Tag: ವಿಜಯಪುರ

  • ಭೀಮಾನದಿಯಲ್ಲಿ ಅಪರಿಚಿತ ಶವ ಪತ್ತೆ: ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಕಿತ್ತಾಡಿದ ವಿಜಯಪುರ-ಕಲಬುರಗಿ ಪೊಲೀಸರು

    ಭೀಮಾನದಿಯಲ್ಲಿ ಅಪರಿಚಿತ ಶವ ಪತ್ತೆ: ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಕಿತ್ತಾಡಿದ ವಿಜಯಪುರ-ಕಲಬುರಗಿ ಪೊಲೀಸರು

    ವಿಜಯಪುರ: ಭೀಮಾ ನದಿಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದ್ದು, ಶವ ಬಿದ್ದಿರುವ ಜಾಗದ ಗಡಿ ವಿಷಯವಾಗಿ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಯ ಪೊಲೀಸರ ನಡುವೆ ಇಂದು ಕಿತ್ತಾಟ ನಡೆದಿದೆ.

    ಇಂದು ಬೆಳಗ್ಗೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕಮಣೂರ ಮತ್ತು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹಿರೇ ಮಣೂರ ಗ್ರಾಮಗಳ ಮಧ್ಯೆಯಿರುವ ಸೇತುವೆ ಬಳಿ ಶವ ಪತ್ತೆಯಾಗಿತ್ತು. ಶವವನ್ನು ಕಂಡ ಎರಡು ಗ್ರಾಮಗಳ ಜನರು ಪೊಲೀಸರಿಗೆ ವಿಷಯ ತಿಳಿಸಿದ್ದರು.

    ಸ್ಥಳಕ್ಕೆ ಬಂದ ಇಂಡಿ ಮತ್ತು ಅಫಜಲಪುರ ಠಾಣೆಯ ಪೋಲಿಸರು ಶವ ಪತ್ತೆಯಾಗಿರುವ ಜಾಗ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ಸ್ಥಳದಿಂದ ಹಿಂದಿರುಗಿದ್ದರು. ಬೇಸಿಗೆ ದಿನದಲ್ಲಿ ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ನದಿ ತೀರದ ಜನ ಶವ ಹೊರತೆಗೆಯದಿದ್ರೆ ಇರುವ ಸ್ವಲ್ಪ ನೀರೂ ಮಲೀನವಾಗುತ್ತದೆ ಎಂದು ಪೊಲಿಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕೊನೆಗೆ ಇಂಡಿ ಠಾಣೆಯ ಸಿಪಿಐ ಚಂದ್ರಕಾಂತ ನಂದರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಶವವನ್ನು ನದಿಯಿಂದ ಹೊರ ತೆಗಯಲಾಗಿದೆ. ಈ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ವಿಜಯಪುರ: ಯುಗಾದಿ ಮರುದಿನ ದೇವಿಯ ಆರಾಧನೆ ಹೆಸರಲ್ಲಿ ನಡೆಯುತ್ತೆ ಮೊಲಗಳ ಮಾರಣಹೋಮ

    ವಿಜಯಪುರ: ಯುಗಾದಿ ಮರುದಿನ ದೇವಿಯ ಆರಾಧನೆ ಹೆಸರಲ್ಲಿ ನಡೆಯುತ್ತೆ ಮೊಲಗಳ ಮಾರಣಹೋಮ

    ವಿಜಯಪುರ: ನಗರದ ಜೋರಾಪುರ ಪೇಟ್ ನಲ್ಲಿರುವ ಗೋಂಧಳಿ ಗಲ್ಲಿಯ ದುರ್ಗಾ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಮರುದಿನ ದೇವಿಯ ಆರಾಧನೆ ಹೆಸರಲ್ಲಿ ಮುಗ್ದ ಮೊಲಗಳ ಮಾರಣಹೋಮ ನಡೆಯುತ್ತದೆ.

    ಯುಗಾದಿ ಹಬ್ಬದ ದಿನದಂದು ದೇವಸ್ಥಾನಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಗೆಳೆಯರು ಮತ್ತು ಸಂಬಂಧಿಕರೊಂದಿಗೆ ಬೇವು-ಬೆಲ್ಲ ವಿನಿಮಯ ಮಾಡುವುದು ಹಬ್ಬದ ವಿಶೇಷತೆ. ಆದ್ರೆ ವಿಜಯಪುರದಲ್ಲಿ ಯುಗಾದಿ ಮರುದಿನ ಬೇಟೆಗೆ ಪ್ರಸಿದ್ಧವಾದ ಮುಧೋಳ ನಾಯಿಗಳೊಂದಿಗೆ ದೂರದ ಊರುಗಳಿಂದ ಭಕ್ತರು ಬರುತ್ತಾರೆ. ಸಂಜೆ ವೇಳೆಗೆ ನಾಯಿಗಳೊಂದಿಗೆ ಬೇಟೆಗೆ ತೆರಳುವ ಭಕ್ತರು ನೂರಾರು ಮೊಲ ಮತ್ತು ಕಾಡು ಮಿಕಗಳನ್ನು ಸೆರೆ ಹಿಡಿದು ತರುತ್ತಾರೆ.

    ಬೇಟೆಯಾಡಿ ತರುವ ಮೊಲಗಳನ್ನ ದೇವಿಯ ಹೆಸರಲ್ಲಿ ಬಲಿ ಕೊಡುತ್ತಾರೆ. ಈ ಪ್ರಾಣಿಗಳ ಮಾರಣಹೋಮ ಮಾಡಿದ ನಂತರ ದೇವಸ್ಥಾನದ ಆವರಣದಲ್ಲಿ ಅಡುಗೆ ತಯಾರಿಸಿ ತಿನ್ನುತ್ತಾರೆ. ಈ ಪದ್ಧತಿ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದು, ಪೊಲೀಸರು ಇದಕ್ಕೆ ಯಾವುದೇ ಕಡಿವಾಣ ಹಾಕಿಲ್ಲ. ಈ ದೇವಸ್ಥಾನ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮತ್ತು ಪೊಲೀಸ್ ಹೆಡ್ ಕ್ವಾಟರ್ಸ್‍ಗೆ ಕೂಗಳತೆಯ ದೂರದಲ್ಲಿದೆ.

     

  • ವಿಜಯಪುರ: ಸರ್ಕಾರಿ ಶಾಲೆಯಾದ್ರೂ ಹೈಟೆಕ್ ಶಿಕ್ಷಣ- ಬೇಸಿಗೆಯಲ್ಲೂ ಶಾಲೆಗೆ ಹಸಿರ ಹೊದಿಕೆ

    ವಿಜಯಪುರ: ಸರ್ಕಾರಿ ಶಾಲೆಯಾದ್ರೂ ಹೈಟೆಕ್ ಶಿಕ್ಷಣ- ಬೇಸಿಗೆಯಲ್ಲೂ ಶಾಲೆಗೆ ಹಸಿರ ಹೊದಿಕೆ

    ವಿಜಯಪುರ: ಸರ್ಕಾರಿ ಶಾಲೆ ಅಂದ್ರೆ ಹೀಗಿರ್ಬೇಕಪ್ಪಾ ಎನ್ನುವಂತಿದೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸ್ಟೋರಿ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುಳವಾಡದ ಈ ಶಾಲೆಯಲ್ಲಿ ಏನಿಲ್ಲ ಅಂತ ಹುಡುಕಬೇಕು. ಅಷ್ಟರ ಮಟ್ಟಿಗೆ ಈ ಶಾಲೆ ಎಲ್ಲಾ ವಿಧವಾದ ಸೌಲಭ್ಯಗಳನ್ನು ಪಡೆದಿದೆ.

    ಮುಳವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಸಿಗೆಯಲ್ಲೂ ಹಸಿರ ಹೊದಿಕೆ ಹೊದ್ದಿದೆ. ಇಲ್ಲಿ ಯಾವುದೇ ಖಾಸಗಿ ಶಾಲೆಗೂ ಕಡಿಮೆಯಿಲ್ಲದಂತೆ ಹೈಟೆಕ್ ಶಿಕ್ಷಣ ಕೊಡಲಾಗ್ತಿದೆ. ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ, ಹೈಟೆಕ್ ಶೌಚಾಲಯ ವ್ಯವಸ್ಥೆಯೂ ಈ ಶಾಲೆಯಲ್ಲಿದೆ.

    ಶಾಲೆಯ ಮೈದಾನದಲ್ಲಿ ವಿದ್ಯಾರ್ಥಿಗಳ ಸಹಕಾರದೊಂದಿಗೆ 112 ವಿವಿಧ ಗಿಡಗಳನ್ನು ಬೆಳಯಲಾಗಿದೆ. ಅಲ್ಲದೆ ಚಿಕ್ಕತೋಟದಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಅಗತ್ಯ ಸೊಪ್ಪು ತರಕಾರಿ ಬೆಳೆಯಲಾಗಿದೆ. ಜೊತೆಗೆ ಹೂವನ್ನೂ ಬೆಳೆಯಲಾಗಿದೆ. ಇದ್ರಿಂದ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಆರೋಗ್ಯ ವರ್ಧಿಸೋ ವಾತಾವರಣ ನಿರ್ಮಾಣವಾಗಿದೆ.

    ಇದೆಲ್ಲದಕ್ಕೂ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಲಕ್ಷ್ಮಣ ಹಾಗೂ ಶಿಕ್ಷಕರ ಪ್ರೋತ್ಸಾಹವೇ ಕಾರಣ ಅಂತ ವಿದ್ಯಾರ್ಥಿಗಳು ಹೇಳುತ್ತಾರೆ.

    https://www.youtube.com/watch?v=tnaQJ9vMD60

     

     

     

  • ವಿಜಯಪುರದ ಭೀಮಾ ನದಿ ನೀರಿಗೆ ಮಹಾರಾಷ್ಟ್ರ ಜನರ ಕಣ್ಣು!

    ವಿಜಯಪುರದ ಭೀಮಾ ನದಿ ನೀರಿಗೆ ಮಹಾರಾಷ್ಟ್ರ ಜನರ ಕಣ್ಣು!

    ವಿಜಯಪುರ: ಒಂದೆಲ್ಲೊಂದು ವಿಷಯಕ್ಕೆ ಮಹಾರಾಷ್ಟ್ರ ಸರಕಾರ ಮತ್ತು ಜನರು ಕರ್ನಾಟಕದೊಂದಿಗೆ ಕ್ಯಾತೆ ತಗಿತಾನೇ ಇರುತ್ತಾರೆ. ಈಗ ವಿಜಯಪುರದ ಭೀಮಾ ನದಿ ನೀರಿಗೆ ಮಹಾರಾಷ್ಟ್ರದ ಜನರು ದುಂಬಾಲು ಬಿದ್ದಿದ್ದಾರೆ.

    ಮಂಗಳವಾರ ತಡರಾತ್ರಿ ಜಿಲ್ಲೆಯ ಇಂಡಿ ತಾಲೂಕಿನ ಉಮರಾಣಿ ಗ್ರಾಮ ಬಳಿಯ ಭೀಮಾನದಿಯ ಬ್ಯಾರೇಜ್ ನ 18 ಗೇಟ್‍ಗಳನ್ನು ಮಹಾರಾಷ್ಟ್ರ ರೈತರು ಕಿತ್ತು ಹಾಕಿದ್ದಾರೆ. ಉಮರೇಜ್ ಬ್ಯಾರೇಜ್‍ನ ಗೇಟ್ ಗಳನ್ನು ತಗೆಯಲು ಯತ್ನಿಸಿದಾಗ ಚಡಚಣ ಪೋಲಿಸರು ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಈ ಕೃತ್ಯವನ್ನು ಮಹಾರಾಷ್ಟ್ರದ ಚನೇಗಾಂವ್ ಬಳಿಯ ಬರೂರು ಗ್ರಾಮದ ರೈತರು ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಗೇಟ್ ಕಿತ್ತಾಕಿದ 30 ಜನರನ್ನು ಚಡಚಣ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

    ಮಹಾರಾಷ್ಟ್ರ ರೈತರ ಈ ಕೃತ್ಯವನ್ನು ವಿಜಯಪುರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಂಚಪ್ಪ ಕಲಬುರ್ಗಿ ಖಂಡಿಸಿದ್ದು, ಈ ಘಟನೆಗೆ ರಾಜ್ಯ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ. ಅಲ್ಲದೆ ಕೂಡಲೆ ನಮ್ಮ ಬ್ಯಾರೇಜ್ ಗಳಿಗೆ ಪೋಲಿಸ್ ಭದ್ರತೆ ಒದಗಿಸಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ.

  • ಡಿವೈಡರ್‍ಗೆ ಡಿಕ್ಕಿ ಹೊಡೆದು ಲಾರಿಗೆ ಬೆಂಕಿ- ಇಬ್ಬರ ಸಜೀವ ದಹನ

    ಡಿವೈಡರ್‍ಗೆ ಡಿಕ್ಕಿ ಹೊಡೆದು ಲಾರಿಗೆ ಬೆಂಕಿ- ಇಬ್ಬರ ಸಜೀವ ದಹನ

    ವಿಜಯಪುರ: ರಾಷ್ಟ್ರೀಯ ಹೆದ್ದಾರಿಯ ರಸ್ತೆ ಡಿವೈಡರ್ ಗೆ ಲಾರಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಲಾರಿ ಚಾಲಕ ಮತ್ತು ಕ್ಲೀನರ್ ಸಜೀವ ದಹನವಾದ ಘಟನೆ ವಿಜಯಪುರದಲ್ಲಿ ನಡೆದಿದೆ.

    ಕಬ್ಬಿಣ ತುಂಬಿದ ಲಾರಿ ಮಹಾರಾಷ್ಟ್ರದಿಂದ ವಿಜಯಪುರ ಮಾರ್ಗವಾಗಿ ತೆರಳುವಾಗ ವಿಜಯಪುರದ ಹಿಟ್ನಳ್ಳಿ ಗ್ರಾಮದ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 50 ರ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಲಾರಿ ಡಿವೈಡರ್‍ಗೆ ಗುದ್ದಿದ ರಭಸಕ್ಕೆ ಲಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಲಾರಿ ಚಾಲಕ ಮತ್ತು ಕ್ಲೀನರ್ ಇಬ್ಬರು ಸಜೀವ ದಹನವಾಗಿದ್ದಾರೆ. ಆದ್ರೆ ಮೃತಪಟ್ಟವರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

    ಲಾರಿ ಸಂಪೂರ್ಣ ಸುಟ್ಟು ಹೋಗಿದ್ದು, ಗ್ರಾಮೀಣ ಪೊಲಿಸರು ಪ್ರಕರಣ ದಾಖಲಿಸಿಕೊಂಡು ಲಾರಿ ತೆರವು ಕಾರ್ಯಾಚರಣೆ ಮುಂದುವರೆಸಿದ್ದಾರೆ.

    https://www.youtube.com/watch?v=K-blT7Qhn5E&feature=youtu.be

  • ವಿಜಯಪುರ: ಕುಡಿದ ಮತ್ತಿನಲ್ಲಿ ಗನ್ ಹಿಡಿದು ಓಡಾಡಿದ ಮಾಜಿ ಸೈನಿಕ

    ವಿಜಯಪುರ: ಕುಡಿದ ಮತ್ತಿನಲ್ಲಿ ಗನ್ ಹಿಡಿದು ಓಡಾಡಿದ ಮಾಜಿ ಸೈನಿಕ

    ವಿಜಯಪುರ: ನಗರದ ಜಲನಗರ ಎಂಬಲ್ಲಿ ಮಾಜಿ ಸೈನಿಕರೊಬ್ಬರು ಕುಡಿದ ಅಮಲಿನಲ್ಲಿ ಪಿಸ್ತೂಲ್ ಹಿಡಿದು ಗುರುವಾರ ರಾತ್ರಿ ನಗರದ ತುಂಬಾ ಓಡಾಡಿದ್ದಾರೆ.

    ರಾಜು ಹಡಗಲಿ ಗನ್ ಹಿಡಿದು ಓಡಾಡಿದ ಮಾಜಿ ಸೈನಿಕ. ರಾಜು ಗನ್ ಹಿಡಿದು ತಿರುಗಾಡಿದ್ದರಿಂದ ನಗರದಲ್ಲಿ ಕೆಲಕಾಲ ಭಯದ ವಾತಾವರಣ ಸೃಷ್ಟಿಯಾಗಿತ್ತು. ಗುರುವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಕೈಯಲ್ಲಿ ಪಿಸ್ತೂಲ್ ಹಿಡಿದು ಎಲ್ಲರನ್ನು ಹೆದರಿಸುತ್ತಾ ತಿರುಗಾಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರಾಜು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದರಿಂದ ಭಯಭೀತರಾದ ರಸ್ತೆ ಬದಿ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಸ್ಥಳದಿಂದ ಓಡಿ ಹೋಗಿದ್ದಾರೆ.

    ರಾಜು ಸುಮಾರು 1 ಗಂಟೆಗೂ ಹೆಚ್ಚು ಕಾಲ ಗನ್ ಹಿಡಿದು ರಸ್ತೆಯುದ್ದಕ್ಕೂ ಕೂಗಾಡುತ್ತಾ ರಸ್ತೆಯಲ್ಲಿ ಸಿಕ್ಕವರಿಗೆಲ್ಲಾ ಗನ್ ತೋರಿಸುತ್ತಾ ಓಡಾಡಿ ಬಳಿಕ ಮನೆಗೆ ತೆರಳಿದ್ದಾರೆ. ವಿಷಯ ತಿಳಿದ ಜಲನಗರ ಪೊಲೀಸರು ರಾಜು ಮನೆಗೆ ತೆರಳಿ ಅವರನ್ನು ವಶಕ್ಕೆ ಪಡದು ವಿಚಾರಣೆ ನಡೆಸಿದ್ದಾರೆ.

     

  • ವಿಜಯಪುರ: ಬಾವಿಗೆ ಈಜಲು ಹೋದವ ಶವವಾಗಿ ಬಂದ

    ವಿಜಯಪುರ: ಬಾವಿಗೆ ಈಜಲು ಹೋದವ ಶವವಾಗಿ ಬಂದ

    ವಿಜಯಪುರ: ಬಾವಿಗೆ ಈಜಲು ಹೋಗಿದ್ದ ಬಾಲಕನೊಬ್ಬ ಮನೆಗೆ ಶವವಾಗಿ ಮನೆಗೆ ಹಿಂದಿರುಗಿದ ಘಟನೆ ವಿಜಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕದರಗುಂಡ ಗ್ರಾಮದಲ್ಲಿ ನಡೆದಿದೆ.

    ಫೈಜಲ್ (14) ಮೃತಪಟ್ಟ ಬಾಲಕ. ಫೈಜಲ್ ಇಂದು ಬೆಳಿಗ್ಗೆ ಗ್ರಾಮದ ಹೊರವಲಯದ ಬಾವಿಯಲ್ಲಿ ತನ್ನ ಗೆಳಯರೊಂದಿಗೆ ಈಜಲು ಹೋಗಿದ್ದಾನೆ. ಸುಮಾರು ಒಂದು ಗಂಟೆಗಳ ಕಾಲ ಎಲ್ಲರೂ ಬಾವಿಯಲ್ಲಿ ಈಜಲು ಹೋಗಿದ್ದಾರೆ. ಕೊನೆಗೆ ಫೈಜಲ್ ಹೊರಗೆ ಬರಲಾರದೇ ಸಾವನ್ನಪ್ಪಿದ್ದಾನೆ. ಬಾವಿಯಲ್ಲಿನ ಕೆಸರಿನಲ್ಲಿ ಸಿಕ್ಕಿದ್ದರಿಂದ ಮೇಲೆ ಬರಲಾರದೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

    ಈಜಲು ಹೋದ ಮಗ ಶವವಾಗಿ ಬಂದಿದ್ದರಿಂದ ಫೈಜಲ್ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಸ್ಥಳಕ್ಕೆ ಕಲಕೇರಿ ಠಾಣೆಯ ಪೊಲೀಸರು ಅಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

     

  • ವಿಜಯಪುರ ಜಿಲ್ಲಾಸ್ಪತ್ರೆಯನ್ನು ರಾಜ್ಯದ ನಂಬರ್ 1 ಆಸ್ಪತ್ರೆಯನ್ನಾಗಿಸಿದ್ರು ಈ ಸರ್ಜನ್!

    ವಿಜಯಪುರ ಜಿಲ್ಲಾಸ್ಪತ್ರೆಯನ್ನು ರಾಜ್ಯದ ನಂಬರ್ 1 ಆಸ್ಪತ್ರೆಯನ್ನಾಗಿಸಿದ್ರು ಈ ಸರ್ಜನ್!

    ವಿಜಯಪುರ: ಸರ್ಕಾರಿ ಆಸ್ಪತ್ರೆ ಅಂತಂದ್ರೆ ಮೂಗು ಮುರಿಯೋರೇ ಜಾಸ್ತಿ ಅನ್ನೋ ಮಾತನ್ನು ನಾವು ಹಲವು ಬಾರಿ ಕೇಳಿದ್ದೀವಿ. ಆದ್ರೆ, ವಿಜಯಪುರ ಜಿಲ್ಲಾಸ್ಪತ್ರೆಯ ಸರ್ಜನ್ ಅನಂತ ದೇಸಾಯಿ ಅವ್ರು ಆಸ್ಪತ್ರೆಯ ಚಿತ್ರಣವನ್ನೇ ಬದಲಿಸಿ, ರಾಜ್ಯದ ನಂಬರ್ 1 ಆಸ್ಪತ್ರೆಯನ್ನಾಗಿಸಿದ್ದಾರೆ.

    ಹೌದು. ವಿಜಯಪುರದ ಜಿಲ್ಲಾ ಆಸ್ಪತ್ರೆಗೆ ಕಳೆದ ಎರಡು ವರ್ಷಗಳ ಹಿಂದೆ ರೋಗಿಗಳು ಬರೋದಕ್ಕೆ ಹಿಂಜರಿತಿದ್ರು. ಆದ್ರೆ ಇದೀಗ ಈ ಜಿಲ್ಲಾಸ್ಪತ್ರೆ ರಾಜ್ಯದಲ್ಲೇ ಪ್ರಥಮ ಸ್ವಚ್ಛತಾ ಆಸ್ಪತ್ರೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

    2015 ಅಕ್ಟೋಬರ್‍ನಲ್ಲಿ ಆಸ್ಪತ್ರೆಗೆ ಬಂದ ಅನಂತ ದೇಸಾಯಿ ಆಸ್ಪತ್ರೆಯಲ್ಲಿ ಸಾಕಷ್ಟು ಸಿಬ್ಬಂದಿ ಕೊರತೆ ಇದ್ದರೂ ಎಲ್ಲರನ್ನು ಒಗ್ಗೂಡಿಸಿ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ನೀಡುವ ಮೂಲಕ ಇಡೀ ಆಸ್ಪತ್ರೆಯ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಹೀಗಾಗಿ ಆಸ್ಪತ್ರೆಯ ಸ್ವಚ್ಛತೆಗೆ ಕೇಂದ್ರ ಆರೋಗ್ಯ ಇಲಾಖೆ ರಾಜ್ಯದ ನಂ.1 ಸ್ವಚ್ಛ ಆಸ್ಪತ್ರೆ ಅಂತಾ 2015-16 ಹಾಗೂ 2016-17 ಸಾಲಿನಲ್ಲಿ ಸತತವಾಗಿ ಕಾಯಕಲ್ಪ ಪ್ರಶಸ್ತಿ ನೀಡಿ ಗೌರವಿಸಿದೆ. ಮಾತ್ರವಲ್ಲದೇ ಈಗ ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛತೆ ಹಾಗೂ ಸಿಬ್ಬಂದಿ ಬಗ್ಗೆ ಜನ ಹೊಗಳ್ತಿದ್ದಾರೆ.

    ಸರ್ಕಾರದ ಎಲ್ಲ ಸೌಲಭ್ಯಗಳನ್ನು ರೋಗಿಗಳಿಗೆ ತಲುಪುವಂತೆ ಮಾಡಲಾಗ್ತಿದೆ. ಅಲ್ಲದೆ, ಸರ್ಜನ್ ದೇಸಾಯಿ ಅವರ ಕಾರ್ಯ ಇತರಿಗೂ ಮಾದರಿಯಾಗಲಿ ಅಂತಾ ಬಾಣಂತಿ ಶಿವಲೀಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=LxqLz5CF02s

  • ವಿಜಯಪುರ ಪಾಲಿಕೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಬೇಕಿದೆ ಬೆಳಕು

    ವಿಜಯಪುರ ಪಾಲಿಕೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ ಬೇಕಿದೆ ಬೆಳಕು

    ವಿಜಯಪುರ: ಕಟ್ಟಡ ಕಾರ್ಮಿಕರಾಗಿದ್ದ ಇಲ್ಲಿನ ಶಿಕಾರಿಖಾನೆ ನಿವಾಸಿಯಾಗಿರೋ ಚಂದ್ರಕಾಂತ ದೊಡ್ಡಮನಿ 2 ವರ್ಷಗಳ ಹಿಂದೆ ಎಂದಿನಂತೆ ಕೂಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಮಹಾನಗರ ಪಾಲಿಕೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮುಚ್ಚದೆ ಬಿಟ್ಟಿದ್ದ ಗಟಾರಕ್ಕೆ ಬಿದ್ದಿದ್ದಾರೆ. ಆದರೆ ಈ ಗಟಾರಕ್ಕೆ ಒಳಚರಂಡಿಯ ಸಂಪರ್ಕವು ಇದ್ದು ಸಾಕಷ್ಟು ಹೂಳು ತುಂಬಿದ್ದ ಕಾರಣ ಚಂದ್ರಕಾಂತಗೆ ಮೇಲ್ಗಡೆ ಬರಲಾಗದೆ ಅಲ್ಲೆ ಸಾವನ್ನಪ್ಪಿದ್ದಾರೆ. ಮನೆಯ ಆಧಾರ ಸ್ತಂಭವಾಗಿದ್ದ ಚಂದ್ರಕಾಂತನ ಸಾವಿನಿಂದ ಕುಟುಂಬಸ್ಥರು ಬೀದಿ ಪಾಲಾಗಿದ್ದಾರೆ.

    ಮಹಾನಗರ ಪಾಲಿಕೆಯ ಅಚಾತುರ್ಯಕ್ಕೆ ಇದೀಗ ಅಮಾಯಕ ಕೂಲಿ ಕಾರ್ಮಿಕನ ಕುಟುಂಬ ಬೀದಿಗೆ ಬಂದಿದೆ. ಚಂದ್ರಕಾಂತ್‍ಗೆ ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿದ್ದು, ಅದರಲ್ಲಿ ಒರ್ವ ಹೆಣ್ಣು ಮಗಳ ಮದುವೆಯಾಗಿದೆ. ಇನ್ನು ಜೀವನ ನಿರ್ವಹಣೆಗಾಗಿ ಚಂದ್ರಕಾಂತ ಹೆಂಡತಿ ನಿಂಗವ್ವ, ಮಗ ಸಂತೋಷ ಮತ್ತು ಮಗಳು ಬೋರಮ್ಮ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.

    ನಗರದಲ್ಲಿ ಜೀವನ ನಿರ್ವಹಣೆ ಹೆಚ್ಚಾಗಿದ್ದರಿಂದ ಚಂದ್ರಕಾಂತ ಕುಟುಂಬ ಜಿಲ್ಲೆಯ ಇಂಡಿ ತಾಲೂಕಿನ ತದ್ದೆವಾಡ ಗ್ರಾಮದಲ್ಲಿ ನೆಲೆಸಿದ್ದಾರೆ. ಇನ್ನು ಮಗಳು ಬೋರಮ್ಮಗೆ ಮದುವೆ ವಯಸ್ಸಾಗಿದ್ದು, ಮದುವೆ ಮಾಡಲು ನಿಂಗವ್ವ ಪರದಾಡುತ್ತಿದ್ದಾರೆ. ಚಂದ್ರಕಾಂತರ ಹಠಾತ್ ಸಾವಿನಿಂದ ಮಗ ಸಂತೋಷ ಜೀವನ ನಿರ್ವಹಣೆಗಾಗಿ ಅರ್ಧಕ್ಕೆ ಶಾಲೆ ಬಿಟ್ಟು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ.

    ಮಹಾನಗರ ಪಾಲಿಕೆಯ ಅಚಾತುರ್ಯಕ್ಕೆ ಚಂದ್ರಕಾಂತ ಕುಟುಂಬ ಬೀದಿಗೆ ಬಿದ್ದಿದ್ದು, ಇವರಿಗೆ ಕಾರ್ಮಿಕ ಇಲಾಖೆಯಿಂದಾಗಲಿ ಅಥವಾ ಮಹಾನಗರ ಪಾಲಿಕೆಯಿಂದಾಗಲಿ ಯಾವುದೆ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಬೆಳಕು ಕಾರ್ಯಕ್ರಮದಿಂದಾದರು ಈ ಕುಟುಂಬಕ್ಕೆ ಬೆಳಕಾಗಲಿ ಅನ್ನೋದು ನಮ್ಮ ಆಶಯ.

    https://www.youtube.com/watch?v=mhsYqpA34nI

  • ವೀಡಿಯೋ: 2 ಬೈಕ್ ಮುಖಾಮುಖಿ ಡಿಕ್ಕಿ- ಓರ್ವ ಸವಾರ ಸಜೀವ ದಹನ!

    ವಿಜಯಪುರ: ಎರಡು ಬೈಕ್‍ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ರಸ್ತೆ ಮಧ್ಯದಲ್ಲೆ ಬೈಕ್ ಸವಾರ ಸಜೀವ ದಹನವಾದ ಘಟನೆ ವಿಜಯಪುರ ತಾಲೂಕಿನ ಅರಕೇರಿ ತಾಂಡಾ ಬಳಿ ನಡೆದಿದೆ.

    ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, 50 ವರ್ಷದ ರಮೇಶ ಸಿದ್ದಪ್ಪ ಕಾಂಬಳೆ ಎಂಬ ಬೈಕ್ ಸವಾರ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಇನ್ನೊರ್ವ ಬೈಕ್ ಸವಾರ ಪ್ರಕಾಶ ಚವ್ಹಾಣ ಕಾಲಿಗೆ ಬೆಂಕಿ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

    ರಮೇಶ್ ಬೈಕ್‍ನಲ್ಲಿ ಸೀಮೆಎಣ್ಣೆ ತುಂಬಿದ ಡಬ್ಬಿ ಇಟ್ಟಕೊಂಡಿದ್ರು. ಇದ್ರಿಂದ ಅಪಘಾತದ ವೇಳೆ ಸೀಮೆಎಣ್ಣೆಗೆ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿದೆ.

    https://www.youtube.com/watch?v=umDpZG14lsE&feature=youtu.be