Tag: ವಿಜಯ ಬ್ಯಾಂಕ್

  • ಸಾಲ ಪಾವತಿಸದ ವಾಟಾಳ್ – ಮನೆಗೆ ಎಂಟ್ರಿಕೊಟ್ಟು ಶಾಕ್ ಕೊಟ್ಟ ಬ್ಯಾಂಕ್ ಸಿಬ್ಬಂದಿ!

    ಸಾಲ ಪಾವತಿಸದ ವಾಟಾಳ್ – ಮನೆಗೆ ಎಂಟ್ರಿಕೊಟ್ಟು ಶಾಕ್ ಕೊಟ್ಟ ಬ್ಯಾಂಕ್ ಸಿಬ್ಬಂದಿ!

    ಬೆಂಗಳೂರು: ಮಾತೆತ್ತಿದ್ರೆ ಬಂದ್ ಬಂದ್ ಎನ್ನುವ ವಾಟಾಳ್ ನಾಗರಾಜ್‍ಗೆ ಇಂದು ಬ್ಯಾಂಕ್‍ನವರು ದಿಢೀರ್ ಶಾಕ್ ಕೊಟ್ಟಿದ್ದಾರೆ. ಕತ್ತೆ ಕುರಿ ಎಮ್ಮೆ ಜೊತೆ ಬೀದಿಗೆ ಬಂದು ಪ್ರತಿಭಟನೆ ನಡೆಸುವ ವಾಟಾಳ್ ಮನೆ ಮುಂದೆ ಮಧ್ಯಾಹ್ನ ಬ್ಯಾಕ್‍ನವರು ಬಂದಿದ್ದರು.

    ವಾಟಾಳ್ ವಿಜಯ ಬ್ಯಾಂಕಿನಿಂದ ಗೃಹ ಸಾಲವನ್ನು ಪಡೆದಿದ್ದರು. ಗೃಹ ಸಾಲದ 17 ಲಕ್ಷ ರೂ. ಹಣವನ್ನು ವಾಟಾಳ್ ಪಾವತಿಸಬೇಕಿತ್ತು. 2017ಕ್ಕೆ ಜುಲೈ ತಿಂಗಳಿಗೆ ಸಾಲ ಪಾವತಿಸಬೇಕಿತ್ತು. ಈ ಸಾಲದ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ನೋಟಿಸ್ ನೀಡಿತ್ತು.

    ಮೂರು ನೋಟಿಸ್ ಕಳುಹಿಸಿದರೂ ವಾಟಾಳ್ ನಾಗರಾಜ್ ಅವರು ಉತ್ತರ ನೀಡಿರಲಿಲ್ಲ. ನೋಟಿಸ್ ಗೆ ಕ್ಯಾರೇ ಅನ್ನದ ವಾಟಾಳ್ ಮನೆಗೆ ಇಂದು ವಿಜಯ ಬ್ಯಾಂಕ್ ಸಿಬ್ಬಂದಿ ಲಾಯರ್ ಜೊತೆ ಆಗಮಿಸಿದ್ದರು.

    ಬ್ಯಾಂಕ್‍ನವರು ಬಂದಿರುವ ಸುದ್ದಿ ಕೇಳುತ್ತಿದ್ದಂತೆ ವಾಟಾಳ್ ಮನೆಗೆ ಆಗಮಿಸಿದ್ದಾರೆ. ಬ್ಯಾಂಕ್‍ನವರನ್ನು ಹೆಂಗೋ ಮಾತಾನಾಡಿ ಸಾಗ ಹಾಕಿದ್ದಾರೆ. ವಾಟಾಳ್ ಮನವಿಯ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ಸ್ಥಳದಿಂದ ತೆರಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬ್ಯಾಂಕ್ ಸಿಬ್ಬಂದಿ ಗಮನ ಬೇರೆಡೆ ಸೆಳೆದು 7 ಮಂದಿಯಿಂದ 10 ಲಕ್ಷ ಕಳವು!

    ಬ್ಯಾಂಕ್ ಸಿಬ್ಬಂದಿ ಗಮನ ಬೇರೆಡೆ ಸೆಳೆದು 7 ಮಂದಿಯಿಂದ 10 ಲಕ್ಷ ಕಳವು!

    ಬೆಂಗಳೂರು: ಬ್ಯಾಂಕ್ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಹಣ ಕಳ್ಳತನ ಮಾಡಿರುವ ಘಟನೆ ನಗರದ ಸಂಪಿಗೆ ರಸ್ತೆಯ ವಿಜಯಾ ಬ್ಯಾಂಕ್ ನಲ್ಲಿ ನಡೆದ ನಡೆದಿದೆ.

    ಕಳೆದ ತಿಂಗಳ 31 ರಂದು ಈ ಘಟನೆ ನಡೆದಿದೆ. ಏಳು ಜನ ಅಪರಿಚಿತ ವ್ಯಕ್ತಿಗಳು ಈ ಕೃತ್ಯ ಎಸಗಿದ್ದು, ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಗಮನ ಬೇರೆಡೆ ಸೆಳೆದು ಕ್ಯಾಶ್ ಕೌಂಟರ್ ಗೆ ಹೋಗಿದ್ದ ಖದೀಮರು ಅಲ್ಲಿದ್ದ ಹತ್ತು ಲಕ್ಷ ಹಣ ಎಗರಿಸಿ ಪರಾರಿಯಾಗಿದ್ದಾರೆ. ಬಳಿಕ ಬ್ಯಾಂಕ್ ವಹಿವಾಟು ಅಂತ್ಯವಾದ ನಂತ್ರ ಹತ್ತು ಲಕ್ಷ ಹಣ ಕಡಿಮೆಯಾಗಿತ್ತು. ಹಣದ ವಹಿವಾಟು ತನಿಖೆ ವೇಳೆ ಹಣ ಕಡಿಮೆಯಾಗಿದ್ದು ಬೆಳಕಿಗೆ ಬಂದಿದೆ.

    ಬ್ಯಾಂಕ್ ಸಿಸಿಟಿವಿ ಪರಿಶೀಲನೆ ನಡೆಸಿದ ಸಿಬ್ಬಂದಿ, ಈ ವೇಳೆ ಏಳು ಜನ ವ್ಯಕ್ತಿಗಳು ಅನುಮಾನಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿದೆ. ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಮ್ಯಾನೇಜರ್ ಎಸ್ ಸಿ ನಾಯಕ್ ದೂರು ದಾಖಲಿದ್ದಾರೆ.

    ಸದ್ಯ ದೂರು ದಾಖಲಿಸಿಕೊಂಡಿರೋ ಪೊಲೀಸರು ವಂಚಕ ಗ್ಯಾಂಗ್ ಗಾಗಿ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರಾಮದಲ್ಲಿದ್ದ ಬ್ಯಾಂಕ್ ಬೇರೆ ಕಡೆಗೆ ಶಿಫ್ಟ್: ರೊಚ್ಚಿಗೆದ್ದ ಉಡುಪಿ ಗ್ರಾಮಸ್ಥರಿಂದ ಪ್ರತಿಭಟನೆ

    ಗ್ರಾಮದಲ್ಲಿದ್ದ ಬ್ಯಾಂಕ್ ಬೇರೆ ಕಡೆಗೆ ಶಿಫ್ಟ್: ರೊಚ್ಚಿಗೆದ್ದ ಉಡುಪಿ ಗ್ರಾಮಸ್ಥರಿಂದ ಪ್ರತಿಭಟನೆ

    ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ವಿಜಯ ಬ್ಯಾಂಕ್ ನ ಆಲೂರು ಶಾಖೆಯನ್ನು ಬೇರೆ ಗ್ರಾಮಕ್ಕೆ ಶಿಫ್ಟ್ ಮಾಡುವ ಕುರಿತು ಭಾರೀ ಜನಾಕ್ರೋಶ ವ್ಯಕ್ತವಾಗಿದೆ.

    ಆಲೂರು ಗ್ರಾಮದಿಂದ ನಾಡ ಗ್ರಾಮಕ್ಕೆ ವಿಜಯಬ್ಯಾಂಕ್ ಶಾಖೆಯನ್ನು ಶಿಫ್ಟ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಗ್ರಾಹಕರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ನೂರಾರು ಗ್ರಾಮಸ್ಥರು ಬ್ಯಾಂಕ್ ಮುಂಭಾಗ ಜಮಾಯಿಸಿದ್ದರು. ಬ್ಯಾಂಕ್ ಶಿಫ್ಟ್ ಮಾಡುವ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬ್ಯಾಂಕ್ ನಲ್ಲಿ ತಿಂಗಳಿಗೆ 25 ಕೋಟಿಗೂ ಹೆಚ್ಚು ವ್ಯವಹಾರವಿದೆ. ಬ್ಯಾಂಕ್ ನಾಡ ಗ್ರಾಮಕ್ಕೆ ಶಿಫ್ಟಾದರೆ ವ್ಯವಹಾರ ಮಾಡಲು ಗ್ರಾಹಕರು 10 ಕಿಲೋಮೀಟರ್ ನಷ್ಟು ದೂರ ಹೋಗಬೇಕು. ಈ ಹಿನ್ನೆಲೆಯಲ್ಲಿ ಗ್ರಾಹಕರು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದ್ರು.

    ಪ್ರಧಾನಿ ಮೋದಿ ಡಿಜಿಟಲ್ ವ್ಯವಹಾರ ಮಾಡಲು ಒಂದೆಡೆ ಉತ್ತೇಜನ ಕೊಡುತ್ತಿದ್ದರೆ, ಮತ್ತೊಂದೆಡೆ ಬ್ಯಾಂಕ್ ಅಧಿಕಾರಿಗಳು ಈ ಯೋಜನೆಗೆ ಸ್ಪಂದನೆ ನೀಡುತ್ತಿಲ್ಲ ಅಂತ ಆರೋಪಿಸಿದರು. ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದರು. ಪ್ರತಿಭಟನಾಕಾರರಿಗೆ ಬ್ಯಾಂಕ್ ಉಳಿಸಿಕೊಡುವ ಭರವಸೆ ನೀಡಿದರು.

    ಬ್ಯಾಂಕ್ ಗ್ರಾಹಕ ಜಯರಾಂ ಆಲೂರು ಮಾತನಾಡಿ, ನಮಗೆ ನಮ್ಮ ಬ್ಯಾಂಕ್ ಉಳಿಸಿಕೊಡಿ. ದೂರದ ಊರಿಗೆ ವ್ಯವಹಾರಕ್ಕೆ ಹೋಗಲು ಕಷ್ಟವಾಗುತ್ತದೆ. ಬ್ಯಾಂಕ್ ಶಿಫ್ಟ್ ಆದ್ರೆ ನಮ್ಮ ಅಕೌಂಟ್ ಕ್ಲೋಸ್ ಮಾಡಬೇಕಾಗುತ್ತದೆ ಎಂದು ಹೇಳಿದರು.