Tag: ಲಿಂಗಾಯತ ಸಮಾವೇಶ

  • ಮುಖ್ಯಮಂತ್ರಿ ಆಗಿ ಕಿಸಿಯುದು ಏನ್ ಐತಿ – ಸಿಎಂ ವಿರುದ್ಧ ಯತ್ನಾಳ್ ವಾಗ್ದಾಳಿ

    ಮುಖ್ಯಮಂತ್ರಿ ಆಗಿ ಕಿಸಿಯುದು ಏನ್ ಐತಿ – ಸಿಎಂ ವಿರುದ್ಧ ಯತ್ನಾಳ್ ವಾಗ್ದಾಳಿ

    – ಯಡಿಯೂರಪ್ಪನವರೇ ಬರೀ ಭಾಷಣದಿಂದ ಆಗಲ್ಲ
    – ನಾನು ಹಿಂದುತ್ವದ ಮೇಲೆ ಬಂದವನು

    ಬಾಗಲಕೋಟೆ: ಲಿಂಗಾಯತ ಸಮಾಜ ನನ್ನ ಕೈ ಬಿಟ್ಟಿತು ಎಂದು ಅವರಿಗೆ ನಿದ್ದೆ ಬಂದಿಲ್ಲ ಎನ್ನುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

    ಕೂಡಲಸಂಗಮದಲ್ಲಿ ನಡೆದ ಮೀಸಲಾತಿ ಹೋರಾಟದ ಪಾದಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮನ್ನ ದೆಹಲಿಗೆ ಕರೆದೊಯ್ದು, ನನ್ನ ತಗೆದರೆ ಹಿಂದೆ ಲಿಂಗಾಯತ ಸಮುದಾಯ ಇದೆ ಎಂದು ಪೋಸ್ ಕೊಡ್ತೀರಾ ಎಂದು ಪರೋಕ್ಷವಾಗಿ ಸಿಎಂ ವಿರುದ್ಧ ಹರಿಹಾಯ್ದಿದ್ದಾರೆ.

    ವೀರಶೈವ ಲಿಂಗಾಯತರು ಹಿಂದುಳಿದವರು ಅಂತಾ ಹೇಳಿ ಅದನ್ನ ಅರ್ಧಕ್ಕೆ ಯಾಕೆ ನಿಲ್ಲಿಸಿದಿರಿ. ಯಡಿಯೂರಪ್ಪನವರೇ ಬರೀ ಭಾಷಣದಿಂದ ಆಗಲ್ಲ. ಪಂಚಮಸಾಲಿ ಸಮಾಜದ ಋಣ ಇದೆ ಅಂದಿದ್ರಿ. ಈ ಪಾದಯಾತ್ರೆ ಬೆಂಗಳೂರು ಮುಟ್ಟುವುದರೊಳಗಾಗಿ, ಮೀಸಲಾತಿ ಕೊಟ್ಟುಬಿಡಿ ಎಂದು ಪ್ರಧಾನಿಯಿಂದಲೇ ಆದೇಶ ಬರುತ್ತೆ ಎಂದು ಹೇಳಿದರು.

    ನಮ್ಮ ಸಮುದಾಯದ ನಾಯಕರಿಗೆ ಮಂತ್ರಿ ಕೊಡಲಿಲ್ಲ ಎಂದರೆ ಪಂಚಮಸಾಲಿ ಸಮುದಾಯ ಕೈ ಬಿಡುತ್ತೆ ಎಂದು ಹೇಳಿಬಿಡೋದು. ಇಬ್ಬರು ಮೂವರನ್ನ ಮಂತ್ರಿ ಮಾಡಿದರೆ ಸಮಾಜ ಉದ್ಧಾರ ಆಗುತ್ತಾ ಎಂದು ಪರೋಕ್ಷವಾಗಿ ಹರಿಹರ ಪೀಠದ ವಚನಾನಂದ ಸ್ವಾಮೀಜಿಗೆ ಟಾಂಗ್ ನೀಡಿದರು. ಅಲ್ಲದೆ ಪಾದಯಾತ್ರೆ ಅಂದ್ರೆ ಸುಲಭವಲ್ಲ, ಕಾಲಲ್ಲಿ ಗುಳ್ಳೆ ಏಳುತ್ತವೆ. ತೊಡೆಗಳು ನೋವಾಗುತ್ತವೆ ಎಂದರು.

    ಸ್ವಲ್ಪ ಬಾಯಿ ಕಡಿಮೆ ಮಾಡಿದರೆ ಮುಖ್ಯಮಂತ್ರಿ ಅಕ್ಕೀರಿ ಎಂದು ಕೆಲವರು ನನಗೆ ಹೆಳಿದರು. ಆದರೆ ಮುಖ್ಯಮಂತ್ರಿ ಆಗಿ ಕಿಸಿಯುದು ಏನ್ ಐತಿ. ಬಸನಗೌಡ ಪಾಟೀಲ್ ಯತ್ನಾಳ್ ಸ್ವಲ್ಪ ಜಾಸ್ತಿ ಮಾತಾಡಿದ್ರೆ ಅವ್ರನ್ನ ಮುಗಿಸಬೇಕು ಎನ್ನುತ್ತಾರೆ. ಏನ್ ತಲೆ ಮುಗಿಸೋದಾಗತ್ತ. ನಾಳೆ ನನ್ನ ಮುಖ್ಯಮಂತ್ರಿ ಮಾಡ್ತೀನಿ ಅಂದರೂ ನಾನು ಹೋಗಲ್ಲ, ಸಮಾಜಕ್ಕೆ ಮೀಸಲಾತಿ ಸಿಗಲಿ, ಉದ್ಧಾರ ಆಗಲಿ. ನಾನು ಮುಖ್ಯಮಂತ್ರಿ ಆಗುತ್ತೇನೋ ಇಲ್ಲೋ ಗೊತ್ತಿಲ್ಲ. ಆದರೆ ಸಮುದಾಯಕ್ಕೆ ಅನ್ಯಾಯ ಆಗುವ ಕೆಲಸ ಮಾಡುವುದಿಲ್ಲ. ಈ ಹಿಂದೆ ನನ್ನನ್ನು ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ಆಗಿ ಎಂದರು. ಆದರೆ ನಾನೇ ಬೇಡ ಎಂದೆ. ನಾನು ಹಿಂದುತ್ವದ ಮೇಲೆ ಬಂದವನು. ಸಮುದಾಯಕ್ಕೆ ಕೆಟ್ಟತನ ಮಾಡಿ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನನಗಿಲ್ಲ ಎಂದು ಯತ್ನಾಳ್ ಹೇಳಿದರು.

    ಶಾಸಕರು ರಾಜೀನಾಮೆ ನೀಡಿ ಹೋರಾಟ ಮಾಡಿ ಎಂದ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಗೆ ಯತ್ನಾಳ್ ಟಾಂಗ್ ಕೊಟ್ಟಿದ್ದು, ನೀನು ಮಾಜಿ, ನಾನು ಹಾಲಿ. ನಾನು ರಾಜೀನಾಮೆ ನೀಡಿ ಹೋರಾಟ ಮಾಡುವವನಲ್ಲ. ಅಧಿಕಾರದಲ್ಲಿದ್ದೇ ಹೋರಾಡುತ್ತೇನೆ. ಈ ಪಾದಯಾತ್ರೆಯಲ್ಲಿ ನಮ್ಮ ಸಮುದಾಯದ ಭವಿಷ್ಯವಿದೆ. ನಮಗೆ ಸಿಗಬೇಕಾದ ಸೌಲಭ್ಯದ ಬಗ್ಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಆದರೆ ಅವರು ಸುಮ್ಮನೆ ಭರವಸೆ ನೀಡುತ್ತಾರೆ. ಅಲ್ಲದೆ ನಮ್ಮ ಹೋರಾಟ ವಿಫಲಗೊಳಿಸಬೇಕೆಂಬ ದೊಡ್ಡ ಷಡ್ಯಂತ್ರ ನಡೆದಿದೆ. ಪಂಚಮಸಾಲಿ ಸ್ವಾಮೀಜಿ ಅವರ ಬೆನ್ನು ಹತ್ತಿ, ನಿಮ್ಮ ಹೋರಾಟಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂ. ನೀಡುತ್ತೇನೆ. ನಾನು ಪಾದಯಾತ್ರೆಗೆ ಬಂದು ಐದೈದು ಕಿಲೋಮೀಟರ್ ನಡೆಯುತ್ತೇನೆ. 108 ಕೆ.ಜಿ. ತೂಕವಿದ್ದೇನೆ. ನನ್ನ ಕೈಲಾದಷ್ಟು ಪಾದಯಾತ್ರೆ ಮಾಡುತ್ತೇನೆ ಎಂದರು.

    ಸಮುದಾಮಯದ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರು ವರೆಗೆ ನಡೆಯುತ್ತಿರುವ ಪಾದಯಾತ್ರೆ ಇದು. ಇವತ್ತಿನ ಕಾರ್ಯಕ್ರಮ ಇತಿಹಾಸದಲ್ಲಿ ದಾಖಲಾಗಲಿದೆ. ಇತ್ತೀಚಿನ ಪೂರ್ವಭಾವಿ ಸಭೆಯಲ್ಲಿ ಸಿಸಿ ಪಾಟೀಲ್ ಬಂದಿದ್ರು. ನಮ್ಮ ಸ್ವಾಮೀಜಿಗಳ ಮಠ ಹಳ್ಳಿ ಮನೆ ರೀತಿ ಇದೆ. ಮಠಗಳ ಕೆಲಸಕ್ಕಾಗಿ ರಾಜಕಾರಣಿಯ ಬೆನ್ನು ಹತ್ತಿ, ಯಡಿಯೂರಪ್ಪನವರನ್ನು ಹೆದರಿಸಿ 2 ಕೋಟಿ ರೂಪಾಯಿ ತೆಗೆದುಕೊಳ್ಳಲು ಪಾದಾಯತ್ರೆ ಮಾಡುತ್ತಿದ್ದೇವೆ ಎಂದು ತಿಳಿದಿದ್ದೀರಾ, 20 ಲಕ್ಷ ರೂ. ನೀಡಿ ಮಠ ಖರೀದಿ ಮಾಡಬೇಕಂತಿದ್ದಾರೆ. ಸರ್ಕಾರದ ದುಡ್ಡು ತೆಗೆದುಕೊಳ್ಳಬೇಡಿ ಎಂದು ನಾನು ಮೊದಲೇ ಹೇಳಿದ್ದೆ ಎಂದು ಕಿಡಿಕಾರಿದರು.

    ಬಿಜೆಪಿಯಲ್ಲಿ ಜಮಖಾನ ಹಾಸಿದ್ದೇನೆ. ಅಟಲ್ ಬಿಹಾರಿ ವಾಜಪೇಯಿ ಆಡಳಿತದಲ್ಲಿ ಮಂತ್ರಿ ಆಗಿದ್ದೆ. ಪಾಜಪೇಯಿ ಪುಣ್ಯಾತ್ಮ, ದೇವರು ಅವರು. ಹಿಂದೆ ನಿಯೋಗ ಕೊಂಡೊಯ್ದಾಗ, ವಾಜಪೇಯಿ, ಅಡ್ವಾಣಿ ಖುಷಿಯಾಗಿದ್ದರು. ದೆಹಲಿಯಲ್ಲಿ ರೈತರ ಹೆಸರಲ್ಲಿ ದಲ್ಲಾಳಿಗಳು ಹೋರಾಟ ನಡೆಸುತ್ತಿದ್ದಾರೆ. ಬ್ರಹ್ಮಚಾರಿಗಳಿಗೆ ಆಸೆಗಳು ಇರಲ್ಲ. ಪ್ರಧಾನಿ ಮೋದಿ ಬ್ರಹ್ಮಚಾರಿ, ಅವರಿಗೆ ಯಾವುದೇ ಆಸೆ ಇಲ್ಲ.

  • ನಾನು ತಪ್ಪು ಜಾತಿಯಲ್ಲಿ ಹುಟ್ಟಿದ್ದೀನಿ, ಅಶೋಕ್ ಗೌಡ ಆಗಿದ್ರೆ ಕನ್ಯಾಕುಮಾರಿವರೆಗೂ ನೈಸ್ ಪ್ರಾಜೆಕ್ಟ್!

    ನಾನು ತಪ್ಪು ಜಾತಿಯಲ್ಲಿ ಹುಟ್ಟಿದ್ದೀನಿ, ಅಶೋಕ್ ಗೌಡ ಆಗಿದ್ರೆ ಕನ್ಯಾಕುಮಾರಿವರೆಗೂ ನೈಸ್ ಪ್ರಾಜೆಕ್ಟ್!

    – ಬಿಎಸ್‍ವೈ ಬೇಗ ಸಿಎಂ ಆಗಲಿ ಎಂದು ಹಾರೈಕೆ

    ಮೈಸೂರು: ನಾನು ಲಿಂಗಾಯತ ಜಾತಿಯಲ್ಲಿ ಹುಟ್ಟಿದ ಪರಿಣಾಮ ನೈಸ್ ಪ್ರಾಜೆಕ್ಟ್ ಪೂರ್ಣಗೊಳಿಸಲು ಆಗಲಿಲ್ಲ. ಅಶೋಕ್ ಗೌಡ ಆಗಿದ್ದರೆ ಕನ್ಯಾಕುಮಾರಿವರೆಗೂ ನೈಸ್ ಪ್ರಾಜೆಕ್ಟ್ ಸಿಗುತಿತ್ತು ಎಂದು ಪರೋಕ್ಷವಾಗಿ ಜೆಡಿಎಸ್ ಪಕ್ಷದ ವರಿಷ್ಠರ ಬಗ್ಗೆ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅಸಮಾಧಾನ ಹೊರಹಾಕಿದ್ದಾರೆ.

    ಮೈಸೂರಿನಲ್ಲಿ ನಡೆದ ಲಿಂಗಾಯತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೈಸ್ ಪ್ರಾಜೆಕ್ಟ್ ನಾನು ಲಿಂಗಾಯುತ ಆದ ಕಾರಣ ಪೂರ್ಣಗೊಳಿಸಲಾಗಲಿಲ್ಲ. ನಾನು ತಪ್ಪು ಜಾತಿಯಲ್ಲಿ ಹುಟ್ಟಿದ್ದೇನೆ. ನಾನೇನಾದರೂ ಅಶೋಕ್ ಗೌಡ ಆಗಿದ್ದರೆ ಕನ್ಯಾಕುಮಾರಿವರೆಗೆ ನೈಸ್ ಪ್ರಾಜೆಕ್ಟ್ ಆಗುತ್ತಿತ್ತು ಎಂದು ಹೇಳಿದ್ದಾರೆ.

    ಸಭೆಯಲ್ಲಿ ಭಾಗವಹಿಸಿದ್ದು ನನಗೆ ಬಹಳ ಸಂತಸ ತಂದಿದೆ. ಬಿಎಸ್ ಯಡಿಯೂರಪ್ಪ ಅವರನ್ನು ಬಹು ದಿನಗಳ ಬಳಿಕ ನಗು ಮುಖದಿಂದ ನೋಡುತ್ತಿದ್ದೇನೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಕೂಡ ಅವರು ಬೇಗ ಸಿಎಂ ಆಗಲಿ ಎಂದು ಹಾರೈಕೆ ಮಾಡುತ್ತೇನೆ ಎಂದರು.

    ಜನರು ನನ್ನನ್ನು ಸೋಲಿಸಿದ ವೇಳೆ ನಾನು ಶ್ರೀಗಳ ಸಲಹೆ ಪಡೆದು ಸಂತನಾಗಿದ್ದೆ. ಈಗ ಜನರಿಗೆ ತಿಳಿಯುತ್ತಿದೆ ಯಾರು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ತಿಳಿಸಿದರು. ತಮ್ಮ ಭಾಷಣದಲ್ಲಿ ಲಿಂಗಾಯುತ ಪದ ಬಳಸಿ ಸ್ಪಷ್ಟನೆ ನೀಡಿದ ಅವರು, ಈಗ ಲಿಂಗಾಯತ ಎಂದರೆ ಬೈತಾರೆ, ವೀರಶೈವ ಲಿಂಗಾಯುತ ಎನ್ನಬೇಕು ಎಂದರು. ಅಲ್ಲದೇ ನಮಗೆ ವಿಭೂತಿಯೇ ಎಲ್ಲಕ್ಕಿಂತ ಹೆಚ್ಚಿನ ಮೇಕಪ್ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೆಹಲಿಯಲ್ಲಿಂದು ಲಿಂಗಾಯತ ಸಮಾವೇಶ- ಸಚಿವ ಸದಾನಂದ ಗೌಡರಿಂದ್ಲೇ ಉದ್ಘಾಟನೆ

    ದೆಹಲಿಯಲ್ಲಿಂದು ಲಿಂಗಾಯತ ಸಮಾವೇಶ- ಸಚಿವ ಸದಾನಂದ ಗೌಡರಿಂದ್ಲೇ ಉದ್ಘಾಟನೆ

    ನವದೆಹಲಿ: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಬಂಡಾಯ ಎದ್ದಿದ್ದಾರಾ..? ಅಥಾವಾ ಸದಾನಂದಗೌಡರು ಪ್ರತ್ಯೇಕ ಲಿಂಗಾಯತ ಧರ್ಮದ ಪರವಾಗಿದ್ದರಾ..?. ಇಂದು ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಇಂತದೊಂದು ಪ್ರಶ್ನೆಗೆ ಕಾರಣವಾಗಿದೆ.

    ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ದೆಹಲಿಯಲ್ಲಿ ಲಿಂಗಾಯತ ಧರ್ಮ ಸಭಾ ರೂಪಿಸಿರುವ ಮೂರು ದಿನಗಳ ಸಮಾವೇಶವನ್ನ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಉದ್ಘಾಟಿಸಲಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ದೂರವಿದ್ದ ಬಿಜೆಪಿ ನಾಯಕರ ನಡುವೆ ಡಿವಿಎಸ್ ಭಾಗಿ ಕುತೂಹಲ ಮೂಡಿಸಿದೆ.

    ಪ್ರತ್ಯೇಕ ಲಿಂಗಾಯತ ಹೋರಾಟದಿಂದ ದೂರ ಇರುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಆದ್ರೆ ಇಂದು ಈ ಹೋರಾಟಕ್ಕೆ ಚಾಲನೆ ನೀಡುವ ಮೂಲಕ ಸದಾನಂದಗೌಡರು ಹೈಕಮಾಂಡ್ ಆಜ್ಞೆಯನ್ನೇ ಮೀರಿದಂತೆ ಕಾಣುತ್ತಿದೆ. ವಿಧಾನಸಭೆ ಚುನಾವಣೆ ಮುನ್ನ ಈ ಹೋರಾಟದಿಂದ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್ ನಾಯಕರು ಕ್ಷಮೆ ಕೇಳಿದ್ದ ಬೆನ್ನಲ್ಲೇ ಸದಾನಂದಗೌಡರ ಲಿಂಗಾಯತ ಪ್ರತ್ಯೇಕ ಹೋರಾಟ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    ಕಮಲ ವಿರೋಧಿ ಮಹಾಸಭೆ:
    ರಾಜ್ಯ ಮೈತ್ರಿ ಸರ್ಕಾರ ರಚನೆ ವೇಳೆ ಒಗ್ಗಟ್ಟು ಪ್ರದರ್ಶಿಸಿದ್ದ ವಿರೋಧ ಪಕ್ಷಗಳ ಒಕ್ಕೂಟ್ಟ ಈಗ ಮತ್ತೊಮ್ಮೆ ಬಲ ಪ್ರದರ್ಶನಕ್ಕೆ ಸಿದ್ದವಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ಹಾಗೂ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಒಂದು ದಿನ ಬಾಕಿ ಈರುವಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೊಮ್ಮೆ ವಿಪಕ್ಷಗಳ ಶಕ್ತಿ ಪ್ರದರ್ಶನವಾಗಲಿದೆ.

    ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಎನ್‍ಸಿಪಿ ನಾಯಕ ಶರತ್ ಪವಾರ್ ಸೇರಿದಂತೆ ಎಡಪಕ್ಷಗಳ ನಾಯಕರು ದೆಹಲಿಯಲ್ಲಿ ಸಭೆ ಸೇರಲಿದ್ದಾರೆ. ಈ ಸಭೆಯ ನೇತೃತ್ವವನ್ನ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೊತ್ತಿದ್ದು, ಇತರೆ ಪ್ರಾದೇಶಿಕ ಪಕ್ಷಗಳಿಗೂ ಆಹ್ವಾನ ನೀಡಲಾಗಿದೆ. ಸಂಸತ್ ಅಧಿವೇಶನಕ್ಕೆ ಒಂದು ದಿನವಷ್ಟೇ ಬಾಕಿ ಇದ್ದು ರಾಜಧಾನಿಯಲ್ಲಿ ಮತ್ತೊಮ್ಮೆ ಮಹಾಘಟಬಂದನ್ ಶಕ್ತಿ ಪ್ರದರ್ಶನ ಮಾಡಲು ವಿರೋಧ ಪಕ್ಷಗಳು ಪ್ಲಾನ್ ಮಾಡಿಕೊಂಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv