Tag: ವಿಕ್ರಾಂತ್ ಮಾಸ್ಸಿ

  • ನಟನೆಗೆ ನಿವೃತ್ತಿ ಘೋಷಿಸಿ ಫ್ಯಾನ್ಸ್‌ಗೆ ಶಾಕಿಂಗ್‌ ನ್ಯೂಸ್‌ ಕೊಟ್ಟ ವಿಕ್ರಾಂತ್‌ ಮಾಸ್ಸಿ

    ನಟನೆಗೆ ನಿವೃತ್ತಿ ಘೋಷಿಸಿ ಫ್ಯಾನ್ಸ್‌ಗೆ ಶಾಕಿಂಗ್‌ ನ್ಯೂಸ್‌ ಕೊಟ್ಟ ವಿಕ್ರಾಂತ್‌ ಮಾಸ್ಸಿ

    ಬಾಲಿವುಡ್ ನಟ ವಿಕ್ರಾಂತ್ ಮಾಸ್ಸಿ (Vikrant Massey) ಅವರು ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್‌ವೊಂದನ್ನು ಕೊಟ್ಟಿದ್ದಾರೆ. ದೊಡ್ಡ ಯಶಸ್ಸಿನ ಬೆನ್ನಲ್ಲೇ ನಟನೆಗೆ ವಿಕ್ರಾಂತ್ ನಿವೃತ್ತಿ ಘೋಷಿಸಿದ್ದಾರೆ. ಇನ್ಮುಂದೆ ತಾವು ಸಿನಿಮಾದಲ್ಲಿ ನಟಿಸಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಆರೋಪಿ ದರ್ಶನ್‌ಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ – ಫೋಟೋ ವೈರಲ್‌

    ಕಳೆದ ಕೆಲ ವರ್ಷಗಳು ಉತ್ತಮವಾಗಿತ್ತು. ನಿಮ್ಮ ನಿರಂತರವಾಗಿ ಬೆಂಬಲ ನೀಡಿದ್ದಕ್ಕೆ ನಾನು ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಆದರೆ ನಾನು ಮುಂದೆ ಬಂದಂತೆಲ್ಲ ಮಗನಾಗಿ, ಗಂಡನಾಗಿ, ತಂದೆಯಾಗಿ ಮನೆಗೆ ವಾಪಸ್ ಆಗಲು ಇದು ಸೂಕ್ತ ಸಮಯ ಎಂದು ನಾನು ಅರಿತುಕೊಂಡೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Vikrant Massey (@vikrantmassey)

    2025ರಲ್ಲಿ ನಾವು ಕೊನೆಯ ಬಾರಿಗೆ ಪರಸ್ಪರ ಸಿಗೋಣ. ಮುಂದೆ 2 ಸಿನಿಮಾಗಳು ಮಾತ್ರ ಮತ್ತು ಹಲವು ವರ್ಷಗಳ ನೆನಪುಗಳು. ಮತ್ತೊಮ್ಮೆ ಧನ್ಯವಾದಗಳು. ನಾನು ನಿಮಗೆ ಎಂದೆಂದಿಗೂ ಋಣಿ ಎಂದು ನಟ ಬರೆದುಕೊಂಡಿದ್ದಾರೆ. ವಿಕ್ರಾಂತ್ ನಟನೆಗೆ ಗುಡ್ ಬೈ ಹೇಳುತ್ತಿರೋದು ಫ್ಯಾನ್ಸ್ಗೆ ಶಾಕ್ ಆಗಿದೆ. ನಾವು ನಿಮ್ಮ ಅಭಿಮಾನಿ, ಇನ್ಮುಂದೆಯೂ ನಿಮ್ಮ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತೇವೆ ಎಂದು ಪರಿಪರಿಯಾಗಿ ಫ್ಯಾನ್ಸ್ ಕೇಳಿಕೊಂಡಿದ್ದಾರೆ.

    ಅಂದಹಾಗೆ, 2013ರ ರಣ್‌ವೀರ್ ಸಿಂಗ್, ಸೋನಾಕ್ಷಿ ನಟನೆಯ ‘ಲೂಟೆರಾ’ ಸಿನಿಮಾ ಮೂಲಕ ವಿಕ್ರಾಂತ್ ಮಾಸ್ಸಿ ಬಣ್ಣದ ಬದುಕು ಶುರುವಾಯ್ತು. ವಿಕ್ರಾಂತ್‌ ನಟನೆಯ 12th ಫೈಲ್, ದಿ ಸಾಬ್ರಮತಿ ರಿಪೋರ್ಟ್ ಸಿನಿಮಾಗಳು ಸಕ್ಸಸ್‌ ಕಂಡಿದೆ.

  • ದಿ ಸಾಬರಮತಿ ರಿಪೋರ್ಟ್ ಟ್ರೈಲರ್ ರಿಲೀಸ್: ಚರ್ಚೆಗೆ ಕಾರಣವಾಯಿತು ಮತ್ತೊಂದು ಚಿತ್ರ

    ದಿ ಸಾಬರಮತಿ ರಿಪೋರ್ಟ್ ಟ್ರೈಲರ್ ರಿಲೀಸ್: ಚರ್ಚೆಗೆ ಕಾರಣವಾಯಿತು ಮತ್ತೊಂದು ಚಿತ್ರ

    ಳೆದ ವಾರವಷ್ಟೇ ‘ಆರ್ಟಿಕಲ್ 370’ ಸಿನಿಮಾ ರಿಲೀಸ್ ಆಗಿ ವಿವಾದವೊಂದರ ಕಥೆಯನ್ನು ಹೇಳಲಾಗಿತ್ತು. ಇದೀಗ ಮತ್ತೊಂದು ಅಂಥದ್ದೇ ವಿವಾದಿತ ವಿಷಯವೊಂದನ್ನು ಹೊತ್ತ ಸಿನಿಮಾ ರೆಡಿಯಾಗಿದೆ. ಈ  ಚಿತ್ರಕ್ಕೆ ‘ದಿ ಸಾಬರಮತಿ ರಿಪೋರ್ಟ್’ (The Sabarmati Report) ಎಂದು ಹೆಸರಿಡಲಾಗಿದೆ.

    2002ರ ಫೆಬ್ರವರಿ 27 ರಂದು ನಡೆದ ಗೋಧ್ರಾ ರೈಲು ದುರಂತವನ್ನು ಆಧರಿಸಿ ಈ ಸಿನಿಮಾ ಮೂಡಿ ಬಂದಿದ್ದು, ಈ ದುರಂತದಲ್ಲಿ 59 ಜನರ ಸಜೀವ ದಹನವಾಗಿತ್ತು. ಅದರ ಹಿಂದಿನ ಕರಾಳ ಮುಖವನ್ನು ತೋರಿಸುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡಲಾಗಿದೆಯಂತೆ. ಈಗಾಗಲೇ ಚಿತ್ರದ ಟ್ರೈಲರ್ (Trailer) ರಿಲೀಸ್ ಆಗಿದ್ದು, ಪರ ವಿರೋಧದ ಕಾಮೆಂಟ್ ಗಳು ಕೇಳಿ ಬಂದಿವೆ.

     

    ರಂಜನ್ ಚಂಡೇಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ವಿಕ್ರಾಂತ್ ಮಾಸ್ಸಿ (Vikrant Massey) ಚಿತ್ರದ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಇಲ್ಲಿ ಅವರದ್ದು ಪತ್ರಕರ್ತ ಹಾಗೂ ಸುದ್ದಿ ವಾಚನ ಮಾಡುವ ಪಾತ್ರ. ಟ್ರೈಲರ್ ನಲ್ಲೂ ಅದನ್ನು ಸ್ಪಷ್ಟವಾಗಿಯೇ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಸಾಕಷ್ಟು ಸೂಕ್ಷ್ಮ ವಿಚಾರಗಳಿದ್ದು, ಮೇ 3 ರಂದು ಎಲ್ಲದಕ್ಕೂ ಉತ್ತರ ಸಿಗಲಿದೆ.