಕೆ ಧಿಕ್ಕರಿಸಿ ಹೊಸ ಜೀವನಕ್ಕೆ ಕಾಲಿಟ್ಟ ನವಜೋಡಿ

    ಚಿತ್ರದುರ್ಗ: ಚಂದ್ರಗ್ರಹಣದಿಂದಾಗಿ ಶುಭ ಕಾರ್ಯ ಮಾಡಬಾರದು ಎಂದು ಜ್ಯೋತಿಷಿಗಳು ಹೇಳುತ್ತಿದ್ದರೆ, ಕೋಟೆನಾಡು ಚಿತ್ರದುರ್ಗದ ಮುರುಘಾ ಮಠ ಮೂಢನಂಬಿಕೆಯನ್ನು ಧಿಕ್ಕರಿಸುವ ಮೂಲಕ ನವಜೋಡಿಗೆ ವಿವಾಹ ಕಾರ್ಯಕ್ರಮ ಏರ್ಪಡಿಸಿ ವಿಶಿಷ್ಟ ಕಾರ್ಯಕ್ರಮ ನಡೆಸಿದೆ. ಅಲ್ಲದೇ ಇದೇ ವೇಳೆ ನೂರಾರು ಬಾಲಕ, ಬಾಲಕಿಯರು ಹಾಗೂ ಯುವಕರು ಲಿಂಗದೀಕ್ಷೆ ಪಡೆದಿದ್ದಾರೆ.

    ಜಿಲ್ಲೆಯ ಜಿಲ್ಲೆಯ ಹಿರಿಯೂರು ತಾಲೂಕಿನ ಹೂವಿನಹೊಳೆಯ ಮರಡಿ ರಂಗಪ್ಪ ನಾಯಕ ಮತ್ತು ವಸಂತಕುಮಾರಿ ಅವರಿಗೆ ಚಂದ್ರಗ್ರಹಣದಂದೇ ಮದುವೆ ಶುಭಕಾರ್ಯ ನಡೆಸಲಾಯಿತು. ಮುರುಘಾಮಠದಲ್ಲಿರುವ ಅಲ್ಲಮ್ಮಪ್ರಭು ಸಂಶೋಧನಾ ಕೇಂದ್ರ ಸಭಾಂಗಣದಲ್ಲಿ ನವಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು. ಉಳಿದಂತೆ ನೂರಾರು ಯುವಕ ಯುವತಿಯರು ವಿಭೂತಿ, ರುದ್ರಾಕ್ಷಿ ಧರಿಸುವ ಮೂಲಕ ಲಿಂಗ ದೀಕ್ಷೆ ಪಡೆದರು.

    ಚಂದ್ರಗ್ರಹಣ ಜಗತ್ತಿನ ಅದ್ಭುತ. ಇದು ರಕ್ತ ಚಂದಿರ ಅಲ್ಲ. ಅದ್ಭುತ ಚಂದಿರ. ಮಂಗಳ ಮತ್ತು ಅಮಂಗಳ ಎಂಬುದು ಇಲ್ಲ. ಜಗತ್ತಿನಲ್ಲಿ ಎಲ್ಲವೂ ಶುಭಕರ. ಬ್ರಿಟಿಷರ ದಾಸ್ಯದಿಂದ ಹೊರಗೆ ಬಂದ ನಾವು ಪಂಚಾಂಗದ ದಾಸ್ಯದಲ್ಲಿ ಜೀವಿಸುತ್ತಿದ್ದೇವೆ. ಮುಗ್ಧ ಜನರಿಗೆ ಹಾದಿ ತಪ್ಪಿಸುತ್ತಿರುವ ಕೆಲಸ ನಡೆಯುತ್ತಿದೆ. ಚಂದ್ರ ಗ್ರಹಣದ ಬಗ್ಗೆ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಹೀಗಾಗಿ ಈ ಮೂಲಕ ಜನರ ಭಯವನ್ನು ದೂರ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಡಾ. ಶಿವಮೂರ್ತಿ ಮುರುಘಾ ಶ್ರೀಗಳು ಹೇಳಿದ್ದರು.

  • ಫೋಟೋ: 6 ದಿನದ ಬಳಿಕ ನಾಪತ್ತೆಯಾಗಿದ್ದ 17ರ ವಿದ್ಯಾರ್ಥಿನಿ ಅಮ್ಮನ ಮಡಿಲು ಸೇರಿದ ಕ್ಷಣ

    ಫೋಟೋ: 6 ದಿನದ ಬಳಿಕ ನಾಪತ್ತೆಯಾಗಿದ್ದ 17ರ ವಿದ್ಯಾರ್ಥಿನಿ ಅಮ್ಮನ ಮಡಿಲು ಸೇರಿದ ಕ್ಷಣ

    ಮುಂಬೈ: ನಗರದ ವಿಲೇ ಪಾರ್ಲೆ ಮನೆಯಿಂದ ಕಳೆದ 6 ದಿನಗಳ ಹಿಂದೆ ಕಾಣೆಯಾಗಿದ್ದ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಅಮ್ಮನ ಮಡಿಲು ಸೇರಿದ ಕ್ಷಣದ ಭಾವನಾತ್ಮಕ ಫೋಟೋವನ್ನು ಮುಂಬೈ ಪೊಲೀಸರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

    ವಿದ್ಯಾರ್ಥಿನಿಯನ್ನು ಸ್ವಾತಿ ಕಂಗೆ ಎಂದು ಗುರುತಿಸಲಾಗಿದೆ. ಈಕೆ ಅಂಧೇರಿ ಕಾಲೇಜೊಂದರಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದು, ಆಗಸ್ಟ್ 16ರಂದು ಕಾಲೇಜಿಗೆಂದು ಹೋದವಳು ಕಾಣೆಯಾಗಿದ್ದಳು. ಇದೀಗ ನಿನ್ನೆ ಪತ್ತೆಯಾಗಿದ್ದು, ಮಗಳಿಗಾಗಿ ಕಾಯುತ್ತಿದ್ದ ಪೋಷಕರ ಖುಷಿಯ ಕಣ್ಣೀರು ಮನಕಲಕುವಂತಿತ್ತು. ಈ ಫೋಟೋ ಮಗಳು ನಾಪತ್ತೆಯಾಗಿದ್ದಂದಿನಿಂದ ಕುಟುಂಬ ಎಷ್ಟು ಚಿಂತೆಗೀಡಾಗಿತ್ತೆಂದು ಸ್ಪಷ್ಟವಾಗಿ ತೋರಿಸುತ್ತಿದೆ.

    ಮಗಳು ನಾಪತ್ತೆಯಾಗಿರುವ ಕುರಿತು ಸ್ವಾತಿ ಪೋಷಕರು ಅಂಧೇರಿ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 16ರಂದು ದೂರು ದಾಖಲಿಸಿದ್ದರು. ಅಂತೆಯೇ ಪೊಲೀಸರು ಸ್ವಾತಿಯ ಹುಡುಕಾಟಕ್ಕೆ 4 ತಂಡಗಳನ್ನು ರಚಿಸಿದ್ದರು. ಅಲ್ಲದೇ ಸುಮಾರು 7 ಸಿಸಿಟಿವಿ ಕ್ಯಾಮರಾಗಳನ್ನು ಪರಿಶಿಲಿಸಿದ್ದರು. ಅಲ್ಲದೇ ಆಕೆಯ ಸ್ನೇಹಿತರು ಸೇರಿದಂತೆ ಹಲವಾರು ಮಂದಿಯನ್ನು ತನಿಖೆ ಮಾಡಿದ್ದರು. ಅಂತೆಯೇ ಆಗಸ್ಟ್ 22ರಂದು ಬೆಳಗ್ಗಿನ ಜಾವ ಸುಮಾರು 4 ಗಂಟೆಯ ವೇಳೆಗೆ ಸ್ವಾತಿ ಥಾಣೆಯಲ್ಲಿರುವುದು ಬೆಳಕಿಗೆ ಬಂದಿದೆ ಅಂತ ಪೊಲಿಸರು ತಿಳಿಸಿದ್ದಾರೆ.

    ಮಂಗಳವಾರ ಅಂಧೇರಿ ಪೊಲೀಸ್ ಠಾಣೆಯಿಂದ ಇಬ್ಬರು ಅಧಿಕಾರಿಗಳಾದ ಚೇತನ್ ಪಚೆಲ್ವರ್ ಹಾಗೂ ಚವಾನ್, ಸ್ವಾತಿ ಥಾಣೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಆಕೆಯನ್ನು ಅಂಧೆರಿಗೆ ಕರೆದುಕೊಂಡು ಬಂದಿದ್ದಾರೆ.

    `ಅಂಧೇರಿ ಪೊಲೀಸರ ತಂಡದ ಸತತ ಪ್ರಯತ್ನದಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಪತ್ತೆ ಮಾಡಲಾಗಿದೆ. ಪೊಲೀಸ್ ಠಾಣೆಯಲ್ಲಿ ವಿಚಾರಣೆಯ ಬಳಿಕ ವಿದ್ಯಾರ್ಥಿನಿಯನ್ನು ಪೋಷಕರಿಗೆ ಒಪ್ಪಿಸಲಾಗಿದೆ’ ಅಂತ ಅಂಧೇರಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಪಂಡಿತ್ ತೊರಟ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಆಕೆ ಪೋಷಕರ ಕೈಗೆ ಸೇರುವುದಕ್ಕೂ ಮುನ್ನ ಮಾಧ್ಯಮಕ್ಕೆ ಸ್ವಾತಿ ತಾಯಿ ಪ್ರತಿಕ್ರಿಯಿಸಿ, `ನನ್ನ ಮಗಳು ಅಂಧೇರಿ ಪೊಲೀಸ್ ಠಾಣೆಯಲ್ಲಿದ್ದಾಳೆ. ಇನ್ನೇನು ಕೆಲ ಹೊತ್ತಲ್ಲೇ ಆಕೆಗೆ ಮನೆಗೆ ಬರುತ್ತಾಳೆ. ಘಟನೆಯ ಬಗ್ಗೆ ನನಗೇನೂ ಗೊತ್ತಿಲ್ಲ. ತನ್ನ ಕೆಲ ಸಹಪಾಠಿಗಳ ಜೊತೆ ಆಕೆ ಹೊರಗಡೆ ಹೋಗಿರುವುದು ಅಷ್ಟೇ ಗೊತ್ತಿದೆ. ಒಟ್ಟಿನಲ್ಲಿ 6 ದಿನಗಳ ಬಳಿಕ ಸುರಕ್ಷಿತವಾಗಿ ಮನೆಗೆ ಬರುತ್ತಿರುವುದೇ ನನಗೆ ಸಂತಸ’ ಅಂತ ಹೇಳಿ ಖುಷಿಯ ಕಣ್ಣೀರು ಸುರಿಸಿದ್ದರು.

  • ಹಾಡಿನ ಮೂಲಕ ವಿಜ್ಞಾನದ ಕಲಿಕೆ- ಜಾಗೃತಿ ಜೊತೆ ಪಠ್ಯ ಬೋಧನೆ ಮಾಡುವ ವೀರೇಂದ್ರ ಪಾಟೀಲ್ ಮೇಷ್ಟ್ರು

    ಹಾಡಿನ ಮೂಲಕ ವಿಜ್ಞಾನದ ಕಲಿಕೆ- ಜಾಗೃತಿ ಜೊತೆ ಪಠ್ಯ ಬೋಧನೆ ಮಾಡುವ ವೀರೇಂದ್ರ ಪಾಟೀಲ್ ಮೇಷ್ಟ್ರು

    ರಾಯಚೂರು: ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರ್ಕಾರ ಹಾಕಿಕೊಳ್ಳೋ ಎಷ್ಟೋ ಯೋಜನೆಗಳು ಹಳ್ಳ ಹಿಡಿದಿವೆ. ಆದರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹಾಡಿನ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಿಸೋ ಜೊತೆಗೆ ಪರಿಸರ ಜಾಗೃತಿ ಮೂಡಿಸ್ತಿದ್ದಾರೆ.

     

    ನಗರದ ಗಾಜಗಾರಪೇಟೆ ಪ್ರೌಢಶಾಲೆ ವಿಜ್ಞಾನ ಶಿಕ್ಷಕರಾಗಿರೋ ವೀರೇಂದ್ರ ಪಾಟೀಲರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಸಂಗೀತದ ಮೂಲಕ ಮಕ್ಕಳಿಗೆ ಬೇಗ ಅರ್ಥವಾಗುತ್ತೆ ಅನ್ನೋದನ್ನ ಮನಗಂಡ ಪಾಟೀಲ್ ಮೇಷ್ಟ್ರು ತಮ್ಮ ವಿಜ್ಞಾನ ಪಠ್ಯವನ್ನ ಹಾಡಿನ ಮೂಲಕ ಪ್ರಸ್ತುತಿ ಪಡಿಸ್ತಿದ್ದಾರೆ.

    ವೈಜ್ಞಾನಿಕ ಪದಗಳನ್ನ ಸುಲಭವಾಗಿ ಅರ್ಥ ಮಾಡಿಸುವುದರ ಜೊತೆಗೆ ಪರಿಸರ ಕಾಳಜಿಯನ್ನೂ ಮೂಡಿಸುತ್ತಿದ್ದಾರೆ. ಸಾಹಿತ್ಯ ರಚಿಸಿ, ನಿರ್ದೇಶನದ ಜೊತೆ ತಾವೇ ಹಾಡಿದ್ದಾರೆ. ಒಟ್ಟು 7 ಹಾಡುಗಳ ಸಿಡಿಯನ್ನ ಬಿಡುಗಡೆ ಮಾಡಿದ್ದು 350ಕ್ಕೂ ಹೆಚ್ಚು ಪ್ರತಿಗಳನ್ನ ಉಚಿತವಾಗಿ ವಿವಿಧ ಶಾಲೆಗೂ ಹಂಚಲಾಗಿದೆ.

    ಈ ರೀತಿಯ ಹಾಡುಗಳಿಂದ ವಿಜ್ಞಾನ ವಿಷಯದಲ್ಲಿ ಪಾಸಾಗೋದು ಸುಲಭವಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಪಾಟೀಲ್ ಮೇಷ್ಟ್ರ ಈ ಕಾರ್ಯಕ್ಕೆ ಭಾರತ ಜ್ಞಾನ ವಿಜ್ಞಾನ ಸಮಿತಿ, ವಾಸವಿ ಸೇವಾ ಸಂಘ ಸೇರಿ ಕೆಲ ಸಂಸ್ಥೆಗಳು ಸಹಕಾರ ನೀಡಿವೆ.

    https://www.youtube.com/watch?v=dC0yCkgiDTc

     

  • ಪಿಯು ಫಲಿತಾಂಶ: ಮೂರು ವಿಭಾಗದ ಟಾಪ್ 10 ಟಾಪರ್ ಲಿಸ್ಟ್ ಇಲ್ಲಿದೆ

    ಪಿಯು ಫಲಿತಾಂಶ: ಮೂರು ವಿಭಾಗದ ಟಾಪ್ 10 ಟಾಪರ್ ಲಿಸ್ಟ್ ಇಲ್ಲಿದೆ

    ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಬಾಲಕೀಯರೇ ಮೇಲುಗೈ ಸಾಧಿಸಿದ್ದಾರೆ ಕಳೆದ ವರ್ಷಕ್ಕಿಂತ ಈ ಬಾರಿ ಶೇ.4.82 ಫಲಿತಾಂಶ ಇಳಿಕೆಯಾಗಿದ್ದು, ಈ ವರ್ಷ 52.38 ಫಲಿತಾಂಶ ದಾಖಲಾಗಿದೆ. 6,84,490 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 3,55,697 ಮಂದಿ ಉತ್ತೀರ್ಣರಾಗಿದ್ದಾರೆ.

    ಕಲಾ ವಿಭಾಗದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಬಳ್ಳಾರಿಯ ಕೊಟ್ಟೂರು ಹಿಂದೂ ಕಾಲೇಜು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಚೈತ್ರಾ ಬಿ. 589 ಅಂಕಗಳಿಸಿ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

    ಕಾಮರ್ಸ್ ವಿಭಾಗದಲ್ಲಿ ಇಬ್ಬರು ಟಾಪರ್ ಆಗಿದ್ದು, ಬೆಂಗಳೂರಿನ ವಿಜಯನಗರದ ಆರ್‍ಎನ್‍ಎಸ್ ಕಾಲೇಜಿನ ಶ್ರೀನಿಧಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆಯ ಸತ್ಯಸಾಯಿ ಕಾಲೇಜಿನ ಸಾಯಿ ಸಮರ್ಥ್ 595 ಅಂಕಗಳಿಸಿದ್ದಾರೆ.

    ವಿಜ್ಞಾನ ವಿಭಾಗದಲ್ಲಿ  ಇಬ್ಬರು ಟಾಪರ್ ಆಗಿದ್ದು, ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ಸೃಜನಾ ಎನ್ ಮತ್ತು ಕುಂದಾಪುರದ ಎಸ್‍ವಿ ಕಾಲೇಜಿನ ರಾಧಿಕಾ ಪೈ 596 ಅಂಕಗಳಿಸಿದ್ದಾರೆ.

    ಹೀಗಾಗಿ ಇಲ್ಲಿ ಮೂರು ವಿಭಾಗದಲ್ಲಿನ ಟಾಪ್ 10 ಟಾಪರ್‍  ಪಟ್ಟಿಯನ್ನು ನೀಡಲಾಗಿದೆ.

    ಕಲಾ ವಿಭಾಗ

    ವಾಣಿಜ್ಯ ವಿಭಾಗ

    ವಿಜ್ಞಾನ ವಿಭಾಗ

    ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ?