Tag: ವರ್ಲ್ಡ್ ಕಪ್

  • ವರ್ಲ್ಡ್ ಕಪ್ ಗೂ ಮುನ್ನ ಪಬ್‍ಜಿ ಆಡಿದ ಟೀಂ ಇಂಡಿಯಾ ಆಟಗಾರರು

    ವರ್ಲ್ಡ್ ಕಪ್ ಗೂ ಮುನ್ನ ಪಬ್‍ಜಿ ಆಡಿದ ಟೀಂ ಇಂಡಿಯಾ ಆಟಗಾರರು

    ನವದೆಹಲಿ: ಟೀಂ ಇಂಡಿಯಾ ಆಟಗಾರರು ವರ್ಲ್ಡ್ ಕಪ್ ಪಂದ್ಯಕ್ಕೂ ಮುನ್ನ ಪಬ್ ಜಿ ಗೇಮ್ ಆಡಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಮೇ 30ರಿಂದ ವಿಶ್ವಕಪ್ ಪಂದ್ಯಗಳು ಆರಂಭಗೊಳ್ಳಲಿವೆ. ಟೀಂ ಇಂಡಿಯಾ ಸಹ ಈ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಲಿದ್ದು, ಮಂಗಳವಾರ ಇಂಗ್ಲೆಂಡ್ ನತ್ತ ತನ್ನ ಪ್ರಯಾಣ ಬೆಳೆಸಿದೆ. ಪ್ರವಾಸಕ್ಕೂ ಮುನ್ನ ವೇಟಿಂಗ್ ಲಾಂಜ್ ನಲ್ಲಿ ಆಟಗಾರರು ಕುಳಿತಿರುವ ಫೋಟೋಗಳನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. ಬಹುತೇಕ ಕ್ರಿಕೆಟ್ ಆಟಗಾರರು ತಮ್ಮ ಟ್ಯಾಬ್ಲೆಟ್‍ಗಳಲ್ಲಿ ಪಬ್ ಜಿ ಆಡುತ್ತಿರೋದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ವಿಶ್ವಕಪ್‍ಗೆ ಹೊರಟ ಕೊಹ್ಲಿಗೆ ಪೂಮಾದಿಂದ ವಿಶೇಷ ವಿನ್ಯಾಸದ ಶೂ – ವಿಡಿಯೋ ನೋಡಿ

    ಬಿಸಿಸಿಐ ಹಂಚಿಕೊಂಡಿರುವ ಫೋಟೋಗಳಲ್ಲಿ ಯುಜುವೇಂದ್ರ ಚಹಲ್, ಮೊಹಮ್ಮದ್ ಶಮಿ, ಎಂ.ಎಸ್.ಧೋನಿ ಮತ್ತು ಭುವನೇಶ್ವರ್ ಕುಮಾರ್ ಇಂಟರ್‍ನೆಟ್ ಟ್ರೆಂಡಿಂಗ್ ಗೇಮ್ ಪಬ್ ಜಿ ಆಡೋದರಲ್ಲಿ ಬ್ಯುಸಿಯಾಗಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆ.ಎಲ್.ರಾಹುಲ್, ವಿಜಯ್ ಶಂಕರ್ ಎಲ್ಲರು ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಈ ಫೋಟೋಗಳಿಗೆ ಟ್ವಿಟ್ಟಿಗರು ಎಲ್ಲರು ಪಬ್ ಜಿ ಲವರ್ ಎಂದು ಕಮೆಂಟ್ ಮಾಡಿದ್ರೆ, ಇಷ್ಟು ರಾತ್ರಿಯಲ್ಲಿ ಪಬ್ ಜಿ ಆಡೋದಾ, ಪರವಾಗಿಲ್ಲ ಗುಡ್ ಲಕ್ ಎಂದು ಬರೆದಿದ್ದಾರೆ. ಇದನ್ನೂ ಓದಿ: ಕೊನೆ ಗಳಿಗೆಯಲ್ಲಿ ಪಂದ್ಯವನ್ನು ಗೆಲ್ಲಿಸುವ ಧೋನಿಯನ್ನು ಹೊಗಳಿದ ರವಿಶಾಸ್ತ್ರಿ

    https://twitter.com/AdilMdziyau/status/1130962838791610369

  • ಕೊನೆ ಗಳಿಗೆಯಲ್ಲಿ ಪಂದ್ಯವನ್ನು ಗೆಲ್ಲಿಸುವ ಧೋನಿಯನ್ನು ಹೊಗಳಿದ ರವಿಶಾಸ್ತ್ರಿ

    ಕೊನೆ ಗಳಿಗೆಯಲ್ಲಿ ಪಂದ್ಯವನ್ನು ಗೆಲ್ಲಿಸುವ ಧೋನಿಯನ್ನು ಹೊಗಳಿದ ರವಿಶಾಸ್ತ್ರಿ

    ನವದೆಹಲಿ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ವರ್ಲ್ಡ್ ಕಪ್ ಪಂದ್ಯಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಪಾತ್ರ ಹೇಗಿರಲಿದೆ ಎಂಬುದನ್ನು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾದ ಇಂದು ಸುದ್ದಿಗೋಷ್ಠಿ ನಡೆಸಿತ್ತು.

    ಎಲ್ಲ ಪಂದ್ಯಗಳಲ್ಲಿ ಧೋನಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮಾಜಿ ನಾಯಕನಾಗಿರುವ ಧೋನಿ ಒಂದು ಬಲಿಷ್ಠ ತಂಡವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಓರ್ವ ಆಟಗಾರನಾಗಿಯೂ ತಂಡಕ್ಕೆ ಧೋನಿ ನೆರವಾಗ್ತಾರೆ. ಧೋನಿ ಅವರ ರನ್ ಔಟ್, ಸ್ಟಂಪಿಂಗ್ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಧೋನಿಯವರ ಆಟದ ಶೈಲಿ, ತಂತ್ರ ಕೊನೆ ಗಳಿಗೆಯಲ್ಲಿಯೂ ಪಂದ್ಯವನ್ನು ಬದಲಾಯಿಸುತ್ತದೆ. ಐಪಿಎಲ್ ನಲ್ಲಿ ಧೋನಿ ಚೆನ್ನೈ ತಂಡವನ್ನು ಮುನ್ನಡೆಸಿದ ಉದಾಹರಣೆ ನಮ್ಮ ಮುಂದಿದೆ ಎಂದು ಕೋಚ್ ರವಿ ಶಾಸ್ತ್ರಿ ಹೇಳಿದರು.

    ಕೇದಾರ್ ಜಾಧವ್ ಫಿಟ್ ಆಗಿದ್ದು, ತಂಡದಲ್ಲಿ ಇರಲಿದ್ದಾರೆ. ತಂಡದ ಎಲ್ಲ ಆಟಗಾರರು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ನಾವು ನಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಆಡಿದಲ್ಲಿ ವಿಶ್ವಕಪ್‍ನ್ನು ದೇಶಕ್ಕೆ ತರಲು ಸಾಧ್ಯ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಈ ಬಾರಿಯ ವಿಶ್ವಕಪ್ ಪಂದ್ಯಾವಳಿಗಳು ತುಂಬಾ ಕಠಿಣದಾಯಕವಾಗಿರಲಿದೆ. ಯಾವುದೇ ತಂಡ ಸಹ ಮುನ್ನಡೆ ಪಡೆದುಕೊಳ್ಳಬಹುದು. ಹಾಗಾಗಿ ಪ್ರತಿಯೊಂದು ಪಂದ್ಯವನ್ನು ಅತ್ಯಂತ ಎಚ್ಚರಿಕೆಯಿಂದ ಆಡಬೇಕಿದೆ. ತಂಡ ಫ್ರೆಶ್ ಬೌಲರ್ ಗಳನ್ನು ಹೊಂದಿದ್ದು, ಎಲ್ಲರು 50 ಓವರ್ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಐಪಿಎಲ್ ನಿಂದ ಒಳ್ಳೆಯ ತರಬೇತಿ ಮತ್ತು ಅನುಭವವನ್ನು ನಮ್ಮ ಆಟಗಾರರು ಪಡೆದಿದ್ದು ಲಾಭದಾಯಕವಾಗಿದೆ ಎಂದು ಹೇಳಿದರು.