Tag: ಲಾರಿ ಮುಷ್ಕರ

  • ಲಾರಿ ಮುಷ್ಕರ ನಿಂತಿತು, ಅಕ್ಕಿ, ಬೆಳೆ, ಸಕ್ಕರೆ ದರ ದಿಢೀರ್ ಏರಿಕೆ ಆಯ್ತು!

    ಲಾರಿ ಮುಷ್ಕರ ನಿಂತಿತು, ಅಕ್ಕಿ, ಬೆಳೆ, ಸಕ್ಕರೆ ದರ ದಿಢೀರ್ ಏರಿಕೆ ಆಯ್ತು!

    ಬೆಂಗಳೂರು: ಲಾರಿ ಮುಷ್ಕರ ನಿಂತಿದ್ರೂ ಅದರ ಬಿಸಿಮಾತ್ರ ಆರಿಲ್ಲ. ಲಾರಿ ಮುಷ್ಕರದಿಂದ ಸ್ಥಗಿತಗೊಂಡಿದ್ದ ಎಪಿಎಂಸಿಗಳು ಇನ್ನು ಚೇತರಿಕೆ ಕಂಡಿಲ್ಲ. ಇದ್ರ ಎಫೆಕ್ಟ್, ದರ ಏರಿಕೆಯ ಬಿಸಿ. ಮಾರ್ಕೆಟ್‍ನಲ್ಲಿ ಅಕ್ಕಿ ಮತ್ತು ಬೇಳೆ ದಾಸ್ತಾನು ಕೊರತೆಯಿಂದ ದರ ಏಕಾಏಕಿ ದರ ಗಗನಕ್ಕೇರಿದೆ.

    ಲಾರಿ ಮುಷ್ಕರ ಹತ್ತು ದಿನಗಳ ಕಾಲ ನಡೆದು ಮೊನ್ನೆ ಮುಷ್ಕರ ಅಂತ್ಯಗೊಂಡಿದೆ. ಆದ್ರೆ ಮುಷ್ಕರದ ಎಫೆಕ್ಟ್ ಗೆ ಎಪಿಎಂಸಿ ಮಕಾಡೆ ಮಲಗಿಕೊಂಡಿದೆ. ಅಕ್ಕಿ ಬೇಳೆ ಕಾಳುಗಳು ಬರೋಬ್ಬರಿ ಕೆಜಿಗೆ ಹತ್ತು ರೂಪಾಯಿ ಏರಿಕೆ ಕಂಡಿದೆ. ಇನ್ನು ಒಂದು ತಿಂಗಳ ಕಾಲ ಮಾರ್ಕೆಟ್‍ನಲ್ಲಿ ಈ ದರ ಏರಿಕೆಯ ಬಿಸಿ ಇರುತ್ತೆ ಅನ್ನೋದು ವ್ಯಾಪಾರಿಗಳ ಲೆಕ್ಕಾಚಾರ.

    ಅಕ್ಕಿ ದರ ಎಷ್ಟಾಯ್ತು? ರಾ ರೈಸ್ ಕೋಲಂ ಕೆಜಿಗೆ 60 ರೂಪಾಯಿ ಇದ್ದ ದರ 70 ರೂ.ಗೆ ಏರಿಕೆ ಕಂಡಿದೆ. ಇನ್ನು ಸೋನಾಮಸೂರಿ 52 ರೂಪಾಯಿಯಿಂದ 58 ರೂ.ಗೆ, ಸ್ಟೀಮ್ ಕೋಲಂ 45 ರಿಂದ 54 ರೂಪಾಯಿಗೆ, ಸ್ಟೀಮ್ ಸೊನಾಂ 32 ರೂಪಾಯಿಂದ 43 ರೂ.ಗೆ, ಇಡ್ಲಿ ಅಕ್ಕಿ 36 ರೂಪಾಯಿಯಿಂದ 40 ರೂಪಾಯಿಗೆ ಹಾಗೂ ದೋಸೆ ರೈಸ್ 35 ರೂಪಾಯಿಯಿಂದ 40 ರೂಪಾಯಿಗೆ ಏರಿಕೆ ಕಂಡಿದೆ.

    ಬೆಳೆ ದರ ಎಷ್ಟಾಯ್ತು? ತೊಗರಿ 70 ರೂಪಾಯಿಯಿಂದ 90 ರೂಗೆ, ಉದ್ದಿನಬೇಳೆ 110 ರೂಪಾಯಿಯಿಂದ 120 ರೂ.ಗೆ ಹೆಸರುಬೇಳೆ 80 ರೂಪಾಯಿಯಿಂದ 90 ರೂಪಾಯಿಗೆ ಜಂಪ್ ಆಗಿದೆ. ಹುರುಳಿಕಾಳು 60 ರೂಪಾಯಿಯಿಂದ 70, ಅಲಸಂದೆ 90 ರೂಪಾಯಿಯಿಂದ 100 ರೂ. ಹಾಗೂ ಗೋಧಿ 30 ರೂಪಾಯಿಯಿಂದ 35 ರೂ.ಗೆ ಏರಿಕೆಯಾಗಿದೆ. ಇನ್ನು ಸಕ್ಕರೆ ಕೂಡ ಗ್ರಾಹಕರ ಪಾಲಿಗೆ ಕಹಿಯಾಗಿದ್ದು ಮೂರು ರೂಪಾಯಿ ಏರಿಕೆಯಾಗಿದೆ.

    ಒಟ್ಟಾರೆ ಬೇಸಗೆಯ ಬಿಸಿ ಜನ್ರಿಗೆ ತಟ್ಟಿ ತಟ್ಟಿ ಜನ ಹೈರಾಣಗಿದ್ದರೆ, ಈಗ ಅಕ್ಕಿ ಬೇಳೆ ಕಾಳು ದರ ಏರಿಕೆ ಕಂಡಿದ್ದು ಮತ್ತೆ ಕಷ್ಟವಾಗಿದೆ.

    https://www.youtube.com/watch?v=qd1QRjmx5jI

  • ಶೇ.23 ರಷ್ಟು ವಿಮೆ ಪ್ರೀಮಿಯಂ ದರ ಇಳಿಕೆಗೆ ನಿರ್ಧಾರ- 10 ದಿನಗಳ ಲಾರಿ ಮಷ್ಕರ ಅಂತ್ಯ

    ಶೇ.23 ರಷ್ಟು ವಿಮೆ ಪ್ರೀಮಿಯಂ ದರ ಇಳಿಕೆಗೆ ನಿರ್ಧಾರ- 10 ದಿನಗಳ ಲಾರಿ ಮಷ್ಕರ ಅಂತ್ಯ

    ಬೆಂಗಳೂರು: ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಲಾರಿ ಮುಷ್ಕರ ಕೊನೆಗೂ ಅಂತ್ಯಗೊಂಡಿದೆ. ಇಂದು ಒಂದೆಡೆ ಲಾರಿ ಮಾಲೀಕರು ವಿಮಾ ಪ್ರಾಧಿಕಾರದ ಜೊತೆ ಸಂಧಾನಕ್ಕೆ ಕೂತ್ರೆ, ಇನ್ನೊಂದಡೆ ಸಚಿವ ರಾಮಲಿಂಗರೆಡ್ಡಿ, ಸಾರಿಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಕೊನೆಗೂ ಲಾರಿ ಮಾಲೀಕರ ಬೇಡಿಕೆಗೆ ಆಸ್ತು ಎಂದಿದ್ದಾರೆ.

    ಹೈದರಾಬಾದಿನಲ್ಲಿ ಐಎಆರ್‍ಡಿಎ ಜೊತೆ ಶನಿವಾರದಂದು ಸಂಧಾನ ವಿಫಲವಾಗಿತ್ತು. ಇದ್ರಿಂದ ಲಾರಿ ಮಾಲೀಕರು ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದಾಗ ಇಂದು ಮತ್ತೆ ಸಭೆ ಕರೆದು ಶೇ 50.ರಷ್ಟಿದ್ದ ವಿಮೆ ಪ್ರೀಮಿಯಮ್ ದರವನ್ನು ಶೇ 23. ರಷ್ಟು ಇಳಿಕೆ ಮಾಡಲು ನಿರ್ಧರಿಸಲಾಗಿದೆ.

    ಇನ್ನೊಂದೆಡೆ ಶಾಂತಿನಗರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ರಾಮಲಿಂಗಾ ರೆಡ್ಡಿ ಟೋಲ್ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಜೊತೆ ಭೇಟಿಗೆ ಅವಕಾಶ ಮಾಡಿಕೊಡೋದಾಗಿ ಬೇಡಿಕೆ ಬಗೆಹರಿಸುವ ನಿಟ್ಟಿನಲ್ಲಿ ಭರವಸೆ ನೀಡಿದ್ರು. ಅಲ್ಲದೇ ಆರ್‍ಟಿಓ ದಂಡದ ಬಗ್ಗೆಯೂ ಚರ್ಚೆ ಮಾಡುವ ಭರವಸೆ ನೀಡಿದ್ರು. ಇದ್ರಿಂದ ಲಾರಿಮಾಲೀಕರು ಮುಷ್ಕರ ಕೈಬಿಟ್ಟಿದ್ದಾರೆ.