Tag: ವಿಜಯ್ ಕಿರಗಂದೂರು

  • ಐಟಿ ದಾಳಿ ಬಳಿಕ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಮೊದಲ ಪ್ರತಿಕ್ರಿಯೆ

    ಐಟಿ ದಾಳಿ ಬಳಿಕ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಮೊದಲ ಪ್ರತಿಕ್ರಿಯೆ

    ಬೆಂಗಳೂರು: ಕೆಜಿಎಫ್ ಸಿನಿಮಾ ದೊಡ್ಡ ಸಕ್ಸಸ್ ಆಗಿತ್ತು. ಚಿತ್ರ ಬಿಡುಗಡೆಯಾದ ಎರಡನೇ ವಾರವೇ ಐಟಿ ಅಧಿಕಾರಿಗಳು ನನ್ನ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದರು. ಸಿನಿಮಾ ಮತ್ತು ನನ್ನ ವೈಯಕ್ತಿಕ ಆದಾಯಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲನೆ ನಡೆಸಿ, ನಮ್ಮಿಂದ ಕೆಲ ಮಾಹಿತಿಗಳನ್ನು ಪಡೆದುಕೊಂಡರು. ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇವೆ. ಕೆಜಿಎಫ್ ದೊಡ್ಡ ಹಿಟ್ ಪಡೆದಿದ್ದರಿಂದ ನನ್ನ ಮೇಲೆ ಐಟಿ ದಾಳಿಯಾಗಿರುವ ಸಾಧ್ಯತೆಗಳಿವೆ. ಬೇರೆ ನಟ ಮತ್ತು ನಿರ್ಮಾಪಕರ ಮೇಲೆ ಯಾವ ಕಾರಣಕ್ಕೆ ದಾಳಿ ಆಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.

    ಐಟಿ ದಾಳಿ ಅಂತ್ಯವಾಗಿದ್ದು, ವಿಚಾರಣೆಗೆ ಕರೆದಾಗ ಹಾಜರಾಗಬೇಕೆಂದು ಸೂಚಿಸಿದ್ದಾರೆ. ಸಿನಿಮಾ ಬಿಡುಗಡೆಯಾದ ಎರಡನೇ ವಾರ ಅಧಿಕಾರಿಗಳು ದಾಳಿ ನಡೆಸಿದ್ದರಿಂದ ಚಿತ್ರದ ಪ್ರಮೋಷನ್ ಗೆ ಹೊಡೆತ ಬಿದ್ದಿದೆ. ಮೂರನೇ ವಾರದಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ತೆರಳಿ ಸಿನಿಮಾದ ಪ್ರಚಾರ ಮಾಡಬೇಕೆಂದು ಯಶ್ ಸೇರಿದಂತೆ ಎಲ್ಲರು ಪ್ಲಾನ್ ಮಾಡಿದ್ದೀವಿ. ಅಧಿಕಾರಿಗಳು ತಮಗೆ ಬಂದಿರುವ ಮಾಹಿತಿ ಸತ್ಯನೋ ಅಥವಾ ಸುಳ್ಳೋ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಬರುತ್ತಾರೆ. ಆದಾಯ ಅಧಿಕಾರಿಗಳು ತಮ್ಮ ಮೇಲಾಧಿಕಾರಿಗಳ ಆದೇಶದ ಮೇರೆಗೆ ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು.

    ನಾನು ಯಾವುದೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲ. ಕನ್ಸ್ಟ್ರಕ್ಷನ್ ಬ್ಯುಸಿನೆಸ್ ಜೊತೆ ಸಿನಿಮಾಗಳಿಗೆ ನಿರ್ಮಾಪಕನಾಗಿ ಕೆಲಸ ಮಾಡಿಕೊಂಡಿದ್ದೇನೆ. ಅಧಿಕಾರಿಗಳು ಮನೆಗೆ ಬಂದ ಮೊದಲ ದಿನವೇ ಎಲ್ಲ ಪರಿಶೀಲನೆ ಮುಗಿದಿತ್ತು. ಏಕಕಾಲದಲ್ಲಿ ಎಲ್ಲರ ಮನೆ ಮೇಲೆ ಐಟಿ ದಾಳಿ ನಡೆದಿದ್ದರಿಂದ ಬೇರೆಯವರ ವಿಚಾರಣೆ ಮುಗಿಯುವವರೆಗೂ ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಹಾಗಾಗಿ ಎರಡು ದಿನ ಹೊರಗೆ ಬರಲಿಲ್ಲ ಅಂತಾ ಹೇಳಿದರು.

    ಇದು ಆದಾಯಕ್ಕೆ ಸಂಬಂಧಿಸಿದಂತಹ ವಿಷಯ. ಯಾವುದೇ ರಾಜಕೀಯ ವಿಚಾರಕ್ಕೆ ಸಂಬಂಧಿಸಿಲ್ಲ. ಅಧಿಕಾರಿಗಳು ಕೇಳಿದ ದಾಖಲಾತಿಗಳನ್ನು ನಾವು ನೀಡಿದ್ದೇವೆ. ತನಿಖೆಗೂ ಸಹಕಾರ ನೀಡಿದ್ದೇವೆ. ಯಾವುದೇ ಗೊಂದಲ ಬೇಡ ಎಂದು ಅಭಿಮಾನಿಗಳಲ್ಲಿ ವಿಜಯ್ ಮನವಿ ಮಾಡಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದು ಚೆಂಡಿನಿಂದ ರಾಕಿಯ ಜೀವನವೇ ಬದಲಾಯ್ತು

    ಒಂದು ಚೆಂಡಿನಿಂದ ರಾಕಿಯ ಜೀವನವೇ ಬದಲಾಯ್ತು

    ಬೆಂಗಳೂರು: ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಆರು ದಿನ ಕಳೆದ್ರೂ ಚಿತ್ರದ ಜ್ವರ ಮಾತ್ರ ಕಡಿಮೆಯಾಗಿಲ್ಲ. ಸಾಮಾನ್ಯವಾಗಿ ವೀಕೆಂಡ್ ದಿನಗಳಲ್ಲಿ ಮಾತ್ರ ಚಿತ್ರಮಂದಿರ ತುಂಬಿರುತ್ತದೆ ಎಂಬ ಮಾತಿದೆ. ಈ ಮಾತನ್ನು ಕೆಜಿಎಫ್ ಸುಳ್ಳಾಗಿಸಿದ್ದು, ಇಂದಿಗೂ ಥಿಯೇಟರ್ ನತ್ತ ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಹಲವು ವಿಶೇಷತೆಗಳನ್ನು ಈ ಸಿನಿಮಾ ಒಳಗೊಂಡಿದ್ದು, ಎಲ್ಲರೂ ಸಲಾಂ ರಾಕಿ ಭಾಯ್ ಎಂದು ಹೇಳುತ್ತಿದ್ದಾರೆ.

    ಕೆಜಿಎಫ್ ನಲ್ಲಿ ಹುಟ್ಟಿದ್ದ ಹುಡುಗ ಮುಂದೊಂದು ದಿನ ಬಾಂಬೆ ಲೋಕದ ಅಧಿಪತಿಯಾಗ್ತಾನೆ. ಅಧಿಪತಿಯಾದ ರಾಕಿ ಆಕಸ್ಮಿಕವಾಗಿ ಕೆಜಿಎಫ್ ಎಂಬ ಅಮಾನುಷ ಲೋಕಕ್ಕೆ ಹಿಂದಿರುಗುತ್ತಾನೆ. ಗುರಿ ಇಟ್ಟುಕೊಂಡು ಕೆಜಿಎಫ್ ಸೇರುವ ರಾಕಿ ತನ್ನ ಸಾಧನೆಗಾಗಿ ಕಾಯುತ್ತಿರುತ್ತಾನೆ. ಅಲ್ಲಿ ನಡೆಯುವ ಅಮಾನುಷ ಕೃತ್ಯಗಳನ್ನು ಕಂಡರೂ ಎದೆಯ ಮೇಲೊಂದು ಕಲ್ಲು ಇಟ್ಟುಕೊಂಡು ಸುಮ್ಮನಿರುತ್ತಾನೆ. ಆದ್ರೆ ಒಂದು ಚೆಂಡು ರಾಕಿಯ ಜೀವನವನ್ನೇ ಬದಲಾವಣೆ ಮಾಡುತ್ತದೆ. ಆ ಒಂದು ಘಟನೆಯಿಂದಾಗಿ ರಾಕಿ ಅಲ್ಲಿಯ ಜನರೊಂದಿಗೆ ಬೆರೆತುಕೊಳ್ಳುತ್ತಾನೆ. ಹಾಗಾದ್ರೆ ಆ ಘಟನೆ ಏನು ಅಂತೀರಾ, ಅದನ್ನು ನೀವು ಬಿಗ್ ಸ್ಕ್ರೀನ್ ಮೇಲೆ ನೋಡಿದರೆ ಚೆಂದ. ಹಾಗಾಗಿ ರಾಕಿಯನ್ನು ಬದಲಾಯಿಸಿದ ಆ ಚೆಂಡಿನ ಕಥೆಯನ್ನು ನೀವು ಸಿನಿಮಾದಲ್ಲೇ ನೋಡಿ.

    ಸಿನಿಮಾದಲ್ಲಿ ಲಾಜಿಕ್ ಹುಡುಕದೇ ಮ್ಯಾಜಿಕ್ ನೋಡಿ. ಪ್ರತಿಯೊಂದು ಸನ್ನಿವೇಶಗಳ ಪಾತ್ರಗಳಲ್ಲಿ ನೀವು ಕಾಣಿಸಿಕೊಳ್ಳುತ್ತೀರಿ. ಪ್ರಶಾಂತ್ ನೀಲ್ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಮುಂದಿನ ಭಾಗ ಹೇಗಿರುತ್ತೆ? ಅಲ್ಲಿ ನಡೆಯುವುದಾದ್ರೂ ಏನು? ಕೆಜಿಎಫ್ ಘಟನೆಗಳು ರಾಕಿಯ ಮೇಲೆ ಯಾವ ಪರಿಣಾಮ ಬೀರುತ್ತಾ? ತಾಯಿಗೆ ಕೊಟ್ಟ ಮಾತಿನಂತೆ ಪವರ್ ಹುಡುಕಿ ಹೊರಟವನ ಜೀವನದಲ್ಲಿ ಹೊರಟ ಮಗನ ಜೀವನ ಮುಂದೇನು ಎಂಬಿತ್ಯಾದಿ ಪ್ರಶ್ನೆಗಳು ಸಿನಿಮಾ ನೋಡಿ ಹೊರ ಬರುವವರಲ್ಲಿ ಹುಟ್ಟಿಕೊಳ್ಳುವುದು ಸತ್ಯ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಾದ್ರೆ ಚಾಪ್ಟರ್-2 ಗಾಗಿ ಕಾಯಲೇಬೇಕು.

    ಸಿನಿಮಾದುದ್ದಕ್ಕೂ ಅನಂತ್ ನಾಗ್ ಅವರ ಧ್ವನಿ ನಿಮ್ಮನ್ನು ಮೋಡಿ ಮಾಡುತ್ತೆ. ಸಿನಿಮಾದ ಹಿನ್ನೆಲೆ ಸಂಗೀತ ಚಿತ್ರದ ಪ್ರತಿಯೊಂದು ಸನ್ನಿವೇಶಗಳನ್ನು ರಗಢ್ ಲುಕ್ ನಲ್ಲಿ ತೋರಿಸಲು ಯಶಸ್ವಿಯಾಗಿದೆ. ಕೆಲ ನಿಮಿಷ ಬಂದು ಹೋಗುವ ತಮನ್ನಾ ಭಾಟಿಯಾ ಅಭಿಮಾನಿಗಳನ್ನು ರಂಜಿಸುವಲ್ಲಿ ನಾನೇನು ಕಡಿಮೆ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಚಿತ್ರದ ಬಹುಪಾಲು ಕಲಾವಿದರ ಧ್ವನಿಯೇ ಕೆಜಿಎಫ್ ಸಿನಿಮಾದ ಪ್ಲಸ್ ಪಾಯಿಂಟ್ ಆಗಿದೆ. ಕನ್ನಡದ ಕಿರೀಟ ಅಂತಾ ಕೆಜಿಎಫ್ ಕರೆಸಿಕೊಳ್ಳುತ್ತಿದ್ದು, 100 ಕೋಟಿಯ ಕ್ಲಬ್ ಸೇರಿದ ಮೊದಲ ಚಂದನವನದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಇನ್ನು ನೀವು ಸಿನಿಮಾ ನೋಡಿಲ್ವಾ? ಹಾಗಾದ್ರೆ ನೋಡಿ. ನಿಮಗೆ ಸಿನಿಮಾದ ಯಾವ ಭಾಗ, ದೃಶ್ಯ, ಕಲಾವಿದ ಇಷ್ಟ ಆದ್ರು? ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇದು ನನ್ನ ದುನಿಯಾ: ಕೆಜಿಎಫ್ ಸಂಭ್ರಮದ ಫೋಟೋ ಹಂಚಿಕೊಂಡ್ರು ಯಶ್

    ಇದು ನನ್ನ ದುನಿಯಾ: ಕೆಜಿಎಫ್ ಸಂಭ್ರಮದ ಫೋಟೋ ಹಂಚಿಕೊಂಡ್ರು ಯಶ್

    – ರಾಕಿಗೆ ಮುತ್ತಿಟ್ಟ ಡೈರಕ್ಟರ್, ಪ್ರೊಡ್ಯೂಸರ್

    ಬೆಂಗಳೂರು: ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಎರಡು ದಿನಗಳು ಕಳೆದಿವೆ. ಮೂರನೇ ದಿನವೂ ರಾಕಿಯ ಆರ್ಭಟ ಮುಂದುವರಿದಿದ್ದು, ಚಿತ್ರತಂಡ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇದೀಗ ಸಂಭ್ರಮಾಚಾರಣೆ ವೇಳೆಯ ಫೋಟೋವನ್ನು ಯಶ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಇದೇ ನನ್ನ ದುನಿಯಾ ಎಂದು ಬರೆದುಕೊಂಡಿದ್ದಾರೆ.

    ಫೋಟೋದಲ್ಲಿ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಇಬ್ಬರು ಯಶ್ ಅವರ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಒಂದು ಸಿನಿಮಾ ರೂಪುಗೊಳ್ಳಬೇಕಾದರೆ ನಿರ್ಮಾಪಕ, ನಿರ್ದೇಶಕ ಮತ್ತು ಕಲಾವಿದ ಎಂಬ ಮೂರು ಸ್ತಂಭಗಳ ಬುನಾದಿ ಮುಖ್ಯವಾಗಿರುತ್ತದೆ. ನಿರ್ದೇಶಕನ ಕಥೆಗೆ ನ್ಯಾಯ ನೀಡುವ ಕಲಾವಿದ ಹಾಗು ತೆರೆಯ ಮೇಲೆ ಸಿನಿಮಾ ಆಕರ್ಷಕವಾಗಿ ಕಾಣುವಂತೆ ಮಾಡಲು ಆರ್ಥಿಕ ಬಲ ನೀಡುವ ನಿರ್ಮಾಪಕ ಈ ಮೂವರು ಒಗ್ಗೂಡಿದಾಗ ಮಾತ್ರ ಒಂದು ಯಶ್ವಿಸಿ ಸಿನಿಮಾ ಹೊರ ಬರುತ್ತದೆ. ಯಶ್ ಅಪ್ಲೋಡ್ ಮಾಡಿಕೊಂಡಿರುವ ಫೋಟೋದಲ್ಲಿ ಈ ಮೂವರು ಇದ್ದಾರೆ.

    ಸಿನಿಮಾ ಪ್ರಚಾರದ ಸಂದರ್ಭದ ಸಂದರ್ಶನಗಳಲ್ಲಿ ಯಶ್ ಎಲ್ಲಿಯೂ ನಾನು ಕಷ್ಟಪಟ್ಟು ಕೆಲಸ ಮಾಡಿದೆ ಅಂತಾ ಹೇಳಿಲ್ಲ. ಪ್ರತಿಯೊಂದು ಸಂದರ್ಶನದಲ್ಲಿಯೂ ಚಿತ್ರದ ಸಹ ಕಲಾವಿದರ ಸಹಕಾರ, ತಂತ್ರಜ್ಞರ ಕೈಚಳಕ, ಕಲ್ಪನೆಗೂ ಮೀರಿದ ಸೆಟ್‍ಗಳ ನಿರ್ಮಿಸಿದ ಕಲಾ ನಿರ್ದೇಶಕರ ತಂಡ, ಚಿತ್ರ ನೋಡುಗರನ್ನ ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯದ ಸಂಗೀತ, ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ತಮನ್ನಾ ಮತ್ತು ಮೌನಿ ರಾಯ್, ವಿತರಕರು ಹೀಗೆ ಕೆಜಿಎಫ್ ಎಂಬ ಅದ್ಭುತ ಹೊರ ಬರಲು ನೆರವಾದ ಎಲ್ಲರ ಬಗ್ಗೆ ಯಶ್ ಹೇಳುತ್ತಾ ಬಂದಿದ್ದಾರೆ.

    ಯಾವ ಒಂದು ಸಂದರ್ಶನದಲ್ಲಿ ಯಶ್ ತಮ್ಮ ಬಗ್ಗೆಯೇ ಹೇಳಿಕೊಂಡಿಲ್ಲ. ವಿಶೇಷ ಅಂದ್ರೆ ಚಿತ್ರಕ್ಕಾಗಿ ಯಶ್ ತಮ್ಮನ್ನ ತಾವೇ ಬದಲಿಸಿಕೊಂಡಿರೋದಂತು ಸತ್ಯ. ಸತತ ಎರಡು ವರ್ಷಗಳಿಂದ ಬಿಟ್ಟುಕೊಂಡಿರುವ ಉದ್ದನೆಯ ಗಡ್ಡ. ಯಾವಾಗ್ಲೋ ಕ್ಲೀನ್ ಶೇವ್ ಲವರ್ ಬಾಯ್ ಲುಕ್ ನಿಂದ ಹೊರ ಬಂದ ಯಶ್, ಕೆಜಿಎಫ್ ಗಾಗಿ ಹುರಿ ಹುರಿ ಮೈಕಟ್ಟು, ರಗಡ್ ಲುಕ್, ಬಿಡುವಿಲ್ಲದ ಚಿತ್ರೀಕರಣ ಹೀಗೆ ರಾಕಿಂಗ್ ಸ್ಟಾರ್ ಎರಡು ವರ್ಷಗಳನ್ನೇ ಚಿತ್ರಕ್ಕಾಗಿ ಮುಡಿಪು ಇಟ್ಟಿದ್ದು ಸತ್ಯ.

    ಹೀಗಾಗಿಯೇ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ಧನ್ಯವಾದವನ್ನು ರಾಕಿಯ ಕೆನ್ನೆಗೆ ಮುತ್ತಿಕ್ಕುವ ಮೂಲಕ ನಮ್ಮ ಸ್ನೇಹ ಹೀಗೆ ಇರಲಿ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿನಿಮಾಗೆ ಕೋರ್ಟ್ ತಡೆಯಾಜ್ಞೆ: ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಪ್ರತಿಕ್ರಿಯೆ

    ಸಿನಿಮಾಗೆ ಕೋರ್ಟ್ ತಡೆಯಾಜ್ಞೆ: ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಪ್ರತಿಕ್ರಿಯೆ

    ಬೆಂಗಳೂರು: ಶುಕ್ರವಾರ ಸಿನಿಮಾ ನಿಗದಿಯಂತೆ ಬಿಡುಗಡೆಯಾಗಲಿದೆ. ನಮಗೆ ಮಾಧ್ಯಮಗಳ ಮೂಲಕವೇ ನ್ಯಾಯಾಲಯ ನೀಡಿದ ತಡೆಯಾಜ್ಞೆ ಬಗ್ಗೆ ಮಾಹಿತಿ ಬಂದಿದೆ. ಇದೂವರೆಗೂ ನಮ್ಮ ಕೈಗೆ ನ್ಯಾಯಾಲಯದ ನೋಟಿಸ್ ತಲುಪದ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ತಿಳಿಸಿದ್ದಾರೆ.

    ಸಿನಿಮಾವನ್ನು ಎಲ್ಲ ವಿತರಕರಿಗೆ ವಿತರಣೆ ಮಾಡಲಾಗಿದೆ. ಶುಕ್ರವಾರ ಬೆಳಗಿನ ಜಾವವೇ ಸಿನಿಮಾ ಬಿಡುಗಡೆಯಾಗಲು ಸಿದ್ಧವಾಗಿದೆ. ಅರ್ಜಿದಾರರಾದ ವೆಂಕಟೇಶ್ ಮತ್ತು ಆನಂದ್ ಎಂಬವರ ಪರಿಚಯವೇ ನನಗಿಲ್ಲ. ಸಿನಿಮಾ ನೋಡದೆಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರೋದು ತಪ್ಪು. ಈ ವಿಷಯದ ಬಗ್ಗೆ ಕೆಜಿಎಫ್ ಚಿತ್ರತಂಡಕ್ಕೆ ಗೊತ್ತಿಲ್ಲ. ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

    ನ್ಯಾಯಾಲಯಕ್ಕೆ ನಾವು ಗೌರವವನ್ನು ನೀಡುತ್ತೇವೆ. ನಿರ್ದೇಶಕ ಪ್ರಶಾಂತ್ ನೀಲ್ ಸಹ ರೌಡಿ ತಂಗಂ ಜೀವನಾಧರಿತ ಕಥೆ ಅಂತಾ ಹೇಳಿಲ್ಲ. ಈ ಬಗ್ಗೆ ಚಿತ್ರ ತಂಡದಲ್ಲಿ ಚರ್ಚೆಯೂ ನಡೆದಿಲ್ಲ. ಈ ಮೊದಲು ಅರ್ಜಿದಾರರು ಅಂತ ಹೇಳಿಕೊಳ್ಳುವ ವೆಂಕಟೇಶ್ ಮತ್ತು ಆನಂದ್ ನಮ್ಮನ್ನ ಸಂಪರ್ಕ ಮಾಡಿಲ್ಲ ಅಂತಾ ಅಂದ್ರು.

  • ಕೆಜಿಎಫ್ ಕಡೆಯಿಂದ ಇಂದು ಹೊರಬೀಳಲಿದೆ ಮತ್ತೊಂದು ಅಚ್ಚರಿ!

    ಕೆಜಿಎಫ್ ಕಡೆಯಿಂದ ಇಂದು ಹೊರಬೀಳಲಿದೆ ಮತ್ತೊಂದು ಅಚ್ಚರಿ!

    ನಿನ್ನೆಯಷ್ಟೇ ಕೆಜಿಎಫ್ ಲಿರಿಕಲ್ ಸಾಂಗ್ ಬಿಡುಗಡೆಯಾಗಿದೆ. ಇದರ ಮೂಲಕವೇ ಈ ಚಿತ್ರದ ಸುತ್ತ ಮತ್ತೊಂದು ಸುತ್ತಿನ ಆಕರ್ಷಣೆಯೂ ಶುರುವಾಗಿದೆ. ಇದೇ ಹೊತ್ತಿನಲ್ಲಿ ಇವತ್ತು ಕೆಜಿಎಫ್ ಕಡೆಯಿಂದ ಪ್ರೇಕ್ಷಕರ ಪಾಲಿಗೆ ಮತ್ತೊಂದು ಅಚ್ಚರಿಯೂ ಎದುರಾಗಲಿದೆ. ಇಂಥಾದ್ದೊಂದು ಶುಭ ಸೂಚನೆ ಹೊರ ಬಿದ್ದಿರೋದು ಬಾಲಿವುಡ್ ನಟ ಫರ್ಹಾನ್ ಅಖ್ತರ್ ಕಡೆಯಿಂದ!

    ಫರ್ಹಾನ್ ಅಖ್ತರ್ ಟ್ವಿಟ್ಟರ್ ಮೂಲಕ ಸಾರಿರುವ ಸಂದೇಶವನ್ನು ಆಧರಿಸಿ ಹೇಳೋದಾದರೆ ಇಂದು ಕೆಜಿಎಫ್‍ನ ಹಿಂದಿ ಆವೃತ್ತಿಯ ಎರಡನೇ ಟ್ರೈಲರ್ ಲಾಂಚ್ ಆಗಲಿದೆ. ಈಗಾಗಲೇ ಬಿಡುಗಡೆಯಾಗಿರೋ ಟ್ರೈಲರ್ ಮೂಲಕ ಶಾರೂಖ್ ಖಾನ್ ಅಭಿನಯದ ಝೀರೋ ಚಿತ್ರವೇ ಥಂಡಾ ಹೊಡೆದಿದೆ. ಹೀಗಿರುವಾಗ ಈಗ ಬಿಡುಗಡೆಯಾಗಲಿರೋ ಈ ಟ್ರೈಲರ್ ಎಂಥಾ ಹವಾ ಸೃಷ್ಟಿಸಬಹುದೆಂಬ ಬಗ್ಗೆ ಬಾಲಿವುಡ್ಡಲ್ಲಿಯೂ ಕುತೂಹಲದ ಕೌಂಟ್ ಡೌನ್ ಶುರುವಾಗಿದೆ. ಇದನ್ನೂ ಓದಿ: ಸಲಾಮ್ ರಾಕಿ ಭಾಯ್-ಕೆಜಿಎಫ್ ಲಿರಿಕಲ್ ವಿಡಿಯೋ ರಿಲೀಸ್

    ಹಿಂದಿಯಲ್ಲಿ ಕೆಜಿಎಫ್ ಚಿತ್ರದ ವಿತರಣೆಯ ಹಕ್ಕುಗಳನ್ನು ಫರಾನ್ ಅಖ್ತರ್ ಪಡೆದುಕೊಂಡಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿರುವ ಈ ಚಿತ್ರ ಕನ್ನಡ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv