Tag: ವಯೋವೃದ್ಧರು

  • ಲಸಿಕೆಗಾಗಿ ಆವಾಜ್ – ಆರೋಗ್ಯ ಸಿಬ್ಬಂದಿ ಜೊತೆ ಕಾಂಗ್ರೆಸ್ ಮುಖಂಡನ ವಾಗ್ವಾದ

    ಲಸಿಕೆಗಾಗಿ ಆವಾಜ್ – ಆರೋಗ್ಯ ಸಿಬ್ಬಂದಿ ಜೊತೆ ಕಾಂಗ್ರೆಸ್ ಮುಖಂಡನ ವಾಗ್ವಾದ

    ಬೆಂಗಳೂರು: ಲಸಿಕೆ ಪಡೆಯಲು ಕಾಂಗ್ರೆಸ್ ಮುಖಂಡ ಮಾಜಿ ಪುರಸಭಾ ಸದಸ್ಯ ಲಸಿಕಾ ಕೇಂದ್ರಕ್ಕೆ ಬಂದು ಆರೋಗ್ಯ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.

    ಕೊರೊನಾ ವ್ಯಾಕ್ಸಿನ್ ಗಾಗಿ ಜನ ಪರದಾಡುತ್ತಿದ್ದು, ಕೊರೊನಾ ಲಸಿಕೆ ಪಡೆಯಲು ಆನೇಕಲ್ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಲಸಿಕಾ ಕೇಂದ್ರದಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಲ್ಲಿ ನಿಂತು ವಯ್ಯೋವೃದ್ದರು ಕಾಯುತ್ತಿದ್ದರು. ಈ ವೇಳೆ ಲಸಿಕೆ ಪಡೆಯಲು ಕಾಂಗ್ರೆಸ್ ಮುಖಂಡ ಮಾಜಿ ಪುರಸಭಾ ಸದಸ್ಯ ಮಲ್ಲಿಕಾರ್ಜುನ್ ಲಸಿಕಾ ಕೇಂದ್ರಕ್ಕೆ ಬಂದು ಆರೋಗ್ಯ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.

    ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ್ ಸರತಿ ಸಾಲಲ್ಲಿ ನಿಂತಿದ್ದವರನ್ನು ಬಿಟ್ಟು ತಮಗೆ ವ್ಯಾಕ್ಸಿನ್ ನೀಡುವಂತೆ ಲಸಿಕಾ ಕೇಂದ್ರದ ಸಿಬ್ಬಂದಿಯನ್ನು ಕೇಳಿದ್ದು, ಸಿಬ್ಬಂದಿ ಸಾಲಿನಲ್ಲಿ ಬರುವಂತೆ ತಿಳಿಸಿದ್ದಾರೆ. ಈ ವೇಳೆ ತಾನು ಹಿರಿಯ ವೈದ್ಯರಿಗೆ ಹೇಳಿದ್ದೇನೆ ಎಂದು ತಿಳಿಸಿದ್ದೇನೆ ಲಸಿಕೆ ಕೊಡಿ ಅಂದು ವಾಗ್ವಾದ ತೆಗೆದಿದ್ದಾರೆ. ಈ ನಡುವೆ ಪೊಲೀಸರು ಆರೋಗ್ಯ ಸಿಬ್ಬಂದಿ ಹಾಗೂ ಮಲ್ಲಿಕಾರ್ಜುನ್ ನಡುವೆ ಮಾತಿನ ಚಕಮಕಿ ನಡೆದಿದೆ.

    ಜೊತೆಗೆ ಕಳೆದ ಒಂದು ವಾರದಿಂದ ಇದೇ ರೀತಿ ಗಲಾಟೆ ಮಾಡುತ್ತಿದ್ದಾರೆ. ಇನ್ನು ಆನೇಕಲ್ ಲಸಿಕಾ ಕೇಂದ್ರದಲ್ಲಿ ಲಸಿಕಾ ಅಭಿಯಾನ ನಡೆಸುತ್ತಿದ್ದು, ಆರೋಗ್ಯ ಪೊಟರ್ಲ್ ನಲ್ಲಿ ನೊಂದಣಿ ಮಾಡಿಕೊಂಡವರು ಬರುತ್ತಿರುವಸರಿಂದ ಸ್ಥಳೀಯರಿಗೆ ಲಸಿಕೆ ಕೊರತೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಇನ್ನೂ ಸಂಬಂಧಪಟ್ಟ ಸಚಿವರು ವ್ಯಾಕ್ಸಿನ್ ಹೆಚ್ಚು ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.

  • ವಯೋವೃದ್ಧರಿಗೆ ಉಚಿತವಾಗಿ ಆಶ್ರಯಕೊಟ್ಟ ಜ್ಯೋತಿ ನಾಯಕ್

    ವಯೋವೃದ್ಧರಿಗೆ ಉಚಿತವಾಗಿ ಆಶ್ರಯಕೊಟ್ಟ ಜ್ಯೋತಿ ನಾಯಕ್

    ಧಾರವಾಡ/ಹುಬ್ಬಳ್ಳಿ: ಮುಪ್ಪಿನ ಕಾಲದಲ್ಲಿ ಹತ್ತವರನ್ನು ದೂರಮಾಡುವ ಇಂದಿನ ಸಮಾಜದಲ್ಲಿ ಹಿರಿಯ ನಾಗರಿಕರ ಸೇವೆಗಾಗಿ ಜೀವನವನ್ನ ಮುಡುಪಿಟ್ಟ ದಂಪತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ.

    ಹುಬ್ಬಳ್ಳಿಯ ಜಯನಗದ ನಿವಾಸಿಗಳಾದ ಜ್ಯೋತಿ ಮತ್ತು ತುಳಸಿದಾಸ್ ನಾಯಕ್ ದಂಪತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಜ್ಯೋತಿ ನಾಯಕ್ ವೃತ್ತಿಯಲ್ಲಿ ಏವಿಯೇಷನ್ ಇಂಜಿನಿಯರ್. ಏಳು ವರ್ಷಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ ಹುಬ್ಬಳ್ಳಿಗೆ ಬಂದು ನಲೆಸಿದ್ದಾರೆ. ತುಳಿಸಿದಾಸ್ ಅವರು ಔಷಧಿ ಮಾರಾಟಗಾರರು. ಬೆಂಗಳೂರು ತೊರೆದು ಇಲ್ಲಿಗೆ ಬಂದ ಬಳಿಕ ವೃದ್ಧರ ಹಗಲು ತಂಗುದಾಣ ತೆರೆದಿದ್ದಾರೆ. ಸುಮಾರು 25 ಕ್ಕೂ ಹೆಚ್ಚು ವೃದ್ಧರು ಪ್ರತಿನಿತ್ಯ ಇಲ್ಲಿಗೆ ಬರುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ವಯೋವೃದ್ಧರಿಗೆ ಇಲ್ಲಿರಲು ಅವಕಾಶ ಕಲ್ಪಿಸಲಾಗಿದೆ.

    ಮಕ್ಕಳು ಕೆಲಸಕ್ಕೆ ಹೊರಡುವ ಮುನ್ನ ತಮ್ಮ ಪೋಷಕರನ್ನು ಇಲ್ಲಿ ಕರೆ ತರುತ್ತಾರೆ. ನಂತರ ಸಂಜೆ ವಾಪಾಸ್ ಕರೆದುಕೊಂಡು ಹೋಗುತ್ತಾರೆ. 25ಕ್ಕೂ ಹೆಚ್ಚು ಜನ ಇಲ್ಲಿ ನೆಮ್ಮದಿಯ ಜೀವನ ಕಂಡುಕೊಂಡಿದ್ದರೆ, ಕೆಲವರು ಶಾಶ್ವತ ಆಶ್ರಯ ಪಡೆದುಕೊಂಡಿದ್ದಾರೆ.

    ಹಗಲು ತಂಗುದಾಣ ನಡೆಸುತ್ತಾರೆ ಎಂದ ಮಾತ್ರಕ್ಕೆ ಅವರು ವೃದ್ಧರನ್ನು ಇಲ್ಲಿ ತಂದು ಬಿಡಿ ಎನ್ನುವುದಿಲ್ಲ. ಬದಲಾಗಿ ಡೇ ಕೇರ್ ಗೆ ಪೋಷಕರನ್ನು ಕರೆ ತರುವ ಮಕ್ಕಳಿಗೆ ಕೌನ್ಸಿಲಿಂಗ್ ಮಾಡುವ ಮೂಲಕ ಅವರ ಹೆತ್ತವರ ಬಗ್ಗೆ ತಿಳಿ ಹೇಳಿತ್ತಾರೆ. ಕೌನ್ಸಿಲಿಂಗ್ ಮೂಲಕ ತಂದೆ ತಾಯಿಗಳನ್ನು ನೋಡಿಕೊಳ್ಳಲು ಪ್ರೇರಣೆ ನೀಡುತ್ತಾರೆ. ನಾಯಕ್ ದಂಪತಿ ಇಲ್ಲಿ ಬರುವ ವೃದ್ಧರಿಂದ ಹಣ ಪಡೆಯಲ್ಲ. ತಮ್ಮ ಹಣದಲ್ಲಿಯೇ ಹಿರಿಯ ಜೀವಗಳಿಗೆ ಬೆಳಗ್ಗೆ ಟೀ, ಉಪಹಾರ ನೀಡಿ ಹೆತ್ತವರ ಹಾಗೆ ಆರೈಕೆ ಮಾಡುತ್ತಾರೆ.

  • ಮತದಾನ ಮಾಡಿದ ಖುಷಿಯಲ್ಲಿ ಶತಾಯುಷಿ ವಯೋವೃದ್ಧರು

    ಮತದಾನ ಮಾಡಿದ ಖುಷಿಯಲ್ಲಿ ಶತಾಯುಷಿ ವಯೋವೃದ್ಧರು

    ಬೆಂಗಳೂರು: ಮೊದಲ ಹಂತದ ಲೋಕಸಭಾ ಚುನಾವಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತಿದ್ದು, ರಾಜ್ಯದ ಹಲವೆಡೆ 100 ವರ್ಷ ದಾಟಿದ ವೃದ್ಧರು ಕೂಡ ಮತ ಚಲಾಯಿಸಿ ಸಂಭ್ರಮಿಸಿದ್ದಾರೆ.

    ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು 104 ವರ್ಷದ ವಯೋವೃದ್ಧೆ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಶತಾಯುಷಿ ಮಹದೇವಮ್ಮ ಹೊಸದುರ್ಗ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಮತಗಟ್ಟೆ ಸಂಖ್ಯೆ 209 ರಲ್ಲಿ ಮತದಾನ ಮಾಡಿದ್ದಾರೆ.

    ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮುತ್ತುಗದಹಳ್ಳಿ ಗ್ರಾಮದ ಶತಾಯುಷಿ ಮುನಿಯಮ್ಮ (106) ಅವರು ಕೂಡ ಮತದಾನ ಮಾಡಿದ್ದಾರೆ. ಮುನಿಯಮ್ಮ ಅವರು ಗ್ರಾಮದ 13ರ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ. ಮೊಮ್ಮಗನ ಸಹಾಯದಿಂದ ಶತಾಯುಷಿ ಮುನಿಯಮ್ಮ ಮತದಾನ ಮಾಡಿದ್ದಾರೆ. ಶತಯುಷಿ ವಯಸ್ಸಿನಲ್ಲೂ ಮುನಿಯಮ್ಮನ ಉತ್ಸಾಹ ಕುಗ್ಗಿರಲಿಲ್ಲ.

    ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡರಸಿನಕೆರೆಯಲ್ಲಿ 102 ವರ್ಷದ ಚಿಕ್ಕಮಾಯಮ್ಮ ಅವರು ಮತ ಚಲಾಯಿಸಿದ್ದಾರೆ. ಚಿಕ್ಕಮಾಯಮ್ಮ ಅವರು ಮತಗಟ್ಟೆ ಕೇಂದ್ರಕ್ಕೆ ವೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದ್ದಾರೆ. ಚಿಕ್ಕಮಾಯಮ್ಮ ತಮ್ಮ ಮಕ್ಕಳ ಸಹಾಯದೊಂದಿಗೆ ಬಂದು ಮತದಾನ ಮಾಡಿದ್ದಾರೆ.

    ಮಂಡ್ಯದ ಬೂತ್ ನಂಬರ್ 137ರಲ್ಲಿ 110 ವರ್ಷದ ನಿಂಗಮ್ಮ ಮತ ಚಲಾಯಿಸಿದ್ದಾರೆ. ನೂರರ ಗಡಿ ದಾಟಿದರೂ ನಿಂಗಮ್ಮ ಉತ್ಸಾಹದಿಂದ ಮತ ಹಾಕಿದ್ದಾರೆ. ನಿಂಗಮ್ಮ ಜೊತೆ 85 ವರ್ಷದ ಮುತ್ತಮ್ಮ ಕೂಡ ಮತದಾನ ಮಾಡಿದ್ದಾರೆ. ಶತಾಯುಷಿ ಅಜ್ಜಿಯಂದಿರು ಒಂದೇ ಆಟೋದಲ್ಲಿ ಬಂದು ಮತ ಚಲಾಯಿಸುವ ಮೂಲಕ ಯುವ ಜನತೆಗೆ ಮಾದರಿ ಆಗಿದ್ದಾರೆ.

    ತುಮಕೂರಿನ ತುರುವೇಕೆರೆ ತಾಲೂಕಿನ ಚಾಕುವಳ್ಳಿಪಾಳ್ಯಾದಲ್ಲಿ 105 ವರ್ಷದ ದೊಡ್ಡತಾಯಮ್ಮ ತಮ್ಮ ಮತ ಚಲಾಯಿಸಿದ್ದಾರೆ. ಹೋನ್ನೆನಹಳ್ಳಿಯ ಮತಗಟೆಯಲ್ಲಿ ದೊಡ್ಡತಾಯಮ್ಮ ಮತ ಚಲಾವಣೆ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

    ಮಂಗಳೂರಿನಲ್ಲೂ ಕೂಡ ನೂರು ವರ್ಷದ ಕೇಶವ ಕುಡ್ವಾ ಅವರು ವೋಟ್ ಮಾಡಿದ್ದಾರೆ. ಲೇಡಿಹಿಲ್ ಶಾಲೆಯಲ್ಲಿ ಮತದಾನ ಮಾಡಿದ್ದಾರೆ.