Tag: ವಿಜಯ್ ದೇವರಕೊಂಡ

  • ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

    ವಿಜಯ್ ದೇವರಕೊಂಡ ಹೊಸ ಗರ್ಲ್ ಫ್ರೆಂಡ್ ಅನನ್ಯ ಪಾಂಡೆ? : ಮುನಿಸಿಕೊಂಡ್ರಾ ರಶ್ಮಿಕಾ ಮಂದಣ್ಣ

    ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ರಶ್ಮಿಕಾ ಮಂದಣ್ಣ ವಿಶ್ ಮಾಡಲಿಲ್ಲ ಎನ್ನುವುದು ನಾನಾ ರೂಪ ಪಡೆದುಕೊಳ್ಳುತ್ತಿದೆ. ವಿಜಯ್ ದೇವರಕೊಂಡ ಜತೆಗೆ ಇತ್ತೀಚಿನ ದಿನಗಳಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ನಿಜವೂ ಆಗಿದ್ದರೂ, ಅವರ ಲವ್ ಬ್ರೇಕ್ ಅಪ್ ಆಯಿತಾ ಎನ್ನುವ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಅವರಿಬ್ಬರೂ ಪ್ರೀತಿಸುತ್ತಿರುವ ವಿಚಾರ ಅಧಿಕೃತವಾಗಿ ಹೇಳಿಕೊಳ್ಳದೇ ಇದ್ದರೂ, ಅವರ ನಡೆಗಳು ಹಾಗೆಯೇ ಇದ್ದವು ಅನ್ನುವ ಕಾರಣಕ್ಕಾಗಿ ಇಂಥದ್ದೊಂದು ಸುದ್ದಿ ಹುಟ್ಟುಕೊಂಡಿದ್ದು ಸುಳ್ಳಲ್ಲ. ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

    ವಿಜಯ್ ದೇವರಕೊಂಡ ವೃತ್ತಿ ಬದುಕಿನಲ್ಲಿ ಅಚ್ಚರಿಗಳು ಆದಾಗೊಮ್ಮೆ ರಶ್ಮಿಕಾ ಅದಕ್ಕೆ ಸಾಕ್ಷಿಯಾಗಿರುತ್ತಿದ್ದರು. ಹೊಸ ವರ್ಷವನ್ನು ಈ ಜೋಡಿ ಗೋವಾದಲ್ಲಿ ಕಳೆದಿತ್ತು. ಪ್ರತಿ ವರ್ಷವೂ ಹುಟ್ಟು ಹಬ್ಬಕ್ಕೆ ‘ರನ್ನ ಚಿನ್ನ’ ಎಂದೆಲ್ಲ ಹಾಡಿಹೊಗಳುತ್ತಿದ್ದರು. ಒಬ್ಬರಿಗೊಬ್ಬರು ಕಾಲೆಳೆದುಕೊಂಡು, ತಮಾಷೆ ಮಾಡಿಕೊಂಡೇ ಇರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲವೂ ಗಪ್ ಚುಪ್. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

    ತೆಲುಗು ಸಿನಿಮಾ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಸಾಲೆ ಸುದ್ದಿ ಎಂದರೆ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಸ್ನೇಹದಲ್ಲಿ ಬಿರುಕು ಕಾಣಿಸಿಕೊಂಡಿದೆಯಂತೆ. ಅದಕ್ಕೆ ಕಾರಣ ಬಾಲಿವುಡ್ ನಟಿ ಅನನ್ಯ ಪಾಂಡೆ ಎನ್ನುವುದು ಹೊಸ ಸುದ್ದಿ. ಅನನ್ಯ ಪಾಂಡೆ ಮತ್ತು ವಿಜಯ್ ದೇವರಕೊಂಡ ಇದೀಗ ಲೈಗರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಈ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ವಿಜಯ್ ದೇವರಕೊಂಡ ಜತೆ ಹೆಚ್ಚೆಚ್ಚು ಅನನ್ಯ ಪಾಂಡೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ವಿಚಾರವೇ ರಶ್ಮಿಕಾ ದೂರ ಆಗುವುದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

    ವಿಜಯ್ ದೇವರಕೊಂಡ ಅವರಿಂದ ಈ ಕಡೆ ರಶ್ಮಿಕಾ ದೂರವಾಗಿದ್ದರೆ, ಆ ಕಡೆ ಅನನ್ಯ ಪಾಂಡೆ ತಾವು ಪ್ರೀತಿಸುತ್ತಿದ್ದ ಇಶಾನ್ ಕಟ್ಟರ್ ಗೆ ಕೈ ಕೊಟ್ಟಿದ್ದು ಕಾಕತಾಳೀಯ ಅಲ್ಲವೆಂದು ಹೇಳಲಾಗುತ್ತಿದೆ. ವಿಜಯ್ ದೇವರಕೊಂಡಗಾಗಿಯೇ ಅನನ್ಯ ತಮ್ಮ ಪ್ರೀತಿಯನ್ನು ತ್ಯಾಗ ಮಾಡಿದ್ದಾರೆ ಎನ್ನುವ ಗುಟ್ಟು ರಟ್ಟಾಗಿದೆ. ಇವೆಲ್ಲವನ್ನೂ ಅರಿತ ರಶ್ಮಿಕಾ ಅವರು ವಿಜಯ್ ಅವರಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ ಎನ್ನುವುದು ಒಂದು ಹಂತದ ಲೆಕ್ಕಾಚಾರ.

    ಅಷ್ಟಕ್ಕೂ ರಶ್ಮಿಕಾ ಮತ್ತು ವಿಜಯ್ ದೇವರಕೊಂಡು ಪ್ರೀತಿಸುತ್ತಿದ್ದರಾ ಎನ್ನುವುದಕ್ಕೆ ಅಧಿಕೃತವಾಗಿ ಯಾವುದೇ ದಾಖಲೆಗಳು ಇಲ್ಲ. ಇಂಥದ್ದೊಂದು ಪ್ರಶ್ನೆ ಇಬ್ಬರಿಗೂ ಎದುರಾದಾಗಲೂ ಅದನ್ನು ನಿರಾಕರಿಸುತ್ತಲೇ ಬಂದಿದೆ ಈ ಜೋಡಿ. ಇದೀಗ  ಈ ಜೋಡಿಯ ಸ್ನೇಹಕ್ಕೆ ಮತ್ತಷ್ಟು ರಂಗು ತುಂಬಲು ಅನನ್ಯ ಪಾಂಡೆ ಹೊಸ ಸೇರ್ಪಡೆ ಆಗಿದ್ದಾರವಷ್ಟೆ.

  • ವಿಜಯ್ ದೇವರಕೊಂಡ ಜತೆ ಅಂತರ ಕಾಯ್ದುಕೊಂಡ ರಶ್ಮಿಕಾ: ಇದು ಜ್ಯೋತಿಷಿ ಮಾತಿನ ಎಫೆಕ್ಟ್?

    ವಿಜಯ್ ದೇವರಕೊಂಡ ಜತೆ ಅಂತರ ಕಾಯ್ದುಕೊಂಡ ರಶ್ಮಿಕಾ: ಇದು ಜ್ಯೋತಿಷಿ ಮಾತಿನ ಎಫೆಕ್ಟ್?

    ಕ್ಷಿಣದ ಸಾಕಷ್ಟು ಸಿಲೆಬ್ರಿಟಿಗಳಿಗೆ ಭವಿಷ್ಯ ಹೇಳುವ ವೇಣು ಸ್ವಾಮಿ, ಈ ಹಿಂದೆ ರಶ್ಮಿಕಾ ಮಂದಣ್ಣ ಅವರ ಭವಿಷ್ಯ ನುಡಿದಿದ್ದರು ಅನ್ನುವ ವಿಷಯ ತೆಲುಗು ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿತ್ತು. ಈ ವೇಣು ಸ್ವಾಮಿ ಹತ್ತಿರ ರಶ್ಮಿಕಾ ಮತ್ತು ಅವರ ತಾಯಿ ಭವಿಷ್ಯ ಕೇಳಲು ಹೋಗುತ್ತಿದ್ದರು ಎಂಬ ವಿಷಯವನ್ನು ಸ್ವತಃ ಜ್ಯೋತಿಷಿ ವೇಣು ಸ್ವಾಮಿ ಅವರೇ ಬಹಿರಂಗ ಪಡಿಸಿದ್ದರು. ಇವರು ಹೇಳಿದ್ದ ಭವಿಷ್ಯ ರಶ್ಮಿಕಾ ಜೀವನದಲ್ಲಿ ನಿಜವಾಗಿದ್ದರಿಂದ ಪದೇ ಪದೇ ರಶ್ಮಿಕಾ ಕುಟುಂಬ ಇವರನ್ನು ಸಂಪರ್ಕಿಸುತ್ತಿತ್ತು ಎನ್ನುವುದು ಬಹಿರಂಗ.  ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

    ಹಾಗಾಗಿಯೇ ಕೆಲ ತಿಂಗಳ ಹಿಂದೆ, ವೇಣು ಸ್ವಾಮಿ ಬಳಿ ರಶ್ಮಿಕಾ ಅವರು ಭವಿಷ್ಯ ಕೇಳಲು ಹೋದಾಗ ಆತಂಕಕಾರಿ ಸಂಗತಿಯೊಂದನ್ನು ತಿಳಿಸಿದ್ದರಂತೆ. ತಾವು ಹೇಳಿದಂತೆ ಮಾಡದೇ ಹೋದರೆ, ಮುಂದಿನ ಭವಿಷ್ಯ ಕರಾಳವಾಗಿ ಇರಲಿದೆ ಎಂಬ ಎಚ್ಚರಿಕೆ ಕೂಡ ಕೊಟ್ಟಿದ್ದರಂತೆ. ಆದರೆ, ಆ ವೇಳೆಯಲ್ಲಿ ಜ್ಯೋತಿಷಿಯ ಮೇಲೆಯೇ ಗರಂ ಆಗಿದ್ದರಂತೆ ರಶ್ಮಿಕಾ. ಇದೀಗ ಜ್ಯೋತಿಷಿ ಹೇಳಿದ್ದು ನಿಜವಾಗುತ್ತಿದೆ ಅನಿಸಿದ್ದರಿಂದ ಜ್ಯೋತಿಷಿ ಹೇಳಿದಂತೆ ಕೇಳಿದ್ದಾರೆ ಎನ್ನುವ ಸುದ್ದಿ ಹರಡಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

    ಈ ಹಿಂದೆ ವೇಣು ಸ್ವಾಮಿ ಅವರು ರಶ್ಮಿಕಾ ಅವರಿಗೆ ‘ನಿನಗೆ ಲವ್ ಅಫೇರ್ ಆಗುವುದಿಲ್ಲ. ಹಾಗಾಗಿ ವಿಜಯ್ ದೇವರಕೊಂಡ ಜೊತೆಗೆ ಕಾಣಿಸಿಕೊಳ್ಳದೇ ಇರುವುದು ಒಳ್ಳೆಯದು ಎಂದು ಭಯಂಕರ ಜ್ಯೋತಿಷ್ಯ ಹೇಳಿದ್ದರಂತೆ. ನಿಮ್ಮ ಬಳಿ ಬರುವ ಅನೇಕರಿಂದ ಪ್ರೀತಿಯಲ್ಲಿ ಮೋಸ ಹೋಗುತ್ತೀರಿ. ಲವ್ ಅಫೇರ್ ನಿಮಗೆ ಸಮಸ್ಯೆಯಾಗಿ ಕಾಡಲಿದೆ ಎಂದಿದ್ದರಂತೆ. ಈ ಮಾತಿಗೆ ರಶ್ಮಿಕಾ ಗರಂ ಆಗಿ ವೇಣು ಸ್ವಾಮಿ ಅವರಿಂದಲೇ ದೂರವಾಗಿದ್ದರಂತೆ. ಈಗ ವೇಣು ಸ್ವಾಮಿ ಅವರ ಮಾತು ಕೇಳುವುದಕ್ಕಾಗಿಯೇ ವಿಜಯ್ ದೇವರಕೊಂಡ ಅವರಿಂದ ಅಂತರ ಕಾಪಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

    ಮೊನ್ನೆಯಷ್ಟೇ ವಿಜಯ್ ದೇವರಕೊಂಡ ಅವರ ಹುಟ್ಟು ಹಬ್ಬವಿದ್ದು, ಅಂದು ರಶ್ಮಿಕಾ ಮಂದಣ್ಣ ವಿಶ್ ಮಾಡುವುದಾಗಲೇ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಳ್ಳುವುದಾಗಲಿ ಮಾಡಿಲ್ಲ. ವಾರಕ್ಕೆರಡು ಬಾರಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಇತ್ತೀಚೆಗೆ ಒಂಟಿಯಾಗಿ ಓಡಾಡುತ್ತಿದೆ. ಹೀಗಾಗಿ ರಶ್ಮಿಕಾ ಅವರು ವಿಜಯ್ ಅವರಿಂದ ಅಂತರ ಕಾಪಾಡಿಕೊಂಡಿದ್ದಾರೆ ಎನ್ನುವುದು ತೆಲುಗು ಸಿನಿಮಾ ರಂಗದಲ್ಲಿ ಹರಡಿದ ಗಾಸಿಪ್.

  • ಏನಾಯ್ತು, ಏನೇನಾಯ್ತು? ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ವಿಶ್ ಮಾಡಲಿಲ್ಲ ರಶ್ಮಿಕಾ

    ಏನಾಯ್ತು, ಏನೇನಾಯ್ತು? ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ವಿಶ್ ಮಾಡಲಿಲ್ಲ ರಶ್ಮಿಕಾ

    ಹೆಸರಾಂತ ನಟ ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ಅನೇಕ ತಾರೆಯರು ವಿಶ್ ಮಾಡಿದ್ದಾರೆ. ಅದರಲ್ಲೂ ಸಮಂತಾ ಬರ್ತಡೇ ಪಾರ್ಟಿಯಲ್ಲೂ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕೀರ್ತಿ ಸುರೇಶ್, ಸಾಯಿ ಪಲ್ಲವಿ ಸೇರಿದಂತೆ ಸಾಲು ಸಾಲು ನಟ ನಟಿಯರು ವಿಜಯ್ ಗೆ ನಾನಾ ರೀತಿಯಲ್ಲಿ ಶುಭಾಶಯ ಹೇಳಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ ಮಾತ್ರ ಈವರೆಗೂ ವಿಶ್ ಮಾಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ಹೊಸ ವರ್ಷವನ್ನು ಗೋವಾದಲ್ಲಿ ಒಟ್ಟಿಗೆ ಆಚರಿಸಿದವರು, ಅನೇಕ ಬಾರಿ ತಡರಾತ್ರಿ ಹೊಟೆಲ್ ನಲ್ಲಿ ಕಾಣಿಸಿಕೊಂಡವರು ಏಕಾಏಕಿ ಹುಟ್ಟು ಹಬ್ಬದ ದಿನದಂದು ರಶ್ಮಿಕಾ ಮೌನವಹಿಸಿದ್ದು ಯಾಕೆ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಎತ್ತಿದ್ದಾರೆ. ತಮ್ಮೊಂದಿಗೆ ನಟಿಸಿದ ನಟ ನಟಿಯರಿಗೆ ವಿಶ್ ಮಾಡುವ ರಶ್ಮಿಕಾ ಮಂದಣ್ಣ, ತಮ್ಮ ಕನಸಿನ ಹುಡುಗನಿಗೆ ಶುಭಾಶಯ ಹೇಳದೇ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ತಮ್ಮ ಮಧ್ಯೆ ಅಂಥದ್ದು ಏನೂ ಇಲ್ಲ ಎಂದು ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಹೇಳುತ್ತಾ ಬಂದರೂ, ಅವರ ನಡೆ ಮಾತ್ರ ಯಾವಾಗಲೂ ಅನುಮಾನ ಮೂಡಿಸುತ್ತಿತ್ತು. ಹಾಗಾಗಿ ಇಬ್ಬರೂ ಡೇಟ್ ಮಾಡುತ್ತಿದ್ದಾರೆ, ಇನ್ನೇನು ಮದುವೆನೂ ಆಗುತ್ತಾರೆ ಎನ್ನುವಲ್ಲಿಗೆ ಗಾಸಿಪ್ ಗಳು ಸಿನಿಮಾ ರಂಗದಲ್ಲಿ ತೇಲಿ ಬಂದವು. ಈ ಕುರಿತಾಗಿ ಜೋಡಿಯು ಗರಂ ಆಗಿಯೂ, ತಮ್ಮದೇ ಆದ ರೀತಿಯಲ್ಲೂ ಉತ್ತರಿಸುತ್ತಾ ಬಂತು. ಪುಷ್ಪಾ ಸೂಪರ್ ಹಿಟ್ ಆಗುತ್ತಿದ್ದಂತೆಯೇ ಜೋಡಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು ಕಡಿಮೆ ಆಗಿದೆ ಎನ್ನುವ ಮಾತೂ ಇದೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದರೆ ಮಾತ್ರ ಶುಭಾಶಯ ಹೇಳಿದಂತೆಯೇ? ಇಬ್ಬರೂ ಒಟ್ಟಾಗಿಯೇ ಹುಟ್ಟು ಹಬ್ಬ ಆಚರಿಸಿರಬಹುದು ಎಂದೂ ಕೆಲ ಅಭಿಮಾನಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ಅವರಿಬ್ಬರ ಮಧ್ಯೆ ಅಂಥದ್ದೇನೂ ಆಗಿಲ್ಲ. ಅವರು ಚೆನ್ನಾಗಿಯೇ ಇದ್ದಾರೆ ಎಂದು ಆಪ್ತ ವಲಯಗಳು ಖಚಿತ ಪಡಿಸಿವೆ.

  • ಪೂಜಾ ಹೆಗ್ಡೆ ಜತೆ ವಿಜಯ್ ದೇವರಕೊಂಡ ಡ್ಯುಯೆಟ್

    ಪೂಜಾ ಹೆಗ್ಡೆ ಜತೆ ವಿಜಯ್ ದೇವರಕೊಂಡ ಡ್ಯುಯೆಟ್

    ಟಿ ಪೂಜಾ ಹೆಗ್ಡೆ ಟಾಲಿವುಡ್‌ನ ಪ್ರತಿಭಾವಂತ ಕಲಾವಿದೆ, ಇತ್ತೀಚೆಗೆ ಈ ನಟಿಯ ಸಾಲು ಸಾಲು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಸೋತಿತ್ತು. ಆದರೆ ಈಗ ಬಂಪರ್ ಆಫರ್‌ಗಳು ಪೂಜಾಗೆ ಅರಸಿ ಬರುತ್ತಿವೆ. ಇದೀಗ ನಟ ವಿಜಯ್ ದೇವರಕೊಂಡ ಚಿತ್ರಕ್ಕೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ.

    ಬ್ಯೂಟಿ ಜತೆ ಟ್ಯಾಲೆಂಟ್‌ಯಿರೋ ಪ್ರತಿಭಾವಂತ ಪೂಜಾ, ಬೊಟ್ಟಬೊಮ್ಮ ಆಗಿ ಸೂಪರ್ ಸಕ್ಸಸ್ ಕಂಡಿದ್ರು. ಅದ್ಯಾಕೋ ಅವರಿಗೆ ಲಕ್ಕು ಕೈ ಕೊಟ್ಟಂತಿದೆ. ಇತ್ತೀಚಿಗೆ ನಟಿಸಿದ `ರಾಧೆ ಶ್ಯಾಮ್’,`ಬೀಸ್ಟ್’ ಮತ್ತು `ಆಚಾರ್ಯ’ ಚಿತ್ರಗಳು ಗಲ್ಲಾಪೆಟ್ಟಿಗೆ ಕಲೆಕ್ಷನ್ ಮಾಡೋದ್ರರಲ್ಲಿ ಸೋತಿದೆ. ಆದರೂ ಪೂಜಾಗೆ ಭರ್ಜರಿ ಆಫರ್‌ಗಳು ಅರಸಿ ಬರುತ್ತಿದೆ. ಇದೀಗ ನಟ ವಿಜಯ್ ದೇವರಕೊಂಡ ಜತೆ ರೊಮ್ಯಾನ್ಸ್ ಮಾಡಲು ಪೂಜಾ ರೆಡಿಯಾಗಿದ್ದಾರೆ.

    ಪೂಜಾ ಹೆಗ್ಡೆ ನಟಿಸಿರೋ ಚಿತ್ರಗಳು ಸೋಲು ಕಂಡಿವೆ ಆದರೂ ಅವರ ಡಿಮ್ಯಾಂಡ್ ಎನು ಕಮ್ಮಿಲ್ಲ ಆಗಿಲ್ಲ. ಸಿನಿಮಂದಿ ಈ ನಟಿಯನ್ನ ಐರೆನ್ ಲೆಗ್ ಅಂತಾ ಕರೀತಾ ಇದ್ರು. ನಿರ್ಮಾಪಕರು ಕ್ಯಾರೆ ಎನ್ನದೇ ಪೂಜಾನೇ ಬೇಕು ಅಂತಾ ಅಫರ್ ಮಾಡಿದ್ದಾರೆ. ವಿಜಯ್ ದೇವರಕೊಂಡ ಮತ್ತು ಪೂರಿ ಜಗನ್ನಾಥ್ ಕಾಂಬಿನೇಷನ್ ಚಿತ್ರ `ಜನಗಣಮನ’ ಸಿನಿಮಾಗೆ ನಾಯಕಿಯಾಗಿ ಪೂಜಾ ಅವರನ್ನೇ ಫೈನಲ್ ಮಾಡಲಾಗಿದೆ. ಇದನ್ನೂ ಓದಿ: ಡಾಲಿ-ಅದಿತಿ ನಟನೆಯ `ಜಮಾಲಿಗುಡ್ಡ’ ಚಿತ್ರದ ಡಬ್ಬಿಂಗ್ ಸ್ಟಾರ್ಟ್

    `ಜನಗಣಮನ’ ಚಿತ್ರ ಇತ್ತೀಚೆಗಷ್ಟೇ ಲಾಂಚ್ ಆಗಿದ್ದು, ಚಿತ್ರಕ್ಕೆ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಚಾರ್ಮಿ ಕೌರ್ ಪ್ರೋಡಕ್ಷನ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ವಿಜಯ್ ಆರ್ಮಿ ಆಫೀಸರ್ ಪಾತ್ರದಲ್ಲಿ ನಟಿಸಲಿದ್ದಾರೆ. ಸಾಲು ಸಾಲು ಸೋಲುಗಳನ್ನೇ ಕಂಡಿರೋ ಪೂಜಾಗೆ ಈ ಪ್ರಾಜೆಕ್ಟ್ನಿಂದ ಲಕ್ ಬದಲಾಗುತ್ತಾ ಅಂತಾ ಕಾದು ನೋಡಬೇಕಿದೆ.

  • ಮಿಡ್‌ನೈಟ್‌ನಲ್ಲಿ ಸಮಂತಾಗೆ ಸರ್ಪ್ರೈಸ್ ನೀಡಿದ ವಿಜಯ್ ದೇವರಕೊಂಡ: ವಿಡಿಯೋ ವೈರಲ್

    ಮಿಡ್‌ನೈಟ್‌ನಲ್ಲಿ ಸಮಂತಾಗೆ ಸರ್ಪ್ರೈಸ್ ನೀಡಿದ ವಿಜಯ್ ದೇವರಕೊಂಡ: ವಿಡಿಯೋ ವೈರಲ್

    ಮಂತಾ ಸದ್ಯ ಬಹುಭಾಷಾ ಸಿನಿಮಾಗಳಲ್ಲಿ ಮಿಂಚ್ತಿರೋ ಪ್ರತಿಭೆ. `ದಿ ಫ್ಯಾಮಿಲಿಮೆನ್ 2′ ಮತ್ತು `ಪುಷ್ಪ’ ಹಾಡಿಗೆ ಸೊಂಟ ಬಳುಕಿಸಿ ಬಂದ ಮೇಲೆ ಸಮಂತಾಗೆ ಎಲ್ಲಿಲ್ಲದ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸದ್ಯ ಹೊಸ ಚಿತ್ರಕ್ಕಾಗಿ ಕಾಶ್ಮೀರಕ್ಕೆ ಹಾರಿರೋ ಸಮಂತಾಗೆ ಬರ್ತಡೇ ದಿನ ವಿಜಯ್ ದೇವರಕೊಂಡ ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.

    ಸಮಂತಾ ಏಪ್ರಿಲ್ 28ರಂದು 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬರ್ತಡೇ ದಿನ ಶಿವಾ ನಿರ್ವಾಣ ಮತ್ತು ವಿಜಯ್ ದೇವರಕೊಂಡ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್‌ಗೆ ನಾಯಕಿಯಾಗಿ ಸಮಂತಾ ನಟಿಸಿದ್ದಾರೆ. ಇದರ ನಡುವೆ ವಿಜಯ್ ದೇವರಕೊಂಡ ಮಧ್ಯರಾತ್ರಿ ಸಮಂತಾಗೆ ವಿಶ್ ಮಾಡಿ, ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ. ಸ್ಯಾಮ್ ಹುಟ್ಟು ಹಬ್ಬಕ್ಕಾಗಿ ವಿಜಯ್ ಜತೆ ಸೇರಿ ಇಡೀ ಚಿತ್ರತಂಡ ನಾಟಕ ಮಾಡಿ ಅಚ್ಚರಿ ಮೂಡಿಸಿದ್ದಾರೆ.

    `ಮಹಾನಟಿ’ ಚಿತ್ರದ ನಂತರ ಮತ್ತೆ ಶಿವ ನಿರ್ವಾಣ ನಿರ್ದೇಶನದ ಚಿತ್ರದ ಮೂಲಕ ವಿಜಯ್ ಮತ್ತು ಸಮಂತಾ ಒಟ್ಟಿಗೆ ನಟಿಸುತ್ತಿದ್ದಾರೆ. ಸದ್ಯ ಕಾಶ್ಮೀರದಲ್ಲಿ ಬೀಡು ಬಿಟ್ಟಿರೋ ಚಿತ್ರತಂಡ ಏ.27ರಂದು ರಾತ್ರಿ ನಕಲಿ ದೃಶ್ಯವನ್ನು ವಿವರಿಸಿ ಶೂಟ್ ಮಾಡಿಸಿದ್ದಾರೆ. ಶೂಟಿಂಗ್ ನಿಜವೆಂಬಂತೆ ಬಿಂಬಿಸಿದ್ದು, ಸಮಂತಾ ಡೈಲಾಗ್ ನಂತರ ಅದಕ್ಕೆ ಪ್ರತಿಯಾಗಿ ವಿಜಯ್ ಡೈಲಾಗ್ ಪಾತ್ರದ ಹೆಸೆನ್ನು ಹೇಳುವುದು ಬಿಟ್ಟು ಸಮಂತಾ ಎಂದು ಕರೆದಿದ್ದಾರೆ. ಅದಕ್ಕೆ ಸಮಂತಾ ಜೋರಾಗಿ ನಕ್ಕರು. ಕ್ಯಾಮೆರಾ ಆನ್ ಇರಬೇಕಾದರೆನೇ ಹ್ಯಾಪಿ ಬರ್ತಡೇ ಸಮಂತಾ ಎಂದು ವಿಶ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

    ಇಡೀ ಚಿತ್ರತಂಡ ಸರ್ಪ್ರೈಸ್ ನೋಡಿ ಸಮಂತಾ ಭಾವುಕರಾಗಿದ್ದಾರೆ. ಇದು ನಿಜವಾದ ಶೂಟಿಂಗ್ ಅಲ್ಲ ಅಂತಾ ತಿಳಿದು ಎನೂ ತೋಚದೇ ಒಂದು ಕ್ಷಣ ಖುಷಿಯಿಂದ ಸಮಂತಾ ಭಾವುಕರಾಗಿದ್ದಾರೆ. ಸ್ಥಳದಲ್ಲೇ ಕೇಕ್ ಕತ್ತರಿಸುವ ಮೂಲಕ ಚಿತ್ರತಂಡ ಜತೆ ಸಮಂತಾ ಬರ್ತಡೇ ಆಚರಿಸಿಕೊಂಡಿದ್ದಾರೆ. ತಮ್ಮ ಬರ್ತಡೇ ಸರ್ಪ್ರೈಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಚಿತ್ರತಂಡಕ್ಕೆ ಸಮಂತಾ ಧನ್ಯವಾದ ತಿಳಿಸಿದ್ದಾರೆ.ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಆದಿತ್ಯಗೆ ರಾಜೇಂದ್ರ ಸಿಂಗ್ ಬಾಬು ಆ್ಯಕ್ಷನ್ ಕಟ್

    ವಿಜಯ್ ದೇವರಕೊಂಡ ಜತೆಗಿನ ಸಿನಿಮಾದ ಜತೆ ನಟಿ ಸಮಂತಾ ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • ವಿಜಯ್ ದೇವರಕೊಂಡ ಜೊತೆ ಕಾಶ್ಮೀರಕ್ಕೆ ಹಾರಿದ ಸಮಂತಾ

    ವಿಜಯ್ ದೇವರಕೊಂಡ ಜೊತೆ ಕಾಶ್ಮೀರಕ್ಕೆ ಹಾರಿದ ಸಮಂತಾ

    ಸಿನಿರಂಗದ ಓಡುವ ಕುದುರೆ ಸಮಂತಾ ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ ಹೊಸ ಚಿತ್ರ ಅನೌನ್ಸ್ ಆಗಿತ್ತು. ಅದರ ಬೆನ್ನಲ್ಲೇ ವಿಜಯ್ ದೇವರಕೊಂಡ ಜೊತೆ ಸಮಂತಾ ಕಾಶ್ಮೀರಕ್ಕೆ ಹಾರಿದ್ದಾರೆ.

    `ಮಹಾನಟಿ’ ಚಿತ್ರದ ಮೂಲಕ ಈಗಾಗಲೇ ಸಿನಿರಸಿಕರ ಗಮನಸೆಳೆದಿರೋ ಜೋಡಿ ವಿಜಯ್ ದೇವರಕೊಂಡ ಮತ್ತು ಸಮಂತಾ ಈಗ `ಮಜಲಿ’ ಖ್ಯಾತಿಯ ಶಿವ ನಿರ್ವಾಣ ನಿರ್ದೇಶನದ ಹೊಸ ಚಿತ್ರದಲ್ಲಿ ಇಬ್ಬರು ಮತ್ತೆ ಜತೆಯಾಗಿ ನಟಿಸುತ್ತಿದ್ದಾರೆ. ಚಿತ್ರೀಕರಣಕ್ಕಾಗಿ ಸಮಂತಾ ಮತ್ತು ದೇವರಕೊಂಡ ಕಾಶ್ಮೀರಕ್ಕೆ ಹೋಗಿದ್ದಾರೆ.

    ಇನ್ನು ಸಮಂತಾ ಹೊಸ ಪ್ರಾಜೆಕ್ಟ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಶ್ಮೀರಕ್ಕೆ ಹೋಗುತ್ತಿರೋ ಸಣ್ಣ ತುಣುಕನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್‌ ಮಾಡಿದ್ದಾರೆ. ವಿಜಯ್ ಮತ್ತು ಸಮಂತಾ ಸಿನಿಮಾಗೆ ಸಕಲ ಸಿದ್ಧತೆ ನಡೆಯುತ್ತಿದೆ. ಇದನ್ನೂ ಓದಿ: ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್

    ಡಿಫರೆಂಟ್ ಕಥೆ ಜತೆ ವಿಭಿನ್ನ ಪಾತ್ರದ ಮೂಲಕ ಸಿನಿರಸಿಕರ ಗಮನ ಸೆಳೆಯಲು ವಿಜಯ್ ಮತ್ತು ಸಮಂತಾ ಬರುತ್ತಿದ್ದಾರೆ. 1992ರಲ್ಲಿ ತೆರೆಕಂಡ ಮಣಿರತ್ನಂ ನಿರ್ದೇಶನದ `ರೋಜಾ’ ಚಿತ್ರದ ಕಥೆಯನ್ನ ಈಗಿನ ಜನರೇಷನ್‌ಗೆ ತಕ್ಕಂತೆ ಪ್ರೇಮಕಥೆ ತೋರಿಸಲು ನಿರ್ದೇಶಕ ಶಿವಾ ನಿರ್ವಾಣ ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಬೆಳ್ಳಿಪರದೆಯಲ್ಲಿ ಈ ಜೋಡಿ ಹೇಗೆ ಕಮಾಲ್ ಮಾಡಬಹುದು ಅಂತಾ ಕಾದು ನೋಡಬೇಕಿದೆ.

  • ರಶ್ಮಿಕಾ ಮಂದಣ್ಣಗೆ ತಮಿಳು ಹುಡುಗ ಬೇಕಂತೆ: ಮತ್ತೆ ಟ್ರೋಲ್ ಆದ ಕನ್ನಡತಿ

    ರಶ್ಮಿಕಾ ಮಂದಣ್ಣಗೆ ತಮಿಳು ಹುಡುಗ ಬೇಕಂತೆ: ಮತ್ತೆ ಟ್ರೋಲ್ ಆದ ಕನ್ನಡತಿ

    ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನೆನ್ನೆಯಷ್ಟೇ ತಮಿಳು ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿದ್ದರು. ದಳಪತಿ ವಿಜಯ್ ಅವರ ಹೊಸ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದು, ಈ ಸಿನಿಮಾದ ಮುಹೂರ್ತ ನಿನ್ನೆಯಷ್ಟೇ ನಡೆದಿದೆ. ಈ ಸಂದರ್ಭದಲ್ಲಿ ದಳಪತಿ ವಿಜಯ್ ಅವರಿಗೆ ದೃಷ್ಟಿ ತಗೆದು ಶಹಭಾಷ್ ಅನಿಸಿಕೊಂಡಿದ್ದ ರಶ್ಮಿಕಾ, ಅದೇ ಸಂದರ್ಭದಲ್ಲೇ ತಮ್ಮ ಮನದಾಳದ ಮಾತುಗಳನ್ನು ಆಚೆ ಹಾಕಿ ಟ್ರೋಲ್ ಆಗುತ್ತಿದ್ದಾರೆ. ಇದನ್ನೂ ಓದಿ : ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ

    ಮದುವೆಯ ವಿಷಯದಲ್ಲಿ ಹೆಚ್ಚು ಸುದ್ದಿ ಆಗುವ ರಶ್ಮಿಕಾ, ಈ ಹಿಂದೆ ತಾವು ಯಾವ ರಾಜ್ಯದ ಸೊಸೆಯಾಗಿರಬೇಕು ಎಂದು ಹೇಳಿ ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗಿದ್ದರು. ಇದೀಗ ಯಾವ ಹುಡುಗನನ್ನು ಲಗ್ನ ಮಾಡಿಕೊಳ್ಳಬೇಕು ಎಂದು ಹೇಳಿ ಮತ್ತೆ ಸುದ್ದಿಯಾಗಿದ್ದಾರೆ. ಸಿನಿಮಾ ಮುಹೂರ್ತದ ಸಂದರ್ಭದಲ್ಲಿ ತಾವು ತಮಿಳು ಹುಡುಗನನ್ನು ಮದುವೆ ಆಗಬೇಕೆಂದು ಬಯಸಿರುವೆ ಎಂದು ಹೇಳಿಕೆಕೊಟ್ಟಿದ್ದಾರೆ ಎನ್ನಲಾಗುತ್ತಿದ್ದು, ಈಗದು ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ : ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

    ಈ ಹಿಂದೆ ತಮಗೆ ತಮಿಳು ಕಲ್ಚರ್ ತುಂಬಾ ಇಷ್ಟ. ಹಾಗಾಗಿ ತಮಿಳು ನಾಡಿನ ಸೊಸೆಯಾಗುತ್ತೇನೆ ಎಂದು ಹೇಳಿದ್ದರು. ಆಗಲೂ ಕೂಡ ಅವರ ಮಾತು ಇಷ್ಟೇ ಸದ್ದು ಮಾಡಿತ್ತು. ಕನ್ನಡ ಸಿನಿಮಾ ರಂಗದಿಂದ ಬೆಳೆದು, ಕರ್ನಾಟಕದಲ್ಲೇ ಹುಟ್ಟಿ ಈ ರೀತಿಯ ಮಾತುಗಳನ್ನು ನಾವು ಕೇಳುವುದಿಲ್ಲ ಎಂದು ಕನ್ನಡದ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದರೆ, ತಮಿಳು ಅಭಿಮಾನಿಗಳು ಅವರ ಮಾತುಗಳನ್ನು ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ

    ಈ ನಡುವೆ ತೆಲುಗಿನ ಹುಡುಗನ ಜತೆ ರಶ್ಮಿಕಾ ಓಡಾಡುತ್ತಿರುವುದು ಕೂಡ ಚರ್ಚೆಯಾಗುತ್ತಿದೆ. ರಕ್ಷಿತ್ ಶೆಟ್ಟಿ ಜತೆಗಿನ ನಿಶ್ಚಿತಾರ್ಥ ಮುರಿದುಕೊಂಡ ನಂತರ ಹೆಚ್ಚು ಸುದ್ದಿಯಾಗಿದ್ದು ವಿಜಯ್ ದೇವರಕೊಂಡ ಜತೆ ರಶ್ಮಿಕಾ ತುಂಬಾ ಆತ್ಮೀಯರಾಗಿದ್ದಾರೆ ಎನ್ನುವುದು. ಹಲವು ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಕೂಡ ಈ ಸುದ್ದಿಗೆ ಹೆಚ್ಚು ಪುಷ್ಠಿ ಕೊಟ್ಟಿತ್ತು. ಹಾಗಾದರೆ, ತೆಲುಗಿನ ಹುಡುಗನನ್ನು ಬಿಟ್ಟು, ತಮಿಳು ಹುಡುಗನ ಕೈ ಹಿಡಿಯುತ್ತಾರಾ ರಶ್ಮಿಕಾ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ.

  • ಪುರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ

    ಪುರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ

    ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ಸೂಪರ್ ಸ್ಟಾರ್ ವಿಜಯ್ ದೇವರಕೊಂಡ ಕಾಂಬೋದ ಮತ್ತೊಂದು ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಲೈಗರ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ವಿಜಯ್ ಹಾಗೂ ಪುರಿ ಜಗನ್ನಾಥ್ ಜೋಡಿ JGM ಎಂಬ ಆಕ್ಷನ್ ಡ್ರಾಮಾ ಸಿನಿಮಾ ಉಣಬಡಿಸಲು ತಯಾರಾಗುತ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಇವತ್ತು ಮುಂಬೈನಲ್ಲಿ ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಜನಗಣಮನ ಸಿನಿಮಾಗೆ ಮುನ್ನುಡಿ ಬರೆಯಲಾಯಿತು.

    JGM ಸಿನಿಮಾಗೆ ಪುರಿ ಜಗನ್ನಾಥ್ ಚಿತ್ರಕಥೆ, ಡೈಲಾಗ್ ಬರೆದು ಆಕ್ಷನ್ ಕಟ್ ಹೇಳಲಿದ್ದು, ಪುರಿ ಕನೆಕ್ಟ್ ಹಾಗೂ ಶ್ರೀಕರ ಸ್ಟುಡಿಯೋ ಪ್ರೊಡಕ್ಷನ್ ನಡಿ ಚಾರ್ಮಿ ಕೌರ್, ವಂಶಿ ಪಡಿಪೆಲ್ಲಿ ಬಂಡವಾಳ ಹೂಡ್ತಿದ್ದು, ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ನಮ್ಮ ಮುಂದಿನ ಸಿನಿಮಾ JGM  ಬಗ್ಗೆ  ಮಾಹಿತಿ ಹಂಚಿಕೊಂಡಿರುವುದು ಖುಷಿಯಾಗ್ತಿದೆ. ವಿಜಯ್ ಜೊತೆ ಮತ್ತೆ ಕೈ ಜೋಡಿಸಿದ್ದೇನೆ. ಇದು ಪಕ್ಕಾ ಆಕ್ಷನ್ ಎಂಟರ್ ಟೈನರ್ ಸಿನಿಮಾವಾಗಿದೆ ಎಂದು ನಿರ್ದೇಶಕ ಪುರಿ ಜಗನ್ನಾಥ್ ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: ಏಪ್ರಿಲ್ 2ಕ್ಕೆ ಕಿಚ್ಚನ ‘ವಿಕ್ರಾಂತ್ ರೋಣ’ ಟೀಸರ್ ರಿಲೀಸ್

    ವಿಜಯ್ ದೇವರಕೊಂಡ, ಪುರಿ ಪ್ರಾಜೆಕ್ಟ್ ಭಾಗವಾಗಿರೋದು ಖುಷಿಯಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ಈ ಕಥೆ ಮನ ಮುಟ್ಟುತ್ತದೆ. ಇದು ಸವಾಲಿನ ಕಥೆಯಾಗಿದ್ದು, ಚಾರ್ಮಿ ಹಾಗೂ ಇಡೀ ತಂಡದ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ವಂಶಿ ಪಡಿಪೆಲ್ಲಿ, JGM ಅದ್ಭುತ ಕಥೆಯಾಗಿದ್ದು, ಇದು ಭಾರತೀಯರ ಮನತಟ್ಟುತ್ತದೆ. ವಿಜಯ್, ಪುರಿ, ಚಾರ್ಮಿ ಜೊತೆ ಪ್ರಾಜೆಕ್ಟ್ ಕೆಲಸ‌ ಮಾಡುತ್ತಿರುವುದು ಖುಷಿಕೊಟ್ಟಿದೆ ಎಂದರು. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ವಿದೇಶದ ನಾನಾ ಭಾಗಳಲ್ಲಿ ಶೂಟಿಂಗ್ ನಡೆಸಲು ಪ್ಲ್ಯಾನ್ ಹಾಕಿದ್ದು, ಎಪ್ರಿಲ್ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಆಕ್ಷನ್ ಎಂಟರ್ ಟೈನರ್ ಕಥಾನಕ ಹೊಂದಿರುವ JGM ಸಿನಿಮಾ ಆಗಸ್ಟ್ 3 2023 ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.

  • ಸ್ಸಾರಿ, ಈ ಫೋಟೋ ನಿಮಗೆ ಇಷ್ಟವಾಗದೇ ಇರಬಹುದು: ರಶ್ಮಿಕಾ ಮಂದಣ್ಣ

    ಸ್ಸಾರಿ, ಈ ಫೋಟೋ ನಿಮಗೆ ಇಷ್ಟವಾಗದೇ ಇರಬಹುದು: ರಶ್ಮಿಕಾ ಮಂದಣ್ಣ

    ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ರಶ್ಮಿಕಾ ಮಂದಣ್ಣ ಯಾವತ್ತೂ ಮುಂದು. ದಿನವೂ ಅವರು ಹಲವು ಗಂಟೆಗಳ ಕಾಲ ಜಿಮ್ ನಲ್ಲಿ ಕಾಲಕಳೆಯುತ್ತಾರೆ. ಅದರಲ್ಲೂ ಡಾನ್ಸ್ ಮತ್ತು ಯೋಗದ ಮೂಲಕವೂ ದೇಹದಂಡಿಸುತ್ತಾರೆ. ಅನೇಕ ಬಾರಿ ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜತೆ ಹಂಚಿಕೊಂಡು ಆರೋಗ್ಯದ ಬಗ್ಗೆ ಟಿಪ್ಸ್ ಕೊಡುತ್ತಾರೆ. ಆದರೆ, ಈ ಬಾರಿ ಅವರು ಕೊಂಚ ಭಯದಿಂದಲೇ ವರ್ಕೌಟ್ ಮಾಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಈ ಫೋಟೋ ನಿಮಗೆ ಇಷ್ಟವಾಗುತ್ತದೆಯೋ ಇಲ್ಲವೋ ಎಂದೂ ಕೇಳಿದ್ದಾರೆ. ಇದನ್ನು ಓದಿ : ಮತ್ತೆ ನಟನೆಗೆ ಮರಳಿದ ಮಾಲಾಶ್ರೀ

    ರಶ್ಮಿಕಾ ಮಂದಣ್ಣ ಹಾಟ್ ಹಾಟ್ ಆಗಿ ಮತ್ತು ತುಂಡುಡುಗೆ ತೊಟ್ಟಾಗೆಲ್ಲ ಟ್ರೋಲ್ ಆಗಿದ್ದಾರೆ. ಅನೇಕ ಬಾರಿ ಅವರು ಧರಿಸುವ ಕಾಸ್ಟ್ಯೂಮ್ ನಿಂದಾಗಿಯೇ ಸುದ್ದಿ ಆಗಿದ್ದಾರೆ. ಹಾಗಾಗಿ ಫೋಟೋ ಹಾಕುವಾಗ ಇದೀಗ ಯೋಚಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳದ್ದು. ಹೀಗಾಗಿಯೇ ಈ ಫೋಟೋವನ್ನು ಹಾಕುವುದೋ ಬೇಡವೋ ಗೊತ್ತಿಲ್ಲ ಎನ್ನುತ್ತಾ ಆ ಫೋಟೋ ಹಾಕಿದ್ದಾರೆ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

    ಜಿಮ್ ನಲ್ಲಿರುವ ಫೋಟೋ ಹಾಕಿಕೊಂಡು, ‘ನಿಮ್ಮಲ್ಲಿಯ ತುಂಬಾ ಜನರಿಗೆ ಈ ಫೋಟೋ ಇಷ್ಟವಾಗುವುದಿಲ್ಲ. ಆದರೆ, ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ನಿರಂತರವಾಗಿ ವ್ಯಾಯಾಮ ಇರಲಿ. ಡಯಟ್, ವರ್ಕೌಟ್ ಮತ್ತು ಸಕಾರಾತ್ಮಕ ಆಲೋಚನೆಗಳಿಂದ ಉತ್ತಮ ಜೀವನ ನಡೆಸಬುದು’ ಎಂದು ಆರೋಗ್ಯದ ಕುರಿತಾಗಿ ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾನ್ಸ್ ಜೊತೆ ‘ಜೇಮ್ಸ್’ ವೀಕ್ಷಿಸಿದ ಶಿವಣ್ಣ ದಂಪತಿ – ಏನ್ ಹೇಳಲಿ ನನ್ನ ತಮ್ಮನ ಆ್ಯಕ್ಟಿಂಗ್ ಬಗ್ಗೆ

    ಪುಷ್ಪಾ ಸಿನಿಮಾದ ನಂತರ ರಶ್ಮಿಕಾ ಮಂದಣ್ಣ ತಮಿಳು ಸಿನಿಮಾ ರಂಗದಲ್ಲಿ ಮತ್ತಷ್ಟು ಬೇಡಿಕೆ ಪಡೆದಿದ್ದಾರೆ. ಪುಷ್ಪಾ 2 ಸಿನಿಮಾದಲ್ಲೂ ಅವರಿಗೆ ಪ್ರಮುಖ ಪಾತ್ರವಿದ್ದು, ಸದ್ಯ ಆ ಸಿನಿಮಾದ ತಯಾರಿಯಲ್ಲಿ ಅವರು ತೊಡಗಿದ್ದಾರೆ ಎನ್ನಲಾಗುತ್ತಿದೆ.

  • ಲಾಂಗ್ Hairಗೆ ಗುಡ್ ಬೈ ಹೇಳಿದ ವಿಜಯ್ ದೇವರಕೊಂಡ

    ಲಾಂಗ್ Hairಗೆ ಗುಡ್ ಬೈ ಹೇಳಿದ ವಿಜಯ್ ದೇವರಕೊಂಡ

    ಹೈದರಾಬಾದ್: ಟಾಲಿವುಡ್ ರೌಡಿ ನಟ ವಿಜಯ್ ದೇವರಕೊಂಡ ತಮ್ಮ ಮುಂದಿನ ಸಿನಿಮಾ ಲೈಗರ್‌ಗಾಗಿ ಲಾಂಗ್ ಹೇರ್ಸ್ ಬಿಟ್ಟಿದ್ದರು. ಇದೀಗ ಎರಡು ವರ್ಷಗಳ ಬಳಿಕ ವಿಜಯ್ ದೇವರಕೊಂಡ ತಮ್ಮ ಲಾಂಗ್ ಹೇರ್ಸ್‍ಗೆ ಗುಡ್ ಬೈ ಹೇಳಿದ್ದಾರೆ.

    ಇತ್ತೀಚೆಗಷ್ಟೇ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ವಾಲಿಬಾಲ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವಿಜಯ್ ದೇವರಕೊಂಡ ಅವರನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರದಲ್ಲಿ ಪಾಲ್ಗೊಂಡಿದ್ದ ವಿಜಯ್ ವಿಜೇತರಿಗೆ ಟ್ರೋಫಿ ನೀಡಿ ವಿಶ್ ಮಾಡಿದ್ದರು. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವಿಜಯ್ ಹೊಸ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅದರಲ್ಲಿಯೂ ಹೆಣ್ಮಕ್ಕಳಂತೂ ಕ್ಲೀನ್ ಬೋಲ್ಡ್ ಆಗಿದ್ದಾರೆ. ಇದನ್ನೂ ಓದಿ : ಕ್ರೇಜಿಸ್ಟಾರ್ ವಿ.ರವಿಚಂದ್ರನ್ ತಾಯಿ ವಿಧಿವಶ

    ವಿಜಯ್ ದೇವರಕೊಂಡ ತಮ್ಮ ಮುಂದಿನ ಸಿನಿಮಾ ಲೈಗರ್‌ನಲ್ಲಿ ಲಾಂಗ್ ಹೇರ್ಸ್ ಬಿಟ್ಟು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಕ್ಕೆ ನಿರ್ದೇಶಕ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾದಲ್ಲಿ ವಿಜಯ್ ಬಾಕ್ಸರ್ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ವಿಜಯ್‍ಗೆ ಜೋಡಿಯಾಗಿ ಬಾಲಿವುಡ್ ನಟಿ ಅನನ್ಯ ಪಾಂಡೆ ಬಣ್ಣ ಹಂಚಿದ್ದಾರೆ. ಇದೇ 2022ರ ಆಗಸ್ಟ್ 25ಕ್ಕೆ ಲೈಗರ್ ಸಿನಿಮಾ ತೆರೆಕಾಣಲಿದೆ.

    ಇತ್ತೀಚೆಗಷ್ಟೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆ ಕುರಿತ ಗಾಸಿಪ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೆ ಈ ವಿಚಾರವನ್ನು ವಿಜಯ್ ದೇವರಕೊಂಡ ಟ್ವೀಟ್ ಮಾಡುವ ಮೂಲಕ ಗಾಸಿಪ್‍ಗಳಿಗೆ ಫುಲ್‍ಸ್ಟಾಪ್ ಇಟ್ಟರು. ಸದ್ಯ ತಮ್ಮ ಮುಂದಿನ ಸಿನಿಮಾ ಬಿಡುಗಡೆಗಾಗಿ ವಿಜಯ್ ದೇವರಕೊಂಡ ಕಾಯುತ್ತಿದ್ದಾರೆ. ಇದನ್ನೂ ಓದಿ : ಮೊದಲ ಬಾರಿಗೆ ಒಂದಾದ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ರಾಜಮೌಳಿ