Tag: ವಿಜಯಪ್ರಸಾದ್

  • ತೋತಾಪುರಿ ಹಾಡಿನ ಸಂಭ್ರಮಕ್ಕಿಲ್ಲ ಬ್ರೇಕ್- ಗಲ್ಫ್ ಕನ್ನಡಿಗರೊಂದಿಗೆ ನಡೆಯಲಿದೆ ವರ್ಚ್ಯುಯಲ್ ಸೆಲೆಬ್ರೇಶನ್.!!

    ತೋತಾಪುರಿ ಹಾಡಿನ ಸಂಭ್ರಮಕ್ಕಿಲ್ಲ ಬ್ರೇಕ್- ಗಲ್ಫ್ ಕನ್ನಡಿಗರೊಂದಿಗೆ ನಡೆಯಲಿದೆ ವರ್ಚ್ಯುಯಲ್ ಸೆಲೆಬ್ರೇಶನ್.!!

    ತೋತಾಪುರಿ’ ಚಿತ್ರದ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ರಿಲೀಸ್ ಆಗಿದ್ದೇ ಆಗಿದ್ದು, ಎಲ್ಲೇ ಹೋದ್ರು ಈ ಹಾಡಿನದ್ದೇ ಕಾರುಬಾರು. ಮಿಲಯನ್ ಗಟ್ಟಲೇ ಮನಸ್ಸುಗಳ ಕದ ತಟ್ಟಿರುವ ಈ ಹಾಡಿನ ಸೆಲೆಬ್ರೇಶನ್‌ಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಯಾರ್ ಕೇಳಿದ್ರು ‘ಬಾಗ್ಲು ತೆಗೆ ಮೇರಿ ಜಾನ್’ ಹಾಡಿನ ಜಪವನ್ನೇ ಮಾಡುತ್ತಿದ್ದಾರೆ.

    ಟೀಂ ತೋತಾಪುರಿಗಂತೂ ಈ ಗೆಲುವು ಎಲ್ಲಿಲ್ಲದ ಖುಷಿ ತಂದು ಕೊಟ್ಟಿದೆ. ಅದೇ ಖುಷಿಯಲ್ಲಿ ಈ ಹಾಡಿನ ಸಂಭ್ರಮದ ತೇರನ್ನು ಎಳೆಯಲು ಆರಂಭಿಸಿತ್ತು. ಮೊದಲಿಗೆ ಅನಿವಾಸಿ ಕನ್ನಡಿಗರೊಂದಿಗೆ ನಡೆದ ವರ್ಚ್ಯುಯಲ್ ಕಾರ್ಯಕ್ರಮ ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ಇದೀಗ ಗಲ್ಫ್ ಕನ್ನಡಿಗರೊಂದಿಗೆ ಸ್ಪೆಶಲ್ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜು ಮಾಡಿದೆ. ಇದನ್ನೂ ಓದಿ: ಕುಂತ್ರು ನಿಂತ್ರು, ಎಲ್ಲೇ ಹೋದ್ರು ‘ತೋತಾಪುರಿ’ ಸಿನಿಮಾ ಹಾಡಿನದ್ದೇ ಗಾನಬಜಾನ

    ಹೌದು ಅಂತಹದ್ದೊಂದು ದೊಡ್ಡ ಕ್ರೇಜ್ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಸೃಷ್ಟಿಸಿದೆ. ಕೇವಲ ಕರುನಾಡು ಮಾತ್ರವಲ್ಲದೇ ದೇಶ ವಿದೇಶದಲ್ಲಿರುವ ಕನ್ನಡಿಗರ ಹೃದಯಕ್ಕೆ ಈ ಹಾಡು ಲಗ್ಗೆ ಇಟ್ಟಿತ್ತು. ಅಷ್ಟಕ್ಕೆ ನಿಲ್ಲದೇ ಇದೀಗ ದುಬೈ ಕನ್ನಡಿಗರ ಹೃದಯವನ್ನೂ ಕದ್ದಿದೆ. ಅಲ್ಲಿನ ಕನ್ನಡಿಗರು ಹಾಡನ್ನು ರಿಪೀಟ್ ಮೂಡ್‌ನಲ್ಲಿ ಕೇಳುತ್ತಿದ್ದಾರೆ. ಇಂತಹದೊಂದು ಕ್ರೇಜ್ ಹುಟ್ಟುಹಾಕಿರುವ ಹಾಡಿನ ಸಂಭ್ರಮವನ್ನು ಅಲ್ಲಿನವರೊಂದಿಗೆ ಸೆಲೆಬ್ರೇಟ್ ಮಾಡಬೇಕೆಂಬುದು ಚಿತ್ರತಂಡದ ಮಹದಾಸೆ. ಅದಕ್ಕೆಂದೇ ಫೆಬ್ರವರಿ 25ರಂದು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಮೋನಿಫಿಕ್ಸ್ ಆಡಿಯೋಸ್ ಯೂಟ್ಯೂಬ್ ಚಾನೆಲ್‌ನಲ್ಲಿ ವರ್ಚ್ಯುಯಲ್ ಕಾರ್ಯಕ್ರಮ ಹಮ್ಮಿಕೊಂಡಿದೆ ಚಿತ್ರತಂಡ. ಈ ಕಾರ್ಯಕ್ರಮದಲ್ಲಿ ಕುವೈತ್, ಒಮನ್, ಬಹ್ರೇನ್, ಕತಾರ್‌ನಲ್ಲಿರುವ ಕನ್ನಡಿಗರು ಭಾಗಿಯಾಗಿ ನವರಸ ನಾಯಕ ಜಗ್ಗೇಶ್ ಜೊತೆ ಮಾತುಕತೆ ನಡೆಸಲಿದ್ದಾರೆ. ಇದನ್ನೂ ಓದಿ: ಟ್ರೆಂಡಿಂಗ್‌ನಲ್ಲಿ ‘ತೋತಾಪುರಿ’ ಸಾಂಗ್ – ಸಿನಿರಸಿಕರಿಂದ  2 ಮಿಲಿಯನ್ ಮೆಚ್ಚುಗೆಯ ಮುದ್ರೆ

    ಸುರೇಶ್ ಆರ್ಟ್ಸ್, ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್‌ನಡಿ ನಿರ್ಮಾಣವಾದ ಈ ಚಿತ್ರಕ್ಕೆ ನೀರ್ ದೋಸೆ ಖ್ಯಾತಿಯ ವಿಜಯಪ್ರಸಾದ್ ನಿರ್ದೇಶನವಿದೆ. ಕೆ.ಎ ಸುರೇಶ್ ಬಂಡವಾಳ ಹೂಡಿದ್ದಾರೆ. ನವರಸ ನಾಯಕನಿಗೆ ಅದಿತಿ ಪ್ರಭುದೇವ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದು, ಡಾಲಿ ಧನಂಜಯ್, ದತ್ತಣ್ಣ, ಸುಮನ ರಂಗನಾಥ್, ವೀಣಾ ಸುಂದರ್, ಹೇಮಾದತ್ ತಾರಾಬಳಗದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

  • ಕುಂತ್ರು ನಿಂತ್ರು, ಎಲ್ಲೇ ಹೋದ್ರು ‘ತೋತಾಪುರಿ’ ಸಿನಿಮಾ ಹಾಡಿನದ್ದೇ ಗಾನಬಜಾನ

    ಕುಂತ್ರು ನಿಂತ್ರು, ಎಲ್ಲೇ ಹೋದ್ರು ‘ತೋತಾಪುರಿ’ ಸಿನಿಮಾ ಹಾಡಿನದ್ದೇ ಗಾನಬಜಾನ

    ಸ್ಯಾಂಡಲ್ ವುಡ್ ಅಂಗಳದಲ್ಲಿ ‘ತೋತಾಪುರಿ’ ಸಿನಿಮಾ ಬಝ್ ಜೋರಾಗಿದೆ. ಸಿನಿಮಾ ಬಿಡುಗಡೆಗಾಗಿ ಕಾಯುವಿಕೆಯೂ ಹೆಚ್ಚಾಗಿದೆ. ಅದರಲ್ಲೂ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಬಿಡುಗಡೆಯಾದ ಮೇಲೆ ‘ತೋತಾಪುರಿ’ ಸಿನಿಮಾ ಮೇಲಿನ ಟಾಕ್ ಸಿಕ್ಕಾಪಟ್ಟೆ ಜೋರಾಗಿದೆ. ಸೋಶಿಯಲ್ ಮೀಡಿಯಾ ಅಂಗಳವಿರಲಿ, ಗಾಂದೀನಗರದ ಗಲ್ಲಿ ಇರಲಿ, ಇನ್ಸ್ಟಾಗ್ರಾಮ್ ರೀಲ್ಸ್ ಇರಲಿ ಎಲ್ಲೆಲ್ಲೂ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡಿನದ್ದೇ ಕಾರುಬಾರು. ಅದೆಷ್ಟರ ಮಟ್ಟಿಗೆ ಅಂದ್ರೆ ಕೊರೊನಾ ಮೂರನೇ ಅಲೆ ಬಂದು ಚಳಿ ಜ್ವರದಿಂದ ಬಳಲಿ ಬೆಂಡಾಗಿದ್ದವರಿಗೆ ಈ ಹಾಡು ಒಂದ್ ರೀತಿ ರಿಲ್ಯಾಕ್ಸೇಷನ್ ಡೋಸ್ ಕೊಟ್ಟಂಗಿದೆ. ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯರ ಮೊಗದ ಮೇಲೂ ನಗು ತರಿಸುತ್ತಿರುವ ಈ ಹಾಡಿನ ಗಮ್ಮತ್ತೇ ಹಂಗಿದೆ.

    ಹೀಗೆ ಎಲ್ಲೆಡೆ ವೈರಲ್ ಆಗಿ, ಟ್ರೆಂಡ್ ಆಗಿ, ಕುಣಿಸುತ್ತಿರುವ, ಕಚಗುಳಿ ಇಡ್ತಿರುವ ಹಾಡಿಗೀಗ ಬರೋಬ್ಬರಿ ಆರು ಲಕ್ಷ ವೀಕ್ಷಣೆ ಕಂಡ ಸಂಭ್ರಮ. ಇದು ಈ ಹಾಡಿನ ತಾಕತ್ತು ಹಾಗೂ ಜನರು ಎಷ್ಟರ ಮಟ್ಟಿಗೆ ಇಷ್ಟಪಟ್ಟಿದ್ದಾರೆ ಅನ್ನೋದಕ್ಕೆ ಸಾಕ್ಷಿ. ಕೆಲವರಂತೂ ಸಾಂಗ್ ಕಂಡು ಸಿನಿಮಾ ಪಕ್ಕಾ ಹಿಟ್ ಎಂದು ಭವಿಷ್ಯ ಕೂಡ ನುಡಿಯುತ್ತಿದ್ದಾರೆ. ಹೀಗೆ ಸೂಪರ್ ಡೂಪರ್ ಹಿಟ್ ಆಗಿರೋ ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ಕೇಳೋಕೆ ಮಾತ್ರವಲ್ಲ ನೋಡೋಕೂ ಅಷ್ಟೇ ಚೆಂದ. ಮುರಳಿ ಮಾಸ್ಟರ್ ಕಲರ್ ಫುಲ್ ಕೊರಿಯೋಗ್ರಫಿ, ಕ್ಯಾಚಿ ಲಿರಿಕ್ಸ್, ಅನೂಪ್ ಸೀಳಿನ್ ಸಂಗೀತ, ಗಾಯನ ಎಲ್ಲವೂ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದೆ. ಒಟ್ನಲ್ಲಿ, ಒಂದು ಹಾಡು ಗೆಲ್ಲೋಕೆ, ಜನ್ರ ಮನ್ಸು ಗೆಲ್ಲೋಕೆ ಏನೆಲ್ಲಾ ಬೇಕೋ ಅದೆಲ್ಲ ಅಚ್ಚುಕಟ್ಟಾಗಿ ಬೆರೆತಿರೋ ಈ ಹಾಡು ತೋತಾಪುರಿ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿರೋದಂತೂ ಸುಳ್ಳಲ್ಲ. ಇದನ್ನೂ ಓದಿ: ಇಂಟಿಮೇಟ್ ಸೀನ್ ಮಾಡಲು ರಣವೀರ್ ಅನುಮತಿ ಇತ್ತಾ? – ಖಡಕ್ ಉತ್ತರ ಕೊಟ್ಟ ದೀಪಿಕಾ

    ವಿಜಯಪ್ರಸಾದ್ ಸಿನಿಮಾ ಅಂದ್ರೆ ಕಾಮಿಡಿ ಕಚಗುಳಿಗೆ ಬರವಿಲ್ಲ, ನವರಸ ನಾಯಕ ಜಗ್ಗೇಶ್ ಇದ್ದ ಮೇಲೇ ನಗುವಿಗೆ ಬ್ರೇಕ್ ಇಲ್ಲ. ಈ ಎರಡು ಕಾಂಬಿನೇಶನ್ ನೀರ್ ದೋಸೆಯಲ್ಲಿ ಕೊಟ್ಟ ನಗುವಿನ ಟಾನಿಕ್ ಮತ್ತೊಮ್ಮೆ ಕೊಡಲು ಸಜ್ಜಾಗಿರುವ ಚಿತ್ರವೇ ‘ತೋತಾಪುರಿ’. ಫುಲ್ ಪ್ಯಾಕ್ಡ್ ಎಂಟಟೈನ್ಮೆಂಟ್ ನೀಡಲು ಟೀಂ ತೋತಾಪುರಿ ಸಜ್ಜಾಗಿದ್ದು ಡಾಲಿ ಧನಂಜಯ, ಸುಮನ್ ರಂಗನಾಥ್, ವೀಣಾ ಸುಂದರ್, ಹೇಮಾದತ್, ದತ್ತಣ್ಣ ಹೀಗೆ ಹಲವು ಸ್ಟಾರ್ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ: ‘ಅಮ್ಮನ ಮಡಿಲು ಸ್ವರ್ಗ’ – ಅಮ್ಮನ ಜೊತೆ ಫೋಟೋ ಶೇರ್ ಮಾಡಿದ ಸಲ್ಲು

    ಸ್ಯಾಂಡಲ್ ವುಡ್ ಪ್ಯಾಶನೇಟ್ ಪ್ರೊಡ್ಯುಸರ್ ಕೆ.ಎ. ಸುರೇಶ್ ಈ ಚಿತ್ರವನ್ನು ಮೋನಿಫ್ಲಿಕ್ಸ್ ಸುಡಿಯೋಸ್ ಹಾಗೂ ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್ಲ ಎರಡು ಸೀಕ್ವೆಲ್ ನಲ್ಲಿ ತೆರೆಗೆ ಬರಲು ರೆಡಿಯಾಗಿರುವ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.

  • ಪರಿಮಳ ಲಾಡ್ಜಿನತ್ತ ಹೊರಟ ಚಿರಯವ್ವನೆ ಸುಮನ್ ರಂಗನಾಥ್!

    ಪರಿಮಳ ಲಾಡ್ಜಿನತ್ತ ಹೊರಟ ಚಿರಯವ್ವನೆ ಸುಮನ್ ರಂಗನಾಥ್!

    ಬೆಂಗಳೂರು: ನೀನಾಸಂ ಸತೀಶ್ ಮತ್ತು ನೀರ್ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್ನಿನ ಚಿತ್ರದ ಬಗ್ಗೆ ನಿಖರ ಮಾಹಿತಿಗಳೇ ಹೊರ ಬಿದ್ದಿವೆ. ಆರಂಭದಲ್ಲಿ ಈ ಸಿನಿಮಾಗೆ ಗಣೇಶ ಮೆಡಿಕಲ್ಸ್ ಅನ್ನೋ ನಾಮಕರಣವಾಗಿತ್ತು. ಆದರೀಗ ಅದೇ ಟೀಮು ಜೊತೆ ಸೇರಿ ಪರಿಮಳ ಲಾಡ್ಜ್ ಅನ್ನೋ ಸಿನಿಮಾ ಶುರು ಮಾಡಿದೆ. ದೊಡ್ಡ ತಾರಾಗಣವಿರೋ ಈ ಚಿತ್ರದಲ್ಲಿ ನೀನಾಸಂ ಸತೀಶ್ ನಾಯಕನಾಗಿ ನಟಿಸಲಿದ್ದಾರೆ. ಸುಮನ್ ರಂಗನಾಥ್ ಕೂಡಾ ವಿಶೇಷ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ.

    ಈ ಹಿಂದೆ ಬ್ಯೂಟಿಫುಲ್ ಮನಸುಗಳು ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದ ಪ್ರಸನ್ನ ಪರಿಮಳ ಲಾಡ್ಜಿಗೆ ಹಣ ಹೂಡಿದ್ದಾರೆ. ವಿಜಯ ಪ್ರಸಾದ್ ಚಿತ್ರಗಳೆಂದ ಮೇಲೆ ವಾಸ್ತವಿಕ ವಿಚಾರಗಳನ್ನೇ ಲಘುವಾದ ಶೈಲಿಯಲ್ಲಿ ಹೇಳೋ ಮಸ್ತ್ ಆಗಿರೋ ಕಥೆ ಇರುತ್ತದೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ. ಪರಿಮಳ ಲಾಡ್ಜ್ ಕಥೆಯನ್ನಂತೂ ಇಂಥಾದ್ದೇ ಮಜವಾದ ಕಥಾ ಎಳೆಯೊಂದಿಗೆ ಅವರು ರೂಪಿಸಲು ಮುಂದಾಗಿದ್ದಾರೆ. ಇದರಲ್ಲಿನ ಮಹತ್ವದ ಪಾತ್ರವೊಂದರಲ್ಲಿ ಸುಮನ್ ರಂಗನಾಥ್ ನಟಿಸಿದ್ದಾರೆ.

    ಈ ಸಿನಿಮಾ ಮೂಲಕವೇ ವರ್ಷಾಂತರಗಳ ನಂತರ ಲೂಸ್ ಮಾದ ಯೋಗಿ ಮತ್ತು ವಿಜಯ ಪ್ರಸಾದ್ ಮತ್ತೆ ಒಂದಾಗಿದ್ದಾರೆ. ಯೋಗಿ ಕೂಡಾ ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಸದ್ಯಕ್ಕೆ ಇಷ್ಟು ಮಂದಿಯ ತಾರಾಗಣ ನಿಗದಿಯಾಗಿದೆ. ಸುಮನ್ ರಂಗನಾಥ್ ಕೂಡಾ ನಟಿಸೋದು ಪಕ್ಕಾ ಆಗಿದೆ. ಸುಮನ್ ಈ ಹಿಂದೆ ಸಿದ್ಲಿಂಗು, ನೀರ್ ದೋಸೆ ಮತ್ತು ತೋತಾಪುರಿ ಚಿತ್ರದಲ್ಲಿಯೂ ನಟಿಸಿದ್ದಾರೆ. ಇದೀಗ ಅವರು ಪರಿಮಳ ಲಾಡ್ಜ್ ಗೂ ಎಂಟ್ರಿ ಕೊಡಲಿದ್ದಾರೆ. ಇದು ವಿಜಯ ಪ್ರಸಾದ್ ಮತ್ತು ಸುಮನ್ ಕಾಂಬಿನೇಷನ್ನಿನ ನಾಲ್ಕನೇ ಚಿತ್ರವಾಗಿಯೂ ದಾಖಲಾಗುತ್ತದೆ.

  • 1050 ರೂ. ಕೊಟ್ಟು ಬಾಹುಬಲಿ ಚಿತ್ರ ವೀಕ್ಷಣೆ – ಸಿಎಂ ವಿರುದ್ಧ ವಿಜಯಪ್ರಸಾದ್ ಗರಂ

    1050 ರೂ. ಕೊಟ್ಟು ಬಾಹುಬಲಿ ಚಿತ್ರ ವೀಕ್ಷಣೆ – ಸಿಎಂ ವಿರುದ್ಧ ವಿಜಯಪ್ರಸಾದ್ ಗರಂ

    ಬೆಂಗಳೂರು: ದುಬೈ ಪ್ರವಾಸದಿಂದ ವಾಪಾಸ್ಸಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸಂಜೆ ಬಾಹುಬಲಿ-2 ಚಿತ್ರ ವೀಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಸ್ಯಾಂಡಲ್ ವುಡ್ ನಟ, ನಿರ್ದೇಶಕ ವಿಜಯಪ್ರಸಾದ್ ಅವರು ಸಿಎಂ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್ಬುಕ್‍ನಲ್ಲಿ ಗರಂ ಆಗಿ ಪೋಸ್ಟ್ ಹಾಕಿದ್ದಾರೆ.

    ಸಿಎಂ ವಿರುದ್ಧ ವಿಜಯಪ್ರಸಾದ್ ಹೇಳಿದ್ದೇನು?

    ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರೇ ನಮಸ್ಕಾರಗಳು, ನನ್ನ ಒಲವು ಮತ್ತು ಬೆಂಬಲ ಬಿಜೆಪಿಗೇ ಇದ್ದರೂ ನೀವು ಮುಖ್ಯಮಂತ್ರಿ ಆದಾಗ ಸಂತೋಷಪಟ್ಟಿದ್ದೆ ಜೊತೆಗೆ ಬಹಳಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದೆ. ಯಾಕೆಂದರೆ ನೀವು ಗ್ರಾಮೀಣ ಪ್ರದೇಶದಿಂದ ಬಂದಿರುವುದಲ್ಲದೇ, ಬದುಕನ್ನ ತುಂಬಾ ತಳಮಟ್ಟದಿಂದ ನೋಡಿರುವರು. ಹಾಗಾಗಿ ಬದುಕಿನ ಬವಣೆಗಳನ್ನ ಬಹಳ ಹತ್ತಿರದ ಜೊತೆಗೆ ಸ್ಷಷ್ಟವಾಗಿ ನೋಡಿರುವ ನಿಮ್ಮಿಂದ ಹೆಚ್ಚಿನದೇ ನಿರೀಕ್ಷೆ ಮಾಡಿದ್ದೆ. ಆದರೆ ಆಗಿದ್ದು ನಿರಾಸೆ ಮಾತ್ರ.

    ಇರಲಿ, ಈಗ ಮಲ್ಟಿಪ್ಲೆಕ್ಸ್ ಗಳಲ್ಲಿ ಚಲನಚಿತ್ರ ಪ್ರದರ್ಶನ ದರ 200/- ರೂ ನಿಗದಿ ಮಾಡಿ ಅದನ್ನ ಜಾರಿಗೆ ತರುವ ಬಗ್ಗೆ ಸರಿಯಾದ ಸ್ಪಷ್ಟತೆಯೂ ನೀಡದೆ ಈಗ ನೀವೇ 1050/- ರೂ ನೀಡಿ ಬಾಹುಬಲಿ 2 ಚಿತ್ರವನ್ನ ಮಲ್ಟಿಪ್ಲೇಕ್ಸ್ ನಲ್ಲಿ ಚಿತ್ರ ವೀಕ್ಷಣೆ ಮಾಡಿರುವ ಸುದ್ದಿ ಬಂದಿದೆ….!

    ನೀವು ಪರಭಾಷೆ ಚಿತ್ರ ನೋಡಿದಿರಿ ಎಂದು ಬೇಸರವಿಲ್ಲ, ಆದರೆ ಅದಕ್ಕೆ ನೀವು ಪಾವತಿಸಿರುವ ಟಿಕೆಟ್ ದರ ಹಾಗೆ ಮಲ್ಟಿಪ್ಲೆಕ್ಸ್ ದರದ ಬಗ್ಗೆ ಹೊರಡಿಸಿರುವ ಆದೇಶ ಜಾರಿಗೆ ಬರುವ ಮೊದಲೇ ಚಿತ್ರ ವೀಕ್ಷಣೆ ಮಾಡಿದ್ದು ತುಂಬಾ ನೋವಾಗಿದೆ.

    ಇದನ್ನೂ ಓದಿ: Exclusive 200 ರೂ. ಫಿಕ್ಸ್ ಮಾಡಿ 1050 ರೂ. ತೆತ್ತು ಬಾಹುಬಲಿ ವೀಕ್ಷಿಸಿದ ಸಿಎಂ: ವಿಡಿಯೋ ನೋಡಿ

    ಮೊದಲೇ ಕನ್ನಡ ಚಿತ್ರರಂಗ ಮತ್ತು ಕನ್ನಡ ಚಿತ್ರಗಳು ಎಂತಹ ಸ್ಥಿತಿಯಲ್ಲಿದೆಯೆಂದು ನಿಮಗೇ ತಿಳಿದಿದೆ. ಹೀಗಿರುವಾಗ ನೀವೇ ಹೀಗೆ ಮಾಡಿದರೆ ಹೇಗೆ?
    ಜನತೆಯ `ಕೈ’ ಹಿಡಿಯಬೇಕಾದ ನೀವೇ `ಕೈ’ ಬಿಟ್ಟರೆ ಹೇಗೆ?

    ಯಾಕೆ ಏನಾಗಿದೆ ನಿಮಗೆ? ಕನ್ನಡ ಮಣ್ಣಿನ, ಕನ್ನಡ ಚಿತ್ರರಂಗದ, ಕನ್ನಡಿಗರ ತೇಜೋವಧೆ, ಲೂಟಿತನ ಎಲ್ಲಾ ಕಡೆಯಿಂದಲೂ, ಎಲ್ಲರಿಂದಲೂ ಇನ್ನೆಷ್ಟು ಆಗಬೇಕು?

    ಎಲ್ಲಾ ಸಾಮಾರ್ಥ್ಯ ಇರುವ ನೀವು ಅರ್ಥಪೂರ್ಣ ಮತ್ತು ಖಡಕ್ ನಿರ್ಧಾರಗಳಿಂದ ಜನತೆಯ `ಕೈ’ ಹಿಡಿಯಿರಿ. ಇದೇ ನನ್ನ ಕೋರಿಕೆ. ಬೇಸರವಾಗಿದ್ದರೇ ಕ್ಷಮೆ ಇರಲಿ. ಪ್ರಮಾಣಿಕವಾಗಿ ನಾಡು ಕಟ್ಟಲು ಯಾವ ಪಕ್ಷವಾದರೇನು, ಯಾರಾದರೇನು ಅಲ್ಲವೇ ? ಇದೆಲ್ಲದರ ಮಧ್ಯೆ ನೀವು ಬಿಡುವು ಮಾಡಿಕೊಂಡು ಕನ್ನಡ ಚಲನಚಿತ್ರ `ನಿರುತ್ತರ’ ನೋಡಿರುವುದು ಮತ್ತು ಶ್ಲಾಘಿಸಿರುವುದು ನಿಜಕ್ಕೂ ಸ್ವಾಗತಾರ್ಹ.

    ನಿರುತ್ತರ ಚಿತ್ರವನ್ನು ವೀಕ್ಷಿಸಲು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕುಳಿತಿರುವ ಸಿಎಂ