Tag: ವಿಜಯ್ ಪ್ರಸಾದ್

  • ಜೂ.20ಕ್ಕೆ ನೀನಾಸಂ ಸತೀಶ್ ಹುಟ್ಟು ಹಬ್ಬ : ಪೆಟ್ರೋಮ್ಯಾಕ್ಸ್ ಟೀಮ್ ನಿಂದ ಸಿಹಿ ಸುದ್ದಿ

    ಜೂ.20ಕ್ಕೆ ನೀನಾಸಂ ಸತೀಶ್ ಹುಟ್ಟು ಹಬ್ಬ : ಪೆಟ್ರೋಮ್ಯಾಕ್ಸ್ ಟೀಮ್ ನಿಂದ ಸಿಹಿ ಸುದ್ದಿ

    ದೇ ಜೂನ್ 20ರಂದು ನೀನಾಸಂ ಸತೀಶ್ ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಹತ್ತು ಹಲವು ಉಡುಗೊರೆಗಳನ್ನು ನೀಡಲು ಚಿತ್ರತಂಡಗಳು ಸಿದ್ಧವಾಗಿವೆ. ಈಗಾಗಲೇ ಶೂಟಿಂಗ್ ಮುಗಿಸಿ, ನೇರವಾಗಿ ಓಟಿಟಿಯಲ್ಲಿ ‘ಡಿಯರ್ ವಿಕ್ರಮ್’ ಸಿನಿಮಾ ರಿಲೀಸ್ಗೆ ರೆಡಿಯಿದೆ. ಈ ಸಿನಿಮಾದ ಜೊತೆಗೆ ಪೆಟ್ರೋಮ್ಯಾಕ್ಸ್ ಕೂಡ ಸಂಪೂರ್ಣ ಶೂಟಿಂಗ್ ಮುಗಿಸಿದ್ದು, ಈ ಸಿನಿಮಾದ ರಿಲೀಸ್ ಡೇಟ್ ಅಥವಾ ಇನ್ನೇನಾದರೂ ಸಿಹಿ ಸುದ್ದಿ ಕೊಡಬಹುದಾ ಎಂದು ನಿರೀಕ್ಷಿಸಲಾಗಿದೆ.

    ಇಂದು ಸತೀಶ್ ಫೋಟೋವೊಂದನ್ನು ಶೇರ್ ಮಾಡಿದ್ದು, ಆ ಫೋಟೋದಲ್ಲಿ ಪೆಟ್ರೋಮ್ಯಾಕ್ಸ್ ಸಿನಿಮಾದ ನಿರ್ದೇಶಕ ವಿಜಯ್ ಪ್ರಸಾದ್, ನಿರ್ಮಾಪಕರಲ್ಲಿ ಒಬ್ಬರಾದ ಸುಧೀರ್ ಇದ್ದಾರೆ. ಹೀಗಾಗಿ ಬಹುಶಃ ಸಿನಿಮಾ ಡೇಟ್ ಬಹಿರಂಗ ಪಡಿಸಬಹುದು ಎನ್ನಲಾಗುತ್ತಿದೆ. ಈಗಾಗಲೇ ಟೀಸರ್ ನಿಂದಾಗಿ ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದು, ಇದೇ ಮೊದಲ ಬಾರಿಗೆ ವಿಜಯ್ ಪ್ರಸಾದ್ ಮತ್ತು ಸತೀಶ್ ಅವರ ಕಾಂಬಿನೇಷನ್ ಈ ಚಿತ್ರದಲ್ಲಿ ಇರುವುದರಿಂದ ಮನರಂಜನೆ ಪಕ್ಕಾ ಸಿಗಲಿದೆ. ಇದನ್ನೂ ಓದಿ: ನಾನು ‘ಸಂಚಾರಿ ವಿಜಯ್’ ಹಾಗೂ ರಾಷ್ಟ್ರೀಯ ಹೆದ್ದಾರಿ 4 : ನಿರ್ದೇಶಕ ಮಂಸೋರೆ ಮನದಾಳ

    ಈ ಸಿನಿಮಾಗಳ ಜೊತೆಗೆ ಸತೀಶ್ ಅಶೋಕ ಬ್ಲೇಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ನಡೆದಿದೆ. ದಸರಾ ಕೂಡ ಬಹುತೇಕ ಚಿತ್ರೀಕರಣ ಮುಗಿಸಿದೆ. ಮ್ಯಾಟ್ನಿ ಕೂಡ ಚಿತ್ರೀಕರಣ ಆಗಬೇಕಿದೆ. ಹೀಗಾಗಿ ಈ ಸಿನಿಮಾಗಳ ಫಸ್ಟ್ ಲುಕ್, ಪೋಸ್ಟರ್ ಅಥವಾ ಟ್ರೈಲರ್ ಹುಟ್ಟು ಹಬ್ಬದಂದು ರಿಲೀಸ್ ಆಗಲಿವೆ ಎನ್ನಲಾಗುತ್ತಿದೆ.

    ಸಾಲು ಸಾಲು ಚಿತ್ರಗಳ ಜೊತೆಗೆ ಇನ್ನೂ ಹಲವಾರು ನಿರ್ದೇಶಕರು ಸತೀಶ್ ಅವರು ಕತೆ ಹೇಳಿದ್ದಾರೆ. ಕೆಲ ಸಿನಿಮಾಗಳು ಮಾತುಕತೆ ಹಂತದಲ್ಲಿವೆ. ಒಟ್ಟಿನಲ್ಲಿ ಸಖತ್ ಬ್ಯುಸಿಯಾಗಿರುವ ಸತೀಶ್ ಅವರ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಏನೆಲ್ಲ ಸರ್ ಪ್ರೈಸ್ ಇರಲಿವೆ ಎನ್ನುವುದನ್ನು ಕಾದು ನೋಡಬೇಕು.

    Live Tv

  • ‘ಪರಿಮಳ ಲಾಡ್ಜ್’ ನಲ್ಲಿ ಮತ್ತೆ ಕಾಣಿಸಿಕೊಂಡ ನೀರ್ ದೋಸೆ ನಿರ್ದೇಶಕ ವಿಜಯ್ ಪ್ರಸಾದ್

    ‘ಪರಿಮಳ ಲಾಡ್ಜ್’ ನಲ್ಲಿ ಮತ್ತೆ ಕಾಣಿಸಿಕೊಂಡ ನೀರ್ ದೋಸೆ ನಿರ್ದೇಶಕ ವಿಜಯ್ ಪ್ರಸಾದ್

    ತೋತಾಪುರಿ ಮತ್ತು ಪೆಟ್ರೋಮ್ಯಾಕ್ಸ್ ಸಿನಿಮಾದ ನಂತರ ಮತ್ತೆ ತಮ್ಮ ಪರಿಮಳ ಲಾಡ್ಜ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ ವಿಜಯ್ ಪ್ರಸಾದ್. 2019ರಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದ ಇವರು, ಆನಂತರ ಈ ಪ್ರಾಜೆಕ್ಟ್ ಹಿಂದಕ್ಕಿಟ್ಟು ‘ಪೆಟ್ರೊಮ್ಯಾಕ್ಸ್’ ಸಿನಿಮಾ ಮಾಡಿದರು. ಇದೀಗ ಅವರ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ನಡುವೆ ಮತ್ತೆ ಅವರು ಪರಿಮಳ ಲಾಡ್ಜ್ ನತ್ತ ಮುಖ ಮಾಡಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ವಿಜಯ್ ಪ್ರಸಾದ್, ‘ತೋತಾಪುರಿ, ಪೆಟ್ರೋಮ್ಯಾಕ್ಸ್ ಆಯ್ತು, ಸದ್ಯದಲ್ಲೇ ಪರಿಮಳ ಲಾಡ್ಜ್’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2.. ಹುಷಾರ್, ಮಾರ್ಚ್ 21ಕ್ಕೆ ತೂಫಾನ್ ಅಪ್ಪಳಿಸಲಿದೆ!

    2019ರಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಸಖತ್ ಡಬಲ್ ಮೀನಿಂಗ್ ಸಂಭಾಷಣೆಯಿಂದಾಗಿ ಸದ್ದು ಮಾಡಿತ್ತು. ಈ ಟೀಸರ್ ನಲ್ಲಿ ತಮ್ಮ ತಂಡವನ್ನು ನಿರ್ದೇಶಕ ವಿಜಯ್ ಪ್ರಸಾದ್ ವಿಭಿನ್ನವಾಗಿಯೇ ಪರಿಚಯ ಮಾಡಿಸಿದ್ದರು. ಲಾಡ್ಜ್ ಓನರ್ ಸ್ಕಂದ್ ಎಂಟರ್ ಟೇನ್ಮೆಂಟ್ (ಬ್ಯಾನರ್), ಲಾಡ್ಜ್ ನಲ್ಲಿ ಸಲಿಂಗಕಾಮಿಗಳು (ನಾಯಕ) ಲೂಸ್ ಮಾದ ಯೋಗಿ, ಲಾಡ್ಜನಲ್ಲಿ ಆಳ ನೋಡಿ, ಲಾಳ ಹೊಡ್ದವ್ರು (ತಾರಾಗಣ) ದತ್ತಣ್ಣ,  ಸುಮನ್ ರಂಗನಾಥ್, ಹೇಮಾ ದತ್ತ್, ಲಾಡ್ಜನಲ್ಲಿ ಗುಪ್ತವಾಗಿ ಕ್ಯಾಮೆರಾ ಇಟ್ಟು ಗುನ್ನ ತಿಂದವ್ರು (ಸಿನಿಮಾಟೋಗ್ರಫಿ) ನಿರಂಜನ್ ಬಾಬು, ಲಾಡ್ಜನಲ್ಲಿ ಲಾಡಿ ಜೊತೆ ರಾಗಾನೂ ಎಳ್ದೆವ್ರು (ಸಂಗೀತ ನಿರ್ದೇಶನ) ಅನೂಪ್ ಸೀಳಿನ್, ಲಾಡ್ಜನಲ್ಲಿ ಕಾಸ್ ಬದ್ಲು ಕಾಂಡೋಮ್ ಇಟ್ಕೊಂಡವ್ರು (ನಿರ್ಮಾಪಕ) ಪ್ರಸನ್ನ, ಲಾಡ್ಜನಲ್ಲಿ ಕಾಚ ತೋರ್ಸಿ ಕಥೆ ಮಾಡ್ದವ್ರು (ನಿರ್ದೇಶಕ) ವಿಜಯ ಪ್ರಸಾದ್ ಹೀಗೆಯೇ ಪದಗಳನ್ನು ಬಳಸಿ ವಿಚಿತ್ರವಾದ ಮನರಂಜನೆ ಕೊಟ್ಟಿದ್ದರು. ಈಗ ಅದೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ ನಿರ್ದೇಶಕರು.

    ಸದ್ಯ ಬಿಡುಗಡೆ ಆಗಬೇಕಿರುವ ವಿಜಯ್ ಪ್ರಸಾದ್ ಅವರ ತೋತಾಪುರಿ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಜಗ್ಗೇಶ್ ನಾಯಕನಾಗಿ ನಟಿಸಿದ್ದರೆ, ಮತ್ತೊಂದು ಮಹತ್ವದ ಪಾತ್ರದಲ್ಲಿ ಡಾಲಿ ಧನಂಜಯ್ ಇದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಈ ಸಿನಿಮಾ ಎರಡು ಭಾಗವಾಗಿ ಮೂಡಿ ಬಂದಿದೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್

    ಪೆಟ್ರೋಮ್ಯಾಕ್ಸ್ ಕೂಡ ಅತೀ ನಿರೀಕ್ಷೆಯ ಸಿನಿಮಾಗಳ ಸಾಲಿನಲ್ಲಿದೆ. ನೀನಾಸಂ ಸತೀಶ್ ಮತ್ತು ಹರಿಪ್ರಿಯಾ ಕಾಂಬಿನೇಷನ್ ಮೊದಲ ಸಿನಿಮಾವಿದು. ಈಗಾಗಲೇ ಟ್ರೇಲರ್ ಬಿಡುಗಡೆ ಆಗಿದ್ದು, ಸಖತ್ ಮನರಂಜನೆ ನೀಡುವಂತಹ ಅಂಶಗಳನ್ನು ಇದು ಒಳಗೊಂಡಿದೆ.

  • ಭಿನ್ನ-ವಿಭಿನ್ನತೆಯಿಂದ ಕೂಡಿದೆ ‘ತೋತಾಪುರಿ’

    ಭಿನ್ನ-ವಿಭಿನ್ನತೆಯಿಂದ ಕೂಡಿದೆ ‘ತೋತಾಪುರಿ’

    ಸೀಕ್ವೆನ್ಸ್ ಅನ್ನೋದು ಹಾಲಿವುಡ್, ಬಾಲಿವುಡ್ ಗಳಲ್ಲಿ ಹೆಚ್ಚಾಗಿತ್ತು. ಆದ್ರೆ ಇತ್ತೀಚೆಗೆ ಕನ್ನಡದಲ್ಲೂ ಸೀಕ್ವೆನ್ಸ್ ಹಾವಳಿ ಹೆಚ್ಚಾಗಿದೆ. ಅದೆಷ್ಟೋ ಸಿನಿಮಾಗಳಲ್ಲಿ ಕಥೆಯ ಗಡಸುತನ ಒಂದೇ ಭಾಗದಲ್ಲಿ ತೋರಿಸಲು ಆಗಲ್ಲ. ಹಾಗೇ ಒಂದೇ ಸಿನಿಮಾದಲ್ಲಿ ಇರುವಷ್ಟು ಮ್ಯಾಟರ್ ನ್ನು ತುರಿಕಿದರೆ ಪ್ರೇಕ್ಷಕನ ತಲೆಗೆ ಹೋಗಲ್ಲ. ಹೀಗಾಗಿ ನೋಡುಗರಿಗೂ ಮನರಂಜನೆಯಾಗಿ ನೀಡುವ ಮೆಸೇಜ್ ನ್ನು ಮನಸ್ಸಿಗೆ ಮುಟ್ಟುವ ಹಾಗೇ ಸಿನಿಮಾ ಕೊಡಬೇಕೆಂದರೆ ಒಂದಷ್ಟು ಫಿಲ್ಟರ್ ಇರಬೇಕಾಗುತ್ತದೆ. ಕಥೆಯ ಆಳವನ್ನು ಜನರಿಗೆ ಮುಟ್ಟಿಸಲೇಬೇಕಾದಂತ ಸಂದರ್ಭಗಳಲ್ಲಿ ಸೀಕ್ವೇನ್ಸ್ ದಾರಿ ಹಿಡಿಯಬೇಕಾಗುತ್ತದೆ. ಅದೇ ದಾರಿಯಲ್ಲಿ ಸಾಗುತ್ತಿರುವುದೇ ‘ತೋತಾಪುರಿ’ ಸಿನಿಮಾ.

    ಹೌದು ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಈಗಾಗಲೇ ಸಿನಿಮಾದ ಶೂಟಿಂಗ್ ಕೂಡ ಕಂಪ್ಲೀಟ್ ಮಾಡಿಕೊಂಡಿದೆ ಚಿತ್ರತಂಡ. ಕಥೆ ತುಂಬಾ ಸ್ಟ್ರಾಂಗ್ ಆಗಿದ್ದು, ಭಾಗ 1 ಮತ್ತು 2 ರಲ್ಲಿ ಬರ್ತಾ ಇದೆ. ಸೀಕ್ವೆನ್ಸ್ ಸಿನಿಮಾಗಳು ಹೊಸತೇನಲ್ಲ. ಆದ್ರೆ ಸದ್ಯ ಬಂದು ಹೋಗಿರುವ ಬರುತ್ತಿರುವ ಸೀಕ್ವೆನ್ಸ್ ಸಿನಿಮಾಗಳಿಗೂ ‘ತೋತಾಪುರಿ’ ಗೂ ಕೊಂಚ ಭಿನ್ನ ಸಂಬಂಧವಿದೆ.

    ಹೌದು, ಕತೆ ಚೆನ್ನಾಗಿದ್ರೆ ಅಥವಾ ಪ್ರೇಕ್ಷಕರಿಂದ ರೆಸ್ಪಾನ್ಸ್ ಚೆನ್ನಾಗಿ ಬಂದ್ರೆ ಆ ಸಿನಿಮಾದೊಳಗಿನ ಪಾತ್ರಗಳ ಎಳೆಯನ್ನು ಹಿಡಿದು ಸಿನಿಮಾವನ್ನು ಮುಂದುವರೆಸಲಾಗುತ್ತೆ. ಸಿನಿಮಾ ಹಿಟ್ ಆಗುವವರೆಗೂ ಅದರ ಸೀಕ್ವೇನ್ಸ್ ಬರಲಿದೆ ಎಂಬುದು ಪ್ರೇಕ್ಷಕನಿಗೆ ಗೊತ್ತಿರಲ್ಲ. ವಿಜಯ್ ಪ್ರಸಾದ್ ಪ್ರೇಕ್ಷಕನ ನರನಾಡಿಗಳನ್ನು ಅರಿತಿರುವವರಾಗಿರುವುದರಿಂದ, ಇವತ್ತಿನ ಪ್ರೇಕ್ಷಕ ಏನನ್ನ ಬಯಸುತ್ತಾನೆಂಬುದು ಅವರಿಗೆ ಗೊತ್ತು. ಹೀಗಾಗಿ ‘ತೋತಾಪುರಿ’ ಯನ್ನು ಎರಡು ಭಾಗಗಳಾಗಿ ಸೀಳಿದ್ದಾರೆ. ಇಡೀ ಭಾರತೀಯ ಚಿತ್ರರಂಗದಲ್ಲೇ ಎರಡು ಭಾಗಗಳನ್ನು ಒಮ್ಮೆಗೆ ಸಿದ್ಧಪಡಿಸಿದ ಉದಾಹರಣೆಯೆ ಇಲ್ಲ. ಅಂತದ್ದೊಂದು ದಾಖಲೆಯನ್ನು ಈಗಾಗಲೇ ‘ತೋತಾಪುರಿ’ ಸಿನಿಮಾ ಮಾಡಿದೆ. ಸದ್ಯ ಎರಡು ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿ, ಉಳಿದ ಕೆಲಸಕ್ಕೆ ಕೈ ಹಾಕಿದೆ. ಒಟ್ಟಾರೆ ಸದ್ಯ ಪ್ರಪಂಚದಲ್ಲಿರುವ ವೈರಸ್ ಎಂಬ ರೋಗ ಮಾಯವಾದ ನಂತರ, ಉಪ್ಪು, ಖಾರ ಹಾಕಿ ರೆಡಿ ಮಾಡುತ್ತಿರುವ ‘ತೋತಾಪುರಿ’ಯನ್ನು ಪ್ರೇಕ್ಷಕನಿಗೆ ಸವಿಯಲು ನೀಡಲಿದ್ದಾರೆ.

    ನವರಸ ನಾಯಕ ಜಗ್ಗೇಶ್, ಸುಮನ್ ರಂಗನಾಥ್, ವೀಣಾ, ಅದಿತಿ ಪ್ರಭುದೇವ, ಡಾಲಿ ಧನಂಜಯ್ ಸೇರಿದಂತೆ ಇನ್ನು ಅನೇಕರು ತಾರಾಬಳಗದಲ್ಲಿದ್ದಾರೆ.