Tag: ಲೂಸಿಯಾ ಸಿನಿಮಾ

  • Bigg Boss: ನಟನೆಯತ್ತ ಸಿಂಗರ್ ನವೀನ್ ಸಜ್ಜು

    Bigg Boss: ನಟನೆಯತ್ತ ಸಿಂಗರ್ ನವೀನ್ ಸಜ್ಜು

    ‘ಬಿಗ್ ಬಾಸ್ ಸೀಸನ್ 6’ರ (Bigg Boss Kannada 6) ರನ್ನರ್ ಅಪ್ ನವೀನ್ ಸಜ್ಜು (Naveen Sajju) ಇದೀಗ ನಟನೆಯತ್ತ ವಾಲಿದ್ದಾರೆ. ತಮ್ಮ ಗಾಯನದ ಮೂಲಕ ಜನರ ಮನಗೆದ್ದ ನವೀನ್ ಈಗ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ‘ಚುಕ್ಕಿತಾರೆ’ ಎಂಬ ಹೊಸ ಸೀರಿಯಲ್ ಕಥೆ ಹೇಳಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಅಭಿಮಾನಿಯ ಆಟೋ ಓಡಿಸಿ ಶುಭಹಾರೈಸಿದ ಡ್ರೋನ್ ಪ್ರತಾಪ್

    ಬಿಗ್ ಬಾಸ್ ಕನ್ನಡ 10ರ ಶೋ ಮುಗಿದ ಬಳಿಕ ಸಾಲು ಸಾಲು ರಿಯಾಲಿಟಿ ಶೋ ಮತ್ತು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ‘ಕರಿಮಣಿ’ ಎಂಬ ಸೀರಿಯಲ್ ನಂತರ ಈಗ ‘ಚುಕ್ಕಿತಾರೆ’ ಎಂಬ ಭಿನ್ನ ಕಥೆ ತೋರಿಸಲು ವಾಹಿನಿ ಸಜ್ಜಾಗಿದೆ. ‌ಸದ್ಯ ಸೀರಿಯಲ್ ಪ್ರೋಮೋ ನೋಡುಗರ ಗಮನ ಸೆಳೆಯುತ್ತಿದೆ.

    ಸದ್ಯ ರಿವೀಲ್ ಆಗಿರುವ ಪ್ರೋಮೋದಲ್ಲಿ ಹಳೆಯ ಕಾರಿನ ಮುಂದೆ ಇಬ್ಬರು ಹುಡುಗಿಯರು ನಿಂತು, ತಮ್ಮಿಷ್ಟದ ಹೆಸರುಗಳನ್ನು ಬರೆದಿದ್ದಾರೆ. ಅದೇ ಸಮಯಕ್ಕೆ ನವೀನ್ ಸಜ್ಜು ಕಲರ್‌ಫುಲ್ ಬಲೂನ್‌ಗಳನ್ನು ತಂದಿದ್ದಾರೆ. ಬಳಿಕ ಕಾರಿನ ಮೇಲೆ ‘ಚುಕ್ಕಿತಾರೆ’ ಎಂದು ಬರೆದು ನಗುತ್ತಲೇ ಮುಂದೆ ಸಾಗಿದ್ದಾರೆ.

     

    View this post on Instagram

     

    A post shared by Naveen Sajju Official (@naveensajju)

    ನವೀನ್ ಸಜ್ಜು ಅವರು ಶರ್ಟ್ ಮತ್ತು ಪಂಚೆ ಧರಿಸಿ ಹಳ್ಳಿ ಹುಡುಗನ ಗೆಟಪ್‌ನಲ್ಲಿ ಕಾಣಿಸಿಕೊಂಡಿರೋದು ಪ್ರೇಕ್ಷಕರ ಗಮನ ಸೆಳೆದಿದೆ. ಕಥೆ ಹೇಗಿರಬಹುದು, ನವೀನ್ ನಟನೆ ಹೇಗೆ ಮೂಡಿ ಬಂದಿದೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ.

    ನವೀನ್ ಸಜ್ಜುಗೆ ಕಿರುತೆರೆ ಹೊಸದಲ್ಲ. 2018ರಲ್ಲಿ ಬಿಗ್ ಬಾಸ್ ಸೀಸನ್ 6ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. 100 ದಿನಗಳ ಕಾಲ ಮನೆಯಲ್ಲಿದ್ದು, ನವೀನ್ ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ಮಾಡ್ರನ್ ರೈತ ಶಶಿ ಬಿಗ್ ಬಾಸ್ ವಿನ್ನರ್ ಆಗಿದ್ರೆ, ನವೀನ್ ಸಜ್ಜು ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.

    ಲೂಸಿಯಾ, ಸಿಂಗ, ಗೋಲಿ ಸೋಡ, ಕನಕ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಗಾಯಕರಾಗಿ ಹಾಡಿದ್ದಾರೆ. ಸಂಗೀತ ನಿರ್ದೇಶಕ ಕಮ್ ಗಾಯಕರಾಗಿರುವ ನವೀನ್ ಇದೀಗ ನಟನೆಯ ಮೂಲಕ ಅಭಿಮಾನಿಗಳ ಮನಗೆಲ್ಲಲು ರೆಡಿಯಾಗಿದ್ದಾರೆ. ನಟನಾಗಿ ಕೂಡ ನವೀನ್ ಗೆದ್ದು ಬೀಗುತ್ತಾರಾ ಎಂದು ಕಾಯಬೇಕಿದೆ.

  • ಎಂಟು ವರ್ಷಗಳ ನಂತರ ಒಂದಾದ ನೀನಾಸಂ ಸತೀಶ್ ಮತ್ತು ಸಿಂಧು

    ಎಂಟು ವರ್ಷಗಳ ನಂತರ ಒಂದಾದ ನೀನಾಸಂ ಸತೀಶ್ ಮತ್ತು ಸಿಂಧು

    ಡ್ರಾಮಾ, ಲವ್ ಇನ್ ಮಂಡ್ಯ ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್ ನ ಬೆಸ್ಟ್ ಪೇರ್ ಎನಿಸಿಕೊಂಡಿದ್ದ ನೀನಾಸಂ ಸತೀಶ್ ಮತ್ತು ಸಿಂಧು ಲೋಕನಾಥ್ ಎಂಟು ವರ್ಷಗಳಿಂದ ಯಾವುದೇ ಚಿತ್ರದಲ್ಲೂ ಜತೆಯಾಗಿ ನಟಿಸಿರಲಿಲ್ಲ. ಇದೀಗ ಇಬ್ಬರನ್ನೂ ಒಟ್ಟಿಗೆ ನೋಡುವ ಅವಕಾಶ ಅಭಿಮಾನಿಗಳಿಗೆ ಒದಗಿದೆ. ಸತೀಶ್ ಮತ್ತು ಸಿಂಧು ಮತ್ತೆ ಜತೆಯಾಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಮನರಂಜನೆ ನೀಡಲಿದ್ದಾರೆ. ಇದನ್ನೂ ಓದಿ : ಉಪೇಂದ್ರ ಹೊಸ ಸಿನಿಮಾ ಮಾಡಲು ಸ್ಟಾರ್ ನಟಿ ನಯನತಾರಾ ಕಾರಣ : ಏನಿದು ಅಸಲಿ ಗುಟ್ಟು?

    ಡ್ರಾಮಾ ಸಿನಿಮಾದಲ್ಲಿ ಮೂಕಿಯಾಗಿ ನಟಿಸಿದ್ದ ಸಿಂಧು, ಸಿಕ್ಕಾಪಟ್ಟೆ ಮಾತನಾಡುವ ಸತೀಶ್ ಪಾತ್ರವನ್ನು ಇಷ್ಟ ಪಡುತ್ತಾರೆ. ಆನಂತರ ಇಬ್ಬರದ್ದೂ ಒಂದು ಪ್ರತ್ಯೇಕ ಲವ್ ಸ್ಟೋರಿ ಶುರುವಾಗುತ್ತದೆ. ಆ ಪ್ರೀತಿ ಪ್ರೇಕ್ಷಕನಿಗೆ ಸಖತ್ ಇಷ್ಟವಾಗಿತ್ತು. ಆ ರೀತಿಯಲ್ಲಿ ಈ ಇಬ್ಬರೂ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದರು. ಇದನ್ನೂ ಓದಿ : ಸಮಂತಾ ಯಾಕಿಂಗ್ ಆದೆ? ಗರಂ ಆದ ಅಭಿಮಾನಿಗಳು

    ನಂತರ ಬಂದ ‘ಲವ್ ಇನ್ ಮಂಡ್ಯ’ ಚಿತ್ರಕ್ಕೆ ಸತೀಶ್ ನಾಯಕನಾದರೆ, ಸಿಂಧು ನಾಯಕಿ. ಹಳ್ಳಿ ಸೊಗಡಿನ ಈ ಸಿನಿಮಾದಲ್ಲಿ ಮತ್ತದೆ ತರ್ಲೆ ಪಾತ್ರ ಸತೀಶ್ ಅವರದ್ದು. ಮುಗ್ಧ ಹುಡುಗಿಯಾಗಿ ಸಿಂಧು ಕಾಣಿಸಿಕೊಂಡಿದ್ದರು. ಈ ಸಿನಿಮಾದ ‘ಒಪ್ಕೊಂಡ್ ಬಿಟ್ಳು ಕಣ್ಲಾ’ ಹಾಡಂತೂ ನಿತ್ಯಮಂತ್ರದಂತೆ ಕೇಳಿಸುತ್ತಿತ್ತು. ಅಷ್ಟರ ಮಟ್ಟಿಗೆ ಪಾಪ್ಯುಲರ್ ಆಗಿತ್ತು. ಇದೇ ಸಿನಿಮಾದ ಮತ್ತೊಂದು ಸಾಂಗ್ ‘ಕರೆಂಟು ಹೋದ ಮೇಲೆ’   ಗೀತೆಯಲ್ಲಂತೂ ಇಬ್ಬರೂ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ್ದರು. ಇಬ್ಬರ ಕೆಮೆಸ್ಟ್ರಿ ಕಂಡು ಅಭಿಮಾನಿ ವರ್ಗವೇ ಬೆರಗಾಗಿತ್ತು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

    ಆ ನಂತರ ಈ ಜೋಡಿಯ ಸಿನಿಮಾ ಬರಲಿಲ್ಲ. ಇದೀಗ ಕಿರುತೆರೆಯ ಜನಪ್ರಿಯ ಶೋ ‘ಗೋಲ್ಡನ್ ಗ್ಯಾಂಗ್’ ನಲ್ಲಿ ಸಿಂಧು ಮತ್ತು ಸತೀಶ್ ಕಾಣಿಸಿಕೊಂಡಿದ್ದಾರೆ. ತರ್ಲೆ, ತಮಾಷೆಯ ಜತೆ ಜತೆಗೆ ಹಾಡೊಂದಕ್ಕೆ ಹೆಜ್ಜೆಯನ್ನೂ ಹಾಕಿದ್ದರು. ಅಂದಹಾಗೆ ಈ ವಾರ ಲೂಸಿಯಾ ಟೀಮ್ ಕೂಡ ಇವರೊಂದಿಗೆ ಇರಲಿದೆ.