Tag: ವಸತಿಗೃಹ

  • ವಸತಿಗೃಹಗಳಲ್ಲಿ ಇರೋರು ಇನ್ಮುಂದೆ ಕಟ್ಬೇಕು ಜಿಎಸ್‌ಟಿ – ಹಾಸ್ಟೆಲ್, ಪಿಜಿಗಳ ಬೆಲೆ ಏರಿಕೆಗೆ ನಿರ್ಧಾರ

    ವಸತಿಗೃಹಗಳಲ್ಲಿ ಇರೋರು ಇನ್ಮುಂದೆ ಕಟ್ಬೇಕು ಜಿಎಸ್‌ಟಿ – ಹಾಸ್ಟೆಲ್, ಪಿಜಿಗಳ ಬೆಲೆ ಏರಿಕೆಗೆ ನಿರ್ಧಾರ

    ಬೆಂಗಳೂರು: ಜನಸಾಮಾನ್ಯರಿಗೆ ದಿನಕ್ಕೊಂದು ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ದಿನಸಿ ಪದಾರ್ಥ, ತರಕಾರಿ ಬೆಲೆ ಏರಿಕೆ ಆಯಿತು. ಇದೀಗ ಪಿಜಿ (PG) ಹಾಗೂ ಹಾಸ್ಟೆಲ್ (Hostel) ಬಾಡಿಗೆ (Rent) ಬೆಲೆ ಏರಿಕೆಯಾಗಲಿದ್ದು, ವಿದ್ಯಾರ್ಥಿಗಳು ಹಾಗೂ ಬ್ಯಾಚುಲರ್‌ಗಳ ಜೇಬಿಗೆ ಕನ್ನ ಹಾಕಲಿದೆ.

    ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ ಕಾದಿದೆ. ಇನ್ನುಮುಂದೆ ಪಿಜಿ ಹಾಗೂ ಹಾಸ್ಟೆಲ್‌ಗಳಲ್ಲಿ ವಾಸಿಸುವವರು ಸಹ ಜಿಎಸ್‌ಟಿ (GST) ಕಟ್ಟಬೇಕು. ಇದು ವಿದ್ಯಾರ್ಥಿಗಳು, ಬ್ಯಾಚುಲರ್‌ಗಳಿಗೆ ಹಾಗೂ ಒಬ್ಬಂಟಿ ಉದ್ಯೋಗಿಗಳಿಗೆ ಹೊರೆಯಾಗಲಿದೆ. ದಿನದ ಬಾಡಿಗೆ 1,000 ರೂ.ಗಿಂತ ಕಡಿಮೆಯಿದ್ದರೆ 12% ಜಿಎಸ್‌ಟಿ ಹಾಗೂ ಸಾವಿರಕ್ಕಿಂತ ಹೆಚ್ಚಿದ್ದರೆ 18% ಜಿಎಸ್‌ಟಿ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜೊತೆಗೆ ಬೆಂಗಳೂರಿನ (Bengaluru) ಜಿಎಸ್‌ಟಿ ಅಡ್ವಾನ್ಸ್ ರೂಲಿಂಗ್ ಪೀಠ ಈ ಬಗ್ಗೆ ಆದೇಶ ನೀಡಿದೆ. ಇದನ್ನೂ ಓದಿ: ಮೈಸೂರಿಗೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

    ಇನ್ನೂ ಈ ಜಿಎಸ್‌ಟಿ ವಿಧಿಸುವ ನಿರ್ಧಾರದಿಂದಾಗಿ, ಬೆಂಗಳೂರಲ್ಲಿ ಪಿಜಿಗಳ ದರ ಏರಿಕೆ ಅನಿವಾರ್ಯವೆಂದು ಬೆಂಗಳೂರು ಪಿಜಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಹೇಳಿದೆ. ಅಲ್ಲದೇ ಜಿಎಸ್‌ಟಿಯನ್ನು ವಿದ್ಯಾರ್ಥಿಗಳಿಂದ ಪಡೆಯಲಾಗುವುದು ಎಂದು ಹೇಳಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಬ್ಯಾಚುಲರ್‌ಗಳಿಗೆ ಹಾಗೂ ಒಬ್ಬಂಟಿ ಉದ್ಯೋಗಿಗಳಿಗೆ ಸಾಕಷ್ಟು ಹೊಡೆತ ಬೀಳಲಿದೆ. ಈಗಾಗಲೇ ಬೆಂಗಳೂರಲ್ಲಿ ಪಿಜಿ ಹಾಗೂ ಹಾಸ್ಟೆಲ್‌ಗಳ ಬಾಡಿಗೆ ಸಾಕಷ್ಟು ಹೆಚ್ಚಿದೆ. ಈ ಜಿಎಸ್‌ಟಿ ನಿರ್ಧಾರ ವಿದ್ಯಾರ್ಥಿಗಳ ಜೇಬಿಗೆ ಕತ್ತರಿ ಬೀಳಲಿದೆ. ಇದನ್ನೂ ಓದಿ: ಚಿಕ್ಕಮಗಳೂರು ದೇವೀರಮ್ಮ ದೇವಾಲಯಕ್ಕೆ ಸ್ಕರ್ಟ್, ಮಿಡಿ, ಪ್ಯಾಂಟ್ ಹಾಕ್ಕೊಂಡು ಬರುವಂತಿಲ್ಲ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 300 ರೋಗಿಗಳಿಗೆ ಮೂರೇ ವೈದ್ಯರು – ವಸತಿಗೃಹದಲ್ಲಿ ಹಾವು, ಚೇಳುಗಳ ದರ್ಬಾರ್

    300 ರೋಗಿಗಳಿಗೆ ಮೂರೇ ವೈದ್ಯರು – ವಸತಿಗೃಹದಲ್ಲಿ ಹಾವು, ಚೇಳುಗಳ ದರ್ಬಾರ್

    ಬೆಳಗಾವಿ: ಒಂದೆಡೆ ಖಾಸಗಿ ಆಸ್ಪತ್ರೆಗಳಿಗೆ ಮೂಗುದಾರ ತೊಡಿಸಲು ಸರ್ಕಾರ ಮುಂದಾಗಿದೆ. ಆದರೆ ಮತ್ತೊಂದೆಡೆ ಸರ್ಕಾರಿ ಆಸ್ಪತ್ರೆಗಳೇ ಐಸಿಯುನಲ್ಲಿದೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕಬ್ಬೂರು ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುತ್ತಮುತ್ತಲಿನ 10 ಹಳ್ಳಿಗಳಿಂದ ದಿನನಿತ್ಯ ಇನ್ನೂರರಿಂದ ಮುನ್ನೂರು ರೋಗಿಗಳು ಬರುತ್ತಾರೆ. ಆದ್ರೆ ಸೂಕ್ತ ಸಮಯದಲ್ಲಿ ಇಲ್ಲಿ ಚಿಕಿತ್ಸೆ ಸಿಗುವುದು ಮಾತ್ರ ಅಪರೂಪ.

    ಇಲ್ಲಿರುವುದು ಕೇವಲ ಮೂರು ವೈದ್ಯರು ಹಾಗೂ ಮೂವರು ನರ್ಸ್‍ಗಳು ಮಾತ್ರ. ಡಿ ದರ್ಜೆ ಸಿಬ್ಬಂದಿಯಿರುವುದು ಕೇವಲ ಒಬ್ಬರು ಮಾತ್ರ. ಹಲವು ಬಾರಿ ಗರ್ಭಿಣಿಯರಿಗೆ ನರ್ಸಗಳೇ ಹೆರಿಗೆ ಮಾಡಿಸಿದ್ದಾರೆ. ಮತ್ತೊಂದಡೆ ವೈದ್ಯರಿಗಾಗಿ ನಿರ್ಮಿಸಲಾಗಿರುವ ವಸತಿ ಗೃಹಗಳು ಹಾವು ಚೇಳುಗಳ ಆವಾಸ ಸ್ಥಾನವಾಗಿದೆ.