Tag: ವಯಸ್ಸು

  • ಮದ್ಯ ಮಾರಾಟ, ಖರೀದಿಗೆ ವಯಸ್ಸು ಇಳಿಕೆ ಇಲ್ಲ: ಗೋಪಾಲಯ್ಯ

    ಮದ್ಯ ಮಾರಾಟ, ಖರೀದಿಗೆ ವಯಸ್ಸು ಇಳಿಕೆ ಇಲ್ಲ: ಗೋಪಾಲಯ್ಯ

    ಬೆಂಗಳೂರು: ರಾಜ್ಯದಲ್ಲಿ ಮದ್ಯ (Alcohol) ಮಾರಾಟ ಮತ್ತು ಮದ್ಯ ಖರೀದಿ ವಯೋಮಾನ (Age) 21 ರಿಂದ 18 ವರ್ಷಕ್ಕೆ ಇಳಿಕೆ ಮಾಡಿ ಪರಿಷ್ಕರಿಸಿ ಹೊರಡಿಸಿದ್ದ ಅಧಿಸೂಚನೆಗೆ ಆಕ್ಷೇಪಣೆ ಸ್ವೀಕರಿಸಿದ್ದು, ಸದ್ಯ ಇರುವ ಹಳೆ ವ್ಯವಸ್ಥೆಯೇ ಮುಂದುವರಿಯಲಿದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ (Gopalaiah) ಸ್ಪಷ್ಟಪಡಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ಮದ್ಯ ಮಾರಾಟ ವಯೋಮಾನದ ಕುರಿತು ಜನವರಿ 9 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಮದ್ಯ ಖರೀದಿಸುವವರ ವಯೋಮಿತಿ 21 ರಿಂದ 18 ಕ್ಕೆ ಇಳಿಸುವ ಪ್ರಸ್ತಾಪ ಮಾಡಲಾಗಿತ್ತು. ಆದರೆ ಇದಕ್ಕೆ ಅನೇಕ ಆಕ್ಷೇಪಣೆ ಬಂತು. ಹೀಗಾಗಿ ಸಮಿತಿ ರಚಿಸಿದ್ದು ಸದ್ಯ ಈಗ ಯಾವ ರೀತಿ ಇದೆಯೋ ಅದರಂತೆಯೇ ಮುಂದುವರಿಸಲು ಕ್ರಮ ವಹಿಸಲಾಗಿದೆ ಎಂದರು.

    ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಅನೇಕ ಕಡೆ ದಿಟ್ಟ ಕ್ರಮ ವಹಿಸಿದೆ. ಮುಂದೆಯೂ ಅದೇ ರೀತಿ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಬಕಾರಿ ಸಚಿವರು ಮಾಹಿತಿ ನೀಡಿದರು. ಇದನ್ನೂ ಓದಿ: ಮದ್ಯ ಮಾರಾಟದಿಂದ ಚಿನ್ನದ ಬೆಳೆ ತೆಗೆದ ಸರ್ಕಾರ – 5 ವರ್ಷಗಳಲ್ಲಿ 1 ಲಕ್ಷ ಕೋಟಿ ಆದಾಯ

    ಈ ವರ್ಷ ಅಬಕಾರಿ ಇಲಾಖೆಗೆ ನಿಗದಿಪಡಿಸಿರುವ ಆರ್ಥಿಕ ಗುರಿಯನ್ನು ಇಲಾಖೆ ದಾಟಲಿದೆ. ಕಳೆದ 5 ವರ್ಷವೂ ಸತತವಾಗಿ ನಮಗೆ ನಿಗದಿಪಡಿಸಿರುವ ಗುರಿಯನ್ನು ದಾಟಿದ್ದೇವೆ. ಈ ಬಾರಿಯೂ ಗುರಿ ತಲುಪುವುದರಲ್ಲಿ ಹಿಂದೆ ಬೀಳಲ್ಲ. ನಮಗೆ ನಿಗದಿಪಡಿಸಿರುವ ಗುರಿ ತಲುಪಲು ಇಲಾಖೆ ಅಗತ್ಯ ಕ್ರಮ ವಹಿಸಲಿದೆ ಎಂದರು. ಇದನ್ನೂ ಓದಿ: ಅನುದಾನಿತ ಕಾಲೇಜು ಉಪನ್ಯಾಸಕರಿಗೆ NPS ಜಾರಿಗೆ ಬಗ್ಗೆ ನ್ಯಾಯ ಸಮ್ಮತ ಕ್ರಮ: ಬೊಮ್ಮಾಯಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಧಾನಸಭಾ ಫೈಟ್‍ಗೂ ಮುನ್ನವೇ ಹೊಸ ಟೆನ್ಷನ್- ರಾಜ್ಯ ಬಿಜೆಪಿ ನಾಯಕರನ್ನು ಕಾಡ್ತಿದೆ ವಯೋಮಿತಿ!

    ವಿಧಾನಸಭಾ ಫೈಟ್‍ಗೂ ಮುನ್ನವೇ ಹೊಸ ಟೆನ್ಷನ್- ರಾಜ್ಯ ಬಿಜೆಪಿ ನಾಯಕರನ್ನು ಕಾಡ್ತಿದೆ ವಯೋಮಿತಿ!

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸರಿಸುಮಾರು ಇನ್ನೂ 10 ತಿಂಗಳು ಬಾಕಿ ಇದೆ. ಈ ನಡುವೆ ರಾಜಕೀಯ ಪಕ್ಷಗಳ ಅಸಲಿ ಆಟಕ್ಕೆ ವೇದಿಕೆ ಸಜ್ಜಾಗುತ್ತಿದೆ.

    ಜುಲೈ ಬಳಿಕ ಎಲೆಕ್ಷನ್ ಜ್ವರ ಮತ್ತಷ್ಟು ಕಾವೇರಲಿದ್ದು, ಬಿಜೆಪಿಯಲ್ಲೀಗ ವಯಸ್ಸಿನ ಸಮಸ್ಯೆ ಎದುರಾಗಿದೆ. 120 ಶಾಸಕರ ಪೈಕಿ ಡಜನ್‍ಗೂ ಹೆಚ್ಚು ಶಾಸಕರಿಗೆ ಏಜ್ ಫಿಯರ್ ಇದೆ. ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಕುರ್ಚಿಯಿಂದ ನಿರ್ಗಮಿಸಿದ್ದು, ಚುನಾವಣಾ ರಾಜಕಾರಣದಿಂದ ದೂರ ಸರಿಯುವ ಮುನ್ಸೂಚನೆ ಕೊಟ್ಟಾಗಿದೆ. ಆದರೆ ಇನ್ನುಳಿದ ಕೆಲ ಶಾಸಕರಿಗೆ 75 ವಯಸ್ಸಿನ ಮಿತಿ ಅಡ್ಡ ಬರುತ್ತಾ ಎಂಬ ಭಯ ಇದೆ. ಹೈಕಮಾಂಡ್ ಟಿಕೆಟ್ ಕೊಡುತ್ತಾ ಇಲ್ವಾ..? ಅನ್ನೋ ಟೆನ್ಷನ್‍ನಲ್ಲಿದೆ.

    2023ಕ್ಕೆ ಐವರು ಶಾಸಕರ ವಯಸ್ಸು 75 ದಾಟಲಿದ್ದು, ಬಹುತೇಕ ಎಲ್ಲರಿಗೂ ಟಿಕೆಟ್ ನಿರಾಕರಿಸಬಹುದಾ ಎಂಬ ಚರ್ಚೆ ಜೋರಾಗಿದೆ. 2023ರ ಹೊತ್ತಿಗೆ ನಾಲ್ವರು ಶಾಸಕರಿಗೆ 72 ದಾಟಲಿದ್ರೆ, ಮೂವರು ಶಾಸಕರಿಗೆ 71 ವರ್ಷ ದಾಟಲಿದೆ. ಹಾಗಾಗಿ 75 ದಾಟಿದವರಿಗೆ ಮಾತ್ರ ಟಿಕೆಟ್ ನಿರಾಕರಿಸುತ್ತಾ..? ಅಥವಾ 75ರ ಸಮೀಪ ಇರೋರಿಗೂ ಟಿಕೆಟ್ ಕೊಡಲ್ಲ ಎನ್ನುತ್ತಾ ಬಿಜೆಪಿ ಹೈಕಮಾಂಡ್ ಎಂಬ ನಾನಾ ಲೆಕ್ಕಚಾರಗಳು ನಡೆಯುತ್ತಿವೆ. ಇದನ್ನೂ ಓದಿ: ಬಂಡಾಯ ಶಾಸಕರಿಂದ ಅನರ್ಹತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಮೊರೆ- ಇಂದು ವಿಚಾರಣೆ

    ಈ ನಡುವೆ ಕೆಲವರು ಅಪ್ಪಿತಪ್ಪಿ ನಮಗೆ ಟಿಕೆಟ್ ತಪ್ಪಿದ್ರೂ ತಮ್ಮ ಮಕ್ಕಳಿಗೆ ಟಿಕೆಟ್ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದಂಗೆ ಇದೆ. ಹಾಗಾಗಿ ಕೆಲ ಶಾಸಕರು ಎರಡನೇಯ ಆಪ್ಶನ್ ಆಗಿ ಮಕ್ಕಳನ್ನ ಚಾಲ್ತಿಯಲ್ಲಿಡುವ ಪ್ರಯತ್ನ ಮಾಡಿದ್ದಾರೆ. ಸದ್ಯ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ 79 ವರ್ಷ ವಯಸ್ಸಾಗಿದ್ದು, 2023ಕ್ಕೆ 80 ವರ್ಷ ತುಂಬಲಿದೆ.

    2023ಕ್ಕೆ 75 ವರ್ಷ ದಾಟುವವರು..!
    > ಎಸ್.ಎ.ರವೀಂದ್ರನಾಥ್, ವಯಸ್ಸು: 75, ದಾವಣಗೆರೆ ದಕ್ಷಿಣ
    > ಸಿ.ಎಂ.ನಿಂಬಣ್ಣನವರ್, ವಯಸ್ಸು: 75, ಕಲಘಟಗಿ
    > ಕೆ.ಎಸ್ ಈಶ್ವರಪ್ಪ, ವಯಸ್ಸು: 74, ಶಿವಮೊಗ್ಗ ನಗರ
    > ಜಿ.ಹೆಚ್.ತಿಪ್ಪಾರೆಡ್ಡಿ, ವಯಸ್ಸು: 74, ಚಿತ್ರದುರ್ಗ
    > ಮಾಡಾಳ್ ವಿರೂಪಾಕ್ಷಪ್ಪ, ವಯಸ್ಸು: 74, ಚನ್ನಗಿರಿ

    * 2023ಕ್ಕೆ 72 ವರ್ಷ ದಾಟುವವರು..!
    > ಗೋವಿಂದ ಕಾರಜೋಳ, ವಯಸ್ಸು: 71, ಮುಧೋಳ
    > ವಿ.ಸೋಮಣ್ಣ, ವಯಸ್ಸು: 71, ಗೋವಿಂದರಾಜನಗರ
    > ಹಾಲಾಡಿ ಶ್ರೀನಿವಾಸ ಶೆಟ್ಟಿ, ವಯಸ್ಸು: 71, ಕುಂದಾಪುರ
    > ಸುಭಾಷ್ ಗುತ್ತೇದಾರ್, ವಯಸ್ಸು: 71, ಆಳಂದ

    * 2023ಕ್ಕೆ 71 ವರ್ಷ ದಾಟುವವರು..!
    > ಸುಕುಮಾರ ಶೆಟ್ಟಿ, ವಯಸ್ಸು: 70, ಬೈಂದೂರು
    > ರಾಮಣ್ಣ ಲಮಾಣಿ, ವಯಸ್ಸು: 70, ಶಿರಹಟ್ಟಿ
    > ಎಂ.ಟಿ.ಬಿ.ನಾಗರಾಜ್, ವಯಸ್ಸು 70, ಪರಿಷತ್ ಸದಸ್ಯ

    Live Tv

  • ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ

    ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ – ಕೇಂದ್ರ ಸಂಪುಟ ಅನುಮೋದನೆ

    ನವದೆಹಲಿ: ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

    ದೇಶದ 74ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಅಂದರೆ 2020ರ ಆಗಸ್ಟ್‌ 15ರಂದು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡುವಾಗ ಈ ವಿಚಾರವನ್ನು ಪ್ರಸ್ತಾಪಸಿದ್ದರು. ಇದನ್ನೂ ಓದಿ: ಸೆಮಿಕಂಡಕ್ಟರ್ ಉತ್ಪಾದನೆಗೆ 76,000 ಕೋಟಿ – ಕೇಂದ್ರ ಸಂಪುಟ ಅನುಮೋದನೆ

    ಹೆಣ್ಣುಮಕ್ಕಳ ಆರೋಗ್ಯದ ವಿಚಾರವಾಗಿ ಸರ್ಕಾರ ಬದ್ಧವಾಗಿದೆ. ಅಪೌಷ್ಟಿಕತೆಯಿಂದ ಹೆಣ್ಣುಮಕ್ಕಳನ್ನು ರಕ್ಷಿಸುವುದು ಸರ್ಕಾರದ ಉದ್ದೇಶ. ಅವರು ಸರಿಯಾದ ವಯಸ್ಸಿನಲ್ಲಿ ವಿವಾಹವಾಗುವುದು ಸೂಕ್ತ ಎಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ.

    ಸದ್ಯ ಇರುವ ಕಾನೂನಿನ ಪ್ರಕಾರ, ನಿಗದಿಪಡಿಸಲಾಗಿರುವ ವಿವಾಹದ ವಯಸ್ಸು ಗಂಡುಮಕ್ಕಳಿಗೆ 21 ಹಾಗೂ ಹೆಣ್ಣುಮಕ್ಕಳಿಗೆ 18 ವರ್ಷ. ಈ ಹಿನ್ನೆಲೆಯಲ್ಲಿ ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಬಾಲ್ಯವಿವಾಹ ನಿಷೇಧ ಕಾಯಿದೆ, ವಿಶೇಷ ವಿವಾಹ ಕಾಯಿದೆ ಮತ್ತು ಹಿಂದೂ ವಿವಾಹ ಕಾಯಿದೆಗಳಲ್ಲಿ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ತಂದೆ ಸಾವಿನಿಂದ ಮನನೊಂದು 4 ತಿಂಗಳ ಬಳಿಕ ಮಗಳು ಆತ್ಮಹತ್ಯೆ

    ಜಯಾ ಜೇಟ್ಲಿ ನೇತೃತ್ವದ ನೀತಿ ಆಯೋಗದ ಕಾರ್ಯಪಡೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದೆ. ಕಳೆದ ವರ್ಷದ ಜುಲೈನಲ್ಲಿ ವಿ.ಕೆ.ಪೌಲ್‌, ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಕಾನೂನು ಸಚಿವಾಲಯದ ಸದಸ್ಯರನ್ನೊಳಗೊಂಡ ಟಾಸ್ಕ್‌ ಫೋರ್ಸ್‌ ಅನ್ನು ಕೇಂದ್ರ ಸರ್ಕಾರ ರಚಿಸಿತ್ತು.

    ಮೊದಲ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಎಂದು ಟಾಸ್ಕ್‌ ಫೋರ್ಸ್‌ ಪ್ರತಿಪಾದಿಸಿದ್ದ ಪ್ರಸ್ತಾವನೆಯ ಶಿಫಾರಸುಗಳನ್ನು ಡಿಸೆಂಬರ್‌ನಲ್ಲಿ ಸಲ್ಲಿಸಲಾಯಿತು.

  • ನನ್ನ ಉತ್ಸಾಹ ಬತ್ತಿಲ್ಲ, ಮತ್ತೆ ಪಕ್ಷ ಕಟ್ಟುತ್ತೇನೆ: ಎಚ್‍ಡಿಡಿ

    ನನ್ನ ಉತ್ಸಾಹ ಬತ್ತಿಲ್ಲ, ಮತ್ತೆ ಪಕ್ಷ ಕಟ್ಟುತ್ತೇನೆ: ಎಚ್‍ಡಿಡಿ

    – 87 ವರ್ಷ ವಯಸ್ಸಾದರೂ ರಾಜ್ಯ ಸುತ್ತುತ್ತೇನೆ
    – ಯಾರೋ ಪಕ್ಷದಿಂದ ಹೊರ ಹೋದರೆ ನಷ್ಟವಿಲ್ಲ ಜಿಟಿಡಿಗೆ ಟಾಂಗ್

    ಹಾಸನ: 1989ರಲ್ಲಿ ಎಲ್ಲರೂ ಒದ್ದರು, ನಾನೊಬ್ಬನೇ ಎದ್ದೆ. ಆಗ ಮತ್ತೆ ಪಕ್ಷ ಕಟ್ಟಲಿಲ್ಲವೇ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮತ್ತೆ ಪಕ್ಷ ಕಟ್ಟುವ ಮಾತುಗಳನ್ನಾಡಿದ್ದಾರೆ.

    ಬೆಂಗಳೂರಿನಿಂದ ಹಾಸನಕ್ಕೆ ರೈಲಿನಲ್ಲಿ ಆಗಮಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1989ರಲ್ಲಿ ಎಲ್ಲರೂ ಒದ್ದರು ಆಗ ನಾನೊಬ್ಬನೇ ಎದ್ದೆ ಆಗ ಬಿ.ಎಲ್.ಶಂಕರ್, ವೈ.ಎಸ್.ವಿ.ದತ್ತ, ಉಗ್ರಪ್ಪ ಮಾತ್ರ ಜೊತೆಗಿದ್ದರು. ಮತ್ತೆ ಪಕ್ಷ ಕಟ್ಟಲಿಲ್ಲವೇ? ನನ್ನ ಉತ್ಸಾಹ ಬತ್ತಿಲ್ಲ, ಮತ್ತೆ ಪಕ್ಷ ಕಟ್ಟುತ್ತೇನೆ. ನನಗೆ 87 ವರ್ಷ ವಯಸ್ಸಾದರೂ ಮತ್ತೆ ರಾಜ್ಯದ ಮೂಲೆ ಮೂಲೆ ಸುತ್ತುತ್ತೇನೆ ಎಂದು ಆಶಾಭಾವ ವ್ಯಕ್ತಪಡಿಸಿದರು.

    ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಜೆಡಿಎಸ್‍ಗೆ ಕರೆತರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೆಚ್,ಡಿ,ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಈ ವಿಚಾರ ನನಗೂ ತಿಳಿಸಿದ್ದಾರೆ. ಸದ್ಯದಲ್ಲೇ ಇದು ಪರಿಪೂರ್ಣವಾಗಲಿದೆ ಎಂದರು.

    ಜಿ.ಟಿ.ದೇವೇಗೌಡ ಬಿಜೆಪಿಗೆ ಹೋದರು, ಮಂತ್ರಿಯಾದರು ಮತ್ತೆ ಈಗ ಬಿಜೆಪಿಗೆ ಹೋಗುತ್ತಿದ್ದಾರೆ. ಯಾರೋ ಒಬ್ಬರು ಇಬ್ಬರು ಪಕ್ಷದಿಂದ ಹೊರ ಹೋದರೆ ಪಕ್ಷಕ್ಕೆ ನಷ್ಟವಿಲ್ಲ. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಉತ್ಸಾಹ ಬತ್ತಿಲ್ಲ, ಮತ್ತೆ ಪಕ್ಷ ಕಟ್ಟುತ್ತೇನೆ. ನನಗೆ 87 ವರ್ಷ ವಯಸ್ಸಾದರೂ ಮತ್ತೆ ರಾಜ್ಯದ ಮೂಲೆ ಮೂಲೆ ಸುತ್ತುತ್ತೇನೆ. ಕೆ.ಆರ್.ಪೇಟೆಯಲ್ಲಿ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದು ಅಲ್ಲಿಗೆ ಹೋಗಿದ್ದೆ. ತಾತ ಮತ್ತು ಮೊಮ್ಮಗ ಪಕ್ಷ ಕಟ್ಟಲು ಬಂದಿದ್ದಾರೆ ಎಂದು ಅಪಹಾಸ್ಯ ಮಾಡಿದ್ದಾರೆ. ನಾನು ತಲೆ ಕೆಡಿಸಿಕೊಳ್ಳುಬುದಿಲ್ಲ ಎಂದರು.

    ದೆಹಲಿಯ ಹಿಂಸಾಚಾರದಲ್ಲಿ ಇಂಟೆಲಿಜೆನ್ಸ್(ಗುಪ್ತಚರ ದಳ) ಮತ್ತು ಕೇಂದ್ರ ಸರ್ಕಾರದ ವೈಫಲ್ಯ ಕಾಣುತ್ತಿದೆ ಎಂದು ಕೇಂದ್ರದ ವಿರುದ್ಧ ಎಚ್‍ಡಿಡಿ ಹರಿಹಾಯ್ದರು.

  • ವಯಸ್ಸಾಗಿದೆ ಎನ್ನುವವರಿಗೆ ಒಳ್ಳೆಯದಾಗಲಿ: ಸಿಎಂ

    ವಯಸ್ಸಾಗಿದೆ ಎನ್ನುವವರಿಗೆ ಒಳ್ಳೆಯದಾಗಲಿ: ಸಿಎಂ

    ಕೊಪ್ಪಳ: ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂದು ಹೇಳುವವರಿಗೆ ಒಳ್ಳೆಯದಾಗಲಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾರ್ಮಿಕವಾಗಿ ನುಡಿದಿದ್ದಾರೆ.

    ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪಗೆ ವಯಸ್ಸಾಗಿದೆ ಎಂದು ಹಲವು ಬಿಜೆಪಿ ಮುಖಂಡರು ವರಿಷ್ಠರಿಗೆ ದೂರು ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದರು. ವಯಸ್ಸಾಗಿದೆ ಎನ್ನುವವರಿಗೆ ಒಳ್ಳೆಯದಾಗಲಿ ಎಂದು ಹೇಳಿ ಹೊರಟರು.

    ಪತ್ರಕರ್ತರ ಪ್ರಶ್ನೆಗೆ ಆಕ್ರೋಶದಿಂದಲೇ ಸಿಎಂ ಉತ್ತರಿಸಿ, ಹೊರಟು ಹೋದರು. ಇದಕ್ಕೂ ಮೊದಲು ಬಜೆಟ್ ಕುರಿತು ಮಾತನಾಡಿದ ಅವರು, ಬಜೆಟ್ ಮಂಡನೆಗೆ ಎಲ್ಲ ಸಿದ್ಧತೆ ನಡೆದಿದೆ. ಈ ಬಾರಿ ಇನ್ನೊಂದು ವಿಶೇಷ ಕಾರ್ಯಕ್ರಮ ನಡೆಯಲಿದೆ ಎಂದರು.

    ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲ ಸದಸ್ಯರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಡಾ.ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸುವ ಐತಿಹಾಸಿಕ ಕಾರ್ಯಕ್ರಮ ಇದಾಗಿದ್ದು, ಸಂವಿಧಾನದ ಕನ್ನಡ ಅನುವಾದವನ್ನು ಎಲ್ಲ ಶಾಸಕರಿಗೂ ತಲುಪಿಸಿದ್ದೇವೆ. ಓದಿಕೊಂಡು ಬರಲು ಎಲ್ಲರಿಗೂ ತಿಳಿಸಿದ್ದು, ಮಾ.3 ಮತ್ತು 4 ರಂದು ಸದಸ್ಯರು ಸಂವಿಧಾನದ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿಸಿದರು.

  • ನಿಮ್ಮನ್ನು ನೀವು ನಗೆಪಾಟಲಿಗೀಡು ಮಾಡಿಕೊಳ್ಳಬೇಡಿ – ಪಿಸಿಬಿಗೆ ಮಾಜಿ ಕ್ರಿಕೆಟಿಗ ಸಲಹೆ

    ನಿಮ್ಮನ್ನು ನೀವು ನಗೆಪಾಟಲಿಗೀಡು ಮಾಡಿಕೊಳ್ಳಬೇಡಿ – ಪಿಸಿಬಿಗೆ ಮಾಜಿ ಕ್ರಿಕೆಟಿಗ ಸಲಹೆ

    ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಆಟಗಾರರು ತಮ್ಮ ನಿಜವಾದ ವಯಸ್ಸನ್ನು ಬಹಿರಂಗ ಪಡಿಸಬೇಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ಪಾಕ್ ಕ್ರಿಕೆಟ್ ಬೋರ್ಡಿಗೆ ಸಲಹೆ ನೀಡಿದ್ದಾರೆ.

    ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ತಂಡದ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ಆಟಗಾರ ನಸೀಮ್ ಶಾ ಅಂತರ್ ರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ನಸೀಮ್ ಶಾಗೆ ಕೇವಲ 16 ವರ್ಷ ವಯಸ್ಸು ಎಂದು ಪಿಸಿಬಿ ಅಧಿಕೃತವಾಗಿ ಹೇಳಿತ್ತು. ಸದ್ಯ ಈತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದಾನೆ. ಈ ಕುರಿತು ವ್ಯಂಗ್ಯವಾಡಿರುವ ಪಾಕ್ ಮಾಜಿ ನಾಯಕ ರಶೀದ್ ಲತೀಫ್ ಪಿಸಿಬಿಗೆ ಸಲಹೆ ನೀಡಿ, ನಿಮ್ಮನ್ನು ನೀವು ನಗೆಪಾಟಲಿಗೀಡು ಮಾಡಿಕೊಳ್ಳಬೇಡಿ ಎಂದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಲತೀಫ್, ಪಾಕ್ ಆಟಗಾರರು ಅಂಡರ್-19 ತಂಡದಲ್ಲಿ ಆಡುತ್ತಾರೆ. ಅಂಡರ್-19 ಆಡುವವರು ಅಂಡರ್-16 ತಂಡದ ಪರ ಆಡುತ್ತಾರೆ. ಅಂಡರ್-16 ಹುಡುಗರು ಅಂಡರ್-13ರಲ್ಲಿ ಇರುತ್ತಾರೆ. ಅಂಡರ್-13 ಆಡುವ ಮಕ್ಕಳು ತಾಯಿಯ ಮಡಿಲಲ್ಲೇ ಇರುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೇ ಇದು ಇದೆಲ್ಲವೂ ಒಂದು ಪ್ರಹಸನವಾಗಿ ಬದಲಾಗಿದ್ದು, ನಿಮ್ಮನ್ನು ನೀವು ನಗೆಪಾಟಲೀಗಿಡು ಮಾಡಿಕೊಳ್ಳಬೇಡಿ. ಪಿಸಿಬಿ ಇದರ ಮೇಲೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

    ಈ ಹಿಂದೆಯೂ ಪಾಕ್ ಕ್ರಿಕೆಟ್ ಆಟಗಾರರು ತಮ್ಮ ವಯಸ್ಸಿನ ತಪ್ಪು ಮಾಹಿತಿ ನೀಡಿಯೇ ಹಲವು ಬಾರಿ ಚರ್ಚೆಗೆ ಕಾರಣರಾಗಿದ್ದು, ಪಾಕ್ ಮಾಜಿ ಆಟಗಾರ ಅಫ್ರಿದಿ ವಯಸ್ಸಿನ ಬಗ್ಗೆಯೂ ಸುಳ್ಳು ಹೇಳಿದ್ದರು. 1996ರಲ್ಲಿ 36 ಎಸೆತಗಳಲ್ಲಿ ಶತಕ ಸಿಡಿಸಿದ್ದ ಆಫ್ರಿದಿಗೆ ಕೇವಲ 16 ವರ್ಷ ಎನ್ನಲಾಗಿತ್ತು. ವೃತ್ತಿ ಜೀವನದೂದ್ದಕ್ಕೂ ಈ ಕುರಿತು ಚರ್ಚೆಯಾದರೂ ಅಫ್ರಿದಿ ಮಾತ್ರ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಆದರೆ ನಿವೃತ್ತಿಯ ಬಳಿಕ ಈ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದ್ದ ಅಫ್ರಿದಿ, ಆ ವೇಳಗೆ ತಮಗೆ 21 ವರ್ಷ ವಯಸ್ಸಾಗಿತ್ತು ಎಂದಿದ್ದರು. ಸದ್ಯ ನಸೀಮ್ ಶಾನನ್ನು ಅಂಡರ್-19 ತಂಡಕ್ಕೆ ಆಯ್ಕೆ ಮಾಡಿರುವ ಬಗ್ಗೆ ಪಾಕ್‍ನ ಹಲವು ಮಾಜಿ ಕ್ರಿಕೆಟ್ ಆಟಗಾರರು ಕಿಡಿಕಾರಿದ್ದಾರೆ.

  • ವಯಸ್ಸು ಹೆಚ್ಚಾಗ್ತಾ ಇರೋದ್ರಿಂದ ಭಯವಾಗ್ತಿದೆ: ಸಲ್ಮಾನ್ ಖಾನ್

    ವಯಸ್ಸು ಹೆಚ್ಚಾಗ್ತಾ ಇರೋದ್ರಿಂದ ಭಯವಾಗ್ತಿದೆ: ಸಲ್ಮಾನ್ ಖಾನ್

    ಮುಂಬೈ: ವಯಸ್ಸು ಹೆಚ್ಚು ಆಗುತ್ತಾ ಇರೋದರಿಂದ ಸಹಜವಾಗಿ ನನಗೆ ಭಯ ಆಗುತ್ತಿದೆ ಎಂದು ಬಾಲಿವುಡ್ ಭಾಯಿಜಾನ್, ದಬಾಂಗ್ ಹೀರೋ 53 ವರ್ಷದ ಸಲ್ಮಾನ್ ಖಾನ್ ಹೇಳಿದ್ದಾರೆ.

    ಖಾಸಗಿ ಮ್ಯಾಗಜೀನ್ ಒಂದಕ್ಕೆ ಸಂದರ್ಶನ ನೀಡಿರುವ ಸಲ್ಮಾನ್ ಖಾನ್ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ಹಲವು ವರ್ಷಗಳಿಂದ ಆ್ಯಕ್ಷನ್ ಸೀನ್ ಮಾಡಿಕೊಂಡು ಬಂದಿದ್ದರಿಂದ ನನ್ನ ದೇಹ ಒಗ್ಗಿಕೊಂಡಿದೆ. ಕೆಲವೊಮ್ಮೆ ಆಕ್ಷನ್ ಸೀನ್ ಚಿತ್ರೀಕರಿಸುವ ಮೊದಲು ಐದರಿಂದ ಆರು ಬಾರಿ ರಿಹರ್ಸಲ್ ಮಾಡೋದು ಅನಿವಾರ್ಯ. ಪ್ರತಿಯೊಂದು ದೃಶ್ಯಗಳು ತೆರೆಯ ಮೇಲೆ ಚೆನ್ನಾಗಿ ಬರಲು ರಿಹರ್ಸಲ್ ಅಗತ್ಯ. ಕೆಲವೊಮ್ಮೆ ತರಬೇತಿ ವೇಳೆ ಮೇಲಿಂದ ಕೆಳಗೆ ಬೀಳುವಾಗ ಸಣ್ಣ ನೋವುಗಳು ಉಂಟಾಗುತ್ತವೆ. ‘ಭಾರತ್’ ಬಳಿಕ ಪಕ್ಕಾ ಆ್ಯಕ್ಷನ್ ಸೀನ್ ಗಳನ್ನೇ ಹೊಂದಿರುವ ‘ದಬಾಂಗ್-3’ರಲ್ಲಿ ನಟಿಸುತ್ತಿದ್ದೇನೆ. ಪ್ರತಿ ದೃಶ್ಯದಲ್ಲಿಯೂ ಒಂದೇ ಎನರ್ಜಿಯನ್ನು ಕಾಪಾಡಿಕೊಳ್ಳಬೇಕು. ಈ ರೀತಿಯ ಸಿನಿಮಾಗಳಿಂದಾಗಿಯೇ ನನ್ನ ದೇಹ ಇಂದಿಗೂ ಫಿಟ್ ಆಗಿದೆ ಎಂದು ತಿಳಿಸಿದ್ದಾರೆ.

    ವಯಸ್ಸು ಹೆಚ್ಚಾಗೋದು ಎಲ್ಲರಲ್ಲಿಯೂ ಭಯ ಉಂಟು ಮಾಡುತ್ತದೆ. ಸಹಜವಾಗಿಯೇ ಆ ವಯಸ್ಸಿನ ನಂಬರ್ ನನ್ನನ್ನು ಭಯ ಹುಟ್ಟಿಸುತ್ತಿದೆ. ಪ್ರತಿ ಸಿನಿಮಾಗೂ ನಮ್ಮಿಂದ ಬೆಸ್ಟ್ ನೀಡಲು ಪ್ರಯತ್ನಿಸೋದು ನಮ್ಮ ಕರ್ತವ್ಯ. ಚಿತ್ರದ ದೃಶ್ಯಗಳು ಸಹಜವಾಗಿ ಕಾಣುವಂತೆ ಚಿತ್ರೀಕರಿಸಲು ನಿರ್ದೇಶಕರು ಪ್ರುಯತ್ನಿಸುತ್ತಾರೆ. ನಿರ್ದೇಶಕರು ಕಲ್ಪನೆಯನುಗುಣವಾಗಿ ನಾವು ನಟಿಸಬೇಕು. ಅಮಿತಾಬ್ ಬಚ್ಚನ್ ಮತ್ತು ಅನಿಲ್ ಕಪೂರ್ ಅವರಿಗೆ ವಯಸ್ಸಾಗಿದೆ ಎಂದ್ರೆ ಜನ ನಂಬಲ್ಲ. ಇಂದಿಗೂ ತಮ್ಮ ಫಿಟ್ ನೆಸ್ ನಿಂದಾಗಿ ಇಬ್ಬರೂ ನಟರೂ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಸಂಜಯ್ ದತ್, ತಮ್ಮ ತೂಕವನ್ನು ಇಳಿಸಿಕೊಂಡು ತೆಳ್ಳಗಾಗಿದ್ದಾರೆ ಎಂದರು.

    ಇದೇ ಸಂದರ್ಶನದಲ್ಲಿ ಸಲ್ಮಾನ್, ದಿನಕ್ಕೆ ಕೇವಲ ಎರಡೂವರೆ ಗಂಟೆಯಿಂದ ಮೂರು ಗಂಟೆ ಮಾತ್ರ ನಿದ್ದೆ ಮಾಡುತ್ತೇನೆ ಎಂಬ ವಿಚಾರವನ್ನು ತಿಳಿಸಿದ್ದಾರೆ. ಬಿಡುವಿನ ವೇಳೆ ಪೇಟಿಂಗ್, ಬರೆಯುತ್ತೇನೆ ಮತ್ತು ಟಿವಿ ನೋಡುತ್ತೇನೆ. ನಚ್ ಬಲಿಯೇ-9 ರಿಯಾಲಿಟಿ ಶೋ ಮತ್ತು ದಬಾಂಗ್-3ರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾನೆ. ಈ ಎರಡೂ ಕೆಲಸ ಮುಗಿದ ಬಳಿಕ ಸಂಜಯ್ ಲೀಲಾ ಬನ್ಸಾಲಿಯವರ ‘ಇಂಶಾಅಲ್ಲಾಹ’ ಚಿತ್ರಕ್ಕೆ ತೂಕ ಕಡಿಮೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

  • ನ್ಯಾಯಾಧೀಶರ ಹುದ್ದೆ ಭರ್ತಿ ಮಾಡುವಂತೆ ಪ್ರಧಾನಿ ಮೋದಿಗೆ ನ್ಯಾ.ಗೊಗೋಯ್ ಪತ್ರ

    ನ್ಯಾಯಾಧೀಶರ ಹುದ್ದೆ ಭರ್ತಿ ಮಾಡುವಂತೆ ಪ್ರಧಾನಿ ಮೋದಿಗೆ ನ್ಯಾ.ಗೊಗೋಯ್ ಪತ್ರ

    ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಹಾಗೂ ನಿವೃತ್ತಿ ಅವಧಿಯನ್ನು ಹೆಚ್ಚಿಸುವಂತೆ ನ್ಯಾ.ರಂಜನ್ ಗೊಗೋಯ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

    ನ್ಯಾಯಮೂರ್ತಿಗಳ ನೇಮಕ ಮಾಡಿಕೊಳ್ಳುವ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಸಂವಿಧಾನ ವಿಧಿ 128 ಮತ್ತು 224ಎ ತಿದ್ದುಪಡಿ ತಂದು ಹಲವು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಸಹಕರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರಿಗೆ 3 ಪತ್ರ ಬರೆದಿರುವ ನ್ಯಾ.ರಂಜನ್ ಗೊಗೋಯ್, ಈವರೆಗೆ 58,669 ಪ್ರಕರಣಗಳು ಬಾಕಿ ಉಳಿದಿದ್ದು, ಪ್ರತಿ ದಿನ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆ ಇರುವುದರಿಂದ ಪ್ರಕರಣಗಳು ಬಾಕಿ ಉಳಿದಿವೆ. ಅಲ್ಲದೆ, ನ್ಯಾಯಾಧೀಶರ ಕೊರತೆಯಿಂದಾಗಿ ಕಾನೂನಿನ ಪ್ರಶ್ನೆಗಳನ್ನು ಒಳಗೊಂಡ ಪ್ರಕರಣ ನಿರ್ಧರಿಸಲು ಅಗತ್ಯ ಸಂವಿಧಾನ ಪೀಠಗಳನ್ನು ರಚಿಸಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

    1989ರಲ್ಲಿ ಅಂದರೆ ಮೂರು ದಶಕಗಳ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 18 ರಿಂದ 26ಕ್ಕೆ ಹೆಚ್ಚಿಸಲಾಗಿತ್ತು. ಇದಾದ ಎರಡು ದಶಕಗಳ ನಂತರ 2009ರಲ್ಲಿ ಈ ಸಂಖ್ಯೆಯನ್ನು ಮುಖ್ಯ ನ್ಯಾಯಮೂರ್ತಿಯೂ ಸೇರಿದಂತೆ 31ಕ್ಕೆ ಹೆಚ್ಚಿಸಲಾಯಿತು. ಈ ಕುರಿತು ನೆನಪು ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.

    ಎರಡನೇ ಪತ್ರದಲ್ಲಿ ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ಅವಧಿಯನ್ನು 62ರಿಂದ 65 ವರ್ಷಕ್ಕೆ ಹೆಚ್ಚಿಸುವ ಕುರಿತು ಸಂವಿಧಾನ ತಿದ್ದುಪಡಿ ತರಬೇಕು ಎಂದು ಗೊಗೋಯ್ ಅವರು ಮನವಿ ಮಾಡಿದ್ದಾರೆ. ಹೈ ಕೋರ್ಟ್ ನ್ಯಾಯಾಧೀಶರ 399(ಶೇ.37) ಹುದ್ದೆಗಳೂ ಸಹ ಖಾಲಿ ಇದ್ದು, ಶಿಘ್ರವೇ ಈ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಕಾರ್ಯನಿರತ ನ್ಯಾಯಾಧೀಶರ ಬಲವನ್ನು ಅನುಮೋದಿತ ನ್ಯಾಯಾಧೀಶರ ಮಟ್ಟಕ್ಕೆ ತರಲು ಸಾಧ್ಯವಿಲ್ಲ. ಆದರೆ ಖಾಲಿ ಇರುವ ಹುದ್ದೆಗಳ ಭರ್ತಿ ಕುರಿತು ಗಮನಹರಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಕೊನೆಗೂ ಅಫ್ರಿದಿ ತನ್ನ ಅಸಲಿ ವಯಸ್ಸನ್ನು ರಿವೀಲ್ ಮಾಡಿದ್ರು

    ಕೊನೆಗೂ ಅಫ್ರಿದಿ ತನ್ನ ಅಸಲಿ ವಯಸ್ಸನ್ನು ರಿವೀಲ್ ಮಾಡಿದ್ರು

    ನವದೆಹಲಿ: ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ತಮ್ಮ ನಿಜವಾದ ಹುಟ್ಟಿದ ವರ್ಷವನ್ನು ರಿವೀಲ್ ಮಾಡಿದ್ದು, ತಮ್ಮ ಆತ್ಮಕಥೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

    ಅಫ್ರಿದಿ ಪಾಕಿಸ್ತಾನದ ಪರ ಕ್ರಿಕೆಟ್ ಪಾದಾರ್ಪಣೆ ಮಾಡಿದ ಸಂದರ್ಭದಿಂದಲೂ ಅವರ ವಯಸ್ಸಿನ ಬಗ್ಗೆ ಹಲವು ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೇ ಕ್ರಿಕೆಟ್ ನಿಂದ ಅಫ್ರಿದಿ ನಿವೃತ್ತಿ ಹೊಂದಿದ ಬಳಿಕವೂ ಈ ಸಂದೇಹ ಮುಂದುವರಿದಿತ್ತು. ಪಾಕ್ ಕ್ರಿಕೆಟ್ ತಂಡ ಪರ ಹಲವು ಪಂದ್ಯದಲ್ಲಿ ಗೇಮ್ ಚೇಂಜಿಂಗ್ ಪ್ರದರ್ಶನ ನೀಡಿದ ಅಫ್ರಿದಿ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿದ್ದರು. ಅವರ ಅಭಿಮಾನಿ ಬಳಗದಲ್ಲೂ ವಯಸ್ಸಿನ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದಿತ್ತು.

    ಇದುವರೆಗೂ ಕ್ರಿಕೆಟ್ ದಾಖಲೆಗಳಲ್ಲಿ ಅಫ್ರಿದಿ 1980ರಲ್ಲಿ ಜನಿಸಿದ್ದರು ಎಂದೇ ದಾಖಲಾಗಿದ್ದು, ಆದರೆ ತಾನು ಜನಿಸಿದ್ದು 1975ರಲ್ಲಿ ಎಂದಿದ್ದಾರೆ. ಅಫ್ರಿದಿ ಶ್ರೀಲಂಕಾ ವಿರುದ್ಧ 1996 ರಲ್ಲಿ ನಡೆದ ಪಂದ್ಯದಲ್ಲಿ ಕೇವಲ 37 ಎಸೆತದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದರು. ಅಫ್ರಿದಿ ಅವರ ಆಟೋಬಯೋಗ್ರಾಫಿ ‘ಗೇಮ್ ಚೇಂಜರ್’ ಪುಸ್ತಕದ ಅನ್ವಯ ಈಗ 16ರ ವಯಸ್ಸಿನಲ್ಲಿ ಅಫ್ರಿದಿ ಶತಕ ಸಿಡಿಸಿಲ್ಲ, ಆಗ 21 ವರ್ಷ ವಯಸ್ಸಾಗಿತ್ತು ಎಂಬುವುದು ರುಜುವಾಗಿದೆ. ತನ್ನ ಡೇಟ್ ಆಫ್ ಬರ್ತ್ ದಿನಾಂಕವನ್ನು ನಮೂದಿಸುವ ವೇಳೆ ಅಧಿಕಾರಿಗಳು ತಪ್ಪಾಗಿ ಬರೆದಿದ್ದಾರೆ. ಹೀಗಾಗಿ ವಯಸ್ಸು ಕಡಿಮೆ ಆಗಿದೆ ಎಂದಿದ್ದಾರೆ. 27 ಟೆಸ್ಟ್, 398 ಏಕದಿನ ಹಾಗೂ 99 ಏಕದಿನ ಪಂದ್ಯಗಳನ್ನು ಆಡಿರುವ ಅಫ್ರಿದಿ 2016ರಲ್ಲಿ ನಿವೃತ್ತಿ ಘೋಷಿಸಿದ್ದರು.

    ಈ ಹಿಂದೆ ಟೀಂ ಇಂಡಿಯಾ ಮಾಜಿ ಆಟಗಾರರ ರಾಹುಲ್ ದ್ರಾವಿಡ್ ಅವರು ಆಟಗಾರರ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಎಂಸಿಸಿ ಕ್ರಿಕೆಟ್ ಉಪನ್ಯಾಸದಲ್ಲಿ ಈ ಬಗ್ಗೆ ಮಾತನಾಡಿದ್ದ ರಾಹುಲ್, ಕ್ರಿಕೆಟ್ ನಲ್ಲಿ ವಯಸ್ಸಿನ ಬದಲಾವಣೆ ಅಪರಾಧ ಎಂದು ಅಭಿಪ್ರಾಯ ಪಟ್ಟಿದ್ದರು.

  • ನಂಗೆ ಎಷ್ಟು ವಯಸ್ಸು- 111 ಅಂದಾಗ, ಬಹಳಾಯ್ತು ಅಂದ್ರು ನಡೆದಾಡೋ ದೇವ್ರು

    ನಂಗೆ ಎಷ್ಟು ವಯಸ್ಸು- 111 ಅಂದಾಗ, ಬಹಳಾಯ್ತು ಅಂದ್ರು ನಡೆದಾಡೋ ದೇವ್ರು

    ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮಠದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಈ ವೇಳೆ ಸಿದ್ದಗಂಗಾ ಶ್ರೀ ನಂಗೆ ಎಷ್ಟು ವಯಸ್ಸಾಯ್ತು ಎಂದು ಪ್ರಶ್ನಿಸಿದ್ದಾರೆ. ಆಗ ಕಿರಿಯ ಶ್ರೀ 111 ಎಂದಾಗ ಬಹಳ ಆಯ್ತು ಎಂದು ನಡೆದಾಡುವ ದೇವರು ಹೇಳಿದ್ದಾರೆ.

    ಸಿದ್ದಗಂಗಾ ಶ್ರೀಗಳ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿಸಿಎಂ ಜಿ.ಪರಮೇಶ್ವರ್ ಸಿದ್ದಗಂಗಾ ಮಠಕ್ಕೆ ಆಗಮಿಸಿದರು. ಡಿಸಿಎಂ ಶ್ರೀಗಳ ಆರೋಗ್ಯ ವಿಚಾರಿಸಿ ಸಿದ್ದಗಂಗಾ ಶ್ರೀಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಬೇಕೋ, ಬೇಡ್ವೋ ಎನ್ನುವುದನ್ನು ವೈದ್ಯರ ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುತ್ತೆ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.

    ಸಿದ್ದಗಂಗಾ ಮಠದಲ್ಲಿ ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾತಾಡಿದರ ಅವರು, ಶ್ರೀಗಳು ನನ್ನ ಜೊತೆ ಮಾತಾಡಿದ್ರು. ಯಾವಾಗ ಬಂದ್ರಿ, ಚೆನ್ನಾಗಿದ್ದೀರಾ ಅಂತ ಕೇಳಿದ್ರು. ಕಿರಿಯ ಶ್ರೀಗಳ ಬಳಿ ತಮಗೆ ಎಷ್ಟು ವಯಸ್ಸಾಯ್ತು ಅಂತ ಪ್ರಶ್ನಿಸಿದ್ರು. ಆಗ ಕಿರಿಯ ಶ್ರೀಗಳು 111 ವರ್ಷ ಅಂದ್ರು. ಅದಕ್ಕೆ ಬಹಳ ಆಯ್ತು, ಬಹಳ ಆಯ್ತು ಅಂದ್ರು. ಶ್ರೀಗಳು ಎಂದಿನಂತೆ ಲವಲವಿಕೆಯಿಂದ ಮಾತನಾಡಿದ್ದಾರೆ ಅಂತ ಪರಮೇಶ್ವರ್ ಹೇಳಿದ್ದಾರೆ.

    ಸಿದ್ದಗಂಗ ಶ್ರೀ ಅವರನ್ನು ಬಿಜಿಎಸ್ ಆಸ್ಪತ್ರೆಯ ಡಾ. ರವೀಂದ್ರ ಅವರ ತಂಡ ಬಂದು ತಪಾಸಣೆ ನಡೆಸಿ ಚಿಕಿತ್ಸೆಯನ್ನು ನೀಡಿದೆ. ನಡೆದಾಡುವ ದೇವರು ಚೇತರಿಸಿಕೊಂಡಿದ್ದಾರೆ. ಸಿದ್ದಗಂಗಾ ಶ್ರೀಗಳು ಆರೋಗ್ಯರಾಗಿದ್ದಾರೆಂದು ಮಠದ ಕಿರಿಯ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ವರ್, ಹೃದಯ ಬಡಿತದಲ್ಲಿ ಸ್ವಲ್ಪ ಏರುಪೇರು ಕಂಡುಬಂದಿದ್ದು, ಜ್ವರದಿಂದ ಬಳಲುತ್ತಿದ್ದರು. ಬಳಿಕ ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರ ಅವರ ತಂಡ ಬಂದು ತಪಾಸಣೆ ನಡೆಸಿ ಏನು ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ. ಇಂಜೆಕ್ಷನ್ ನೀಡಿದ ಬಳಿ ಸ್ವಾಮೀಜಿ ಕೂಡ ಆರಾಮಗಿದ್ದಾರೆ. ಪೂಜೆಯನ್ನು ಕೂಡ ಮಾಡಿದ್ದಾರೆ ಎಂದು ಹೇಳಿದ್ದಾರೆ.

    2018 ಜನವರಿಯಲ್ಲಿ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಅಂದು ಅಳವಡಿಸಿದ್ದ ಸ್ಟಂಟ್ ಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಡಿಸೆಂಬರ್ 1ರಂದು ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಆಗಮಿಸಿದ್ದ ಶ್ರೀಗಳು ವ್ಹೀಲ್ ಚೇರ್ ನಲ್ಲಿ ಕುಳಿತುಕೊಳ್ಳಲು ಒಪ್ಪದೇ ನಡೆದುಕೊಂಡು ಹೋಗುವ ಮೂಲಕ ಎಲ್ಲರನ್ನು ಅಚ್ಚರಿಸಿಗೊಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv