Tag: ವಚನಾನಂದ ಶ್ರೀ

  • 3-4ನೇ ಪೀಠ ಎನ್ನುವುದೆಲ್ಲ ಮಾಧ್ಯಮಗಳ ಸೃಷ್ಟಿ : ವಚನಾನಂದ ಶ್ರೀ

    3-4ನೇ ಪೀಠ ಎನ್ನುವುದೆಲ್ಲ ಮಾಧ್ಯಮಗಳ ಸೃಷ್ಟಿ : ವಚನಾನಂದ ಶ್ರೀ

    ಧಾರವಾಡ: ವಸಂತಋತು ಬಂದಾಗ ಕಾಗೆ, ಕೋಗಿಲೆ ಯಾವುದು ಗೊತ್ತಾಗುತ್ತೆ ಎಂದು ಪಂಚಮಸಾಲಿ ಹರಿಹರ ಪೀಠಾಧಿಪತಿ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

    ಪಂಚಮಸಾಲಿ ಮೂರನೇ ಪೀಠ ಸ್ಥಾಪನೆ ವಿಚಾರವಾಗಿ ಧಾರವಾಡದಲ್ಲಿ ವಚನಾನಂದ ಸ್ವಾಮೀಜಿ ಮಾತನಾಡಿದ್ದು, 3ನೇ ಪೀಠ ನಮ್ಮ ಸಾನ್ನಿಧ್ಯದಲ್ಲಿಯೇ ಆಗುತ್ತಿದೆ. ಅದು ಸಹ ನಮ್ಮದೇ ಪೀಠ. 3-4ನೇ ಪೀಠ ಎನ್ನುವುದೆಲ್ಲ ಮಾಧ್ಯಮಗಳ ಸೃಷ್ಟಿ ಮಾತ್ರ ಎಂದು ವಿವರಿಸಿದರು. ಇದನ್ನೂ ಓದಿ: ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ – ರಜೆ ಫೋಷಿಸಿದ ಮಹಾರಾಷ್ಟ್ರ ಸರ್ಕಾರ!

    ನಮ್ಮ ದೃಷ್ಟಿಯಲ್ಲಿ ಒಂದು-ಎರಡನೇ ಪೀಠ ಅಂತಿಲ್ಲ. ಸಂಘಟನೆ ದೃಷ್ಟಿಯಿಂದ ಆ ಪೀಠ ಆಗುತ್ತಿದೆ ಎಂದ ಅವರು, ಲಕ್ಷಾಂತರ ಭಕ್ತರ ಹಿತದೃಷ್ಟಿಯಿಂದ ಆ ಪೀಠ ನಡೆಯುತ್ತಿದೆ. ಪೀಠಾಧಿಪತಿ ಸಹ ಪಂಚಮಸಾಲಿ ಸ್ವಾಮೀಜಿಗಳೇ ಎಂದು ತಿಳಿಸಿದರು.

    ಇದು ಪ್ರಜಾಪ್ರಭುತ್ವ. ಎಲ್ಲರಿಗೂ ಅವರ ವಿಚಾರ ಹೇಳುವ ಹಕ್ಕು ಇದೆ. ವಸಂತಋತು ಬಂದಾಗ ಕಾಗೆ, ಕೋಗಿಲೆ ಯಾವುದು ಗೊತ್ತಾಗುತ್ತೆ. ಆ ವಸಂತ ಋತುವಿಗಾಗಿ ನೀವು ಕಾಯಿರಿ ಎಂದರು. ಪಂಚಮಸಾಲಿ ಸಮಾಜಕ್ಕೆ ಶಕ್ತಿ ತುಂಬಲು ಹರಿಹರ ಪೀಠ ಆಗಿತ್ತು. ಅದರ ಜೊತೆಗೆ ಈಗ ಈ ಪೀಠ ಎಂದ ಅವರು, ಮಹಾದೇವ ಶಿವಾಚಾರ್ಯ ಸ್ವಾಮೀಜಿ ಅದಕ್ಕೆ ಪೀಠಾಧಿಪತಿ ಆಗುತ್ತಾರೆ. ನಾವು ಕಟ್ಟುವವರು, ಬೆಳೆಸುವವರು ಹೇಳಿದರು. ಇದನ್ನೂ ಓದಿ: ಆಲ್ಕೋಹಾಲ್ ಎಂದು ತಪ್ಪಾಗಿ ಆಸಿಡ್ ಕುಡಿದ!

    ಪೀಠ ಹೆಚ್ಚಾದ ಮೇಲೆ ಭಕ್ತರ ಸಂಖ್ಯೆ ಕಡಿಮೆಯಾಗುತ್ತೆಂಬ ಭಯ ನಮಗಿಲ್ಲ. ಪ್ರಾಂತ್ಯವಾರು ಪೀಠ ಮತ್ತು ಸಂಘಟನೆ ಮಾತ್ರ ನಮ್ಮ ಮೂಲ ಉದ್ದೇಶ ಎಂದು ವಿವರಿಸಿದರು.

  • ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ: ಡಿಸಿಎಂ

    ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ: ಡಿಸಿಎಂ

    – ಯೋಗ ಯಾವುದೇ ದೇಶ-ಧರ್ಮಕ್ಕೆ ಸೀಮಿತವಲ್ಲ 

    ಬೆಂಗಳೂರು: ಮನುಕುಲದ ಮಾನಸಿಕ ದೈಹಿಕ ಸದೃಢತೆಗಾಗಿ ಹಿರಿಯರು ಕೊಟ್ಟು ಹೋಗಿರುವ ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ ಎಂದು ಉನ್ನತ ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಡಿದ ಅವರು, ಯೋಗ ಶಿಕ್ಷಣವನ್ನು ರಾಜ್ಯದ ಪಠ್ಯಕ್ರಮದಲ್ಲಿ ಸೇರಿಸಲಾಗುವುದು. ಉನ್ನತ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಹಾಗೂ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ:  ಗಾಳಿ-ಮಳೆಗೆ ಉರುಳುತ್ತಿರುವ ಮರಗಳ ರಕ್ಷಣೆಗೆ ಸರ್ಕಾರದ ಹೊಸ ಪ್ಲ್ಯಾನ್

    ಮನುಕುಲದ ಮಾನಸಿಕ ದೈಹಿಕ ಸದೃಢತೆಗಾಗಿ ಹಿರಿಯರು ಕೊಟ್ಟು ಹೋಗಿರುವ ಯೋಗಕ್ಕೆ ಈಗ ವಿಶ್ವ ಮನ್ನಣೆ ಸಿಕ್ಕಿದೆ. ಮಕ್ಕಳ ಏಕಾಗ್ರತೆ ಮತ್ತು ಬೆಳವಣಿಗೆಗೆ ಇದು ಅತಿ ಹೆಚ್ಚು ಪರಿಣಾಮಕಾರಿಯಾಗಿದೆ.ಈ ವರ್ಷದಿಂದಲೇ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯೋಗವನ್ನು ಪಠ್ಯವನ್ನಾಗಿ ಅಳವಡಿಸುವ ಅಂಶವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ವಹಿಸಿದೆ. ಮಕ್ಕಳು ಆರಂಭದಿಂದಲೇ ಶೈಕ್ಷಣಿಕವಾಗಿ ಬೆಳವಣಿಗೆ ಸಾಧಿಸುವುದರ ಜೊತೆಗೆ ಯೋಗದ ಮೂಲಕ ದೈಹಿಕ-ಮಾನಸಿಕವಾಗಿ ಸದೃಢರಾಗಲಿದ್ದಾರೆ ಎಂದು ಡಿಸಿಎಂ ಹೇಳಿದರು. ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷರೂ ಆದ ಶಾಸಕ ಗೋವಿಂದರಾಜು ಅವರು ಯೋಗವನ್ನು ಶಿಕ್ಷಣದ ಪಠ್ಯದಲ್ಲಿ ಸೇರಿಸಬೇಕೆಂದು ಮನವಿ ಮಾಡಿದರು. ಅದಕ್ಕೆ ಡಿಸಿಎಂ ಸ್ಪಂದಿಸಿ ಈ ಪ್ರತಿಕ್ರಿಯೆ ನೀಡಿದರು.

    ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ:

    ಯೋಗ ದಿನಾಚರಣೆಗೆ ಸಾನ್ನಿಧ್ಯ ವಹಿಸಿ ಆಸೀರ್ವಚನ ನೀಡಿದ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರು, ಯೋಗವು ಯಾವುದೇ ದೇಶ, ಜಾತಿ, ಧರ್ಮಕ್ಕೆ ಸೀಮಿತವಾದುದ್ದಲ್ಲ. ಇದು ಮನುಷ್ಯನ ಅಸ್ತಿತ್ವಕ್ಕೆ ಸೇರಿರುವಂಥದ್ದು. ಮನುಷ್ಯನನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯಲು ನಮ್ಮ ಹಿರಿಯರು ಸಂಶೋಧಿಸಿದ ವಿಜ್ಞಾನವೇ ಯೋಗ ಎಂದು ನುಡಿದರು.

    ಯೋಗ ಭಾರತಕ್ಕೆ ಸೇರಿದ್ದು ಎಂದು ಜಗತ್ತು ಅದನ್ನು ಬಳಸದೇ ಇರಬಾರದು. ಹಾಗೆ ಮಾಡಿದರೆ ಜಗತ್ತಿಗೇ ನಷ್ಟ. ಯುರೋಪಿಯನ್ ವಿಜ್ಞಾನಿ ಲಾವಾಶಿಯರ್ ಅವರು ಆಮ್ಲಜನಕವನ್ನು ಸಂಶೋಧಿಸಿದರು ಎಂಬ ಕಾರಣಕ್ಕೆ ನಾವು ಅದನ್ನು ಬಳಸದೇ ಇದ್ದರೆ ನಮಗೇ ನಷ್ಟ. ಹಾಗೆಯ ಯೋಗವೂ ಕೂಡ. ಯೋಗ ಜಗತ್ತಿನ ಪ್ರತಿಯೊಬ್ಬರ ಜೀವನ ಶೈಲಿ ಆಗಬೇಕು ಎಂದು ಸ್ವಾಮೀಜಿ ಅವರು ಆಶಯ ವ್ಯಕ್ತಪಡಿಸಿದರು.

    ವಚನಾನಂದ ಶ್ರೀಗಳಿಂದ ಯೋಗ ಮಾರ್ಗದರ್ಶನ:

    ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಯೋಗ ಮಾರ್ಗದರ್ಶನ ನೀಡಿದರು. ಯೋಗ ಪಟುಗಳಿಂದ ಶ್ರೀಗಳವರು ‘ಕಟ್ಟಿ ಚಕ್ರಾಸನ’, ‘ತ್ರಿಕೋನಾಸನ’, ‘ಊಧ್ರ್ವ ತಾಡಾಸನ’, ‘ಪಾದ ಹಸ್ತಾಸನ’, ‘ಉಸ್ಟ್ರಾಸನ’, ‘ಶಶಾಂಕಾಸನ’, ‘ಮಂಡೂಕಾಸನ’, ‘ಮಕರಾಸನ’, ‘ಭುಜಂಗಾಸನ’, ‘ಬಾಲ ಕ್ರೀಡಾಸನ’, ‘ಶಲ್ಬಾಸನ’, ‘ಉತ್ಥಾನ ಪಾದಾಸನ’, ‘ಅರ್ಧಪವನ ಮುಕ್ತಾಸನ’, ‘ಪವನ ಮುಕ್ತಾಸನ’ ಜತೆಗೆ, ‘ಕಪಾಲಬಾತಿ’, ‘ಪ್ರಾಣಯಾಮ’, ‘ನಾಡಿ ಶೋಧನ’, ‘ಶೀಥಲಿ ಪ್ರಾಣಯಾಮ’, ‘ಭ್ರಾಮರಿ ಪ್ರಾಣಯಾಮ’ ಮಾಡಿಸಿದರು.

    ಕ್ರೀಡಾ ಮತ್ತು ಯವಜನ ಸಬಲೀಕರಣ ಖಾತೆ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪ್ರಭಾಕರ್, ಯುವಜನ ಸೇವೆ ಇಲಾಖೆ ಆಯುಕ್ತ ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

  • ಮಧ್ಯಾಹ್ನ ಕ್ಷಮೆ ಕೇಳಿ ಸಂಜೆ ಕಿಡಿಕಾರಿದ ಪಂಚಮಸಾಲಿ ಶ್ರೀ- ಸ್ವಾಮೀಜಿಗಳ ವರ್ತನೆಗೆ ಮಠಾಧೀಶರಲ್ಲೇ ಭಿನ್ನ ನಿಲುವುಗಳು

    ಮಧ್ಯಾಹ್ನ ಕ್ಷಮೆ ಕೇಳಿ ಸಂಜೆ ಕಿಡಿಕಾರಿದ ಪಂಚಮಸಾಲಿ ಶ್ರೀ- ಸ್ವಾಮೀಜಿಗಳ ವರ್ತನೆಗೆ ಮಠಾಧೀಶರಲ್ಲೇ ಭಿನ್ನ ನಿಲುವುಗಳು

    ಬೆಂಗಳೂರು: ಪಂಚಮ ಸಾಲಿ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕೆಂದು ಬಹಿರಂಗ ವೇದಿಕೆಯಲ್ಲಿ ಮುಖ್ಯಮಂತ್ರಿ ಬಿಎಸ್‍ವೈ ಮೇಲೆ ಒತ್ತಡ ಹೇರಿದ್ದ ಪಂಚಮಸಾಲಿ ಮಠದ ಶ್ರೀಗಳ ವರ್ತನೆ ಇದೀಗ ರಾಜ್ಯದಲ್ಲಿ ತೀವ್ರ ಚರ್ಚೆಗೆ ಈಡಾಗಿದೆ. ಆದರೂ ವಚನಾನಂದಶ್ರೀಗಳ ವರ್ತನೆ ಬದಲಾದಂತೆ ಕಾಣುತ್ತಿಲ್ಲ. ಇವತ್ತು ಕೂಡ ಸಿಎಂ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ನಿನ್ನೆಯಿಂದ ಸ್ವಾಮೀಜಿಗಳ ವರ್ತನೆಗೆ ವಿರೋಧ ವ್ಯಕ್ತವಾದ ಕಾರಣ ವಚನಾನಂದ ಶ್ರೀ, ತಮ್ಮ ಭಕ್ತರಲ್ಲಿ ಕ್ಷಮೆ ಕೇಳಿದರು. ವೇದಿಕೆ ಮೇಲೆ ಆಡಿದ ಮಾತುಗಳಲ್ಲಿ ತಪ್ಪಿದ್ದರೆ ನಿಮ್ಮ ಮಗ ಅಂದ್ಕೊಂಡು ಹೊಟ್ಟೆಗೆ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು. ಆದರೆ ಸಂಜೆ ಮತ್ತೆ ಉಲ್ಟಾ ಹೊಡೆದ ಪಂಚಮಸಾಲಿ ಶ್ರೀಗಳು,  ಸಿಎಂ ಯಡಿಯೂರಪ್ಪ ಹೆಸರೇಳದೇ ಕಿಡಿಕಾರಿದರು.

    ಅಧಿಕಾರ ಬೇಕು ಅಂದಾಗ ಓಡೋಡಿ ಬಂದು ನಮ್ಮ ಆಶೀರ್ವಾದ ಕೇಳುತ್ತೀರಿ. ನೀವು ಪವರ್ ಫುಲ್ ಆಗಲು ಸಮಾಜದ ಪವರ್ ಬೇಕು. ಆದರೆ ಸಮಾಜಕ್ಕೆ ಪವರ್ ಹಂಚಿಕೆ ಮಾಡಿ ಎಂದಾಗ ನಿಮಗೆ ಸಿಟ್ಟು ಬರುತ್ತೆ. ಇದು ಒಳ್ಳೆಯ ಸಂದೇಶವಲ್ಲ ಎಂದು ವಾಗ್ದಾಳಿ ನಡೆಸಿದರು. ನಮ್ಮ ಬೆಂಬಲಕ್ಕೆ ವಾಲ್ಮೀಕಿ ಮತ್ತು ಬೋವಿ ಶ್ರೀಗಳು ಇದ್ದಾರೆ. ನಾವೆಲ್ಲಾ ಸ್ವಾಮೀಜಿಗಳು ಒಂದೇ ಎಂದು ಹೇಳಿ ಸಿಎಂಗೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ರವಾನಿಸಿದರು.

    ಪಂಚಮಸಾಲಿ ಶ್ರೀಗಳ ವರ್ತನೆಗೆ ಮಠಾಧೀಶರಲ್ಲೇ ಭಿನ್ನ ನಿಲುವುಗಳು ವ್ಯಕ್ತವಾಗುತ್ತಿದೆ. ಕೆಲವರು ವಚನಾನಂದ ಸ್ವಾಮೀಜಿ ಪರ ಮಾತನಾಡಿದ್ದು, ಇನ್ನೂ ಕೆಲವರು ಶ್ರೀಗಳ ಹೇಳಿಕೆಯನ್ನು ಆಕ್ಷೇಪಿಸಿದ್ದಾರೆ. ಪಂಚಮಸಾಲಿ ಮಠಾಧೀಶರ ಬೆಂಬಲಕ್ಕೆ ವಾಲ್ಮೀಕಿ ಮಠದ ಪ್ರಸನ್ನಾನಂದ ಸ್ವಾಮೀಜಿ ಧಾವಿಸಿದ್ದಾರೆ. ಹರಜಾತ್ರೆಯಲ್ಲಿ ಇಬ್ಬರು ಸ್ವಾಮೀಜಿಗಳು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ನಿನ್ನೆ ವಚನಾನಂದ ಸ್ವಾಮೀಜಿಗಳು ಮಾಡಿದ್ದು ಸರಿ ಇದೆ. ನಮ್ಮ ಈ ಎರಡು ಸಮುದಾಯಗಳಿಂದ ಈಗ 21 ಜನ ಶಾಸಕರಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸೋಣ ಎಂದು ಪ್ರಸನ್ನಾನಂದ ಸ್ವಾಮೀಜಿ ಕರೆ ನೀಡಿದರು.

    ನಿಡುಮಾಮಿಡಿ ಶ್ರೀಗಳು ಮಾತನಾಡಿ, ಮುಖ್ಯಮಂತ್ರಿಗಳನ್ನ ಬೆದರಿಸೋ ತಂತ್ರ ಒಳ್ಳೆಯದಲ್ಲ. ಸಂಖ್ಯಾಬಲದಿಂದ, ಅಧಿಕಾರ ಬಲದಿಂದ ಸಿಎಂರನ್ನು ನಿಯಂತ್ರಣ ಮಾಡುತ್ತೇವೆ ಎಂಬುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ನಿನ್ನೆಯ ಘಟನೆಗೆ ಕ್ಷಮೆಯಾಚಿಸುತ್ತೇವೆ ಎಂದರು. ಯಡಿಯೂರಪ್ಪ ಇಲ್ಲ ಅಂದ್ರೆ ಏನೂ ಇಲ್ಲ ಅನ್ನೋದು ಜನರಿಗೆ ಗೊತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಎಚ್ಚರಿಕೆ ನೀಡಿದರು. ಈ ನಡುವೆ ನಿನ್ನೆ ಘಟನೆಯಿಂದ ಮುನಿಸಿಕೊಂಡ ಮಾಜಿ ಸಚಿವ ಮುರುಗೇಶ ನಿರಾಣಿ, ದಾವಣಗೆರೆಯಲ್ಲಿ ಇದ್ದರೂ ಸಿಎಂ ಸ್ವಾಗತಕ್ಕೆ ಆಗಮಿಸಿರಲಿಲ್ಲ.

    ಇತ್ತ ನಿನ್ನೆ ಸ್ವಾಮೀಜಿಗಳ ಮೇಲೆ ಗರಂ ಆಗಿದ್ದನ್ನು ಸಿಎಂ ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ. ಹಾವೇರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿಗಳು, 15-16 ಜನರನ್ನು ಮಂತ್ರಿ ಮಾಡಲು ಏನು ಮಾಡ್ಬೇಕಪ್ಪಾ ಎಂಬ ಚಿಂತೆಯಲ್ಲಿದ್ದೇನೆ. ಹೀಗಿದ್ದಾಗ ಎಲ್ಲರನ್ನು ಮಂತ್ರಿ ಮಾಡಿ ಎಂದರೆ ಆಗಲ್ಲ. ಕಷ್ಟ ಆಗುತ್ತೆ ಅನ್ನೋದನ್ನು ತಿಳಿಸಿದ್ದೇನೆ. ಕೆಲವೊಂದು ಘಟನಾವಳಿಗಳು ನಡೆದಾಗ ಅದನ್ನು ಎದುರಿಸೋದು ಅನಿವಾರ್ಯವಾಗಿದೆ. ಎಲ್ಲಾ ಸಮುದಾಯವನ್ನು ಒಟ್ಟಿಗೆ ಕರೆದೊಯ್ಯಲಿದ್ದೇನೆ ಎಂದು ತಿಳಿಸಿದರು.

  • ವಚನಾನಂದ ಶ್ರೀಗಳ ಬೆಂಬಲಕ್ಕೆ ನಿಂತ ಡಿಕೆಶಿ- ಬಿಎಸ್‍ವೈಗೆ ತಿರುಗೇಟು

    ವಚನಾನಂದ ಶ್ರೀಗಳ ಬೆಂಬಲಕ್ಕೆ ನಿಂತ ಡಿಕೆಶಿ- ಬಿಎಸ್‍ವೈಗೆ ತಿರುಗೇಟು

    ದಾವಣಗೆರೆ: ರಾಜಕಾರಣಿಗಳು ರಾಜಕೀಯಕ್ಕಾಗಿ ಮಠಗಳನ್ನು, ಸ್ವಾಮಿಗಳನ್ನು ಬಳಸಿಕೊಳ್ಳುತ್ತಾರೆ. ಆದರೆ ಅವರ ಮಾತನ್ನು ಮಾತ್ರ ಕೇಳೋದಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮಾಜಿ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

    ಹರಿಹರದ ಪಂಚಮಸಾಲಿ ಪೀಠದಲ್ಲಿ ಹಮ್ಮಿಕೊಂಡಿದ್ದ ಹರಜಾತ್ರೆಯಲ್ಲಿ ಮಾತನಾಡಿದ ಅವರು, ನಿನ್ನೆ ಸ್ವಾಮೀಜಿ ಹಾಗೂ ಯಡಿಯೂರಪ್ಪ ಅವರ ನಡುವೆ ನಡೆದ ವಾಗ್ವಾದ ಮಾಧ್ಯಮಗಳಲ್ಲಿ ನೋಡಿದ್ದೇನೆ. ರಾಜಕಾರಣಿಗಳು ಮಠಾಧೀಶರ ಮಾತನ್ನು ತಾಳ್ಮೆಯಿಂದ ಕೇಳಬೇಕು. ಏಕೆಂದರೆ ರಾಜಕಾರಣಿಗಳು ರಾಜಕೀಯಕ್ಕಾಗಿ ಮಠಗಳನ್ನು, ಸ್ವಾಮಿಗಳನ್ನು ಬಳಸಿಕೊಳ್ಳುತ್ತಾರೆ. ಆದೇ ರೀತಿ ಮಠಾಧೀಶರ ಮಾತನ್ನು ತಾಳ್ಮೆಯಿಂದ ಕೇಳಬೇಕು. ಅಧಿಕಾರದಲ್ಲಿರುವಾಗ ಅವಕಾಶ ಕೇಳುವುದು ಸಹಜ. ಇಲ್ಲವಾದರೆ ಅಧಿಕಾರ ಇಲ್ಲದವರನ್ನು ಯಾರು ಕೇಳಲು ಆಗಲ್ಲ ಎಂದು ವಚನಾನಂದ ಶ್ರೀಗಳ ಪರ ಬ್ಯಾಟ್ ಬೀಸಿದರು.

    ಈ ವೇಳೆ ಪಂಚಮಸಾಲಿ ಸ್ವಾಮೀಜಿ ವಚನಾನಂದ ಶ್ರೀಗಳಿಗೆ ಡಿಕೆಶಿ ಸಾಂತ್ವಾನ ಹೇಳಿದ್ದು, ಸ್ವಾಮಿಗಳೇ ಬೇಸರವಾಗಬೇಡಿ. ನಡೆಡೆಯುವವರು ಎಡವುತ್ತಾರೆ, ಕೂದಲು ಮುಪ್ಪಾದಾಗ ಸರಿಯಾಗ್ತಾರೆ. ಓಟು ಹಾಕಿಸೋಕೆ ಮಠಾಧೀಶರು ಬೇಕು, ಸಚಿವ ಸ್ಥಾನ ಕೇಳೋದು ಬೇಡ್ವಾ ಎಂದು ಡಿಕೆಶಿ ಪ್ರಶ್ನಿಸಿದರು.

    ನಾನು ಸಭೆಯಲ್ಲಿ ಸನ್ಮಾನಕ್ಕಾಗಿ ನಾನು ಬಂದಿಲ್ಲ. ವಚನಾನಂದ ಶ್ರೀಗಳ ಪೀಠದ ಜೊತೆ ನಾನಿದ್ದೇನೆ ಎಂದು ಹೇಳಲು ಬಂದಿದ್ದೇನೆ ಎಂದು ಹೇಳುವ ಮೂಲಕ ಪಂಚಮಸಾಲಿ ಸಮಾಜದ ಜೊತೆ ಇರುತ್ತೇವೆ ಎಂಬ ಭರವಸೆಯನ್ನು ನೀಡಿದರು.