Tag: ವಾಲ್ಮೀಕಿ ನಿಗಮದ ಹಗರಣ

  • ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಕೇಸ್; 5 ಕೋಟಿ ಮೌಲ್ಯದ ಆಸ್ತಿಗೆ ಇಡಿ ತಾತ್ಕಾಲಿಕ ಮುಟ್ಟುಗೋಲು

    ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಕೇಸ್; 5 ಕೋಟಿ ಮೌಲ್ಯದ ಆಸ್ತಿಗೆ ಇಡಿ ತಾತ್ಕಾಲಿಕ ಮುಟ್ಟುಗೋಲು

    ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ (Valmiki Corporation) ನಡೆದಿದ್ದ ಕೋಟ್ಯಂತರ ರೂ. ಅಕ್ರಮದ ತನಿಖೆ ನಡೆಸುತ್ತಿರುವ ಇಡಿ (Enforcement Directorate) ಅಧಿಕಾರಿಗಳು 5 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

    ನೆಕ್ಕುಂಟಿ ನಾಗರಾಜ್, ಚಂದ್ರಮೋಹನ್, ಗೋಲಪಲ್ಲಿ ಕಿಶೋರ್ ರೆಡ್ಡಿ, ಎಟಕೇರಿ ಸತ್ಯನಾರಾಯಣ್‌ಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 4.45 ಕೋಟಿ ರೂ. ಮೌಲ್ಯದ ಭೂಮಿ, ಫ್ಲಾಟ್ಸ್ ಹಾಗೂ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿದ್ದ 50 ಲಕ್ಷ ರೂ. ನಗದು ಜಪ್ತಿ ಮಾಡಲಾಗಿತ್ತು. ಇದನ್ನೂ ಓದಿ: ʻಬುರುಡೆʼ ಪ್ರಕರಣದಲ್ಲಿ ಚಿನ್ನಯ್ಯನೇ ಎ1 – ಹಳೆ ಸೆಕ್ಷನ್ ತೆಗೆದು ಹೊಸ ಸೆಕ್ಷನ್ ಹಾಕಿದ SIT

    ಕಳೆದ ವರ್ಷ ಮೇ ತಿಂಗಳಿನಲ್ಲಿ ನಿಗಮದ ಉದ್ಯೋಗಿ ಚಂದ್ರಶೇಖರ್ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದರು. ನಂತರ ಪ್ರಕರಣ ದಾಖಲಿಸಿಕೊಡಿದ್ದ ರಾಜ್ಯ ಪೊಲೀಸರು ಮತ್ತು ಸಿಬಿಐ ತನಿಖೆ ನಡೆಸಿತ್ತು. ಅಕ್ರಮ ಹಣ ವರ್ಗಾವಣೆ ಆರೋಪದ ಬಗ್ಗೆ ದಾಖಲೆಗಳು ಸಿಕ್ಕ ಹಿನ್ನೆಲೆಯಲ್ಲಿ ಇಡಿ ಈ ಕೇಸ್‌ಗೆ ಎಂಟ್ರಿಯಾಗಿತ್ತು. ಇದನ್ನೂ ಓದಿ: ಟ್ರಂಪ್‌ ಸೂಚಿಸಿದ 5 ಗಂಟೆಗಳೊಳಗೆ ಪಾಕ್‌ ವಿರುದ್ಧ ಮೋದಿ ಯುದ್ಧ ನಿಲ್ಲಿಸಿದ್ರು: ರಾಹುಲ್‌ ಗಾಂಧಿ ಕಿಡಿ

    ನಿಗಮದಲ್ಲಿನ ಹಣ ಅಕ್ರಮ ವರ್ಗಾವಣೆ ಹಿನ್ನೆಲೆ ತನಿಖೆ ಕೈಗೆತ್ತಿಕೊಂಡಿದ್ದ ಇಡಿ ಅಧಿಕಾರಿಗಳು, ನಿಗಮದ ಹಣವನ್ನ ಅಕ್ರಮವಾಗಿ ವರ್ಗಾವಣೆ ಮಾಡಿರೋದು ಬೆಳಕಿಗೆ ಬಂದಿತ್ತು. ದಾಖಲೆಗಳನ್ನು ನಕಲಿ ಮಾಡುವ ಮೂಲಕ ನಿಗಮಕ್ಕೆ 89.63 ಕೋಟಿ ರೂ. ವಂಚಿಸಲಾಗಿತ್ತು.

    ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್‌ನಲ್ಲಿ ತೆರೆದ ಖಾತೆಗೆ ಹಣ ವರ್ಗಾಯಿಸಲಾಗಿತ್ತು. ಬಳಿಕ ಹೈದರಾಬಾದ್‌ನಲ್ಲಿರುವ ಫಸ್ಟ್ ಫೈನಾನ್ಸ್ ಬ್ಯಾಂಕ್‌ನಲ್ಲಿ ತೆರೆಯಲಾದ 18 ನಕಲಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿತ್ತು. ಹಗರಣದ ಹಣದಲ್ಲಿ ಲ್ಯಾಂಬೋರ್ಗಿನಿ ಕಾರು ಸೇರಿದಂತೆ ಐಷಾರಾಮಿ ವಾಹನಗಳನ್ನ ಖರೀದಿಸಿರುವುದು ಪತ್ತೆಯಾಗಿತ್ತು.

  • ಕಟಾಕಟ್‌ ಅಂತ ದಲಿತರ ಹಣ ಲೂಟಿಯಾಗಿದೆ, ಇದು ಕರ್ನಾಟಕ ಇತಿಹಾಸಕ್ಕೆ ಕಪ್ಪು ಚುಕ್ಕೆ: ಗುಡುಗಿದ ಅಶೋಕ್‌

    ಕಟಾಕಟ್‌ ಅಂತ ದಲಿತರ ಹಣ ಲೂಟಿಯಾಗಿದೆ, ಇದು ಕರ್ನಾಟಕ ಇತಿಹಾಸಕ್ಕೆ ಕಪ್ಪು ಚುಕ್ಕೆ: ಗುಡುಗಿದ ಅಶೋಕ್‌

    – ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆದಿದ್ದು ಹಲ್ಕಾ ಕೆಲಸ ಎಂದ ವಿಪಕ್ಷ ನಾಯಕ

    ಬೆಂಗಳೂರು: ವಿಧಾನಮಂಡಲ ಅಧಿವೇಶನದ ಮೊದಲ ದಿನವೇ ವಾಲ್ಮೀಕಿ ನಿಗಮದ ಹಗರಣ ಪ್ರತಿಧ್ವನಿಸಿದೆ. ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashoka), ನಿಯಮ 69ರ ಅಡಿಯಲ್ಲಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಅಕ್ರಮ ಪ್ರಕರಣ (Valmiki Corporation Corruption Scam )ಕುರಿತು ಚರ್ಚೆಗೆ ಅವಕಾಶ ಕೋರಿದರು. ಪ್ರಶ್ನೋತರ ಕಲಾಪ ಬಳಿಕ ಚರ್ಚೆಗೆ ಅವಕಾಶ ನೀಡಲಾಯಿತು.

    ಬಳಿಕ ಮಾತು ಆರಂಭಿಸಿದ ಆರ್.‌ ಅಶೋಕ್‌, ದಲಿತರ ಹಣ ಲೂಟಿ ಮಾಡಲಾಗಿದೆ. ಲೂಡಿ ಹೊಡೆದು ಬೇರೆ ರಾಜ್ಯಗಳಿಗೆ ಕಳಿಸಿಕೊಡಲಾಗಿದೆ. ಈತರಹದ ಹಗರಣ ರಾಜ್ಯದಲ್ಲಿ ಇದೇ ಮೊದಲು. ಕಟಾಕಟ್ ಅಂತ ನೂರಕ್ಕೆ ನೂರು ದಲಿತರ ಹಣ (Dalits Money) ಲೂಟಿ ಆಗಿದೆ. ಇದು ಕರ್ನಾಟಕ ಇತಿಹಾಸಕ್ಕೆ ಕಪ್ಪು ಚುಕ್ಕೆ. ನಿಗಮದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಸರ್ಕಾರದ ಹೆಡ್ ಮಾಸ್ಟರ್ ಸಿಎಂ ಕೈಚೆಲ್ಲಿ ಕೂತಿದ್ರು:
    ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆದಿದ್ದು ಹಲ್ಕಾ ಕೆಲಸ. ಸತ್ತಿರುವ ಚಂದ್ರಶೇಖರನ್ ದಲಿತ, ಲೂಟಿ ಆಗಿರೋದು ದಲಿತರ ಹಣ. 187 ಕೋಟಿ ರೂ. ಕಟಾಕಟ್ ಅಂತ ವರ್ಗಾವಣೆ ಆದಾಗ ಸರ್ಕಾರ ಕಣ್ಮುಚ್ಚಿ ಕೂತಿತ್ತು. ಸರ್ಕಾರದ ಹೆಡ್ ಮಾಸ್ಟರ್ ಸಿಎಂ ಅವರೇ ಕೈಚೆಲ್ಲಿ ಕೂತಿದ್ರು ಎಂದರು. ಇದಕ್ಕೆ ಗರಂ ಆದ ಸಿಎಂ ನಾನು ವರ್ಗಾವಣೆ ಮಾಡು ಅಂತ ಹೇಳಿದ್ನಾ? ಎಂದು ತಿರುಗೇಟು ಕೊಟ್ಟರು. ಮತ್ತೆ ಮಾತು ಮುಂದುವರಿಸಿದ ಅಶೋಕ್‌, ವಾಲ್ಮೀಕಿ ನಿಗಮದ ಅಕ್ರಮದಲ್ಲಿ ಮಾಜಿ ಸಚಿವ, ಶಾಸಕ, ನಿಗಮದ ಅಧಿಕಾರಿಗಳು, ಹವಾಲಾ ದಂಧೆಕೋರರು, ಬ್ಯಾಂಕಿನವ್ರು ಈ ಐದು ವರ್ಗದವರೂ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

    187 ಕೋಟಿ ಅಲ್ಲ, 89 ಕೋಟಿ ರೂ. ಅಕ್ರಮ:
    ಅಶೋಕ್ ಚರ್ಚೆ ವೇಳೆ ಸಿಎಂ ಮಧ್ಯಪ್ರವೇಶಿಸಿದ ಸಿಎಂ, ಸದನಕ್ಕೆ ತಪ್ಪು ಮಾಹಿತಿ ಹೋಗಬಾರದು ಜಾರಿ ನಿರ್ದೇಶನಾಲಯದವರು ಅಕ್ರಮದಲ್ಲಿ ಅವರ ಪಾತ್ರದ ಬಗ್ಗೆ ನಾಗೇಂದ್ರ ಒಪ್ಕೊಂಡಿಲ್ಲ. ಇದು ರಿಮ್ಯಾಂಡ್ ಅರ್ಜಿಯಲ್ಲಿ ಕೊಟ್ಟಿರುವ ಮಾಹಿತಿ. ಇದು ಒಪ್ಪಿತ ಸತ್ಯಾಂಶ ಅಲ್ಲ. ನಿಗಮದಲ್ಲಿ 187 ಕೋಟಿ ರೂ. ಅಕ್ರಮ ಆಗಿಲ್ಲ. 89.62 ಕೋಟಿ ರೂ. ಅಕ್ರಮ ಆಗಿದೆ. ತಪ್ಪು ಮಾಹಿತಿ ಹೋಗಬಾರದು ಅಂತ ಹೇಳಿದರು. ಈ ವೇಳೆ ಘೋಷಣೆ ಕೂಗಿದ ಬಿಜೆಪಿ ಸದಸ್ಯರು ನಾನು ಯಾರನ್ನೂ ಡಿಫೆಂಡ್ ಮಾಡ್ಕೊಳ್ತಿಲ್ಲ, ಯಾರ ರಕ್ಷಣೆಯೂ ಮಾಡ್ತಿಲ್ಲ. 187 ಕೋಟಿ ರೂ. ಲೂಟಿಯಾಗಿರೋದನ್ನ ಯಾರೂ ಒಪ್ಪಿಕೊಂಡಿಲ್ಲ, ನಾನಾಗಲೀ, ನಾಗೇಂದ್ರ ಆಗಲೀ ಒಪ್ಪಿಕೊಂಡಿಲ್ಲ. ಇದು ಇಡಿಯವ್ರು ಹೇಳಿರೋದು, ಸದನಕ್ಕೆ ತಪ್ಪು ಮಾಹಿತಿ ಹೋಗಬಾರದು ಅಂತ ಸಿಎಂ ಸ್ಪಷ್ಟನೆ ನೀಡಿದರು.

    6 ಪುಟಗಳ ಡೆತ್‌ ನೋಟ್‌ ಓದಿದ ಅಶೋಕ್‌:
    ಮತ್ತೆ ಚರ್ಚೆ ಆರಂಭಿಸಿದ ಅಶೋಕ್‌, ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಡೀಲ್ ನಡೆದಿದ್ದು ಶಾಂಗ್ರೀಲಾ ಹೊಟೇಲ್ ನಲ್ಲಿ. ಈ ಲೂಟಿ ಹಣ ಚಂದ್ರಶೇಖರನ್ ಆತ್ಮಹತ್ಯೆಯಿಂದ ಬಯಲಿಗೆ ಬಂತು. ಆ ಆಪಾದನೆ ತಮ್ಮ ಮೇಲೆ ಬರಬಾರದು ಅಂತ ದಲಿತ ಚಂದ್ರಶೇಖರನ್ ಬಲಿದಾನ ಆಗಿದೆ ಎಂದರಲ್ಲದೇ ಸಾವಿಗೂ ಮುನ್ನ ಚಂದ್ರಶೇಖರನ್ ಬರೆದಿದ್ದ 6 ಪುಟಗಳ ಡೆತ್ ನೋಟ್ ಓದಿದರು. ಡೆತ್ ನೋಟ್ ನಲ್ಲಿ ಯಾರು ಸುಳ್ಳು ಬರೆಯಲ್ಲ, ಸಾಯುವಾಗ ಯಾರೂ ಸುಳ್ಳು ಹೇಳಲಲ್ಲ. ಡೆತ್ ನೋಟ್ ನಲ್ಲಿ ಅಕ್ರಮದ ಎಲ್ಲ ವಿವರ ಇದೆ. ಹೇಗೆ ಡೀಲ್‌ ನಡೆದಿದೆ ಅಂತ ಅವರು ವಿವರಿಸಿರುವುದಾಗಿ ಅಶೋಕ್‌ ಹೇಳಿದರು.

    ಇವರಿಗೇ ಶಾಪ ತಟ್ಟದೇ ಇರಲ್ಲ:
    ಚಂದ್ರಶೇಖರನ್‌ ಅವರದ್ದು ಆತ್ಮಹತ್ಯೆ ಅಲ್ಲ, ಕೊಲೆ. ಸರ್ಕಾರಿ ಪ್ರಾಯೋಜಕತ್ವದ ಕೊಲೆ ಇದು. ಒಬ್ಬ ದಲಿತ ಅಧಿಕಾರಿ ಒತ್ತಡಕ್ಕೆ ಒಳಗಾಗಿ ಅವಮಾನ ತಡೆಯದೇ ಆತ್ಮಹತ್ಯೆ ಮಾಡ್ಕೊಂಡ್ರು. ಈ ಜೀವಕ್ಕೆ ಬೆಲೆ ಇಲ್ವಾ? ಸರ್ಕಾರಕ್ಕೆ ಕಣ್ಣಿಲ್ವಾ? ಚಂದ್ರಶೇಖರನ್ ಸತ್ತು 30 ದಿನ ಆಯ್ತಲ್ಲ, ಸರ್ಕಾರ ಏನ್ ಮಾಡ್ತಿದೆ? ಚಂದ್ರಶೇಖರನ್ ಸಾವನ್ನಪ್ಪದೇ ಇದ್ದಿದ್ದರೇ 187 ಕೋಟಿ ಅಕ್ರಮ ಯಾರಿಗೂ ಗೊತ್ತಾಗ್ತಿರಲಿಲ್ಲ. ಅಮಾಯಕ ಚಂದ್ರಶೇಖರನ್ ಹಗರಣವನ್ನ ಬಯಲಿಗೆಳೆದಿದ್ದಾರೆ. ಸಾಕ್ಷಿ ಸಿಕ್ಕಿದೆ, ದುಡ್ಡು ಸಿಕ್ಕಿದೆ, ಬೇನಾಮಿ ಖಾತೆಗಳ ವಿವರ ಗೊತ್ತಾಗಿದೆ, ಕೆಲವರ ಬಂಧನ ಆಗಿದೆ ಇವರಿಗೆ ಶಾಪ ತಟ್ಟದೇ ಇರಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

  • ವಿಧಾನಸಭೆ ಕಲಾಪದಲ್ಲಿ ವಾಲ್ಮೀಕಿ ಹಗರಣ ಪ್ರತಿಧ್ವನಿ; 187 ಕೋಟಿಯಲ್ಲ, 89 ಕೋಟಿ ಅಕ್ರಮ – ED ಹೇಳಿಕೆ ಒಪ್ಪಿತ ಸತ್ಯವಲ್ಲ ಎಂದ ಸಿಎಂ

    ವಿಧಾನಸಭೆ ಕಲಾಪದಲ್ಲಿ ವಾಲ್ಮೀಕಿ ಹಗರಣ ಪ್ರತಿಧ್ವನಿ; 187 ಕೋಟಿಯಲ್ಲ, 89 ಕೋಟಿ ಅಕ್ರಮ – ED ಹೇಳಿಕೆ ಒಪ್ಪಿತ ಸತ್ಯವಲ್ಲ ಎಂದ ಸಿಎಂ

    – ನಮ್ಮ ಪಕ್ಷವೂ ಸ್ವಚ್ಛ ಆಗ್ಬೇಕು, ನಿಮ್ಮ ಪಕ್ಷವೂ ಸ್ವಚ್ಛ ಆಗ್ಬೇಕು ಅಂದ್ರು ಯತ್ನಾಳ್

    ಬೆಂಗಳೂರು: ವಿಧಾನ ಮಂಡಲ ಮುಂಗಾರು ಅಧಿವೇಶನ (Karnataka Assembly Session) ಇಂದಿನಿಂದ ಶುರುವಾಗಿದೆ. ನಿರೀಕ್ಷೆಯಂತೆ ವಾಲ್ಮೀಕಿ ನಿಗಮದ ಹಗರಣ (Valmiki Scam) ಪ್ರತಿಧ್ವನಿಸಿದೆ.

    ದಲಿತರ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ ಈ ಬಗ್ಗೆ ಚರ್ಚೆ ಆಗ್ಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಒತ್ತಾಯಿಸಿದರು. ಪ್ರಶ್ನೋತ್ತರ ಅವಧಿ ಮುಗಿದ ನಂತರ ಮಾತಾಡಿ ಚರ್ಚೆಗೆ ರೆಡಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದರು. ಪ್ರಶ್ನೋತ್ತರ ಕಲಾಪದ ಬಳಿಕ ಬಿಜೆಪಿಯ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೊಡೋದಾಗಿ ಸ್ಪೀಕರ್ ರೂಲಿಂಗ್ ಕೊಟ್ಟರು. ಅದರಂತೆ, ಪ್ರಶ್ನೋತ್ತರ ಕಲಾಪ ಮುಗಿಯುವವರೆಗೂ ಸುಮ್ಮನಿದ್ದ ಬಿಜೆಪಿ ಆಮೇಲೆ ಸರ್ಕಾರದ ವಿರುದ್ಧ ಮುಗಿಬಿದ್ದಿತು.

    ವಾಲ್ಮೀಕಿ ನಿಗಮದ ಹಣ ಲೂಟಿ ಹೊಡೆದಿದ್ದು ಹಲ್ಕಾ ಕೆಲಸ. ಸತ್ತಿರುವ ಚಂದ್ರಶೇಖರನ್ ದಲಿತ, ಲೂಟಿ ಆಗಿರೋದು ದಲಿತರ ಹಣ, 187 ಕೋಟಿ ರೂ. ಹಣ ಕಟಾಕಟ್ ಅಂತ ವರ್ಗಾವಣೆ ಆದಾಗ ಸರ್ಕಾರ ಕಣ್ಮುಚ್ಚಿ ಕೂತಿತ್ತು ಎಂದು ಅಶೋಕ್ ವಾಗ್ದಾಳಿ ನಡೆಸಿದರು. ಇದಕ್ಕೆ, ವರ್ಗಾವಣೆ ಮಾಡು ಅಂತ ನಾನು ಹೇಳಿದ್ನಾ? ಸದನಕ್ಕೆ ಏನೇನೋ ತಪ್ಪು ಮಾಹಿತಿ ನೀಡ್ಬೇಡಿ. ವರ್ಗಾವಣೆ ಆಗಿರೋದು 187 ಕೋಟಿಯಲ್ಲ, 89.62 ಕೋಟಿ ರೂ. ಅಂತ, ಸದನಕ್ಕೆ ತಪ್ಪು ಮಾಹಿತಿ ಕೊಡಬೇಡಿ ಅಂತ ಸಿಎಂ ಗರಂ ಆದರು. ಅಲ್ಲಿಗೆ ಒಪ್ಕೊಂಡಂತೆ ಆಯ್ತಲ್ಲ ಎಂದು ಬಿಜೆಪಿಗರು ಘೋಷಣೆ ಕೂಗಿದರು. ಇದಕ್ಕೆ ಮತ್ತೆ ಸಿಎಂ ಸ್ಪಷ್ಟೀಕರಣ ಕೊಟ್ಟರು. ಇದನ್ನೂ ಓದಿ: ಜೈಲಿನಲ್ಲಿರೋ ಇಮ್ರಾನ್‌ ಖಾನ್‌ಗೆ ಮತ್ತೆ ಶಾಕ್ – ದೇಶ ವಿರೋಧಿ ಚಟುವಟಿಕೆ ಆರೋಪದಡಿ ಪಿಟಿಐ ನಿಷೇಧ!

    ಲೂಟಿಯನ್ನು ಯಾರೂ ಒಪ್ಪಿಕೊಂಡಿಲ್ಲ. ಇದು ಇ.ಡಿ ಅವರು ಹೇಳಿರುವುದು ಅಷ್ಟೇ. ಇದು ಒಪ್ಪಿತ ಸತ್ಯವಲ್ಲ ಎಂದು ಹೇಳಿದರು. ಈ ವೇಳೆ ಡಿಕೆ ಶಿವಕುಮಾರ್ ಮತ್ತು ಅಶೋಕ್ ನಡುವೆ ಒಂದಿಷ್ಟು ಜಟಾಪಟಿ ನಡೆಯಿತು. ಇದಕ್ಕೂ ಮುನ್ನ, ಯತ್ನಾಳ್ ಹಾಗೂ ಸಿಎಂ ಮಧ್ಯೆ ಮಾತಿನ ಸಮರ ನಡೀತು. ಪರಿಷತ್‌ನಲ್ಲೂ ಸಿಎಂ ರಾಜೀನಾಮೆ ಒತ್ತಾಯಿಸಿ ವಿಪಕ್ಷಗಳು ಗದ್ದಲ ಎಬ್ಬಿಸಿದವು. ಇದನ್ನೂ ಓದಿ: ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ ಅರೆಸ್ಟ್; 2 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್!

    ಯತ್ನಾಳ್-ಸಿಎಂ ಮಾತಿನ ಜಟಾಪಟಿ:
    ವಾಲ್ಮೀಕಿ ಹಗರಣ ವಿಚಾರದಲ್ಲಿ ಸಿಎಂ, ಯತ್ನಾಳ್ ನಡುವೆ ಮಾತಿನ ಜಟಾಪಟಿ ನಡೆಯಿತು. ವಾಲ್ಮೀಕಿ ಹಗರಣದ ಚರ್ಚೆಗೆ ಸಿಎಂ ಆಗ್ರಹಿಸುತ್ತಿದ್ದಂತೆ ಬಿಜೆಪಿಯ ಡಿ.ಎಸ್ ವೀರಯ್ಯ ಅರೆಸ್ಟ್ ಆಗಿದ್ದಾರಲ್ಲ, ಅದರ ಬಗ್ಗೆ ಹೇಳ್ರೀ ಅಂತ ಬಿಜೆಪಿಗೆ ಟಾಂಗ್ ಕೊಟ್ಟರು. ಈ ವೇಳೆ ಅಡ್ಜಸ್ಟ್‌ಮೆಂಟ್‌ ಬೇಕಿಲ್ಲ, ನಮ್ಮ ಪಕ್ಷವೂ ಸ್ವಚ್ಛ ಆಗಬೇಕು, ನಿಮ್ಮ ಪಕ್ಷವೂ ಸ್ವಚ್ಛ ಆಗಬೇಕು ಅಂತ ಯತ್ನಾಳ್ ಗುಡುಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಹೇ ಯತ್ನಾಳ್ ನಿಮಗೆ ಸೀರಿಯಸ್‌ನೆಸ್ ಇಲ್ಲ, ಏನ್ ಮಾತಾಡ್ತೀರಿ, ಯಾವಾಗ ಯಾವ ನಿಲುವು ತಗೋತೀರಿ ಅಂತ ನಿಮಗೇ ಗೊತ್ತಿರಲ್ಲ. ನಿಮ್ಮ ಪಕ್ಷದಲ್ಲಿ ಸಿಎಂ ಆಗೋದಕ್ಕೆ ಎರಡೂವರೆ ಸಾವಿರ ಕೋಟಿ ಕೊಡಬೇಕು ಅಂದಿದ್ರಿ. ಪುನಃ ಅಲ್ಲಿಂದ ಹಿಂದಕ್ಕೇ ಹೋದ್ರಿ. ನಿಮ್ಮ ಸರ್ಕಾರ ಇದ್ದಾಗ ಯಾಕೆ ಸಿಬಿಐ ತನಿಖೆಗೆ ಕೊಡಲಿಲ್ಲ ಎಂದು ಟಾಂಗ್ ಕೊಟ್ಟರು.