Tag: ವಿಕೆಟ್ ಕೀಪಿಂಗ್

  • ಧೋನಿ ಹಿಡಿದ ಕ್ಯಾಚ್‍ಗಳಿಗಿಂತ ಬಿಟ್ಟ ಕ್ಯಾಚ್‍ಗಳು ಮಹತ್ವದ್ದಾಗಿತ್ತು: ಪಾಕ್ ಆಟಗಾರ ರಶೀದ್ ಲತೀಫ್ ಟೀಕೆ

    ಧೋನಿ ಹಿಡಿದ ಕ್ಯಾಚ್‍ಗಳಿಗಿಂತ ಬಿಟ್ಟ ಕ್ಯಾಚ್‍ಗಳು ಮಹತ್ವದ್ದಾಗಿತ್ತು: ಪಾಕ್ ಆಟಗಾರ ರಶೀದ್ ಲತೀಫ್ ಟೀಕೆ

    ಇಸ್ಲಾಮಾಬಾದ್: ಭಾರತ ಕಂಡ ಲೆಜೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಮಹೇಂದ್ರ ಸಿಂಗ್ ಧೋನಿ ಕೀಪಿಂಗ್‍ನಲ್ಲಿ ಬಿಟ್ಟ ಕ್ಯಾಚ್‍ಗಳು ಹಿಡಿದ ಕ್ಯಾಚ್‍ಗಳಿಗಿಂತ ಹೆಚ್ಚು ಮಹತ್ವದಾಗಿತ್ತು ಎಂದು ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ರಶೀದ್ ಲತೀಫ್ ಟೀಕೆ ವ್ಯಕ್ತಪಡಿಸಿದ್ದಾರೆ.

    ಸ್ಥಳೀಯ ಯೂಟ್ಯೂಬ್ ವಾಹಿನಿಯೊಂದರಲ್ಲಿ ಮಾತನಾಡಿದ ರಶೀದ್ ಲತೀಫ್, ಧೋನಿ ಕೀಪಿಂಗ್‍ನಲ್ಲಿ ಹಿಡಿದ ಕ್ಯಾಚ್‍ಗಿಂತ ಬಿಟ್ಟಂತಹ ಶೇ.21ರಷ್ಟು ಕ್ಯಾಚ್‍ಗಳು ಹೆಚ್ಚು ಮಹತ್ವದಾಗಿತ್ತು. ಧೋನಿ ಹಿಡಿದ ಕ್ಯಾಚ್, ಸ್ಟಂಪ್‍ಔಟ್ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ಯಾರು ಕೂಡ ಅವರು ಬಿಟ್ಟ ಕ್ಯಾಚ್‍ಗಳ ಬಗ್ಗೆ ಮಾತನಾಡಲಿಲ್ಲ. ನನ್ನ ಪ್ರಕಾರ ಕ್ವಿಂಟನ್ ಡಿಕಾಕ್ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಎಂದಿದ್ದಾರೆ. ಇದನ್ನೂ ಓದಿ: ನಿವೃತ್ತಿ ಘೋಷಿಸಿದ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್

    ಧೋನಿ 2020ರ ಆಗಸ್ಟ್‌ನಲ್ಲಿ ಅಂತಾರಾಷ್ಟ್ರಿಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುವ ಮುನ್ನ ಟೆಸ್ಟ್ ಕ್ರಿಕೆಟ್‍ನಲ್ಲಿ 256 ಕ್ಯಾಚ್, 38 ಸ್ಟಂಪ್, ಏಕದಿನ ಕ್ರಿಕೆಟ್‍ನಲ್ಲಿ 321 ಕ್ಯಾಚ್, 123 ಸ್ಟಂಪ್‍ಔಟ್ ಮಾಡಿದ್ದಾರೆ. ಜೊತೆಗೆ ಟಿ20 ಕ್ರಿಕೆಟ್‍ನಲ್ಲಿ 57 ಕ್ಯಾಚ್, 34 ಸ್ಟಂಪ್‍ಔಟ್ ಮಾಡಿದ್ದಾರೆ. ಸದ್ಯ ಧೋನಿ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದಾರೆ. ಇದನ್ನೂ ಓದಿ: ನಿಮ್ಮದು ಅದ್ಭುತ ಸಾಧನೆ – ಪಿ.ವಿ ಸಿಂಧುರನ್ನ ಹೊಗಳಿದ ಆಸ್ಟ್ರೇಲಿಯಾ ಸ್ಟಾರ್ ಡೇವಿಡ್ ವಾರ್ನರ್

    MS DHONI (2)

    ಇದೀಗ ಲತೀಫ್ ಮಾತಿನಿಂದಾಗಿ ಧೋನಿ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಧೋನಿ ಕುರಿತಾಗಿ ಮಾತನಾಡುವ ಯೋಗ್ಯತೆ ನಿಮಗಿಲ್ಲ ಎಂದು ತಿರುಗಿ ಬಿದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಿಷಬ್ ಪಂತ್ ಬೆಂಬಲಕ್ಕೆ ನಿಂತ ‘ದಾದಾ’

    ರಿಷಬ್ ಪಂತ್ ಬೆಂಬಲಕ್ಕೆ ನಿಂತ ‘ದಾದಾ’

    ನವದೆಹಲಿ: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಟಿ20 ಟೂರ್ನಿಯಲ್ಲಿ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್‍ನಲ್ಲಿ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ವಿರುದ್ಧ ಹಲವು ಟೀಕೆಗಳು ಕೇಳಿ ಬಂದಿತ್ತು. ಅಲ್ಲದೇ ಹಲವು ಕ್ರಿಕೆಟ್ ವಿಶ್ಲೇಷಕರು ಕೆಲ ಪಂದ್ಯಗಳಿಗೆ ರಿಷಬ್‍ಗೆ ವಿಶ್ರಾಂತಿ ನೀಡಿದರೆ ಒಳಿತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪಂತ್ ಬೆಂಬಲಕ್ಕೆ ನಿಂತಿದ್ದು. ಪಂತ್ ಸೂಪರ್ ಪ್ಲೇಯರ್ ಎಂದಿದ್ದಾರೆ. ಇದನ್ನು ಓದಿ: ‘ಶಾಲೆಗೆ ಹೋದ್ರೆ ಧೋನಿ, ಆ್ಯಪ್ ಮೂಲಕ ಶಿಕ್ಷಣ ಪಡೆದ್ರೆ ಪಂತ್ ಆಗ್ತಾರೆ’

    ರಿಷಬ್ ಪಂತ್‍ಗೆ ಕೆಲ ಸಮಯಾವಕಾಶ ನೀಡಬೇಕಿದೆ. ಸದ್ಯ ಆತ ಒತ್ತಡದಲ್ಲಿರುವುದು ಸ್ಪಷ್ಟವಾಗಿ ಆರ್ಥವಾಗುತ್ತಿದೆ. ಆದ್ದರಿಂದಲೇ ಆತನ ಮೇಲೆ ಯಾವುದೇ ರೀತಿಯ ಒತ್ತಡ ಬೀಳದಂತೆ ಎಚ್ಚರಿಕೆ ವಹಿಸಬೇಕಿದೆ. ಪಂತ್ ಸೂಪರ್ ಪ್ಲೇಯರ್ ಆಗಿದ್ದು, ಟೀಂ ಇಂಡಿಯಾ ಬಾಂಗ್ಲಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದೆ ಎಂದು ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇತ್ತ 2ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ರಿಷಬ್ ಪಂತ್‍ಗೆ ಲಭಿಸಲಿಲ್ಲ. ಆದರೆ ವಿಕೆಟ್ ಹಿಂದೆ ಮಾತ್ರ ರಿಷಬ್ ವಿಫಲರಾಗಿದ್ದರು. ಬೌಂಡರಿ ಗೆರೆ ಬಳಿಯಿಂದ ಆಟಗಾರರು ಎಸೆಯುವ ಚೆಂಡನ್ನು ಪಡೆಯುವಲ್ಲಿಯೂ ಪಂತ್ ವಿಫಲರಾದ ಕಾರಣ ಎದುರಾಳಿ ತಂಡಕ್ಕೆ ಹೆಚ್ಚುವರಿ ರನ್ ಕೂಡ ಲಭಿಸಿತ್ತು. ಅಲ್ಲದೇ ಲಿಟಾನ್ ದಾಸ್ ಸ್ಟಂಪ್ ಔಟ್ ಮಾಡುವಲ್ಲಿ ಎಡವಟ್ಟು ಮಾಡಿ ಅವಕಾಶವನ್ನು ಕೈಚೆಲ್ಲಿದ್ದರು. ಅಲ್ಲದೇ ಬಾಂಗ್ಲಾದ ಮತ್ತೊಬ್ಬ ಆಟಗಾರನ ಸ್ಟಂಪ್ ಔಟ್ ವಿಚಾರದಲ್ಲೂ ಅದೃಷ್ಟವಶಾತ್ ಪಾರಾಗಿದ್ದರು. ಸದ್ಯ ಭಾನುವಾರ ನಡೆಯಲಿರುವ 3ನೇ ಅಂತಿಮ ಟಿ20 ಪಂದ್ಯದಲ್ಲಿ ರಿಷಬ್ ಪಂತ್ ಪ್ರದರ್ಶನದ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ.

  • ಧೋನಿ ಸ್ಟಂಪ್ಸ್ ಹಿಂದಿದ್ರೆ ಕ್ರೀಸ್ ಬಿಡ್ಬೇಡಿ – ಐಸಿಸಿ ಸಲಹೆ

    ಧೋನಿ ಸ್ಟಂಪ್ಸ್ ಹಿಂದಿದ್ರೆ ಕ್ರೀಸ್ ಬಿಡ್ಬೇಡಿ – ಐಸಿಸಿ ಸಲಹೆ

    ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಕಿವೀಸ್ ಬ್ಯಾಟ್ಸ್ ಮನ್ ನೀಶಮ್ ರನ್ನು ಧೋನಿ ರನೌಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಇದೇ ವೇಳೆ ಧೋನಿ ಸ್ಟಂಪ್ಸ್ ಹಿಂದಿದ್ರೆ ಕ್ರೀಸ್ ಬಿಟ್ಟು ಹೋಗದಂತೆ ಐಸಿಸಿ ಸಲಹೆ ನೀಡಿದೆ.

    ಧೋನಿ ಸ್ಟಂಪ್ಸ್ ಹಿಂದಿದ್ದರೆ ಸಾಮಾನ್ಯವಾಗಿ ಯಾವುದೇ ಬ್ಯಾಟ್ಸ್ ಮನ್ ಕೂಡ ಎರಡನೇ ಅವಕಾಶ ಪಡೆಯಲು ಸಾಧ್ಯವಿಲ್ಲ. ಈ ಕುರಿತಂತೆ ಐಸಿಸಿ ಕೂಡ ಜೀವನಕ್ಕೇ ಬೇಕಾದ ಅಮೂಲ್ಯ ಸಲಹೆ ನೀಡಿ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರಿಗೆ, ಧೋನಿ ಸ್ಟಂಪ್ಸ್ ಹಿಂದಿದ್ದರೆ ಯಾವುದೇ ಕಾರಣಕ್ಕೂ ಕ್ರೀಸ್ ಬಿಟ್ಟು ತೆರಳದಂತೆ ಸಲಹೆ ನೀಡಿದೆ. ಇದನ್ನು ಓದಿ: ಧೋನಿ ಸ್ಮಾರ್ಟ್ ವಿಕೆಟ್ ಕೀಪಿಂಗ್‍ಗೆ ದಂಗಾದ ನೀಶಮ್

    ಅಂತಿಮ ಟೆಸ್ಟ್ ಪಂದ್ಯದ ಬಳಿಕ ಮಾತನಾಡಿದ ಜಾಧವ್ ಕೂಡ ಧೋನಿ ಸಲಹೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧೋನಿ ವಿಕೆಟ್ ಹಿಂದಿದ್ದರೆ ವಿದೇಶದಲ್ಲಿ ಇದ್ದರೂ ತವರಿನಲ್ಲಿ ಇರುವಂತೆ ಭಾಸವಾಗುತ್ತದೆ. ಏಕೆಂದರೆ ಧೋನಿ ನನಗೆ ಮಾತೃಭಾಷೆಯಲ್ಲೇ (ಮರಾಠಿ) ಸಲಹೆ ನೀಡುತ್ತಾರೆ ಎಂದು ಹೇಳಿದ್ದಾರೆ.

    ಜಾಧವ್ ಸದ್ಯಕ್ಕೆ ಟೀಂ ಇಂಡಿಯಾಗೆ ಉಪಯುಕ್ತ 6ನೇ ಬೌಲರ್ ಆಗಿ ಲಭಿಸಿದ್ದು, ವಿಶೇಷ ಆ್ಯಕ್ಷನ್ ಮೂಲಕ ಬೌಲ್ ಮಾಡುವ ಜಾಧವ್ ವಿಕೆಟ್ ಉರುಳಿಸುವಲ್ಲೂ ಯಶಸ್ವಿಯಾಗುತ್ತಿದ್ದಾರೆ.

    https://twitter.com/Vinothvj94/status/1092067971780890624

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಧೋನಿ ಸ್ಮಾರ್ಟ್ ವಿಕೆಟ್ ಕೀಪಿಂಗ್‍ಗೆ ದಂಗಾದ ನೀಶಮ್ – ವಿಡಿಯೋ

    ಧೋನಿ ಸ್ಮಾರ್ಟ್ ವಿಕೆಟ್ ಕೀಪಿಂಗ್‍ಗೆ ದಂಗಾದ ನೀಶಮ್ – ವಿಡಿಯೋ

    ವೆಲಿಂಗ್ಟನ್: ಟೀಂ ಇಂಡಿಯಾ ಮಾಜಿ ನಾಯಕ 37 ವರ್ಷದ ಧೋನಿ ವಿಕೆಟ್ ಹಿಂದಿನ ತಮ್ಮ ಅನುಭವದ ಕೌಶಲ್ಯಗಳನ್ನು ಮತ್ತೆ ಸಾಬೀತುಪಡಿಸಿದ್ದು, ನ್ಯೂಜಿಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲೂ ಸ್ಮಾರ್ಟ್ ರನೌಟ್ ಮಾಡಿ ಪ್ರಶಂಸೆ ಪಡೆದಿದ್ದಾರೆ.

    ಪಂದ್ಯದ 37 ಓವರ್ ನಲ್ಲಿ ಸ್ಟ್ರೈಕ್ ನಲ್ಲಿದ್ದ ನೀಶಮ್ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಚೇತರಿಕೆ ನೀಡಲು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದರು. ಆದರೆ ಕೇದಾರ್ ಜಾಧವ್ ತಮ್ಮ ಬೌಲಿಂಗ್ ನಲ್ಲಿ ಎಲ್‍ಬಿಡಬ್ಲೂ ಗೆ ಅಂಪೈರ್ ಗೆ ಮನವಿ ಸಲ್ಲಿಸಿದರು. ಇದೇ ವೇಳೆ ಸಮಯ ಪ್ರಜ್ಞೆ ತೋರಿದ ಧೋನಿ ಮಿಂಚಿನ ವೇಗದಲ್ಲಿ ಬಾಲ್ ಪಡೆದು ಬ್ಯಾಟ್ಸ್ ಮನ್ ಕ್ರಿಸ್‍ಗೆ ಬರುವ ಮುನ್ನವೇ ಬೆಲ್ಸ್ ಉರುಳಿಸಲು ಯಶಸ್ವಿಯಾಗಿದರು. ಇದನ್ನು ಕಂಡ ಕ್ಷಣ ಕಾಲ ದಂಗಾದ ನೀಶಮ್ ನಿರಾಸೆಯಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.

    ಗಾಯದ ಸಮಸ್ಯೆಯಿಂದ ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಧೋನಿ, ಅಂತಿಮ ಪಂದ್ಯದ ವೇಳೆಗೆ ಚೇತರಿಸಿಕೊಂಡು ಕಣಕ್ಕೆ ಇಳಿದಿದ್ದರು. ಆದರೆ ಬ್ಯಾಟಿಂಗ್ ನಲ್ಲಿ 1 ರನ್ ಗಳಿಸಿ ಔಟಾಗುವ ಮೂಲಕ ಧೋನಿ ನಿರಾಸೆ ಮೂಡಿಸಿದರೂ ಕೂಡ ವಿಕೆಟ್ ಹಿಂದೆ ನಿಂತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

    ಧೋನಿ ತಮ್ಮ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಾತ್ರ ಗಮನ ಸೆಳೆಯದೆ, ತಂಡದ ಬೌಲರ್ ಗಳಿಗೆ ಸೂಕ್ತ ಸಲಹೆ ನೀಡುವ ಮೂಲಕ ಸ್ಪಿನ್ನರ್ ಗಳ ಯಶಸ್ವಿಗೆ ಕಾರಣರಾಗಿದ್ದಾರೆ. ರವೀಂದ್ರ ಜಡೇಜಾ, ಕೇದಾರ್ ಜಾಧವ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್‍ರ ಯಶಸ್ಸಿನ ಹಿಂದೆ ಧೋನಿ ನೀಡಿದ ಸಲಹೆಗಳು ಮುಖ್ಯವಾಗಿದೆ. 2018 ಇಂಗ್ಲೆಂಡ್ ಸರಣಿಯಲ್ಲೂ ಧೋನಿ ಪ್ರಮುಖರಾಗಿದ್ದರು, ಏಕೆಂದರೆ ಈ ಸರಣಿಯ 6 ಪಂದ್ಯಗಳಲ್ಲಿ ಚಹಲ್, ಕುಲ್ದೀಪ್ 33 ವಿಕೆಟ್ ಪಡೆದಿದ್ದರು. ಪ್ರತಿ ಸಂದರ್ಭದಲ್ಲೂ ಧೋನಿ ನೀಡಿದ ಸಲಹೆ ಬಗ್ಗೆ ಬೌಲರ್ ಗಳು ಪ್ರಶಂಸೆ ವ್ಯಕ್ತಡಿಸುವಂತೆ ಬೌಲ್ ಮಾಡಿ ವಿಕೆಟ್ ಪಡೆಯುತ್ತಿದ್ದರು. ನ್ಯೂಜಿಲೆಂಡ್ ಸರಣಿಯಲ್ಲೂ ಧೋನಿ ಅವರ ಮಾಸ್ಟರ್ ಮೈಂಡ್ ಕೆಲಸ ಮಾಡಿತ್ತು.

    https://twitter.com/DoctorrSays/status/1091984081695367169

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಧೋನಿ ಸ್ಟೈಲಲ್ಲೇ ವಿಕೆಟ್ ಕೀಪಿಂಗ್ ಮಾಡಿದ ಇಶಾನ್ ಕಿಶನ್!

    ಧೋನಿ ಸ್ಟೈಲಲ್ಲೇ ವಿಕೆಟ್ ಕೀಪಿಂಗ್ ಮಾಡಿದ ಇಶಾನ್ ಕಿಶನ್!

    ಮುಂಬೈ: ವಿಶ್ವ ಕ್ರಿಕೆಟಿನಲ್ಲಿ ತನ್ನ ವಿಕೆಟ್ ಕೀಪಿಂಗ್ ಶೈಲಿ ಮೂಲಕವೇ ಎಲ್ಲರ ಗಮನ ಸೆಳೆದಿದ್ದ ಧೋನಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಸದ್ಯ 20 ವರ್ಷದ ಯುವ ಆಟಗಾರ ಇಶಾನ್ ಕಿಶನ್ ಧೋನಿ ಕೀಪಿಂಗ್ ಶೈಲಿಯನ್ನು ಅನುಕರಣೆ ಮಾಡಿ ಮೆಚ್ಚುಗೆ ಪಡೆದಿದ್ದಾರೆ.

    ಟೀಂ ಇಂಡಿಯಾ `ಎ’ ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಧೋನಿಯಂತೆಯೇ ಎದುರಾಳಿ ಆಟಗಾರನನ್ನು ರನೌಟ್ ಮಾಡಲು ಯತ್ನಿಸಿದ್ದು, ಸದ್ಯ ಈ ವೀಡಿಯೋವನ್ನು ಬಿಸಿಸಿಐ ತನ್ನ ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಿದೆ.

    ದುಲೀಪ್ ಟ್ರೋಫಿಯ ಇಂಡಿಯಾ ರೆಡ್ ಹಾಗು ಇಂಡಿಯಾ ಬ್ಲೂ ತಂಡ ನಡುವಿನ ಪಂದ್ಯದಲ್ಲಿ ಇಶಾನ್ ತನ್ನ ಕೀಪಿಂಗ್ ಕೈಚಳಕ ತೋರಿದ್ದಾರೆ. ಬ್ಲೂ ತಂಡದ ಬ್ಯಾಟ್ಸ್‍ಮನ್ ರಿಕಿ ಭುಯಿ ರನ್ ಕದಿಯಲು ಯತ್ನಿಸಿದ ವೇಳೆ ಫೀಲ್ಡರ್ ಬಾಲ್ ಎಸೆಯುತ್ತಿದ್ದಂತೆ ರನೌಟ್ ಮಾಡಲು ಮುಂದಾದ ಕಿಶಾನ್ ಬಲಗೈಲಿದ್ದ ಗ್ಲೌಸ್ ಕಿತ್ತೆಸೆದು ಚೆಂಡನ್ನು ತನ್ನ ಎರಡು ಕಾಲುಗಳ ನಡುವಿಂದ ವಿಕೆಟ್‍ಗೆ ಎಸೆದಿದ್ದಾರೆ. ಆದರೆ ಬಾಲ್ ವಿಕೆಟ್‍ಗೆ ಬಡಿಯುವ ವೇಳೆಗೆ ಬ್ಯಾಟ್ಸ್ ಮನ್ ಕ್ರೀಸ್ ತಲುಪಿದ್ದು, ರನೌಟ್ ಮಾಡಲು ಇಶಾನ್ ವಿಫಲವಾದರೂ ಧೋನಿಯಂತೆ ಸಮಯ ಪ್ರಜ್ಞೆ ಮೆರೆದಿದ್ದನ್ನು ಕ್ರಿಕೆಟ್ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

    ಅಂದ ಹಾಗೇ ಇಶಾನ್ ಕಿಶನ್ ಹಾಗೂ ಧೋನಿ ಇಬ್ಬರು ಜಾರ್ಖಂಡ್ ರಾಜ್ಯದವರೇ ಆಗಿರುವುದು ವಿಶೇಷವಾಗಿದೆ. ಈ ಹಿಂದೆ ಹಲವು ಬಾರಿ ಧೋನಿಯನ್ನು ಭೇಟಿ ಮಾಡಿದ್ದ ಇಶಾನ್ ಬ್ಯಾಟಿಂಗ್ ಹಾಗೂ ಕೀಪಿಂಗ್‍ನಲ್ಲಿ ಹಲವು ಸಲಹೆಗಳನ್ನು ಪಡೆದಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv