Tag: ವಶಿಷ್ಠ

  • ಯಶ್ ಬಗ್ಗೆ ಕೆಜಿಎಫ್ ಕೇಡೀಸ್ ಖಡಕ್ ಮಾತು

    ಯಶ್ ಬಗ್ಗೆ ಕೆಜಿಎಫ್ ಕೇಡೀಸ್ ಖಡಕ್ ಮಾತು

    ವಿಶೇಷ ವರದಿ

    ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಸಿನಿಮಾ ಭಾರತದಾದ್ಯಂತ ಚಂದನವನದ ಬಗ್ಗೆ ಮಾತನಾಡುವಂತೆ ಮಾಡಿದೆ. ಅಷ್ಟರ ಮಟ್ಟಿಗೆ ಕನ್ನಡ ಸಿನಿಮಾವನ್ನು ಒಂದು ಹಂತಕ್ಕೆ ಕೆಜಿಎಫ್ ಸಿನಿಮಾ ತೆಗೆದುಕೊಂಡು ಹೋಗಿದೆ. ಕೆಜಿಎಫ್ ಸಿನಿಮಾದಲ್ಲಿ ನಟರಾಗಿ ಮಿಂಚಿದ್ದ ಯಶ್ ಬಗ್ಗೆ ಅದೇ ಸಿನಿಮಾ ಖಳನಾಯಕರಾದ ವಶಿಷ್ಠ ಸಿಂಹ, ವಿನಯ್, ರಾಮ್, ಲಕ್ಕಿ ಮತ್ತು ಅವಿನಾಶ್ ಮಾತನಾಡಿದ್ದಾರೆ.

    ಯಶ್ ಬಗ್ಗೆ ವಶಿಷ್ಠ ಅವರ ಮಾತು:
    ರಾಜಾಹುಲಿ ಸಿನಿಮಾ ರಿಲೀಸ್ ಆದ ಮೇಲೆ ನನಗೆ ಸಿನಿಮಾ ಇಂಡಸ್ಟ್ರೀ ಬಗ್ಗೆ ಏನು ಗೊತ್ತಿರಲಿಲ್ಲ. ಅಂದು ರಾಜಾಹುಲಿ ಸಿನಿಮಾ ತುಂಬಾ ಹಿಟ್, ಅದ್ಭುತವಾಗಿತ್ತು. ಬಳಿಕ ನನಗೆ ಚಿಕ್ಕಣ್ಣ ಕರೆ ಮಾಡಿ ಯಶ್ ಮಾತನಾಡುತ್ತಾರೆ ಎಂದು ಅವರ ಕೈಯಲ್ಲಿ ಫೋನ್ ಕೊಟ್ಟರು. ನಾನು ಯಶ್ ಹೇಳಿ ಎಂದೆ, ಆಗ ಅವರು ವಶಿಷ್ಠ ತಾಳ್ಮೆಯಿಂದ ಇರು. ನಿನಗೆ ಸಾಕಷ್ಟು ಫೋನ್‍ಗಳು ಮತ್ತು ಸಿನಿಮಾ ಆಫರ್ ಗಳು ಬರುತ್ತವೆ. ಆದರೆ ನೀನು ದುಡುಕಬೇಡ. ಟ್ಯಾಲೆಂಟ್ ಇರುವವರು ಮತ್ತು ಈ ರೀತಿ ಕಾಣಿಸಿಕೊಂಡು ಮುಖ ಪರಿಯಚವಾದರು ಸಿಗಲಿ ಎಂದು ಸಾಕಷ್ಟು ಜನರು ಕಾಯುತ್ತಿರುತ್ತಾರೆ. ಆದರೆ ನೀನು ಜೀವನದಲ್ಲಿ ಏನು ಮಾಡಬೇಕು ಅಂದುಕೊಂಡಿದ್ದೀಯಾ ಅದನ್ನು ನಿರ್ಧಿಷ್ಟವಾಗಿ ಪ್ಲಾನ್ ಮಾಡಿಕೊಂಡು ಕಾದು ನೋಡಿ ಅದರ ಫಲ ತಾನಾಗಿ ನಿನಗೆ ಸಿಗುತ್ತದೆ ಎಂದು ಹೇಳಿದ್ದರು.

    ಯಶ್ ಅವರು ಸಿಕ್ಕಿದ್ರೆ ಕೆರಿಯರ್, ಮುಂದೆ ಏನು ಮಾಡಬೇಕು, ಏನು ನಿರ್ಧಾರ ಮಾಡಬೇಕು, ಮುಂದಿನ ಪ್ಲಾನ್ ಏನು ಮಾಡಿಕೊಂಡಿದ್ದೀಯಾ ಇದರ ಬಗ್ಗೆಯೇ ಮಾತನಾಡುತ್ತಿದ್ದರು. ಕನ್ನಡದಲ್ಲಿ ಖಳನಟರೇ ಇಲ್ಲ ಎಂದಿದ್ದರು. ಅಂದು ರಾಜಾಹುಲಿಯಲ್ಲಿ ಮಾಡಿದ್ದ ಸಣ್ಣ ಪಾತ್ರಗಳು ತುಂಬಾ ಚೆನ್ನಾಗಿತ್ತು. ಆಗಲೂ ಯಶ್ ಹೊಸ ಹುಡುಗರು ಬರಲಿ ಎಂದು ಹೇಳುತ್ತಿದ್ದರು. ಅದರಂತೆಯೇ ಕೆಜಿಎಫ್ ನಲ್ಲೂ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದ್ರು.

    ಯಶ್ ಅವರಿಗೆ, ನಾವು ಎನು ಮಾಡುತ್ತಿದ್ದೇವೆ ಎಂಬ ನಿರ್ಧಿಷ್ಟವಾದ ಕ್ಲ್ಯಾರಿಟಿ ಇರುತ್ತದೆ. ಅವರು ಯಾವಾಗಲೂ ನಮ್ಮ ಇಂಡಸ್ಟ್ರೀಗೆ ಕಲಾವಿದರ ಬರಬೇಕು ಎಂದು ಹೇಳುತ್ತಿರುತ್ತಾರೆ. ನನಗೆ ಇಷ್ಟವಾದ ವಿಷಯವೆಂದರೆ ಯಶ್ ಅವರನ್ನು ಅವತ್ತು ನೋಡಿದ ಕಲ್ಪನೆ ಇನ್ನೂ ಬದಲಾಗಿಲ್ಲ. ಈಗಲೂ ಅದೇ ರೀತಿ ಇದ್ದಾರೆ. ಈಗ ಇನ್ನೂ ಒಳ್ಳೆಯ ಕೆಲಸ ಮಾಡೋಣ ಎಂದು ಅವರ ಆಸೆ, ಬಯಕೆ ಹೆಚ್ಚಾಗಿದೆ ಅಂದುಕೊಳ್ಳಬಹುದು ಅಂತ ವಶಿಷ್ಠ ಅವರು ಹೇಳಿದ್ದಾರೆ.

    ಇವೆಲ್ಲ ನಮ್ಮ ಜೀವನದ ನೆನಪಿನಲ್ಲಿ ಚಿರಕಾಲ ಉಳಿಯುತ್ತವೆ. ಯಾಕೆಂದರೆ ಯಾವತ್ತೂ ಯಾರೆಯಾಗಲಿ ನಮ್ಮನ್ನು ಗುರುತಿಸಬೇಕು ಅನ್ನುತ್ತೀವಿ, ನಮ್ಮನ್ನು ಗುರುತಿಸಿದರೆ ಕೆಲಸ ಸಿಗುತ್ತದೆ ಎಂದು ಯೋಚನೆ ಮಾಡುತ್ತೇವೆ. ಆದರೆ ಗುರುತಿಸಿಕೊಳ್ಳೋದು, ಗುರುತಿಸುವದನ್ನು ಮೀರಿ ಈ ಸಿನಿಮಾ ನಮ್ಮೆಲ್ಲರಿಗೂ ಇಂದು ಒಂದು ಸ್ಥಾನ-ಮಾನವನ್ನು ದೊರಕಿಸಿಕೊಟ್ಟಿದೆ. ಜೊತೆಗೆ ನಿಮ್ಮಂತ ಅದ್ಭುತ ಕಲಾವಿದರನ್ನು ಕೊಟ್ಟಿದೆ ಎಂದು ಉಳಿದ ಕಲಾವಿದರಿಗೆ ಹೇಳಿದ್ದಾರೆ.

    ರಾಮ್
    ಕಲಾವಿದರ ಬಳಿ ಯಾವ ಟ್ಯಾಲೆಂಟ್ ಇರುತ್ತವೆ ಎಂದು ಯಶ್ ಅವರು ಯೋಚನೆ ಮಾಡುತ್ತಾರೆ. ಒಂದು ವೇಳೆ ಅವರ ಟ್ಯಾಲೆಂಟ್ ನೋಡಿದರೆ ಮಾತ್ರ ಬಿಡುವುದಿಲ್ಲ. ಅವರಿಗೆ ತುಂಬಾ ಬೆಂಬಲ ಕೊಡುತ್ತಾರೆ. ಅಂದು ನಮ್ಮ ಬಾಸ್‍ನ್ನು ಹೇಗೆ ನೋಡಿದ್ದೇನೆ ಇಂದು ಹಾಗೆ ನೋಡುತ್ತಿದ್ದೇನೆ. ಇಂದು ಕನ್ನಡವನ್ನು ಈ ಹಂತಕ್ಕೆ ತೆಗೆದುಕೊಂಡು ಹೋಗಬಹುದೆಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಇದು ಖುಷಿಯ ವಿಚಾರವಾಗಿದೆ. ಹಿಂದಿಯಲ್ಲಿ ಯಾರೋ ಕನ್ನಡ್ ಕನ್ನಡ್ ಅನ್ನುತ್ತಿದ್ದರು. ಅವರಿಗೆ ಕನ್ನಡ ಎಂದು ಯಶ್ ಹೇಳಿಕೊಟ್ಟಿದ್ದರು ಎಂದು ಹೇಳಿದ್ದಾರೆ.

    ಲಕ್ಕಿ
    ”This Is The Just Beginning, ನೋಡುತ್ತೀರಿ ಕನ್ನಡ ಸಿನಿಮಾ ಯಾವ ಹಂತಕ್ಕೆ ಹೋಗುತ್ತದೆ’ ಎಂದು ಯಶ್ ಬಾಸ್ ಸೈಮಾದಲ್ಲಿ ಅವಾರ್ಡ್ ತೆಗೆದುಕೊಳ್ಳುವಾಗ ಈ ಡೈಲಾಗ್ ಹೇಳಿದ್ದರು. ಅಂದೆ ಯಶ್ ಅವರಿಗೆ ಕನ್ನಡ ಸಿನಿಮಾವನ್ನು ಇಡೀ ಭಾರತ, ಇಂಟರ್ ನ್ಯಾಷನಲ್ ವರೆಗೂ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದರು. ಅದರಂತೆಯೇ ಅವರ ಹಾರ್ಡ್ ವರ್ಕ್ ಮೂಲಕ ಇಂದು ಕೆಜಿಎಫ್ ಸಿನಿಮಾ ಮೂಲಕ ತೆಗೆದುಕೊಂಡು ಹೋಗಿದ್ದಾರೆ, ಹ್ಯಾಟ್ಸ್ ಅಪ್ ಅವರಿಗೆ ಎಂದ್ರು.

    ವಿನಯ್
    ಯಶ್ ಅವರು ಫಸ್ಟ್ ದಿನದಿಂದಲೂ ಇಂದಿನ ದಿನವರೆಗೂ ಚೂರು ಬದಲಾಗಿಲ್ಲ ಒಂದೇ ರೀತಿ ಇದ್ದಾರೆ. ಈ ಹಿಂದೆ ನಾನು ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿಯಲ್ಲಿ ಫರ್ಹಾನ್ ಎಂಬ ಚಿಕ್ಕ ಪಾತ್ರವನ್ನು ಮಾಡಿದ್ದೆ. ಲಕ್ಕಿ ಸಿನಿಮಾದಿಂದ ಮತ್ತೆ ಯಶ್ ಜೊತೆಗಿನ ನನ್ನ ಒಡನಾಟ ಹೆಚ್ಚಾಯ್ತು. ಒಂದು ದಿನ ನಿರ್ದೇಶಕ ಸೂರಿ ಸರ್ ಕೆಜಿಎಫ್ ಸಿನಿಮಾ ಆಡಿಷನ್ ನಡೆಯುತ್ತಿರೋದರ ಮಾಹಿತಿ ನೀಡಿದರು. ಅಲ್ಲಿಗೆ ಹೋಗಿ ಆಡಿಷನ್ ನೀಡಿ ಕೆಜಿಎಫ್ ಸಿನಿಮಾಗೆ ಸೆಲೆಕ್ಟ್ ಆದೆ ಎಂದು ವಿನಯ್ ಹೇಳ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್ ನಟರ ಗಡ್ಡದ ಹಿಂದಿದೆ ರೋಚಕ ಕಥೆ

    ಕೆಜಿಎಫ್ ನಟರ ಗಡ್ಡದ ಹಿಂದಿದೆ ರೋಚಕ ಕಥೆ

    ವಿಶೇಷ ವರದಿ:

    ಕೆಜಿಎಫ್ ಸಿನಿಮಾ ನೋಡಿದವರಿಗೆ ಪ್ರತಿಯೊಂದು ದೃಶ್ಯದಲ್ಲಿ ಆರು ಅಡಿ ಎತ್ತರದ ಗಡ್ಡಧಾರಿಗಳು ಕಾಣಿಸುತ್ತಾರೆ. ಸಿನಿಮಾಗಾಗಿ ಗಡ್ಡ ಬಿಟ್ಟಿದ್ದ ಕಲಾವಿದರು ಕುಟುಂಬಸ್ಥರಿಂದ ಬೈಯಿಸಿಕೊಂಡಿದ್ದಾರೆ. ಈ ಬಗ್ಗೆ ಖುದ್ದು ಎಲ್ಲ ನಟರು ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಆಡಿಷನ್ ಬಂದಾಗ ನಿರ್ದೇಶಕ ಪ್ರಶಾಂತ್ ನೀಲ್ ಯಾರು ಶೇವಿಂಗ್ ಮಾಡಕೂಡದು ಎಂಬ ಕಂಡೀಷನ್ ಹಾಕಿದ್ದಾರಂತೆ. ಸಿನಿಮಾ ಮುಗಿಯುವವರೆಗೂ ಕೇವಲ ಟ್ರಿಮ್ ಮಾಡಿಕೊಳ್ಳಬೇಕು ಅಂತಾ ಸೂಚಿಸಿದ್ದರಂತೆ.

    ಗರುಡ/ರಾಮ್: ಆಡಿಷನ್ ನೀಡಿ ಆಯ್ಕೆಯಾದಾಗ ಪ್ರಶಾಂತ್ ನೀಲ್ ಗಡ್ಡ ಬಿಡಬೇಕೆಂದು ಹೇಳಿದರು. ನಾನು ನಿರ್ದೇಶಕರು ಹೇಳಿದಂತೆ ಗಡ್ಡ ಬಿಟ್ಟೆ. ನನ್ನ ಮಗನಿಗೆ ಎರಡೂವರೆ ವರ್ಷ ಆತ ನನ್ನನ್ನು ಗಡ್ಡದಲ್ಲಿಯೇ ನೋಡಿದ್ದಾನೆ. ನನ್ನ ಗಡ್ಡ ನೋಡಿದ ನೆರೆಹೊರೆಯಯವರು ಏನಾಯ್ತು ಇವನಿಗೆ ಎಂದು ಮಾತನಾಡಿಕೊಳ್ಳಲು ಆರಂಭಿಸಿದರು. ಮನೆಗೆ ಯಾರಾದರೂ ಗೆಸ್ಟ್ ಬಂದರೆ ಹೊರ ಹೋಗ್ತಿದ್ದೆ. ಎಲ್ಲರೂ ಹೋದ ಮೇಲೆ ಮನೆಯಿಂದ ಫೋನ್ ಮಾಡಿ ಹೇಳೋರು. ಎಲ್ಲರು ಹೋದ್ರು ಬನ್ನಿ ಅಂದಾಗ ಹೋಗ್ತಿದ್ದೆ ಅಂತಾ ರಾಮ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

    ಸಿನಿಮಾಗೂ ಮುನ್ನ ತುಂಬಾ ನಗ್ತಾ ಇದ್ದೆ. ಶೂಟಿಂಗ್ ಆರಂಭಕ್ಕೂ ಮುನ್ನ ಪ್ರಶಾಂತ್ ಸರ್ ಆರು ತಿಂಗಳು ನಗಬೇಡ ಅಂತಾ ಹೇಳಿದರು. ಅವರ ಮಾತಿನಂತೆ ನನ್ನ ಮಾತುಗಳನ್ನು ಕಡಿಮೆ ಮಾಡಿಕೊಂಡೆ. ಪ್ರತಿಯೊಂದು ಹಂತದಲ್ಲಿಯೂ ಪ್ರಶಾಂತ್ ಸರ್ ನಮ್ಮನ್ನು ತಿದ್ದಿ ತೀಡಿದ್ದಾರೆ. ಆರು ತಿಂಗಳ ನಂತರ ಸಿನಿಮಾಗೆ ಮಾಸ್ ಲುಕ್ ಬಂತು ಅಂತಾ ಅಂದ್ರು.

    ವಿನಯ್:
    ನಾನು ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದೆ. ಕಾರ್ಪೋರೇಟರ್ ಲುಕ್ ನಲ್ಲಿ ಕ್ಲೀನ್ ಶೇವಿಂಗ್ ಇರುತ್ತಿತ್ತು. ವರ್ಕ್ ಶಾಪ್‍ಗೆ ಬಂದಾಗ ಡೈಲಾಗ್ ಕೊಟ್ಟರು ಹೇಳಿದೆ. ಮೊದಲ ದಿನವೇ ಪ್ರಶಾಂತ್ ಸರ್ 20 ನಿಮಿಷ ಕ್ಲಾಸ್ ತೆಗೆದುಕೊಂಡರು. ನಾನು ಕೆಲಸ ಮಾಡತಕ್ಕಂತಹ ಸ್ಥಳದಲ್ಲಿ ನಾನೇ ಯಾಕೆ ಶೇವ್ ಮಾಡಿಲ್ಲ ಅಂತ ಪ್ರಶ್ನೆ ಮಾಡಬೇಕಿತ್ತು. ಆದ್ರೆ ನನ್ನ ಗಡ್ಡ ನೋಡಿಕೊಂಡು ಸುಮ್ಮನಾಗುತ್ತಿದ್ದೆ. ಸಿನಿಮಾಗಾಗಿ ಗಡ್ಡ ಬಿಡ್ತಿದ್ದೇನೆ ಅಂತಾ ಚೇರ್‍ಮೆನ್ ಅವರಿಂದ ಪರ್ಮಿಷನ್ ತೆಗೆದುಕೊಂಡಿದ್ದರಿಂದ ಯಾರು ನನ್ನನ್ನು ಪ್ರಶ್ನೆ ಮಾಡುತ್ತಿರಲಿಲ್ಲ.

    ಲಕ್ಕಿ:
    ನಾನು ಐಟಿ ಸೆಕ್ಟರ್ ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುವಂತಹ ವ್ಯಕ್ತಿ. ಯಾವತ್ತೂ ಗಡ್ಡ ಮೀಸೆ ಬಿಟ್ಟವನು ನಾನಲ್ಲ. ಪ್ರಶಾಂತ್ ಸರ್ ಫೋನ್ ಮಾಡಿ ನನ್ನ ಆಸೆ ಹೇಳಿದಾಗ, ಸಂಜಯ ನಗರ ಆಫೀಸಿಗೆ ಹೋಗಿ ಅಲ್ಲಿ ನಿಮಗೆ ನನ್ನ ಸಹಾಯಕರು ತರಬೇತಿ ಕೊಡ್ತಾರೆ. ಆದ್ರೆ ಎರಡು ಕಂಡೀಷನ್ ಹಾಕಿದರು. ಒಂದು ಗಡ್ಡ ಮತ್ತು ಮೀಸೆ ಬಿಡಬೇಕು, ಇನ್ನೊಂದು ತರಬೇತಿಯಲ್ಲಿ ನಮ್ಮ ಚಿತ್ರಕ್ಕೆ ನೀವು ಸೂಟ್ ಆಗಲಿಲ್ಲ ಅಂದ್ರೆ ಚಾನ್ಸ್ ನೀಡೊದಕ್ಕೆ ಸಾಧ್ಯವಿಲ್ಲ. ಸಿನಿಮಾಗೆ ಚಾನ್ಸ್ ಕೊಟ್ಟಿಲ್ಲ ದೋಸ್ತಿ ಬಿಡುವಂತಿಲ್ಲ ಅಂತಾ ಹೇಳಿದ್ದರು. 2016ರಲ್ಲಿಯೇ ನಾನು ಗಡ್ಡ ಮತ್ತು ಮೀಸೆಗೆ ಸಂಪೂರ್ಣ ಕತ್ತರಿ ಹಾಕದೇ ಕೇವಲ ಟ್ರಿಮ್ ಮಾಡಿಕೊಂಡು ಬಂದಿದ್ದೇನೆ.

    ಅವಿನಾಶ್:
    ನನಗೆ ಗಡ್ಡ ಬಿಡೋದಕ್ಕೆ ಯಾವುದೇ ತೊಂದರೆ ಆಗಲಿಲ್ಲ. ಕಾರಣ ನಾನು ಸ್ವಂತ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸುತ್ತಿದ್ದೇನೆ. ಬಾಸ್ ನಾನೇ ಆಗಿದ್ದರಿಂದ ಯಾರು ಪ್ರಶ್ನೆ ಮಾಡಲಿಲ್ಲ. 2015 ಅಕ್ಟೋಬರ್ ನಿಂದಲೇ ತರಬೇತಿ ತೆಗೆದುಕೊಳ್ಳಲು ಆರಂಭಿಸಿದಾಗ, ನಾವೇನು ಮಾಡುತ್ತಿದ್ದೇವೆ, ಯಾವುದಕ್ಕೆ ಈ ಎಲ್ಲ ತರಬೇತಿ ಅಂತಾ ಗೊತ್ತಾಗುತ್ತಿರಲಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್ ನಮ್ಮ ನಿಜ ಜೀವನದಲ್ಲಿ ಆ ಪಾತ್ರವನ್ನು ತರಿಸಿದ್ದರು. ಇದನ್ನೂ ಓದಿ: ರಣ ರಣ ಲುಕ್‍ನಲ್ಲಿ ಮಿಂಚಿರುವ ಕೆಜಿಎಫ್ ಕಿಲಾಡಿಗಳ ಸಿನಿಮಾ ಜರ್ನಿ ಆರಂಭದ ಕಥೆ

    ಶೂಟಿಂಗ್ ಆರಂಭಕ್ಕೂ ಮುನ್ನವೇ ಕಥೆಗೆ ಬೇಕಾದ ಪಾತ್ರಗಳನ್ನು ಪ್ರಶಾಂತ್ ನೀಲ್ ಸೃಷ್ಟಿಸಿಕೊಂಡಿದ್ದರು ಎಂಬುದು ಕಲಾವಿದರ ಮಾತುಗಳಲ್ಲಿ ಗೊತ್ತಾಗುತ್ತದೆ. ಚಿತ್ರದ ಮತ್ತೋರ್ವ ನಟ ವಶಿಷ್ಟ ಹೇಳುವಂತೆ ನಿರ್ದೇಶಕರು ಫೇಮಸ್ ಆಗಿರುವ ಕಲಾವಿದರನ್ನು ಚಿತ್ರಕ್ಕಾಗಿ ಕರೆತರಲಿಲ್ಲ. ಕಥೆಗೆ ಬೇಕಾದ ಪಾತ್ರಗಳಿಗಾಗಿ ಹುಡುಕಾಟ ನಡೆಸಿ, ತರಬೇತಿ ಕೊಟ್ಟು ಚಿತ್ರಕ್ಕಾಗಿ ಎರಡ್ಮೂರು ವರ್ಷ ಕೆಲಸ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಣ ರಣ ಲುಕ್‍ನಲ್ಲಿ ಮಿಂಚಿರುವ ಕೆಜಿಎಫ್ ಕಿಲಾಡಿಗಳ ಸಿನಿಮಾ ಜರ್ನಿ ಆರಂಭದ ಕಥೆ

    ರಣ ರಣ ಲುಕ್‍ನಲ್ಲಿ ಮಿಂಚಿರುವ ಕೆಜಿಎಫ್ ಕಿಲಾಡಿಗಳ ಸಿನಿಮಾ ಜರ್ನಿ ಆರಂಭದ ಕಥೆ

    -ಕೆಜಿಎಫ್ ಚಿತ್ರದಲ್ಲಿ ಅವಕಾಶ ಸಿಕ್ಕಿದ್ದನ್ನು ಬಿಚ್ಚಿಟ್ಟ ವಿಲನ್‍ಗಳು

    ವಿಶೇಷ ವರದಿ
    ಕೆಜಿಎಫ್ ಚಿತ್ರತಂಡದ ಕಲಾವಿದರೇ ಸಿನಿಮಾದ ಪ್ಲಸ್ ಪಾಯಿಂಟ್. ಚಿತ್ರದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಹೊಸ ಮುಖಗಳನ್ನು ಚಂದನವನಕ್ಕೆ ಪರಿಚಯಿಸಿದ್ದಾರೆ. ಚಿತ್ರದುದ್ದಕ್ಕೂ ನಿಮಗೆ ಆರು ಅಡಿ ಎತ್ತರದ ಗಡ್ಡದಾರಿಗಳು ಕಾಣ ಸಿಗುತ್ತಾರೆ. ಕೆಜಿಎಫ್ ಕಲಾವಿದರಿಗಾಗಿ ಸಿನಿಮಾವನ್ನು ಮಾಡಿಲ್ಲ. ಕಥೆಗಾಗಿಯೇ ಹೊಸ ಕಲಾವಿದರಿಗೆ ಕೆಜಿಎಫ್ ಜನ್ಮ ನೀಡಿದೆ ಅಂತಾ ಹೇಳಿದ್ರೆ ತಪ್ಪಾಗಲಾರದು. ಸಿನಿಮಾದ ಚಿಕ್ಕ ಪಾತ್ರದಲ್ಲಿಯೂ ಕಾಣಿಸಿಕೊಳ್ಳುವ ಪ್ರತಿಯೊಬ್ಬ ಕಲಾವಿದ ನೋಡುಗರಿಗೆ ಇಷ್ಟವಾಗುತ್ತಾನೆ. ಇನ್ನು ವಿಲನ್ ಪಾತ್ರಗಳಲ್ಲಿ ಮಿಂಚಿರುವ ರಾಮ್, ವಿನಯ್, ಲಕ್ಕಿ, ಅವಿನಾಶ್ ಮತ್ತು ವಶಿಷ್ಠ ಎಲ್ಲರು ಕೆಜಿಎಫ್ ಚಿತ್ರ ಯಶಸ್ಸಿನ ಮತ್ತೊಂದು ಕಾರಣ. ನಟ ವಷಿಷ್ಠ ತಮ್ಮ ಕಂಚಿನ ಕಂಠದ ಮೂಲಕವೇ ಗುರುತಿಸಿಕೊಂಡ ಕಲಾವಿದ. ಇನ್ನುಳಿದ ನಾಲ್ವರಿಗೂ ಕೆಜಿಎಫ್ ಮೊದಲ ಚಿತ್ರವಾಗಿದ್ದರೂ, ಯಾವ ಅನುಭವಿ ನಟರಿಗೂ ಕಡಿಮೆ ಇಲ್ಲ ಎಂಬಂತೆ ನಟಿಸಿದ್ದಾರೆ. ಹಾಗಾದ್ರೆ ಎಲ್ಲ ಕಿಲಾಡಿಗಳಿಗೆ ಸಿನಿಮಾ ಸಿಕ್ಕಿದ್ದು ಹೇಗೆ ಎಂಬುದರ ಕಥೆ ಇಲ್ಲಿದೆ.

    1. ರಾಮ್:
    ನಾನು ಈ ರೀತಿ ಮೈಲಿಗಲ್ಲು ಸಿಕ್ಕಿದೆ ಎಂಬುವುದೇ ಖುಷಿ. ನಾನು ಯಶ್ ಜೊತೆ 12 ವರ್ಷಗಳ ಒಡನಾಟ. ನನ್ನ ಕೆಲಸ ಸಾರ್ವಜನಿಕ ಸ್ಥಳಗಳಲ್ಲಿ ಯಶ್ ಅವರಿಗೆ ರಕ್ಷಣೆ ಮಾಡುವುದು. ಯಶ್ ಅಂದ ಕೂಡಲೇ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ನಾನು ಎಲ್ಲರ ಪಕ್ಕಕ್ಕೆ ತಂದು ನಿಲ್ಲಿಸುತ್ತಿದ್ದೆ. ಕೆಲವೊಂದು ಸಾರಿ ನಾನು ಅಭಿಮಾನಿಗಳ ಮೇಲೆ ಕೋಪಗೊಂಡಾಗ, ಯಶ್ ಅವರಿಂದಲೇ ನಾನು ಇಲ್ಲಿದ್ದೇನೆ ಎಂದು ಗದರಬೇಡಿ ಅಂತಾ ಹೇಳುತ್ತಿದ್ದರು. ಯಶ್ ಅವರ ಈ ಸರಳತೆಗೆ ನಾನು ಸಂಪೂರ್ಣ ಮಾರುಹೋಗಿದ್ದೆ.

    ಒಂದು ದಿನ ಯಶ್ ಜೊತೆಗಿದ್ದಾಗ ಪ್ರಶಾಂತ್ ನೀಲ್ ಸಿಕ್ಕರು. ನನ್ನನ್ನು ನೋಡಿದ ಪ್ರಶಾಂತ್ ನೀಲ್ ಸಿನಿಮಾ ಆಫರ್ ನೀಡಿದರು. ಯಶ್ ಅವರ ಜೊತೆಗಿದ್ದಕ್ಕೆ ಪ್ರಶಾಂತ್ ನೀಲ್ ಸಿಕ್ಕರು. ಯಶ್ ಅವರು ಇಲ್ಲ ಅಂದಿದ್ರೆ ನನಗೆ ಈ ಪಾತ್ರವೇ ಸಿಗುತ್ತಿರಲಿಲ್ಲ ಅಂತಾ ರಾಕಿಂಗ್ ಸ್ಟಾರ್ ಸಹಾಯವನ್ನು ರಾಮ್ ನೆನಪಿಸಿಕೊಳ್ತಾರೆ.

    ರಾಮ್

    2. ವಿನಯ್:
    ಯಶ್ ಅವರಿಗೆ ನಾನು ಮೊಗ್ಗಿನ ಮನಸು ಚಿತ್ರದಿಂದ ಪರಿಚಯ. ಹೀಗೆ ಅವರ ಜೊತೆ ಒಡನಾಡ ಇತ್ತು. ಮಿ. ಆ್ಯಂಡ್ ಮಿಸೆಸ್ ರಾಮಾಚಾರಿ ಚಿತ್ರದಲ್ಲಿ ಫರಾನ್ ಎಂಬ ಸಣ್ಣ ಪಾತ್ರ ಮಾಡಿದೆ. ಅಲ್ಲಿಂದ ನನ್ನ ಸಿನಿಮಾ ಪಯಣ ಆರಂಭ ಆಯ್ತು. ಒಂದು ದಿನ ಕೆಜಿಎಫ್ ಸಿನಿಮಾದ ಆಡಿಷನ್ ಆರಂಭವಾಗಿದೆ ಎಂದು ಸೂರಿ ಸರ್ ಹೇಳಿದಾಗ ಹೋಗಿ ಟ್ರೈ ಮಾಡಿದೆ. ಒಂದೆರೆಡು ಬಾರಿ ಬ್ರೇಕ್ ತೆಗೆದುಕೊಂಡು ಆಡಿಷನ್ ಕೊಟ್ಟಾಗ ನಾನು ಕೆಜಿಎಫ್ ಚಿತ್ರಕ್ಕೆ ಆಯ್ಕೆಯಾದೆ ಎಂದು ವಿನಯ್ ಹೇಳ್ತಾರೆ.

    ವಿನಯ್

    3. ಲಕ್ಕಿ:
    ಜನರು ತುಂಬಾ ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲೆ ಬರ್ತಾರೆ. ನಮಗೆ ಮೊದಲ ಚಿತ್ರವೇ ಎಲ್ಲವನ್ನು ನೀಡಿದೆ. ನಾನೋರ್ವ ಸಾಫ್ಟ್ ವೇರ್ ಇಂಜಿನೀಯರ್ ಆಗಿದ್ದು, ಇಂದಿಗೂ ನಾನು ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದೇನೆ. ನನಗೆ 20 ವರ್ಷವಿದ್ದಾಗ ಕೆಲವು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೆ. ಮೊದಲಿನಿಂದಲೂ ಹಿರಿ ಪರದೆ ಮೇಲೆ ಕಾಣಿಸಿಕೊಳ್ಳಬೇಕೆಂಬ ಆಸೆ ಇತ್ತು. 2018ರಲ್ಲಿ ಕೆಜಿಎಫ್ ಸಿನಿಮಾ ಸಿಕ್ತು.

    ಲಕ್ಕಿ

    4. ಅವಿನಾಶ್:
    ನಾನೋರ್ವ ಬಿಸಿನೆಸ್ ಮ್ಯಾನ್ ಆಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸಿಕೊಂಡು ಹೋಗುತ್ತಿದ್ದೇನೆ. ತುಂಬಾ ವರ್ಷಗಳಿಂದ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇತ್ತು. ಆದ್ರೆ ಈ ವಯಸ್ಸಲ್ಲಿ ಅವಕಾಶ ನೀಡಿ ಎಂದು ಹೇಳಲು ಧೈರ್ಯ ಇರಲಿಲ್ಲ. ಒಂದು ದಿನ ನಿರ್ದೇಶಕ ಪಣಗಾಭರಣ ಅವರು ಛಾಯಾಗ್ರಾಹಕ ಭುವನ್ ಗೌಡ ಅವರನ್ನು ಪರಿಚಯಿಸಿದರು. ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇದೆ. ನನ್ನ ಫೋಟೊ ಶೂಟ್ ಮಾಡ್ತೀರಾ ಅಂತಾ ಕೇಳಿದಾಗ ಓಕೆ ಅಂದ್ರು.

    ಫೋಟೋ ಬಂದ ಮೇಲೆ ಭುವನ್ ಗೌಡ, ನಾನು ಕೆಜಿಎಫ್ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಒಂದು ಸಾರಿ ನಿಮ್ಮ ಫೋಟೋಗಳನ್ನು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ತೋರಿಸ್ತಿನಿ. ಒಂದು ವೇಳೆ ಪ್ರಶಾಂತ್ ನೀಲ್ ಒಪ್ಪಿದ್ರೆ ನಿಮ್ಮ ಇಷ್ಟ ಅಂತಾ ಹೇಳಿದರು. ಪ್ರಶಾಂತ್ ಸರ್ ಫೋಟೋಗಳನ್ನು ನೋಡಿ ಒಪ್ಪಿಕೊಂಡು ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟರು.

    ಅವಿನಾಶ್

    ಈ ಸಿನಿಮಾದಲ್ಲಿ ನಟಿಸಿದ ಪ್ರತಿ ಕಲಾವಿದರಿಗೂ ಕೆಜಿಎಫ್ ಒಂದು ಮೈಲಿಗಲ್ಲು. ಈ ಹಿಂದೆ ಹಲವು ಸಿನಿಮಾಗಳಲ್ಲಿ ನಟಿಸಿದ್ರೂ, ಮುಂದೆ ಅವರನ್ನು ಕೆಜಿಎಫ್ ಪಾತ್ರದ ಹೆಸರಿನಿಂದಲೇ ಗುರುತಿಸುವಷ್ಟು ಸಿನಿಮಾ ಹೆಮ್ಮರವಾಗಿ ಬೆಳೆದಿದೆ. ಬಾಕ್ಸ್ ಆಫೀಸ್ ನಲ್ಲಿ ಹಲವು ದಾಖಲೆ ಬರೆದು ಚಿತ್ರ ಜೇಬು ತುಂಬಿಸಿಕೊಳ್ಳುವುದರ ಜೊತೆಗೆ ನವ ಕಲಾವಿದರಿಗೆ ಹೊಸ ಜೀವನವನ್ನು ನೀಡಿರೋದು ಸತ್ಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv