Tag: ವರ

  • ಬೀಚ್‍ ನಲ್ಲಿ ಫೋಟೋಶೂಟ್ ಮಾಡುವಾಗ ಕೊಚ್ಚಿಹೋದ ವಧು

    ಬೀಚ್‍ ನಲ್ಲಿ ಫೋಟೋಶೂಟ್ ಮಾಡುವಾಗ ಕೊಚ್ಚಿಹೋದ ವಧು

    ಬೀಜಿಂಗ್: ಮದುವೆ ಫೋಟೋ ತುಂಬಾ ಚೆನ್ನಾಗಿ ಇರಬೇಕು ಅಂತ ಎಲ್ಲಾ ಜೋಡಿಗಳೂ ಆಸೆ ಪಡ್ತಾರೆ. ಹಾಗೇ ಇತ್ತೀಚೆಗೆ ವೆಡ್ಡಿಂಗ್ ಫೋಟೋಗ್ರಫಿ ಕೂಡ ತುಂಬಾ ಕಾಮನ್ ಆಗಿದೆ. ಕಣ್ಮನ ಸೆಳೆಯೋ ಸ್ಥಳಗಳಲ್ಲಿ ವಧು ವರ ಫೋಟೋ ತೆಗೆದಿಕೊಳ್ಳಬಯಸುತ್ತಾರೆ. ಆದ್ರೆ ಇಲ್ಲೊಂದು ಜೋಡಿಗೆ ರೊಮ್ಯಾಂಟಿಕ್ ಫೋಟೋಶೂಟ್ ದುಸ್ವಪ್ನದಂತಾಗಿತ್ತು. ಇವರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಚೀನಾದಲ್ಲಿ ಹೊಸದಾಗಿ ಮದುವೆಯಾಗಿದ್ದ ವಧು ವರರಿಬ್ಬರೂ ಸಮುದ್ರ ಕಿನಾರೆಯಲ್ಲಿ ಫೋಟೋ ಶೂಟ್ ಮಡಿಸುತ್ತಿದ್ರು. ಸಮುದ್ರದ ಬಂಡೆಗಳ ಮೇಲೆ ನಿಂತು ವಿವಿಧ ಭಂಗಿಯಲ್ಲಿ ಪೋಸ್ ಕೊಡ್ತಿದ್ರು. ಈ ವೇಳೆ ಅವರು ಮುಂದೇನಾಗುತ್ತೆ ಅಂತ ನಿರೀಕ್ಷಿಸಿರಲಿಲ್ಲ. ಬಂಡೆ ಮೇಲೆ ನಿಂತ ಇಬ್ಬರೂ ಚುಂಬಿಸುತ್ತಾ ಪೋಸ್ ಕೊಡುತ್ತಿದ್ದಂತೆ ಅಲೆ ಬಂದು ಬಡಿದು ವಧು ಜಾರಿಬಿದ್ದಿದ್ದಾಳೆ. ಅಲೆಗಳ ರಭಸಕ್ಕೆ ಒಂದಿಷ್ಟು ದೂರ ಕೊಚ್ಚಿಹೋಗಿದ್ದಾಳೆ.

    ಆಕೆ ಬಿದ್ದ ಪರಿಣಾಮ ವರ ಕೂಡ ಕೆಳಗೆ ಬಿದ್ದಿದ್ದು, ಹೆಂಡ್ತಿಯನ್ನ ಹಿಡಿದುಕೊಂಡಿದ್ದಾನೆ. ಹೀಗಾಗಿ ಅದೃಷ್ಟವಶಾತ್ ಆಕೆಯ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ. ಆದ್ರೆ ಈ ವಿಡಿಯೋಗೆ ಮಾತ್ರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಕೆಲವರು ವಧು-ವರನ ಸ್ಥಿತಿ ನೋಡಿ ಅಯ್ಯೋ ಪಾಪ ಅಂದಿದ್ರೆ ಇನ್ನೂ ಕೆಲವರು ತಮಾಷೆ ಮಾಡಿದ್ದಾರೆ.

     

  • ವಧುವಿನ ಅಕ್ರಮ ಸಂಬಂಧದ ವಿಡಿಯೋವನ್ನ ಮದುವೆ ಅತಿಥಿಗಳ ಮುಂದೆ ಪ್ಲೇ ಮಾಡಿದ ವರ

    ವಧುವಿನ ಅಕ್ರಮ ಸಂಬಂಧದ ವಿಡಿಯೋವನ್ನ ಮದುವೆ ಅತಿಥಿಗಳ ಮುಂದೆ ಪ್ಲೇ ಮಾಡಿದ ವರ

    ಸಿಂಗಪೂರ: ವರನೊಬ್ಬ ತಾನು ಮದುವೆ ಆಗಬೇಕಿದ್ದ ಹುಡುಗಿಯ ಅಕ್ರಮ ಸಂಬಂಧದ ವಿಡಿಯೋವನ್ನ ಮದುವೆಗೆ ಬಂದಿದ್ದ ಅತಿಥಿಗಳ ಮುಂದೆ ಪ್ಲೇ ಮಾಡಿ ಸೇಡು ತೀರಿಸಿಕೊಂಡಿದ್ದಾನೆ.

    ಹೌದು. ಸಿಂಗಪೂರ್‍ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಬೇರೊಬ್ಬ ವ್ಯಕ್ತಿಯ ಜೊತೆ ವಧು ಖಾಸಗಿ ಸಮಯವನ್ನು ಕಳೆಯುತ್ತಿದ್ದ ದೃಶ್ಯಗಳನ್ನ ನೋಡಿ ಅತಿಥಿಗಳು ದಂಗಾಗಿದ್ರು. ಮೊದಲಿಗೆ ವಧು ಹಾಗೂ ವರನ ಈವರೆಗಿನ ರಿಲೇಷನ್‍ಶಿಪ್ ಬಗ್ಗೆ ವಿಡಿಯೋ ಪ್ಲೇ ಆಗುತ್ತಿತ್ತು. ಇದ್ದಕ್ಕಿದ್ದಂತೆ ಆ ದೃಶ್ಯಗಳು ನಿಂತು, ಮಹಿಳೆ ತನ್ನ ಬೇರೊಬ್ಬ ಲವರ್ ಜೊತೆ ಹೋಟೆಲ್ ರೂಮಿಗೆ ಹೋಗುವ ದೃಶ್ಯ ಪ್ಲೇ ಆಗಿದೆ. ನಂತರ ಆ ಇಬ್ಬರೂ ಸಲಿಗೆಯಿಂದ ಸಮಯ ಕಳೆದಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಈ ವಿಡಿಯೋ ಮದುವೆ ಸಮಾರಂಭದ ವೇಳೆ ಪ್ಲೇ ಆಗುತ್ತಿದ್ದಂತೆ ಅವಮಾನದಿಂದ ವಧು ರೂಮಿನಿಂದ ಪರಾರಿಯಾಗಿದ್ದಾಳೆ ಎಂದು ವರದಿಯಾಗಿದೆ.

    ಶ್ರೀಮಂತ ಉದ್ಯಮಿಯಾಗಿದ್ದ ವರ ತಾನು ಮದುವೆಯಾಗೋ ಯುವತಿ ಬಗ್ಗೆ ತಿಳಿದುಕೊಳ್ಳಲು ಖಾಸಗಿ ಡಿಟೆಕ್ಟೀವ್‍ವೊಬ್ಬರನ್ನ ನೇಮಿಸಿಕೊಂಡಿದ್ದ. ಯಾಕಂದ್ರೆ ಆಕೆ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಆತ ಅನುಮಾನಗೊಂಡಿದ್ದ.

    ಅಜಾಕ್ಸ್ ಇನ್ವೆಸ್ಟಿಗೇಷನ್ ಅಂಡ್ ಸೆಕ್ಯೂರಿಟಿ ಸರ್ವೀಸಸ್‍ನ ಡೆಟೆಕ್ಟೀವ್ ಝುವೋ ಈ ಬಗ್ಗೆ ಮಾತನಾಡಿ, ಆ ಯುವತಿ ಬೇರೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರಬಹುದು ಎಂಬ ಬಗ್ಗೆ ನಾನು ನೀಡಿದ ಮಾಹಿತಿಯನ್ನ ಗ್ರಾಹಕ ಮದುವೆ ಕ್ಯಾನ್ಸಲ್ ಮಾಡಲು ಬಳಸಿಕೊಳ್ತಾರೆ ಎಂದುಕೊಂಡಿದ್ದೆ. ಆದ್ರೆ ನನಗೆ ಮದುವೆಗೆ ಆಹ್ವಾನ ನೀಡಿದಾಗ ಶಾಕ್ ಆಗಿತ್ತು ಎಂದಿದ್ದಾರೆ.

    ನಾನು 6 ವಾರಗಳವರೆಗೆ ಯುವತಿಯ ಮೇಲೆ ಕಣ್ಣಿಟ್ಟು ನಂತರ ಈ ವಿಷಯವನ್ನ ಗ್ರಾಹಕನಿಗೆ ತಿಳಿಸಿದ್ದೆ. ಮದುವೆ ಸಮಾರಂಭದಲ್ಲಿ ವಿಡಿಯೋ ನೋಡಿದಾಗ ವರನ ಉದ್ದೇಶದ ಬಗ್ಗೆ ಗೊತ್ತಾಯ್ತು. ಸಾಕಷ್ಟು ಅತಿಥಿಗಳ ಎದುರಲ್ಲಿ ವಿಡಿಯೋ ಪ್ಲೇ ಮಾಡಲಾಯ್ತು ಎಂದು ಝುವೋ ಹೇಳಿದ್ದಾರೆ.

  • ತಾಳಿ ಕಟ್ಟುವಾಗ ವರನ ಈ ರಹಸ್ಯ ತಿಳಿದು ಮದುವೆಯಿಂದ ಹಿಂದೆ ಸರಿದ ವಧು!

    ತಾಳಿ ಕಟ್ಟುವಾಗ ವರನ ಈ ರಹಸ್ಯ ತಿಳಿದು ಮದುವೆಯಿಂದ ಹಿಂದೆ ಸರಿದ ವಧು!

    ನವದೆಹಲಿ: ಇನ್ನೇನು ಮದುವೆ ಆಗಬೇಕೆನ್ನುವಷ್ಟರಲ್ಲಿ ವಧು ನನಗೆ ಈ ಮದುವೆ ಬೇಡ ಎಂದು ಹಿಂದೆ ಸರಿದಿದ್ದಾಳೆ. ಕಾರಣ ತಾಳಿ ಕಟ್ಟುವ ವೇಳೆ ವಧುವಿಗೆ ವರನ ಒಂದು ಹಲ್ಲು ಮುರಿದಿದ್ದು ಕಾಣಿಸಿದ್ದು, ಇದ್ರಿಂದಾಗಿ ನನಗೆ ಈ ಯುವಕನ ಮದುವೆ ಆಗಲು ಇಷ್ಟವಿಲ್ಲ ಎಂದು ಮದುವೆ ನಿರಾಕರಿಸಿದ್ದಾಳೆ.

    ಇದನ್ನೂ ಓದಿ: ಆರತಕ್ಷತೆ ವೇಳೆ ಹೀಲ್ಡ್ ಚಪ್ಪಲಿ ಧರಿಸಿ, ಸುಸ್ತಾಗಿ ಬಿದ್ದ ವಧು- ಮದುವೆ ಕ್ಯಾನ್ಸಲ್ !  

    ರಾಬರ್ಟ್ ಸರ್‍ಗಂಜ್‍ನ ಕೊತವಾಲಿಯ ನಿವಾಸಿಗಳಾದ ವಧು-ವರರಿಗೆ ದೆಹಲಿಯ ಸೋನಭದ್ರ ಎಂಬಲ್ಲಿ ವಿವಾಹ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿತ್ತು. ವರ ಇನ್ನೇನು ವಧುವಿಗೆ ತಾಳಿ ಕಟ್ಟಿಯೇ ಬಿಡುತ್ತಾನೆ ಅಂದಾಗ ವಧುವಿಗೆ ತನ್ನ ಭಾವಿ ಪತಿಗೆ ಒಂದು ಹಲ್ಲು ಇಲ್ಲದಿರುವುದು ಕಾಣಿಸಿದೆ.

    ಇದನ್ನೂ ಓದಿ: ವಧು ನಾಪತ್ತೆ: ಮದುವೆ ಮುಂದೂಡಲಾಗಿದೆ ಎಂದು ಮಂಟಪದ ಮುಂದೆ ಬೋರ್ಡ್ 

    ಇದ್ರಿಂದ ಆಕ್ರೋಶಗೊಂಡ ವಧು ಈ ಮದುವೆ ಬೇಡ ಎಂದು ಮಂಟಪದಿಂದ ಹೊರಬಂದಿದ್ದಾಳೆ. ಈ ವೇಳೆ ಮದುವೆಗೆ ಬಂದಿದ್ದ ಸಂಬಂಧಿಗಳು ಮತ್ತು ಪೋಷಕರು ಯುವತಿಯನ್ನು ಒಪ್ಪಿಸಲು ಸಾಕಷ್ಟು ಪ್ರಯತ್ನಿಸಿದ್ರೂ, ವಧು ಮಾತ್ರ ಒಪ್ಪಿಗೆ ನೀಡಿಲ್ಲ.

    ಇದನ್ನೂ ಓದಿ: ಇಂದು ನಡೆಯಬೇಕಿದ್ದ ಯುವತಿಯ ಮದುವೆ 1 ವರ್ಷ ಪೋಸ್ಟ್ ಪೋನ್ ಆಯ್ತು!  

    ಸುಳ್ಳು ಹೇಳಿದ್ರು: ಇನ್ನು ಮದುವೆಗೆ ಮುಂಚೆ ಯುವಕ 10ನೇ ತರಗತಿವರೆಗೆ ಓದಿಕೊಂಡಿದ್ದಾನೆ ಎಂದು ಯುವತಿಗೆ ಹೇಳಲಾಗಿತ್ತು. ಆದ್ರೆ ಈ ಗಲಾಟೆಯಲ್ಲಿ ವರ ಕೇವಲ 5ನೇ ತರಗತಿ ಮಾತ್ರ ಓದಿದ್ದು ಎಂಬ ಸತ್ಯ ಬೆಳಕಿಗೆ ಬಂದಿದೆ.

    ಒಟ್ಟಿನಲ್ಲಿ ವರನ ಕಡೆಯವರ ಸುಳ್ಳುಗಳಿಂದಾಗಿ ಮದುವೆ ಮುರಿದು ಬಿದ್ದಿದ್ದು, ವಧುವಿನ ತಂದೆ ವರನಿಗೆ ತಿಲಕ ಹಚ್ಚುವ ವೇಳೆ ನೀಡಿದ್ದ 30 ಸಾವಿರ ರೂ. ಹಣ ಹಿಂದುರುಗಿಸುವಂತೆ ಕೇಳಿದ್ದಾರೆ. ಆದ್ರೆ ವರನ ತಂದೆ ಮಾತ್ರ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ.

     

  • ಮದುವೆಯ ದಿನ ವರ ನಾಗಿಣಿ ಡ್ಯಾನ್ಸ್ ಮಾಡಿದ್ದಕ್ಕೆ ಮದುವೆಯೇ ಕ್ಯಾನ್ಸಲ್

    ಮದುವೆಯ ದಿನ ವರ ನಾಗಿಣಿ ಡ್ಯಾನ್ಸ್ ಮಾಡಿದ್ದಕ್ಕೆ ಮದುವೆಯೇ ಕ್ಯಾನ್ಸಲ್

    ಶಹಜಹಾನ್‍ಪುರ: ಮದುವೆಗಳಲ್ಲಿ ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬ ವರ ತನ್ನ ಮದುವೆಯಲ್ಲಿ ನಾಗಿಣಿ ಡ್ಯಾನ್ಸ್ ಮಾಡಿದ್ದರಿಂದ ವಧು ಮದುವೆಯನ್ನೇ ತಿರಸ್ಕರಿಸಿದ ಘಟನೆ ಉತ್ತರಪ್ರದೇಶದ ಶಹಜಹಾನ್‍ಪುರದಲ್ಲಿ ನಡೆದಿದೆ.

    ಹೌದು. ಪ್ರಿಯಾಂಕಾ ತ್ರಿಪಾಠಿ ಮತ್ತು ಅನುಭವ್ ಮಿಶ್ರಾ ಅವರ ಮದುವೆಯನ್ನು ಕುಟುಂಬಸ್ಥರು ನಿಗದಿ ಮಾಡಿದ್ದರು. ಎಲ್ಲಾ ಸುಸೂತ್ರವಾಗಿ ನಡೆದುಕೊಂಡು ಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ವರನು ಕುಡಿದ ಸ್ಥಿತಿಯಲ್ಲಿ ನಾಗಿಣಿ ಡ್ಯಾನ್ಸ್ ಮಾಡಿ ದೊಡ್ಡ ಯಡವಟ್ಟು ಮಾಡಿದ್ದಾನೆ.

    ವರ ಅನುಭವ್ ಮಿಶ್ರಾ ಮಾಡಿದ ನಾಗಿಣಿ ಡ್ಯಾನ್ಸ್‍ನಿಂದ ಮುಜುಗರವಾದ ಕಾರಣ ಇನ್ನೇನು ಮದುವೆಯ ಶಾಸ್ತ್ರಗಳು ಆರಂಭವಾಗಬೇಕಿದ್ದ ಕೆಲವೇ ಸಮಯದ ಮುಂಚೆ ವಧು ಮದುವೆ ನಿರಾಕರಿಸಿದ್ದಾಳೆ.

    ವರನ ಸಂಬಂಧಿಕರು ಹಾಗೂ ಸ್ನೇಹಿತರು ವಧು ಪ್ರಿಯಾಂಕಾಳ ಮನವೊಲಿಸಲು ಪ್ರಯತ್ನಿಸಿದರಾದ್ರೂ ಆಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ವಧುವಿನ ತಂದೆಯೂ ಕೂಡ ಮಗಳ ನಿರ್ಧಾರವನ್ನು ಬೆಂಬಲಿಸಿದ್ದಾರೆ. ವರ ಮಾಡಿದ ಕೆಲಸದಿಂದ ನಿಜಕ್ಕೂ ಮುಜುಗರ ಅನುಭವಿಸಬೇಕಾಯ್ತು. ಆದ್ದರಿಂದ ನಾನು ನನ್ನ ಮಗಳ ಪರ ನಿಲ್ಲಬೇಕಾಯ್ತು ಎಂದು ಅವರು ಹೇಳಿದ್ದಾರೆ.

    ಕೊನೆಗೆ ಪ್ರಿಯಾಂಕಾ ಮರುದಿನವೇ ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.

  • ಕೊನೆ ಕ್ಷಣದಲ್ಲಿ ಅಣ್ಣನ ಕೈಯಿಂದ ತಾಳಿ ಕಿತ್ಕೊಂಡು ವಧುವಿಗೆ ಕಟ್ಟಿದ ತಮ್ಮ!

    ಕೊನೆ ಕ್ಷಣದಲ್ಲಿ ಅಣ್ಣನ ಕೈಯಿಂದ ತಾಳಿ ಕಿತ್ಕೊಂಡು ವಧುವಿಗೆ ಕಟ್ಟಿದ ತಮ್ಮ!

    ವೆಲ್ಲೂರು:ನಿಶ್ಚಯವಾದ ಬಳಿಕ, ಮಂಟಪದಲ್ಲಿಯೇ ಮುರಿದ ಮದುವೆ, ವಧು- ವರರು ಮಂಟಪಕ್ಕೆ ಬರಲಾರದೆ ಮದುವೆ ನಿಂತು ಹೋದ ಅನೇಕ ಘಟನೆಗಳು ನಡೆದಿರುವುದನ್ನು ಕೇಳಿರ್ತೀರಿ. ಆದ್ರೆ ಮಂಟಪದಲ್ಲಿಯೇ ಅಣ್ಣನ ವಧುವಿಗೆ ತಮ್ಮ ತಾಳಿ ಕಟ್ಟಿದ ಅಚ್ಚರಿಯ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.

    ಹೌದು. ವೆಲ್ಲೂರು ಸಮೀಪದ ತಿರುಪತ್ತೂರಿನ ಸೆಲ್ಲಾರ್ ಪೇಟೆಯ ಇಲವಂಪಟ್ಟಿಯ ಮುರುಗನ್ ದೇವಾಲಯದಲ್ಲಿ ನಡೆಯುವ ಶುಭಕಾರ್ಯಕ್ಕೆ ಬಂಧು-ಬಾಂಧವರೆಲ್ಲಾ ಸೇರಿದ್ದರು. ವರ ಇನ್ನೇನು ಕೆಲವೇ ನಿಮಿಷಗಳಲ್ಲಿ ವಧುವಿಗೆ ತಾಳಿ ಕಟ್ಟಲು ತಯಾರಾಗಿದ್ದನು. ಅಂತೆಯೇ ವಧುವರರನ್ನು ಹಸೆಮಣೆ ಮೇಲೆ ಕೂರಿಸಿ ಪುರೋಹಿತರು ವೇದ ಮಂತ್ರ ಉಚ್ಚರಿಸುತ್ತಿದ್ದರು. ಬಳಿಕ ವರನ ಕೈಯಲ್ಲಿ ತಾಳಿ ಕೊಟ್ಟು ವಧುವಿನ ಕೊರಳಿಗೆ ಕಟ್ಟುವಂತೆ ಸೂಚಿಸಿದ್ರು. ಹೀಗಾಗಿ ಮದುಮಗ ತಾಳಿ ಕಟ್ಟಲು ವಧುವಿನ ಬಳಿ ಹೋಗುತ್ತಿದ್ದಂತೆಯೇ ಅಲ್ಲೇ ಇದ್ದ ಮದುಮಗನ ತಮ್ಮ ಅಣ್ಣನ ಸೈಡಿಗೆಳೆದು ತಾಳಿ ಕಸಿದುಕೊಂಡು ತಾನೇ ವಧುವಿಗೆ ತಾಳಿ ಕಟ್ಟಿದ್ದಾನೆ.

    ಅಣ್ಣ ಮದುವೆಯಾಗಬೇಕಿದ್ದ ಯುವತಿಗೆ ಹೀಗೆ ತಮ್ಮ ತಾಳಿ ಕಟ್ಟಿದ್ದರಿಂದ ಅಲ್ಲಿದ್ದವರೆಲ್ಲಾ ಒಂದು ಬಾರಿ ಅವಕ್ಕಾದ್ರು. ಆದ್ರೆ ಈ ಘಟನೆಯ ಅಸಲಿ ವಿಷಯವೇನೆಂದರೆ ವರನ ತಮ್ಮ ಹಾಗೂ ವಧು ಮೊದಲೇ ಪ್ರೀತಿಸಿದ್ದರು. ಆದ್ರೆ ಈ ವಿಚಾರ ಮನೆಯವರಿಗೆ ಗೊತ್ತಿರಲಿಲ್ಲ. ಇತ್ತ ಅಣ್ಣ ಅದೇ ಯುವತಿ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದ. ತಾನು ಪ್ರೀತಿಸಿದ ಯುವತಿ ಅಣ್ಣನ ಮಡದಿಯಾಗುವುದನ್ನು ಸಹಿಸಲಾರದ ತಮ್ಮ ಅಣ್ಣನನ್ನು ತಳ್ಳಿ ತಾನೇ ತಾಳಿ ಕಟ್ಟಿದ್ದಾನೆ.

    ಈ ಮದುವೆಗೆ ಕೊನೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಮದುವೆಯಾಗಲು ಬಂದಿದ್ದ ವರ ಮಾತ್ರ ಕಣ್ಣೀರುಡುತ್ತಾ ಮಂಟಪದಿಂದ ಹೊರನಡೆದಿದ್ದಾನೆ.

  • ಹಣೆಗೆ ರಿವಾಲ್ವರ್ ಇಟ್ಟು ಮಂಟಪದಿಂದ ವರನನ್ನೇ ಎತ್ತಾಕೊಂಡೋದ್ಲು ಯುವತಿ!

    ಹಣೆಗೆ ರಿವಾಲ್ವರ್ ಇಟ್ಟು ಮಂಟಪದಿಂದ ವರನನ್ನೇ ಎತ್ತಾಕೊಂಡೋದ್ಲು ಯುವತಿ!

    ಲಕ್ನೋ: 25 ವರ್ಷದ ಯುವತಿಯೊಬ್ಬಳು ಕಲ್ಯಾಣ ಮಂಟಪದಿಂದ ವರನನ್ನೇ ಕಿಡ್ನಾಪ್ ಮಾಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಮಂಗಳವಾರ ರಾತ್ರಿ ಉತ್ತರಪ್ರದೇಶದ ಬುಂದೇಲ್‍ಖಂಡ್‍ನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಸಹಚರರೊಡನೆ ಎಸ್‍ಯುವಿ ಕಾರಿನಲ್ಲಿ ಮದುವೆ ಮಂಟಪಕ್ಕೆ ಬಂದ ಯುವತಿ ವರನ ಹಣೆಗೆ ರಿವಾಲ್ವರ್ ಇಟ್ಟು, ಈತ ನನ್ನನ್ನು ಪ್ರೀತಿಸುತ್ತಾನೆ. ಆದ್ರೆ ಬೇರೆಯವರೊಂದಿಗೆ ಮದುವೆ ಆಗುವ ಮೂಲಕ ನನಗೆ ಮೋಸ ಮಾಡ್ತಿದ್ದಾನೆ. ಇದು ನಡೆಯೋಕೆ ನಾನು ಬಿಡೋದಿಲ್ಲ ಎಂದು ಹೇಳಿ ವರನನ್ನ ಕಿಡ್ನಾಪ್ ಮಾಡಿದ್ದಾಳೆ.

    ಮಹಿಂದ್ರಾ ಸ್ಕಾರ್ಪಿಯೋ ವಾಹನ ಹೊರಡುತ್ತಿದ್ದಂತೆ ಮದುವೆಗೆ ಸಿದ್ಧಗೊಂಡಿದ್ದ ವಧು ಭಾರತಿ ಯಾದವ್, ದುಃಖದಿಂದ ತನ್ನ ಹಣೆಬರಹ ಚೆನ್ನಾಗಿಲ್ಲ. ನನ್ನ ಶತ್ರುಗೂ ಈ ರೀತಿ ಶಿಕ್ಷೆಯಾಗಬಾರದು ಎಂದು ಹೇಳಿದ್ದಾರೆ.

    ವರ ಅಶೋಕ್ ಯಾದವ್ ಈವರೆಗೆ ಪತ್ತೆ ಆಗಿಲ್ಲ. ಸ್ಥಳೀಯರು ಹೇಳುವ ಪ್ರಕಾರ ಕೆಲವು ತಿಂಗಳ ಹಿಂದೆ ಅಶೋಕ್‍ಗೆ ಕೆಲಸದ ಸ್ಥಳದಲ್ಲಿ ಯುವತಿಯ ಪರಿಚಯವಾಗಿತ್ತು. ಇಬ್ಬರೂ ಪ್ರೀತಿಸಲು ಶುರು ಮಾಡಿದ್ದರು. ಕೆಲವರು ಈ ಜೋಡಿ ಮದುವೆಯೂ ಆಗಿದ್ದಾರೆ ಎಂದು ಹೇಳಿದ್ದಾರೆ. ಆದ್ರೆ ಮನೆಯವರ ಒತ್ತಾಯದಿಂದ ಅವರು ನೋಡಿದ ಹುಡುಗಿಯನ್ನ ಮದುವೆಯಾಗಲು ಅಶೋಕ್ ಒಪ್ಪಿದ್ದರು ಎಂದು ವರದಿಯಾಗಿದೆ.

    ಘಟನೆಯಿಂದ ಮದುವೆಗೆ ಬಂದಿದ್ದ ಅತಿಥಿಗಳು ಶಾಕ್ ಆಗಿದ್ದಾರೆ. ಇದೇ ವೇಳೆ ಮಾತನಾಡಿದ ವರನ ತಂದೆ ರಮ್ಹತ್ ಯಾದವ್, ನನ್ನ ಮಗನ ಬಗ್ಗೆ ಹಿಂದಿನಿಂದಲೂ ಅನುಮಾನವಿತ್ತು. ಆತ ಕೆಲಸ ಮಾಡುವ ಸ್ಥಳಕ್ಕೆ ಹೋಗಿ ನಾನು ಭೇಟಿ ಮಾಡುವಾಗ, ನನ್ನನ್ನು ಆತನ ಮನೆಗೆ ಕರೆದುಕೊಂಡು ಹೋಗ್ತಿರ್ಲಿಲ್ಲ. ದೇವಸ್ಥಾನದಲ್ಲಿ ಭೇಟಿ ಮಾಡ್ತಿದ್ದ. ಅಲ್ಲೇ ಹೋಟೆಲ್‍ನಲ್ಲಿ ಊಟ ಮಾಡಿಸಿ ಮನೆಗೆ ಕಳಿಸ್ತಿದ್ದ ಎಂದಿದ್ದಾರೆ.

    ವಧುವಿನ ಕಡೆಯವರು ವರನ ಅಹರಣದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಅದರಲ್ಲೂ ಕೆಲವು ಪೊಲೀಸರು ವರನನ್ನೇ ಅಪಹರಿಸಿದ ರಿವಾಲ್ವರ್ ರಾಣಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮೋಸ ಮಾಡಿದ್ರೆ ಅದಕ್ಕೆ ಶಿಕ್ಷೆ ಆಗುತ್ತೆ ಅನ್ನೋದನ್ನ ಕೆಲ ಮಹಿಳೆಯರು ಹುಡುಗರಿಗೆ ಕಲಿಸುತ್ತಾರೆ ಅನ್ನೋದನ್ನ ಈ ಯುವತಿ ತೋರಿಸಿಕೊಟ್ಟಿದ್ದಾಳೆ ಎಂದಿದ್ದಾರೆ.

  • ವಧುವಿನ ಬಗ್ಗೆ ಈ ವಿಷಯ ಕೇಳಿ ಮಂಟಪದಿಂದ ಕಾಲ್ಕಿತ್ತಿದ್ದ- ಕೊನೆಗೆ ಆಕೆಯನ್ನೇ ಮದ್ವೆಯಾದ!

    ವಧುವಿನ ಬಗ್ಗೆ ಈ ವಿಷಯ ಕೇಳಿ ಮಂಟಪದಿಂದ ಕಾಲ್ಕಿತ್ತಿದ್ದ- ಕೊನೆಗೆ ಆಕೆಯನ್ನೇ ಮದ್ವೆಯಾದ!

    ಮಹೋಬಾ: ವಧುವಿನ ಮನೆಯಲ್ಲಿ ಮದುವೆಗೆ ಎಲ್ಲ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದವು. ಕಲ್ಯಾಣ ಮಂಟಪಕ್ಕೆ ವರನು ಕುದುರೆ ಮೇಲೆ ಬಂದು ಎಲ್ಲವೂ ಕೊನೆಯ ಹಂತ ತಲುಪಿತ್ತು. ಆದರೆ ಕೊನೆ ಗಳಿಗೆಯಲ್ಲಿ ವರ ಮಾತ್ರ ವಧುವಿನ ಬಗ್ಗೆ ಒಂದು ವಿಷಯ ಕೇಳಿ ನನಗೆ ಮದುವೆ ಬೇಡ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದ. ಆದರೆ ಕೊನೆಗೆ ತನ್ನ ತಪ್ಪಿನ ಅರಿವಾಗಿ ಆಕೆಯನ್ನೇ ಮದುವೆಯಾಗಿದ್ದಾನೆ.

    ಇದನ್ನೂ ಓದಿ :ಆರತಕ್ಷತೆ ವೇಳೆ ಹೀಲ್ಡ್ ಚಪ್ಪಲಿ ಧರಿಸಿ, ಸುಸ್ತಾಗಿ ಬಿದ್ದ ವಧು- ಮದುವೆ ಕ್ಯಾನ್ಸಲ್!

    ರಾಜಸ್ಥಾನ ರಾಜ್ಯದ ಮಹೋಬಾ ಜಿಲ್ಲೆಯ ಟಿಕರಿಯಾ ಎಂಬ ಗ್ರಾಮದಲ್ಲಿ ಮೇ 11ರಂದು ಮದುವೆ ಮುರಿದು ಬೀಳುವ ಹಂತಕ್ಕೆ ತಲುಪಿತ್ತು. ಗ್ರಾಮದ ಕಾಲಿಚರಣ್ ರಜಪೂತ್ ಅವರ ಮಗಳು ತೀಜಾರ ಮದುವೆಯನ್ನು ಅಕೌನಿ ಪಟ್ಟಣದ ಜಯ್‍ಹಿಂದ್‍ರೊಂದಿಗೆ ನಿಶ್ಚಯವಾಗಿತ್ತು. ಈ ವೇಳೆ ವರನಿಗೆ ಯಾರೋ ಬಂದು ವಧುವಿಗೆ ಬಿಳಿ ಮಚ್ಚೆಯಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ : ಇಂದು ನಡೆಯಬೇಕಿದ್ದ ಯುವತಿಯ ಮದುವೆ 1 ವರ್ಷ ಪೋಸ್ಟ್ ಪೋನ್ ಆಯ್ತು! 

    ಈ ವಿಚಾರ ಕಿವಿಗೆ ಬಿದ್ದಿದೆ ತಡ ವರ ನನಗೆ ಈ ಮದುವೆ ಬೇಡ ಎಂದು ಮನೆಯತ್ತ ನಡೆದಿದ್ದಾನೆ. ಇದ್ರಿಂದ ಕೋಪಗೊಂದು ವಧುವಿನ ತಂದೆ ಕಾಲಿಚರಣ್ ಅಜನರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಇದನ್ನೂ ಓದಿ : ಆರತಕ್ಷತೆಯಲ್ಲಿ ಊಟ ಶಾರ್ಟೇಜ್ ಆಗಿದ್ದಕ್ಕೆ ಮದ್ವೆ ಕ್ಯಾನ್ಸಲ್?

    ಪೊಲೀಸರು ವರ ಮತ್ತು ವಧು ಇಬ್ಬರನ್ನೂ ಠಾಣೆಗೆ ಕರೆಸಿದ್ದಾರೆ. ಕೊನೆಗೆ ವರನ ಸಂಬಂಧಿಯ ಮಹಿಳೆಯೊಬ್ಬರು ಖಾಸಗಿ ರೂಂನಲ್ಲಿ ವಧುವನ್ನು ಪರೀಕ್ಷಿಸಿದಾಗ ಯಾವುದೇ ತರಹದ ಬಿಳಿ ಮಚ್ಚೆ ಕಂಡುಬಂದಿಲ್ಲ. ತನ್ನ ತಪ್ಪಿನ ಅರಿವಾದ ವರ ಜಯ್ ಎಲ್ಲರನ್ನೂ ಕ್ಷಮೆ ಕೇಳಿ ಪೊಲೀಸ್ ಠಾಣೆಯ ಮೈದಾನದಲ್ಲಿದ್ದ ದೇವಸ್ಥಾನದಲ್ಲಿ ವಧು ತೀಜಾರಿಗೆ ತಾಳಿ ಕಟ್ಟಿದ್ದಾನೆ.

    ಇದನ್ನೂ ಓದಿ: ವಧು ನಾಪತ್ತೆ: ಮದುವೆ ಮುಂದೂಡಲಾಗಿದೆ ಎಂದು ಮಂಟಪದ ಮುಂದೆ ಬೋರ್ಡ್ 

  • ಬರೋಬ್ಬರಿ 60 ಲಕ್ಷ ವ್ಯೂ ಕಂಡಿರೋ ವಧುವಿನ ವೈರಲ್ ಡ್ಯಾನ್ಸ್ ವೀಡಿಯೋ ನೋಡಿ

    ಬರೋಬ್ಬರಿ 60 ಲಕ್ಷ ವ್ಯೂ ಕಂಡಿರೋ ವಧುವಿನ ವೈರಲ್ ಡ್ಯಾನ್ಸ್ ವೀಡಿಯೋ ನೋಡಿ

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆ ಮಂಟಪದಲ್ಲಿ ವರ ತನ್ನ ಸ್ನೇಹಿತರೊಂದಿಗೆ ಹೆಜ್ಜೆ ಹಾಕೋದನ್ನ ನೋಡಿರ್ತಿವಿ. ಆದ್ರೆ ಇಲ್ಲೊಬ್ಬಳು ವಧು ತನ್ನ ಭಾವಿ ಪತಿಯನ್ನು ಎದುರು ಕುಳ್ಳಿರಿಸಿಕೊಂಡು ತನ್ನ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಹೆಜ್ಜೆ ಹಾಕಿರೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    17 ನಿಮಿಷ ಇರೋ ಈ ವಿಡಿಯೋದಲ್ಲಿ ವಧುವು ತನ್ನ ಗೆಳೆಯ-ಗೆಳತಿ, ಅಪ್ಪ-ಅಮ್ಮ ಅಜ್ಜಿ-ತಾತ ಹೀಗೆ ಎಲ್ಲರೊಂದಿಗೆ ಒಂದೊಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಳೆದ ಜನವರಿಯಲ್ಲಿ ಈ ವಿಡಿಯೋ ಯೂಟ್ಯೂಬ್‍ಗೆ ಅಪ್‍ಲೋಡ್ ಆಗಿದ್ದು, ಇಲ್ಲಿಯವರೆಗೆ ಸುಮಾರು 60 ಲಕ್ಷ ಜನ ವೀಕ್ಷಿಸಿದ್ದಾರೆ. ಆದ್ರೆ ಈ ವಿಡಿಯೋ ಎಲ್ಲಿಯದ್ದು ಅನ್ನೋದರ ಬಗ್ಗೆ ಮಾಹಿತಿಯಿಲ್ಲ.

    ವಧು ಹೆಜ್ಜೆ ಹಾಕಲು ಆರಂಭಿಸಿದಾಗ ಇತ್ತ ವರ ನಾಚಿಕೆಯಿಂದ ಆಕೆಯನ್ನು ನೋಡುತ್ತಿದ್ದ. ಕೂಡಲೇ ವಧುವಿನ ಸ್ನೇಹಿತರು, ಸಹೋದರರು ಆಕೆಯೊಂದಿಗೆ ಹೆಜ್ಜೆ ಹಾಕಿದ್ದಾರೆ. ಹಿಂದಿ ಹಾಡುಗಳಿಗೆ ಈಕೆ ಸಖತ್ ಆಗಿ ಸ್ಟೆಪ್ ಹಾಕಿದ್ದಾಳೆ.

    ಈಕೆ ನೃತ್ಯ ಮಾಡುತ್ತಿದ್ದ ವೇಳೆ ಪುಟ್ಟು ಬಾಲಕನೋರ್ವ ಗುಲಾಬಿ ಹಿಡಿದುಕೊಂಡು ವಧುವಿಗೆ ನೀಡಿದ್ದಾನೆ. ವಿಡಿಯೋದಲ್ಲಿ ಬಂಧು-ಬಳಗದವರೆಲ್ಲರೂ ಒಟ್ಟಿಗೆ ಜೊತೆಯಾಗಿ ಕೊನೆಗೆ ವಧುವಿನೊಂದಿಗೆ ಹೆಜ್ಜೆ ಹಾಕಿರುವುದನ್ನು ನಾವು ನೋಡಬಹುದು.

    https://www.youtube.com/watch?v=rB8HNDY2W_U

  • ವೀಡಿಯೋ: ಸಿಂಹದ ಮೇಲೆ ಕುಳಿತು ವರನ ಮೆರವಣಿಗೆ!

    ವೀಡಿಯೋ: ಸಿಂಹದ ಮೇಲೆ ಕುಳಿತು ವರನ ಮೆರವಣಿಗೆ!

    ಇಸ್ಲಾಮಾಬಾದ್: ಕುದುರೆ ಮೇಲೆ, ಬೈಕ್‍ನಲ್ಲಿ, ದುಬಾರಿ ಕಾರಿನಲ್ಲಿ ಅಥವಾ ಪಲ್ಲಕ್ಕಿಯಲ್ಲಿ ಕುಳಿತು ವಧು/ವರ ಮದುವೆ ಮಂಟಪಕ್ಕೆ ಬರೋದನ್ನ ನೋಡಿದ್ದೀವಿ. ಆದ್ರೆ ಪಾಕಿಸ್ತಾನದಲ್ಲಿ ಕೋಟ್ಯಾಧಿಪತಿ ವ್ಯಕ್ತಿಯೊಬ್ಬರ ಮಗ ಸಿಂಹದ ಮೇಲೆ ಕುಳಿತು ಮೆರವಣಿಗೆ ಮೂಲಕ ಮದುವೆ ಮಂಟಪಕ್ಕೆ ಬಂದಿದ್ದಾರೆ.

    ಏನು ಸಿಂಹನಾ ಅಂತ ಅಚ್ಚರಿ ಪಡಬೇಡಿ. ವರ ಕುಳಿತಿದ್ದು ಸಿಂಹ ಇದ್ದ ಬೋನಿನ ಮೇಲಷ್ಟೆ. ಚಿನ್ನಾಭರಣಗಳನ್ನ ಮೈಮೇಲೆ ಧರಿಸಿ ವರ ಸಿಂಹವಿದ್ದ ಬೋನಿನ ಮೇಲೆ ಕುಳಿತು, ಸ್ನೇಹಿತರು ಹಾಗೂ ಸಂಬಂಧಿಕರು ಕುಣಿಯುತ್ತಾ, ನೋಟುಗಳ ಸುರಿಮಳೆಗೈಯ್ಯುತ್ತಾ ಅದ್ಧೂರಿ ಮೆರವಣಿಗೆ ಮೂಲಕ ಮಂಟಪ ತಲುಪಿದ್ದಾರೆ. ಈ ಮದುವೆಯ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳಲ್ಲೂ ವರದಿಯಾಗಿದೆ.

    ವರ ತಾನು ಸಿಂಹದ ಮೇಲೆ ಕುಳಿತು ಮದುವೆ ಮಂಟಪಕ್ಕೆ ಬರಬೇಕು ಅಂತ ಆಸೆ ಪಟ್ಟಿದ್ದರಂತೆ. ಮಗನ ಆಸೆ ಈಡೇರಿಸಬೇಕು ಎಂದು ವರನ ತಂದೆ ಅಂದುಕೊಂಡಿದ್ದರು. ಆದ್ರೆ ಸಿಂಹದ ಮೇಲೆ ಕುಳಿತು ಬರುವುದು ಸಾಧ್ಯವಿಲ್ಲದ ಮಾತು ಎಂದು ಅರಿತು ಬೋನಿನೊಳಗೆ ಹಾಕಲಾದ ಸಿಂಹವನ್ನ ತರಿಸಿದ್ದಾರೆ. ನಂತರ ಬೋನಿನ ಮೇಲೆ ಚೇರ್ ಹಾಕಿಸಿ ವರನನ್ನು ಅದರ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಿದ್ದಾರೆ. ಮದುವೆಗೆ 15 ಸಾವಿರಕ್ಕೂ ಹೆಚ್ಚು ಅತಿಥಿಗಳನ್ನ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.

  • ತುಮಕೂರು: ತಾಳಿ ಕಟ್ಟುವ ಮುನ್ನವೇ ಕಲ್ಯಾಣ ಮಂಟಪದಲ್ಲಿ ವರನ ಸಾವು

    ತುಮಕೂರು: ತಾಳಿ ಕಟ್ಟಬೇಕಿದ್ದ ವರ ಕಲ್ಯಾಣ ಮಂಟಪದಲ್ಲೇ ಸಾವನ್ನಪಿರುವ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ. ನಗರದ ಗವಿರಂಗ ಕಲ್ಯಾಣ ಮಂಟಪದಲ್ಲಿ ಇಂದು ಮುಹೂರ್ತ ನಡೆಯಬೇಕಿದ್ದ ವರ ಸಾವನ್ನಪ್ಪಿ ಕಲ್ಯಾಣಮಂಟಪ ಸಾವಿನ ಮನೆಯಾಗಿ ಕುಟುಂಬಸ್ಥರ ದುಃಖಕ್ಕೆ ಕಾರಣವಾಗಿದೆ.

    ಮಧುಗಿರಿ ಮೂಲದ ವಸಂತ್‍ಕುಮಾರ್ ಹಾಗೂ ತುಮಕೂರಿನ ಕಾತ್ಯಾಯಿನಿಗೆ ಇಂದು ಮದುವೆ ನಿಶ್ಚಯವಾಗಿತ್ತು. ಶನಿವಾರದಂದು ಆರತಕ್ಷತೆ ಮುಗಿಸಿದ್ದ ಜೋಡಿ ಇಂದು ಅರಶಿಣ ಶಾಸ್ತ್ರ ಮುಗಿಸಿದ್ದರು. ಮುಂಜಾನೆ ಶಾಸ್ತ್ರ ಮುಗಿಸಿ ಮುಹೂರ್ತಕ್ಕೆ ಸಿದ್ಧವಾಗ್ತಿದ್ದ ವಸಂತ್ ಕುಮಾರ್ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪಿದ್ದಾರೆ.

    ಸದ್ಯ ಕಲ್ಯಾಣಮಂಟಪದಲ್ಲಿ ನೀರವ ಮೌನ ಆವರಿಸಿದ್ದು, ಕುಟುಂಬಸ್ಥರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಕಾತ್ಯಾಯಿನಿ ಮತ್ತು ವಸಂತ್ ಕುಮಾರ್ ಇಬ್ಬರೂ ಎಂ.ಟೆಕ್ ಪದವೀಧದಾರಾಗಿದ್ದು, ವಸಂತ್ ಕುಮಾರ್ ಸಾವಿನಿಂದ ಇದೀಗ ಮದುವೆ ಮುರಿದುಬಿದ್ದಿದೆ.