Tag: ವಾಟಾಳ್ ನಾಗಾರಾಜ್

  • ‘ಪರೀಕ್ಷೆ ನಡೆಸೋದಾದ್ರೆ ವಿದ್ಯಾರ್ಥಿ ಹೆಸರಿನಲ್ಲಿ 50 ಲಕ್ಷ ರೂ. ಡೆಪಾಸಿಟ್ ಇಡಿ’

    ‘ಪರೀಕ್ಷೆ ನಡೆಸೋದಾದ್ರೆ ವಿದ್ಯಾರ್ಥಿ ಹೆಸರಿನಲ್ಲಿ 50 ಲಕ್ಷ ರೂ. ಡೆಪಾಸಿಟ್ ಇಡಿ’

    – ಸಿಎಂಗೆ ವಾಟಾಳ್ ನಾಗರಾಜ್ ಆಗ್ರಹ

    ಚಾಮರಾಜನಗರ: ಎಸ್‍ಎಸ್‍ಎಲ್‍ಸಿ ಹಾಗೂ ಇನ್ನಿತರೇ ಪರೀಕ್ಷೆಗಳನ್ನು ಸರ್ಕಾರ ಮಾಡಲೇಬೇಕೆಂದರೇ ಪ್ರತಿಯೋರ್ವ ವಿದ್ಯಾರ್ಥಿ ಹೆಸರಿನಲ್ಲಿ 50 ಲಕ್ಷ ರೂ. ಹಾಗೂ ಶಿಕ್ಷಕರ ಹೆಸರಿನಲ್ಲಿ 25 ಲಕ್ಷ ರೂ. ಹಣ ಡೆಪಾಸಿಟ್ ಮಾಡಬೇಕು ಎಂದು ಕನ್ನಡ ಚಳವಳಿಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

    ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಇಂದು ಸಂಜೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವುದರ ವಿರುಧ್ಧ ಕೆಲಹೊತ್ತು ಪ್ರತಿಭಟಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕೊರೊನಾ ಜೊತೆ ಸರಸ ಸರಿಯಲ್ಲ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಳ್ಳದೇ ಎಲ್ಲರನ್ನೂ ಉತ್ತೀರ್ಣಗೊಳಿಸಬೇಕು. ಪರೀಕ್ಷೆ, ಪಾಸ್‍ಗಿಂತ ಜೀವವೇ ಮುಖ್ಯ ಎಂದು ಒತ್ತಾಯಿಸಿದರು.

    ಶಾಲಾ ಶುಲ್ಕದ ಹೊಣೆಯನ್ನು ಸರ್ಕಾರವೇ ಹೊರಬೇಕು. ಜೆಡಿಎಸ್, ಕಾಂಗ್ರೆಸ್, ಬಿಜೆಪಿಯ ಮುಖಂಡರು ನಡೆಸುವ ಶಾಲೆಗಳಲ್ಲಿ ಶುಲ್ಕ ವಸೂಲಿ ಮೊದಲು ನಿಲ್ಲಿಸಬೇಕು. ಪಾಲಕರಿಂದ ಯಾವುದೇ ರೀತಿ ಶುಲ್ಕ ಪಡೆಯಬಾರದೆಂದು ಒತ್ತಾಯಿಸಿ ಗುರುವಾರ ವಿಧಾನಸೌಧದ ಎದುರು ಏಕಾಂಗಿಯಾಗಿ ಮಲಗಿ ಪ್ರತಿಭಟಿಸುತ್ತೇನೆ ಎಂದು ತಿಳಿಸಿದರು.

  • ಬಿಜೆಪಿ ನಾಯಕರಿಗೆ ವಾಟಾಳ್ ನಾಗರಾಜ್ ಸವಾಲ್

    ಬಿಜೆಪಿ ನಾಯಕರಿಗೆ ವಾಟಾಳ್ ನಾಗರಾಜ್ ಸವಾಲ್

    ಬೆಂಗಳೂರು: ಮಹದಾಯಿ ಬಂದ್ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪ ಮಾಡಿದ್ದ ಬಿಜೆಪಿ ನಾಯಕರಿಗೆ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಸವಾಲು ಹಾಕಿದ್ದಾರೆ.

    ಕರ್ನಾಟಕ ಬಂದ್ ರಾಜಕೀಯ ಪ್ರೇರಿತ ಎಂದು ಹೇಳುತ್ತಿರುವ ಬಿಜೆಪಿ ನಾಯಕರು ಇಂದೇ ಪ್ರಧಾನಿ ಮೋದಿ ಅವರ ಜೊತೆ ಮಾತಾನಾಡಿ ಮಹದಾಯಿ ಸಮಸ್ಯೆಗೆ ನಾನು ಸ್ಪಂದಿಸುತ್ತೇವೆ ಎಂಬುದಾಗಿ ಹೇಳಿಸಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

    ಬಿಜೆಪಿ ನಾಯಕರು ಪ್ರಧಾನಿಗಳಿಂದ ಅಶ್ವಾಸನೆ ಹೇಳಿಕೆ ಕೊಟ್ಟರೆ ಒಂದು ಗಂಟೆಯೊಳಗೆ ಬಂದ್ ವಿಚಾರವನ್ನು ಕೈ ಬಿಡಲಿದ್ದೇವೆ. ಆದರೆ ಪರಿಕ್ಕರ್ ರಿಂದ ಪತ್ರದ ತರುವ ಮೂಲಕ ಯಡಿಯೂರಪ್ಪ ಅವರು ನಾಟಕ ಮಾಡಿದ್ದಾರೆ. ಆ ರೀತಿ ನಮಗೆ ನಾಟಕ ಮಾಡಲು ಬರುವುದಿಲ್ಲ ಎಂದು ಟಾಂಗ್ ನೀಡಿದರು.

    ಕನ್ನಡ ಸಂಘಟನೆಗಳು ಯಾವ ಪಕ್ಷದ ಸ್ವತ್ತು ಅಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕರ್ನಾಟಕ ಬಂದ್‍ಗೆ ಬೆಂಬಲ ನೀಡಿದೆ. ಯಡಿಯೂರಪ್ಪ ನವರೇ ನೀವು ಬಂದ್ ಗೆ ಬೆಂಬಲ ಕೊಡಿ ನಿಮ್ಮನ್ನು ಯಾರು ಬೇಡ ಎಂದು ಹೇಳುತ್ತಾರೆ. ನಿಮ್ಮ ನಡುವಿನ ರಾಜಕೀಯಕ್ಕೆ ಹೋರಾಟಕ್ಕೆ ನಮ್ಮನ್ನು ತಳುಕು ಹಾಕುವುದಕ್ಕೆ ಹೋಗಬೇಡಿ ಎಂದು ವಾಗ್ದಾಳಿ ನಡೆಸಿದರು.