Tag: ವಾಯುನೆಲೆ

  • ವಾಯುನೆಲೆಯ ಮೇಲೆ ಭಾರತ ದಾಳಿ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಅಲ್ಲೋಲ ಕಲ್ಲೋಲ

    ವಾಯುನೆಲೆಯ ಮೇಲೆ ಭಾರತ ದಾಳಿ – ಇಸ್ಲಾಮಾಬಾದ್‌, ರಾವಲ್ಪಿಂಡಿಯಲ್ಲಿ ಅಲ್ಲೋಲ ಕಲ್ಲೋಲ

    ನವದೆಹಲಿ/ಇಸ್ಲಾಮಾಬಾದ್‌: ಭಾರತ ನಡೆಸಿದ ವಾಯು ದಾಳಿಗೆ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲವಾಗಿದೆ. ಭಾರತ ಪಾಕಿಸ್ತಾನದ ಹಲವು ವಾಯು ನೆಲೆಗಳ (Air Base) ಮೇಲೆ ದಾಳಿ ಮಾಡಿದೆ.

    ರಾಜಧಾನಿ ಇಸ್ಲಾಮಾಬಾದ್ (Islamabad), ದೇಶದ ಮಿಲಿಟರಿ ಪ್ರಧಾನ ಕಚೇರಿಗೆ ಹೊಂದಿಕೊಂಡಿರುವ ರಾವಲ್ಪಿಂಡಿಯಲ್ಲಿರುವ (Rawalpindi) ನೂರ್ ಖಾನ್ ವಾಯುನೆಲೆ ಸೇರಿದಂತೆ ಮೂರು ವಾಯುನೆಲೆಯ ಮೇಲೆ ಭಾರತ ದಾಳಿ ಮಾಡಿದ ಎಂದು ಪಾಕ್‌ ಸೇನೆ ಅಧಿಕೃತವಾಗಿ ತಿಳಿಸಿದೆ.

    ಇಸ್ಲಾಮಾಬಾದ್‌ನಿಂದ 10 ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿರುವ ವಾಯು ನೆಲೆಯ ಮೇಲೆಯೇ ಭಾರತ ದಾಳಿ ನಡೆಸಿದೆ. ಭೀಕರ ದಾಳಿಗೆ ತತ್ತರಿಸಿದ ಪಾಕಿಸ್ತಾನ ಸರ್ಕಾರವು ಎಲ್ಲಾ ನಾಗರಿಕ ಮತ್ತು ವಾಣಿಜ್ಯ ವಿಮಾನ ಸಂಚಾರವನ್ನು ಬಂದ್‌ ಮಾಡಿದೆ.

    ರಾವಲ್ಪಿಂಡಿಯ ವಾಯುನೆಲೆಯಲ್ಲಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಳ್ಳುತ್ತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಹಿಂದೆ ಚಕ್ಲಾಲಾ ವಾಯುನೆಲೆ ಎಂದು ಕರೆಯಲಾಗುತ್ತಿದ್ದ ನೂರ್ ಖಾನ್ ನೆಲೆ ಪಾಕಿಸ್ತಾನದ ಅತ್ಯಂತ ಸೂಕ್ಷ್ಮ ಮಿಲಿಟರಿ ವಾಯುನೆಲೆಯಾಗಿದೆ.

  • 13 ಮಂದಿಯಿದ್ದ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ

    13 ಮಂದಿಯಿದ್ದ ಭಾರತೀಯ ವಾಯುಸೇನೆ ವಿಮಾನ ನಾಪತ್ತೆ

    ನವದೆಹಲಿ: ಭಾರತೀಯ ವಾಯುಸೇನೆಯ ಎಎನ್-32 ವಿಮಾನ ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಲೆಯಿಂದ ಕೆಲ ಗಂಟೆಗಳಿಂದ ನಾಪತ್ತೆಯಾಗಿದೆ.

    ಭಾರತೀಯ ವಾಯು ಪಡೆಯ ಸರಕು ಸಾಗಾಟ ವಿಮಾನದಲ್ಲಿ 8 ಮಂದಿ ಸಿಬ್ಬಂದಿ ಮತ್ತು 5 ಮಂದಿ ಪ್ರಯಾಣಿಕರಿದ್ದರು. ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಲೆಯಿಂದ ಮಧ್ಯಾಹ್ನ 12.25ಕ್ಕೆ ಟೇಕಾಫ್ ಆಗಿದ್ದ ವಿಮಾನ 35 ನಿಮಿಷಗಳ ಕಾಲ ಸಂಪರ್ಕದಲ್ಲಿತ್ತು. ಆದರೆ ಮಧ್ಯಾಹ್ನ 1ಗಂಟೆಯ ವೇಳೆ ಸಂಪರ್ಕ ಕಳೆದುಕೊಂಡಿದೆ ಎಂದು ವಾಯು ಸೇನೆಯ ಅಧಿಕಾರಿ ತಿಳಿಸಿದ್ದಾರೆ.

    ವಿಮಾನ ಪತ್ತೆಗಾಗಿ ಸುಖೋಯಿ-30 ಏರ್ ಕ್ರಾಫ್ಟ್ ಮತ್ತು ಸಿ-130 ಸ್ಪೆಷಲ್ ಆಪರೇಷನ್ ವಿಮಾನವನ್ನು ಬಳಕೆ ಮಾಡಲಾಗುತ್ತಿದೆ.

    ಎಎನ್ 32 ರಷ್ಯಾದ ಟ್ವಿನ್ ಟರ್ಬೋಪ್ರೊಪ್ ಎಂಜಿನ್ ಹೊಂದಿದ್ದು, 1983 ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿತ್ತು. ನಾಪತ್ತೆಯಾದ ವಿಮಾನದ ದಾರಿ ಬಹಳ ಕಠಿಣವಾಗಿದ್ದು, ಬೆಟ್ಟ ಗುಡ್ಡ ಮತ್ತು ಭಾರೀ ಅರಣ್ಯವಿದೆ. ಮೆಚುಕಾ ವಾಯುನೆಲೆಯಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡುವುದು ಬಹಳ ಕಷ್ಟ ಎಂದು ವರದಿಯಾಗಿದೆ.

    2016ರಲ್ಲಿ ವಾಯುಸೇನೆ ಎಎನ್ 32 ವಿಮಾನ ಪತನಗೊಂಡಿತ್ತು. ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ತೆರಳಲು ಚೆನ್ನೈ ನಿಂದ ಟೇಕಾಫ್ ಆಗಿದ್ದ ವಿಮಾನ ನಾಪತ್ತೆಯಾಗಿತ್ತು. ಬಂಗಾಳ ಕೊಲ್ಲಿಯಲ್ಲಿ ವಿಮಾನ ಹುಡುಕುವ ಕಾರ್ಯಾಚರಣೆ ನಡೆದರೂ ಯಾವುದೇ ಅವಶೇಷ ಸಿಕ್ಕಿರಲಿಲ್ಲ. ವಿಮಾನದಲ್ಲಿದ್ದ ಎಲ್ಲ 29 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು.

    ಈ ಬಗ್ಗೆ ಭಾರತೀಯ ನೌಕಾ ಪಡೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಪಿ ಖೋಂಗ್ಸೈ ಮಾತನಾಡಿ, ಕಾಣೆಯಾದ ವಿಮಾನವನ್ನು ಪತ್ತೆಹಚ್ಚಲು ಪ್ರತಿ ಪ್ರಯತ್ನವನ್ನೂ ಮಾಡಲಾಗಿದೆ. ಭಾರತೀಯ ಸೇನೆಯ ಯೋಧರು ಮತ್ತು ಇಂಡೋ-ಟಿಬೇಟಿಯನ್ ಗಡಿಯಲ್ಲಿ ಪೊಲೀಸ್ ಇಲಾಖೆ ಹೆಲಿಕಾಪ್ಟಾರ್ ಸಹಾಯದಿಂದ ಹುಡುಕಾಟ ನಡೆಸುತ್ತಿರುವುದಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

    ಸದ್ಯ ಕಾಣೆಯಾಗಿರುವ ಏರ್‌ಕ್ರಾಫ್ಟ್‌ ಬಗ್ಗೆ ಸಿಕ್ಕ ಮಾಹಿತಿ ಪ್ರಕಾರ, ಏರ್‌ಕ್ರಾಫ್ಟ್‌ ಕಾಣೆಯಾಗಿರುವ ಪ್ರದೇಶ ಹೆಚ್ಚು ಪರ್ವತಗಳು ಮತ್ತು ದಟ್ಟ ಅರಣ್ಯದಿಂದ ಕೂಡಿದೆ. ಹೀಗಾಗಿ ಈ ಪ್ರದೇಶದಲ್ಲಿ ಲ್ಯಾಂಡ್ ಆಗಿ ಮತ್ತೆ ಏರ್‌ಕ್ರಾಫ್ಟ್‌ ಟೇಕಾಫ್ ಆಗುವುದು ತುಂಬಾ ಕಷ್ಟ. ಇಲ್ಲಿನ ಹವಾಮಾನದಿಂದ ಏರ್‌ಕ್ರಾಫ್ಟ್‌ ಗಳು ಹಾರಾಟ ನಡೆಸಲು ಸರಿಯಾದ ವಾತಾವರಣ ಸಿಗುವುದಿಲ್ಲ.

  • ಉಗ್ರನ ಜೇಬಿನಲ್ಲಿ ಮ್ಯಾಪ್ – ಮೇ 23 ರಂದು ಭಾರೀ ದಾಳಿಗೆ ಸ್ಕೆಚ್!

    ಉಗ್ರನ ಜೇಬಿನಲ್ಲಿ ಮ್ಯಾಪ್ – ಮೇ 23 ರಂದು ಭಾರೀ ದಾಳಿಗೆ ಸ್ಕೆಚ್!

    ಶ್ರೀನಗರ: ಕಳೆದ ಗುರುವಾರ ಶೋಪಿಯಾನ್‍ನಲ್ಲಿ ಯೋಧರ ಗುಂಡಿನ ದಾಳಿಗೆ ಹತನಾದ ಉಗ್ರನ ಜೇಬಿನಲ್ಲಿ ಸಿಕ್ಕ ಮ್ಯಾಪ್ ಒಂದು ಮೇ 23 ಲೋಕಸಭಾ ಚುನಾವಣೆಯ ಫಲಿತಾಂಶದ ದಿನ ನಡೆಯಬೇಕಿದ್ದ ಭಾರಿ ಅನಾಹುತವನ್ನು ತಪ್ಪಿಸಿದೆ.

    ಮೇ 23 ಲೋಕಸಭಾ ಚುನಾವಣೆಯ ಫಲಿತಾಂಶದ ದಿನವನ್ನೇ ಗುರಿಯಾಗಿಸಿಕೊಂಡು ಭಯೋತ್ಪಾದಕರು ಹಲವಾರು ದಾಳಿಯನ್ನು ಕಾಶ್ಮೀರದಲ್ಲಿ ಮಾಡಲಿದ್ದಾರೆ ಎಂದು ಭಾರತೀಯ ಗುಪ್ತಚರ ಇಲಾಖೆ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿತ್ತು.

    ಈ ಮಾಹಿತಿಗೆ ಪೂರಕ ಎಂಬಂತೆ ಗುರುವಾರ ಸೇನೆಯ ಗುಂಡಿನ ದಾಳಿಗೆ ಬಲಿಯದ ಉಗ್ರನ ಜೇಬಿನಲ್ಲಿ ನಕ್ಷೆ ದೊರಕಿದೆ. ಈ ಮ್ಯಾಪ್‍ನ ಪ್ರಕಾರ ಶ್ರೀನಗರ ಮತ್ತು ಅವಂತಿಪೋರದಲ್ಲಿರುವ ಭಾರತೀಯ ವಾಯುಪಡೆಯ ನಲೆಗಳ ಮೇಲೆ ಮೇ 23 ರಂದು ದಾಳಿ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

    ಮೇ 14 ರಂದು ನಡೆದ ಸಭೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ರಿಯಾಜ್ ನೈಕೂ, ಜೈಶ್-ಇ- ಮೊಹಮ್ಮದ್ ಉಗ್ರಸಂಘಟನೆಯ ಇಬ್ಬರು ಉಗ್ರರು ಮತ್ತು ಲಷ್ಕರ್-ಇ-ತೊಯ್ಬಾ ಸಂಘಟನೆಯ ರಿಯಾಜ್ ದಾರ್ ಎಂಬ ನಾಲ್ಕು ಉಗ್ರರು ಸೇರಿಕೊಂಡು ವಾಯು ನೆಲೆಗಳ ಮೇಲೆ ದಾಳಿ ಮಾಡಲು ಸಂಚು ಮಾಡಿದ್ದರು ಎಂದು ತಿಳಿದುಬಂದಿದೆ.

    ಪುಲ್ವಾಮ ಮತ್ತು ಶೋಪಿಯಾನ್‍ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 6 ಮಂದಿ ಉಗ್ರರನ್ನು ಕೊಲ್ಲಲಾಗಿತ್ತು. ಆ ಸಮಯದಲ್ಲಿ ಈ ಮಾಹಿತಿಯು ಹೊರಬಂದಿದೆ. ಈ ಗುಂಡಿನ ಕಾಳಗದಲ್ಲಿ 2 ಜನ ಭಾರತೀಯ ಯೋಧರು ವೀರಮರಣ ಅಪ್ಪಿದ್ದರು.

  • ದೇಶದ ಐಕ್ಯತೆ ಮುಖ್ಯ, ಮಾಧ್ಯಮಗಳಲ್ಲಿ ಭಿನ್ನ ವಿಶ್ಲೇಷಣೆ ಬರುತ್ತಿದೆ: ಡಿಕೆಶಿ

    ದೇಶದ ಐಕ್ಯತೆ ಮುಖ್ಯ, ಮಾಧ್ಯಮಗಳಲ್ಲಿ ಭಿನ್ನ ವಿಶ್ಲೇಷಣೆ ಬರುತ್ತಿದೆ: ಡಿಕೆಶಿ

    ಬಳ್ಳಾರಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿನಲ್ಲಿದ್ದ ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿದ ಬಗ್ಗೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಭಿನ್ನ ಹೇಳಿಕೆ ನೀಡಿದ್ದಾರೆ.

    ಪಾಕಿಸ್ತಾನ ಮೇಲೆ ಆದ ದಾಳಿ ಬಗ್ಗೆ ಮಾತನಾಡಿದ ಡಿಕೆಶಿ, “ದೇಶದ ಐಕ್ಯತೆ ಮುಖ್ಯ. ಮಾಧ್ಯಮಗಳಲ್ಲಿ ದಾಳಿ ಬಗ್ಗೆ ಭಿನ್ನ ವಿಶ್ಲೇಷಣೆ ಬರುತ್ತಿದೆ. ದೇಶ ಒಗ್ಗಟ್ಟಿನಲ್ಲಿ ಇರಬೇಕಿದೆ. ಚುನಾವಣೆ ಹೊತ್ತಿನಲ್ಲಿ ನಾನೇನು ಮಾತನಾಡೋದಿಲ್ಲ. ಈ ಸಂಬಂಧ ನಮ್ಮ ನಾಯಕರು ಹೇಳುತ್ತಾರೆ. ಸೈನಿಕರ ಪರ ನಾವು ಇರುತ್ತೇವೆ ಹಾಗೂ ನಮಗೆ ಸೈನಿಕರ ರಕ್ಷಣೆ ಮುಖ್ಯ. ರಾಜಕಾರಣದ ಮಾತು ಈಗ ಬೇಡ. ದಾಳಿ ಸರಿಯೋ ತಪ್ಪೋ ಅದರ ಬಗ್ಗೆ ಈಗ ಮಾತನಾಡೋದು ಸರಿಯಲ್ಲ. ದಾಳಿ ಬಗ್ಗೆ ಬೇರೆ ಬೇರೆ ವಾಖ್ಯಾನ ಬರುತ್ತಿದೆ” ಎಂದರು.

    ಸುಮಲತಾ ಮಂಡ್ಯ ಲೋಕಸಭೆ ಟಿಕೆಟ್ ವಿಚಾರದ ಬಗ್ಗೆ ಮಾತನಾಡಿ “ಸುಮಲತಾ ಅವರು ನಮ್ಮ ರಾಜ್ಯ ನಾಯಕರ ಜೊತೆ ಮಾತನಾಡಲಿ. ಮಂಡ್ಯ ಲೋಕಸಭೆ ಉಪಚುನಾವಣೆಯಲ್ಲಿ ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದೇವೆ. ಇದು ಮುಂದುವರಿಯುತ್ತದೆ. ಸುಮಲತಾ ಪಕ್ಷದ ವೇದಿಕೆಯಲ್ಲಿ ಕೆಲಸ ಮಾಡಲು ಅವಕಾಶ ಇದೆ. ರಾಜಕೀಯಕ್ಕೆ ಬಂದಿರೋದು ಸ್ವಾಗತಾರ್ಹ ಎಂದು ಹೇಳುತ್ತಾ ಪರೋಕ್ಷವಾಗಿ ಸುಮಲತಾಗೆ ಟಿಕೆಟ್ ಇಲ್ಲ ಎಂದು ಡಿಕೆಶಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿ ಜೊತೆಗೆ ಅಕ್ರಮ ಸಂಬಂಧ: ವಾಯುಸೇನಾಧಿಕಾರಿ ಸಹೋದ್ಯೋಗಿಯನ್ನು ಕೊಂದು ಏನ್ ಮಾಡ್ದ ಗೊತ್ತಾ?

    ಪತ್ನಿ ಜೊತೆಗೆ ಅಕ್ರಮ ಸಂಬಂಧ: ವಾಯುಸೇನಾಧಿಕಾರಿ ಸಹೋದ್ಯೋಗಿಯನ್ನು ಕೊಂದು ಏನ್ ಮಾಡ್ದ ಗೊತ್ತಾ?

    ಪಂಜಾಬ್: ಪತ್ನಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಶಂಕಿಸಿ ವಾಯುಪಡೆಯ ಅಧಿಕಾರಿಯೊಬ್ಬ ತನ್ನ ಸಹೋದ್ಯೋಗಿಯನ್ನೇ ಕೊಂದು ತುಂಡು ತುಂಡಾಗಿ ಕತ್ತರಿಸಿ ಬಳಿಕ ಪಾಲಿಥೀನ್ ಚೀಲಗಳಲ್ಲಿ ತುಂಬಿಸಿಟ್ಟ ಭಯಾನಕ ಸತ್ಯವೊಂದು ಪೊಲೀಸರ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ.

    ಉತ್ತರಪ್ರದೇಶದ 27 ವರ್ಷದ ವಿಪಿನ್ ಶುಕ್ಲಾ ಕೊಲೆಯಾದ ದುರ್ಧೈವಿಯಾಗಿದ್ದು. ಈತ ಪಂಜಾಬ್‍ನ ಭಿಸಿಯಾನ ವಾಯುನೆಲೆಯಲ್ಲಿ ಉದ್ಯೋಗ ಮಾಡುತ್ತಿದ್ದನು. ಕೊಲೆ ಪ್ರಕರಣ ಸಂಬಂಧ ಸದ್ಯ ಪೊಲೀಸರು ವಾಯುನೆಲೆ ಅಧಿಕಾರಿಯಾದ ಸುಲೇಶ್ ಕುಮಾರ್ ಹಾಗೂ ಅವರ ಪತ್ನಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪ್ರಕರಣ ಬೆಳಕಿಗೆ: ಫೆಬ್ರವರಿ 15ರಿಂದ ವಿಪಿನ್ ಶುಕ್ಲಾ ನಾಪತ್ತೆಯಾಗಿದ್ದನು. ಈ ವೇಳೆ ಪತ್ನಿ ಕುಂಕುಮ್, ಪತಿ ನಾಪತ್ತೆಯಾಗಿದ್ದಾರೆ ಅಂತಾ ಬತಿಂಡಾದ ನಥಾನಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ದೂರಿನ ಆಧಾರದ ಮೇಲೆ ಪೊಲೀಸರು ವಾಯುನೆಲೆಯ ಅಧಿಕಾರಿಗಳ ಕ್ವಾಟ್ರಸ್‍ನಲ್ಲಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಪೊಲೀಸರಿಗೆ ಸುಲೇಶ್ ಕುಮಾರ್ ಅವರ ಮನೆಯ ಆವರಣದಿಂದ ಕೊಳೆತ ಮಾಂಸದ ವಾಸನೆ ಬಂದಂತಾಯ್ತು. ಈ ವಾಸನೆಯ ಜಾಡು ಹಿಡಿದ ಪೊಲೀಸರು ಸುಲೇಶ್ ಮನೆಯನ್ನು ಜಾಲಾಡಿದ್ದರು. ಪರಿಣಾಮ ಮನೆಯ ಫ್ರಿಜ್‍ನಲ್ಲಿ 16 ಪಾಲಿಥೀನ್ ಚೀಲಗಳಲ್ಲಿ ಶವವೊಂದರ ತುಂಡಾದ ದೇಹಗಳನ್ನು ಪ್ಯಾಕ್ ಮಾಡಿಟ್ಟಿರುವ ಬಗ್ಗೆ ಬೆಳಕಿಗೆ ಬಂದಿದೆ. ಕೂಡಲೇ ಸುಲೇಶ್, ಪತ್ನಿ ಅನುರಾಧಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಈ ವೇಳೆ ಸುಲೇಶ್, ಫೆಬ್ರವರಿ 8ರಂದು ನನ್ನ ಮನೆಯನ್ನು ಬದಲಾಯಿಸುವ ಸಲುವಾಗಿ ಮನೆ ವಸ್ತುಗಳನ್ನು ಪ್ಯಾಕ್ ಮಾಡಲು ಇದೆ. ಹೀಗಾಗಿ ವಿಪಿನ್‍ನನ್ನು ಉಪಾಯ ಮಾಡಿ ಮನೆಗೆ ಕರೆದಿದ್ದೆ. ಬಳಿಕ ಕೊಲೆ ಮಾಡಿ ಆತನ ದೇಹವನ್ನು ಒಂದು ಬಾಕ್ಸ್ ನಲ್ಲಿ ಹಾಕಿ ಹೊಸ ಮನೆಯಲ್ಲಿ ಇಟ್ಟಿದ್ದೆ ಅಂತಾ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮಾತ್ರವಲ್ಲದೇ ತನ್ನ ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದರಿಂದಲೇ ವಿಪಿನ್ ನನ್ನು ಕೊಲೆಗೈದಿದ್ದಾಗಿ ಹೇಳಿಕೆ ನೀಡಿದ್ದಾನೆ.

    ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 ರ(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಏರ್ ಶೋದಿಂದಾಗಿ ನಡೆಯಿತು ನಾಗರಹಾವುಗಳ ಮಾರಣ ಹೋಮ..!

    ಏರ್ ಶೋದಿಂದಾಗಿ ನಡೆಯಿತು ನಾಗರಹಾವುಗಳ ಮಾರಣ ಹೋಮ..!

    ಬೆಂಗಳೂರು: ಇಲ್ಲಿನ ಯಲಹಂಕದ ವಾಯನೆಲೆಯಲ್ಲಿ ಏರ್ ಶೋ ಕಾರ್ಯಕ್ರಮವೇನು ಅದ್ಧೂರಿಯಾಗಿ ನಡೆಯಿತು. ಆದ್ರೆ ಏರ್ ಶೋನಿಂದಾಗಿ ನಾಗರಹಾವುಗಳ ಮಾರಣ ಹೋಮವೇ ನಡೆದು ಹೋಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಹೌದು. ಏರ್ ಶೋ ನಡೆಯುವ ಸ್ಥಳ ಹಾವಿನ ವಾಸಸ್ಥಳವಾಗಿದೆ. ಏರ್ ಶೋ ಸಂದರ್ಭದಲ್ಲಿ ಭೂಮಿ ಕಂಪಿಸುತ್ತಿತ್ತು. ಈ ವೇಳೆ ಬೆದರಿ ಹಾವುಗಳು ಹೊರಬಂದಿದ್ದವು. ಜನಸಂದಣಿ ಹೆಚ್ಚಿದ್ರಿಂದ ಭೀತಿಗೊಂಡ ಜನ ಹಾವಿಗೆ ಕಲ್ಲು ಎಸೆದು ಕೊಂದಿದ್ದರು. ಕೊನೆಗೆ ವಿಷಯ ತಿಳಿದ ಸ್ನೇಕ್ ಶಿವಪ್ಪ, ಬರೋಬ್ಬರಿ ಬರೋಬ್ಬರಿ 27 ಹಾವುಗಳನ್ನು ರಕ್ಷಣೆ ಮಾಡಿದ್ದಾರೆ. ಮಾತ್ರವಲ್ಲದೇ ಹಾವುಗಳ ಮಾರಣಹೋಮದಿಂದ ಬೇಸತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    3 ವರ್ಷದ ಏರ್ ಶೋನಲ್ಲಿ ಐವತ್ತು ಹಾವನ್ನು ಕೊಂದು ಹಾಕಿದ್ದಾರೆ ಎಂದು ಆರೋಪ ಮಾಡಿದ ಶಿವಪ್ಪ, ನಾಗರಹಾವು ಕೊಂದ ಪಾಪ ಅವರಿಗೆ ಅಂಟಿಕೊಳ್ಳುತ್ತೆ. ಏರ್ ಶೋ ನಡೆಯೋ ಜಾಗಕ್ಕೂ ಕಂಟಕವಾಗಲಿದೆ. ಹಾವಿಗೆ ಸಂಸ್ಕಾರ ಮಾಡದೇ ಬೇಲಿ ಬದಿಯಲ್ಲಿ ಎಸೆದಿದ್ದಾರೆ. ಆ ಪಾಪ ಸುಮ್ಮನೆ ಬಿಡಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://www.youtube.com/watch?v=GXmywmnY7vE&feature=youtu.be